Monday, March 26, 2012

ದೂರದರ್ಶನದ ನಿರೂಪಕನೇ ಭಯೋತ್ಪಾದಕನಾಗುವಾಗ, ಇನ್ನು ಜನಸಾಮಾನ್ಯ ಉಳಿಯುತ್ತಾನಾ?


ಫೆ. 15, 2012
‘ಇರಾನಿನ ಅಣು ಸಾಮರ್ಥ್ಯ ಮತ್ತು ಅದರ ಪ್ರತಿಕ್ರಿಯೆಗಳು..’ ಅನ್ನುವ ವಿಷಯದಲ್ಲಿ ಫೆ. 15ರಂದು ಎನ್.ಡಿ.ಟಿ.ವಿ.ಯಲ್ಲಿ ಚರ್ಚೆಯೊಂದು ನಡೆಯುತ್ತಿತ್ತು. ದೂರದರ್ಶನದಲ್ಲಿ (ಡಿ.ಡಿ. ) ಉರ್ದು ಕಾರ್ಯಕ್ರಮದ ನಿರೂಪಕರಾಗಿ (ಯಾಂಕರ್ ಆಗಿ) ಚಿರಪರಿಚಿತರಾಗಿರುವ ಹಿರಿಯ ಪತ್ರಕತ್ರ ಮುಹಮ್ಮದ್ ಅಹ್ಮದ್ ಕಾಸ್ಮಿಯವರು ಚರ್ಚೆಯಲ್ಲಿ ಪಾಲ್ಗೊಂಡು ಇರಾನನ್ನು ಬೆಂಬಲಿಸಿ ಬಲವಾಗಿ ವಾದಿಸಿದರು. ಇರಾನಿನಲ್ಲಿ ಶಿಯಾ-ಸುನ್ನಿ ಜಗಳ ಇದೆ, ಅವರು ಪರಸ್ಪರ ಬೇರ್ಪಟ್ಟು (divide) ಹೋಗಿದ್ದಾರೆ ಅನ್ನುವ ಮಾತುಗಳನ್ನೆಲ್ಲಾ ಕಾಸ್ಮಿ ಪುರಾವೆ ಸಮೇತ ತಳ್ಳಿ ಹಾಕಿದರು. ಅದು ಅಮೇರಿಕದ ಅಪಪ್ರಚಾರ ಅಂದರು. ಇರಾಕಿನಲ್ಲಿ 40% ಮದುವೆಗಳು ನಡೆಯುತ್ತಿರುವುದೇ ಶಿಯಾ-ಸುನ್ನಿಗಳ ಮಧ್ಯೆ ಅಂದರು. ಇರಾನ್ ಈ ವರೆಗೆ ತಾನೇ ಮೊದಲಾಗಿ ಯಾರ ವಿರುದ್ಧವೂ ದಾಳಿಯನ್ನೇ ಮಾಡಿಲ್ಲ, ಯುದ್ಧದ ವಿರುದ್ಧ ಅಹ್ಮದಿ ನೆಜಾದ್ ಹೊರಡಿಸಿರುವ ಫತ್ವವನ್ನು ಅಡಗಿಸಿಟ್ಟಿರುವ ಪಶ್ಚಿಮವು, ಇರಾನನ್ನು ಅಪಾಯಕಾರಿಯೆಂದು ಸುಳ್ಳು ಸುಳ್ಳೇ ಬಿಂಬಿಸುತ್ತಿದೆ ಅಂತ ಟೀಕಿಸಿದರು..
ಚರ್ಚೆಯ 21 ದಿನಗಳ ಬಳಿಕ ಮಾರ್ಚ್ 7ರ0ದು, ದೂರದರ್ಶನ ಹೊಸ ಬುಲೆಟಿನ್ ಗೆ ಯಾಂಕರ್ ಆಗಿ ಕೆಲಸ ನಿಭಾಯಿಸಿ ಬೆಳಿಗ್ಗೆ ಹೊರಬಂದ ಕಾಸ್ಮಿಯನ್ನು ದೆಹಲಿ ಪೊಲೀಸರು ಬಂಧಿಸಿದರು. ಫೆ. 13ರಂದು ಇಸ್ರೇಲಿ ರಾಯಭಾರಿಯ ಕಾರನ್ನು ಸ್ಫೋಟಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು .
ಮಾರ್ಚ್ 11. 2012
1. ಸಈದ್ ನಖ್ವಿ
2. ಎಸ್.ಕೆ. ಪಾಂಡೆ
3. ಮನೀಶ್ ಸೇಥಿ
4. ಶಬ್ನಮ್ ಹಾಶ್ಮಿ
5. ಸೀಮಾ ಮುಸ್ತಫಾ
6. ಪಾಂಚೋಲಿ
7. ಸುಕುಮಾರ್ ಮುರಳೀಧರನ್..
ಸಹಿತ ಖ್ಯಾತ ಪತ್ರಕರ್ತರು ಮತ್ತು ಚಿಂತಕರು ಮಾರ್ಚ್ 11ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಕಾಸ್ಮಿಯ ಬಂಧನವನ್ನು ಖಂಡಿಸಿದರು. ಇರಾನ್ ಗೆ ಭೇಟಿ ಕೊಡುವುದು, ಪರ್ಷಿಯನ್ ಭಾಷೆ ತಿಳಿದಿರುವುದು ಇಲ್ಲವೇ ಇರಾನ್ ಪರ ನಿಲುವನ್ನು ಹೊಂದುವುದೆಲ್ಲ ಓರ್ವ ವ್ಯಕ್ತಿ ಭಯೋತ್ಪಾದಕ ಅನ್ನುವುದಕ್ಕೆ ಪುರಾವೆಯಾಗುತ್ತದೆಯೇ ಎಂದು ಅವರೆಲ್ಲ ಪ್ರಶ್ನಿಸಿದರು. ಕಾಸ್ಮಿ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಈ ವರೆಗೆ ಒಂದೇ ಒಂದು ಆರೋಪವೂ ಅವರ ಮೇಲಿಲ್ಲ. ಹೀಗಿರುವಾಗ ಕಾಸ್ಮಿಯನ್ನು ಏಕಾಏಕಿ ಬಂಧಿಸಿ ಇಸ್ರೇಲ್ ವಿರುದ್ಧದ ಸಂಚಿನಲ್ಲಿ ಭಾಗಿ ಎಂಬ ಹಣೆಪಟ್ಟಿ ಹಚ್ಚುವುದನ್ನು ಹೇಗೆ ನಂಬುವುದು, ತನ್ನ ವಿರೋಧಿಯ ವಿರುದ್ಧ ಮೊಸಾದ್ ಹೆಣೆದಿರುವ ಸಂಚು ಇದು ಯಾಕೆ ಆಗಿರಬಾರದು ಎಂದೆಲ್ಲಾ ಅವರು ಅನುಮಾನಗಳನ್ನು ವ್ಯಕ್ತಪಡಿಸಿದರು.

ಒಂದು ರೀತಿಯಲ್ಲಿ ಆ ಅನುಮಾನಗಳಿಗೆ ಬಲವಾದ ಕಾರಣವೂ ಇತ್ತು.

1983ರಲ್ಲಿ ಕಾಸ್ಮಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ್ದೇ ದೆಹಲಿಯಲ್ಲಿರುವ ಇರಾನ್ ಪಬ್ಲಿಕ್ ನ್ಯೂಸ್ ಏಜೆನ್ಸಿಯಲ್ಲಿ (ಇರ್ನಾ ) ನ್ಯೂಸ್ ಆಪರೇಟರ್ ಆಗಿ ಸೇರಿಕೊಳ್ಳುವ ಮೂಲಕ. ಪಶ್ಚಿಮೇಶ್ಯದ ಕುರಿತಂತೆ ಅವತ್ತೇ ಕಾಸ್ಮಿಗೆ ಒಂದು ಬಗೆಯ ವಿಶೇಷ ಕುತೂಹಲವಿತ್ತು. ಇರಾನ್, ಇರಾಕ್, ಇಸ್ರೇಲ್ ಗಳು ಅವರ ಆಸಕ್ತಿಯ ವಿಷಯವಾಗಿತ್ತು. ಅರೆಬಿಕ್, ಪರ್ಷಿಯನ್, ಉರ್ದು ಭಾಷೆಯನ್ನು ಚೆನ್ನಾಗಿ ತಿಳಿದಿದ್ದ ಅವರು, 7 ವರ್ಷಗಳ ಬಳಿಕ ಪಶ್ಚಿಮೇಶ್ಯದ ಸುದ್ದಿಗಳನ್ನು ಪ್ರಕಟಿಸುವ ಮೀಡಿಯಾ ಸ್ಟಾರನ್ನು ಪ್ರಾರಂಭಿಸಿದರು. 1993ರಲ್ಲಿ ದೂರದರ್ಶನದಲ್ಲಿ ಯಾಂಕರ್ ಆಗಿ ಸೇರಿಕೊಂಡರು. ಡಿಡಿಯಲ್ಲಿ ಉರ್ದು ನ್ಯೂಸ್ ಬುಲೆಟಿನ್ ವೀಕ್ಷಿಸುವವರಿಗೆ ಕಾಸ್ಮಿ ಅತ್ಯಂತ ಚಿರಪರಿಚಿತ. 2003ರಲ್ಲಿ ಇರಾಕ್ ನ ಮೇಲೆ ಅಮೇರಿಕ ಅತಿಕ್ರಮಣ ನಡೆಸಿದಾಗ ಇರಾಕ್ ಗೆ ತೆರಳಿ ದೂರದರ್ಶನಕ್ಕಾಗಿ ಪ್ರತ್ಯಕ್ಷ ವರದಿಯನ್ನು ಮಾಡಿದ್ದು ಕಾಸ್ಮಿಯೇ. ಅಮೇರಿಕದ ದುರಾಸೆಯನ್ನು, ದೌಜ್ರನ್ಯವನ್ನು, ಇಸ್ರೇಲ್ ನ ಸಂಚನ್ನು ಅತ್ಯಂತ ಪರಿಣಾಮಕಾರಿಯಾಗಿ, ಒಂದಷ್ಟು ಸಿಟ್ಟಿನಿಂದಲೇ ಕಾಸ್ಮಿ ವರದಿ ಮಾಡಿದ್ದರು. ಮನುಷ್ಯರನ್ನು ಇರಾಕ್, ಅಮೇರಿಕ, ಇಸ್ರೇಲ್, ಭಾರತ ಎಂದು ವಿಭಜಿಸದೆ ಅಪ್ಪಟ ಮನುಷ್ಯರಾಗಿ ಕಂಡು, ಅವರಲ್ಲಿ ಯಾರ ಸಾವನ್ನೂ ಮನುಷ್ಯರ ಸಾವು ಎಂದೇ ವಿವರಿಸುತ್ತಿದ್ದ, ಆ ಸಾವಿಗೆ ಕಾರಣರಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾಸ್ಮಿಯನ್ನು ಇಸ್ರೇಲ್ ದ್ವೇಷಿಸುವುದಕ್ಕೆ ಹತ್ತಾರು ಕಾರಣಗಳಿವೆ. ಅಮೇರಿಕಕ್ಕೂ ಕಾಸ್ಮಿ ಇಷ್ಟವಾಗುವುದಕ್ಕೆ ಅವಕಾಶವೇ ಇಲ್ಲ. ಭಾರತದ ಪರಮಾಪ್ತ ರಾಷ್ಟ್ರಗಳಾಗಿರುವ ಅಮೇರಿಕ ಮತ್ತು ಇಸ್ರೇಲ್ ನ ವಿರುದ್ಧ ದೂರದರ್ಶನದಲ್ಲಿ ನಿಂತು ಕಾಸ್ಮಿ ಮಾತಾಡುವುದನ್ನು, ಇರಾನ್ ಪರ ಪುರಾವೆಗಳನ್ನು ಮುಂದಿಟ್ಟು ವಾದಿಸುವುದನ್ನು ಅವು ಸಹಿಸುವುದಾದರೂ ಹೇಗೆ? 2005ರಿಂದ ದೂರದರ್ಶನದಲ್ಲಿ ಪ್ರಸಾರವಾಗಲು ಪ್ರಾರಂಭವಾದ world views india ತಂಡದಲ್ಲೂ ಕಾಸ್ಮಿ ಇದ್ದರು. ಇರಾನ್ನೊಂದಿಗೆ 2 ದಶಕಗಳಿಂದ ಸಂಬಂಧ ಇಟ್ಟುಕೊಂಡ ವ್ಯಕ್ತಿಯೊಬ್ಬ ಇಸ್ರೇಲ್ ಮತ್ತು ಅಮೇರಿಕದ ಸುಳ್ಳುಗಳನ್ನು ದೂರದರ್ಶನದಲ್ಲಿ ಬಹಿರ0ಗಪಡಿಸುವುದನ್ನು ಅವು ಇಷ್ಟಪಡಲು ಸಾಧ್ಯವಾ? ಭಾರತದಲ್ಲಿ ಉರ್ದು ಭಾಷಿಗರ ದೊಡ್ಡದೊಂದು ವಲಯವಿದೆ. ಅವರೆಲ್ಲರ ಮೇಲೆ ಕಾಸ್ಮಿಯ ವಿಚಾರಗಳಿಗೆ ಬಲವಾದ ಹಿಡಿತವಿದೆ. ಹೀಗಿರುವಾಗ ಕಾಸ್ಮಿಯನ್ನು ಬಾಂಬ್ ಸ್ಫೋಟದಲ್ಲಿ ಸಿಲುಕಿಸಿ, ಅವರ ಇಮೇಜನ್ನು ಹಾಳು ಮಾಡುವ ಸಂಚಿಗೆ ಇಸ್ರೇಲ್ ಯತ್ನಿಸಿರಲಿಕ್ಕಿಲ್ಲ ಎಂದು ಹೇಗೆ ಹೇಳುವುದು?

