Saturday, September 26, 2020

ನಾವು ಹೆಮ್ಮೆ ಪಡಬೇಕಾದುದು ಯಾವಾಗ ಅಂದರೆ?



ಮೊದಲಿಗೆ ಒಂದಿಷ್ಟು ಮಾಹಿತಿಗಳು.

ಕೇಂದ್ರ ಲೋಕಸೇವಾ ಆಯೋಗವು (UPSC) ಈ ಬಾರಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 829 ಮಂದಿ ತೇರ್ಗಡೆಯಾಗಿದ್ದು, ಇವರಲ್ಲಿ 42 ಮಂದಿ ಮುಸ್ಲಿಮರು. ಟಾಪ್ 100ರಲ್ಲಿ ಸ್ಥಾನ  ಪಡೆದ ಏಕೈಕ ಮುಸ್ಲಿಮ್ ಅಭ್ಯರ್ಥಿ ಸಪ್ನಾ ನಝರುದ್ದೀನ್. ಇವರ ರಾಂಕ್ 45. ಆಗಸ್ಟ್ 4ರಂದು ಈ ಫಲಿತಾಂಶ ಬಿಡುಗಡೆಗೊಂಡಿದೆ. ಕಳೆದ ವರ್ಷ ಒಟ್ಟು 759 ಮಂದಿ ತೇರ್ಗಡೆಯಾಗಿದ್ದರು ಮತ್ತು ಇವರಲ್ಲಿ 28 ಮಂದಿಯಷ್ಟೇ ಮುಸ್ಲಿಮರಿದ್ದರು. 2016ರಲ್ಲಿ ಒಟ್ಟು ತೇರ್ಗಡೆಗೊಂಡವರ ಪೈಕಿ 50 ಮಂದಿ ಮುಸ್ಲಿಮರಿದ್ದರು. ಅಲ್ಲದೇ, ಟಾಪ್ 100ರಲ್ಲಿ 10 ಮಂದಿ  ಮುಸ್ಲಿಮರಿದ್ದರು. 2012, 13, 14, 15ರಲ್ಲಿ ಕ್ರಮವಾಗಿ 30, 34, 38, 36 ಮುಸ್ಲಿಮ್ ಅಭ್ಯರ್ಥಿಗಳು ಈ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಮೊನ್ನೆ ಆಗಸ್ಟ್ 21ರಂದು ಹೊರಬಿದ್ದ ಸಿಇಟಿ ಪರೀಕ್ಷಾ ಫಲಿತಾಂಶದ ಕತೆಯೂ ಇದುವೇ. ಐದು ವಿಭಾಗಗಳ ಮೊದಲ 50  ರಾಂಕ್ ಗಳಲ್ಲಿ ಸ್ಥಾನ ಪಡೆದಿರುವುದು ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿ. ಸಿಇಟಿಯ ಐದು ವಿಭಾಗಗಳಾದ ಎಂಜಿನಿಯರಿಂಗ್, ಬಿಎಸ್‍ಸಿ ಅಗ್ರಿಕಲ್ಚರ್, ಪಶು ವೈದ್ಯಕೀಯ, ಬಿ ಫಾರ್ಮ ಮತ್ತು ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಗಳಲ್ಲಿ ಎಂ.ಡಿ.  ಅರ್ಬಾಜ್  ಅಹ್ಮದ್‍ರನ್ನು ಬಿಟ್ಟರೆ ಮೊದಲ 50 ರಾಂಕ್ ಗಳಲ್ಲಿ ಇನ್ನಾರೂ ಮುಸ್ಲಿಮರಿಲ್ಲ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 73% ವಿದ್ಯಾರ್ಥಿಗಳು ಪಾಸಾಗಿದ್ದರೆ, ಪರಿಶಿಷ್ಟ ಪಂಗಡದಿಂದ 71% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮುಸ್ಲಿಮರು  ಒಳಗೊಂಡಿರುವ 2ಬಿ ವಿಭಾಗದ ಪರೀಕ್ಷಾ ಫಲಿತಾಂಶ 67%.

ವಿಷಾದ ಏನೆಂದರೆ, ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾಗುವ ವಿಷಯಗಳು ಇವು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುಸ್ಲಿಮ್  ವಿದ್ಯಾರ್ಥಿಗಳ ವಿವರಗಳು ಒಂದೆರಡು ದಿನಗಳ ಕಾಲ ಮುಸ್ಲಿಮರ ಮೊಬೈಲ್‍ಗಳಲ್ಲಿ ಹರಿದಾಡುತ್ತವಾದರೂ ಅದರಾಚೆಗೆ ಸಿಇಟಿ, ಯುಪಿಎಸ್‍ಸಿ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ  ವಿವರ ಹರಿದಾಡುವುದು ಶೂನ್ಯ ಅನ್ನುವಷ್ಟು ಕಡಿಮೆ. ಈ ಸಮುದಾಯದ ಹೆಚ್ಚಿನ ಮಂದಿಗೆ ಎಸ್ಸೆಸ್ಸೆಲ್ಸಿ, ಡಿಗ್ರಿ ಇತ್ಯಾದಿ ಹೆಸರುಗಳ ಹೊರತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅವುಗಳಲ್ಲಿ  ತೇರ್ಗಡೆಯಾಗುವ ಮೂಲಕ ಆಗುವ ಪ್ರಯೋಜನಗಳ ಕುರಿತು ಅರಿವಿಲ್ಲ. ಅಲ್ಲದೇ, ಅರಿವಿದ್ದವರಿಂದ ಅರಿವಿಲ್ಲದವರಿಗೆ ಅವು ಹಂಚಿಕೆಯಾಗುವ ಸನ್ನಿವೇಶಗಳು ದೊಡ್ಡ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಲೂ ಇಲ್ಲ. ಹಾಗಂತ,

ಇದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ಇಲ್ಲ ಎಂದಲ್ಲ. ಈಗ ಇರುವ ವ್ಯವಸ್ಥೆ ಎಷ್ಟು ಅದ್ಭುತವಾಗಿದೆ ಯೆಂದರೆ, ಈ ವ್ಯವಸ್ಥೆ ಇನ್ನಾವುದಾದರೂ ಸಮುದಾಯದಲ್ಲಿ ಇ ದ್ದಿದ್ದಿದ್ದೇ ಆಗಿದ್ದರೆ ಅವು ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಏರಿ ಬಿಡುತ್ತಿದ್ದುವು.

ಸುಮ್ಮನೆ, ನಮ್ಮ ನಮ್ಮ ವ್ಯಾಪ್ತಿಯಲ್ಲಿರುವ ಮಸೀದಿಗಳನ್ನೊಮ್ಮೆ ಲೆಕ್ಕ ಹಾಕಿ. ಫರ್ಲಾಂಗಿಗೊಂದರಂತೆ ಮಸೀದಿಗಳಿವೆ. ಈ ಮಸೀದಿಗಳೆಲ್ಲ ಭೂಮಿಯಡಿಯಿಂದ ದಿಢೀರ್ ಆಗಿ ಉದ್ಭವವಾದವುಗಳಲ್ಲ. ಒಂದು ಪ್ರದೇಶದಲ್ಲಿ ಮಸೀದಿ ಇದೆ ಎಂದಾದರೆ, ಆ ಪ್ರದೇಶದಲ್ಲಿ ಮುಸ್ಲಿಮರಿದ್ದಾರೆ ಎಂದರ್ಥ. ಯಾವ ಸರಕಾರವೂ ಮಸೀದಿ ಕಟ್ಟಿ ಕೊಡುವುದಿಲ್ಲ. ಮಸೀದಿ ಕಟ್ಟಿಕೊಳ್ಳುವುದು  ಮುಸ್ಲಿಮರು. ಆ ಮಸೀದಿಯಲ್ಲಿ ನಿತ್ಯದ ಪ್ರಾರ್ಥನೆಗಾಗಿ ಮತ್ತು ನೀರು, ಚಾಪೆ, ವಿದ್ಯುತ್, ನೈರ್ಮಲ್ಯಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದೂ ಮುಸ್ಲಿಮರೇ.  ಐದು ಬಾರಿ ಅದಾನ್ ಕೊಡುವುದಕ್ಕೆ, ನಮಾಜ್ ಗೆ ನೇತೃತ್ವ ನೀಡುವು ದಕ್ಕೆ ಮತ್ತು ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡುವುದೂ ಮುಸ್ಲಿಮರೇ.  ಇವೆಲ್ಲವು ಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ಮಸೀದಿ ಕಮಿಟಿಯನ್ನು ರಚಿಸುವುದೂ ಮುಸ್ಲಿಮರೇ. ಆದ್ದರಿಂದಲೇ, ಪ್ರಶ್ನೆಗಳೂ ಹುಟ್ಟಿಕೊಳ್ಳೋದು.
ಇಷ್ಟೆಲ್ಲ ಸಾಧ್ಯವಿರುವ ಮುಸ್ಲಿಮರಿಗೆ ಸಿಇಟಿ, ಯುಪಿಎಸ್‍ಸಿ, ನೀಟ್-ಜೆಇಇ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಇತ್ಯಾದಿ ಇತ್ಯಾದಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಟಾಪರ್ ಆಗಿ ಮೂಡಿ  ಬರುವಂತೆ ಮಾಡುವುದು ಕಷ್ಟವೇ? ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ತೇರ್ಗಡೆ ಹೊಂದುವಂತೆ ಮಾಡುವುದು ಅಸಾಧ್ಯವೇ? ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಉನ್ನತ 100ರ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವಂತೆ ಮಾಡಲಾಗದೇ?

ಖಂಡಿತ ಸಾಧ್ಯವಿದೆ.

ಎಲ್ಲ ಮಸೀದಿಯ ಆಡಳಿತ ಸಮಿತಿ ಮತ್ತು ಉಸ್ತಾದರು ಮಸೀದಿಯ ಮಿಂಬರಿನ ಪಕ್ಕ ಕುಳಿತು ಹೀಗೆ ಒಮ್ಮೆ ಅವಲೋಕನ ನಡೆಸಿಕೊಳ್ಳಲಿ-
ನಮ್ಮ ಜಮಾಅತ್‍ನಲ್ಲಿ ಎಸ್ಸೆಸ್ಸೆಲ್ಲಿ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಎಷ್ಟಿದ್ದಾರೆ? ಈ ಮುಗಿಸಿದವರಲ್ಲಿ ತೇರ್ಗಡೆ ಹೊಂದಿ ಮುಗಿಸಿದವರು ಎಷ್ಟು, ಅನುತ್ತೀರ್ಣರಾಗಿ ಅರ್ಧದಲ್ಲೇ   ಮುಗಿಸಿದವರು ಎಷ್ಟು? ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು ಏನು ಮಾಡುತ್ತಿದ್ದಾರೆ, ಅವರಿಗೆ ಉದ್ಯೋಗ ಸಿಕ್ಕಿದೆಯೇ, ಮಗ ಹಾಳಾಗುತ್ತಿದ್ದಾನೆ ಎಂಬ ದೂರು ಮನೆಯವರಲ್ಲಿ ಇದೆಯೇ? ಮಗ ನ/ಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವರು ಪ್ರಯತ್ನ ಪಟ್ಟಿದ್ದಾರೆಯೇ? ಆತ/ಕೆಗೆ ಮಾರ್ಗದರ್ಶನ ಮಾಡಿದರೆ ಸಾಧನೆ ಮಾಡಬಲ್ಲನೇ/ಳೇ? ಹಾಗೆಯೇ ಎಸ್ಸೆಸ್ಸೆಲ್ಸಿಯಲ್ಲಿ  ಉತ್ತೀರ್ಣರಾದ ಹುಡುಗ/ಹುಡುಗಿಗೆ ನಾವು ಏನು ಮಾರ್ಗದರ್ಶನ ಮಾಡಿದ್ದೇವೆ? ಯಾವ ಯಾವ ಆಯ್ಕೆಗಳು ಇವರ ಮುಂದಿವೆ ಮತ್ತು ಯಾವ ಆಯ್ಕೆ ಯಾವ ವಿದ್ಯಾರ್ಥಿಗೆ ಸೂಕ್ತ  ಎಂದು ಅಂಕಗಳನ್ನು ಆಧರಿಸಿ ನಿರ್ಣಯಿಸುವ ವ್ಯವಸ್ಥೆ ಮಾಡಲಾಗಿದೆಯೇ? ನುರಿತ ವ್ಯಕ್ತಿಗಳಿಂದ ಅವರಿಗೆ ಮಾರ್ಗದರ್ಶನ ಲಭಿಸಿದೆಯೇ? ತಮ್ಮ ಮಸೀದಿ ವ್ಯಾಪ್ತಿಯ ಯಾವ ಮನೆಯಲ್ಲಿ  ಎಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ, ಪಿಯುಸಿಗೆ ಹಾಜರಾಗಿದ್ದಾರೆ ಮತ್ತು ಯಾರ್ಯಾರು ಎಷ್ಟೆಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆಯೇ? ಯಾವ  ಮನೆಯ ವಿದ್ಯಾರ್ಥಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ/ಳೆ ಮತ್ತು ಅವರಲ್ಲಿ ಯಾರ ಸಂಕಷ್ಟಕ್ಕೆ ನೆರವಾದರೆ ಅವರ ಭವಿಷ್ಯ ಉಜ್ವಲವಾಗಬಹುದು? ತಮ್ಮ ಮಸೀದಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಮತ್ತು ಆ ಚಟುವಟಿಕೆಗಳು ಯಾವುವು ಹಾಗೂ ಅವನ್ನು ಇನ್ನಷ್ಟು ಹರಿತಗೊಳಿಸುವುದಕ್ಕೆ ಏನು ತೊಂದರೆಗಳಿವೆ? ಉತ್ತಮ  ತರಬೇತು ದಾರರಿಂದ ಅವರಿಗೆ ಮಾರ್ಗದರ್ಶನ ಲಭಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರೇ? ಅದೇರೀತಿ,

