tag:blogger.com,1999:blog-32564592744327262362024-03-24T00:11:35.042-07:00ಭೂತಗನ್ನಡಿa k kukkilahttp://www.blogger.com/profile/17246497989463926613noreply@blogger.comBlogger333125tag:blogger.com,1999:blog-3256459274432726236.post-53937729741068002212024-02-10T05:11:00.000-08:002024-02-10T05:11:43.060-08:00ತೀರ್ಪು ನೀಡಿ ನಿವೃತ್ತರಾಗುವುದೋ ಅಲ್ಲ, ನಿವೃತ್ತರಾಗುವವರನ್ನೇ ಆಯ್ಕೆ ಮಾಡುವುದೋ?<p><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;"><br /></span></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg09Ubnn5GbJB5-9CxFdringMgp6U7hdsR3ThH89dfqh4GL3NHf7fsqDbPEX0cqF5MJijZyyjszWtjIqBaXllan0KlSV4rUCbhK0X-CDzUczC4DMnS2VnjkZktaRMn-L6QymDL4cvFTSpafFyQJIuvvN8d7NYk2gapa2VoUjmF2Nxa1-tR7SPkbhfZLU8S5/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEg09Ubnn5GbJB5-9CxFdringMgp6U7hdsR3ThH89dfqh4GL3NHf7fsqDbPEX0cqF5MJijZyyjszWtjIqBaXllan0KlSV4rUCbhK0X-CDzUczC4DMnS2VnjkZktaRMn-L6QymDL4cvFTSpafFyQJIuvvN8d7NYk2gapa2VoUjmF2Nxa1-tR7SPkbhfZLU8S5/w400-h198/page%203%20pic.jpg" width="400" /></a></div><br /><p><br style="background-color: white; color: #222222; font-family: Arial, Helvetica, sans-serif; font-size: small;" /></p><p><span style="color: #222222; font-family: Arial, Helvetica, sans-serif; font-size: x-small;">The 1991 Act spoke “to our history and to the future of </span><span style="color: #222222; font-family: Arial, Helvetica, sans-serif; font-size: small;">nation.. In preserving the character of places of public worship, </span><span style="color: #222222; font-family: Arial, Helvetica, sans-serif; font-size: small;">the parliament has mandated in no uncertain terms that history </span><span style="color: #222222; font-family: Arial, Helvetica, sans-serif; font-size: small;">and its wrongs shall not be used an instruments to oppress the </span><span style="color: #222222; font-family: Arial, Helvetica, sans-serif; font-size: small;">present and the future...”</span></p><p><span style="background-color: white; color: #222222; font-family: Arial, Helvetica, sans-serif; font-size: small;">ಅಥವಾ</span></p><p><span style="background-color: white; color: #222222; font-family: Arial, Helvetica, sans-serif; font-size: small;">‘ಇತಿಹಾಸ ಮತ್ತು ಅದರ ತಪ್ಪುಗಳು ವರ್ತಮಾನ ಮತ್ತು ಭವಿಷ್ಯವನ್ನು ದಮನಿಸುವ ಸಾಧನಗಳನ್ನಾಗಿ ಬಳಸಬಾರದು. ಆರಾಧನಾ ಸ್ಥಳಗಳ ಸ್ವರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾರ್ಲಿಮೆಂಟ್ ಸ್ಪಷ್ಟ ಪದಗಳಲ್ಲಿ ಇದನ್ನು ನಿರ್ದೇಶಿಸಿದೆ..’