ಫೆ. 13ರ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಯಾರನ್ನೇ ಆಗಲಿ, ಕೆಲವೊಂದು ಅನುಮಾನುಗಳು ಕಾಡಿಯೇ ಕಾಡುತ್ತವೆ.

‘ಇಸ್ರೇಲ್ ರಾಯಭಾರಿಯ ಪತ್ನಿ ತಾಲಿ ಯಹೋಶ್ವಾ ಕೋರೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಔರಂಗಝೇಬ್ ರಸ್ತೆ ಕ್ರಾಸಿಂಗ್ ನಲ್ಲಿ 30-40 ಸೆಕೆಂಡ್ ನಿಂತಿತ್ತು. ಆಗ ಅಲ್ಲಿಗೆ ಬೈಕಲ್ಲಿ ಬಂದ ಇಬ್ಬರು ಕಾರಿನ ಡೀಸೆಲ್ ಟಾಂಕಿಯ ವಿರುದ್ಧ ಭಾಗದಲ್ಲಿ ಸ್ಟಿಕ್ಕರ್ ಬಾಂಬನ್ನು ಅಳವಡಿಸಿದರು. ಬಾಂಬ್ ಸ್ಫೋಟಗೊಂಡು ಕಾರು ಛಿದ್ರವಾಯಿತು..’ ಹಾಗಂತ ಮಾಧ್ಯಮಗಳು ಸುದ್ದಿ ಪ್ರಕಟಿಸಿದುವು. ನಿಜವಾಗಿ, ಕಾರು ಛಿದ್ರವಾಗಿಯೇ ಇಲ್ಲ. ಉರಿಯುತ್ತಿರುವ ಮತ್ತು ಢಿಕ್ಕಿ ತೆರೆದುಕೊಂಡ ಸ್ಥಿತಿಯಲ್ಲಿರುವ ಕಾರನ್ನೇ ಟಿ.ವಿ. ಮತ್ತು ಪತ್ರಿಕೆಗಳು ತೋರಿಸಿರುವುದು. ಇನ್ನು, ಸುರಕ್ಷತೆಗೆ ಅತ್ಯಂತ ಹೆಚ್ಚು ಒತ್ತು ಕೊಡುವ ರಾಷ್ಟ್ರ ಇಸ್ರೇಲ್. ಯಾವುದೇ ದೇಶದಲ್ಲಿರುವ ಅದರ ರಾಯಭಾರಿ, ಬುಲೆಟ್ ಪ್ರೂಫ್ ಇಲ್ಲದ ಕಾರಿನಲ್ಲಿ ರಸ್ತೆಗೆ ಇಳಿಯುವುದೇ ಇಲ್ಲ. ಹೀಗಿರುವಾಗ ಮಧ್ಯಮ ವರ್ಗ ಉಪಯೋಗಿಸುವ ಸಾಮಾನ್ಯ ಇನ್ನೋವಾ ಕಾರನ್ನು ತಾಲಿ ಯಹೋಶ್ವಾ ಉಪಯೋಗಿಸಿದ್ದಾದರೂ ಯಾಕೆ? ಭಯೋತ್ಪಾದಕರು ಕಪ್ಪು ಬೈಕಿನಲ್ಲಿ ಬಂದಿರುವರೆಂದು ಯಹೋಶ್ವಾ ಹೇಳಿದರೆ ಕೆಂಪು ಬೈಕಿನಲ್ಲೆಂದು ದೆಹಲಿ ಪೋಲೀಸರ ಪ್ರತ್ಯಕ್ಷ ದರ್ಶಿ ಸಾಕ್ಷಿ ಗೋಪಾಲ್ ಹೇಳುತ್ತಾರೆ. ಘಟನೆಯ ದೃಶ್ಯಗಳು CCTVಯಲ್ಲಿ ದಾಖಲಾಗಿಲ್ಲ. ಎಲ್ಲ ವಿವರಗಳೂ ಪ್ರತ್ಯಕ್ಷ ದರ್ಶಿಗಳನ್ನು ಅವಲಂಬಿಸಿಕೊಂಡಿವೆ ( we dont have CCTV footage of the incident. all the ದೆತೈಲ್ಸ್ are based oneye witness accounts) ಅಂತ ದೆಹಲಿ ಪೋಲೀಸರ ವಕ್ತಾರ ರಾಜೇಶ್ ಭಗತ್ ಹೇಳಿರುವುದಾಗಿ ಫೆ. 14ರಂದು ತೆಹಲ್ಕಾ, ಮುಂಬೈ ಮಿರರ್ ಸಹಿತ ಎಲ್ಲ ಪತ್ರಿಕೆಗಳೂ ವರದಿ ಮಾಡುತ್ತವೆ. ಪ್ರಧಾನ ಮಂತ್ರಿ ನಿವಾಸದ ಹತ್ತಿರ ಇರುವ, ಹೈಸೆಕ್ಯೂರಿಟಿ ವಲಯದಲ್ಲಿ ನಡೆದ ಈ ಘಟನೆಯೇ CCTVಯಲ್ಲಿ ದಾಖಲಾಗಿಲ್ಲ ಅಂದರೆ ಏನರ್ಥ? ಅಂದಹಾಗೆ, ಭಯೋತ್ಪಾದಕರು ಡೀಸೆಲ್ ಟಾಂಕಿಯ ಭಾಗದಲ್ಲಿ ಬಾಂಬ್ ಅಳವಡಿಸದೇ ವಿರುದ್ಧ ಭಾಗದಲ್ಲಿ ಬಾಂಬ್ ಅಳವಡಿಸಿದ್ದೇಕೆ? ಯಹೋಶ್ವಾರನ್ನು ಕೊಲ್ಲುವ ಉದ್ದೇಶವೇ ಅವರದ್ದಾಗಿದ್ದರೆ ಅವರು ಟಾಂಕಿಯ ಭಾಗದಲ್ಲೇ ಬಾಂಬ್ ಅಳವಡಿಸಬೇಕಿತ್ತಲ್ಲವೇ? ಬರೇ ಕಾರನ್ನು ಉರಿಸಿ, ಯಹೋಶ್ವಾರಿಗೆ ಏನೂ ಆಗದಂತೆ ನೋಡಿಕೊಳ್ಳುವುದು ಭಯೋತ್ಪಾದಕರ ಉದ್ದೇಶವಾಗಿತ್ತೆಂಬುದನ್ನು ನಂಬುವುದು ಹೇಗೆ? ಭಯೋತ್ಪಾದಕರಿಗೆ ಯಹೋಶ್ವಾದಲ್ಲಿ ಇಷ್ಟೊಂದು ಕರುಣೆ ಉಕ್ಕಲು ಕಾರಣವಾದರೂ ಏನು? ಯಹೋಶ್ವಾ ಆ ಬಳಿಕ ಇಸ್ರೇಲ್ ಗೆ ಹೊರಟು ಹೋದರು. ಅವರಿಗೆ ಏನೂ ಆಗಿಲ್ಲ ಅನ್ನುತ್ತವೆ ಕೆಲವು ವರದಿಗಳು. ಇವೆಲ್ಲ ಏನು?

ಅತ್ಯಂತ ಪ್ರಬಲ ಗುಪ್ತಚರ ವ್ಯವಸ್ಥೆಯನ್ನು ಹೊಂದಿದ, ತನ್ನ ಹಿತಾಸಕ್ತಿಯನ್ನು ಕಾಪಾಡಿ ಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕಿಳಿಯಲೂ ಹೇಸದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲ್ ಮಾತ್ರ.

ವಾಜಪೇಯಿಯವರ ಎನ್. ಡಿ. ಏ. ಅಧಿಕಾರದಲ್ಲಿದ್ದ ಸಮಯದಲ್ಲಿ ಬಾಂಗ್ಲಾದೇಶ ಜಮಾಅತೆ ಇಸ್ಲಾಮಿಯು ರಾಜಧಾನಿ ಢಾಕಾದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿತ್ತು. ಆಗ ಇಸ್ರೇಲ್ ಪೌರತ್ವವನ್ನು ಹೊಂದಿದ್ದ 4 ಮಂದಿ ಅಫಘಾನಿಯರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಯಿತು. ಜಮಾಅತೆ ಇಸ್ಲಾಮಿಯ ಸಭೆಯಲ್ಲಿ ಬಾಂಬ್ ಹಾಕುವ ಯೋಜನೆಯೊಂದಿಗೆ ಬಂದಿದ್ದ ಅವರನ್ನು ಆ ಬಳಿಕ ಅಲ್ಲಿಂದ ನೇರ ಇಸ್ರೇಲ್ ಗೆ ರವಾನಿಸಲಾಯಿತು. ಇಸ್ರೇಲ್ ನ ಪೌರತ್ವ ಹೊಂದಿದ ಅಫಘಾನಿಗಳು ಇದ್ದಾರೆಂದ ಮೇಲೆ ಇನ್ನು ಇಸ್ರೇಲ್ ಸಾಕಿ ಬೆಳೆಸಿದ ಇರಾನಿಗಳು ಇರಲಾರರೆಂದು ಹೇಳಲು ಸಾಧ್ಯವೇ? ತನ್ನ ಕಾರ್ಯ ಸಾಧನೆಗಾಗಿ ಇಸ್ರೇಲ್ ಜಗತ್ತಿನ ಬೇರೆ ಬೇರೆ ದೇಶಗಳಿಂದ ಜನರನ್ನು ಖರೀದಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಅವರನ್ನು ಉಪಯೋಗಿಸುತ್ತದೆ. ಹೀಗಿರುವಾಗ ಒಂದು ವೇಳೆ ಇಸ್ರೇಲಿ ರಾಯಭಾರಿಯ ಕಾರಿಗೆ ಬಾಂಬಿಟ್ಟದ್ದು ನಿಜವೇ ಆಗಿದ್ದರೂ ಮತ್ತು ಅದಕ್ಕೆ ಕಾರಣ ಇರಾನಿಗಳೇ ಆಗಿದ್ದರೂ ಅವರನ್ನು ಅಹ್ಮದಿ ನೆಜಾದ್ ರ ಅನುಯಾಯಿಗಳೆಂದು ಹೇಳಲಾಗುತ್ತಾ? ಇರಾನಿಗಳ ಕೈಯಲ್ಲಿ ಇಸ್ರೇಲ್ ಅಂಥದ್ದೊಂದು ಷಡ್ಯಂತ್ರದ ಯೋಜನೆ ಹಾಕಲಾರದೆಂದು ನಂಬುವ ಸ್ಥಿತಿ ಇವತ್ತಿದೆಯೇ?
ಫೆ. 19ರ ಟೈಮ್ಸ್ ಆಫ್ ಇಂಡಿಯಾದ ವರದಿಯನ್ನೇ ನೋಡಿ
‘ಲೆಬನಾನ್ ಇಲ್ಲವೇ ಇರಾನಿನ ಶಿಯಾ ವಿಭಾಗಕ್ಕೆ ಸೇರಿದ ವ್ಯಕ್ತಿಗಳೇ ದೆಹಲಿಯಲ್ಲಿ ಬಾಂಬ್ ಸ್ಫೋಟಿಸಿದ್ದಾರೆ, ಅವರ ವಿವರಗಳನ್ನು ವಿದೇಶಾಂಗ ಇಲಾಖೆಯಿಂದ ಸಂಗ್ರಹಿಸಲಾಗುತ್ತಿದೆ, ಇವರಿಗೆ ಭಾರತದಲ್ಲಿರುವ ವ್ಯಕ್ತಿಗಳು ಸಹಕರಿಸಿದ್ದಾರೆ ಎಂದು ಇಸ್ರೇಲ್ ನ ಮೊಸಾದ್ ಅಭಿಪ್ರಾಯ ಪಟ್ಟಿದೆ..’
ಈ ಸುದ್ದಿಯ ಸ್ವರೂಪವನ್ನೊಮ್ಮೆ ನೋಡಿ. ಕಾಸ್ಮಿಯನ್ನೂ ಭಾರತ ಮತ್ತು ಇರಾನ್ ನಡುವಿನ ಸಂಬಂಧವನ್ನೂ ಒಂದೇ ಏಟಿಗೆ ಧರಾಶಾಹಿಯಾಗಿಸುವ ಸೂಚನೆಯೊಂದು ಇದರಲ್ಲಿಲ್ಲ ಅನ್ನುತ್ತೀರಾ? ದೆಹಲಿ ಪೋಲೀಸರ ವಿಶೇಷ ದಳದ ಹೊರತು ಬೇರೆ ಯಾವ ತನಿಖಾ ಇಲಾಖೆಗೂ ಘಟನಾ ಸ್ಥಳಕ್ಕೆ ಹೋಗಲು ಮೊಸಾದ್ ಅನುಮತಿ ನೀಡಲಿಲ್ಲ. ಇಸ್ರೇಲ್ನಿಂದ ಧಾವಿಸಿ ಬಂದ ಮೊಸಾದ್, ಘಟನಾ ಸ್ಥಳಕ್ಕೆ ತೆರಳಿ ಕೃತ್ಯ ಯಾರದ್ದೆಂದೂ ಹೇಗೆ ನಡೆಯಿತೆಂದೂ ಮಾಧ್ಯಮಗಳ ಮುಂದೆ ವಿವರಣೆ ನೀಡಿತು. ಯಾಕೆ ಹೀಗೆ? ಇಸ್ರೇಲ್ ನಲ್ಲಿ ಇಂಥದ್ದೇ ಒಂದು ದುರಂತ ಸಂಭವಿಸಿದ್ದರೆ ಭಾರತದ ಗುಪ್ತಚರ ಇಲಾಖೆಯನ್ನು ಇಸ್ರೇಲ್ ಸ್ವಾಗತಿಸುತ್ತಿತ್ತೇ? ತನಿಖೆಯ ಹೊಣೆಯನ್ನು ‘ರಾ’ಗೆ ವಹಿಸಿ ಕೊಡುತ್ತಿತ್ತೇ?
ಕಾಸ್ಮಿಯಂಥ ಪ್ರಸಿದ್ಧ ಪತ್ರಕರ್ತನೇ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆಯೆಂದ ಮೇಲೆ ಇನ್ನು ಜನಸಾಮಾನ್ಯರ ಬಗ್ಗೆ ಹೇಳುವಂಥದ್ದೇನೂ ಇಲ್ಲ. ನಿಮ್ಮಲ್ಲಿ ಇಸ್ರೇಲನ್ನೋ ಅಮೇರಿಕವನ್ನೋ ಅಥವಾ ಅದರ ಭಯೋತ್ಪಾದನಾ ವಿರೋಧಿ ಹೋರಾಟವನ್ನೋ ಟೀಕಿಸುವ ಗುಣ ಇದೆಯೆಂದಾದರೆ ಭಯೋತ್ಪಾದಕರೆನಿಸಿಕೊಳ್ಳುವುದಕ್ಕೂ ಸಿದ್ಧರಾಗಬೇಕು. ಇಲ್ಲದಿದ್ದರೆ ಬಾಯ್ಮುಚ್ಚಿಕೊಂಡು ಸುಮ್ಮನಾಗಿ. ಕಾಸ್ಮಿ ಪ್ರಕರಣ ಕೊಡುವ ಎಚ್ಚರಿಕೆ ಇದು.