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಎಷ್ಟು ಗೊತ್ತಿದೆ? ಸಿಇಟಿ, ನೀಟ್, ಐಐಟಿ ಮುಂತಾದ ಪರೀಕ್ಷೆಗಳಲ್ಲಿ ಹಾಜರಾಗಲು ಈ  ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಅರ್ಹರು ಮತ್ತು ಅವರನ್ನು ಹೇಗೆ ತರಬೇತುಗೊಳಿಸಬಹುದು? ಮನೆಯವರ ನಿಲುವು ಏನು? ಪದವಿ ಶಿಕ್ಷಣ ಪೂರೈಸಿದವರು ಮತ್ತು ಇನ್ನಿತರ ರೂಪದಲ್ಲಿ  ಶಿಕ್ಷಣ ಮುಗಿಸಿದವರಿಗೆ ಸರಕಾರಿ ಉದ್ಯೋಗಕ್ಕೆ ಸೇರಲು ತೊಂದರೆಯಾಗಿದೆಯೇ? ಅರ್ಹತೆಯಿದ್ದೂ ಉದ್ಯೋಗ ಸಿಗದೇ ಹತಾಶರಾಗಿದ್ದಾರೆಯೇ? ಕಲಿಕೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂಬ  ಭಾವದಲ್ಲಿ ದಿನೇ ದಿನೇ ಕೊರಗುತ್ತಿದ್ದಾರೆಯೇ?
ಪ್ರಶ್ನೆಗಳು ಇನ್ನೂ ಇವೆ ಮತ್ತು ಇವೆಲ್ಲ ಬರೇ ಪ್ರಶ್ನೆಗಳೂ ಅಲ್ಲ. ಪ್ರತಿ ಮಸೀದಿ ಕಮಿಟಿಗಳೂ ಒಂದಿಷ್ಟು ಹೊತ್ತು ಚರ್ಚೆಗೆ ಮೀಸಲಿಡಬೇಕಾದ ಸಂಗತಿಗಳು. ಮಸೀದಿ ಕಮಿಟಿಗಳು ಈವರೆಗೆ  ಮಸೀದಿಗೆ ಬಳಿಯಬೇಕಾದ ಬಣ್ಣ, ರಬೀವುಲ್ ಅವ್ವಲ್‍ನಲ್ಲಿ ಮಾಡಬೇಕಾದ ಅಲಂಕಾರ, ಮಸೀದಿಯ ಮೈಕ್ ಬದಲಾವಣೆ, ಏ.ಸಿ. ಅಳವಡಿಕೆ, ಹೊಸ ಮಿನಾರ, ಮಿಂಬರ್ ಇತ್ಯಾದಿಗಳ  ಚರ್ಚೆಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದೆ. ಅನೇಕ ಬಾರಿ ಇಂಥವುಗಳ ಚರ್ಚೆಗಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳು ನಡೆದಿವೆ. ಹಣವೂ ಖರ್ಚಾಗಿವೆ. ಹಾಗಂತ,

ಇವೆಲ್ಲ ಅನಗತ್ಯ ಎಂದಲ್ಲ. ಈ ಹಿಂದೆ ಏನೆಲ್ಲಾ ನಡೆದು ಹೋಗಿವೆಯೋ ಅವೆಲ್ಲ ನಮ್ಮ ಮುಂದಿನ ಬದುಕಿಗೆ ಪಾಠವಾಗಬೇಕು. ಇನ್ನು ನಮ್ಮ ಮಸೀದಿ ಮೀಟಿಂಗ್‍ಗಳು ಈ ಮೇಲಿನ  ವಿಷಯಗಳ ಮೇಲೆ ನಡೆಯಲಿ. ಪ್ರತಿ ಮಸೀದಿಯ ಆಡಳಿತ ಕಮಿಟಿಗಳೂ ತಮ್ಮ ಮಸೀದಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳ ಕ್ಷೇಮಾಭ್ಯುದಯಕ್ಕಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳನ್ನು  ನಡೆಸುವ ಹೊಸ ಬದಲಾವಣೆಗೆ ನಾಂದಿ ಹಾಡಲಿ. ಪ್ರತಿ ಮನೆಯ ಸದಸ್ಯರ ಡಾಟಾ ಕಲೆ ಹಾಕುವ ಮತ್ತು ಆ ಡಾಟಾದಲ್ಲಿ ಆ ಮನೆಯಲ್ಲಿರುವ ವಿದ್ಯಾರ್ಥಿಗಳೆಷ್ಟು, ಉದ್ಯೋಗಿಗಳೆಷ್ಟು,  ಮಕ್ಕಳೆಷ್ಟು? ಯಾವ ಮಕ್ಕಳು ಯಾವ್ಯಾವ ತರಗತಿಯಲ್ಲಿ ಓದು ತ್ತಿದ್ದಾರೆ, ಅವರ ಅಂಕಗಳೆಷ್ಟು, ಅವರ ಆಸಕ್ತಿ ಏನು, ಯಾವ ರೀತಿಯ ಮಾರ್ಗದರ್ಶನ ಅವರಿಗೆ ಬೇಕಾಗಿದೆ, ಯಾವ ಮ ನೆಯ ವಿದ್ಯಾರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬಹುದು, ಯಾವ ವಿದ್ಯಾರ್ಥಿಗೆ ಯಾವ ಕ್ಷೇತ್ರ ಸೂಕ್ತ ಮುಂತಾದುವುಗಳ ಬಗ್ಗೆ ಸ್ಪಷ್ಟವಾದ ವಿವರಗಳಿರಲಿ. ಅವುಗಳನ್ನು  ಹರಡಿಕೊಂಡು ಮೀಟಿಂಗ್ ನಡೆಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಭೆಗಳನ್ನು ಮದ್ರಸದಲ್ಲಿ ಏರ್ಪಡಿಸಿ. ಭವಿಷ್ಯದ ಬಗ್ಗೆ ಅವರಲ್ಲಿ ಕನಸು ಕಾಣಲು ಹೇಳಿ. ನಿಮ್ಮದೇ ಮಸೀದಿ ವ್ಯಾಪ್ತಿಯಲ್ಲಿರುವ ಉತ್ತಮ ಸಾಧಕರನ್ನು ತಂದು ಮಕ್ಕಳಿಗೆ ಪ್ರೇರಣದಾಯಕ ಮಾತುಗಳನ್ನು ಆಡಿಸಿ. ಉದ್ಯಮಿಯೂ ಮಾತಾಡಲಿ. ವೈದ್ಯನೂ  ಮಾತಾಡಲಿ. ಶಿಕ್ಷಕನೂ ಮಾತಾಡಲಿ. ಉಸ್ತಾದರೂ ಮಾತಾಡಲಿ. ನಮ್ಮ ಸಮುದಾಯದಲ್ಲಿ ಎಷ್ಟೊಂದು ಸಾಧಕರಿದ್ದಾರೆ, ಎಂಥೆಂಥ ಅದ್ಭುತ ಮನುಷ್ಯರಿದ್ದಾರೆ ಎಂಬ ಹೆಮ್ಮೆ ಮೂಡುವಂತೆ  ಮಾಡಿ. ಹಾಗಂತ,

ಇದು ಕೇವಲ ಪುರುಷರಿಂದ ಪುರುಷರಿಗೆ ಎಂಬಂಥ ಕಾರ್ಯ ಕ್ರಮ ಆಗಬಾರದು. ಮಹಿಳಾ ಸಾಧಕರನ್ನು ಕರೆತನ್ನಿ. ಮಾತಾಡಿಸಿ. ಹೆಣ್ಮಕ್ಕಳ ಸಾಧನೆಗೂ ಹೆಮ್ಮೆಪಡಿ. ಅವರನ್ನೂ  ಹುರಿದುಂಬಿಸಿ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಉಸ್ತಾದರ ಪೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಅನೇಕರು ಆ ವ್ಯಾಪಾರವನ್ನು ಕೊಂಡಾಡಿದ್ದೂ ಇದೆ.  ಉಸ್ತಾದರ ಆರ್ಥಿಕ ಮುಗ್ಗಟ್ಟನ್ನು ಉಲ್ಲೇಖಿಸಿ ದುಃಖಿಸಿದ್ದೂ ಇದೆ. ನಿಜವಾಗಿ,

ನಾವು ಹೆಮ್ಮೆಪಡಬೇಕಾದದ್ದು- ಇಂಥ ವ್ಯಾಪಾರಿಗಳಿಂದ ಮುಸ್ಲಿಮ್ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳು, ಇನ್ಸ್‍ಪೆಕ್ಟರ್, ವೈದ್ಯ, ಪ್ರೊಫೆಸರ್, ಸಂಶೋಧಕರು ಅಗತ್ಯ ವಸ್ತುಗಳ ನ್ನು ಖರೀದಿಸಿಕೊಂಡು ಹೋಗುವಂತಾದಾಗ. ಅಂಥ ಅಧಿಕಾರಿಗಳನ್ನು ಧಾರಾಳ ಸಂಖ್ಯೆಯಲ್ಲಿ ತಯಾರಿಸಿ ಸಮಾಜಕ್ಕೆ ಅರ್ಪಿಸಿದಾಗ. ಎಲ್ಲೆಂದರಲ್ಲಿ ಅವರ ಉಪಸ್ಥಿತಿಯೇ ಕಾಣುವಂತಾದಾಗ.

ಆ ಉಸ್ತಾದರಿಗೆ ಸಲಾಮ್.

ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು



ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್‍ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ  ಪೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ,


ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ  ಹೆತ್ತವರ ಪರಿಶ್ರಮ ಏನು? ಆ ಮಕ್ಕಳಲ್ಲಿ IPS ಕನಸನ್ನು ಹೇಗೆ ಮತ್ತು ಏಕೆ ಬಿತ್ತಿದರು? ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮ ಮಕ್ಕಳನ್ನು ಹೇಗೆ ಅಣಿಗೊಳಿಸಿದರು? ಅದಕ್ಕಾಗಿ ಅವರು ಏನೇನು  ಮಾಡಿದರು? ಆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅಭಿರುಚಿ ಮೂಡಿಸಿದ್ದು ಹೇಗೆ? ಎಷ್ಟು ಹಗಲು ಮತ್ತು ರಾತ್ರಿಯನ್ನು ಆ ಹೆತ್ತವರು ಈ ಮಕ್ಕಳಿಗಾಗಿ ಕಳೆದರು...

ಇವು ತಕ್ಷಣ ಹೊಳೆದ ಪ್ರಶ್ನೆಗಳು ಮಾತ್ರ. ಎಳೆ ಪ್ರಾಯದಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ IPS ಅಧಿಕಾರಿಗಳಾಗಿಸುವ ವರೆಗಿನ ಈ ದೀರ್ಘ ಪ್ರಯಾಣದ ಬಗ್ಗೆ ಆ  ಹೆತ್ತವರಲ್ಲಿ ಅನೇಕ ಸಂಗತಿಗಳಿರಬಹುದು. ಅವು ಈ ಸಮುದಾಯದ ಪಾಲಿಗೆ ಲಭ್ಯವಾಗಬೇಕಾದರೆ, ಮೊದಲು ಆ ಬಗ್ಗೆ ಸಮುದಾಯದಲ್ಲಿ ಕುತೂಹಲ ಹುಟ್ಟಿಕೊಳ್ಳಬೇಕು. ಆ ಸಾಧನೆಯೆಡೆಗೆ  ಬೆರಗಿ ನಿಂದ ನೋಡಬೇಕು. ಈ ಸಮುದಾಯದ ವಾಟ್ಸಾಪ್ ಚರ್ಚೆಗಳಲ್ಲಿ ಆ ಮೂವರ ಬಗ್ಗೆ ಚರ್ಚೆಗಳಾಗಬೇಕು. ಅವರ ಪರಿಶ್ರಮ ಮತ್ತು ಯಶಸ್ಸು ಪ್ರತಿ ಮನೆಯ ಮಾತು- ಕತೆಯಾಗಬೇಕು. ಆ ಮಾತು-ಕತೆಯನ್ನು ಪ್ರತಿ ಮನೆಯ ಮಕ್ಕಳು ಆಲಿಸಬೇಕು. ಅವರೊಳಗಡೆ IPS, IAS, IRSನಂಥ ಕನಸುಗಳು ಗರಿಗೆದರಬೇಕು. ಮಕ್ಕಳು ಫುಟ್ಬಾಲ್  ಆಡುತ್ತಲೋ ಬ್ಯಾಟು ಬೀಸುತ್ತಲೋ IPS ಕನಸು ಕಾಣಬೇಕು.