</span></p><p><span style="background-color: white; color: #222222; font-family: Arial, Helvetica, sans-serif; font-size: small;">ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ 2019 ನವೆಂಬರ್ 9ರಂದು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ರಂಜನ್ ಗೊಗೋಯ್, ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಐದು ಮಂದಿಯ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಈ ಉಲ್ಲೇಖವೂ ಇದೆ. ಇಲ್ಲಿ ಈ ಐವರು ನ್ಯಾಯಾಧೀಶರು ಬೊಟ್ಟು ಮಾಡಿರುವುದು 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ 1991 ಸೆಪ್ಟೆಂಬರ್ನಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. </span></p><p><span style="background-color: white; color: #222222; font-family: Arial, Helvetica, sans-serif; font-size: small;">ಅದಕ್ಕೆ ಕಾರಣವೂ ಇತ್ತು. </span></p><p><span style="background-color: white; color: #222222; font-family: Arial, Helvetica, sans-serif; font-size: small;">ಅದು ಬಾಬರಿ ಮಸೀದಿ ವಿವಾದವನ್ನು ಕೈಗೊತ್ತಿಕೊಂಡ ಬಿಜೆಪಿ, ದೇಶದಾದ್ಯಂತ ಧರ್ಮ ಧ್ರುವೀಕರಣದಲ್ಲಿ ತೊಡಗಿದ್ದ ಕಾಲ. ಅಡ್ವಾಣಿ, ಜೋಶಿ, ವಾಜಪೇಯಿ ಸಹಿತ ಎಲ್ಲರೂ ರಥಯಾತ್ರೆ, ಮಂದಿರ ನಿರ್ಮಾಣದ ವಿಷಯದಲ್ಲಿ ಸಕ್ರಿಯರಾಗಿದ್ದ ಸಂದರ್ಭ. ಇದೇವೇಳೆ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ವಾರಣಾಸಿಯ ಜ್ಞಾನವಾಪಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ ಮೇಲೂ ಹಕ್ಕು ಮಂಡಿಸಿದುವು. ಈ ಎರಡೂ ಮಸೀದಿಗಳನ್ನು ಹಿಂದೂಗಳಿಗೆ ಒಪ್ಪಿಸುವಂತೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಘೋಷಿಸಿದುವು. ಅಲ್ಲದೇ, ದೇಶದಾದ್ಯಂತ ಇಂಥ 3000 ಮಸೀದಿಗಳಿದ್ದು, ಅವುಗಳನ್ನೂ ನಮ್ಮ ವಶಕ್ಕೆ ಒಪ್ಪಿಸಬೇಕೆಂಬ ವಾದವನ್ನು ಮುಂದಿಟ್ಟವು. ಒಂದುಕಡೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಯೋಧ್ಯೆಗೆ ಸಂಬಂಧಿಸಿ ರಥಯಾತ್ರೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮತ್ತು ಶಾಹಿ ಈದ್ಗಾದ ಜೊತೆಗೆ 3000 ಮಸೀದಿಗಳ ಮೇಲೆ ಹಕ್ಕು ಸ್ಥಾಪನೆಯ ಮಾತುಗಳು ಕೇಳಿ ಬರತೊಡಗಿದಂತೆಯೇ ನರಸಿಂಹರಾವ್ ಸರಕಾರ ಎಚ್ಚೆತ್ತುಕೊಂಡಿತು. ತುರ್ತಾಗಿ ಕಾನೂನೊಂದನ್ನು ರೂಪಿಸಿತು. 1947 ಆಗಸ್ಟ್ 15ರಂದು ಈ ದೇಶದ ಆರಾಧನಾ ಸ್ಥಳಗಳು ಹೇಗಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ, ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ನ್ನು ಪಾರ್ಲಿಮೆಂಟಲ್ಲಿ ಮಂಡಿಸಿತು. ಆದರೆ, ಈ ಕಾಯ್ದೆ ವ್ಯಾಪ್ತಿಯಿಂದ ಬಾಬರಿ ಮಸೀದಿಯನ್ನು ಹೊರಗಿಟ್ಟಿತು. ಅದಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ರುವುದರಿಂದ ಈ ವಿನಾಯಿತಿಯನ್ನು ನೀಡಲಾಗಿದೆ ಎಂದು ಮಸೂದೆ ಮಂಡಿಸುತ್ತಾ ಅಂದಿನ ಗೃಹಸಚಿವ ಎಸ್.ಬಿ. ಚವ್ಹಾಣ್ ಪಾರ್ಲಿಮೆಂಟ್ಗೆ ತಿಳಿಸಿದರು. ಹಾಗೆಯೇ ಜಮ್ಮು-ಕಾಶ್ಮೀರವನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹಾಗಂತ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪಾರ್ಲಿಮೆಂಟ್ ಏನೂ ತಕ್ಷಣ ಇದಕ್ಕೆ ಅಂಗೀಕಾರ ನೀಡಿರಲಿಲ್ಲ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">8 ಗಂಟೆಗಿಂತಲೂ ಅಧಿಕ ಕಾಲ ಪಾರ್ಲಿಮೆಂಟ್ನಲ್ಲಿ ಬಿರುಸಿನ ಚರ್ಚೆ ನಡೆಯಿತು. ನಿರೀಕ್ಷೆಯಂತೆಯೇ ಬಿಜೆಪಿ ಈ ಮಸೂದೆಯನ್ನು ವಿರೋಧಿಸಿತು. ಬಿಜೆಪಿಯ ಜಸ್ವಂತ್ ಸಿಂಗ್, ರಾಮ್ನಾಯ್ಕ್ , ಉಮಾ ಭಾರತಿ ಮುಂತಾದವರು ಈ ಕಾಯ್ದೆ ಯನ್ನು ಪ್ರಶ್ನಿಸಿದರು. ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರ ಸರಕಾರ ಸವಾರಿ ಮಾಡುತ್ತಿದೆ ಎಂದು ಜಸ್ವಂತ್ ಸಿಂಗ್ ಆಕ್ಷೇಪಿಸಿದರು. ಇದೇವೇಳೆ, ಲಕ್ಷದ್ವೀಪದ ಕಾಂಗ್ರೆಸ್ ಸಂಸದ ಪಿ.