Tuesday, March 13, 2012

ತಾಯಿಯ ಎದೆಯಲ್ಲಿ ಮಲಗಿ ಆ ಮಗು ಬೆರಳು ಚೀಪುತ್ತಿತ್ತು..


ಆ ಕಡೆಯಿಂದ ಹೆಣ್ಣಿನ ಧ್ವನಿ
ಸರ್, ಒಂದು ಸಹಾಯ ಮಾಡುತ್ತೀರಾ? ಮಗುವಿನ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡಬಹುದಾ?
ಯಾವ ಮಗು? ಯಾವ ವಿವರ?
ಇವತ್ತಿನ ಪತ್ರಿಕೆಯ ಮುಖಪುಟದಲ್ಲಿ ನೀವೊಂದು ಸುದ್ದಿ ಕೊಟ್ಟಿದ್ದೀರಲ್ಲ, 8 ತಿಂಗಳ ಮಗುವಿನದ್ದು. ಅದು, ಅದರ ಬಗ್ಗೆ..
ಸಿಕ್ಕ ವಿವರಗಳನ್ನೆಲ್ಲಾ ಪತ್ರಿಕೆಯಲ್ಲಿ ನೀಡಿದ್ದೇವಲ್ಲಾ..
ಹಾಗಲ್ಲ ಸರ್, ಆ ಮಗುವಿನ ಫೋಟೋ ತೆಗೆದ ವ್ಯಕ್ತಿಯ ಹೆಸರು ನಿಮಗೆ ಗೊತ್ತಿದೆಯಾ ಅಂತ. ಆ ಫೋಟೋಗ್ರಾಫರ್ ಗೆ ವಿವರ ಗೊತ್ತಿರಬಹುದೇನೋ. ಗೊತ್ತಿದ್ದರೆ ಅವರ ಫೋನ್ ನಂಬರ್ ಕೊಡಬಹುದಾ? ಕನಿಷ್ಠ ಆಸ್ಪತ್ರೆಯ ವಿಳಾಸವಾದ್ರೂ...
ಸ್ಸಾರಿ ಮೇಡಮ್. ಆ ಫೋಟೋ ನಮ್ಮ ಛಾಯಾಗ್ರಾಹಕನದ್ದಲ್ಲ. ಪಿ.ಟಿ.ಐ., ಯು.ಎನ್.ಐ. ಮುಖಾಂತರ ಸಿಕ್ಕಿದ್ದು.
ಕ್ಷಣ ಕಾಲ ಮೌನ
ಅಲ್ಲಿರುವ ಬೇರೆ ಯಾರದ್ದಾದರೂ ಫೋನ್ ನಂಬರ್, ಇನ್ನೇನಾದ್ರೂ ಸಿಗಬಹುದಾ?
ಮಧ್ಯಾಹ್ನದ ಬಳಿಕ ನ್ಯೂಸ್ ಎಡಿಟರ್ ಬರ್ತಾರೆ. 4 ಗಂಟೆಗೆಲ್ಲ ಅವರು ಕೆಲಸ ಪ್ರಾರಂಭಿಸುತ್ತಾರೆ. ಆ ಮಗುವಿನ ಬಗ್ಗೆ, ಆ ಫೋಟೋದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ಕೊಡಬಹುದು. ಮತ್ತೆ ಕರೆ ಮಾಡಿ, ಓ.ಕೆ.
..10 ವರ್ಷಗಳ ಹಿಂದಿನ ಘಟನೆಯೊಂದನ್ನು ಪತ್ರಕರ್ತ ಸವ್ವಾದ್ ರಹ್ಮಾನ್ ಮೆಲುಕು ಹಾಕುತ್ತಾ ಹೋಗುತ್ತಾರೆ..
ಪತ್ರಿಕಾ ಕಚೇರಿಗಳೆಂದರೆ ಹಾಗೆಯೇ. ಸಾವನ್ನೂ ಬದುಕನ್ನೂ ಸುದ್ದಿ ಅನ್ನುವ ಅರ್ಥಕ್ಕೆ ಇಳಿಸಬಯಸುತ್ತಿರುವ ಸವ್ವಾದ್ ರಂಥ ಅಸಂಖ್ಯ ಮಂದಿಯ ತಾಣ ಅದು. ಸಾಮಾನ್ಯ ವ್ಯಕ್ತಿಯಾಗಿದ್ದವ ಪತ್ರಕರ್ತನಾಗಿ ಬದಲಾದಾಗ, ಕೆಲವು ಬದಲಾವಣೆಗಳಿಗೆ ಆತ ಒಗ್ಗಿಕೊಳ್ಳಬೇಕಾಗುತ್ತದೆ. ಸಾವು, ಅಪಘಾತಗಳೆಲ್ಲ ನಿನ್ನೆಯ ವರೆಗೆ ಮನಸ್ಸನ್ನು ಗಾಢವಾಗಿ ತಟ್ಟಿದ, ನಡುಗಿಸಿದ ಘಟನೆಗಳಾಗಿದ್ದರೆ, ಇವತ್ತಿನಿಂದ ಆತನ ಪಾಲಿಗೆ ಅದು ಬರೇ ಸುದ್ದಿಗಳಾಗಿರುತ್ತವೆ. ಒಂದು ದುರಂತದ ಸುದ್ದಿಯನ್ನು ಉತ್ತಮ ಸುದ್ದಿಯಾಗಿ ಹೇಗೆ ಪ್ರಸ್ತುತ ಪಡಿಸಬಹುದು ಎಂಬುದಾಗಿ ಆಲೋಚಿಸುವುದು ಪತ್ರಕರ್ತನ ಸ್ವಭಾವ. ದುರಂತ ಘಟನೆಯೊಂದು ನಡೆದರೆ, ‘ಒಳ್ಳೆಯ ಸುದ್ದಿ ಸಿಕ್ಕಿದೆ, ಮುಖಪುಟದಲ್ಲಿ ಹಾಕುವ’ ಅಂಥ ನ್ಯೂಸ್ ರೂಮಲ್ಲಿ ಹೇಳಿಕೊಳ್ಳುವುದಿದೆ. ಸಾವಲ್ಲೂ, ದುರಂತದಲ್ಲೂ ರೋಚಕತೆಯನ್ನು ಹುಡುಕುವ, ಓದುಗರಿಗೆ ರಸವತ್ತಾಗಿಸಿ ಮುಟ್ಟಿಸಲು ಆತುರ ಪಡುವ ವಿಚಿತ್ರ ಸಮೂಹ ಪತ್ರಕತ್ರರದ್ದು..
2001 ಜನವರಿ 26ರಂದು ಗುಜರಾತ್ನಲ್ಲಿ ಭೂಕಂಪ ಸಂಭವಿಸುತ್ತದೆ. ಮರು ದಿನ ಪತ್ರಿಕಾ ಕಚೇರಿಗೆ ಹೋದಾಗ ಸವ್ವಾದ್ರನ್ನು ಪಿ.ಟಿ.ಐ., ಯು.ಎನ್.ಐ.ಯ ಫೋಟೋಗಳು, ವರದಿಗಳು ಸ್ವಾಗತಿಸುತ್ತವೆ. ಸವ್ವಾದ್ ಕೇರಳೀಯ. ಗುಡ್ಡೆಯಂತೆ ಬಿದ್ದುಕೊಂಡಿದ್ದ ವರದಿಗಳನ್ನು ಮಲೆಯಾಳಮ್ ಭಾಷೆಗೆ ತಜ್ರುಮೆ ಮಾಡುತ್ತಿದ್ದ ಉಪಸಂಪಾದಕರ ಜೊತೆ ಅವರು ಸೇರಿಕೊಳ್ಳುತ್ತಾರೆ. ಮಾನವೀಯ ಸಂದೇಶವುಳ್ಳ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಂಪಾದಕರು ಆದೇಶಿಸಿರುವುದರಿಂದ ಅಂಥ ಸುದ್ದಿಗಳನ್ನು ಹೆಕ್ಕಿ, ಬಾಕ್ಸ್ ಐಟಂ ಆಗಿ ಕೊಡುವಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಇದರ ಮಧ್ಯೆಯೇ ಆ ಮಗುವಿನ ಫೋಟೋವನ್ನು ಸುದ್ದಿ ಸಂಪಾದಕರು ಸವ್ವಾದ್ ರ ಮುಂದೆ ಇಡುತ್ತಾರೆ. ಭುಜ್ ನ ದುರಂತ ಭೂಮಿಯಲ್ಲಿ 4 ದಿನಗಳ ಬಳಿಕ ರಕ್ಷಿಸಲ್ಪಟ್ಟ ಮಗು. ಹೆಸರು ಮುರ್ತಜಾ ಅಲಿ. ವಯಸ್ಸು 8 ತಿಂಗಳು. ತಂದೆ-ತಾಯಿ ಭೂಕಂಪದಲ್ಲಿ ಸಾವಿಗೀಡಾಗಿದ್ದು, ಈ ಸುದ್ದಿಯನ್ನು ಮುಖಪುಟದಲ್ಲಿ ಹಾಕಬಹುದು ಅನ್ನುತ್ತಾರೆ. ಈ ಸುದ್ದಿ ಪ್ರಕಟಗೊಂಡ ಮರುದಿನವೇ ಆರಂಭದಲ್ಲಿ ಹೇಳಿದ ಆ ಮಹಿಳೆ ಸವ್ವಾದ್ ರಿಗೆ ಕರೆ ಮಾಡಿದ್ದು.
ಮತ್ತೆ ಸರಿಯಾಗಿ 4 ಗಂಟೆಗೆ ಫೋನ್ ರಿಂಗಾಗುತ್ತದೆ. ಸವ್ವಾದ್ ಎತ್ತಿಕೊಳ್ಳುತ್ತಾರೆ.
ಸುದ್ದಿ ಸಂಪಾದಕರು 4 ಗಂಟೆಗೆ ಬರ್ತಾರೆ ಎಂದಲ್ಲದೆ ನೀವು ಹೇಳಿದ್ದು? ಮಗುವಿನ ಕುರಿತು ಹೆಚ್ಚಿನ ವಿವರಗಳೇನಾದರೂ ಸಿಕ್ಕಿತ್ತಾ.. ಮಗುವನ್ನು ಕಳಕೊಂಡ ತಾಯಿಯೋರ್ವಳ ದುಗುಡದಂತೆ ಮಾತ್ರ ಸವ್ವಾದ್ ರಿಗೆ ಕೇಳಿಸುತ್ತದೆ. ಅವರು ಕರೆಯನ್ನು ಸುದ್ದಿ ಸಂಪಾದಕರಿಗೆ ವರ್ಗಾಯಿಸುತ್ತಾರೆ . ಫೋನ್ ಇಟ್ಟ ಬಳಿಕ ಸುದ್ದಿ ಸಂಪಾದಕರು ಸವ್ವಾದ್ ರ ಬಳಿ ಬಂದು ಪ್ರಶ್ನಿಸುತ್ತಾರೆ,
ನಿಮಗೆ ಆ ಮಹಿಳೆಯ ಪರಿಚಯ ಇದೆಯಾ?
ಇಲ್ಲ
ಹೆಸರು ಗೊತ್ತಿದೆಯಾ?
ಇಲ್ಲ. ನಾನು ಕೇಳಿದ್ದೂ ಇಲ್ಲ. ಆಕೆ ಹೇಳಿದ್ದೂ ಇಲ್ಲ.
ನಾನು ಹೆಸರು ಕೇಳಿದೆ. ಆ ಮಗು ಸಿಗುವುದಾದರೆ ಮಾತ್ರ ಹೆಸರು ಹೇಳುವುದಾಗಿ ಹೇಳಿದ್ರು. ಮಗು ಇರುವ ಆಸ್ಪತ್ರೆಯ ಹೆಸರು ಹೇಳಿದರೆ ಅಲ್ಲಿಗೆ ಹೋಗಿ ಮಗುವನ್ನು ಅವರು ಪಡಕೊಳ್ಳುತ್ತಾರಂತೆ. ಇಂಥ ಮನುಷ್ಯರೂ ಇದ್ದಾರಾ ಅನ್ನುವ ಭಾವದಲ್ಲಿ ಸುದ್ದಿ ಸಂಪಾದಕರು ಅಲ್ಲಿಂದ ಹೊರಟು ಹೋಗುತ್ತಾರೆ. ಈ ಕಾರಣದಿಂದಲೋ ಏನೋ ಆ ಮಗುವಿನ ಕುರಿತಂತೆ ಒಂದು ಬಗೆಯ ಕುತೂಹಲ ನ್ಯೂಸ್ ರೂಮ್ ಇಡೀ ತುಂಬಿಕೊಳ್ಳುತ್ತದೆ. ಭುಜ್ ನಲ್ಲಿರುವ ಮುಂಬೈ ವರದಿಗಾರರೋರ್ವರನ್ನು ಸಂಪರ್ಕಿಸಿದಾಗ ಮಗುವನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸುದ್ದಿ ಸಿಗುತ್ತದೆ. ದಿನಾ ಒಂದಕ್ಕಿಂತ ಹೆಚ್ಚು ಬಾರಿ ಆ ಮಹಿಳೆ ಕರೆ ಮಾಡುವುದೂ ಸಿಕ್ಕ ಸುದ್ದಿಯನ್ನು ಅವರಿಗೂ ವರ್ಗಾಯಿಸುವುದೂ ನಡೆಯುತ್ತದೆ. ಈ ಮಧ್ಯೆ ಆ ಮಹಿಳೆಗೆ ಮಕ್ಕಳಿಲ್ಲದೆ ಇರುವುದರಿಂದ ಆ ಮಗುವಿನ ಬಗ್ಗೆ ವ್ಯಾವೋಹ ಹುಟ್ಟಿರಬಹುದು ಅನ್ನುವ ಅನುಮಾನವನ್ನು ಸವ್ವಾದ್ ನ ಮಿತ್ರನೋರ್ವ ವ್ಯಕ್ತಪಡಿಸುತ್ತಾನೆ. ಹಾಗೆ ಆಕೆಯಲ್ಲಿ ಕೇಳಿಯೂ ಬಿಡುತ್ತಾನೆ..