ಹಾಗಂತ,

ಬಶೀರ್ ಅಹ್ಮದ್‍ರು ಹಂಚಿಕೊಂಡ ಸಂಗತಿ ಮೊತ್ತಮೊದಲ ಪ್ರಕರಣವೂ ಅಲ್ಲ ಮತ್ತು ಸಾಧನೆಯ ಛಲ ಇದ್ದರೆ ಇದು ಅಸಾಧ್ಯವೂ ಅಲ್ಲ.

2017 ನವೆಂಬರ್‍ನಲ್ಲಿ ಆಓಂ ಪತ್ರಿಕೆಯ ಒಂದು ವರದಿಯನ್ನು ಪ್ರಕಟಿಸಿತ್ತು. ‘Jaipur: This ಕಾಯಂಖನಿ family is all IAS, IPS ಅಂಡ್ RAS’ (ಈ  ಕಾಯಮ್‍ಖಾನಿ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್ ಮತ್ತು ಆರ್‍ಎಎಸ್) ಎಂಬುದು ಆ ವರದಿಯ ಶೀರ್ಷಿಕೆ.

ಜೈಪುರದ ಹಯಾತ್ ಮುಹಮ್ಮದ್ ಖಾನ್ ಅವರ ಮಕ್ಕಳ ಕತೆಯಿದು. ಇದು ಸುದ್ದಿಯಾಗುವುದಕ್ಕೆ ಕಾರಣ ಏನೆಂದರೆ, ಹಯಾತ್ ಮುಹಮ್ಮದ್‍ರ ಮಗ ಝಾಕಿರ್ ಹುಸೇನ್‍ರು ಐಎಎಸ್  ಅಧಿಕಾರಿಯಾಗಿ ಭಡ್ತಿ ಹೊಂದಿದುದು. ಇವರ ದೊಡ್ಡಣ್ಣ ಅಶ್ಫಾಕ್ ಹುಸೇನ್‍ರು ಅದಾಗಲೇ ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಅಶ್ಫಾಕ್ ಹುಸೇನ್‍ರ ಮಗಳು ಅಥವಾ  ಹಝಾತ್ ಮುಹಮ್ಮದ್‍ರ ಮೊಮ್ಮಗಳಾದ ಫರ್ಹಾ ಖಾನ್ ಅವರು ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಣಿಯಾಗಿದ್ದಾರೆ. ಹಾಗೆಯೇ ಹಯಾತ್ ಮುಹಮ್ಮದ್‍ರ ಮಗ  ಲಿಯಾಕತ್ ಅಲಿ ಖಾನ್‍ರು ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಗಿದ್ದು, ಅವರ ಮಗಳು ಶಾಹೀನ್ ಅಲಿ ಖಾನ್ ಕೂಡ ಭಾರತೀಯ ಕಂದಾಯ ಸೇವಾ ಇಲಾಖೆ (RAS)ಯಲ್ಲಿ ಅಧಿಕಾರಿಯಾಗಿದ್ದಾರೆ. ಹಯಾತ್ ಮುಹಮ್ಮದ್‍ರ ಮಗಳ ಮಗ ಸಲೀಮ್ ಕೂಡ ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಯಾಗಿದ್ದಾರೆ. ಹಯಾತ್ ಖಾನ್‍ರ ಕಿರಿಯ  ಸಹೋದರ ಅಬ್ದುಲ್ ಸಮದ್‍ರ ಮಗ ಝಾಕಿರ್ ಅಹ್ಮದ್ ಖಾನ್ ಸೇನೆಯಲ್ಲಿ ಕರ್ನಲ್ ಆಗಿರುವುದು ಮಾತ್ರ ಅಲ್ಲ, ಅವರ ಇನ್ನಿಬ್ಬರು ಮಕ್ಕಳಾದ ಶಾಕಿಬ್ ಹಾಗೂ ಇಶ್ರತ್ ಕೂಡ ಸೇ ನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದಾರೆ. ಇದೇ ವೇಳೆ, ಹಯಾತ್ ಮುಹಮ್ಮದ್ ಖಾನ್‍ರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರ ಒಟ್ಟು ಐವರು ಮಕ್ಕಳಲ್ಲಿ ಮೂವರು ಐಎಎಸ್  ಮತ್ತು ಒಬ್ಬರು ಐಪಿಎಸ್.

ಇನ್ನೊಂದು ಇಂಥದ್ದೇ  ಸಾಧಕ ಕುಟುಂಬವಿದೆ.

ಇದು 2019ರ ಸುದ್ದಿ. Four Siblings from UP crack civil services examination within 3 years  (ನಾಲ್ವರು ಸಹೋದರ-ಸಹೋದರಿಯರು 3  ವರ್ಷಗಳ ಅಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು)- ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಉತ್ತರ ಪ್ರದೇಶದ ಪ್ರತಾಪ್‍ಗಢ್‍ನ ಅನಿಲ್ ಮಿಶ್ರಾ ಅವರ  ಕುಟುಂಬ ಈ ಸಾಧನೆಯನ್ನು ಮೆರೆದಿತ್ತು. ಅನಿಲ್ ಮಿಶ್ರಾ ಬ್ಯಾಂಕ್ ಮ್ಯಾನೇಜರ್. ಅವರ ನಾಲ್ವರು ಮಕ್ಕಳಲ್ಲಿ ಕ್ಷಮಾ ದೊಡ್ಡವಳು. ವಿಶೇಷ ಏನೆಂದರೆ, UPSC  ಪರೀಕ್ಷೆಯನ್ನು ಎಲ್ಲರಿಗಿಂತ  ಕೊನೆಯಲ್ಲಿ ಮುಗಿಸಿದವರು ಕ್ಷಮಾ. ಅದೂ ಮದುವೆಯಾಗಿ 8 ವರ್ಷಗಳ ಬಳಿಕ- 2015ರಲ್ಲಿ. ಸತತ ನಾಲ್ಕು ಪ್ರಯತ್ನಗಳ ಬಳಿಕ ಕ್ಷಮಾರಿಗೆ ಈ ಯಶಸ್ಸು ಪ್ರಾಪ್ತವಾಗಿತ್ತು. ಇದಕ್ಕಿಂತ  ಮೊದಲು 2013ರಲ್ಲೇ  ಯೋಗೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 2014ರಲ್ಲಿ ಮಾಧವಿ UPSC ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ನೊಂದಿಗೆ ತೇರ್ಗಡೆಯಾದರು. ಅದೇ  ವರ್ಷ ಲೋಕೇಶ್ ಕೂಡ ತೇರ್ಗಡೆಯಾದರು. ಮೂರು ವರ್ಷಗಳ ಅಂತರದಲ್ಲಿ ಈ ನಾಲ್ವರೂ ಉನ್ನತ ಅಧಿಕಾರಿಗಳಾಗುವ ಹಂತಕ್ಕೆ ತಲುಪಿದರು.

ಅಂದಹಾಗೆ,

ಇಂಥ ಸಾಧಕ ಕುಟುಂಬಗಳ ಪಟ್ಟಿ ಇನ್ನೂ ಇರಬಹುದು. ಸದ್ಯ ಮುಸ್ಲಿಮ್ ಸಮುದಾಯ ತನ್ನೊಳಗನ್ನು ಮುಟ್ಟಿ ನೋಡುವುದಕ್ಕೆ ಮತ್ತು ಗಂಭೀರ ಅವಲೋಕನದ ಕಡೆಗೆ ಸಜ್ಜಾಗುವುದಕ್ಕೆ  ಈ ಮೂರು ಉದಾಹರಣೆಗಳು ಧಾರಾಳ ಸಾಕು. ಕೇವಲ ಈ ಮೂರೇ ಮೂರು ಕುಟುಂಬಗಳಲ್ಲಿ ಸುಮಾರು 15ರಷ್ಟು ಉನ್ನತ ದರ್ಜೆಯ ಅಧಿಕಾರಿಗಳು ತಯಾರಾದುದು ಹೇಗೆ? ಪ್ರತಿಭೆಗಳೆಲ್ಲ ಒಂದೇ ಕಡೆ ರಾಶಿ ಬಿದ್ದದ್ದು ಹೇಗೆ? ಇದು ಅವರವರ ಅದೃಷ್ಟ ಎಂದು ತಳ್ಳಿ ಹಾಕಬಹುದಾದ ಸಂಗತಿಯೇ ಅಥವಾ ಇವರನ್ನು ಎದುರಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಪ್ರತಿ  ಮನೆಗಳೂ ಇಂಥ ಅಧಿಕಾರಿಗಳನ್ನು ರೂಪಿಸುವುದಕ್ಕೆ ಪಣ ತೊಡಬೇಕಾದ ಸಂದರ್ಭವೇ?

ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದ್ದೇ  ಇದೆ. ಆ ಪ್ರತಿಭೆಗೆ ನಮ್ಮಿಂದ ಎಷ್ಟು ಪೋಷಣೆ ಸಿಗುತ್ತದೆ ಎಂಬುದರ ಆಧಾರದಲ್ಲಿ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಮಿಶ್ರಾ ಕುಟುಂಬದ ಯೋಗೇಶ್  UPSC ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುತ್ತಿದ್ದರೆ ಉಳಿದ ಮೂವರು UPSC ಪರೀಕ್ಷೆಗೆ ಶ್ರಮ ವಹಿಸುತ್ತಿದ್ದರೋ ಅನ್ನುವ ಪ್ರಶ್ನೆ ಪ್ರಸ್ತುತ. ಯೋಗೇಶ್‍ನ ಮೇಲೆ ಮಿಶ್ರಾ ದಂಪತಿ ಹಾಕಿರು  ವಷ್ಟು ಶ್ರಮವನ್ನು ಉಳಿದ ಮೂವರು ಮಕ್ಕಳ ಮೇಲೆ ಹಾಕಿರುವ ಸಾಧ್ಯತೆ ಇಲ್ಲ. ಲೋಕೇಶ್‍ರನ್ನು UPSC  ಪರೀಕ್ಷೆಗೆ ಸಜ್ಜುಗೊಳಿಸುವುದಕ್ಕೆ ಆ ಹೆತ್ತವರು ಪಟ್ಟಿರುವ ಶ್ರಮವು ಉಳಿದ  ಮೂವರು ಮಕ್ಕಳ ಮೇಲೆ ವ್ಯಯಿಸಿರುವ ಶ್ರಮಕ್ಕಿಂತ ಹಲವು ಪಟ್ಟು ಅಧಿಕ ಇರಬಹುದು. ಯಾಕೆಂದರೆ,

UPSC ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವ ವರೆಗೆ ಅದೊಂದು ಕನ್ನಡಿಯ ಗಂಟು. ಆವರೆಗೆ ಆ ಗಂಟನ್ನು ಅವರ ಮಕ್ಕಳಲ್ಲಿ ಯಾರೂ ತನ್ನದಾಗಿಸಿಕೊಂಡಿಲ್ಲ. ಆದ್ದರಿಂದ  ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವುದು ಎಲ್ಲಕ್ಕಿಂತ ಮುಖ್ಯ. ಲೋಕೇಶ್‍ಗೂ ಹೇಳಿಕೊಳ್ಳುವುದಕ್ಕೆ ಅವರ ಕುಟುಂಬದಲ್ಲಿ ಬೇರೆ ಮಾದರಿಗಳಿರಲಿಲ್ಲ. ಆದರೆ ಯಾವಾಗ ಲೋಕೇಶ್  ಯಶಸ್ವಿಯಾದರೋ ಉಳಿದ ಮೂವರೂ ಅರ್ಧ ಯಶಸ್ಸನ್ನು ಅದಾಗಲೇ ಪಡೆದು ಕೊಂಡರು. ಇದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ತನ್ನಿಂತಾನೇ ಬೆಳೆಯಿತು. ಪರೀಕ್ಷೆಯನ್ನು ಎದುರಿಸುವ  ಪಟ್ಟುಗಳನ್ನು ಹೇಳಿಕೊಡುವುದಕ್ಕೆ ಲೋಕೇಶ್ ಇದ್ದಾನೆ ಎಂಬ ಧೈರ್ಯ ಅವರಿಗೆ ಪರೀಕ್ಷೆಯ ಅರ್ಧಭಾಗವನ್ನು ಗೆಲ್ಲಿಸಿ ಕೊಟ್ಟಿತು. ಇನ್ನರ್ಧಕ್ಕಷ್ಟೇ ಹೆತ್ತವರು ಶ್ರಮ ಹಾಕಿದರೆ ಸಾಕಾಗಿತ್ತು. ಇದು  ಯಶಸ್ಸಿನ ಗುಟ್ಟು ಕೂಡ.