ಎಂ. ಸಈದ್ ಅವರು ಈ ಕಾಯ್ದೆ ವ್ಯಾಪ್ತಿಯೊಳಗೆ ಬಾಬರಿ ಮಸೀದಿಯನ್ನೂ ತರಬೇಕೆಂದು ಆಗ್ರಹಿಸಿದರು. ಸಿಪಿಐಎಂನ ಸೋಮನಾಥ ಚಟರ್ಜಿಯವರೂ ಇದೇ ಪ್ರಶ್ನೆಯನ್ನು ಮುಂದಿಟ್ಟರು. ಈಗಿನ ಸಂಸದ ಅಸದುದ್ದೀನ್ ಒವೈಸಿಯ ತಂದೆ ಸುಲ್ತಾನ್ ಸಲಾಹುದ್ದೀನ್ ಒವೈಸಿ ಮತ್ತು ಮುಸ್ಲಿಮ್ ಲೀಗ್ನ ಸುಲೈಮಾನ್ ಸೇಠ್ ಅವರು ಮಸೂದೆಯನ್ನು ಬೆಂಬಲಿಸಿದರಾದರೂ ಜಮ್ಮು-ಕಾಶ್ಮೀರವನ್ನು ವ್ಯಾಪ್ತಿಯಿಂದ ಹೊರಗಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಡ್ವಾಣಿ ಪಾರ್ಲಿಮೆಂಟ್ನಿಂದ ಹೊರನಡೆದರು. ಹೀಗೆ ಸಾಕಷ್ಟು ಚರ್ಚೆ ನಡೆದ ಬಳಿಕ ಈ ಮಸೂದೆಯನ್ನು ಅಂಗೀಕರಿಸಿ ಕಾನೂನಾಗಿ ಜಾರಿ ಮಾಡಲಾಯಿತು. ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಇದೀಗ ಅದೇ ಕಾಯ್ದೆ ಕಟಕಟೆಯಲ್ಲಿ ನಿಂತಿದೆ.</span></p><p><span style="background-color: white; color: #222222; font-family: Arial, Helvetica, sans-serif; font-size: small;">ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನೀಡಿರುವ ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗೆ ತೀರ್ಪು ನೀಡಿದ ದಿನದಂದೇ ಅವರು ನ್ಯಾಯಾಧೀಶ ಹೊಣೆಗಾರಿಕೆಯಿಂದ ನಿವೃತ್ತಿಯೂ ಆಗಿದ್ದಾರೆ. ಅಚ್ಚರಿ ಏನೆಂದರೆ, ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟು ತೀರ್ಪಿನಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಬಾಬರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರಕ್ಕಾಗಿ ಬಿಟ್ಟು ಕೊಡಬೇಕೆಂದು 2019 ನವೆಂಬರ್ 9ರಂದು ತೀರ್ಪು ನೀಡಿದ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ನವೆಂಬರ್ 17ರಂದು ನಿವೃತ್ತರಾಗಿದ್ದರು. ಇದು ಕಾಕತಾಳೀಯವೋ ಅಥವಾ ವೃತ್ತಿಯ ಕೊನೆಯಲ್ಲಿ ಉಂಟಾಗಬಹುದಾದ ಭಾವುಕತೆ ಮತ್ತು ಧಾರ್ಮಿಕತೆಯ ಒಲವನ್ನು ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಭಾಗವಾಗಿ ಅಂಥವರನ್ನೇ ತೀರ್ಪಿಗಾಗಿ ಉಪಾಯದಿಂದ ಬಳಸಿಕೊಳ್ಳಲಾಗುತ್ತಿದೆಯೋ ಎಂಬ ಅ ನುಮಾನವೂ ವ್ಯಕ್ತವಾಗುತ್ತಿದೆ. ಬಾಬರಿ ಮಸೀದಿ ಒಡೆದ ಪ್ರಕರಣದಿಂದ ಅಡ್ವಾಣಿಯವರನ್ನು ೨೦೨೦ರಲ್ಲಿ ದೋಷಮುಕ್ತಿಗೊಳಿಸಿದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರೂ ಅದೇ ದಿನ ನಿವೃತ್ತರಾಗಿದ್ದರು. ಒಂದುಕಡೆ, 1947 ಆಗಸ್ಟ್ 15ರಂದು ದೇಶದ ಆರಾಧನಾ ಸ್ಥಳಗಳು ಹೇಗಿದ್ದುವೋ ಅವೆಲ್ಲವನ್ನೂ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಆದೇಶಿಸುವ 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮಸೀದಿಯ ಉತ್ಖನನಕ್ಕೆ ನ್ಯಾಯಾಲಯವೇ ಆದೇಶ ನೀಡುವುದು ಇವೆರಡೂ ಜೊತೆಜೊತೆಯಾಗಿ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಮಾತ್ರವಲ್ಲ, ನ್ಯಾಯಾಲಯದ ಮೇಲಿನ ಜನರ ಅಪನಂಬಿಕೆಯನ್ನು ವೃದ್ಧಿಸುತ್ತಲೂ ಇದೆ. ಹೀಗಾದರೆ, ಈ ದೇಶವನ್ನು ಧರ್ಮಗಳ ಆಧಾರದಲ್ಲಿ ಒಡೆಯುತ್ತಾ ಹೋಗಬಯಸುವವರು ವಿವಿಧ ಮಸೀದಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತಲೇ ಹೋಗಬಹುದು. ಅಂಥ ಸನ್ನಿವೇಶ ಸೃಷ್ಟಿಯಾದರೆ ಈ ದೇಶದ ಭವಿಷ್ಯ ಏನು? 1991ರ ಕಾಯ್ದೆ ಯಾಕೆ ಮುಖ್ಯ ಅನ್ನುವುದು ಜ್ಞಾನವಾಪಿ ವಿವಾದದಿಂದ ಸ್ಪಷ್ಟವಾಗುತ್ತದೆ. </span></p><p><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1991ರ ಈ ಕಾಯ್ದೆಯಿಂದ ತಮಗೆ ಅನಾನುಕೂಲವಾಗಬಹುದು ಎಂಬುದನ್ನು ಬಿಜೆಪಿ ಚೆನ್ನಾಗಿಯೇ ಗ್ರಹಿಸಿದೆ. ಆದ್ದರಿಂದ ಆ ಪಕ್ಷದ ಜೊತೆ ಗುರುತಿಸಿಕೊಂಡಿರುವ ಅಶ್ವಿನಿ ಉಪಾಧ್ಯಾಯ್ ಅವರು ಈ ಕಾಯ್ದೆಯ ಕಟ್ ಆಫ್ ಡೇಟ್ ಅಥವಾ 1947 ಆಗಸ್ಟ್ 15 ಎಂಬ ದಿನಾಂಕವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ನ ಮೆಟ್ಟಲೇರಿದ್ದಾರೆ. ಈ ಕಟ್ ಆಫ್ ಡೇಟ್ ಅಪ್ರಸ್ತುತ ಮತ್ತು ಭಾರತದ ಮೇಲೆ ಮೂಲಭೂತವಾದಿಗಳ ಬರ್ಬರ ದಾಳಿ ಆರಂಭವಾದ 1192ನ್ನೇ ಕಟ್ ಆಫ್ ಡೇಟ್ ಆಗಿ ಪರಿಗಣಿಸ ಬೇಕೆಂದು ಆಗ್ರಹಿಸಿದ್ದಾರೆ. ಈ ಅರ್ಜಿ ಪರಿಗಣನೆಗೂ ಒಳಗಾಗಿದೆ. ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು ಈ ಅರ್ಜಿಗೆ ಸಂಬಂಧಿಸಿ ಕೇಂದ್ರಕ್ಕೆ ನೋಟೀಸು ಜಾರಿಗೊಳಿಸಿದ್ದಾರೆ. ಈ ಅರ್ಜಿಗೆ ಉತ್ತರಿಸುವಂತೆ 2023 ಜುಲೈಯಲ್ಲಿ ಕೇಂದ್ರಕ್ಕೆ ನೋಟೀಸು ಜಾರಿಗೊಳಿಸಿದಾಗ ಅಕ್ಟೋಬರ್ 31ರ ವರೆಗೆ ಸಮಯ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿನಂತಿಸಿದ್ದರು. ಉತ್ತರಕ್ಕಾಗಿ ಕೇಂದ್ರ ಸರಕಾರ ಸಮಯ ಮುಂದೂಡುತ್ತಿರುವುದು ಇದು ಎರಡನೇ ಬಾರಿ ಎಂದು ಸುಬ್ರಹ್ಮಣ್ಯ ಸ್ವಾಮಿ ಆಕ್ಷೇಪಿಸಿದ್ದರು. ಅಲ್ಲದೇ, ಕಪಿಲ್ ಸಿಬಲ್ ಅವರು ಈ ಇಡೀ ಪ್ರಕ್ರಿಯೆಯನ್ನೇ ಆಕ್ಷೇಪಿಸಿದ್ದರು. ಅಯೋಧ್ಯೆ ತೀರ್ಪಿನಲ್ಲಿ ಈ 1991ರ ಈ ಕಾಯ್ದೆಯನ್ನು ಸಮರ್ಥಿಸಿರುವಾಗ ಈ ಅರ್ಜಿಯ ಪ್ರಸ್ತುತತೆ ಏನು ಎಂದು ಪ್ರಶ್ನಿಸಿದ್ದರು. ಅಂದಹಾಗೆ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬಾಬರಿ ಮಸೀದಿಗೆ ಸಂಬಂಧಿಸಿ ಐವರು ನ್ಯಾಯಾಧೀಶರು ನೀಡಿರುವ ತೀರ್ಪು ಅತೀವ ಟೀಕೆ, ಪ್ರಶ್ನೆ, ವಿಮರ್ಶೆಗೆ ಒಳಗಾಗಿರುವ ಹಂತದಲ್ಲೇ ಜ್ಞಾನವಾಪಿ ಮಸೀದಿಯ ಕುರಿತಾದ ತೀರ್ಪು ಹೊರಬಿದ್ದಿದೆ. ಸ್ಥಳೀಯ ನ್ಯಾಯಾಲಯದ ತೀರ್ಪು ಎಂಬ ನೆಲೆಯಲ್ಲಿ ಇದಕ್ಕೆ ಅತೀವ ಮಹತ್ವ ನೀಡಬಾರದು ಎಂಬುದು ಸರಿಯೇ ಆದರೂ 1991ರ ಆರಾಧನಾ ಸ್ಥಳ ಸಂರಕ್ಷಣಾ ಕಾಯ್ದೆಯ ಹೊರತಾಗಿಯೂ ನ್ಯಾಯಾಲಯ ಉತ್ಖನನಕ್ಕೆ ಆದೇಶ ನೀಡುವುದು ಮತ್ತು ಪೂಜೆಗೆ ಅವಕಾಶ ನೀಡುವುದೆಲ್ಲ ನ್ಯಾಯಾಲಯಗಳ ಮೇಲಿನ ಅನುಮಾನಗಳನ್ನು ಗಟ್ಟಿಗೊಳಿಸುವ ರೀತಿಯಲ್ಲಿದೆ. ಪುರಾವೆಗಳ ಮೇಲೆ ತೀರ್ಪು ನೀಡುವುದಕ್ಕಿಂತ ಭಾವನೆಗಳು ಮತ್ತು ಧಾರ್ಮಿಕ ಬದ್ಧತೆಯ ಆಧಾರದಲ್ಲಿ ನ್ಯಾಯಾಧೀಶರುಗಳು ತೀರ್ಪು ನೀಡುತ್ತಿದ್ದಾರೋ ಎಂಬ ಪ್ರಶ್ನೆಗಳೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಬಾಬರಿ ತೀರ್ಪು ನೀಡಿದ ವಾರದ ಬಳಿಕ ಗೊಗೋಯ್ ನಿವೃತ್ತರಾದರು. ಜ್ಞಾನವಾಪಿ ಮಸೀದಿಯ ತಳ ಅಂತಸ್ತಿನಲ್ಲಿ ಪೂಜೆಗೆ ಅನುಮತಿ ಕೊಟ್ಟು ಅದೇ ದಿನ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನಿವೃತ್ತರಾಗಿದ್ದಾರೆ. ಇದನ್ನು ಕಾಕತಾಳೀಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ತೀರ್ಪಿನ ಸ್ವರೂಪವು ಈ ಸಮರ್ಥನೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಕ್ಕೆ ಬಿಡುತ್ತಿಲ್ಲ. ಇದಕ್ಕೆ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಧೀಶ ಜೋಸೆಫ್ ನೀಡಿದ ಅಭಿಪ್ರಾಯವೂ ಆಧಾರವನ್ನು ನೀಡುತ್ತದೆ. ಅವರು ಮತ್ತು ಬಿ.ವಿ. ನಾಗರತ್ನ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಜೋಸೆಫ್ ಅವರು ಜೂನ್ 16ರಂದು ನಿವೃತ್ತರಾಗಲಿದ್ದರು. ಇವರು ವಿಚಾರಣೆ ನಡೆಸುವುದು ಕೇಂದ್ರ ಸರಕಾರಕ್ಕೆ ಬೇಕಿರಲಿಲ್ಲ. ಅದನ್ನು ಅವರು ಬಹಿರಂಗವಾಗಿಯೇ ಹೇಳಿದರು. ಈ ಪ್ರಕರಣ ಮಾರ್ಚ್ ನಲ್ಲಿ ತಮ್ಮ ಬಳಿಗೆ ಬಂದ ತಕ್ಷಣವೇ ನಾವು ಅಪರಾಧಿಗಳಿಗೆ ನೋಟೀಸು ಜಾರಿಗೊಳಿಸಲು ಆದೇಶಿಸಿದ್ದೇವೆ, ಆದರೆ ಅದು ತಲುಪಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳುತ್ತಿದ್ದಾರೆ. </span><span style="color: #222222; font-family: Arial, Helvetica, sans-serif; font-size: x-small;">I think it should be more than clear to </span><span style="color: #222222; font-family: Arial, Helvetica, sans-serif; font-size: small;">you what's happening. The problem for me is that I </span><span style="color: #222222; font-family: Arial, Helvetica, sans-serif; font-size: small;">am retiring on June 16. It is obvious that they dont </span><span style="color: #222222; font-family: Arial, Helvetica, sans-serif; font-size: small;">want me to wear the matter... That's more than </span><span style="color: #222222; font-family: Arial, Helvetica, sans-serif; font-size: x-small;">obvious...