Wednesday, March 21, 2018

ಸಿಂಧುವಾದ ಮದುವೆಯಲ್ಲಿ ಕೆಲವು ಅಸಿಂಧು ಪ್ರಶ್ನೆಗಳು..

ಮೂರು ಕಾರಣಗಳಿಗಾಗಿ ಒಂದು ವಿವಾಹವನ್ನು ನ್ಯಾಯಾಲಯ ರದ್ದುಗೊಳಿಸಬಹುದು.
1. ವಿವಾಹಿತರಲ್ಲಿ ಹೆಣ್ಣು ಅಥವಾ ಗಂಡು ಅಪ್ರಾಪ್ತ ವಯಸ್ಸಿನವರಾಗಿದ್ದರೆ ಆ ಮದುವೆಯನ್ನು ರದ್ದುಗೊಳಿಸುವ ಹಕ್ಕು ನ್ಯಾಯಾಲಯಕ್ಕಿದೆ. ಆ ವಿವಾಹದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹೆತ್ತವರು ಅಥವಾ ಪೋಷಕರು ನ್ಯಾಯಾಲಯವನ್ನು ಸಮೀಪಿಸಿದರೆ ಅದನ್ನು ಗಂಭೀರವಾಗಿ ಕೋರ್ಟು ಪರಿಗಣಿಸಬಹುದು.
2. ವಿವಾಹಿತರಾದ ಇಬ್ಬರಲ್ಲಿ ಒಬ್ಬರು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಆ ವಿವಾಹವನ್ನು ಅನೂರ್ಜಿತಗೊಳಿಸ ಬೇಕೆಂದು ಸಂಬಂಧಪಟ್ಟವರು ಕೋರ್ಟ್‍ಗೆ ಮನವಿ ಮಾಡಿದರೆ ಅದನ್ನು ಮಾನ್ಯ ಮಾಡುವ ಅವಕಾಶ ನ್ಯಾಯಾಲಯಕ್ಕಿದೆ.
3. ವಿವಾಹಿತರಲ್ಲಿ ಓರ್ವರು ಆ ಮೊದಲೇ ಮದುವೆ ಯಾಗಿರುವುದು ಮತ್ತು ಕಾನೂನು ಪ್ರಕಾರ ಆ ಮದುವೆ ಯಿಂದ ವಿಚ್ಛೇದನ ಪಡಕೊಳ್ಳದಿರುವುದು ಅಥವಾ ಒಂದ ಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಕಾನೂನಾತ್ಮಕ ವಾಗಿ ಅವಕಾಶ ಇಲ್ಲದ ¸ ಸಮುದಾಯದವರಾಗಿರುವುದು. ಇಂಥ ಸ್ಥಿತಿಯಲ್ಲಿ ಮದುವೆಯ ರದ್ಧತಿಯನ್ನು ಕೋರಿ ನ್ಯಾಯಾಲಯವನ್ನು ಸಮೀಪಿಸಿದರೆ ಅದು ಮಾನ್ಯವಾಗುವು ದಕ್ಕೆ ಅವಕಾಶ ಇದೆ.
     ಆದರೆ ಕೇರಳದ ಹಾದಿಯ, ಈ ಮೇಲಿನ ಮೂರೂ ಕಾರಣಗಳಲ್ಲೂ ಸುಲಭವಾಗಿ ತೇರ್ಗಡೆ ಹೊಂದುತ್ತಾರೆ. ಆಕೆ ಅಪ್ರಾಪ್ತೆಯಲ್ಲ. 2016 ಡಿಸೆಂಬರ್‍ನಲ್ಲಿ ಕೇರಳ ಹೈಕೋರ್ಟ್‍ನ ನ್ಯಾಯಾಧೀಶರಾದ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರು ಹಾದಿಯ-ಶಫಿನ್ ಜಹಾನ್ ವಿವಾಹವನ್ನು ರದ್ದುಗೊಳಿಸುವಾಗ ಹಾದಿಯಾರಿಗೆ 23 ವರ್ಷ ಮತ್ತು ಶಫಿನ್‍ಗೆ 27 ವರ್ಷ. ಆದ್ದರಿಂದ, ಅವರ ವಿವಾಹ ರದ್ದುಗೊಳಿಸುವಂತಿಲ್ಲ. ಹಾದಿಯಾರ ತಂದೆ ಅಶೋಕನ್ ಮಾಡಿಕೊಂಡ ಮನವಿಯನ್ನು ಪುರಸ್ಕರಿಸ ಬೇಕಾದ ಅಗತ್ಯವೂ ಇರಲಿಲ್ಲ. ಅಲ್ಲದೇ, ವಿವಾಹ ರದ್ಧತಿ ಕೋರಿ ಆರಂಭದಲ್ಲಿ ಅಶೋಕನ್ ಅರ್ಜಿ ಸಲ್ಲಿಸಿಯೇ ಇರಲಿಲ್ಲ. ಮಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಕೋರಿ ಹೇಬಿಯ ಸ್ ಕಾರ್ಪಸ್ ಅರ್ಜಿಯನ್ನಷ್ಟೇ ಸಲ್ಲಿಸಿದ್ದರು.

ಎರಡನೇ ಮತ್ತು ಮೂರನೇ ಕಾರಣಗಳೂ ಹಾದಿಯಾಳ ಮದುವೆಯನ್ನು ರದ್ದುಗೊಳಿಸುವುದಕ್ಕೆ ಯಾವ ನೆಲೆಯಲ್ಲೂ ಆಧಾರವಾಗುವುದಿಲ್ಲ. ಹಾದಿಯ ಇತರೆಲ್ಲರಂತೆ ಸಹಜವಾಗಿರುವ ಯುವತಿ. ಮಾನಸಿಕವಾಗಿ ಸಮರ್ಥೆ. ವಿದ್ಯಾರ್ಥಿನಿ. ನ್ಯಾಯಾಲಯ ಕೇಳಿದ ಪ್ರತಿ ಪ್ರಶ್ನೆಗಳಿಗೂ ಅತ್ಯಂತ ಸಮಯೋಚಿತ ಉತ್ತರಗಳನ್ನೇ ನೀಡಿದ್ದರು. ವಿವಾಹವನ್ನು ರದ್ದುಗೊಳಿಸುವುದಕ್ಕೆ ಪೂರಕವಾಗುವ ಯಾವ ಮಾನಸಿಕ ದೌರ್ಬಲ್ಯವನ್ನು ವ ಆಕೆ ಪ್ರದರ್ಶಿಸಿಲ್ಲ ಅಥವಾ ಆಕೆಯ ತಂದೆ ಅಶೋಕನ್ ಆ ಕುರಿತಾದ ವೈದ್ಯಕೀಯ ದಾಖಲೆ ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇನ್ನು, ಮೂರನೇ ಕಾರಣ ವಂತೂ ಇವರಿಬ್ಬರಿಗೆ ಹೊಂದಿಕೆಯಾಗುವುದೇ ಇಲ್ಲ. ಯಾಕೆಂದರೆ, ಶಫಿನ್‍ಗೆ ಈ ಮೊದಲು ವಿವಾಹವಾಗಿಲ್ಲ ಅಥವಾ ಆ ಬಗ್ಗೆ ಯಾವ ದೂರನ್ನೂ ಯಾರೂ ಕೋರ್ಟಿಗೆ ಸಲ್ಲಿಸಿಲ್ಲ. ಹಾದಿಯಾಳಿಗೆ ಆ ಬಗ್ಗೆ ದೂರುಗಳಿಲ್ಲ. ಅಶೋಕನ್‍ಗೂ ಇಲ್ಲ. ಆದ್ದರಿಂದ ಈ ಮೂರೂ ಕಾರಣಗಳಲ್ಲಿ ಹಾದಿಯಾ-ಶಫಿನ್ ವಿವಾಹವನ್ನು ರದ್ದುಗೊಳಿಸುವುದಕ್ಕೆ ಏನೇನೂ ಇಲ್ಲ. ಆದ್ದರಿಂದಲೇ, 2016 ಡಿಸೆಂಬರ್‍ನಲ್ಲಿ ಈ ಮದುವೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ಕೊಟ್ಟ ಕಾರಣಗಳು ಬೇರೆಯದೇ ಆಗಿದ್ದುವು.
1. ಮತಾಂತರ ಕುರಿತಾದ ಸಂದೇಹ
2. ಶಫಿನ್ ಜಹಾನ್ ಹಿನ್ನೆಲೆಯ ಬಗ್ಗೆ ಪ್ರಶ್ನೆಗಳು
3. ತಂದೆ ಅಥವಾ ಪೋಷಕರ ಅನುಪಸ್ಥಿತಿಯಲ್ಲಿ ವಿವಾಹ ನಡೆದಿರುವುದು.
4. ಹಾದಿಯಾರ ಉತ್ತಮ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತಳೆಯುವುದು.