‘ನನಗೆ ಧಾರಾಳ ಮಕ್ಕಳಿದ್ದಾರೆ. ಅವರನ್ನು ಹೇಗೆ ಪ್ರೀತಿಸುತ್ತೇನೋ ಹಾಗೆಯೇ ಈತನನ್ನೂ ಪ್ರೀತಿಸುವೆ. ಅವರಿಗೆ ಏನನ್ನು ಕೊಡುತ್ತೇನೋ ಅದರಲ್ಲಿ ಒಂದು ಅಣುವಿನಷ್ಟೂ ಕಡಿಮೆ ಮಾಡದೆ ಈ ಮಗುವಿಗೂ ಕೊಡುವೆ’ ಅಂತ ಆ ಮಹಿಳೆ ಅಂದಾಗ ಸವ್ವಾದ್ ನ ಮಿತ್ರ ಮೌನವಾಗುತ್ತಾನೆ. ಆದರೆ ಆ ತಾಯಿಯ ಆಸೆ ಕೊನೆಗೂ ಈಡೇರುವುದಿಲ್ಲ. ಬಂಧುಗಳಲ್ಲಿ ಯಾರೋ ಒಬ್ಬರು ಆ ಮಗುವಿನ ಜವಾಬ್ದಾರಿಯನ್ನು ವಹಿಸಿ ಕೊಂಡಿರುವುದಾಗಿ ಸಿಕ್ಕ ಸುದ್ದಿಯನ್ನು ಮಹಿಳೆಗೆ ತಿಳಿಸಿದಾಗ ಒಮ್ಮೆ ಅವರು ಮೌನವಾಗುತ್ತಾರೆ. ‘ಅಲ್ಲಾಹ್ ಆ ಮಗುವನ್ನು ಚೆನ್ನಾಗಿಟ್ಟಿರಲಿ’ ಅನ್ನುತ್ತಾ ಕರೆ ಸ್ಥಗಿತಗೊಳಿಸುತ್ತಾರೆ. ಪತ್ರಿಕಾ ಕಚೇರಿಯನ್ನು ಒಂದು ಬಗೆಯ ಉಲ್ಲಾಸಕ್ಕೆ, ಕುತೂಹಲಕ್ಕೆ ಒಳಪಡಿಸಿದ್ದ ಆ ಮಗು ಮತ್ತು ಆ ತಾಯಿಯು, ‘ಇನ್ನು ಮುಗಿದ ಅಧ್ಯಾಯ’ ಅನ್ನುವುದು ಸವ್ವಾದ್ರಂತೆಯೇ ಅವರ ಮಿತ್ರರನ್ನೂ ವಿಷಣ್ಣಗೊಳಿಸುತ್ತದೆ. ಆದರೆ ಸವ್ವಾದ್ ಅಲ್ಲಿಗೇ ನಿಲ್ಲಿಸುವುದಿಲ್ಲ.
2011 ಡಿಸೆಂಬರ್
ಸುಮಾರು 11 ವಷ್ರಗಳ ಬಳಿಕ ಮುರ್ತಜಾ ಅಲಿಯನ್ನು ತಲೆ ತುಂಬಾ ತುಂಬಿಕೊಂಡು ಸವ್ವಾದ್ ಭುಜ್ ಗೆ ಹೊರಡುತ್ತಾರೆ. 50 ರೂ. ಗೊತ್ತುಪಡಿಸಿ ಆಟೋ ಏರುತ್ತಾರೆ. ಮುರ್ತಜಾ ಎಲ್ಲಿದ್ದಾನೆಂಬುದು ಸವ್ವಾದ್ ಗೆ ಗೊತ್ತಿಲ್ಲ. ಆತನ ಜವಾಬ್ದಾರಿ ಹೊತ್ತುಕೊಂಡವರ ಪರಿಚಯವೂ ಇಲ್ಲ. ಸವ್ವಾದ್ ಆಟೋದವನೊಂದಿಗೆ ಮಾತಿಗಿಳಿಯುತ್ತಾರೆ.
ನಾನು ಮಗುವನ್ನು ಭೇಟಿಯಾಗಲು ಬಂದದ್ದು
ಎಲ್ಲಿದೆ ಮಗು?
ಗೊತ್ತಿಲ್ಲ.. ಮುರ್ತಝಾ ಅಲಿ ಅಂತ ಹೆಸರು.
ಅವನ ತಂದೆಯ ಕೆಲಸ ಏನು?
ಅಪ್ಪ-ಅಮ್ಮ ಭೂಕಂಪದಲ್ಲಿ ತೀರಿ ಹೋಗಿದ್ದಾರೆ.
ಓ ಅಲ್ಲಿ ಲಕ್ಕಿ ಅಲಿ. ಹಾಗೆ ಹೇಳಬೇಡವೇ? ಮುರ್ತಝಾ ಎಂಬುದು ನನಗೆ ಗೊತ್ತಿಲ್ಲ. ಹಾಗಾ ಅವನ ಹೆಸರು?
ಆಟೋದವ ಭಾರೀ ಉತ್ಸಾಹದಿಂದ ಮದೀನಾ ಮಸೀದಿಯ ಪಕ್ಕ ಆಟೋ ನಿಲ್ಲಿಸಿ, ಒಂದು ಅಂಗಡಿ ತೋರಿಸುತ್ತಾನೆ. ಓಜಲಾನಿ ಸಾಬ್ರ ಅಂಗಡಿ. ಅಲಿ ಅಲ್ಲಿದ್ದಾನೆ ಅನ್ನುತ್ತಾ ಸವ್ವಾದ್ ಕೊಟ್ಟ 500 ರೂ.ವನ್ನು ಚಿಲ್ಲರೆ ಮಾಡಿಕೊಂಡು ಬರುತ್ತೇನೆಂದು ಹೋಗುತ್ತಾನೆ. ಸವ್ವಾದ್ಗೆ ಅನುಮಾನ ಪ್ರಾರಂಭವಾಗುತ್ತದೆ. 50 ರೂಪಾಯಿಗಾಗಿ 450 ರೂಪಾಯಿ ಕಳಕೊಂಡೆನೇನೋ ಅಂತ ಯೋಚಿಸುತ್ತಿರುವಾಗಲೇ ಮರಳಿ ಬಂದು ಆತ 470 ರೂ. ಕೊಡುತ್ತಾನೆ. ಸವ್ವಾದ್ ಗೆ ಅಚ್ಚರಿಯಾಗುತ್ತದೆ.
ನೀನು 50 ರೂ. ಬಾಡಿಗೆ ಎಂದು ಹೇಳಿದ್ದಲ್ಲವೇ?
ಹೌದು, ಆದರೆ ಇಲ್ಲಿಗೆ ಇರುವ ನಿಜವಾದ ಚಾಜ್ರು ರೂ. 30. ಹೊರಗಿನಿಂದ ಬಂದವರಿಗೆ ನಾವು ರೂ. 50 ಚಾಜ್ರು ಹಾಕುತ್ತೇವೆ. ಆದರೆ ನಮ್ಮ ಲಕ್ಕಿ ಅಲಿಯನ್ನು ನೋಡಲು ಬಂದ ನಿಮ್ಮಿಂದ ಚಾರ್ಜು ಪಡಕೊಳ್ಳುವುದೇ ಸರಿಯಲ್ಲ.. ಆತ ಕಣ್ಣರಳಿಸಿ ಹೇಳಿದಾಗ ಸವ್ವಾದ್ ಗೆ ತನ್ನ ಬಗ್ಗೆಯೇ ಅಸಹ್ಯವಾಗುತ್ತದೆ.
ಭೂಕಂಪದ 4ನೇ ದಿನ ಬೊಹ್ರಾ ಮುಸ್ಲಿಮರ ನಾಯಕ ಡಾ| ಸೈಯದ್ ಮುಹಮ್ಮದ್ ಬುಹ್ರಾನುದ್ದೀನ್ ರ ನಿರ್ದೇಶನದಂತೆ ಭುಜ್ನಲ್ಲಾದ ನಷ್ಟದ ಅಂದಾಜು ಮಾಡಲು ಬಂದವರಿಗೆ, ಕಟ್ಟಡಗಳ ಸಂದಿನಿಂದ ಮಗು ಅಳುವ ದನಿ ಕೇಳಿಸುತ್ತದೆ. ತಕ್ಷಣ ಸುದ್ದಿಯನ್ನು ಅಲ್ಲೇ ಇದ್ದ ಬಿ.ಎಸ್.ಎಫ್. ಯೋಧ ದಿವಾಕರ್ ಗೆ ತಿಳಿಸಿದಾಗ ಸೇನೆ ಕಾರ್ಯಾಚರಣೆಯಲ್ಲಿ ತೊಡಗುತ್ತದೆ. ಆಗ ಮೃತ ತಾಯಿಯ ಎದೆಯಲ್ಲಿ ಬೆರಳು ಚೀಪುತ್ತಾ ಅಳುತ್ತಿರುವ ಮಗು ಕಾಣಿಸುತ್ತದೆ. ಮಗುವಿನ ತಾಯಿ ಝೈನಬ್, ತಂದೆ ಮುಫದ್ದಲ್ ಸಹಿತ ಕುಟುಂಬದ 7 ಮಂದಿ ಭೂಕಂಪದಲ್ಲಿ ಸಾವಿಗೀಡಾಗಿದ್ದರೂ 102 ಗಂಟೆಗಳ ಬಳಿಕವೂ ಮಗು ಬದುಕುಳಿದದ್ದನ್ನು ಓಜಲಾನಿ ವಿವರಿಸುತ್ತಿರುವಾಗ ಅಲಿ, ಅಂಗಡಿಯ ಕ್ಯಾಶ್ ಟೇಬಲ್ನಲ್ಲಿ ಕೂತು ಆಡುತ್ತಿದ್ದ. ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ದಾದಿಯೋರ್ವರು ಲಕ್ಕಿ ಅಲಿ ಅಂತ ಆತನಿಗೆ ಹೆಸರಿಟ್ಟಿದ್ದಂತೆ. ಸವ್ವಾದ್ ಕ್ಯಾಮರಾ ತಿರುಗಿಸಿದ. ಅಲಿ ನಕ್ಕ..
ಸವ್ವಾದ್ ಲೇಖನಿ ಕೆಳಗಿಟ್ಟರೂ ನನ್ನ ಮನಸು ಮಾತ್ರ ಆ ಗುಂಗಿನಿಂದ ಹೊರಬರಲಿಲ್ಲ..
ಭೂಮಿ ನಡುಗುತ್ತಿದ್ದರೂ ತನ್ನ 8 ತಿಂಗಳ ಪುಟ್ಟ ಕಂದನನ್ನು ಎದೆಗೆ ಅಪ್ಪಿ ಹಿಡಿದು ಏನೂ ಆಗದಂತೆ ರಕ್ಷಿಸಿದ, ಮರಣದ ದೇವಚರನ ಕಾಲ ಸಪ್ಪಳ ಕೇಳುವ ಹೊತ್ತಲೂ ಕಂದನಿಗೆ ಎದೆಹಾಲು ಉಣಿಸಲು ಮುಂದಾದ ಆ ತಾಯಿ ಹಾಗೂ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಕೊಟ್ಟದ್ದಕ್ಕಿಂತ ಒಂದು ಅಣುವಿನಷ್ಟೂ ಕಡಿಮೆಗೊಳಿಸದೆ ತನ್ನ ಮಗುವಾಗಿ ಆ ಮಗುವನ್ನು ಬೆಳೆಸುವೆನೆಂದು ಮಾತುಕೊಟ್ಟ ಮತ್ತು ಎಲ್ಲಿದ್ದರೂ ಆ ಮಗು ಸುಖವಾಗಿರಲಿ ಎಂದು ಪ್ರಾರ್ಥಿಸಿದ ಆ ಅಜ್ಞಾತ ತಾಯಿ..
ಕಣ್ಣು ಮಂಜಾಗುತ್ತದೆ, ತಾಯಿಯನ್ನು ಅಪ್ಪಿಕೊಳ್ಳಬೇಕೆನಿಸುತ್ತದೆ..