</span><span style="background-color: white; color: #222222; font-family: Arial, Helvetica, sans-serif; font-size: small;">ಎಂದವರು ಹೇಳಿದ್ದರು. ವಿಚಾರಣೆಯನ್ನು ಮುಂದೂಡುವಂತೆ ಮಾಡುವುದಕ್ಕಾಗಿ ನೋಟೀಸು ತಲುಪಿಲ್ಲ ಎಂಬ ನೆಪವನ್ನು ಹೂಡಲಾಗುತ್ತಿದೆ ಎಂಬುದು ಅವರ ವಾದವಾಗಿತ್ತು. ಸುಪ್ರೀಮ್ ಕೋರ್ಟ್ ನ್ಯಾಯಾಧೀಶರೇ ಇಂಥದ್ದೊಂದು ಮಾತನ್ನು ಹೇಳುತ್ತಾರೆಂದರೆ, ನ್ಯಾಯಾಲಯಗಳ ಕಾರ್ಯವೈಖರಿಯ ಬಗ್ಗೆ ಅನುಮಾನಿಸುವುದು ಹೇಗೆ ಅಪರಾಧವಾಗುತ್ತದೆ? ಜೋಸೆಫ್ರು ನಿವೃತ್ತರಾಗಿ ಅವರ ಸ್ಥಾನಕ್ಕೆ ತಮಗನುಕೂಲವಾದ ನ್ಯಾಯಾಧೀಶರು ಬರಬೇಕೆಂದು ಕಾಯಲು ನ್ಯಾಯಿಕ ಪ್ರಕ್ರಿಯೆಯಲ್ಲಿ ಅವಕಾಶ ಇದೆಯೆಂದಾದರೆ, ನಿವೃತ್ತರಾಗುವ ನ್ಯಾಯಾಧೀಶರನ್ನೇ ತೀರ್ಪಿಗಾಗಿ ಆಯ್ಕೆ ಮಾಡಿಕೊಳ್ಳುವ ತಂತ್ರವೂ ನಡೆಯಲಾರದೆಂದು ಹೇಗೆ ಹೇಳುವುದು? ಅಥವಾ ತಮಗೆ ಅನುಕೂಲಕರವಾದ ನ್ಯಾಯಾಧೀಶರು ಸಿಗುವವರೆಗೆ ವಿಚಾರಣಾ ಪ್ರಕ್ರಿಯೆಯನ್ನು ಮುಂದೂಡುತ್ತಾ ಸಾಗುವುದು ಮತ್ತು ಸಂದರ್ಭ, ಸನ್ನಿವೇಶ ನೋಡಿಕೊಂಡು ಪ್ರಕರಣ ವಿಚಾರಣೆಗೆ ಒಳಗಾಗುವಂತೆ ನೋಡಿಕೊಳ್ಳುವುದೆಲ್ಲ ನಡೆಯಲಾರದೆಂದು ಹೇಗೆ ನಂಬುವುದು? ನ್ಯಾಯಾಧೀಶರಾದ ಜೋಸೆಫ್ ಅವರ ಅಭಿಪ್ರಾಯ ಇಂಥ ಅನುಮಾನಗಳಿಗೆ ಪುಷ್ಠಿ ನೀಡುತ್ತದೆ. </span></p><p><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></p><p><span style="background-color: white; color: #222222; font-family: Arial, Helvetica, sans-serif; font-size: small;">ಸರಕಾರಗಳು ಬದಲಾದಂತೆ ನ್ಯಾಯಾಲಯಗಳ ತೀರ್ಪುಗಳೂ ಸರಕಾರಕ್ಕೆ ಪೂರಕವಾಗುವಂತೆ ಬರುತ್ತಿರುವುದೇಕೆ ಎಂಬ ಪ್ರಶ್ನೆ ಸದ್ಯದ ದಿನಗಳಲ್ಲಿ ನಿರ್ಲಕ್ಷಿಸದಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಜಾತಂತ್ರ ಭಾರತದಲ್ಲಿ ನ್ಯಾಯಾಲಯಗಳೇ ಭರವಸೆಯ ಅಂತಿಮ ತಾಣ. ಅದೂ ವಿಶ್ವಾಸ ಕಳಕೊಂಡರೆ ಪ್ರಜಾತಂತ್ರ ಸತ್ತಂತೆ. ಜ್ಞಾನವಾಪಿ ಮಸೀದಿ ತೀರ್ಪು ಮತ್ತು ಅದಕ್ಕಿಂತ ಮೊದಲು ಬಾಬರಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ತೀರ್ಪು ನ್ಯಾಯಾಲಯಗಳ ಮೇಲಿನ ವಿಶ್ವಾಸವನ್ನು ಕುಂದಿಸುವಂತೆ ಮಾಡಿರುವುದು ನಿಜ. ನ್ಯಾಯ ಯಾವತ್ತೂ ಜನಸಂಖ್ಯೆ, ಧರ್ಮ, ವ್ಯಕ್ತಿ, ಶಕ್ತಿಗಳ ಆಧಾರದಲ್ಲಿ ನೀಡುವಂತಿರಬಾರದು. ಅದು ಪೂರ್ಣವಾಗಿ ನ್ಯಾಯಕ್ಕೆ ಮಾತ್ರ ನಿಷ್ಠವಾಗಿರಬೇಕು. ಬಾಬರಿಯಾಗಲಿ, ಜ್ಞಾನವಾಪಿಯಾಗಲಿ ಶಾಹಿ ಈದ್ಗಾ ಆಗಲಿ ಅಥವಾ ಇನ್ನಾವುದೇ ಪ್ರಕರಣವಾಗಲಿ, ಸತ್ಯವೊಂದೇ ನ್ಯಾಯದಾನಕ್ಕೆ ಆಧಾರವಾಗಿರಬೇಕು, ಅಷ್ಟೇ.</span></p>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-33876087860268240592024-02-10T04:44:00.000-08:002024-02-10T04:44:47.051-08:00 ನಿತಿನ್, ಶಹ್ನಾ ಹುಟ್ಟು ಹಾಕಿರುವ ಪ್ರಶ್ನೆಗಳು<p><br /></p><br /><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhdpTvv3TUw6U6loDH-zGRm72Z7bOGC1B9R4tjdMniiCGpSHpZdTrkJHfr42Q-O6q78uVUnO_ob_k10QIgYS56jqndmMs5SMAa0QP0ej1i79TB-O-3T3ssrtCwqttAyHZ84_IRtEU9NtRKr3IFLql_N9fv1P7JARKrtdF3fqhBiXMeWGxOLLYdd0kxzp-3d/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEhdpTvv3TUw6U6loDH-zGRm72Z7bOGC1B9R4tjdMniiCGpSHpZdTrkJHfr42Q-O6q78uVUnO_ob_k10QIgYS56jqndmMs5SMAa0QP0ej1i79TB-O-3T3ssrtCwqttAyHZ84_IRtEU9NtRKr3IFLql_N9fv1P7JARKrtdF3fqhBiXMeWGxOLLYdd0kxzp-3d/w400-h198/page%203%20pic.jpg" width="400" /></a></div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ತನ್ನ ಸಹೋದರಿ ಮತ್ತು ತಾಯಿಯನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿದ ಮಗ ನಿತಿನ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಮಗನನ್ನೇ ಗುಂಡಿಟ್ಟು ಕೊಂದ ತಂದೆ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಪತಿ-ಪತ್ನಿ ಜಗಳಕ್ಕೆ 3 ವರ್ಷದ ಮಗು ಮೃತ್ಯು</span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಳೆದವಾರ ನಡೆದ ಈ ಮೂರು ಘಟನೆಗಳಿಗಿಂತ ಭೀಭತ್ಸಕರವಾದ ಮತ್ತು ಹೃದಯ ಹಿಂಡುವ ಹತ್ತು ಹಲವು ಘಟನೆಗಳು ಈ ಮೊದಲೂ ನಡೆದಿರ ಬಹುದು. ಮುಂದೆ ನಡೆಯಲಾರದು ಎನ್ನುವ ಖಚಿತತೆಯೂ ಇಲ್ಲ. ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯ ಸಿಇಒ ಸುಚನಾ ಸೇತ್ ಎಂಬವರು ತನ್ನ ಪುಟ್ಟ ಮಗನನ್ನು ಹತ್ಯೆ ಮಾಡಿದ ಘಟನೆ ಜನವರಿ ಆರಂಭದಲ್ಲಿ ನಡೆದಿತ್ತು. ಗಂಡ ವೆಂಕಟ್ ರಾಮನ್ನಿಂದ ವಿವಾಹ ವಿಚ್ಛೇದನ ಪಡಕೊಂಡಿದ್ದ ಸುಚನಾಗೆ ತನ್ನ ಮಗುವನ್ನು ಅವರೊಂದಿಗೆ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ, ವಾರಕ್ಕೊಂದು ಸಾರಿ ಮಗುವಿನ ಭೇಟಿಗೆ ವೆಂಕಟ್ ರಾಮನ್ಗೆ ಅವಕಾಶ ಕೊಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಜೀರ್ಣಿಸಿಕೊಳ್ಳಲಾಗದ ಸುಚನಾ ಗೋವಾದ ಲಾಡ್ಜೊಂದರಲ್ಲಿ ತನ್ನ ಮಗುವನ್ನೇ ಹತ್ಯೆ ಮಾಡಿದ್ದಳು. ಉನ್ನತ ಶಿಕ್ಷಣ ಪಡೆದ ಮತ್ತು ಕಂಪೆನಿಯೊಂದನ್ನು ಆರಂಭಿಸಿ ಸಿಇಒ ಆಗುವಷ್ಟು ಧೈರ್ಯ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದಿರುವ ಸುಚನಾ ಹೀಗೇಕೆ ಮಾಡಿದಳು ಎಂಬ ಪ್ರಶ್ನೆ ಅಸಂಖ್ಯ ಮಂದಿಯನ್ನು ಕಾಡಿತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2023ರ ಡಿಸೆಂಬರ್ನಲ್ಲಿ ಕೇರಳದಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆಯಿತು. ಶಹ್ನಾ ಎಂಬ 28ರ ಹರೆಯದ ವೈದ್ಯೆ ಆತ್ಮಹತ್ಯೆ ಮಾಡಿಕೊಂಡರು. ತಿರುವನಂತಪುರದ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಈಕೆಗೆ ರುವೈಸ್ ಎಂಬ ವೈದ್ಯನ ಜೊತೆ ಮದುವೆ ನಿಶ್ಚಿತವಾಗಿತ್ತು. ಈತ ಮೆಡಿಕಲ್ ಪಿಜಿ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ. ಆದರೆ ಮದುವೆ ಹತ್ತಿರ ಬರುತ್ತಿದ್ದಂತೆಯೇ ಈತ ನಖರಾ ಪ್ರಾರಂಭಿಸಿದ. 150 ಪವನ್ ಚಿನ್ನ, 15 ಎಕ್ರೆ ಭೂಮಿ ಮತ್ತು BMW ಕಾರು ಬೇಕೆಂದು ಬೇಡಿಕೆಯಿಟ್ಟ. ಅಷ್ಟೊಂದು ಭಾರೀ ಮೊತ್ತವನ್ನು ಕೊಡಲು ತಾನು ಅಶಕ್ತೆ ಎಂದು ಆತ್ಮಹತ್ಯೆಗಿಂತ ಮೊದಲು ಆಕೆ ಡಾ| ರುವೈಸ್ಗೆ ವಾಟ್ಸಪ್ ಸಂದೇಶ ಕಳಿಸಿದ್ದೂ ನಡೆದಿತ್ತು. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಸೀದಿ-ಮಂದಿರ, ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಇತ್ಯಾದಿ ನಿತ್ಯ ಸುದ್ದಿಗಳ ನಡುವೆ ಇಂಥ ಘಟನೆಗಳು ಸದ್ದಿಲ್ಲದೇ ಮತ್ತು ಚರ್ಚೆಗಳಿಗೊಳಗಾಗದೇ ಮರೆಯಾಗುತ್ತಿವೆ. ನಾಲ್ಕು ಮಂದಿ ಸೇರಿದ ಕಡೆಯಾಗಲಿ, ವಾಟ್ಸಪ್, ಫೇಸ್ಬುಕ್, ಟ್ವಿಟರ್ ಗಳಲ್ಲಾಗಲಿ ಇಂಥ ಘಟನೆಗಳು ಗಂಭೀರ ಚರ್ಚೆಗೆ ತೆರೆದುಕೊಳ್ಳುವುದು ಕಡಿಮೆ. ಮಂದಿರ-ಮಸೀದಿ ಚರ್ಚೆಯಲ್ಲಿ ತಿಂಗಳುಗಟ್ಟಲೆ ಚರ್ಚಿಸಲು ಆಸಕ್ತಿ ತೋರುವವರಲ್ಲಿ ಒಂದು ಶೇಕಡಾ ಆಸಕ್ತಿಯೂ ಇಂಥ ಘಟನೆಗಳ ಮೇಲೆ ಇರುವುದಿಲ್ಲ. ದೇಶದಲ್ಲಿ ಮಂದಿರ-ಮಸೀದಿಗಳಿಗೆ ಕೊರತೆಯಿಲ್ಲ. ಆದರೆ, ಮನುಷ್ಯ ಜೀವಕ್ಕೆ ಬೆಲೆಯನ್ನೇ ಕೊಡದ ಘಟನೆಗಳು ಸಾಮಾಜಿಕ ಸಂಚಲನೆಯನ್ನೇ ಸೃಷ್ಟಿಸುವುದಿಲ್ಲ ಎಂದಾದರೆ ಅದು ಕೊಡುವ ಸಂದೇಶವೇನು?