ನಿಜವಾಗಿ ಈ ನಾಲ್ಕೂ ಕಾರಣಗಳು ಒಂದು ವಿವಾಹವನ್ನು ರದ್ದುಪಡಿಸುವುದಕ್ಕೆ ಕಾರಣವೇ ಆಗುವುದಿಲ್ಲ. ಮದುವೆಯಾಗಿರುವ ಇಬ್ಬರೂ ಪ್ರೌಢರಾಗಿದ್ದರೆ, ಮಾನಸಿಕ ಸಮಸ್ಯೆ ಇಲ್ಲದಿದ್ದರೆ ಮತ್ತು ಆ ಮೊದಲೇ ಮದುವೆಯಾಗಿದ್ದು ಅದನ್ನು ಅಡಗಿಸಿಟ್ಟಿದ್ದರಷ್ಟೇ ವಿವಾಹ ರದ್ಧತಿಗೆ ಕೋರ್ಟು ಆದೇಶ ನೀಡಬಹುದು. ಶಫಿನ್ ಜಹಾನ್‍ನ ಹಿನ್ನೆಲೆ ಏನು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಗಳಿವೆಯೇ, ಭಯೋತ್ಪಾದಕ ಚಟುವಟಿಕೆಯಲ್ಲಿ ಅವರು ತೊಡಗಿಸಿ ಕೊಂಡಿದ್ದಾರೆಯೇ, ಹಾದಿಯಾಳನ್ನು ವಿದೇಶಕ್ಕೆ ಸಾಗಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆಯೇ ಇತ್ಯಾದಿಗಳಿಗೂ ಮದುವೆಗೂ ಸಂಬಂಧ ಕಲ್ಪಿಸುವುದಕ್ಕೆ ಸಾಧ್ಯವೇ ಇಲ್ಲ. ವಿವಾಹವು ಊರ್ಜಿತ-ಅನೂರ್ಜಿತಗೊಳ್ಳುವುದು ವಿವಾಹಕ್ಕೆ ಸಂ ಬಂಧಿಸಿದ ಕಾನೂನು ಕಟ್ಟಲೆಗಳ ಆಧಾರದಲ್ಲಿ ಮಾತ್ರ. ಹಾದಿಯಾಳಂತೂ ತಾನು ಮತಾಂತರವಾಗಿರುವ ಬಗ್ಗೆ ಪೆÇಲೀಸರ ಮುಂದೆ ವಿವರವಾಗಿ ಹೇಳಿಕೊಂಡಿದ್ದರು. ಅಲ್ಲದೇ, ಹೈಕೋರ್ಟ್‍ಗೆ ಹಾಜರುಪಡಿಸುವ ವೇಳೆ, ಮಾಧ್ಯಮದವರನ್ನು ಕೂಗಿ ಕರೆದು, ‘ನಾನು ಮುಸ್ಲಿಮ್. ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ. ನನ್ನ ಪತಿ ಶಫಿನ್ ಜಹಾನ್..’ ಎಂದು ಕೂಗಿ ಹೇಳಿದ್ದರು.
ತಮಿಳುನಾಡಿನ ¸ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಿನ ವಿವರಗಳನ್ನು ಆಕೆ ಕೋರ್ಟ್ ಮುಂದೆ ಮಂಡಿಸಿದ್ದರು. ಕಾಲೇಜಿನ ಹತ್ತಿರವೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ವಿದ್ಯಾರ್ಥಿನಿಯರೊಂದಿಗೆಬದುಕುತ್ತಿದ್ದಗ ಫಸೀನ ಮತ್ತು ಜಸೀನ ಎಂಬಿಬ್ಬರ ಬದುಕು ತನ್ನನ್ನು ಆಕರ್ಷಿಸಿದ್ದು ಮತ್ತು ಅವರ ನಮಾಝïನಿಂದ ಪ್ರಭಾವಿತವಾದದ್ದು, ಬಳಿಕ ಇಸ್ಲಾಮ್‍ಗೆ ಸಂಬಂಧಿಸಿದ ವಿವಿಧ ಪುಸ್ತಕ ಮತ್ತು ವೀಡಿಯೋಗಳನ್ನು ವೀಕ್ಷಿಸತೊಡಗಿದ್ದು ಇತ್ಯಾದಿಗಳೆಲ್ಲವನ್ನೂ ಆಕೆ ಕೋರ್ಟ್ ಮುಂದೆ ಯಾವ ಅಳೂಕೂ ಇಲ್ಲದೇ ವಿವರಿಸಿದ್ದರು. ಜೊತೆಗೇ, 2015ರಲ್ಲಿ ತನ್ನ ದೊಡ್ಡಪ್ಪ ಮೃತಪಟ್ಟಾಗ ಮನೆಯಲ್ಲಿ ನಡೆದ ಪ್ರಸಂಗವನ್ನೂ ಕೋರ್ಟ್‍ನ ಮುಂದೆ ಬಿಚ್ಚಿಟ್ಟಿದ್ದರು. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಪೂಜಾ ಕಾರ್ಯದಲ್ಲಿ ಭಾಗವಹಿಸಲು ತಾನು ನಿರಾಕರಿಸಿದ್ದು ಮತ್ತು ಆ ವೇಳೆ ತಂದೆ ಅಶೋಕನ್‍ರಿಗೆ ತಾನು ಮುಸ್ಲಿಮ್ ಆಗಿರುವುದನ್ನು ತಿಳಿಸಿರುವುದನ್ನೂ ಆಕೆ ವಿವರಿಸಿದ್ದರು. ಬಹುಶಃ, ಬಲವಂತದ ಮತಾಂತರವಾಗಿದ್ದರೆ ಹಾದಿಯಾ ಇಷ್ಟೊಂದು ತೀವ್ರವಾಗಿ ಆಚಾರ-ವಿಚಾರಗಳನ್ನು – ಅದೂ ಮನೆಯಲ್ಲಿ – ಪಾಲಿಸುವುದಕ್ಕೆ ಮುಂದಾಗುತ್ತಲೇ ಇರಲಿಲ್ಲ. ಆಕೆಯ ಮನಪರಿವರ್ತನೆ ಗೆಳತಿಯರ ನಡುವಿನ ಸಂಬಂಧದಿಂದ ಆಗಿತ್ತೇ ಹೊರತು ಆ ಸಮಯದಲ್ಲಿ ಅವರ ಬದುಕಿನಲ್ಲಿ ಶಫಿನ್ ಜಹಾನ್‍ರ ಪ್ರವೇಶ ಆಗಿರಲೂ ಇಲ್ಲ. ತನ್ನ ಮತಾಂತರದ ಕುರಿತಂತೆ ಆಕೆ ಕೋರ್ಟ್‍ಗೆ ಅಫಿದಾವಿತನ್ನೂ ಸಲ್ಲಿಸಿದ್ದರು. ಆದ್ದರಿಂದ ಬಲವಂತದ ಮತಾಂತರ ಎಂಬ ಸಂದೇಹ ಪಡುವುದಕ್ಕೆ ಕಾರಣಗಳೇ ಇದ್ದಿರಲಿಲ್ಲ. ಇನ್ನು, ಬಲವಂತದಿಂದ ಮತಾಂತವಾಗಿದ್ದರೂ ಮದುವೆಯನ್ನು ರದ್ದು ಪಡಿಸುವುದಕ್ಕೆ ಅದು ಕಾರಣ ಆಗುವುದಕ್ಕೂ ಸಾಧ್ಯವಿರಲಿಲ್ಲ. ಪ್ರೌಢ ಹೆಣ್ಣು-ಗಂಡುಗಳಿಬ್ಬರು ಹೆತ್ತವರ ಉಪಸ್ಥಿತಿ ಇದ್ದರೂ ಇಲ್ಲದಿದ್ದರೂ ವಿವಾಹ ಮಾಡಿಕೊಳ್ಳಬಹುದು. ಅದು ವೈಯಕ್ತಿಕ ಸ್ವಾತಂತ್ರ್ಯದ ಪರಿಧಿಯೊಳಗೆ ಬರುವುದರಿಂದ ಅದು ಪ್ರಶ್ನಾರ್ಹ ವಾಗುವುದಿಲ್ಲ. ಆದರೂ ಕೇರಳ ಹೈಕೋರ್ಟ್ ಈ ಮದುವೆಯನ್ನು ರದ್ದುಪಡಿಸುತ್ತಾ ಹೀಗೆ ಸಮಜಾಯಿಷಿಕೆ ನೀಡಿತು-ಹಾದಿಯಾ ಪ್ರಬುದ್ಧಳಾಗಿರಬಹುದು. ಆದರೆ 20ರ ಹರೆಯ ವೆಂಬುದು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಸಂಶಯವಿದೆ. ಭಾರತೀಯ ಸಂಸ್ಕøತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ…’

ನಿಜವಾಗಿ, ನ್ಯಾಯಾಂಗವೆಂಬುದು ಕಾನೂನು ಆಧಾರಿತ ವಾಗಿ ತೀರ್ಪು ನೀಡುವ ಸಂಸ್ಥೆಯೇ ಹೊರತು ಭಾವನೆಯ ಆಧಾರದಲ್ಲಲ್ಲ. ತೀರ್ಪಿನ ಜೊತೆ ಭಾವನೆ ಬೆರೆತು ಹೋದರೆ ಅದು ಮಾಡಬಾರದ ಹಾನಿಯನ್ನು ಮಾಡಿ ಬಿಡಬಲ್ಲುದು. ಈ ತೀರ್ಪಿನ ಕುರಿತಂತೆ ಲಭ್ಯವಾದ ಪ್ರತಿಕ್ರಿಯೆಗಳಲ್ಲಿ ಈ ಭಾವನಾತ್ಮಕ ಅಂಶವೂ ಮುಖ್ಯವಾಗಿತ್ತು. ಆದ್ದರಿಂದಲೇ ಈ ತೀರ್ಪಿನ ವಿರುದ್ಧ ಶಫಿನ್ ಜಹಾನ್ 2017ರಲ್ಲಿ ¸ ಸುಪ್ರೀಮ್ ಕೋರ್ಟ್‍ನ ಬಾಗಿಲು ತಟ್ಟಿದರು. ವಿಶೇಷ ಏನೆಂದರೆ, ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಚಂದ್ರಚೂಡ್ ಅವರು ಮದುವೆ ರದ್ಧತಿಯ ಮೇಲೆ ತೀರ್ಪು ನೀಡುವ ಬದಲು ಕೇರಳದ ಮತಾಂತರ ಪ್ರಕರಣಗಳ ಕುರಿತು ತನಿಖಿಸುವಂತೆ ರಾಷ್ಟ್ರೀಯ ತನಿಖಾ ದಳ(ಓIಂ)ಕ್ಕೆ ಆದೇಶಿಸಿದರು. ಅಂದಹಾಗೆ, ಕೋರ್ಟಿನ ಮುಂದೆ ಇದ್ದುದು ಪ್ರೌಢ ವ್ಯಕ್ತಿಗಳ ನಡುವಿನ ಮದುವೆಯನ್ನು ಅನೂರ್ಜಿತ ಗೊಳಿಸಿದ್ದು ಸರಿಯೇ ಎಂಬ ಪ್ರಶ್ನೆಯಾಗಿತ್ತು. ಅವರಿಬ್ಬರ ಹಿನ್ನೆಲೆ-ಮುನ್ನೆಲೆ ಏನಿದ್ದರೂ ಅದನ್ನು ಇದಕ್ಕೆ ತಳುಕು ಹಾಕಬೇಕಾಗಿರಲಿಲ್ಲ. ಅದು ಬೇರೆಯದೇ ಆದ ತನಿಖೆಗೆ ಅರ್ಹವಾದದ್ದು. ಅದನ್ನು ಮದುವೆಯ ಸಿಂಧುತ್ವಕ್ಕೆ ಜೋಡಿಸುವುದು ಅಪಾಯಕಾರಿ ಮಾದರಿಯೊಂದಕ್ಕೆ ಆರಂಭ ಕೊಟ್ಟಂತೆ. ಆದ್ದರಿಂದ ಈ ಆದೇಶವು ಅಚ್ಚರಿಯ ಬೆಳವಣಿಗೆಯೂ ಆಗಿತ್ತು. ಆದರೆ ಬಳಿಕ ¸ ಸುಪ್ರೀಮ್ ಕೋರ್ಟ್ ಇಡೀ ಪ್ರಕರಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿತು. ಹಾದಿಯಾಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ಆದೇಶಿಸಿತು. ಹಾದಿಯಾಳ ಮಾತನ್ನು ಆಲಿಸಿದ ಮುಖ್ಯ ನ್ಯಾಯಾಧೀಶರಿಗೆ ಪ್ರಕರಣದ ಆಳ-ಅಗಲ ಮನವರಿಕೆಯಾಯಿತು. ತಂದೆಯ ಸುಪರ್ದಿಯಿಂದ ಹಾದಿಯಾಳನ್ನು ಹೊರತಂದು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಿಗೆ ಆಕೆಯ ಹೊಣೆಯನ್ನು ವಹಿಸಿತು. ಇದೀಗ ಆ ಮದುವೆಯನ್ನು ಸಿಂಧುಗೊಳಿಸಿ ಪ್ರಕರಣಕ್ಕೆ ಒಂದು ಹಂತದ ತೆರೆಯನ್ನೆಳೆದಿದೆ.