Thursday, March 8, 2012

ಸೋತು ಗೆದ್ದ ಇರಾನಿ ಆಟಗಾರ್ತಿಯರು


‘ವಿಶ್ವಕಪ್ ಮಹಿಳಾ ಕಬಡ್ಡಿ ಪಂದ್ಯಾಟದ ಫೈನಲ್ ನಲ್ಲಿ ಭಾರತದೆದುರು ಸೋತ ಇರಾನಿಯರು’ ಅನ್ನುವ ಅರ್ಥದ ಶೀರ್ಷಿಕೆಯಲ್ಲಿ ಎಲ್ಲ ಕನ್ನಡ ಪತ್ರಿಕೆಗಳೂ ಮಾರ್ಚ್ 5ರಂದು ಸುದ್ದಿ ಬರೆದಿವೆ. ಭಾರತೀಯ ತಂಡ ವಿಜಯೋತ್ಸವ ಆಚರಿಸುವ ಫೋಟೋವನ್ನೂ ಪ್ರಕಟಿಸಿವೆ. ಆದರೆ ಪ್ರಜಾವಾಣಿ ಪತ್ರಿಕೆ ಮಾತ್ರ, ಇರಾನಿ ಮಹಿಳೆಯರು ಕಬಡ್ಡಿ ಆಡುವ, ಭಾರತ ತಂಡದ ನಾಯಕಿ ಮಮತಾ ಪೂಜಾರಿಯನ್ನು ಹಿಡಿಯಲು ಯತ್ನಿಸುವ ಫೋಟೋವನ್ನು ಮುದ್ರಿಸಿ ಭಿನ್ನವಾಗಿ ಕಾಣಿಸಿಕೊಂಡಿದೆ. ನಿಜವಾಗಿ ಸುದ್ದಿಗಿಂತ ಹೆಚ್ಚು ಆಸಕ್ತಿ ಹುಟ್ಟಿಸುವುದು ಆ ಫೋಟೋ . ಮಮತಾ ಪೂಜಾರಿ ಚಡ್ಡಿ ಮತ್ತು ಬನಿಯನ್ನು ಧರಿಸಿದ್ದರೆ, ಇರಾನಿಯರು ಅಡಿಯಿಂದ ಮುಡಿಯವರೆಗೆ ಮೈ ಮುಚ್ಚುವ ಉಡುಪು ಧರಿಸಿದ್ದರು. ಒಂದು ವೇಳೆ ಪ್ರಜಾವಾಣಿಯಲ್ಲಿ ಆ ಫೋಟೋ ಪ್ರಕಟವಾಗದೇ ಇರುತ್ತಿದ್ದರೆ, ಭಾರತೀಯರಂತೆ ಇರಾನಿ ಮಹಿಳೆಯರು ಕೂಡಾ ಚಡ್ಡಿ, ಬನಿಯನ್ನು ಧರಿಸಿ ಕಬಡ್ಡಿ ಆಡಿರ ಬಹುದು ಎಂದು ಓದುಗರು ಅಂದುಕೊಳ್ಳುವ ಸಾಧ್ಯತೆ ಇತ್ತು. ಹೀಗಿರುವಾಗ, ಆಟ ಆಕರ್ಷಕಗೊಳ್ಳಬೇಕಾದ್ದು ಉಡುಪಿನಿಂದಲ್ಲ, ಆಟದಿಂದ ಎಂದು ತಮ್ಮ ಉಡುಪಿನ ಮೂಲಕ ಸಾರಿದ ಇರಾನಿ ಆಟಗಾರರ ಸಂದೇಶವನ್ನು ಕನ್ನಡ ಓದುಗರಿಗೆ ಮುಟ್ಟಿಸಿದ ಪ್ರಜಾವಾಣಿಗೆ ಅಭಿನಂದನೆಗಳನ್ನು ಹೇಳಬೇಕು.
ಇವತ್ತು ಆಟಕ್ಕೂ ಉಡುಪಿಗೂ ಬಹಳ ಹತ್ತಿರದ ನಂಟಿದೆ. ಟೆನ್ನಿಸ್, ಬ್ಯಾಡ್ಮಿಂಟನ್, ಸ್ಕೇಟಿಂಗ್, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್, ವಾಲಿಬಾಲ್, ಬಾಕ್ಸಿಂಗ್.. ಮುಂತಾದ ಆಟಗಳನ್ನು ಪುರುಷರೂ ಆಡುತ್ತಾರೆ, ಮಹಿಳೆಯರೂ ಆಡುತ್ತಾರೆ. ಆದರೆ ಆಟ, ಅದರ ನಿಯಮ ಒಂದೇ ಬಗೆಯದ್ದಾದರೂ ಉಡುಪಿನಲ್ಲಿ ಮಾತ್ರ ಇವರಿಬ್ಬರ ಮಧ್ಯೆ ವ್ಯತ್ಯಾಸ ಇರುತ್ತದೆ. ಮೊಣಕೈ ವರೆಗೆ ಬರುವ ಟೀಶರ್ಟು ಮತ್ತು ವೊಣಕಾಲು ವರೆಗಿನ ಉದ್ದದ ಚಡ್ಡಿಯನ್ನು ಧರಿಸಿ ರೋಜರ್ ಫೆಡರರ್ ಟೆನ್ನಿಸ್ ಆಡುವಾಗ, ಸೆರೆನಾ ವಿಲಿಯಮ್್ಸ ಅದರ ಅರ್ಧ ದಷ್ಟು ಬಟ್ಟೆಯನ್ನೂ ಧರಿಸುವುದಿಲ್ಲ. ನೂರು ಮೀಟರ್ ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಉಸೇನ್ ಬೋಲ್ಟ್ ನ ಉಡುಪಿಗೂ ಅದೇ ವಿಭಾಗದಲ್ಲಿ ಓಡುವ ಮಹಿಳೆಯರ ಉಡುಪಿಗೂ ಭಾರೀ ಅಂತರವಿರುತ್ತದೆ. ಮೊಣಕಾಲನ್ನು ಮುಚ್ಚುವಷ್ಟು ಉದ್ದದ ಡ್ರೆಸ್ಸು ಧರಿಸಿ ಓಡುವ ಉಸೇನ್ ಬೋಲ್ಟ್, ಆ ಉಡುಪನ್ನೆಂದೂ ತನ್ನ ಸಾಧನೆಗೆ ಅಡ್ಡಿ ಅಂತ ಹೇಳಿಕೊಂಡಿಲ್ಲ. ಹೀಗಿರುವಾಗ ಮಹಿಳೆಯ ಓಟಕ್ಕೆ, ಆಕೆಯ ಸಾಧನೆಗೆ ಮಾತ್ರ ಉಡುಪು ಅಡ್ಡ ಬರುವುದಾದರೂ ಯಾತಕ್ಕೆ? ಮಹಿಳಾ ಆಟಗಾರ್ತಿಯರು ಸ್ಕರ್ಟ್ ಧರಿಸಿ ಬ್ಯಾಡ್ಮಿಂಟನ್ ಆಡಬೇಕೆಂದು ವರ್ಷಗಳ ಹಿಂದೆ ವಿಶ್ವ ಬ್ಯಾಡ್ಮಿಂಟನ್ ಮಂಡಳಿ ನಿಯಮ ರೂಪಿಸಿತ್ತು. ಪ್ರೇಕ್ಷಕರನ್ನು ಆಕರ್ಷಿಸಬೇಕಾದರೆ ಈ ಬದಲಾವಣೆ ಅನಿವಾರ್ಯ ಅಂತಲೂ ಅದು ಸಮರ್ಥಿಸಿಕೊಂಡಿತ್ತು. ಅದರ ವಿರುದ್ಧ ಅಪಸ್ವರ ಎದ್ದ ಬಳಿಕ ನಿಯಮದ ಜಾರಿಯನ್ನು ಮುಂದೂಡಿತು. ಬಹುಶಃ ಇವತ್ತು ಮಹಿಳೆಯರಿಗೆ ಸಂಬಂಧಿಸಿ ಯಾವ ಆಟ ಕೂಡ ಸಭ್ಯ ಉಡುಪಿನೊಂದಿಗೆ ನಡೆಯುವುದೇ ಇಲ್ಲ. ಕನಿಷ್ಠ, ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಸಾರ್ವಜನಿಕವಾಗಿ ಹಾಕುವಷ್ಟಾದರೂ ಪ್ರಮಾಣದ ಉಡುಪನ್ನು ಆಟದ ಅಂಗಣದಲ್ಲಿ ಹಾಕುವುದಕ್ಕೆ ಆಧುನಿಕ ಕ್ರೀಡೆಗಳು ಅಸಹ್ಯ ಪಡುತ್ತಿವೆ. ನಿಜವಾಗಿ ಮನೆ, ಕಚೇರಿಯಲ್ಲಿ ಹೆಣ್ಣನ್ನು, ಆಕೆಯ ಡ್ರೆಸ್ಸನ್ನು ನೋಡುವ ಕಣ್ಣುಗಳು ಕೆಲವು ನೂರು ಸಂಖ್ಯೆಯಲ್ಲಷ್ಟೇ ಇವೆ. ಆದರೆ ಅಂಗಣದಲ್ಲಿ ಹಾಗಲ್ಲ. ಅಲ್ಲಿ ಹತ್ತಾರು ಕ್ಯಾಮರಾಗಳು ಆಟಗಾರರನ್ನು ತುಂಬಿಕೊಳ್ಳಲು ಸಜ್ಜಾಗಿರುತ್ತವೆ. ಕೋಟ್ಯಂತರ ಮಂದಿಗೆ ಅದನ್ನು ಟಿ.ವಿ.ಗಳ ಮೂಲಕ ತೋರಿಸಲಾಗುತ್ತದೆ. ಹೀಗಿರುವಾಗ ಪರಿಚಿತರಾದ ಮನೆ ಮಂದಿಯ ಮಧ್ಯೆಯೇ ಹಾಕಲು ಇಷ್ಟಪಡದ ಉಡುಪನ್ನು ಮನೆಯ ಹೊರಗೆ, ಅಪರಿಚಿತರ ಎದುರು ಹಾಕಿ ಆಡುವುದು ಯಾಕೆ ಆಧುನಿಕತೆ ಅನ್ನಿಸಿಕೊಳ್ಳಬೇಕು? ಆಧುನಿಕತೆಯ ಹೆಸರಲ್ಲಿ ಹೆಣ್ಣನ್ನು ನಗ್ನಗೊಳಿಸುವ, ಆ ಮೂಲಕ ಯಾರದ್ದೋ ಕಂಪೆನಿಯ ಮಾಲುಗಳನ್ನು, ಅವರ ಬ್ಯಾಂಕ್ ಅಕೌಂಟನ್ನು ಹೆಚ್ಚಿಸುವ ಷಡ್ಯಂತ್ರ ಇದು ಎಂದು ಯಾಕೆ ಅಂದುಕೊಳ್ಳಬಾರದು?
ಪ್ರತಿಯೊಂದು ಆಟಕ್ಕೂ ಅದರದ್ದೇ ಆದ ಚೆಲುವು ಇದೆ. ಆ ಚೆಲುವನ್ನು ಅನುಭವಿಸಲು ಪ್ರಾಮಾಣಿಕವಾದ ಮನಸ್ಸು ಇಲ್ಲದಿದ್ದರೆ ಅದು ಅವರವರ ದೌರ್ಬಲ್ಯವೇ ಹೊರತು ಆಟದ್ದಲ್ಲ. ಮೈ ಪೂರ್ತಿ ಬಟ್ಟೆ ಧರಿಸಿ ಕಬಡ್ಡಿ ಆಡಿದ ಇರಾನಿ ಮಹಿಳೆಯರು ಆಟದ ನಿಯಮ ರೂಪಿಸುವ ಪುರುಷ ಜಗತ್ತಿಗೆ ಮಾರ್ಮಿಕ ಸಂದೇಶವೊಂದನ್ನು ರವಾನಿಸಿದ್ದಾರೆ. ನಿಮ್ಮ ಅಭಿರುಚಿಯನ್ನು ಒಂದಿಷ್ಟು ಬದಲಾಯಿಸಿದರೆ, ಪೂರ್ಣ ಪ್ರಮಾಣದಲ್ಲಿ ಉಡುಪು ಧರಿಸಿ ಆಡುವ ಕಬಡ್ಡಿ ಕೂಡ ಆಕರ್ಷಕಗೊಳ್ಳಬಹುದು ಮತ್ತು ಫೈನಲ್ ಗೂ ಏರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಷ್ಟಕ್ಕೂ ಇರಾನಿಯರು ನೇರವಾಗಿ ಫೈನಲ್ ಗೆ ತಲುಪಿದ್ದಲ್ಲ. ಸೆಮಿಫೈನಲ್ ನಲ್ಲಿ ಥಾಯ್ಲೆಂಡನ್ನು ಭಾರೀ ಅಂತರದಲ್ಲಿ ಸೋಲಿಸಿದ್ದಾರೆ. ಒಂದು ವೇಳೆ ಕನಿಷ್ಠ ಬಟ್ಟೆ ತೊಡುವುದು ಆಟಕ್ಕೆ ಅನುಕೂಲ ಎಂದಾಗಿರುತ್ತಿದ್ದರೆ ಥೈಲೆಂಡ್ ನ ಆಟಗಾರರು ಗೆಲ್ಲಬೇಕಿತ್ತು. ಇನ್ನು, ಫೈನಲ್ ನಲ್ಲಿ ಇರಾನಿಯರು ಎಷ್ಟು ಪ್ರಬುದ್ಧ ಆಟ ಆಡಿದರೆಂದರೆ ಕೇವಲ 6 ಅಂಕಗಳಿಂದ ಸೋಲೊಪ್ಪಿಕೊಂಡರು. ನಿಜವಾಗಿ ಇಲ್ಲಿ ಸೋಲು ಮತ್ತು ಗೆಲುವು ಮುಖ್ಯ ಅಲ್ಲ. ಒಂದು ಆಟವನ್ನು ಅಸಹ್ಯಗೊಳಿಸಿದ ಪುರುಷ ಜಗತ್ತನ್ನು ಇರಾನಿ ಆಟಗಾರ್ತಿಯರು ಕಬಡ್ಡಿ ಅಂಗಣದಲ್ಲಿ ನಿಂತು ಪ್ರಶ್ನಿಸಿದ್ದಾರೆ. ಕಬಡ್ಡಿಯಲ್ಲಿ ಅವರು ಪಡೆಯುತ್ತಿದ್ದ ಪ್ರತಿಯೊಂದು ಅಂಕ ಕೂಡ ಹೆಣ್ಣನ್ನು ನಗ್ನಗೊಳಿಸಿದ, ನಗ್ನಗೊಂಡರಷ್ಟೆ ಆಟ ಆಕರ್ಷಕವಾಗುತ್ತದೆ ಅಂತ ಪ್ರಚಾರ ಮಾಡಿದ್ದ ಪುರುಷರಿಗೆ ನೀಡುವ ಬಹುದೊಡ್ಡ ಏಟಾಗಿತ್ತು. ಹೀಗೆ 19 ಏಟು(ಅಂಕ)ಗಳನ್ನು ಕೊಟ್ಟೇ ಇರಾನಿ ಮಹಿಳೆಯರು ಅಂಗಣದಿಂದ ಹೊರಬಂದಿದ್ದಾರೆ. ಆದ್ದರಿಂದ ಅವರ ಸೋಲನ್ನು ಸೋಲು ಅನ್ನಬೇಕಿಲ್ಲ. ಅದು ನಗ್ನತೆಯನ್ನು ಇಷ್ಟಪಡುವ ಆಧುನಿಕ ಮನುಷ್ಯರ ಮೇಲಿನ ವಿಜಯ. ಅವರ ಪ್ರತಿಯೊಂದು ಅಂಕಕ್ಕೂ ಬೀಳುತ್ತಿದ್ದ ಚಪ್ಪಾಳೆಯನ್ನು ನಾವು ಬರೇ ಎರಡು ಕೈಗಳು ಎಬ್ಬಿಸಿದ ಸಪ್ಪಳ ಎಂಬ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸಬೇಕಿಲ್ಲ. ಅದು ಇರಾನಿನ ಸಂಸ್ಕøತಿಗೆ ಸಿಕ್ಕ ಚಪ್ಪಾಳೆ. ಇರಾನ್ ಪ್ರತಿಪಾದಿಸುತ್ತಿರುವ ಇಸ್ಲಾಮೀ ಮೌಲ್ಯಗಳಿಗೆ ಸಿಕ್ಕ ಗೌರವ. ಈ ಗೌರವದ ಮುಂದೆ ವಿಶ್ವಕಪ್ ನಿಜವಾಗಿಯೂ ಸಣ್ಣದು. ಸೋಲಿನಲ್ಲೂ ಮೌಲ್ಯವೊಂದನ್ನು ಗೆಲ್ಲಿಸಿದ, ದೇಹವನ್ನು ಪ್ರದರ್ಶಿಸದೆಯೇ ಆಟ ಆಡಬಹುದೆಂದು ಪ್ರತಿಪಾದಿಸಿದ ಈ ಆಟಗಾರ್ತಿಯರು ಸೋತು ಗೆದ್ದಿದ್ದಾರೆ. ಅವರು ಅಭಿನಂದನೆಗೆ ಅರ್ಹರು .

ವೀಕ್ಷಕರಾಗಬೇಡಿ, ಸಹಭಾಗಿಗಳಾಗಿ, ಇದು ಇಸ್ಲಾಮೀ ಆಂದೋಲನ

1941 ಆಗಸ್ಟ್ 26ರಂದು ಸೈಯದ್ ಮೌದೂದಿ ಸಹಿತ 75 ಮಂದಿ ವಿದ್ವಾಂಸರು ಒಟ್ಟು ಸೇರಿ ಜಮಾಅತೆ ಇಸ್ಲಾಮಿಯನ್ನು ಸ್ಥಾಪಿಸುವುದಕ್ಕೆ ಬಲವಾದ ಕಾರಣ ಇತ್ತು.
ಬ್ರಿಟಿಷರು ಭಾರತಕ್ಕೆ ಬಂದು ಅದಾಗಲೇ 200 ವಷ್ರಗಳು ಕಳೆದಿತ್ತು. ಆದ್ದರಿಂದಲೇ ಅವರ ಇಂಗ್ಲಿಷು, ಅವರ ಪ್ಯಾಂಟು, ಷರಟು , ಆಲೋಚನೆ, ಸಿದ್ಧಾಂತಗಳೆಲ್ಲ ಭಾರತೀಯ ಮುಸ್ಲಿಮರ ಮೇಲೆ ಗಾಢ ಪ್ರಭಾವವನ್ನು ಬೀರತೊಡಗಿದ್ದುವು. ದೇಹ ಭಾರತದ್ದಾದರೂ ಬ್ರಿಟಿಷ್ ಮನಸನ್ನು ಹೊಂದಿದ ಹುಸೇನ್, ಸಾರಾರು ತಯಾರಾಗತೊಡಗಿದರು. ಇವರಿಗೆ ಇಸ್ಲಾಮಿನೊಂದಿಗೆ ದ್ವೇಷ ಇತ್ತು ಎಂದಲ್ಲ. ಆದರೆ ಜಾತ್ಯತೀತತೆ, ಸಮಾಜವಾದ, ಕಮ್ಯುನಿಝಮ್, ಬಂಡವಾಳಶಾಹಿತ್ವದಂಥ ಆಧುನಿಕ ಸಿದ್ಧಾಂತಗಳ ಮುಂದೆ ಇಸ್ಲಾಮ್ ಎಂಬುದು ತೀರಾ ಕಾಲಬಾಹಿರ ಮತ್ತು ಪುರಾತನ ಸಿದ್ಧಾಂತದಂತೆ ಅವರಿಗೆ ಕಾಣತೊಡಗಿತು. ಬಡ್ಡಿಯನ್ನು ಪ್ರಬಲವಾಗಿ ಪ್ರತಿಪಾದಿಸುವ ಬಂಡವಾಳಶಾಹಿತ್ವ, ಜಾತ್ಯತೀತ ಸಿದ್ಧಾಂತಗಳ ಎದುರು ಬಡ್ಡಿಯನ್ನು ಹರಾಮ್ ಎಂದು ಘೋಷಿಸುವುದು ಅಜ್ನಾನದಂತೆ , ಅವಮಾನದಂತೆ ಅನಿಸತೊಡಗಿತು. ಬ್ರಿಟಿಷರ ಸಂಸ್ಕøತಿಯೇ ಕುಡಿಯುವುದು, ಮಾತ್ರವಲ್ಲ ಭಾರತದಲ್ಲೂ ಅದು ನಿಷಿದ್ಧವಲ್ಲ. ಹೀಗಿರುವಾಗ ಅದರ ವಿರುದ್ಧ ಮಾತಾಡುವುದರಿಂದ ತಮ್ಮ ಇಮೇಜಿಗೆ ಧಕ್ಕೆ ಬಂದೀತೋ ಅಂತ ಮುಸ್ಲಿಮರು ಅಂದುಕೊಳ್ಳತೊಡಗಿದರು. ಒಂದು ರೀತಿಯಲ್ಲಿ ನಮಾಜ್ ಗೆ, ಉಪವಾಸಕ್ಕೆ, ಮದುವೆಗೆ, ಕೆಲವು ತಸ್ಬೀಹ್ ಗೆ , ಹಜ್ಜ್ ಗೆ ಇಸ್ಲಾಮನ್ನು ಸೀಮಿತಗೊಳಿಸಿ ಬದುಕಿನ ಉಳಿದ ಚಟುವಟಿಕೆಗಳಿಗೆ ಕಮ್ಯುನಿಝಮನ್ನು, ಜಾತ್ಯತೀತ ಸಿದ್ಧಾಂತವನ್ನು ಆಶ್ರಯಿಸತೊಡಗಿದರು. ಹೆಸರು ಮುಹಮ್ಮದ್, ಉಮರ್, ಇಬ್ರಾಹೀಮ್ ಅ0ತ ಇದ್ದರೂ ಗಣೇಶ, ನವೀನ, ಮೊತಿಲಾಲಗಿಂತ ಭಿನ್ನವಾದ ಬದುಕೇನೂ ಇವರದ್ದಾಗಿರಲಿಲ್ಲ. ಅವರು ದೇವಾಲಯಕ್ಕೆ ಹೋಗುವಾಗ ಇವರು ಮಸೀದಿಗೆ ಹೋಗುತ್ತಿದ್ದರು. ಉಳಿದಂತೆ ಇವರ ವ್ಯಾಪಾರ, ಮಾತು, ಆಟ, ಆಲೋಚನೆಗಳಲ್ಲೆಲ್ಲಾ ಸಮಾನವಾಗಿತ್ತು. ಭಾರತೀಯ ಸಮಾಜದಲ್ಲಿದ್ದ ಜಾತಿಪದ್ಧತಿ ಮುಸ್ಲಿಮರ ಮೇಲೆ ಎಷ್ಟರ ಮಟ್ಟಿನ ಪ್ರಭಾವ ಬೀರಿತ್ತೆಂದರೆ ಶಾಫಿಈ, ಹನಫಿ, ಹಂಬಲಿ, ಮಾಲಿಕಿಗಳೆಲ್ಲ ಒಂದೊಂದು ಜಾತಿಯಾಗಿ, ಪರಸ್ಪರ ಮದುವೆ ಸಂಬಂಧ ಏಪ್ರಡಿಸಲಾರದಷ್ಟು ಅವರ ಮಧ್ಯೆ ಅಂತರ ಏಪ್ರಟ್ಟಿದ್ದುವು.
ಹೀಗಿರುವಾಗ ರಂಗೀಲಾ ರಸೂಲ್ ಅನ್ನುವ ಕೃತಿಯೊಂದು ಪ್ರಕಟವಾಯಿತು.
ರಾಜಪಾಲ್ ಅನ್ನುವ ವ್ಯಕ್ತಿಯೊಬ್ಬ ಅದನ್ನು ಪ್ರಕಟಿಸಿದ್ದ. ಪ್ರವಾದಿಯವರನ್ನು(ಸ) ನಿಂದಿಸುವ, ಗೇಲಿ ಮಾಡುವ ಆ ಕೃತಿಯನ್ನು ಬರೆದಿರುವುದು ಸ್ವಾಮಿ ಶ್ರದ್ಧಾನಂದ ಅನ್ನುವ ಅನುಮಾನವೊಂದು ಎಲ್ಲೆಡೆ ಕಾಣಿಸತೊಡಗಿತು. ಮುಸ್ಲಿಮರನ್ನು ಶುದ್ಧಗೊಳಿಸಿ ಹಿಂದೂ ಧಮ್ರಕ್ಕೆ ಮತಾಂತರಿಸುವ ‘ಶುದ್ಧಿ ಚಳವಳಿ’ಗೆ ಅವರು ನೇತೃತ್ವ ನೀಡಿರುವುದು ಈ ಅನುಮಾನವನ್ನು ಇನ್ನಷ್ಟು ಬಲಗೊಳಿಸಿತು. ಇದಕ್ಕಿಂತ ಎರಡು ವರ್ಷಗಳ ಹಿಂದೆ 1923ರಲ್ಲಿ ‘ಯಾರು ಹಿಂದು’ ಅನ್ನುವ ವಿಷಪೂರಿತ ಕೃತಿಯೊಂದನ್ನು ಹಿಂದೂ ಮಹಾಸಭಾದ ನಾಯಕ ವಿ.ಡಿ. ಸಾವರ್ಕರ್ ಹೊರ ತ0ದಿದ್ದರು. ಮುಸ್ಲಿಮರನ್ನು ನಿ0ದಿಸುವ, ಅವರ ವಿರುದ್ಧ ಹಿ0ದೂಗಳನ್ನು ಎತ್ತಿ ಕಟ್ಟುವ ಪ್ರಯತ್ನವೊ0ದು ಹೀಗೆ ಬಹಿರಂಗವಾಗಿ ನಡೆಯುತ್ತಿರುವಾಗಲೇ, ಅಬ್ದುರ್ರಶೀದ್ ಅನ್ನುವ ವ್ಯಕ್ತಿಯೊಬ್ಬ 1926ರಲ್ಲಿ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಿದ. ಇದು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ಒಡೆಯುವುದಕ್ಕೆ ಕಾರಣವಾಯಿತು. ಮುಸ್ಲಿಮರನ್ನು ಜಿಹಾದಿಗಳು, ಅಸಹಿಷ್ಣುಗಳು, ಅತಿಕ್ರಮಣಕೋರರು, ಜಗಳಗಂಟರು.. ಎಂದೆಲ್ಲಾ ಟೀಕಿಸುವ, ಅವರ ವಿಶ್ವಾಸವನ್ನು ಪ್ರಶ್ನಿಸುವ ಪ್ರಯತ್ನಗಳು ಧಾರಾಳ ನಡೆದುವು. 1927 ಎಪ್ರಿಲ್ ನಲ್ಲಿ ನಾಗ್ಪುರದಲ್ಲಿ ಕೋಮುಗಲಭೆ ಸ್ಫೋಟಿಸಿತು. ಆ ಬಳಿಕ ಅದು ಇಡೀ ದೇಶಕ್ಕೇ ಹರಡಿತು. ಇಸ್ಲಾಮಿನ ಜಿಹಾದ್ ಕಾನ್ಸೆಪ್ಟನ್ನು ಕ್ರೂರ, ಸಮಾಜದ್ರೋಹಿ ಎಂದು ಟೀಕಿಸಲಾಯಿತಲ್ಲದೇ ಅದನ್ನು ಮುಸ್ಲಿಮರು ಕೈಬಿಡಬೇಕೆ0ದು ಬಲವಾಗಿ ಒತ್ತಾಯಿಸಲಾಯಿತು. ಈ ಹಂತದಲ್ಲಿ ಜಿಹಾದ್ ಅಂದರೆ ಏನು ಎಂಬುದನ್ನು ಈ ದೇಶಬಾಂಧವರಿಗೆ ಸ್ಪಷ್ಟವಾಗಿ ತಿಳಿಸುವ ಸಣ್ಣ ಕೃತಿ ಕೂಡ ಈ ಸಮುದಾಯದಲ್ಲಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ 24ರ ಹರೆಯದ ಸೈಯದ್ ಮೌದೂದಿ, ‘ಇಸ್ಲಾಮಿನಲ್ಲಿ ಜಿಹಾದ್’ ಅನ್ನುವ ಕೃತಿಯನ್ನು ಬರೆದು ದೇಶದ ಮುಂದಿಟ್ಟರು. ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಜಿಹಾದನ್ನು ಮುಂದಿಟ್ಟು ಮುಸ್ಲಿಮರನ್ನು ನಿಂದಿಸುತ್ತಿದ್ದವರೆಲ್ಲ ಆ ವಿಷಯವನ್ನೇ ಕೈಬಿಟ್ಟು ಇತರ ಸಂಗತಿಗಳನ್ನು ಆಯ್ದುಕೊಳ್ಳಬೇಕಾಯಿತು.
ಇಸ್ಲಾಮನ್ನು ಸಮಗ್ರ ಜೀವನ ಕ್ರಮ ಎಂದು ಈ ದೇಶದಲ್ಲಿ ವೊತ್ತವೊದಲು ಘೋಷಿಸಿದ್ದೇ ಜಮಾಅತೆ ಇಸ್ಲಾವಿೂ.