ಹಯಾತ್ ಮುಹಮ್ಮದ್ ಖಾನ್‍ರ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್, ಆರ್ ಏಎಸ್ ಇತ್ಯಾದಿ ಉನ್ನತ ಅಧಿಕಾರಿಗಳಾಗಿರುವುದರ ಹಿಂದೆ ಇರುವುದೂ ಇದೇ ಗುಟ್ಟು. ಇವರ ಐವರು  ಮಕ್ಕಳಲ್ಲಿ ಹಿರಿಯವ ಯಾವಾಗ ಐಪಿಎಸ್ ಅಧಿಕಾರಿಯಾದರೋ ಅದು ಉಳಿದ ನಾಲ್ವರು ಮಕ್ಕಳ ಮೇಲೆ ಸಕಾರಾತ್ಮಕ ಪರಿ ಣಾಮ ಮತ್ತು ಪ್ರಭಾವವನ್ನು ಬೀರಿತು. ನಮ್ಮೆದುರು ಅಣ್ಣ  ಇದ್ದಾನೆ ಎಂಬುದು ತಮ್ಮಂದಿರ ಪಾಲಿನ ದೊಡ್ಡ ಆಮ್ಲಜನಕ. ಅವರನ್ನು ಮಾನಸಿಕವಾಗಿ ಆ ಅಣ್ಣ ಆವರಿಸುತ್ತಾನೆ. ಅವರಿಗರಿವಿಲ್ಲದೆಯೇ ಅವರನ್ನು ಆತ ಮುಂದಕ್ಕೊಯ್ಯುತ್ತಾನೆ.

ಸದ್ಯ ಮುಸ್ಲಿಮ್ ಸಮುದಾಯದಲ್ಲಿ ಇಂಥದ್ದೊಂದು ಬದಲಾವಣೆ ಬರಬೇಕಾಗಿದೆ. ಪ್ರತಿ ಮನೆಯ ಹೆತ್ತವರಲ್ಲೂ ಇಂಥದ್ದೊಂದು ಕನಸನ್ನು ಬಿತ್ತಬೇಕಾಗಿದೆ. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಅವರು ಕಾಣುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರೇರಣೆ ನೀಡಬೇಕಾಗಿದೆ. ನಿಜವಾಗಿ,

ಇದು ಮುಸ್ಲಿಮ್ ಸಮುದಾಯದ ಪಾಲಿಗೆ ತೀರಾ ತೀರಾ ಕಠಿಣ ಅಲ್ಲ. ಸಮುದಾಯದಲ್ಲಿ ಮಸೀದಿ ಮತ್ತು ಮದ್ರಸ ಎಂಬ ವಿಶೇಷ ಸೊತ್ತು ಇದೆ. ಇತರ ಯಾವ ಸಮುದಾಯದಲ್ಲೂ ಇಲ್ಲದ  ಮತ್ತು ಬಹೂಪಯೋಗಿ ಸೌಲಭ್ಯ ಇದು. ಮಸೀದಿಯನ್ನು ಬರೇ ನಮಾಝïಗಾಗಿ ಮತ್ತು ಮದ್ರಸವನ್ನು ಬರೇ ಇಸ್ಲಾಮಿನ ಮೂಲಭೂತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಮಾತ್ರ ಮೀಸ ಲಿಡದೇ ಸಮುದಾಯದ ಸಬಲೀಕರಣಕ್ಕಾಗಿಯೂ ಬಳಸಿಕೊಂಡರೆ ಈ ಸಾಧನೆ ಅಸಾಧ್ಯವಲ್ಲ. ಅಂದಹಾಗೆ,

ಪ್ರತಿ ಮಸೀದಿಗೂ ಒಂದು ಆಡಳಿತ ಸಮಿತಿಯಿದೆ ಮತ್ತು ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಒಂದಕ್ಕಿಂತ ಹೆಚ್ಚು ಸಂಘಟನೆಗಳಿವೆ. ನಮ್ಮ ಗುರಿ ತಲುಪುವ ದೃಷ್ಟಿಯಿಂದ ಇದು ಬಹಳ ಅನು  ಕೂಲಕರ ವ್ಯವಸ್ಥೆ. ಸದ್ಯ ಈ ಮಸೀದಿ ಆಡಳಿತ ಸಮಿತಿ ಮತ್ತು ಈ ಸಂಘಟನೆಗಳ ನಡುವೆ ಸಂವಹನ ಸಾಧ್ಯವಾಗಬೇಕು. ಒಂದೇ ಕಡೆ ಎಲ್ಲರೂ ಕುಳಿತು ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ನ್ನೂ ಸಬಲೀಕರಣಗೊಳಿಸುವುದಕ್ಕೆ ಪೂರಕವಾದ ಕಾರ್ಯತಂತ್ರವನ್ನು ರೂಪಿಸಬೇಕು. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳೋ ಆಡಳಿತ ಸಮಿತಿಯೊಂದಿಗಿನ ವೈಮನಸ್ಯವೋ ಇದಕ್ಕೆ ಅಡ್ಡಿ  ಬರಬಾರದು. ಮುಂದಿನ ಇಷ್ಟು ವರ್ಷಗಳಲ್ಲಿ ಈ ಮಸೀದಿ ವ್ಯಾಪ್ತಿಯ ಒಟ್ಟು ಮನೆಗಳಿಂದ ಇಷ್ಟು ಐಎಎಸ್, ಐಪಿಎಸ್ ಮತ್ತಿತರ ಉನ್ನತ ಅಧಿಕಾರಿಗಳು ತಯಾರಾಗಬೇಕು ಎಂಬ ಗುರಿಯ ನ್ನು ಇಟ್ಟುಕೊಳ್ಳ ಬೇಕು. ಬಳಿಕ ಆ ಗುರಿಯನ್ನು ತಲುಪುವುದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು. ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ಸಂಪೂರ್ಣ ವಿವರವೂ ಮಸೀದಿಯ ಕಂ ಪ್ಯೂಟರ್‍ನಲ್ಲಿ ದಾಖಲುಗೊಂಡಿರಬೇಕು. ಯಾವ್ಯಾವ ಮನೆಯಲ್ಲಿ ಎಷ್ಟೆಷ್ಟು ಮಂದಿಯಿದ್ದಾರೆ ಎಂಬುದರಿಂದ ಹಿಡಿದು ಆ ಮನೆಯಲ್ಲಿ ಕಲಿಯುವ ಮಕ್ಕಳೆಷ್ಟು, ವಿಧವೆ, ವಿವಾಹ ಪ್ರಾಯಕ್ಕೆ  ಬಂದ ಹೆಣ್ಣು-ಗಂಡು, ವೃದ್ಧರು, ರೋಗಿಗಳು, ಮನೆಯ ವರಮಾನ, ದುಡಿಯುವವರು, ಉದ್ಯೋಗ ಅರಸುವವರು, ಕಲಿಕೆ ನಿಲ್ಲಿಸಿದವರು ಇತ್ಯಾದಿ ಎಲ್ಲವೂ ಮಸೀದಿ ಕಂಪ್ಯೂಟರ್‍ನಲ್ಲಿ  ಸುರಕ್ಷಿತವಾಗಿ ಇರಬೇಕು. ಈ ಎಲ್ಲ ಡಾಟಾಗಳನ್ನು ಹರಡಿಕೊಂಡು ಮಸೀದಿ ಆಡಳಿತ ಸಮಿತಿ ಮತ್ತು ಸಂಘಟನೆಗಳು ಪಕ್ಕಾ ಯೋಜನೆಗಳನ್ನು ರೂಪಿಸಬೇಕು. ಮುಖ್ಯವಾಗಿ, 

ಮದ್ರಸಕ್ಕೆ  ಬರುವ ಮಕ್ಕಳಿಗೆ ಪ್ರತಿದಿನ ಸಾಧಕರ ಕುರಿತು ವಿವರಿಸುವ 15 ನಿಮಿಷದ ಸ್ಫೂರ್ತಿ ತರಗತಿ ಇರಬೇಕು. ಪ್ರತಿದಿನ ಮದ್ರಸದಿಂದ ಉನ್ನತ ಅಧಿಕಾರಿಯಾಗುವ ಕನಸಿನೊಂದಿಗೆ ಮಕ್ಕಳು ಮನೆಗೆ  ಹೊರಡಬೇಕು. ಮನೆಯಲ್ಲೂ ಹೆತ್ತವರ ಮಾತು-ಕತೆಯಲ್ಲಿ ಸಾಧಕರ ಬಗ್ಗೆ ಉಲ್ಲೇಖಗಳಾಗುತ್ತಿರಬೇಕು. ಪ್ರತಿ ಮನೆಯ ಮಕ್ಕಳೂ ಆಕಾಶ, ನಕ್ಷತ್ರ, ಸೂರ್ಯ, ಚಂದ್ರ, ವಿಮಾನ, ರಾಕೆಟ್,  ಕಂಪ್ಯೂಟರ್, ವಾಹನಗಳು, ಮಿನಾರಗಳು ಹೀಗೆ ಪ್ರತಿಯೊಂದನ್ನೂ ಬೆರಗಿನಿಂದ ನೋಡುತ್ತಾ ಬೆಳೆಯುವಂತಾಗಬೇಕು. ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‍ ಗಳು, ಉನ್ನತ ಶಿಕ್ಷಣ ಪಡೆದ  ವಿದ್ವಾಂಸರು, ಜರ್ನಲಿಸ್ಟ್ ಗಳು, ಅರ್ಥತಜ್ಞರ ಬಗ್ಗೆ ಓದುತ್ತಾ, ಆಲಿಸುತ್ತಾ ಬೆಳೆಯಬೇಕು. ಇದೊಂದು ದೀರ್ಘ ಪ್ರಯಾಣ. ದೂರದೃಷ್ಟಿಯ ಯೋಜನೆಗಳ ಹೊರತು ಈ ಪ್ರಯಾಣದ ಕೊನೆಯನ್ನು ತಲುಪಲಾಗದು. ಇಲ್ಲಿ ಮಕ್ಕಳ ತರಬೇತಿ ಮಾತ್ರ ಆಗಬೇಕಾದುದಲ್ಲ. ಹೆತ್ತವರ ತರಬೇತಿಯೂ ಆಗಬೇಕು. ಹೆತ್ತವರನ್ನು ಮಸೀದಿಗೋ ಮದ್ರಸಕ್ಕೋ ಆಹ್ವಾನಿಸಿ ಸ್ಫೂರ್ತಿದಾಯಕ  ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅವರಲ್ಲಿ ಹೊಸ ಸ್ಫೂರ್ತಿ, ಭರವಸೆಯನ್ನು ತುಂಬಬೇಕು. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಕಾಣುವಂತೆ ಅವರನ್ನು ಪ್ರೇರೇಪಿಸಬೇಕು.  ಅವರಲ್ಲಿ ಕನಸನ್ನು ತುಂಬಬೇಕು. ಎಷ್ಟೆಂದರೆ, ಹಗಲೂ-ರಾತ್ರಿ ಅವರು ಈ ಕನಸಿನೊಂದಿಗೆ ಬದುಕಬೇಕು ಮತ್ತು ಅವರು ಈ ಕನಸನ್ನು ನನಸು ಮಾಡುವುದಕ್ಕಾಗಿಯೇ ಬದುಕಬೇಕು.

ಒಂದುವೇಳೆ,

ಪ್ರತೀ ಹೆತ್ತವರು, ಉಸ್ತಾದರು, ಸಂಘಟನೆಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಜೊತೆಯಾದರೆ ಮತ್ತು ಈ ಮೇಲಿನ ಗುರಿಯನ್ನು ತಲುಪುವ ಉದ್ದೇಶಕ್ಕಾಗಿ ಒಂದಾದರೆ, ಹಯಾತ್  ಮುಹಮ್ಮದ್ ಖಾನ್‍ರ ಮನೆ ಹೆಜ್ಜೆಗೊಂದರಂತೆ ಸೃಷ್ಟಿಯಾದೀತು.