      ನಿಜವಾಗಿ, ಕೋರ್ಟಿನ ಹೊರಗಡೆಯ ಗದ್ದಲಗಳು ಕೋರ್ಟ್‍ನ ಒಳಗಡೆಯ ವಾತಾವರಣದ ಮೇಲೆ ಎಷ್ಟು ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಹಾದಿಯಾ-ಶಫಿನ್ ವಿವಾಹ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ. ಲವ್ ಜಿಹಾದ್, ಭಯೋತ್ಪಾದನೆ, ಮತಾಂತರ, ಸಿರಿಯಕ್ಕೆ ಹೆಣ್ಣು ಮಕ್ಕಳ ಸಾಗಾಟ.. ಇತ್ಯಾದಿ ಚರ್ಚೆಗಳು ಕೇರಳ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬಹು ಜೋರಾಗಿ ನಡೆಯುತ್ತಿದ್ದ ಸಮಯದಲ್ಲೇ ಹಾದಿಯಾ ಪ್ರಕರಣ ಕೋರ್ಟ್ ಮೆಟ್ಟಲನ್ನೇರಿತ್ತು. ಲವ್‍ಜಿಹಾದ್ ಬಗ್ಗೆ ಒಂದು ಬಗೆಯ ಕಲ್ಪಿತ ಮತ್ತು ಪ್ರಚೋದನಕಾರಿ ಸುಳ್ಳುಗಳು ಎಗ್ಗಿಲ್ಲದೆ ಹರಿದಾಡುತ್ತಿದ್ದ ಸಮಯವದು. ಬಹುಶಃ, ಈ ವಾತಾವರಣದ ಪ್ರಭಾವ ನ್ಯಾಯಾಧೀಶರ ಮೇಲೂ ಆಗಿರಬಹುದೇ ಎಂಬ ಅನುಮಾನ ಹಾದಿಯ ಪ್ರಕರಣದಿಂದ ಹಲವು ಬಾರಿ ಕಾಡಿದೆ. ಮಾಧ್ಯಮ ಚರ್ಚೆಯ ಪ್ರಭಾವವು ನ್ಯಾಯಾಲಯಗಳ ಮೇಲೂ ಬೀರುತ್ತದೆಯೇ? ಅಲ್ಲಿನ ವಿಚಾರಣೆ-ತೀರ್ಪುಗಳಲ್ಲಿ ಮಾಧ್ಯಮ ಚರ್ಚೆಯು ಪಾತ್ರ ವಹಿಸುತ್ತವೆಯೇ? ನ್ಯಾಯಾಧೀಶರೂ ಮನುಷ್ಯರೇ ತಾನೇ. ಪತ್ನಿ-ಮಕ್ಕಳಿರುವ ಮತ್ತು ಮಾಧ್ಯಮ ಸುದ್ದಿ ಯನ್ನೂ, ವರದಿ-ಚರ್ಚೆಯನ್ನೂ ವೀಕ್ಷಿಸಿಯೇ ಇರುವ ಅವರ ತೀರ್ಪುಗಳುನ್ನು ಕೆಲವೊಮ್ಮೆ ಅವು ನಿಯಂತ್ರಿಸಬಹುದೇ?    
      ಹಾದಿಯಾ-ಶಫಿನ್ ಪ್ರಕರಣದ ಮೂಲಕ ಮುಂಚೂಣಿಗೆ ಬಂದಿರುವ ಈ ಪ್ರಶ್ನೆ ಅಸಂಗತವಲ್ಲ.

ಶ್ರೇಯಸಾಗರ್ ಬಿಟ್ಟು ಹೋದ ಪ್ರಶ್ನೆ..

      ಸುಖ ಮರಣಕ್ಕೆ (Euthanasia) ನಿಷೇಧ ಇರುವ ಮತ್ತು ಆತ್ಮಹತ್ಯೆಯು ಅಪರಾಧವಾಗಿರುವ ದೇಶವೊಂದರಲ್ಲಿ ಜೈನ ಧರ್ಮೀಯರ ಸಲ್ಲೇಖನಾ ವ್ರತದ ಸ್ಥಾನಮಾನವೇನು? ಅದು ಎಷ್ಟು ಸಂವಿಧಾನ ಬದ್ಧ? ಸಾವನ್ನು ಆಗ್ರಹಿಸಿ ವ್ಯಕ್ತಿಯೋರ್ವ ಅನ್ನಾಹಾರ ಮತ್ತು ನೀರು ತ್ಯಜಿಸುವುದನ್ನು ಹಾಗೂ ಸಾವಿಗೆ ತುತ್ತಾಗುವುದನ್ನು ಧಾರ್ಮಿಕ ಕ್ರಿಯೆ ಎಂಬ ಕಾರಣಕ್ಕಾಗಿ ಅನುಮತಿಸಬಹುದೇ? ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಗಳಡಿಯಲ್ಲಿ ಈ ಕ್ರಿಯೆ ಒಳಪಡುತ್ತದೆಯೇ ಅಥವಾ ಭಾರತೀಯ ದಂಡಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ಎಂಬ ಪರಿಧಿಯೊಳಗೆ ಸೇರಿಕೊಳ್ಳುತ್ತದೆಯೇ? ಆತ್ಮಹತ್ಯೆ ಮತ್ತು ಸಲ್ಲೇಖನಾ ಎರಡೂ ಸಮಾನವೇ? ಪಕ್ಕಾ ಧಾರ್ಮಿಕ ಕ್ರಿಯೆಯೊಂದನ್ನು ಆತ್ಮಹತ್ಯೆಯೊಂದಿಗೆ ಜೋಡಿಸಿ ನೋಡುವುದು ಎಷ್ಟು ಸರಿ?..