ಅಖಂಡ ಭಾರತ ಇಬ್ಭಾಗಗೊಂಡಾಗ ಭಾರತದಲ್ಲಿ ಉಳಿದುಕೊಂಡ ಜಮಾಅತಿನ ಕಾರ್ಯಕರ್ತರು ಒಟ್ಟು ಸೇರಿ 1948 ಎಪ್ರಿಲ್ 15ರಂದು ಜಮಾಅತೆ ಇಸ್ಲಾಮೀ ಹಿಂದನ್ನು (ಭಾರತದ ಇಸ್ಲಾಮೀ ಸ0ಘಟನೆ) ರಚಿಸಿದಾಗ ಈ ದೇಶದಲ್ಲಿ ಕೋಮುಭಾವನೆ ಅತ್ಯಂತ ಭೀಕರ ಸ್ವರೂಪದಲ್ಲಿತ್ತು. ಹಿಂದೂ ಕೋಮುವಾದಕ್ಕೆ ಮುಸ್ಲಿಮ್ ಕೋಮುವಾದ ಮದ್ದು ಎಂದು ಅಂದುಕೊಂಡವರು, ಅವರ ತಲವಾರಿಗೆ, ನಮ್ಮ ತಲವಾರು ತಕ್ಕ ಉತ್ತರ ಅಂತ ವಾದಿಸುವವರು ಮುಸ್ಲಿಮರಲ್ಲಿದ್ದರು. ಹಾಗೆಯೇ ಮುಸ್ಲಿಮರನ್ನು ಅಸಹಿಷ್ಣುಗಳು, ದೇಶದ್ರೋಹಿಗಳೆಂದೂ, ಪ್ರವಾದಿಯನ್ನು(ಸ) ಈ ಎಲ್ಲದರ ಪ್ರಚೋದಕ ಎಂದೂ ಪ್ರಚಾರ ಮಾಡುವ ಹಿಂದೂಗಳಿದ್ದರು. ಇಂಥ ವೇಳೆ ಜಮಾಅತ್, ಏಟಿಗೆ ಪ್ರತಿಯೇಟು ಅನ್ನುವ ನಿಲುವನ್ನು ವಿರೋಧಿಸಿತು. “ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಬಳಿ ಕೆಲಸಕ್ಕಿರುವ ಮುಸ್ಲಿಮೇತರರನ್ನು ಅವಧಿಗಿಂತ ಒಂದು ಸೆಕೆಂಡ್ ಹೆಚ್ಚು ದುಡಿಸಿದರೂ ನಾನು ಪರಲೋಕದಲ್ಲಿ ಆ ಮುಸ್ಲಿಮೇತರನ ಪರ ನಿಲ್ಲುವೆ” ಎಂದ ಕರುಣಾಮಯಿ ಪ್ರವಾದಿಯನ್ನು ಜಮಾಅತ್ ಸಮಾಜಕ್ಕೆ ಪರಿಚಯಿಸಿತು. “ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು, ಪರಸ್ಪರ ಸಹೋದರರು ” ಎಂದ ಮನುಷ್ಯ ಪ್ರೇಮಿಯನ್ನು(ಸ) ಸಮಾಜದ ಮುಂದಿಟ್ಟಿತು. ಅನ್ಯರ ಆರಾಧ್ಯರನ್ನು, ಅವರ ಆರಾಧನಾಲಯಗಳನ್ನು ತೆಗಳಬಾರದು ಎಂದ ಕುರ್ಆನನ್ನು, ಕೋಮುವಾದಿ ನನ್ನವನಲ್ಲ ಎಂದ ಮುಹಮ್ಮದರನ್ನು (ಸ), ಮುಸ್ಲಿಮೇತರರ ಶವವನ್ನು ಕೊಂಡೊಯ್ಯುತ್ತಿದ್ದಾಗ ಎದ್ದು ನಿಂತು ಗೌರವಿಸಿದ ಪ್ರವಾದಿಯನ್ನು ಸಮಾಜಕ್ಕೆ ಮಾಡೆಲ್ ಆಗಿ ತೋರಿಸಿತು. ನಿಜವಾಗಿ, ಆವತ್ತು ಆ ಸಮಾಜದ ಪಾಲಿಗೆ ಅದು ಹೊಚ್ಚ ಹೊಸತಾದ ಕಾನ್ಸೆಪ್ಟು . ಮುಸ್ಲಿಮರು ಬಹುಸಂಸ್ಕೃತಿಯನ್ನು ಸಹಿಸುವುದಿಲ್ಲ, ಕಾಫಿರರನ್ನು (ಹಿಂದೂಗಳನ್ನು) ಕೊಲ್ಲುವುದನ್ನು ಜಿಹಾದ್ ಅನ್ನುತ್ತಾರೆ, ಮತಾಂತರ ಮಾಡುತ್ತಾರೆ ಎಂಬೆಲ್ಲಾ ಪ್ರಚಾರಗಳಿದ್ದ ಸಂದರ್ಭದಲ್ಲಿ ಜಮಾಅತ್, ಜಿಹಾದ್ ಗೆ, ಮತಾಂತರಕ್ಕೆ ಇಸ್ಲಾಮೀ ಹಿನ್ನೆಲೆಯಲ್ಲಿ ಸ್ಪಷ್ಟ ವ್ಯಾಖ್ಯಾನ ವನ್ನು ಕೊಟ್ಟು, ದೊಡ್ಡದೊಂದು ಅನುಮಾನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಅಪಾರ ಯಶಸ್ಸು ಪಡೆಯಿತು. ಆ ಕುರಿತಂತೆ ಅನೇಕ ಕೃತಿಗಳನ್ನು ಪ್ರಕಟಿಸಿತು. ಕುರ್ಆನನ್ನು ಕೊಲೆಪಾತಕ ಎಂಬಂತೆ ಕಾಣುತ್ತಿದ್ದ, ಅರ್ಥವಾಗದ ಅರಬಿ ಲಿಪಿ ಮತ್ತು ಭಾಷೆಯನ್ನು ಅನುಮಾನದಿಂದ ನೋಡುತ್ತಿದ್ದ ಈ ದೇಶದ ಮಂದಿಗೆ ಅವರ ಭಾಷೆಯಲ್ಲಿ ಕುರ್ಆನನ್ನು ಅನುವಾದಿಸಿ ಕೊಟ್ಟು ಕಣ್ಣು ತೆರೆಸಿದ್ದೇ ಜಮಾಅತೆ ಇಸ್ಲಾಮೀ. ಆ ವರೆಗೆ ಕುರ್ಆನನ್ನು ರಾಗಬದ್ಧವಾಗಿ ಓದಲು, ಚುಂಬಿಸಿ ಮನೆಯ ಎತ್ತರದ ಜಾಗದಲ್ಲಿಟ್ಟು ಕಾಪಾಡಲು ಬಳಸುತ್ತಿದ್ದ ಮುಸ್ಲಿಮ್ ಸಮೂಹ, ಮೊತ್ತಮೊದಲು ಅದರ ಅರ್ಥವನ್ನು ಓದಿ ರೋಮಾಂಚನಗೊಂಡಿತು. ಪ್ರವಾದಿ ಮತ್ತು ಅವರ ಅನುಯಾಯಿಗಳ ಕುರಿತಂತೆ ನೂರಾರು ಪುಸ್ತಕಗಳನ್ನು ಜಮಾಅತ್ ಸಮಾಜದ ಮುಂದಿಟ್ಟಾಗ ಇಸ್ಲಾಮನ್ನು ಪ್ರೀತಿಸುವ ವರ್ಗವೊಂದು ಬೆಳೆಯತೊಡಗಿತು. ದೇಶಬಾಂಧವರು ಮಾತ್ರವಲ್ಲ, ಸ್ವತಃ ಮುಸ್ಲಿಮರೇ ಆ ವರೆಗೆ ಪ್ರವಾದಿಯವರನ್ನು ನಮಾಝ್, ಉಪವಾಸ ಇತ್ಯಾದಿಗಳನ್ನು ಕಲಿಸಿದ ಓರ್ವ ಧಾರ್ಮಿಕ ನಾಯಕ ಎಂದಷ್ಟೇ ಅಂದುಕೊಂಡಿದ್ದರು. ಆದರೆ ನೆರೆಯವರನ್ನು ಅವರ ಧರ್ಮ ನೋಡದೇ ಪ್ರೀತಿಸಲು ಕಲಿಸಿದ ಪ್ರವಾದಿ, ಬಡ್ಡಿಮುಕ್ತ ಅರ್ಥ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಪ್ರವಾದಿ, ಮದ್ಯಮುಕ್ತ, ಭ್ರಷ್ಟ ಮುಕ್ತ ಆಡಳಿತ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದ ಆಡಳಿತಾಧಿಕಾರಿ.. ಹೀಗೆ ಆರ್ಥಿಕ , ಸಾಮಾಜಿಕ, ರಾಜಕೀಯ ಕ್ಷೇತ್ರದ ಸಮಗ್ರ ನಾಯಕರಾಗಿ ಮೊತ್ತಮೊದಲು ಪ್ರವಾದಿಯನ್ನು ಜಮಾಅತೆ ಇಸ್ಲಾಮೀ ಸಮಾಜಕ್ಕೆ ಪರಿಚಯಿಸಿತು.
ಸಣ್ಣಪುಟ್ಟ ದೌರ್ಬಲ್ಯಗಳಿದ್ದರೂ ಪ್ರವಾದಿಯನ್ನು ಅತ್ಯಂತ ಸಮಗ್ರವಾಗಿ ಅನುಸರಿಸುವ ಮಾದರಿ ತಂಡವೊಂದನ್ನು ಕಟ್ಟಲು ಜಮಾಅತೆಇಸ್ಲಾಮೀ ಹಿಂದ್ ಗೆ ಇವತ್ತು ಸಾಧ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿ.
ಬಡ್ಡಿ ವ್ಯವಹಾರ ಮಾಡುವ, ವರದಕ್ಷಿಣೆ ಪಡೆಯುವ, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಒಬ್ಬನೇ ಒಬ್ಬ ಸದಸ್ಯ ಜಮಾಅತ್ ನಲ್ಲಿಲ್ಲ . ಅದು ಮಾದರಿ ಸಮಾಜವೊಂದನ್ನು ಕಟ್ಟುವ ಗುರಿಯೊಂದಿಗೆ ಸ್ಥಾಪನೆಗೊಂಡಿದೆ. ಮದೀನದ 80% ಯಹೂದಿಯರು 20% ಇದ್ದ ಮುಸ್ಲಿಮರನ್ನು ಪ್ರೀತಿಸಿದ್ದರೆ, ಪ್ರವಾದಿಯನ್ನು ಆಡಳಿತಾಧಿಕಾರಿಯಾಗಿ ಅವರು ನೇಮಿಸಿದ್ದರೆ ಅದು ಈ ದೇಶದಲ್ಲೂ ಸಾಧ್ಯ ಎಂದು ಜಮಾಅತ್ ಬಲವಾಗಿ ನಂಬುತ್ತದೆ. ಅಂದು ಯಹೂದಿಯರು ಮುಸ್ಲಿಮರನ್ನು ಪ್ರೀತಿಸಿದ್ದು ಅವರ ಮಾದರಿ ಬದುಕಿಗಾಗಿ. ಅವರನ್ನು ಆಡಳಿತ ನಡೆಸುವಂತೆ ಆಹ್ವಾನಿಸಿದ್ದು ಭ್ರಷ್ಟ ಮುಕ್ತ ಜೀವನ ಕ್ರಮಕ್ಕಾಗಿ. 20% ಇದ್ದ ಮುಸ್ಲಿಮರು 80% ಇದ್ದ ಯಹೂದಿಯರ ವಿರುದ್ಧ ಅಂದು ಬಾಂಬ್ ಸ್ಫೋಟಿಸಿದ್ದಾಗಲಿ, ಕೋಮುಗಲಭೆ ನಡೆಸಿದ್ದಾಗಲಿ ಒಮ್ಮೆಯೂ ನಡೆದಿಲ್ಲ. ಇದನ್ನೇ ಈ ದೇಶಕ್ಕೆ ಮಾದರಿ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ನಿಜವಾಗಿ ಸಮಾಜವನ್ನು ಪ್ರವಾದಿಯವರು(ಸ) ಸಬಲೀಕರಣಗೊಳಿಸಿದ ವಿಧಾನ ಅದು. ಜಮಾಅತ್ ಆ ವಿಧಾನವನ್ನೇ ಅಳವಡಿಸಿಕೊಂಡಿದೆ. ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಸುಶಿಕ್ಷಿತರು ಮತ್ತು ಪ್ರಬಲರಾದಾಗ ಮಾತ್ರ ಅವರಿಂದ ಆರೋಗ್ಯಪೂರ್ಣ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅದು ನಂಬುತ್ತದೆ.ಆರ್ಥಿಕವಾಗಿ ತೀರಾ ದುರ್ಬಲವಾಗಿರುವ , ಧಾರ್ಮಿಕವಾಗಿ ಅತ್ಯಲ್ಪವಷ್ಟೇ ತಿಳಿದಿರುವ ಮತ್ತು ಸಾಮಾಜಿಕವಾಗಿ ಕುಸಿದು ಹೋಗಿರುವ ಸಮೂಹವೊಂದನ್ನು ಕೇವಲ ರಾಜಕೀಯವಾಗಿ ಮೇಲೆತ್ತಲು ಯತ್ನಿಸುವುದು ಅವೈಜ್ಞಾನಿಕ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ಅಂಥ ಪ್ರಯತ್ನ ಅಂತಿಮವಾಗಿ ಸೃಷ್ಟಿಸುವುದು ಪಾಕಿಸ್ತಾನದ0ತಹ ಸಮಾಜವನ್ನು.ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಬಲವಾಗದ ಪಾಕ್ ಇವತ್ತು ಸ್ಫೋಟ, ಘರ್ಷಣೆಗಳಲ್ಲಷ್ಟೇ ಸುದ್ದಿ ಮಾಡುತ್ತಿದೆ. ಆದ್ದರಿಂದಲೇ ಜಮಾಅತ್ ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಬಡ್ಡಿಮುಕ್ತ ಸಾಲ ನಿಧಿಗಳನ್ನು, ಅಸಂಖ್ಯ ಶಿಕ್ಷಣ ಸಂಸ್ಥೆಗಳನ್ನು, ಧಾರ್ಮಿಕ ಜಾಗೃತಿಯನ್ನು ಒಟ್ಟೊಟ್ಟಿಗೆ ಬೆಳೆಸುತ್ತಾ, ಈ ಎಲ್ಲ ರಂಗಗಳಲ್ಲಿ ಸಬಲರಾಗುವ ಜೊತೆಜೊತೆಗೇ ರಾಜಕೀಯ ರಂಗದಲ್ಲೂ ಪ್ರಜ್ಞಾವಂತರಾಗುವ ಸಮೂಹವೊಂದನ್ನು ಕಟ್ಟಲು ಶ್ರಮಿಸುತ್ತಿದೆ. ಇಸ್ಲಾಮೀ ಬ್ಯಾಂಕನ್ನು ಈ ದೇಶದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಕೇಂದ್ರ ಅರ್ಥ ಮಂತ್ರಿ ಪ್ರಣವ್ ಮುಖರ್ಜಿಯನ್ನು ಭೇಟಿಯಾಗಿದ್ದು, ಅದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವುದು ಕೇವಲ ಜಮಾಅತೆ ಇಸ್ಲಾವಿೂ ಒಂದೇ.
ಅಷ್ಟೇ ಅಲ್ಲ
ಮದೀನಕ್ಕೆ ಹೋಗುವಂತೆ ಪ್ರವಾದಿಯವರನ್ನು ನಿರ್ಭಂದಿಸಿದ, ತರತರದ ಹಿಂಸೆ ಕೊಟ್ಟ ಅದೇ ಮಕ್ಕಾದ ಮಂದಿ ಬರಗಾಲಕ್ಕೆ ತುತ್ತಾದಾಗ ಅವರಿಗೆ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಟ್ಟ ಕರುಣಾಮಯಿ ಪ್ರವಾದಿಯವರ ನಿಲುವನ್ನು ಮಾದರಿಯಾಗಿಟ್ಟುಕೊಂಡು ಜಮಾಅತ್ ಈ ದೇಶದಲ್ಲಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದು ಪ್ರವಾದಿಯನ್ನು ಎಲ್ಲರ ಪ್ರವಾದಿ ಎಂದು ಪರಿಚಯಿಸುವಂತೆ, ಸೇವೆಯನ್ನು ಕೂಡಾ ಎಲ್ಲರ ಸೇವೆ ಎಂದೇ ಪರಿಚಯಿಸುತ್ತದೆ. ವಿಷನ್ 2016 ಅನ್ನುವ 5000 ಕೋಟಿ ರೂಪಾಯಿಯ ದೊಡ್ಡದೊಂದು ಯೋಜನೆಯ ಅಂಗವಾಗಿ ದೇಶದಾದ್ಯಂತ ನಿರ್ಗತಿಕರಿಗೆ ಮನೆ ಕಟ್ಟಿ ಕೊಡುತ್ತಿದೆ. ಶಿಕ್ಷಣಕ್ಕೆ, ಉದ್ಯೋಗಕ್ಕೆ ನೆರವು ನೀಡುತ್ತಿದೆ.ಗುಜರಾತ್ ನ ಗುಲ್ಬರ್ಗ್ ಸೊಸೈಟಿಯಲ್ಲಿ ಮುಸ್ಲಿಮರ ಮನೆಗಳ ಜೊತೆ ಉರಿದು ಭಸ್ಮವಾದ ಮುಸ್ಲಿಮೇತರರ ಮನೆಗಳನ್ನೂ ಮತ್ತೆ ಕಟ್ಟಿಕೊಟ್ಟಿದ್ದರೆ ಅದಕ್ಕೆ ಜಮಾ ಅತೆ ಇಸ್ಲಾಮಿಗೆ ಮಾದರಿಯಾಗಿರುವುದು ಪ್ರವಾದಿ ಮುಹಮ್ಮದ್(ಸ). ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂತ್ ವಿಂಗ್ 100 ಮನೆಗಳಿಗೆ ವಾರ್ಷಿಕ 13 ಲಕ್ಷ ರೂಪಾಯಿಗಳ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳೂ ನೀಡುತ್ತಿದೆ. ನಿಜವಾಗಿ, ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಶಾಂತಿಯ ವಾತಾವರಣ ಇದ್ದರಷ್ಟೇ ಅವರಿಗೆ ಅಲ್ಲಾಹನ ಧರ್ಮವನ್ನು , ಅವನ ಪ್ರವಾದಿಯನ್ನು ಪರಿಚಯಿಸಲು ಸಾಧ್ಯ ಎಂಬುದು ಜಮಾಅತ್ ನ ನಿಲುವು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲಿ ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್ ಮತ್ತು ಮುಹಮ್ಮದು ರ್ರಸೂಲುಲ್ಲಾಹ್ ಎಂಬೆರಡು ಪದಗಳನ್ನು ಒಪ್ಪಂದದ ಪತ್ರದಲ್ಲಿ ಬರೆಯುವುದನ್ನು ವಿರೋಧಿಗಳು ನಿರಾಕರಿಸಿದಾಗ ಪ್ರವಾದಿ ಅವೆರಡೂ ಪದಗಳನ್ನು ಕಾಗದದಿಂದ ಅಳಿಸಿ ಹಾಕಿದ್ದರು. ನಿಜವಾಗಿ ಆ ಎರಡು ಪದಗಳು ಭೂಮಿಯಲ್ಲಿ ನೆಲೆ ನಿಲ್ಲಿಸುವುದಕ್ಕಾಗಿಯೇ ಆಗಮಿಸಿದ್ದ ಪ್ರವಾದಿ, ಶಾಂತಿಯ ವಾತಾವರಣದ ನಿರ್ಮಾಣಕ್ಕಾಗಿ ಒಂದು ಹಂತದ ವರೆಗೆ ಅದರಲ್ಲಿ ರಾಜಿಯಾಗಲು ಮುಂದಾದರು. ಆ ರಾಜಿ ಆ ಬಳಿಕ ಅಭೂತ ಪೂರ್ವ ಬದಲಾವಣೆಗೆ ನಾಂದಿ ಹಾಡಿತು. ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ವಿರೋಧಿಗಳಿಗೆ ಶಾಂತಿಯ ವಾತಾವರಣ ಅವಕಾಶ ಒದಗಿಸಿತು. ಇದನ್ನೇ ಅಲ್ಲಾಹನು ಸ್ಪಷ್ಟವಾದ ವಿಜಯ ಎಂದು ಸಾರಿದ್ದು. (48/1) ಜಮಾಅತೆ ಇಸ್ಲಾಮೀ ಹಿಂದ್ ಇಂಥದ್ದೊಂದು ವಾತಾವರಣದಲ್ಲಿ ಕೆಲಸ ಮಾಡಲು ಬಯಸುತ್ತದೆ. ಇಸ್ಲಾಮನ್ನು ಪರಿಚಯಿಸಲು, ಮದೀನದ ಯಹೂದಿ ಸಮೂಹದಂಥ ಇಸ್ಲಾಮ್ ಪ್ರೇಮಿ ಸಮಾಜ ಇಲ್ಲಿ ಬೆಳೆದು ಬರಲು ಬಿಗುವಿನ ವಾತಾವರಣಕ್ಕಿಂತ ಶಾಂತ ವಾತಾವರಣ ಯೋಗ್ಯ ಎಂದು ಅದು ನಂಬುತ್ತದೆ. ಆ ಮಾದರಿಯನ್ನು ಎದುರಿಟ್ಟುಕೊಂಡೇ ಅದು ಯೋಜನೆಯನ್ನು ರೂಪಿಸುತ್ತದೆ.
ಸ್ವರ್ಗವನ್ನೋ ನರಕವನ್ನೋ ತೀರ್ಮಾನಿಸದ , ಕರ್ಮ ಪತ್ರಗಳಲ್ಲಿ ಅಂಥ ಮಹತ್ತರ ಬದಲಾವಣೆಗೆ ಕಾರಣವಾಗದ ಆಂಶಿಕ ಭಿನ್ನಾಭಿ ಪ್ರಾಯಗಳನ್ನು ತುಸು ಬದಿಗಿಟ್ಟು ನೋಡಿದರೆ, ಜಮಾಅತ್ ಏನೆಂದು, ಅದು ಯಾರನ್ನು ಮಾದರಿಯಾಗಿ ಪ್ರತಿಪಾದಿಸುತ್ತದೆಯೆಂಬುದು ನಿಮಗೂ ಗೊತ್ತಾದೀತು. ತಲೆಯನ್ನೇ ಹಾರಿಸುವ, ಕೈ-ಕಾಲುಗಳನ್ನೇ ಕತ್ತರಿಸುವ ಘೋಷಣೆಗಳು ಮೊಳಗುತ್ತಿರುವ ಸಮಾಜವೊಂದರಲ್ಲಿ ಟೊಪ್ಪಿ, ಕೈ, ಕಾಲುಗಳು ಚರ್ಚೆಯ , ಜಗಳದ ವಸ್ತುವಾಗಬಾರದೆಂಬುದೇ ಜಮಾಅತ್ ನ ನಿಲುವು. ಕಳೆದ 60 ವರ್ಷಗಳಲ್ಲಿ ಅದು ಪ್ರತಿಪಾದಿಸಿದ್ದೂ ಇದನ್ನೇ.
ಮುಂದಿನ ತೀರ್ಮಾನ ನಿಮ್ಮದು..