ನಮ್ಮೊಡನಿದ್ದೂ ನಮ್ಮವರಾಗದ ಮದ್ರಸ ಶಿಕ್ಷಕರು

ಸನ್ಮಾರ್ಗ ಸಂಪಾದಕೀಯ 

ಕೊರೋನಾ ತಂದಿಟ್ಟ ಸಂಕಷ್ಟದ ಕುಲುಮೆಯಲ್ಲಿ ಬೆಂದು ಹೋದವರ ಸಂಖ್ಯೆ ಅಪಾರ. ಲಾಕ್‍ ಡೌನ್‍ನ ಮೂಲಕ ಆರಂಭವಾದ ಈ ಸಂಕಷ್ಟ ಸಮಾಜದ ಎಲ್ಲ ವರ್ಗವನ್ನೂ ಆವರಿಸಿದೆ.  ಉದ್ಯೋಗ ನಷ್ಟ, ವ್ಯಾಪಾರ ನಷ್ಟ, ಕೈಗಾರಿಕೆಗಳ ಸ್ಥಗಿತ, ಉದ್ಯೋಗ ರಹಿತ ಕೂಲಿಕಾರ್ಮಿಕರು, ಖಾಸಗಿ ಶಾಲೆಯ ಶಿಕ್ಷಕರು, ಮದ್ರಸದ ಶಿಕ್ಷಕರು- ಹೀಗೆ ಪ್ರತಿಯೊಬ್ಬರೂ ಕೊರೋನಾ  ದಾಳಿಯ ಸಂತ್ರಸ್ತರೇ. ವಿಷಾದ ಏನೆಂದರೆ, ಈ ಎಲ್ಲರ ಪೈಕಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾದವರೆಂದರೆ, ಮದ್ರಸ ಶಿಕ್ಷಕರು. ಇವರು ಟಿ.ವಿ. ಚಾನೆಲ್‍ಗಳ ಮುಂದೆ ಬಂದದ್ದು ಕಡಿಮೆ.  ಪತ್ರಿಕೆಗಳ ಮುಂದೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡದ್ದೂ ಕಡಿಮೆ. ಒಂದುರೀತಿಯಲ್ಲಿ, ನಮ್ಮ ನಡುವೆಯೇ ಇದ್ದು ನಮ್ಮವರಾಗದೇ ಉಳಿದುಕೊಂಡರೇನೋ ಎಂದು  ಅಂದುಕೊಳ್ಳಬಹುದಾದ ಸ್ಥಿತಿ ಅವರದು.
ಮದ್ರಸ ಶಿಕ್ಷಣ ಎಂಬುದು ಸಂಪೂರ್ಣವಾಗಿ ಮುಸ್ಲಿಮರಿಗೆ ಸಂಬಂಧಿಸಿರುವುದರಿಂದ ಮತ್ತು ಅಲ್ಲಿ ಕಲಿಸುವ ಶಿಕ್ಷಕರು ಪೂರ್ಣವಾಗಿ ಮುಸ್ಲಿಮರ ಸಾಂಪ್ರದಾಯಿಕ ಉಡುಪನ್ನು  ಧರಿಸುವುದರಿಂದ ಸಾಮಾಜಿಕವಾಗಿ ಅವರು ಒಂದು ಪ್ರತ್ಯೇಕ ಗುರುತನ್ನು ಪಡೆದುಕೊಂಡಿದ್ದಾರೆ. ಈ ಗುರುತು ಮುಸ್ಲಿಮ್ ಸಮುದಾಯದ ಹಿನ್ನೆಲೆಯಲ್ಲಿ ನೋಡುವಾಗ ಅವರಿಗೆ  ಪೂರಕವಾಗಿದ್ದರೂ ಒಟ್ಟು ಸಮಾಜದ ದೃಷ್ಟಿಯಿಂದ ನೋಡುವಾಗ ಅದು ಅವರ ಪಾಲಿಗೆ ಮಾರಕವಾಗಿ ಮಾರ್ಪಡುವುದಕ್ಕೂ ಅವಕಾಶ ಇದೆ. ಅವರನ್ನು ಸಂಪರ್ಕಿಸುವುದಕ್ಕೆ,  ಮಾತಾಡಿಸುವುದಕ್ಕೆ ಮುಸ್ಲಿಮೇತರ ಸಮುದಾಯ ಮತ್ತು ಮಾಧ್ಯಮದ ಮಂದಿ ಅಂಜಿಕೆ ತೋರಿದ್ದರೆ ಅದಕ್ಕೆ ಈ ಗುರುತೂ ಒಂದು ಕಾರಣ. ಮುಸ್ಲಿಮರಿಗೆ ಸಂಬಂಧಿಸಿ ಮದ್ರಸ ಶಿಕ್ಷಕರು  ಮತ್ತು ಮಸೀದಿ ಉಸ್ತಾದರೆಂದರೆ ವಿಶೇಷ ಗೌರವ ಮತ್ತು ಆದರ ಇದೆ. ಅವರು ಸಮುದಾಯದ ಮಾರ್ಗದರ್ಶಕರು ಎಂಬ ಪ್ರೀತಿಯಿದೆ. ಆದರೆ,
ಈ ಗೌರವ ಮತ್ತು ಆದರವು ಅವರಿಗೆ ವೇತನವನ್ನು ನಿಗದಿಗೊಳಿಸುವಾಗ ಪರಿಗಣನೆಗೆ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಅತ್ಯಂತ ನಿರಾಶಾಜನಕವಾದುದು. ಮಸೀದಿ ಉಸ್ತಾದರು ಮತ್ತು  ಮದ್ರಸ ಶಿಕ್ಷಕರಿಗೆ ಗೌರವ ಕೊಡುವುದರಲ್ಲಿ ಮುಸ್ಲಿಮ್ ಸಮುದಾಯ ಹಿಂದೆ ಬಿದ್ದಿಲ್ಲ. ಆದರೆ, ಈ ಗೌರವವು ಅವರನ್ನು ಆರ್ಥಿಕವಾಗಿ ಮೇಲೆತ್ತುವುದಕ್ಕೆ ಬಹುತೇಕ ಸಫಲವೂ ಆಗಿಲ್ಲ. ಇದಕ್ಕೆ  ಕಾರಣಗಳೂ ಇರಬಹುದು ಮತ್ತು ಕೆಲವೊಂದು ಕಡೆ ಇದಕ್ಕೆ ಅಪವಾದಗಳೂ ಇರಬಹುದು. ಆದರೆ, ಒಂದು ಮೊತ್ತವಾಗಿ ನೋಡುವಾಗ, ಮಸೀದಿ ಉಸ್ತಾದರು ಮತ್ತು ಮದ್ರಸ ಶಿಕ್ಷಕರು ಕ ನಿಷ್ಠ ಈ ಕೊರೋನಾ ಕಾಲದಲ್ಲಿ ಸಾಮುದಾಯಿಕ ಅವಗಣನೆಗೆ ಒಳಗಾದರೇನೋ ಎಂದು ಹೇಳಬೇಕಾಗುತ್ತದೆ.
ಮುಸ್ಲಿಮ್ ಸಮುದಾಯದ ಎಲ್ಲ ಮಸೀದಿ ಮತ್ತು ಮದ್ರಸಗಳು ಶ್ರೀಮಂತವಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಸಾವಿರದಷ್ಟು ಮನೆಗಳು ಇರುವಂತೆಯೇ 25 ಮನೆಗಳನ್ನೇ  ಅವಲಂಬಿಸಿಕೊಂಡಿರುವ ಮಸೀದಿ-ಮದ್ರಸಗಳೂ ಇವೆ. ಈ ವ್ಯತ್ಯಾಸ ಬಹಳ ಮುಖ್ಯ. ಯಾಕೆಂದರೆ, ಒಂದು ಮಸೀದಿ ವ್ಯಾಪ್ತಿಯಲ್ಲಿ ಸಾವಿರದಷ್ಟು ಮನೆಗಳಿವೆ ಎಂದರೆ ಅಷ್ಟೂ ಮನೆಗಳಿಂದ  ವಂತಿಗೆಗಳು ಆ ಮಸೀದಿಗೆ ಬರುತ್ತವೆ ಎಂದು ಅರ್ಥ. ವಂತಿಗೆ ಎಷ್ಟೇ ಸಣ್ಣ ಮೊತ್ತವಾದರೂ ಸಾವಿರ ಮನೆಗಳ ವಂತಿಗೆಯು ಅಂತಿಮವಾಗಿ ದೊಡ್ಡ ಮೊತ್ತವಾಗಿ ಮಾರ್ಪಡುವುದೂ ಸಹಜ.  ಅಲ್ಲದೇ, ಈ ಸಾವಿರ ಮನೆಗಳಲ್ಲಿ ಅನೇಕಾರು ದೊಡ್ಡ ದೊಡ್ಡ ಶ್ರೀಮಂತರ ಮತ್ತು ಅನಿವಾಸಿಗಳ ಮನೆಗಳಿರುವುದಕ್ಕೂ ಅವಕಾಶ ಇದೆ. ಆ ಮನೆಗಳು ವಿಶೇಷ ಮೊತ್ತವನ್ನು ಅಭಿಮಾನ ಪೂರ್ವಕ ಮಸೀದಿಗೆ ನೀಡುತ್ತಿರುವುದೂ ನಡೆಯುತ್ತದೆ. ಆದ್ದರಿಂದ ಇಂಥ ಮಸೀದಿ-ಮದ್ರಸಗಳು ಆರ್ಥಿಕವಾಗಿ ಬಡವಾಗಿರುವುದಿಲ್ಲ. ಇಲ್ಲಿ ಕಲಿಸುವ ಶಿಕ್ಷಕರಾಗಲಿ, ಮಸೀದಿ ಉಸ್ತಾದರಾಗಲಿ  ತಕ್ಕಮಟ್ಟಿನ ವೇತನವನ್ನೂ ಪಡೆಯುತ್ತಿರುತ್ತಾರೆ. ಮಾತ್ರವಲ್ಲ, ಕೊರೋನಾ ಲಾಕ್‍ಡೌನ್ ಮತ್ತು ಆ ಬಳಿಕದ ದಿನಗಳಲ್ಲಿ ಇವರು ತೀವ್ರ ಆರ್ಥಿಕ ಹೊಡೆತವನ್ನು ಎದುರಿಸಿರುವ ಸಾಧ್ಯತೆಯೂ  ಕಡಿಮೆ. ಇವರ ವೇತನಕ್ಕೆ ಕತ್ತರಿ ಬಿದ್ದಿರುವ ಪ್ರಕರಣಗಳೂ ತೀರಾ ತೀರಾ ಕಡಿಮೆ. ಆದರೆ,
ಕಡಿಮೆ ಮನೆಗಳನ್ನು ಅವಲಂಬಿಸಿರುವ ಮಸೀದಿ-ಮದ್ರಸಗಳ ಸ್ಥಿತಿ ಹಾಗಿಲ್ಲ. ಅಲ್ಲಿ ಮಸೀದಿಗೆ ಬರುವ ವಂತಿಗೆ ತೀರಾ ಕಡಿಮೆ. ವಿಶೇಷವಾಗಿ, ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಥ  ಸ್ಥಿತಿ ದಾರಾಳ ಇದೆ. ಶ್ರೀಮಂತರು ಮತ್ತು ಅನಿವಾಸಿಗಳ ಸಂಖ್ಯೆಯೂ ಇಂಥ ಪ್ರದೇಶಗಳಲ್ಲಿ ವಿರಳ. ಕೊರೋನಾ ತಂದಿಟ್ಟ ಸಂಕಷ್ಟಕ್ಕೆ ಅತೀ ದಾರುಣವಾಗಿ ತುತ್ತಾದವರೆಂದರೆ, ಈ ಮಸೀ ದಿ-ಮದ್ರಸದ ಉಸ್ತಾದರು ಮತ್ತು ಶಿಕ್ಷಕರು. ಅನೇಕ ಮಸೀದಿಗಳು ಇವರಿಬ್ಬರಲ್ಲಿ ಉಸ್ತಾದರನ್ನು ಮಾತ್ರ ಉಳಿಸಿಕೊಂಡು ಶಿಕ್ಷಕರನ್ನು ಮನೆಗೆ ಕಳಿಸಿದ್ದೂ ಇದೆ. ಕೆಲವು ಕಡೆ ಇಬ್ಬರನ್ನೂ  ಉಳಿಸಿಕೊಂಡಿದ್ದರೂ ವೇತನದಲ್ಲಿ ಕಡಿತಗೊಳಿಸಿದ್ದೂ ಇದೆ. ಒಂದುಕಡೆ, ಮಸೀದಿ ವ್ಯಾಪ್ತಿಯ ಮನೆಗಳ ಆದಾಯದಲ್ಲಿ ತೀವ್ರ ಇಳಿಕೆಯಾಗಿದೆ. ಪ್ರತಿ ಮನೆಗಳೂ ಆರ್ಥಿಕ ಸಂಕಷ್ಟವನ್ನು  ಎದುರಿಸುತ್ತಿವೆ. ಇದು ಸಹಜವಾಗಿಯೇ ಮಸೀದಿಯ ಆದಾಯದ ಮೇಲೂ ಪರಿಣಾಮ ಬೀರುತ್ತಿವೆ. ಅಲ್ಲದೇ, ಲಾಕ್‍ಡೌನ್‍ನ ಸಂದರ್ಭದಲ್ಲಿ ಮುಚ್ಚಲಾದ ಮದ್ರಸಗಳು ಇನ್ನೂ ಬಾಗಿಲು  ತೆರೆದಿಲ್ಲ. ಮದ್ರಸಗಳಿಗೆ ವಿದ್ಯಾರ್ಥಿಗಳು ಬರುವುದಿಲ್ಲವಾದ್ದರಿಂದ ಆ ಮಕ್ಕಳ ಪೋಷಕರು ಕಲಿಕಾ ಶುಲ್ಕವನ್ನು ಪಾವತಿಸುವುದೂ ಇಲ್ಲ. ಇದರ ನೇರ ಪರಿಣಾಮವನ್ನು ಎದುರಿಸಬೇಕಾದವರು  ಮದ್ರಸ ಶಿಕ್ಷಕರು. ಆದ್ದರಿಂದಲೇ, ಬರೇ ಮದ್ರಸ ಶಿಕ್ಷಕ ಉದ್ಯೋಗವನ್ನೇ ನೆಚ್ಚಿಕೊಂಡವರು ಈ ಕೊರೋನಾ ಕಾಲದಲ್ಲಿ ತೀವ್ರ ಸಂಕಷ್ಟಕ್ಕೆ ಸಹಜವಾಗಿಯೇ ತುತ್ತಾದರು. ಅನೇಕ ಮಸೀದಿಗಳು  ಇಂಥ ಶಿಕ್ಷಕರನ್ನು ತಾತ್ಕಾಲಿಕವಾಗಿ ಕೈಬಿಟ್ಟವು. ಆದರೆ ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರಿಗೆ ಪರ್ಯಾಯವಾಗಿ ಅವರ ಮುಂದಿದ್ದುದು ಬರೇ ಶೂನ್ಯ ಮಾತ್ರ. ವಿಷಾದ ಏನೆಂದರೆ,
ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾದಂತೆ ಮದ್ರಸಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾಗಿಲ್ಲ ಅನ್ನುವುದು. ಮಾಧ್ಯಮಗಳೂ ಅವರ ಬಗ್ಗೆ ಒಂದಿಷ್ಟು ಅಂತರವನ್ನೇ  ಕಾಯ್ದುಕೊಂಡವು. ಅಲ್ಲದೇ, ಅತೀವ ಸ್ವಾಭಿಮಾನವೂ ಈ ಶಿಕ್ಷಕರು ಹೊರ ಪ್ರಪಂಚದಲ್ಲಿ ಚರ್ಚೆಯಾಗದಂತೆ ನೋಡಿಕೊಂಡವು. ನಿಜವಾಗಿ,
ಮುಸ್ಲಿಮ್ ಸಮುದಾಯದ ಮಸೀದಿ-ಮದ್ರಸಾಗಳು ನಿರ್ವಹಿಸಲ್ಪಡುತ್ತಿರುವ ರೀತಿಯೇ ಒಂದು ಕೌತುಕ. ಯಾವುದೇ ಸರಕಾರಕ್ಕೂ ಕಡಿಮೆ ಇಲ್ಲದಂತೆ ಅತ್ಯಂತ ವ್ಯವಸ್ಥಿತವಾಗಿ ಮತ್ತು  ಯೋಜನಾಬದ್ಧವಾಗಿ ಇವು ತಲೆತಲಾಂತರದಿಂದ ನಿರ್ವಹಿಸಲ್ಪಡುತ್ತಾ ಬರುತ್ತಿವೆ. ಇಲ್ಲಿ ದುಡಿಯುತ್ತಿರುವ ಯಾವ ಶಿಕ್ಷಕರೂ ಮತ್ತು ಉಸ್ತಾದರೂ ಅವರಿಗೆ ಸಿಗುವ ವೇತನದಿಂದ  ಶ್ರೀಮಂತರಾದ ಉದಾಹರಣೆ ಇಲ್ಲ. ಉಸ್ತಾದರ ಮತ್ತು ಶಿಕ್ಷಕರ ದುಡಿಮೆಯನ್ನು ಸಮುದಾಯವು ಸೇವೆ ಎಂದು ಪರಿಗಣಿಸಿರುವುದೇ ಇದಕ್ಕೆ ಕಾರಣ. ಇದನ್ನು ನಿರಾಕರಿಸಬೇಕಾಗಿಯೂ ಇಲ್ಲ.  ಅದೊಂದು ಸೇವೆ. ಆದರೆ ಈ ಗೌರವವೊಂದೇ ಅವರ ಹೊಟ್ಟೆಯನ್ನು ತಣಿಸದು. ಕುಟುಂಬವನ್ನು ಪೋಷಿಸದು. ಅವರ ಸೇವೆಯನ್ನು ಕೊಂಡಾಡುತ್ತಲೇ ವೈಜ್ಞಾನಿಕವಾಗಿ ಅವರಿಗೆ ವೇತನ  ನಿಗದಿಗೊಳಿಸುವ ಸನ್ನಿವೇಶಗಳೂ ಸೃಷ್ಟಿಯಾಗಬೇಕು. ಮದ್ರಸಾಗಳು ಬಾಗಿಲು ಮುಚ್ಚಿವೆ ಎಂಬುದು ಅವರನ್ನು ಉದ್ಯೋಗದಿಂದ ಕಿತ್ತು ಹಾಕುವುದಕ್ಕೆ ಸಕಾರಣವಾಗುವುದಿಲ್ಲ. ಅವರ ಸೇವೆಗೆ  ನಿಜವಾದ ಗೌರವ ಕೊಡಬೇಕಾದ ಸಂದರ್ಭ ಇದು. ಮಸೀದಿ ಆಡಳಿತ ಸಮಿತಿಗಳು ಅವರನ್ನು ಉಳಿಸಿಕೊಂಡು ಧೈರ್ಯ ತುಂಬಬೇಕು. ಅವರ ವೇತನಕ್ಕೆ ಪರ್ಯಾಯ ದಾರಿಗಳನ್ನು  ಕಂಡುಕೊಳ್ಳಬೇಕು. ಸರ್ಕಾರದ ಮತ್ತು ವಕ್ಫ್ ಬೋರ್ಡ್‍ನ ಮುಂದೆ ಶಿಕ್ಷಕರ ಸಮಸ್ಯೆಯನ್ನು ವಿವರಿಸಬೇಕು. ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರ ಬಗ್ಗೆ ಅಧ್ಯಯನ  ನಡೆಯಬೇಕಲ್ಲದೇ, ಈ ಉದ್ಯೋಗ ರಹಿತ ಅವಧಿಯಲ್ಲಿ ಅವರಿಗಾದ ತೊಂದರೆಗಳನ್ನು ದಾಖಲಿಸಿ ಸರಕಾರದ ಮುಂದಿಡಬೇಕು ಮತ್ತು ಸೂಕ್ತ ಪರಿಹಾರ ಪ್ಯಾಕೇಜ್‍ಗಾಗಿ ಆಗ್ರಹಿಸಬೇಕು.
ಮಸೀದಿ ಮತ್ತು ಮದ್ರಸಾಗಳಷ್ಟೇ ಈ ಸಮುದಾಯದ ಆಸ್ತಿಗಳಲ್ಲ. ಅಲ್ಲಿರುವ ಉಸ್ತಾದರು ಮತ್ತು ಶಿಕ್ಷಕರೂ ಸಮುದಾಯದ ಆಸ್ತಿಗಳೇ. ಅವರು ಸಮುದಾಯಕ್ಕೆ ಮಾರ್ಗದರ್ಶಕರಾಗಿ ಮತ್ತು  ಮೌಲ್ಯಯುತ ಪೀಳಿಗೆಯನ್ನು ಬೆಳೆಸುವವರಾಗಿ ಬೇಕಾದವರಾಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಮುದಾಯ ಅವರನ್ನು ಕೈ ಬಿಡುವುದು ದ್ರೋಹವಾಗುತ್ತದೆ. ಅವರನ್ನು ಆದರಿಸಿ, ಅವರ  ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರವನ್ನು ಪಡಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