    ಈ ಬಗೆಯ ಜಿಜ್ಞಾಸೆಯೊಂದು 2006 ಸೆಪ್ಟೆಂಬರ್‍ನಲ್ಲಿ ಈ ದೇಶದಲ್ಲಿ ಕೆಲವರಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಕಾರಣ 61 ವರ್ಷದ ವಿಮಲಾ ದೇವಿ ಭನ್ಸಾಲಿ ಎಂಬ ಮಹಿಳೆ. ಜೈನ ಧರ್ಮೀಯರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯ ರಾಜಸ್ತಾನ. ಈ ದೇಶದ ಜನಸಂಖ್ಯೆಯಲ್ಲಿ ಜೈನ ಧರ್ಮೀಯರು ಕೇವಲ 0.4%ರಷ್ಟಿರುವರಾದರೂ ಆರ್ಥಿಕವಾಗಿ ಅವರು ತುಂಬಾ ಬಲಾಢ್ಯರು. ರಾಜಸ್ತಾನದ ಉನ್ನತ ಸರಕಾರಿ ಅಧಿಕಾರಿಗಳಲ್ಲಿ ಜೈನರೇ ಹೆಚ್ಚಿದ್ದಾರೆ. ವಿಮಲಾದೇವಿ ರಾಜಸ್ತಾನದವರು. ಜೈನ ಧರ್ಮಾನು ಯಾಯಿ. ಲಿವರ್ ಮತ್ತು ಬ್ರೈನ್ ಕ್ಯಾನ್ಸರ್‍ ಗೆ  ತುತ್ತಾಗಿರುವುದು ಖಚಿತವಾದ ಬಳಿಕ ಆಕೆ 2006 ಸೆಪ್ಟೆಂಬರ್‍ನಲ್ಲಿ ಸಲ್ಲೇಖನಾ ವ್ರತ ಕೈಗೊಂಡರು. ಸಾವನ್ನು ಆಗ್ರಹಿಸಿಕೊಂಡು ಮಾಡುವ ಉಪವಾಸ ಇದು. ಆರಂಭದಲ್ಲಿ ಅನ್ನಾಹಾರವನ್ನು ತ್ಯಜಿಸುವುದು ಮತ್ತು ಕೊನೆಗೆ ನೀರನ್ನೂ ತ್ಯಜಿಸುತ್ತಾ ಸಾವಿಗೀಡಾಗುವುದು. ಜೈನ ಧರ್ಮೀಯರಲ್ಲಿ ಸಲ್ಲೇಖನಾ ವ್ರತ ಸಹಜವಾಗಿದ್ದರೂ ವಿಮಲಾ ದೇವಿ ಭನ್ಸಾಲಿಯ ನಿರ್ಧಾರವು ಅಸಹಜವಾದ ಜಿಜ್ಞಾಸೆಯೊಂದಕ್ಕೆ ಚಾಲನೆಯನ್ನು ನೀಡಿತು. ನಿಖಿಲ್ ಸೋನಿ ಎಂಬ ನ್ಯಾಯವಾದಿಯೋರ್ವರು ಈ ಸಲ್ಲೇಖನಾ ವ್ರತದ ವಿರುದ್ಧ ರಾಜಸ್ತಾನದ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಮೊಕದ್ದಮೆ ದಾಖಲಿಸಿದರು. ವಿಮಲಾದೇವಿಯ ಸಲ್ಲೇಖನಾ ವ್ರತಕ್ಕೆ ತಡೆ ನೀಡಬೇಕೆಂದು ಅವರು ಆಗ್ರಹಿಸಿದರು. ಸಲ್ಲೇಖನಾ ವ್ರತವನ್ನು ಆತ್ಮಹತ್ಯೆಗೆ ಸಮಾನ ಎಂದು ಕರೆದರು. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿತು. ಇದು ಜೈನ ಸಮುದಾಯವನ್ನು ಕೆರಳಿಸಿತು. ಸಲ್ಲೇಖನಾ ವ್ರತವು ಪುನರ್‍ಜನ್ಮದ ಸರಣಿಯಿಂದ ಮುಕ್ತಗೊಳ್ಳುವ ಒಂದು ಧಾರ್ಮಿಕ ವಿಧಿ ಎಂದು ಅದು ವ್ಯಾಖ್ಯಾನಿಸಿತು. ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವ ಸಂವಿಧಾನದ 21ನೇ ವಿಧಿಯ ಪ್ರಕಾರ ಈ ಆಚರಣೆಯನ್ನು ಜೈನ ಸಮುದಾಯ ಸಮರ್ಥಿಸಿಕೊಂಡಿತಲ್ಲದೇ ಕೋರ್ಟ್‍ನ ಮಧ್ಯ ಪ್ರವೇಶವನ್ನು ಪ್ರಶ್ನಿಸಿತು. ಜೈನರಲ್ಲಿ ಶ್ವೇತಾಂಬರ ಎಂಬೊಂದು ಪಂಥ ಇದೆ. ಆ ಪಂಥದವರು ಸಲ್ಲೇಖನಾ ವ್ರತದಲ್ಲಿ ನಂಬಿಕೆ ಇಟ್ಟಿದ್ದಾರೆ. ಕೆಟ್ಟ ಕರ್ಮಗಳಿಂದ ಆತ್ಮವನ್ನು ಮುಕ್ತಗೊಳಿಸುವ ಉದ್ದೇಶ ಅದರ ಹಿಂದಿದೆ. ಆಚಾರ್ಯ ವಿನೋಬಾ ಭಾವೆಯವರು ಸಲ್ಲೇಖನಾ ವ್ರತದ ಮೂಲಕ ಬದುಕು ಕೊನೆಗೊಳಿಸಿದ್ದಾರೆ ಎಂದು ಜೈನ ಧರ್ಮೀಯರು ವಾದಿಸುತ್ತಾರೆ. ಸಲ್ಲೇಖನಾ ವ್ರತದ ಮೂಲಕವೇ ಬಾಹುಬಲಿಯು ಈ ಜಗತ್ತಿನಿಂದ ನಿರ್ಗಮಿಸಿದ್ದಾರೆ ಎಂಬುದೂ ಅವರ ನಂಬಿಕೆ. ಆದರೆ ನಿಖಿಲ್ ಸೋನಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಈ ನಂಬಿಕೆಯ ಬುನಾದಿಯನ್ನೇ ಪ್ರಶ್ನಿಸುವಂತೆ ಮಾಡಿತು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ನಡುವಿನ ಸಂಘರ್ಷವಾಗಿಯೂ ಅದು ಪರಿಗಣಿತವಾಯಿತು. ಸಲ್ಲೇಖನಾ ವ್ರತವನ್ನು ಅನೇಕರು ಆತ್ಮಹತ್ಯೆ ಎಂದು ಕರೆದರು. ಮಾತ್ರವಲ್ಲ, ನಿಖಿಲ ಸೋನಿಯ ಮೊಕದ್ದಮೆಯು ವಿಮಲಾ ದೇವಿ ಭನ್ಸಾಲಿಯಂತೆ ಸಲ್ಲೇಖನಾ ವ್ರತದಲ್ಲಿರುವ ಇನ್ನಷ್ಟು ಪ್ರಕರಣಗಳ ಬಹಿರಂಗಕ್ಕೂ ಕಾರಣವಾಯಿತು. 93 ವರ್ಷದ ಕೈಲಾ ದೇವಿ ಹಿರಾವತ್ ಎಂಬ ವಯೋವೃದ್ಧ ಮಹಿಳೆ ಆ ಸಮಯದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾದರು. ಆರೋಗ್ಯಪೂರ್ಣವಾಗಿದ್ದ ಅವರು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತಮುತ್ತ ಮಂತ್ರ ಪಠಣಗಳು ನಡೆಯುತ್ತಿದ್ದುವು. ಜನರ ಭೇಟಿ, ಭಕ್ತಿ ಪ್ರದರ್ಶನಗಳೂ ನಡೆಯುತ್ತಿದ್ದುವು. ಪ್ರಕರಣ ನ್ಯಾಯಾಲಯ ದಲ್ಲಿದ್ದುದರಿಂದ ಇಂಥ ಸಲ್ಲೇಖನದ ಒಂದೊಂದೇ ಘಟನೆಗಳು ಅಲ್ಲಿ-ಇಲ್ಲಿ ಸುದ್ದಿಗೆ ಬರತೊಡಗಿದುವು. ಕ್ಯಾನ್ಸರ್ ಪೀಡಿತ 46 ವರ್ಷದ ಮಹಿಳೆ, ಗ್ಯಾಂಗ್ರೀನ್‍ನಿಂದ ಬಳಲುತ್ತಿದ್ದ 75 ವರ್ಷದ ಮಹಿಳೆ, ಕ್ಯಾನ್ಸರ್ ಪೀಡಿತ 46 ವರ್ಷದ ಕಮಲಾದೇವಿ ಮೆಹ್ತಾ, 94 ವರ್ಷದ ಮಹಿಳೆ.. ಹೀಗೆ ಸಲ್ಲೇಖನಾ ವ್ರತ ಕೈಗೊಂಡಿರುವ ಸರಣಿ ಸುದ್ದಿಗಳು ಬಹಿರಂಗಕ್ಕೆ ಬರತೊಡಗಿದುವು. ಸಲ್ಲೇಖನಾ ವ್ರತ ಕೈಗೊಳ್ಳುವ ವ್ಯಕ್ತಿ ಕುಟುಂಬದ ಮತ್ತು ಧಾರ್ಮಿಕ ಗುರುವಿನ ಸಮ್ಮತಿಯನ್ನು ಪಡೆದಿರಬೇಕು. ಸಾಮಾನ್ಯವಾಗಿ, ಕಾಯಿಲೆ ಪೀಡಿತರೇ ಇಂಥದ್ದೊಂದು  ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲದೇ, ಸಲ್ಲೇಖನಾ ವ್ರತ ಕೈಗೊಂಡು ಯಾರು ಸಾವಿಗೀಡಾಗುತ್ತಾರೋ ಅವರನ್ನು ಕೊಂಡಾಡಲಾಗುತ್ತದೆ. ಸಾವಿನ ಮನೆ ದುಃಖದ ಬದಲು ಸಂಭ್ರಮದಲ್ಲಿರುತ್ತದೆ. ಸಾವಿಗೆ ಸಂತೋಷ ವ್ಯಕ್ತಪಡಿಸಿ ಜಾಹೀರಾತು ನೀಡುವ ಕ್ರಮವೂ ಇದೆ. ಪ್ರತಿವರ್ಷ ಸುಮಾರು 200ರಷ್ಟು ಮಂದಿ ಹೀಗೆ ಸಲ್ಲೇಖನಾ ವ್ರತ ಕೈಗೊಂಡು ಬದುಕು ಕೊನೆಗೊಳಿಸುತ್ತಾರೆ ಎಂದು ಹೇಳಲಾಗುತ್ತದೆ. ಹೀಗಿರುತ್ತಾ,
ಸಲ್ಲೇಖನಾ ವ್ರತ ಕಾನೂನು ಬಾಹಿರ ಎಂದು 2015 ಆಗಸ್ಟ್ 10ರಂದು ರಾಜಸ್ತಾನ ಹೈಕೋರ್ಟು ಸಾರಿತಲ್ಲದೇ ಅದಕ್ಕೆ ನಿಷೇಧ ವಿಧಿಸಿ ಆದೇಶ ಹೊರಡಿಸಿತು.