Wednesday, September 2, 2020

ಆಯಿಶಾರ ಪ್ರಶ್ನೆ, ಪ್ರವಾದಿಯ ಉತ್ತರ



1. ಉಹುದ್
2. ತಾಯಿಫ್

ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರ(ಸ) ಪಾಲಿಗೆ ದೊಡ್ಡ ಶಕ್ತಿಯಾಗಿದ್ದ ದೊಡ್ಡಪ್ಪ ಅಬೂತಾಲಿಬ್ ಮತ್ತು  ಪತ್ನಿ ಖದೀಜಾ- ಇಬ್ಬರೂ ಬೆನ್ನು ಬೆನ್ನಿಗೇ ಮೃತಪಟ್ಟ ಬಳಿಕ ಪ್ರವಾದಿ ಅನಾಥತೆ ಯನ್ನು ಅ ನುಭವಿಸಿದರು. ಅಬೂತಾಲಿಬ್ ಜೀವಿಸಿರುವವರೆಗೆ ಅವರಿಗೆ ಅಸ್ತಿತ್ವದ ಸಮಸ್ಯೆ ಕಾಡಿರಲಿಲ್ಲ. ಅಬೂತಾ ಲಿಬ್ ಅಭಯ ನೀಡಿದ್ದರು. ಅಬೂತಾಲಿಬ್‍ರನ್ನು ಎದುರು ಹಾಕಿಕೊಂಡು ಪ್ರವಾದಿ ಮುಹಮ್ಮದ್‍ರೊಂ ದಿಗೆ ಜಗಳ ಕಾಯುವ ಮತ್ತು ಅವರನ್ನು ಮಕ್ಕಾದಿಂದ ಹೊರ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ.  ಆದರೆ ಅವರ ನಿಧನದ ಜೊತೆಗೇ ಪ್ರವಾದಿ ಮುಹಮ್ಮದರ ಪಾಲಿನ ಕರಾಳ ದಿನಗಳೂ ತೆರೆದುಕೊಂಡವು.  ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದ ಮಂದಿ ಚುರುಕಾದರು. ಪ್ರವಾದಿಯನ್ನು ನಖಶಿಖಾಂತ  ದ್ವೇಷಿಸಿದರು.

ಒಂದು ಘಟನೆ ಹೀಗಿದೆ:

ಒಂದು ಮುಂಜಾನೆ. ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಜೊತೆ  ಹಂಚಿಕೊಂಡರು. ಆದರೆ ಆ ಮಾತುಗಳನ್ನು ಆಲಿಸಿದವರಲ್ಲಿ ಕೆಲವರು ಅವರ ಮುಖಕ್ಕೆ ಉಗುಳಿದರು.  ಕೆಲವರು ಮಣ್ಣು ಎಸೆದರು. ಬೈದರು. ಹೀನಾಯ ಭಾಷೆಯಲ್ಲಿ ನಿಂದಿಸಿದರು. ಪ್ರವಾದಿ ಏನೂ ಮಾಡ ಲಿಲ್ಲ. ಅವರ ಸುತ್ತ ಸೇರಿಕೊಂಡವರು ವ್ಯಂಗ್ಯ, ದೂಷಣೆ, ಬೈಗುಳ ಸುರಿಸುತ್ತಾ ಮನಬಂದಂತೆ  ವರ್ತಿಸುತ್ತಿದ್ದರು. ಬೆಳಕು ಹರಿದು ಹಗಲು ಸ್ಪಷ್ಟವಾದಾಗ ಓರ್ವ ಹೆಣ್ಣು ಮಗಳು ಪಾತ್ರೆ ತುಂಬಾ ನೀರು  ಹಿಡಿದುಕೊಂಡು ಬಂದಳು. ಆಕೆಯ ಕಣ್ಣು ತುಂಬಿಕೊಂಡಿತ್ತು. ಪ್ರವಾದಿ ತನ್ನ ಕೈ ಮತ್ತು ಮುಖವನ್ನು  ತೊಳೆದುಕೊಂಡರು. ಬಳಿಕ ಹೇಳಿದರು,

“ಮಗಳೇ, ನಿನ್ನ ಅಪ್ಪ ದುರ್ಬಲ, ಅಸಹಾಯಕ ಮತ್ತು ಯಾರ ರಕ್ಷಣೆಯೂ ಇಲ್ಲದವನೆಂದು ಭಾವಿಸ ದಿರು. ಅಲ್ಲಾಹ್ ನಿನ್ನ ತಂದೆಯ ಜೊತೆಗಿದ್ದಾನೆ..” ಆ ಹೆಣ್ಣು ಮಗಳು ಪ್ರವಾದಿಯ ಪುತ್ರಿಯಾಗಿದ್ದರು.  ಹೆಸರು ಝೈನಬ್. ಆ ಇಡೀ ಘಟನೆಯನ್ನು ಮುನೀಬುಲ್ ಅಸ್ದಿ ಎಂಬವರು ಆ ಬಳಿಕ  ಸ್ಮರಿಸಿಕೊಂಡಿದ್ದಾರೆ. ತ್ವಬ್ರಾನಿ ಎಂಬ ವಿದ್ವಾಂಸರು ಬರೆದಿರುವ ಮುಲ್‍ಜಮುಲ್ ಕಬೀರಿ ಎಂಬ  ಗ್ರಂಥದಲ್ಲಿ ಈ ಘಟನೆ ಉಲ್ಲೇಖಗೊಂಡಿದೆ.