ಜೈನ ಸಮುದಾಯದ ಮಟ್ಟಿಗೆ ಇದು ಅತ್ಯಂತ ಆಘಾತಕಾರಿ ತೀರ್ಪು. ಈ ತೀರ್ಪಿನ ವಿರುದ್ಧ ‘ಅಖಿಲ ಭಾರತ ವಕಶಿಯಾ ದಿಗಂಬರ್ ಜೈನ್ ಪರಿಷತ್’ ಎಂಬ ಸಂಘಟನೆ ಸುಪ್ರೀಮ್ ಕೋರ್ಟ್‍ನಲ್ಲಿ ದೂರು ದಾಖಲಿಸಿತು. ಈ ದೂರನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಎಚ್.ಎಲ್. ದತ್ತ್ ಅವರಿದ್ದ ನ್ಯಾಯಪೀಠವು ರಾಜಸ್ತಾನ ಹೈಕೋರ್ಟಿನ ತೀರ್ಪಿಗೆ ತಡೆ ವಿಧಿಸಿ 2015 ಆಗಸ್ಟ್ 31ರಂದು ಆದೇಶ ಹೊರಡಿಸಿತು. ಹಾಗಂತ,
ಈ ಎಲ್ಲವನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ಮುಕ್ತಾಯ ಕಂಡ ಮಹಾ ಮಸ್ತಕಾಭಿಷೇಕಕ್ಕಿಂತ ಎರಡು ದಿನಗಳ ಮೊದಲು ಮಹಾರಾಜ್ ಶ್ರೇಯಸಾಗರ್ ಎಂಬ ಸಾಧುವೊಬ್ಬರು ಸಾವಿಗೀಡಾದರು. ಮಧ್ಯ ಪ್ರದೇಶದ ಪನ್ನಾ ಜಿ¯್ಲÉಯವರಾದ ಇವರು ಮಸ್ತಕಾಭಿಷೇಕಕ್ಕಿಂತ ವಾರಗಳ ಮೊದಲು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತ ನೂರಾರು ಜೈನ ಸಾಧು ಮತ್ತು ಸಾಧ್ವಿಗಳು ಮಂತ್ರ ಪಠಣಗೈದುದು ಮತ್ತು ಅದೇ ಸ್ಥಿತಿಯಲ್ಲಿ ಅವರು ಸಾವಿಗೀಡಾದ ಸುದ್ದಿಗಳೂ ಪ್ರಕಟವಾದುವು. 2016 ಅಕ್ಟೋಬರ್ ನಲ್ಲಿ ಆಂಧ್ರಪ್ರದೇಶ ದಲ್ಲಿ ಆರಾಧನಾ ಎಂಬ 13 ವರ್ಷದ ಬಾಲೆ ಸಾವಿಗೀಡಾಗಿದ್ದಳು. ಪವಿತ್ರ ಚೌಮಾಸದಲ್ಲಿ 68 ದಿನಗಳ ಕಾಲ ಉಪವಾಸವಿದ್ದ ಆಕೆ ಅಂತಿಮವಾಗಿ ಸಾವಿಗೀಡಾದಳು. ಆಕೆಯನ್ನು ಬಾಲ ತಪಸ್ವಿ ಎಂದು ಕರೆಯಲಾಯಿತು. ಶವ ಮೆರವಣಿಗೆಯನ್ನು ಶೋಭಾ ಯಾತ್ರೆಯಾಗಿ ಗೌರವಿಸಲಾಯಿತು. ಈ ಉಪವಾಸದ ಅವಧಿಯಲ್ಲಿ ಅನೇಕರು ಈ ಬಾಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಪತ್ರಿಕೆಗಳಲ್ಲಿ ಆಕೆಯನ್ನು ಕೊಂಡಾಡಿ ಜಾಹೀರಾತುಗಳೂ ಪ್ರಕಟವಾಗಿದ್ದುವು. ಅಷ್ಟಕ್ಕೂ,
   ಜೈನ ಧರ್ಮದ ಅವಿಭಾಜ್ಯ ಅಂಗವೆಂಬ ನೆಲೆಯಲ್ಲಿ ಸಲ್ಲೇಖನಾ ವ್ರತವನ್ನು ಗೌರವಿಸಲೇಬೇಕು. ಹಾಗಂತ, ಅದರರ್ಥ ಅದು ವಿಮರ್ಶಾತೀತ ಎಂದಲ್ಲ. ಈ ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿ ಮೋಕ್ಷದ ವಿವಿಧ ಕಲ್ಪನೆಗಳಿವೆ. ಆದರೆ ಸಲ್ಲೇಖನಾ ವ್ರತ ಅವೆಲ್ಲವುಗಳಿಗಿಂತ ತೀರಾ ಭಿನ್ನವಾಗಿದೆ. ಹೀಗಿದ್ದೂ, ದೇಹವನ್ನು ದಂಡಿಸಿಕೊಂಡು ಮೋಕ್ಷ ಹೊಂದುವ ಈ ಪರಿಕಲ್ಪನೆಯು ಈ ದೇಶದಲ್ಲಿ ದೊಡ್ಡಮಟ್ಟದ ಬೌದ್ಧಿಕ ಜಿಜ್ಞಾಸೆಗೆ ಒಳಗಾಗದಿರಲು ಕಾರಣವೇನು? ತ್ರಿವಳಿ ತಲಾಕ್‍ನ ಹೆಸರಲ್ಲಿ ಈ ದೇಶದಲ್ಲಿ ನಡೆದ ಚರ್ಚೆ-ಕುಚರ್ಚೆ-ವ್ಯಂಗ್ಯ, ಅವಹೇಳನಗಳನ್ನು ಎದುರಿಟ್ಟುಕೊಂಡು ನೋಡಿದರೆ, ಸಲ್ಲೇಖನಾ ವ್ರತದ ಬಗ್ಗೆ ಗಾಢ ಮೌನವೊಂದು ಎದ್ದು ಕಾಣುತ್ತದೆ. 13ರ ಬಾಲೆ ಉಪವಾಸವಿದ್ದು ಸಾವಿ ಗೀಡಾದಾಗಲಾದರೂ ಈ ಕುರಿತಾದ ಮೌನವು ಮುರಿಯು ತ್ತದೆ ಎಂದು ಭಾವಿಸಲಾಗಿತ್ತು. ಆದರೆ ತ್ರಿವಳಿ ತಲಾಕ್‍ನ ಸುತ್ತ ನಡೆದ ಚರ್ಚೆಯ 0.0001%ವೂ ಈ ಬಾಲೆಯ ಉಪವಾಸದ ಸುತ್ತ ಚರ್ಚೆಯಾಗಲಿಲ್ಲ. ಹಾಗಂತ, ಸಲ್ಲೇಖನಾ ತಪ್ಪು ಎಂಬುದು ಇಲ್ಲಿನ ವಾದ ಅಲ್ಲ. ಅದೊಂದು ಧಾರ್ಮಿಕ ಕ್ರಿಯೆ. ಆ ಕ್ರಿಯೆಯನ್ನು ನಡೆಸುವವರಿಗೆ ಅವರದ್ದೇ ಆದ ಸಮರ್ಥನೆಗಳಿವೆ. 2 ಸಾವಿರ ವರ್ಷಗಳಿಗಿಂತ ಹಳೆಯದಾದ ಇತಿಹಾಸವೊಂದು ಸಲ್ಲೇಖನಾ ವ್ರತಕ್ಕಿದೆ ಎಂದು ಹೇಳಲಾಗುತ್ತದೆ. ಹಾಗಂತ, ಸಲ್ಲೇಖನದ ಕುರಿತಂತೆ ಮೌನವಾಗಿರಬೇಕೆಂಬುದು ಇದರ ಅರ್ಥವಲ್ಲವಲ್ಲ. ಷರತ್ತಿಗೊಳಪಟ್ಟ ಬಹುಪತ್ನಿತ್ವಕ್ಕೆ ಇಸ್ಲಾಮ್ ಅನುಮತಿಸಿರುವುದನ್ನು ಪ್ರಶ್ನಿಸಿ ನಡೆಸಲಾದ ಚರ್ಚೆಗಳು ಈ ದೇಶದಲ್ಲಿ ಎಷ್ಟು ನಡೆದಿಲ್ಲ? ಆ ಬಗ್ಗೆ ಎಷ್ಟು ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗಿಲ್ಲ? ತ್ರಿವಳಿ ತಲಾಕನ್ನು ಪ್ರಶ್ನಿಸುವ ಭರದಲ್ಲಿ ಒಟ್ಟು ತಲಾಕ್ ಪದ್ಧತಿಯನ್ನೇ ಮತ್ತು ಅದರ ನೆಪದಲ್ಲಿ ಇಡೀ ಪವಿತ್ರ ಕುರ್‍ಆನನ್ನೇ ಕಟಕಟೆಯಲ್ಲಿ ನಿಲ್ಲಿಸಲಾದ ಸನ್ನಿವೇಶಗಳು ಎಷ್ಟು ಬಾರಿ ನಡೆದಿಲ್ಲ? ಅದಾನ್‍ನ ಬಗ್ಗೆ ವಾರಗಟ್ಟಲೆ ಚರ್ಚೆ ನಡೆದಿರುವುದು ಇದೇ ದೇಶದಲ್ಲಿ. ಬುರ್ಖಾದ ಬಗ್ಗೆ ಚರ್ಚೆ ಇನ್ನೂ ಮುಕ್ತಾಯವನ್ನು ಕಂಡಿಲ್ಲ. ಮುಸ್ಲಿಮರ ಆಹಾರ, ಆರಾಧನೆ, ಉಡುಪು, ಧರ್ಮಗ್ರಂಥ.. ಎಲ್ಲವೂ ಚರ್ಚಾರ್ಹ ಎನಿಸುವುದು ಮತ್ತು ಸಲ್ಲೇಖನಾ ವ್ರತ, ವೃಂದಾವನದ ವಿಧವೆಯರು ಇತ್ಯಾದಿಗಳು ಗಾಢ ನಿರ್ಲP್ಷÀ್ಯಕ್ಕೆ ಒಳಗಾಗುವುದೆಲ್ಲ ಯಾಕೆ? ಹುಟ್ಟು ಮತ್ತು ಹುಟ್ಟಿನ ಉದ್ದೇಶ; ಸಾವು ಮತ್ತು ಸಾವಿನ ಬಳಿಕದ ಬದುಕಿನ ಬಗ್ಗೆ ವಿವಿಧ ಧರ್ಮಗಳಲ್ಲಿ ಇರುವ ವೈವಿಧ್ಯಮಯ ಪರಿಕಲ್ಪನೆಗಳ ಕುರಿತಂತೆ ಬೆಳಕು ಚೆಲ್ಲುವುದಕ್ಕೆ ಯಾರೂ ಸಲ್ಲೇಖನಾ ವ್ರತವನ್ನು ನೆಪವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಈವರೆಗೂ ನಡೆಸಿಲ್ಲ. ದೇಹವನ್ನು ದಂಡಿಸುವ ಕ್ರಮ ಬಹುತೇಕ ಎಲ್ಲ ಧರ್ಮಗಳಲ್ಲೂ ಇದೆ. ಆದರೆ ದೇಹವನ್ನು ದಂಡಿಸುತ್ತಾ, ಸಾಯಿಸುವ ವಿಧಾನವಿರುವುದು ಜೈನ ಧರ್ಮದಲ್ಲಿ ಮಾತ್ರ. ಅದರಲ್ಲೂ ಕಾಯಿಲೆಪೀಡಿತರು ಮತ್ತು ವಯೋವೃದ್ಧರೇ ಈ ಕ್ರಮಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಆರಾಧನಾ ಇದಕ್ಕೆ ಅಪವಾದವಾಗಿ ನಿಲ್ಲುತ್ತಾಳೆ. ವಿವಿಧ ಧರ್ಮಗಳಲ್ಲಿರುವ ಮೋಕ್ಷದ ಪರಿಕಲ್ಪನೆಯ ಸುತ್ತ ಗಂಭೀರ ಚರ್ಚೆಯೊಂದಕ್ಕೆ ಅಡಿಪಾಯ ಹಾಕಬೇಕಾದ ಸಲ್ಲೇಖನಾ ವ್ರತವು ಯಾವ ಸಂಚಲನವನ್ನೂ ಸೃಷ್ಟಿಸದೇ ತಣ್ಣಗಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತದೆ. ನಿಜಕ್ಕೂ ಮೋಕ್ಷ ಅಂದರೆ ಏನು, ಅದನ್ನು ಗಳಿಸಿಕೊಳ್ಳುವ ವಿಧಾನ ಹೇಗೆ, ದೇಹವನ್ನು ದಂಡಿಸುವುದು ಮೋಕ್ಷ ಹೊಂದುವ ಸರಿಯಾದ ವಿಧಾನವೇ? ಕೆಟ್ಟ ಕರ್ಮಗಳಿಂದ ಆತ್ಮವನ್ನು ಶುದ್ಧಗೊಳಿಸುವುದಕ್ಕೆ ಸಲ್ಲೇಖನಾ ವ್ರತವೊಂದೇ ಪರಿಹಾರವೇ? ಪುನರ್‍ಜನ್ಮದ ಸರಣಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹೀಗೆ ಮಾಡಬೇಕೇ?