ಹೀಗೆ ಮಕ್ಕಾದಲ್ಲಿ ಯಾರ ಆಶ್ರಯವೂ ಇಲ್ಲದೇ ಅತಂತ್ರರಾದ ಪ್ರವಾದಿಯವರು ಮುಂದೇನು ಅನ್ನುವ  ಆತಂಕಕ್ಕೆ ಸಿಲುಕುತ್ತಾರೆ. ಒಂದುಕಡೆ, ತನ್ನೂರೇ ತನ್ನನ್ನು ವೈರಿಯಂತೆ ಪರಿಗಣಿಸಿರುವುದು ಮತ್ತು ಇ ನ್ನೊಂದೆಡೆ ತನ್ನ ವಿಚಾರಧಾರೆಗೆ ಬದ್ಧವಾಗಿ ಬದುಕುವುದು- ಇವೆರಡೂ ಅವರನ್ನು ಪ್ರಶ್ನೆಯ ಮೊ ನೆಯಲ್ಲಿ ನಿಲ್ಲಿಸುತ್ತದೆ. ತನ್ನೂರಿನ ಜನರ ಜೀವನ ಕ್ರಮದಲ್ಲಿರುವ ತಪ್ಪುಗಳನ್ನು ಕಂಡು ಮೌ ನವಾಗಿರುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ. ಪರಂಪರಾಗತ ವೆಂದೋ ಸಂಪ್ರದಾಯವೆಂದೋ  ಹೇಳಿಕೊಂಡು ಮೌಢ್ಯಗಳನ್ನೇ ಜೀವನ ವಿಧಾನವಾಗಿ ಒಪ್ಪಿಕೊಂಡವರ ಜೊತೆ ರಾಜಿ ಮಾಡಿ  ಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೂ ಅವರ ಪಾಲಿಗೆ ಅಸಾಧ್ಯವಾಗಿತ್ತು. ಇನ್ನೊಂದೆಡೆ, ತನ್ನ  ವಿಚಾರಧಾರೆಯನ್ನು ಸಹಿಸುವುದಕ್ಕೆ ತನ್ನೂರು ಸಿದ್ಧವಿರಲಿಲ್ಲ. ಇಂಥ ಸ್ಥಿತಿಯಲ್ಲಿ ಅವರು ತನಗೆ ಆಶ್ರಯ  ನೀಡ ಬಹುದಾದ ಅಥವಾ ಕನಿಷ್ಠ ತನ್ನ ಮಾತುಗಳನ್ನು ಆಲಿಸಬಹುದಾದ ಇನ್ನೊಂದು ಊರನ್ನು  ಬಯಸಿದರು. ಮುಖ್ಯವಾಗಿ ಅವರಿಗೆ ಅಭಯ ನೀಡಬಹುದಾದ ಊರಿನ ಅಗತ್ಯವಿತ್ತು. ಆಗ ಅವರಿಗೆ  ನೆನಪಾದದ್ದೇ  ತಾಯಿಫ್.

ತಾಯಿಫ್ ಎಂಬ ಊರು ಮಕ್ಕಾದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿತ್ತು. ಪ್ರವಾದಿ  ಮುಹಮ್ಮದರು ಆ ಊರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಎರಡು ಕಾರಣಗಳಿದ್ದುವು.

1. ಪ್ರವಾದಿ ಮುಹಮ್ಮದ್‍ರ ತಾಯಿ ಆಮಿನಾರ ಬಂಧುಗಳಿರುವ ಊರು.
2. ಅವರ ಸಾಕುತಾಯಿ ಹಲೀಮಾರ ಕುಟುಂಬದವರು ವಾಸಿಸು ತ್ತಿರುವ ಊರು.

ಮಕ್ಕಾದವರ ಹಿಂಸೆ ಮತ್ತು ಅವಮಾನದಿಂದ ರಕ್ಷಣೆ ಪಡೆಯುವ ಮತ್ತು ತನ್ನ ಬದುಕನ್ನು ಹೊಸ  ಊರಲ್ಲಿ ಪ್ರಾರಂಭಿಸುವ ಉದ್ದೇಶದೊಂದಿಗೆ ಪ್ರವಾದಿ ಮುಹಮ್ಮರು ತನ್ನ ಸಾಕು ಪುತ್ರ ಝೈದ್ ಬಿನ್  ಹಾರಿಸರೊಂದಿಗೆ ತಾಯಿಫ್ ಎಂಬ ಊರಿಗೆ ಕಾಲ್ನಡಿಗೆಯಲ್ಲಿ ಸಾಗಿದರು. ವಿಪರೀತ ಬಿಸಿಲು. ಅಲ್ಲದೇ  ಕಾಲ್ನಡಿಗೆಯಲ್ಲೇ  ಪ್ರಯಾಣ. ಅದೂ 90 ಕಿಲೋಮೀಟರ್‍ನಷ್ಟು ದೀರ್ಘ ಯಾತ್ರೆ. ಪ್ರವಾದಿ ಮತ್ತು  ಝೈದ್ ಬಿನ್ ಹಾರಿಸ- ಇಬ್ಬರೂ ದಣಿದಿದ್ದರು. ಆದರೂ ಅವರಿಬ್ಬರೂ ಹಠ ಬಿಡದೇ ತಾಯಿಫ್‍ಗೆ  ತಲುಪಿದರು. ಬಳಿಕ ಪುರ ಪ್ರಮುಖರಾದ ಅಬ್ದುಲ್ಲಾ ಬಿನ್ ಅಮ್ರ್‍ರನ್ನು ಭೇಟಿಯಾಗಿ ತಾವು ಬಂದಿರುವ  ಉದ್ದೇಶವನ್ನು ವಿವರಿಸಿದರು. ಅಲ್ಲದೇ, ಸಹೋದರರಾದ ಮಸ್‍ಊದ್ ಮತ್ತು ಹಬೀಬ್ ಎಂಬಿಬ್ಬರನ್ನೂ  ಭೇಟಿಯಾದರು. ತನಗೆ ಆಶ್ರಯ ನೀಡಬೇಕೆಂದು ಕೋರಿಕೊಂಡರು. ಆದರೆ ಅವರು ಒಪ್ಪಿಕೊಳ್ಳಲಿಲ್ಲ  ಎಂದು ಮಾತ್ರವಲ್ಲ, ಅಸಭ್ಯ ಭಾಷೆಯಲ್ಲಿ ನಿಂದಿಸಿದರು. ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ಅವರ  ಪ್ರತಿಕ್ರಿಯೆಯನ್ನು ಆಲಿಸಿದ ಬಳಿಕ ಪ್ರವಾದಿ ಹೇಳಿದರು,

‘ನೀವು ಆಶ್ರಯ ಕೊಡದಿದ್ದರೂ ಚಿಂತಿಲ್ಲ, ಆದರೆ ಆಶ್ರಯ ಕೊಡದೇ ಇರುವ ಸಂಗತಿಯನ್ನು ಮಕ್ಕಾದ  ಮಂದಿಗೆ ಮಾತ್ರ ತಿಳಿಸಬೇಡಿ. ಈ ಮಾತುಕತೆಯನ್ನು ಇಲ್ಲಿಗೇ ಬಿಟ್ಟು ಬಿಡಿ.’

ಪ್ರವಾದಿ ಮರಳಿ ಮಕ್ಕಾಕ್ಕೆ ಹೊರಟು ನಿಂತರು. ತನ್ನ ತಾಯಿ ಮತ್ತು ಸಾಕು ತಾಯಿಯ ಊರ ಜನರು  ತನಗೆ ಆಶ್ರಯ ನೀಡಲಿಲ್ಲವಲ್ಲ ಅನ್ನುವ ನೋವೊಂದು ಅವರಲ್ಲಿರುವ ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲ. ಮಕ್ಕಾದಿಂದ ಹೊರಡುವಾಗ ಅವರಲ್ಲೊಂದು ನಿರೀಕ್ಷೆ ಇತ್ತು. ತನ್ನ ತಾಯಿಯ  ತವರೂರು ತನ್ನನ್ನು ಸ್ವೀಕರಿಸಬಹುದು ಅನ್ನುವ ಆಶಾವಾದವಿತ್ತು. ತನ್ನೂರಿನ ಜನರು ತನ್ನನ್ನು  ತಿರಸ್ಕರಿಸಿದರೇನು, ತಾಯಿಯ ತವರೂರಲ್ಲಿ ತಾನು ಹೊಸ ಬದುಕನ್ನು ಕಂಡುಕೊಳ್ಳುವೆ ಅನ್ನುವ  ವಿಶ್ವಾಸವಿತ್ತು. ಆದರೆ, ಆ ನಿರೀಕ್ಷೆ ಈಗ ಹುಸಿಯಾಗಿದೆ. ಅವರು ಝೈದ್ ಬಿನ್ ಹಾರಿಸರೊಂದಿಗೆ  ಮರಳಿ ಕಾಲ್ನಡಿಗೆಯಲ್ಲಿ ಹೊರಟು ನಿಂತಾಗ ಅವರ ಸುತ್ತ ಗುಂಪು ಸೇರಿತು. ಹಲ್ಲೆ ನಡೆಸಿತು.  ಕಲ್ಲೆಸೆಯಿತು. ಎಲ್ಲಿಯ ವರೆಗೆಂದರೆ, ಜೊತೆಗಿದ್ದ ಝೈದ್ ಬಿನ್ ಹಾರಿಸರ ತಲೆಗೆ ಬಿದ್ದ ಕಲ್ಲಿನೇಟಿನಿಂದಾಗಿ  ರಕ್ತ ಹರಿದು ಮುಖವಿಡೀ ಕೆಂಪು ಕೆಂಪಾಯಿತು. ಪ್ರವಾದಿ ಮುಹಮ್ಮದ್‍ರ ಕಾಲಿನ ಹಿಂಭಾಗ ಕಲ್ಲಿನೇಟಿಗೆ  ಒಡೆದು ರಕ್ತ ಸುರಿಯತೊಡಗಿತು. ಗುಂಪು ಅವರನ್ನು ತಮ್ಮ ಗಡಿಯವರೆಗೆ ಹಿಂಬಾಲಿಸಿ ಹಿಂಸೆ ಕೊಟ್ಟು  ಮರಳಿತು. ಪ್ರವಾದಿ ನಡೆಯುತ್ತಾ ಒಂದು ತೋಟಕ್ಕೆ ಹೋದರು. ಅಲ್ಲೇ  ಒರಗಿ ಕುಳಿತರು. ಆ ತೋಟದ  ಕಾರ್ಮಿಕ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ. ನೀರು ಕೊಟ್ಟ.
ಪ್ರವಾದಿ ಮುಹಮ್ಮದರ ಮುಂದೆ ಈಗ ಇನ್ನೊಂದು ಸವಾಲು ಎದುರಾಯಿತು.

ಅವರೀಗ ಮಕ್ಕಾದ ಹೊರಗಿನ ತಾಯಿಫ್‍ಗೆ ಬಂದಿರುವುದು, ಅಲ್ಲಿ ಅಭಯ ಕೇಳಿರುವುದು ಮತ್ತು  ತಾಯಿಫ್‍ನ ಪುರ ಪ್ರಮುಖರು ಅದನ್ನು ತಿರಸ್ಕರಿಸಿರುವುದು ಎಲ್ಲವೂ ಮಕ್ಕಾದ ತನ್ನ ವಿರೋಧಿಗಳಿಗೆ  ತಿಳಿದಿರುವ ಸಾಧ್ಯತೆಯಂತೂ ಇದ್ದೇ  ಇದೆ. ತನ್ನ ಮೇಲೆ ಜನರ ಗುಂಪು ಮುಗಿಬಿದ್ದಿರುವುದರಲ್ಲೇ  ಈ  ಸೂಚನೆ ಇದೆ. ಆಶ್ರಯ ಕೇಳಿರುವ ವಿಷಯವನ್ನು ಪುರಪ್ರಮುಖರು ಬಹಿರಂಗಪಡಿಸಿದ್ದಾರೆ. ಅದರ  ಭಾಗವಾಗಿಯೇ ಜನರು ಒಟ್ಟು ಗೂಡಿದ್ದಾರೆ. ಆದ್ದರಿಂದ ಈ ಸುದ್ದಿ ಮಕ್ಕಾಕ್ಕೂ ತಲುಪಿರುವ ಸಾಧ್ಯತೆ  ಇದೆ. ಇನ್ನು ನೇರವಾಗಿ ಮಕ್ಕಾಕ್ಕೆ ಹೋಗುವುದರಲ್ಲೂ ಸುಖ ಇಲ್ಲ. ಅಲ್ಲಿ ಯಾರಾದರೂ ಆಶ್ರಯವನ್ನು  ಕೊಡಲು ಮುಂದೆ ಬಂದರೆ, ಪ್ರಯಾಣ ಸುಲಭ. ಈ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದರು ಮಕ್ಕಾದ  ಮಂದಿಯಲ್ಲಿ ಅಭಯವನ್ನು ಕೋರಿ ಬಳಿಕ ಪಯಣ ಮುಂದುವರಿಸುವುದು ಉತ್ತಮವೆಂದು ಬಗೆದರು.  ಹೀಗೆ ಅಖ್‍ನಸ್ ಬಿನ್ ಶರೀಖ್ ಎಂಬ ಪ್ರಮುಖ ವ್ಯಕ್ತಿಗೆ ಕೋರಿಕೆ ಸಲ್ಲಿಸಿದರು. ಆದರೆ ಆ ವ್ಯಕ್ತಿ  ಒಪ್ಪಿಕೊಳ್ಳಲಿಲ್ಲ. ಬಳಿಕ ಸುಹೈಲ್ ಬಿನ್ ಅಮ್ರ್ ಎಂಬ ಮತ್ತೋರ್ವ ಪ್ರಮುಖ ವ್ಯಕ್ತಿಗೆ ಕೋರಿಕೆ  ಕಳುಹಿಸಿದರು. ಆತನೂ ನಿರಾಕರಿಸಿದ. ಕೊನೆಗೆ, ಮುತ್‍ಇಮ್ ಬಿನ್ ಅದಿಯ್ಯ್ ಎಂಬ ವ್ಯಕ್ತಿಗೆ ಪ್ರವಾ ದಿಯವರು ಆಶ್ರಯ ಕೋರಿಕೆಯನ್ನು ಸಲ್ಲಿಸಿದರು. ಆತ ಒಪ್ಪಿಕೊಂಡ. ಮಾತ್ರವಲ್ಲ, ತನ್ನ ಆರು ಮಂದಿ  ಪುತ್ರರನ್ನು ಸೇರಿಸಿಕೊಂಡು ಆಗಮಿಸಿದ. ಎಲ್ಲರೂ ಶಸ್ತ್ರಸಜ್ಜಿತರು. ಪ್ರವಾದಿಯನ್ನು ಕಾಬಾದ ಬಳಿ ನಿಲ್ಲಿಸಿದ  ಮತ್ತು ಘೋಷಿಸಿದ-

‘ನಾನು ಮುಹಮ್ಮದರಿಗೆ ಅಭಯ ನೀಡಿದ್ದೇನೆ.’