ಮಹಾರಾಜ ಶ್ರೇಯಸಾಗರ್ ಅವರ ಸಲ್ಲೇಖನಾ ವ್ರತವು ನನ್ನನ್ನು ಇಂಥದ್ದೊಂದು  ಜಿಜ್ಞಾಸೆಗೆ ಪ್ರೇರೇಪಿಸಿತು.

Thursday, March 1, 2018

ಅದು ಅನುಯಾಯಿಯ ತಪ್ಪೆಂದಾದರೆ ಇದೇಕೆ ಸಿದ್ಧಾಂತದ ತಪ್ಪಾಗಬೇಕು?

      ಪವಿತ್ರ ಕುರ್‍ಆನಿನ ಬಹುತೇಕ ಕೊನೆಯ ಭಾಗದಲ್ಲಿ ಒಂದು ಅಧ್ಯಾಯವಿದೆ. ಅದು ಗುರುತಿಸಿಕೊಳ್ಳುವುದು ಅಲ್ ಕಾಫಿರೂನ್ ಎಂಬ ಹೆಸರಲ್ಲಿ. ಪ್ರವಾದಿ ಮುಹಮ್ಮದರು(ಸ) ಆ ವಚನವನ್ನು ತನ್ನ ಸಮಾಜದೊಂದಿಗೆ ಹಂಚಿಕೊಳ್ಳುತ್ತಾರೆ. ಅದನ್ನು ಹಂಚಿಕೊಳ್ಳು ವುದಕ್ಕೆ ಒಂದು ಕಾರಣವೂ ಇದೆ. ಅವರು ಏಕಾಏಕಿ ಆ ವಚನವನ್ನು ಜನರ ಮುಂದಿಡಲಿಲ್ಲ. ಅದಕ್ಕಿಂತ ಮೊದಲು ಅನೇಕಾರು ಬಾರಿ ಅವರು ಮತ್ತು ಅವರ ಸಮಾಜ ಮುಖಾಮುಖಿಯಾಗಿದೆ. ಪರಸ್ಪರ ಮಾತುಕತೆಗಳು ನಡೆದಿವೆ. ಆ ಎಲ್ಲ ಸಂದರ್ಭಗಳಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಆ ಜನರ ಮುಂದಿಟ್ಟಿದ್ದಾರೆ. ಚರ್ಚೆ-ಸಂವಾದ, ಸ್ವೀಕಾರ-ತಿರಸ್ಕಾರ ಎಲ್ಲವೂ ನಡೆಯುತ್ತಿದ್ದ ಸನ್ನಿವೇಶ. ಪ್ರವಾದಿ ಮುಹಮ್ಮದ್ ಆ ಸಮಾಜಕ್ಕೆ ಅಪರಿಚಿತ ಆಗಿರಲಿಲ್ಲ. ತನ್ನ ವಿಚಾರಧಾರೆಯ ಕಾರಣಕ್ಕಾಗಿ ಅದಾಗಲೇ ವಿರೋಧಿಗಳನ್ನೂ ಅನುಯಾಯಿಗಳನ್ನೂ ಅವರು ಗಿಟ್ಟಿಸಿಕೊಂಡಿದ್ದರು. ಇಂಥ ಸನ್ನಿವೇಶದಲ್ಲಿ ಅವರು ಮೇಲೆ ಉಲ್ಲೇಖಿಸಿದ ವಚನವನ್ನು ಹಂಚಿಕೊಳ್ಳುತ್ತಾರೆ. ಅದು ಹೀಗಿದೆ:
ಓ ನಿಷೇಧಿಸುವವರೇ,
ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. ನಾನು ಆರಾಧಿಸುವವನನ್ನು ನೀವೂ ಆರಾಧಿಸುವವರಲ್ಲ. ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ. (109: 1-6)
ಇಲ್ಲಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಪವಿತ್ರ ಕುರ್‍ಆನಿನ ಆರಂಭದ ಭಾಗದಲ್ಲಿದೆ. ಈ ವಚನ ಇರುವ ಅಧ್ಯಾಯವು ಅಲ್ ಬಕರ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಅದು ಹೀಗಿದೆ:
ಧರ್ಮದಲ್ಲಿ ಬಲಾತ್ಕಾರವಿಲ್ಲ. (2:256)
      ಅಲ್ ಕಾಫಿರೂನ್ ಮತ್ತು ಅಲ್‍ಬಕರ ಅಧ್ಯಾಯಗಳ ಈ ವಚನಗಳನ್ನು ನಿಮ್ಮ ಎದುರು ಹರಡಿಕೊಂಡು ಒಮ್ಮೆ ಆಲೋಚಿಸಿ. ಏನನಿಸುತ್ತದೆ? ಮಾನವನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆ ಸ್ವಾತಂತ್ರ್ಯವನ್ನು ಇಷ್ಟೊಂದು ಚೆನ್ನಾಗಿ ಇನ್ನಾವ ಸಿದ್ಧಾಂತವೂ ಹೇಳಿರಲಾರದೇನೋ ಎಂದು ಅಂದುಕೊಳ್ಳುವಷ್ಟು ಈ ವಚನಗಳು ಚೇತೋಹಾರಿಯಾಗಿವೆ. ‘ನನ್ನ ಧರ್ಮ ನನಗೆ ಮತ್ತು ನಿಮ್ಮ ಧರ್ಮ ನಿಮಗೆ’ ಎಂದು ಮಾತ್ರವಲ್ಲ, ‘ಈ ವಿಷಯದಲ್ಲಿ ಬಲವಂತವಿಲ್ಲ’ ಎಂಬ ತಾಕೀತನ್ನೂ ಈ ವಚನಗಳು ಕೊಡುತ್ತವೆ. ಈ ವಚನಗಳ ಆಧಾರದಲ್ಲಿ ಒಂದಷ್ಟು ವಿಸ್ತಾರವಾಗಿ ಆಲೋಚಿಸುವುದಾದರೆ, ‘ನಾನು ತಿನ್ನುವವುಗಳನ್ನು ನೀವು ತಿನ್ನಬೇಕೆಂದಿಲ್ಲ, ನಾನು ಆಡುವ ಭಾಷೆಯನ್ನು ನೀವು ಆಡಬೇಕೆಂದಿಲ್ಲ, ನನ್ನ ವಿಚಾರಧಾರೆಯಂತೆ ನಿಮ್ಮ ವಿಚಾರಧಾರೆ ಇರಬೇಕೆಂದಿಲ್ಲ, ನನ್ನ ನಿಲುವಿನಂತೆ ನಿಮ್ಮ ನಿಲುವು ಇರಬೇಕೆಂದಿಲ್ಲ, ನನ್ನ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ನಿಲುವುಗಳಂತೆ ನಿಮ್ಮದು ಇರಬೇಕೆಂದಿಲ್ಲ..’ ಇತ್ಯಾದಿಗಳಾಗಿಯೂ ಮುಂದುವರಿಸಬಹುದು. ಇವತ್ತಿನ ಜಗತ್ತಿನಲ್ಲಿ ಈ ಬಗೆಯ ಆಲೋಚನೆಗಳನ್ನು ಪ್ರಗತಿಪರ ಅಥವಾ ಸೆಕ್ಯುಲರ್ ಆಲೋಚನೆಗಳಾಗಿ ಗುರುತಿಸಲಾಗುತ್ತದೆ. ಪ್ರಜಾತಂತ್ರದ ಮೂಲಗುಣವಾಗಿ ಇವನ್ನು ಪರಿಗಣಿಸಲಾಗುತ್ತದೆ. ಅದೇ ವೇಳೆ ಪವಿತ್ರ ಕುರ್‍ಆನನ್ನು ಈ ಗುಣಗಳ ವೈರಿಯೆಂಬಂತೆ ಅನೇಕ ಬಾರಿ ಅನೇಕರು ವ್ಯಾಖ್ಯಾನಿಸಿದ್ದೂ ಇದೆ. ಇದಕ್ಕಿರುವ ಎರಡು ಕಾರಣಗಳಲ್ಲಿ ಒಂದು-
ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ತಪ್ಪುಗಳು.
ಇನ್ನೊಂದು- ಕುರ್‍ಆನನ್ನು ಅತೀವ ಪೂರ್ವಗ್ರಹದಿಂದ ಓದಿರುವುದು.