ಹಾಗಂತ, ಆತ ಪ್ರವಾದಿ ಮುಹಮ್ಮದರ ವಿಚಾರಧಾರೆಯನ್ನು ಒಪ್ಪಿಕೊಂಡಿರಲಿಲ್ಲ. ದೊಡ್ಡಪ್ಪ ಅಬೂತಾ ಲಿಬ್‍ರ ನಿಧನದ ಬಳಿಕ ಅತಂತ್ರರಂತಾಗಿದ್ದ ಪ್ರವಾದಿ ಮುಹಮ್ಮದರು ಹೀಗೆ ಮತ್ತೆ ಅಭಯದಾತರನ್ನು  ಪಡೆದುಕೊಂಡರು. ಮಕ್ಕಾದಲ್ಲಿ ತನ್ನ ವಿಚಾರ ಧಾರೆಯನ್ನು ಹರಡತೊಡಗಿದರು. ವಿರೋಧಿಗಳ ಕುಹಕ,  ಹಿಂಸೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಅವರನ್ನು ತಾಯ್ನಾಡಿನಿಂದ ಬಲ ವಂತವಾಗಿ ಹೊರಹಾಕುವುದಕ್ಕೆ  ಅವಕಾಶ ಇರಲಿಲ್ಲ. ಹಾಗಂತ, ಹಿಂಸೆಯೂ ನಿಲ್ಲಲಿಲ್ಲ. ಕೊನೆಗೆ ಅವರು ಮಕ್ಕಾವನ್ನು ಬಿಟ್ಟು ಸುಮಾರು  150 ಕಿಲೋಮೀಟರ್ ದೂರದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸಿದರು. ಅಲ್ಲಿ ಹೋಗಿ  ನೆಲೆಸಿದರು. ಆದರೆ,

ಮಕ್ಕಾದ ಅವರ ವಿರೋಧಿಗಳು ಅವರನ್ನು ಅಲ್ಲೂ ಸಮಾ ಧಾನದಿಂದ ಬದುಕಲು ಬಿಡಲಿಲ್ಲ. ತಂತ್ರ  ಹೆಣೆದರು. ಅವರ ವಿರುದ್ಧ ಯುದ್ಧ ಘೋಷಿಸಿದರು. ಮದೀನಾದಲ್ಲಿದ್ದ ಯಹೂದಿ ಗಳೊಂದಿಗೆ ಅತ್ಯಂತ  ಜನಪರವಾದ ಮತ್ತು ಪೌರತ್ವ ಕೇಂದ್ರಿತವಾದ ಕರಾರೊಂದನ್ನು ಮಾಡಿಕೊಂಡು ನೆಲೆ ಕಂಡುಕೊಂಡಿದ್ದ  ಪ್ರವಾದಿಯವರು ಈ ಯುದ್ಧವನ್ನು ಎದುರಿಸಬೇಕಾಗಿತ್ತು. ಹಾಗೆ, ಮದೀನಾದ ಹೊರಗಡೆಯಿರುವ ಬದ್ರ್  ಎಂಬ ಸ್ಥಳದಲ್ಲಿ ಕಾಳಗ ನಡೆಯಿತು. ಮಕ್ಕಾದ ಯುದ್ಧ ತಂಡದಲ್ಲಿ ಪ್ರವಾದಿಗೆ ಅಭಯ ನೀಡಿದ್ದ  ಮುತ್‍ಇಮ್ ಬಿನ್ ಅದಿಯ್ಯ್ ಕೂಡ ಇದ್ದರು. ಪ್ರವಾದಿಗೆ ಇದು ಗೊತ್ತಾಯಿತು. ‘ಮುತ್‍ಇಮ್ ಬಿನ್  ಅದಿಯ್ಯ್‍ರನ್ನು ರಣಾಂಗಣದಲ್ಲಿ ಗುರಿ ಮಾಡಬೇಡಿ’ ಎಂದು ಪ್ರವಾದಿ ತನ್ನ ಯೋಧರಿಗೆ ಸೂಚಿಸಿದರು.  ಅಲ್ಲದೇ ಯುದ್ಧದಿಂದ ದೂರ ನಿಲ್ಲುವಂತೆ ಮುತ್‍ಇಮ್‍ರಿಗೆ ಮನವಿಯನ್ನೂ ಮಾಡಿಕೊಂಡರು. ಆದರೆ  ಅವರು ನಿರಾಕರಿಸಿದರು. ಕೊನೆಗೆ ಮುತ್‍ಇಮ್ ಕಾಳಗದಲ್ಲಿ ಸಾವನ್ನಪ್ಪಿದರು.
ಅಂದಿನ ಕಾಲದಲ್ಲಿ ಯುದ್ಧವೆನ್ನುವುದು ಅರಬಿಗಳ ಸಂಸ್ಕøತಿ ಯಾಗಿತ್ತು. ಸಣ್ಣ-ಪುಟ್ಟ ವಿವಾದವೂ  ಯುದ್ಧದಲ್ಲೇ  ಕೊನೆಗೊಳ್ಳುತ್ತಿತ್ತು. ಜನರೆಲ್ಲ ಯಾವುದಾದರೊಂದು ಗೋತ್ರದಲ್ಲಿ ಗುರುತಿಸಿಕೊಂಡಿದ್ದರು.  ಯಾವುದೇ ವ್ಯಕ್ತಿಗಾಗುವ ಅನ್ಯಾಯ, ಅವಮಾನವು ಆ ವ್ಯಕ್ತಿಗೆ ಮಾತ್ರವಲ್ಲದೇ, ಆ ವ್ಯಕ್ತಿ ಪ್ರತಿನಿಧಿಸುವ  ಗೋತ್ರಕ್ಕಾಗುವ ಅನ್ಯಾಯ, ಅವಮಾನವಾಗಿ ಗುರುತಿಗೀಡಾಗುತ್ತಿತ್ತು. ಬಳಿಕ ಅದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿತ್ತು. ಅದಕ್ಕಾಗಿಯೇ ಆಯಾ ಗೋತ್ರಗಳು ತಿಂಗಳುಗಟ್ಟಲೆ ಘರ್ಷಣೆಯಲ್ಲೂ ತೊಡಗುತ್ತಿತ್ತು.

ಬದ್ರ್‍ನಲ್ಲಿ ನಡೆದ ಕಾಳಗದಲ್ಲಿ ಪ್ರವಾದಿಯವರ ವಿರೋಧಿಗಳಿಗೆ ಸೋಲು ಉಂಟಾಯಿತು. ಅವರ  150ರಷ್ಟು ಮಂದಿಯನ್ನು ಪ್ರವಾದಿಯವರ ಸೇನೆ ಬಂಧಿಸಿ ಮದೀನಾಕ್ಕೆ ಕೊಂಡೊಯ್ಯಿತು. ಬಂಧಿಗಳ  ಕುಟುಂಬಸ್ಥರು ದಂಡವನ್ನು ಪಾವತಿಸಿ ತಮ್ಮವರನ್ನು ಬಿಡಿಸಿಕೊಂಡು ಹೋಗತೊಡಗಿದರು. ಆಗ ಪ್ರವಾದಿ  ತನ್ನ ಅನುಯಾಯಿಗಳೊಂದಿಗೆ ಹೇಳಿದ್ದು ಹೀಗೆ:

‘ಒಂದುವೇಳೆ, ಮುತ್‍ಇಮ್ ಬಿನ್ ಅದಿಯ್ಯ್ ಯುದ್ಧದಲ್ಲಿ ಸಾವಿಗೀಡಾಗದೆ ಬದುಕಿರುತ್ತಿದ್ದರೆ ಮತ್ತು ಈ  ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದರೆ ಯಾವ ದಂಡವನ್ನೂ ಪಡೆದುಕೊಳ್ಳದೇ  ಎಲ್ಲರನ್ನೂ ಬಿಡುಗಡೆಗೊಳಿಸುತ್ತಿದ್ದೆ.’
ಇದರ ನಂತರ, ಇನ್ನೊಂದು ಕಾಳಗವೂ ನಡೆಯಿತು.

ಅದು ಉಹುದ್ ಎಂಬ ಬೆಟ್ಟದ ಕೆಳಗಡೆ. ಅದರಲ್ಲಿ ಪ್ರವಾದಿ ಮುಹಮ್ಮದ್‍ರ ಸೇನೆ ತೀವ್ರ ಹೊಡೆತವನ್ನು  ತಿನ್ನುತ್ತದೆ. ಪ್ರವಾದಿಯವರ ಅತ್ಯಂತ ಆಪ್ತರೂ ಸೇರಿದಂತೆ 70 ಮಂದಿ ಸಾವಿಗೀಡಾಗುತ್ತಾರೆ. ಸ್ವತಃ  ಪ್ರವಾದಿಯ ಹಲ್ಲುಗಳೂ ಉದುರುತ್ತವೆ. ಒಂದು ರೀತಿಯಲ್ಲಿ, ಪ್ರವಾದಿಯವರು ಬಲವಾದ ಎದಿರೇಟನ್ನು  ಪಡೆದ ಕಾಳಗ. ಒಂದು ದಿನ ಅವರ ಪತ್ನಿ ಆಯಿಶಾ(ರ) ಪ್ರಶ್ನಿಸುತ್ತಾರೆ,

‘ಉಹುದ್ ಕಾಳಗದ ದಿನಗಳಿಗಿಂತ ಕಠಿಣ ಮತ್ತು ನೋವಿನ ದಿನಗಳು ನಿಮ್ಮ ಬದುಕಿನಲ್ಲಿ  ಎದುರಾಗಿವೆಯೇ?’ ಪ್ರವಾದಿಯ ಉತ್ತರ ಹೀಗಿತ್ತು:
‘ನಾನು ಅಭಯವನ್ನು ಕೋರಿ ತಾಯಿಫ್‍ಗೆ ಹೋದ ದಿನವೇ ನನ್ನ ಪಾಲಿನ ಅತ್ಯಂತ ಕಷ್ಟಕರವಾದ  ಮತ್ತು
ನೋವು ನೀಡಿದ ದಿನ.’

ನಿಜವಾಗಿ, ಇವು ಒಂದು ಘಟನೆಯಾಗಿಯಷ್ಟೇ ನಮ್ಮ ಎದುರು ನಿಲ್ಲಬೇಕಾದುದಲ್ಲ. ಅಥವಾ  ಭಾವುಕತೆಯಿಂದ ಓದಿ ಮುಗಿಸಬೇಕಾದುದೂ ಅಲ್ಲ. ತನಗೆ ಮದೀನಾದಲ್ಲೂ ನೆಲೆ ಇಲ್ಲದಂತೆ  ಮಾಡಬೇಕೆಂದು ಹೊರಟು ಬಂದ ಸೇನೆಯ ಭಾಗವಾಗಿದ್ದ ಮುತ್‍ಇಮ್ ಬಿನ್ ಅದಿಯ್ಯ್‍ನ ಬಗ್ಗೆ  ಪ್ರವಾದಿಯ ಧೋರಣೆ ಮತ್ತು ತಾಯಿಫ್‍ಗಿಂತ ಅನೇಕಾರು ಪಟ್ಟು ಅಧಿಕ ನೋವನ್ನು ಮತ್ತು ಸಾವನ್ನು  ನೀಡಿರುವ ಬೇರೆ ಸಂದರ್ಭಗಳಿದ್ದಾಗ್ಯೂ ಪ್ರವಾದಿ ತಾಯಿಫನ್ನೇ ಅತೀ ಪ್ರಮುಖ ನೋವಿನ ಘಟ ನೆಯಾಗಿ ಎತ್ತಿ ಹೇಳಿರುವುದೇಕೆಂಬ ಬಗ್ಗೆ ಆಳ ಚಿಂತನೆ ನಡೆಸಬೇಕಾಗಿದೆ.

ಮುತ್‍ಇಮ್ ಮತ್ತು ತಾಯಿಫ್- ಈ ಎರಡರಲ್ಲೂ ಅನೇಕ ಪಾಠಗಳಿವೆ.