    ಪವಿತ್ರ ಕುರ್‍ಆನ್‍ನ ಸೆಕ್ಯುಲರ್ ಗುಣಕ್ಕೆ ಆಧಾರವಾಗಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಹೀಗಿದೆ:
‘ಓ ಜನರೇ, ನಿಮ್ಮನ್ನು ಓರ್ವ ಸ್ತ್ರೀ ಮತ್ತು ಪುರುಷನಿಂದ ಸೃಷ್ಟಿಸಲಾಗಿದೆ.’ (49:13)
     ಸೆಕ್ಯುಲರ್ ಪ್ರಜಾತಂತ್ರದ ಅತಿದೊಡ್ಡ ಪ್ರತಿಪಾದನೆ ಏನೆಂದರೆ, ಸರ್ವರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು. ಶ್ರೀಮಂತ, ಬಡವ; ಮೇಲು ಜಾತಿ-ಕೀಳು ಜಾತಿ; ಶ್ರೇಷ್ಠ ಧರ್ಮ-ಕನಿಷ್ಠ ಧರ್ಮ; ಹೆಣ್ಣು ಶ್ರೇಷ್ಠ-ಗಂಡು ಕನಿಷ್ಠ, ಮಾಲಿಕ-ಗುಲಾಮ.. ಈ ಬಗೆಯ ವಿಭಜನೆಗಳಿಲ್ಲದೆಯೇ ಸರ್ವರನ್ನೂ ಏಕ ಮಾನದಂಡದಲ್ಲಿ ಅಳೆಯಬೇಕು ಅನ್ನುವುದು. ದುರಂತ ಏನೆಂದರೆ, ಸೆಕ್ಯುಲರ್ ಪ್ರಜಾತಂತ್ರಕ್ಕೆ ಅತ್ಯುತ್ತಮ ಮಾದರಿ ಎಂದು ಹೇಳಲಾಗುವ ರಾಷ್ಟ್ರಗಳಲ್ಲೂ ಈ ಬಗೆಯ ವಾತಾವರಣವನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಅಮೇರಿಕವೂ ಇದರಲ್ಲಿ ಒಂದು. ಭಾರತವೂ ಒಂದು. ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಎಲ್ಲ ಮಾನವರ ಡಿಎನ್‍ಎಯಲ್ಲಿ ಶೇ. 98ರಷ್ಟು ಅಂಶಗಳೂ ಸಮಾನ ವಾಗಿವೆ. ಬ್ರಾಹ್ಮಣ ಮತ್ತು ಬಿಲ್ಲವ, ಕರಿಯ ಮತ್ತು ಬಿಳಿಯ, ಆಫ್ರಿಕದವಳು ಮತ್ತು ಜಪಾನಿನವಳು, ಉಗಾಂಡದವರು ಮತ್ತು ಮ್ಯಾನ್ಮಾರ್‍ನವರು.. ಇವರೆಲ್ಲರ ಭಾಷೆ, ಭಾವನೆ, ಸಂಸ್ಕೃತಿ, ಪರಂಪರೆ, ಬಣ್ಣ, ಆಕಾರ, ಗಾತ್ರ.. ಇತ್ಯಾದಿಗಳಲ್ಲೆಲ್ಲ ಬಾಹ್ಯನೋಟಕ್ಕೆ ವ್ಯತ್ಯಾಸಗಳಿರಬಹುದಾದರೂ ಆಂತರಿಕವಾಗಿ ಎಲ್ಲರೂ ಸಮಾನ ಡಿಎನ್‍ಎ ಅಂಶಗಳನ್ನು ಹೊಂದಿದವರಾಗಿದ್ದಾರೆ. ಅವರ ನಡುವೆ ಅಂತರಗಳಿಲ್ಲ. ಭೇದ-ಭಾವಗಳಿಲ್ಲ. ಉದ್ಯೋಗ, ಅಭಿರುಚಿ, ಆರ್ಥಿಕ ಬಲಗಳಲ್ಲಿ ಇರಬಹುದಾದ ವ್ಯತ್ಯಾಸಗಳು ಒಬ್ಬನನ್ನು ಶ್ರೇಷ್ಠ ಮತ್ತು ಇನ್ನೋರ್ವರನ್ನು ಕನಿಷ್ಠ ಮಾಡುವುದೂ ಇಲ್ಲ. ಸೆಕ್ಯುಲರ್ ಪ್ರಜಾತಂತ್ರ ಇವನ್ನೆಲ್ಲ ತನ್ನ ಹೆಚ್ಚುಗಾರಿಕೆಯಾಗಿ ಮತ್ತು ತನ್ನ ಅಸ್ತಿತ್ವಕ್ಕೆ ಸಕಾರಣವಾಗಿ ಮುಂದಿಡುತ್ತಾ ಬಂದಿದೆ. ಹಾಗಂತ, ಈ ಇವನ್ನೆಲ್ಲ ಇಷ್ಟೇ ಚೆನ್ನಾಗಿ ಪ್ರಯೋಗಕ್ಕೆ ತರಲು ಈ ಪ್ರಜಾ ತಂತ್ರ ಎಲ್ಲೂ ಯಶಸ್ವಿಯಾಗಿಲ್ಲ ಎಂಬುದೂ ಅಷ್ಟೇ ಸತ್ಯ. ವಿಷಾದ ಏನೆಂದರೆ, ಪವಿತ್ರ ಕುರ್‍ಆನಿಗೆ ಸಂಬಂಧಿಸಿ ಈ ಬಗೆಯ ಅವಲೋಕನ ನಡೆಯುವುದು ತೀರಾ ಕಡಿಮೆ. ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‍ಆನಿನ ಪಡಿಯಚ್ಚು. ಅವರಷ್ಟು ಚೆನ್ನಾಗಿ ಪವಿತ್ರ ಕುರ್‍ಆನನ್ನು ಪ್ರತಿನಿಧಿಸಿದವರು ಯಾರೂ ಇಲ್ಲ ಅನ್ನುವಷ್ಟು ಅವರು ಕುರ್‍ಆನ್‍ನ ಮಾದರಿ. ಅವರು ಈ ಕುರ್‍ಆನ್‍ನ ಆಧಾರದಲ್ಲಿ ಒಂದು ಸಾಮಾಜಿಕ ವಾತಾವರಣವನ್ನು ಬೆಳೆಸಿದರು. ಒಂದು ಸಮ ಸಮಾಜವನ್ನು ಕಟ್ಟಿದರು. ಈ 21ನೇ ಶತಮಾನಕ್ಕೆ ಹೋಲಿಸಿದರೆ ಅವರು ಬದುಕಿದ 6-7ನೇ ಶತ ಮಾನ ವೈಜ್ಞಾನಿಕವಾಗಿ ಇನ್ನೂ ಮಗುವಷ್ಟೇ ಆಗಿತ್ತು. ತಾಂತ್ರಿಕ ವಾಗಿಯೂ ಮಗುವೇ. ಅಂದು ಮಂಗಳ ಗ್ರಹಕ್ಕೆ ಯಾರೂ ಹೋಗಿರಲಿಲ್ಲ. ಮೊಬೈಲ್ ತಂತ್ರಜ್ಞಾನದ ಆವಿಷ್ಕಾರ ಆಗಿರಲಿಲ್ಲ. ವಾಹನಗಳ ಕಲ್ಪನೆ ಇರಲಿಲ್ಲ. ಈ ಜಗತ್ತನ್ನೇ ಹಳ್ಳಿಯನ್ನಾಗಿಸಿ ಬಿಟ್ಟ ಇವತ್ತಿನ ಬಹುತೇಕ ಯಾವ ತಾಂತ್ರಿಕ ಕೌಶಲ್ಯಗಳೂ ಲಭ್ಯವಿಲ್ಲದ ಕಾಲದಲ್ಲಿ ಅವರು ಬದುಕಿ ಮರೆಯಾದರು. ಆದ್ದ ರಿಂದ ಆಫ್ರಿಕಾದ ಕರಿಯ ವ್ಯಕ್ತಿಯನ್ನು ಉನ್ನತ ವಂಶದ ಅರಬ್ ವ್ಯಕ್ತಿ ತಾರತಮ್ಯದಿಂದ ನೋಡುವುದು ಮಾನವ ಹಕ್ಕು ಉಲ್ಲಂಘನೆಯ ಪಟ್ಟಿಯಲ್ಲಿ ಸೇರುವುದಕ್ಕೆ ಅಂದಿನ ವಾತಾವರಣದಲ್ಲಿ ಸಾಧ್ಯವೇ ಇರಲಿಲ್ಲ. ಶತಮಾನಗಳಿಂದ ದಲಿತರು ಹೇಗೆ ತಮ್ಮ ಮೇಲಿನ ದೌರ್ಜನ್ಯವನ್ನು ಸಹಜವಾಗಿ ಸ್ವೀಕರಿಸಿ ಒಪ್ಪಿಕೊಂಡು ಬಂದರೋ ಅದೇ ಮಾನಸಿಕತೆಯೊಂದು ಅರಬ್ ರಾಷ್ಟ್ರಗಳಲ್ಲೂ ಇರುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೂ ಇಲ್ಲ. ಬಲಾಢ್ಯನೋರ್ವ ದುರ್ಬಲನ ಮೇಲೆ ಹಕ್ಕು ಸ್ಥಾಪಿಸುವುದು ಅನಾದಿ ಕಾಲದಿಂದಲೂ ಪರಂಪರೆ ಯಾಗಿಯೇ ಬೆಳೆದು ಬಂದಿದೆ. ತಪ್ಪು ಎಂದು ಅಂದುಕೊಳ್ಳಲಾಗದಷ್ಟು ಅದು ಜನಜೀವನದಲ್ಲಿ ಹಾಸುಹೊಕ್ಕಾಗಿಯೂ ಇದೆ. ಇಂಥ ಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಮುಂದಿಡುತ್ತಾರೆ. ‘ಮಾನವರೆಲ್ಲ ಸಮಾನರು’ ಎಂದು ಅವರು ಘೋಷಿಸಿದ್ದು ಮಾನವರು ಎಲ್ಲೆಡೆ ಅಸಮಾನರಾಗಿ ಬದುಕುತ್ತಿದ್ದ ಸಂದರ್ಭದಲ್ಲಿ. ‘ನನ್ನ ಧರ್ಮ ನನಗೆ ನಿಮ್ಮ ಧರ್ಮ ನಿಮಗೆ’ ಎಂದು ಅವರು ಘೋಷಿಸಿದ್ದು ‘ನನ್ನ ಧರ್ಮವೇ ನಿನ್ನ ಧರ್ಮವಾಗಬೇಕು’ ಎಂದು ಬಲಾಢ್ಯರು ಹೇರುತ್ತಿದ್ದ ಸಮಯದಲ್ಲಿ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂದವರು ಹೇಳಿದ್ದು ಬಲವಂತದಿಂದ ತಮ್ಮ ಧರ್ಮವನ್ನು ಇತರರ ಮೇಲೆ ಹೇರುತ್ತಿದ್ದ ಸನ್ನಿವೇಶದಲ್ಲಿ. ಸೆಕ್ಯುಲರ್ ಪ್ರಜಾತಂತ್ರದ ಅತಿ ಅಮೂಲ್ಯ ಅಡಿಪಾಯಗಳಾದ ಈ ಮೂರು ನಿಯಮಗಳನ್ನು ಪ್ರವಾದಿ ಮುಹಮ್ಮದರು(ಸ) ತನ್ನ ಆಡಳಿತದ ನಿಯಮಗಳಾಗಿ ಅಳವಡಿಸಿಕೊಂಡರು. ಮಾತ್ರವಲ್ಲ, ಅದನ್ನು ಎಷ್ಟು ನಾಜೂಕಾಗಿ ಜಾರಿಗೆ ತಂದರು ಎಂದರೆ, ಗುಲಾಮನಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿದ್ದ ಕರಿಯ ವ್ಯಕ್ತಿಯೂ ಅತ್ಯಂತ ಗೌರವಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡರು. ಈ ಕುರಿತಂತೆ ಉದಾಹರಣೆಗಳು ನೂರಾರು ಇವೆ. ಹಾಗಂತ, ಪ್ರವಾದಿ ಮುಹಮ್ಮದರ ಅನುಯಾಯಿ ಎಂದು ಗುರುತಿಸಿಕೊಂಡವರೆಲ್ಲ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಇದೇ ಸೆಕ್ಯುಲರ್ ಗುಣವನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಎಂದಲ್ಲ. ಕೆಲವೊಮ್ಮೆ ಅವರು ಈ ಸೆಕ್ಯುಲರ್ ಸಿದ್ಧಾಂತದ ತಪ್ಪು ಮಾದರಿಯಾಗಿ ಬಿಡುವುದಿದೆ. ಅತಿ ಕೆಟ್ಟದಾಗಿ ಅದನ್ನು ಪ್ರತಿನಿಧಿಸುವುದೂ ಇದೆ. ಹಾಗಂತ, ಇದು ಪ್ರವಾದಿ ಮುಹಮ್ಮದರ ಅನುಯಾಯಿಗಳಲ್ಲಿ ಮಾತ್ರ ಕಂಡುಬರುವ ಕೊರತೆಗಳಲ್ಲವಲ್ಲ. ಮಾರ್ಕ್ಸ್  ಸಿದ್ಧಾಂತವನ್ನು ಅಪ್ಪಿ ಒಪ್ಪಿಕೊಂಡವರಲ್ಲೂ ಈ ಬಗೆಯ ವೈಫಲ್ಯಗಳಿವೆ. ಬುದ್ಧನನ್ನು ಪ್ರೀತಿಸುವವರಲ್ಲೂ ಮಹಾವೀರನನ್ನು ಅನುಸರಿಸುವವರಲ್ಲೂ ವೈದಿಕ ವಿಚಾರಧಾರೆಯ ಅನುಯಾಯಿಗಳಲ್ಲೂ ಈ ಬಗೆಯ ತಪ್ಪುಗಳಿವೆ. ಹೆಚ್ಚೇಕೆ ಭಾರತೀಯ ಸಂವಿಧಾನವನ್ನು ಅನುಸರಿಸುವುದಾಗಿ ಶಾಸನ ಸಭೆಗಳಲ್ಲಿ ಪ್ರತಿಜ್ಞೆ ಮಾಡುವವರೇ ಈ ಸಂವಿಧಾನದ ಎದೆಗೆ ತುಳಿಯುವವರಂತೆ ಮಾತಾಡುತ್ತಾರೆ. ಸಂವಿಧಾನದ ಆಶಯಗಳಿಗೆ ಸಂಪೂರ್ಣ ತದ್ವಿ ರುದ್ಧವಾಗಿ ಬದುಕುತ್ತಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ನಡೆಯುವ ಚರ್ಚೆಗಳು ವೈಯಕ್ತಿಕವಾಗಿರುತ್ತವೆಯೇ ಹೊರತು ಸೈದ್ಧಾಂತಿಕವಾಗಿ ಅಲ್ಲ. ಭಾರತೀಯ ಸಂವಿಧಾನವನ್ನು ಒಪ್ಪಿಕೊಂಡು ಬದುಕುತ್ತಿರುವ ವ್ಯಕ್ತಿ ಅದಕ್ಕೆ ಅಪಚಾರವೆಂಬಂತೆ ವರ್ತಿಸಿದಾಗ ನಾವು ಸಂವಿಧಾವನ್ನು ಕಟಕಟೆಯಲ್ಲಿ ನಿಲ್ಲಿಸುವುದೇ ಇಲ್ಲ. ಬುದ್ಧನ ಅನುಯಾಯಿಗಳು ಬುದ್ಧಿಸಂಗೆ ವಿರುದ್ಧವಾಗಿ ನಡಕೊಂಡಾಗ ಬುದ್ಧಿಸಮ್ಮೇ ಇದಕ್ಕೆ ಕಾರಣ ಎಂದು ನಾವು ಹೇಳುವುದಿಲ್ಲ. ಮಾವೋ ಮತ್ತು ಲೆನಿನ್ ಅಥವಾ ಇನ್ನಾವುದೇ ಸಿದ್ಧಾಂತದ ಅನುಯಾಯಿಗಳ ಅಪದ್ಧಗಳನ್ನು ಅವರವರ ವೈಯಕ್ತಿಕ ಅಕೌಂಟಿಗೆ ಹಾಕುತ್ತೇವೆಯೇ ಹೊರತು ಮಾವೋ, ಲೆನಿನ್‍ರ ಅಕೌಂಟಿಗಲ್ಲ. ನಿಜವಾಗಿ, ಸೆಕ್ಯುಲರ್ ಪ್ರಜಾತಂತ್ರದ ಗುಣವೇ ಇದು. ದುರಂತ ಏನೆಂದರೆ, ಪ್ರವಾದಿ ಮುಹಮ್ಮದ್ ಅನುಯಾಯಿಗಳು ಇಂಥದ್ದೇ  ತಪ್ಪುಗಳನ್ನು ಮಾಡಿದರೆ ಅದನ್ನು ಆ ಅನುಯಾಯಿಗಳ ಖಾತೆಯ ಬದಲು ನೇರ ಪ್ರವಾದಿ ಮತ್ತು ಕುರ್‍ಆನ್‍ನ ಖಾತೆಗೆ ಸೇರಿಸಿ ಬಿಡಲಾಗುತ್ತದೆ. ಆ ಸಮಯದಲ್ಲಿ ಪವಿತ್ರ ಕುರ್‍ಆನಿನ ಯಾವ ಸೆಕ್ಯುಲರ್ ವಚನಗಳೂ ಮತ್ತು ಪ್ರವಾದಿ ಮುಹಮ್ಮದರ ಯಾವ ಸಮಾನತೆಯ ಪಾಠಗಳೂ ಉಲ್ಲೇಖಕ್ಕೆ ಒಳಗಾಗುವುದೇ ಇಲ್ಲ. ಲೆನಿನ್ ಅನುಯಾಯಿ ತಪ್ಪು ಮಾಡಬಲ್ಲನಾದರೆ ಪ್ರವಾದಿ ಮುಹಮ್ಮದ್‍ರ ಅನುಯಾಯಿ ಯಾಕೆ ತಪ್ಪು ಮಾಡಲಾರ ಎಂಬ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಬುದ್ಧನ ಅನುಯಾಯಿ, ಅಂಬೇಡ್ಕರ್ ಸಂವಿಧಾನದ ಅನುಯಾಯಿ, ವೇದೋಪನಿಷತ್ತುಗಳ ಅನುಯಾಯಿ, ಮಾರ್ಕ್ಸ್ ನ ಅನುಯಾಯಿ, ಬೈಬಲ್‍ನ ಅನುಯಾಯಿ, ಹಳೆ ಒಡಂಬಡಿಕೆಯ ಅನುಯಾಯಿ.. ಎಲ್ಲರೂ ತಪ್ಪು ಮಾಡಬಹುದು ಮತ್ತು ಅದರ ದೋಷ ಅದನ್ನು ಮಾಡಿದವರ ಖಾತೆಗೇ ಸೇರ್ಪಡೆಗೊಳ್ಳುತ್ತದೆ ಎಂದಾದರೆ ಪವಿತ್ರ ಕುರ್‍ಆನಿನ ಅನುಯಾಯಿ ಮಾತ್ರ ತಪ್ಪು ಮಾಡಬಾರದು ಎಂದೇಕೆ ಬಯಸಬೇಕು? ಅವರು ಹಾಗೆ ಮಾಡಿದರೆ ಅದರ ದೋಷ ಪವಿತ್ರ ಕುರ್‍ಆನಿನ ಖಾತೆಗೇ ಸೇರ್ಪಡೆಗೊಳ್ಳಬೇಕು ಎಂಬ ರೀತಿಯಲ್ಲೇಕೆ ಪ್ರತಿಕ್ರಿಯೆ ವ್ಯಕ್ತವಾಗಬೇಕು? ಇದು ಮುಗ್ಧತನವೋ ಜಾಣತನವೋ?
      ಉತ್ತರ ಎಲ್ಲರಿಗೂ ಗೊತ್ತಿದೆ.