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮೈಸೂರಿನ ಹುಣಸೂರು ತಾಲೂಕಿನ ಮರೂರಿನ ಘಟನೆಯನ್ನೇ ಎತ್ತಿಕೊಳ್ಳಿ. ನಿತಿನ್ನ ಸಹೋದರಿ 19 ವರ್ಷದ ಧನುಶ್ರೀ ಮುಸ್ಲಿಮ್ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಇದು ನಿತಿನ್ಗೆ ಇಷ್ಟವಿರಲಿಲ್ಲ. ಆದರೆ ಧನುಶ್ರೀಗೆ ತನ್ನ ಪ್ರೀತಿಯ ವಿಷಯದಲ್ಲಿ ತನ್ನದೇ ಆದ ಅಭಿಪ್ರಾಯಗಳಿದ್ದುವು. ಸಹೋದರಿಯ ಅಭಿಪ್ರಾಯ ವನ್ನು ಗೌರವಿಸುವ ಬದಲು ಆತ ಒಳಗೊಳಗೆ ದ್ವೇಷ ಬೆಳೆಸಿಕೊಂಡ. ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆಂದು ತಾಯಿ ಮತ್ತು ತಂಗಿಯನ್ನು ಬೈಕ್ನಲ್ಲಿ ಕೂರಿಸಿ ಹೊರಟ ಆತ ಮಾರೂರು ಕೆರೆ ಬಳಿ ಬೈಕ್ ನಿಲ್ಲಿಸಿ ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಕೆರೆಗೆ ತಳ್ಳಿದ್ದಾನೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಕರೇಕಲ್ನಲ್ಲಿ ನಡೆದ ಇನ್ನೊಂದು ಘಟನೆಯೂ ಸರಿಸುಮಾರು ಇದನ್ನೇ ಹೋಲುತ್ತದೆ. ಇಲ್ಲಿ ತಂದೆಯೇ ಸ್ವಂತ ಮಗನನ್ನು ಹತ್ಯೆ ಮಾಡಿದ್ದಾನೆ. ಮದ್ಯಪಾನದ ಗೀಳಿಗೆ ಬಿದ್ದಿದ್ದ ಸುರೇಶ್ ಎಂಬ ತಂದೆ 32 ವರ್ಷದ ಮಗ ನರ್ತನ್ ಬೋಪಣ್ಣನಲ್ಲಿ ಮದ್ಯಪಾನಕ್ಕೆ ಹಣ ಕೇಳಿದ್ದಾನೆ. ಈ ನರ್ತನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಕುಡಿತಕ್ಕೆ ಹಣ ಕೇಳಿದ ತಂದೆಯೊಂದಿಗೆ ಮಗ ಮಾತಿಗೆ ಮಾತು ಬೆಳೆಸಿದ್ದಾನೆ. ಕೊನೆಗೆ ತಂದೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ ತಮ್ಮ ಬಳಿ ಇದ್ದ ಸಿಂಗಲ್ ಬ್ಯಾರೆಲ್ ಗನ್ನಿಂದ ಬಾಗಿಲಿನತ್ತ ಗುಂಡು ಹಾರಿಸಿದ್ದು, ಅದು ಬಾಗಿಲನ್ನು ಸೀಳಿ ನರ್ತನ್ನ ತೊಡೆಯನ್ನು ಪ್ರವೇಶಿಸಿ ಗಂಭೀರವಾಗಿ ಗಾಯಗೊಳಿಸಿ ಪ್ರಾಣವನ್ನೇ ಕಸಿದಿದೆ. </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮೂರನೇ ಪ್ರಕರಣವು ಬೆಂಗಳೂರಿನ ಸುಚನಾ ಘಟನೆಯನ್ನೇ ಹೋಲುತ್ತದೆ. ಬೆಂಗಳೂರಿನ ಹಾರೋಹಳ್ಳಿಯ ಗೇರೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ದಂಪತಿಗಳ ನಡುವೆ ಜಗಳವಾಗಿದೆ. ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಈ ಜೋಡಿಯ ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಪೂರ್ಣಿಮಾ ತಾನೂ ವಿಷ ಕುಡಿದು ಮೂರು ವರ್ಷದ ಮಗು ದೀಕ್ಷಿತ್ ಗೌಡನಿಗೂ ವಿಷ ಕುಡಿಸಿದ್ದಾಳೆ. ಮಗು ಮೃತಪಟ್ಟಿದ್ದು ತಾಯಿ ಬದುಕುಳಿದಿದ್ದಾರೆ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ತನ್ನ ತಂಗಿಯನ್ನೇ ಮತ್ತು ಅಡ್ಡ ಬಂದ ತಾಯಿಯನ್ನೇ ಹತ್ಯೆ ಮಾಡುವಷ್ಟು ಭೀಕರ ಅಪರಾಧವೇ? ಇಲ್ಲಿ ಪ್ರೀತಿಯ ಮೇಲಿನ ಅಸಮಾಧಾನಕ್ಕಿಂತ ಪ್ರೀತಿಸಿದ ಯುವಕನ ಧರ್ಮವೇ ಖಳನಾಯಕ ಪಟ್ಟವನ್ನು ಪಡೆ ದಿದೆ. ಇಂಥ ದ್ವೇಷ ನಿತಿನ್ ಒಬ್ಬನ ಸಮಸ್ಯೆಯಲ್ಲ. ಈ ದೇಶದಲ್ಲಿ ಇಂಥ ಅಸಂಖ್ಯ ಯುವಕರು ಇಂಥ ದ್ವೇಷವನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಹಾಗಂತ, ಪ್ರತ್ಯಕ್ಷವಾಗಿ ಅವರಿಗೆ ಮುಸ್ಲಿಮರಿಂದ ಯಾವ ತೊಂದರೆಯೂ ಆಗಿರುವುದಿಲ್ಲ. ಮಾತ್ರವಲ್ಲ, ಇಂಥ ಮಂದಿಗೆ ಮುಸ್ಲಿಮ್ ಗೆಳೆಯರೂ ಇರುತ್ತಾರೆ. ಅವರ ಜೊತೆ ಕೊಡು-ಕೊಳ್ಳುವಿಕೆಯ ಸಂಬಂಧವೂ ಇರುತ್ತದೆ. ಹಾಗಿದ್ದೂ, ಮುಸ್ಲಿಮರೆಂದರೆ ಕೆಟ್ಟವರು ಮತ್ತು ಅವರಿಗೆ ಅನ್ಯಾಯ ಮಾಡುವುದು ಧಾರ್ಮಿಕವಾಗಿ ಸರಿ ಎಂಬಂಥ ಭಾವದೊಂದಿಗೆ ಬದುಕುತ್ತಿರುತ್ತಾರೆ. ಅಂದಹಾಗೆ, ಇಂಥ ಭಾವ ಯಾಕಿದೆ ಎಂಬ ಪ್ರಶ್ನೆ ಶ್ರೀಮಂತರಿಗೆ ಅಗತ್ಯ ಬೀಳುವುದಿಲ್ಲ. ಯಾಕೆಂದರೆ, ಅವರ ಮಕ್ಕಳು ಬೀದಿಯಲ್ಲಿಲ್ಲ. ಪ್ರೀತಿ-ಪ್ರೇಮಗಳ ಹೆಸರಲ್ಲಿ ನಡೆಯುವ ಹಲ್ಲೆ, ದೌರ್ಜನ್ಯ, ಕೇಸು, ಜೈಲು ಇತ್ಯಾದಿಗಳಲ್ಲಿ ಅವರ ಮಕ್ಕಳು ಇರುವುದಿಲ್ಲ. ನಗರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕ ಲಿಯುತ್ತಿರುವ ಅವರ ಮಕ್ಕಳನ್ನು ಅತ್ತ ಸುಳಿಯಲು ಅವರು ಬಿಡುವುದೂ ಇಲ್ಲ. ಆದರೆ, ಹೀಗೆ ಬೀದಿಯಲ್ಲಿ ಧರ್ಮರಕ್ಷಣೆ ಮಾಡುವ ಗುಂಪು ಚಂದಾ ಸಂಗ್ರಹಕ್ಕೆಂದು ಅವರ ಬಳಿಗೆ ಬಂದರೆ ಹಣ ಕೊಟ್ಟು ಆರಾಮವಾಗಿರುತ್ತಾರೆ. ಅದರಾಚೆಗೆ ಅವರಿಗೂ ಈ ಧರ್ಮರಕ್ಷಣೆಗೂ ಯಾವ ಸಂಬAಧವೂ ಇರುವುದಿಲ್ಲ. ಇನ್ನು,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಂಥ ಯುವಕರನ್ನು ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗೆ ಅಟ್ಟುವ ರಾಜಕೀಯ ಪಕ್ಷಗಳ ನಾಯಕರಿಗೂ ಇಂಥವರೊಂದಿಗೆ ಭಾವನಾತ್ಮಕ ನಂಟಿರುವುದಿಲ್ಲ. ಅವರೂ ತಮ್ಮ ಮಕ್ಕಳನ್ನು ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ವಿದೇಶದಲ್ಲಿ ಓದಿಸುತ್ತಿರುತ್ತಾರೆ. ತಮ್ಮ ಮಕ್ಕಳನ್ನು ಈ ನಾಯಕರು ಎಂದೂ ಧರ್ಮರಕ್ಷಣೆಯ ಬೀದಿ ಹೋರಾಟಕ್ಕೆ ಕಳುಹಿಸುವುದೇ ಇಲ್ಲ. ಈ ಮಕ್ಕಳ ಪ್ರೀತಿ-ಪ್ರೇಮಗಳು ಬಹಿರಂಗಕ್ಕೆ ಬರುವುದೂ ಇಲ್ಲ. ಬಂದರೂ ಅದಕ್ಕೆ ಅತ್ಯಂತ ರಸವತ್ತಾದ ಕಾರಣಗಳೊಂದಿಗೆ ಸಮ ರ್ಥಿಸಲಾಗುತ್ತದೆ. ಕೊನೆಗೆ ಈ ಮಕ್ಕಳೇ ನೇರವಾಗಿ ರಾಜಕೀಯದ ಉನ್ನತ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ. ಮಾತ್ರವಲ್ಲ, ಇದೇ ಬೀದಿ ಹೋರಾಟದ ಯುವಕರನ್ನು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಾರೆ. ಧರ್ಮರಕ್ಷಣೆಯ ಬಹುತೇಕ ಎಲ್ಲ ಹೋರಾಟಗಳ ಪರಿಸ್ಥಿತಿ ಇದುವೇ. ಬೀದಿಯಲ್ಲಿ ಹೋರಾಡುವ ಯುವಕರು ಬಹುತೇಕ ಬೀದಿಗೇ ಸೀಮಿತವಾಗಿ ಒಂದಷ್ಟು ಕೇಸುಗಳನ್ನು ಜಡಿಸಿಕೊಂಡು ಅತ್ತ ಕುಟುಂಬವನ್ನೂ ಸಾಕಲಾಗದೇ ಮತ್ತು ಪ್ರಕರಣಗಳಿಂದಲೂ ಮುಕ್ತರಾಗದೇ ಸಂಕಟ ಪಡುತ್ತಿರುತ್ತಾರೆ. ಅವರ ಮಕ್ಕಳೂ ಕ್ರಮೇಣ ಇದೇ ಹಾದಿಯನ್ನು ಹಿಡಿಯುತ್ತಾರೆ. ಅವರ ಬದುಕೂ ಕ್ರಮೇಣ ಇದೇ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ. ಹೀಗೆ ರಾಜಕಾರಣಿಯ ಮಗ ರಾಜಕಾರಣಿಯಾಗಿ ಅಥವಾ ಉದ್ಯಮಿಯೋ ಮಲ್ಟಿ ನ್ಯಾಶನಲ್ ಕಂಪೆನಿಯ ಉದ್ಯೋಗಿಯೋ ಅಥವಾ ವಿದೇಶದಲ್ಲಿ ಕೈತುಂಬಾ ಪಗಾರ ಪಡೆಯುವ ವ್ಯಕ್ತಿಯೋ ಆಗುವಾಗ ಬೀದಿ ಹೋರಾಟದವರ ಮಕ್ಕಳು ಅದೇ ಬೀದಿ ಹೋರಾಟಕ್ಕೆ ಸೀಮಿತವಾಗುತ್ತಾರೆ. ದ್ವೇಷ ಅಂತಿಮವಾಗಿ ಕೊಡುವ ಫಲಿತಾಂಶ ಇದುವೇ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿದೆ. ಇನ್ನೊಬ್ಬರ ಮಾತನ್ನು ಆಲಿಸಿಕೊಳ್ಳುವ ಮತ್ತು ತಾಳ್ಮೆಯಿಂದ ಪರಾಮರ್ಶಿಸುವ ಗುಣವೇ ಮರೆಯಾಗತೊಡಗಿದೆ. ತಕ್ಷಣವೇ ಆಕ್ರೋಶಗೊಳ್ಳುವುದು ಮತ್ತು ಸಿಟ್ಟಿನ ಕೈಯಲ್ಲಿ ತೀರ್ಮಾನ ಕೈಗೊಳ್ಳುವ ಪ್ರಕರಣಗಳು ಅಧಿಕವಾಗುತ್ತಿವೆ. ಮಗನೊಂದಿಗೆ ಜಗಳವಾಡಿ ಗುಂಡು ಹಾರಿಸಿ ಕೊಂದ ತಂದೆ ಇದಕ್ಕೆ ಒಂದು ಉದಾಹರಣೆಯಾದರೆ, ಸುಚನಾ, ಪೂರ್ಣಿಮಾ, ಶಹ್ನಾ ಇದಕ್ಕೆ ಇನ್ನಷ್ಟು ಉದಾಹರಣೆಗಳು. ವೈದ್ಯೆಯಾಗಿರುವ ಶಹ್ನಾಗೆ ಡಾ| ರುವೈಸ್ನನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ಬೇಕಾದಷ್ಟು ತಿಳುವಳಿಕೆ ಮತ್ತು ಶಿಕ್ಷಣ ಇತ್ತು. ವರದಕ್ಷಿಣೆ ಧರ್ಮವಿರೋಧಿ ಮತ್ತು ಕಾನೂನು ವಿರೋಧಿ ಎಂಬ ಪ್ರಜ್ಞೆ ಆಕೆಯಲ್ಲಿ ಇನ್ನಾರೋ ಮೂಡಿಸಬೇಕಾಗಿರಲಿಲ್ಲ. ಸ್ವತಃ ತಿಳಿದುಕೊಳ್ಳುವಷ್ಟು ಆಕೆ ಶಿಕ್ಷಿತಳಾಗಿದ್ದಳು. ವೈದ್ಯೆಯನ್ನು ಪತ್ನಿಯಾಗಿ ಪಡೆಯುವುದರ ಆಚೆಗೆ ಹಣವೂ ಭೂಮಿಯೂ ಬೇಕು ಎಂದು ಹೇಳುವ ಗಂಡನ್ನು ‘ತೊಲಗು’ ಎಂದು ಹೇಳಿ ಕಾನೂನಿನ ಕೈಗೊಪ್ಪಿಸಬೇಕಿತ್ತು. ಆದರೆ, ಆಕೆ ಈ ಕೆಚ್ಚನ್ನು ತೋರ್ಪಡಿಸುವ ಬದಲು ಬದುಕನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಳೇಕೆ? ಹಾಗಂತ, ಸುಚನಾಳನ್ನೂ ಇದೇ ಪಟ್ಟಿಯ ಲ್ಲಿಟ್ಟು ವಿಶ್ಲೇಷಿಸಬಹುದು. ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಂಥವರ ಬದುಕಿನಲ್ಲಿ ವಿಚ್ಛೇದನ ಹೊಸತಲ್ಲ. ಸಾಮಾನ್ಯವಾಗಿ ಇಂಥವರು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ತರ್ಕಿಸುವುದೂ ಇಲ್ಲ. ಪರಸ್ಪರ ಮಾತಾಡಿಕೊಂಡೇ ಬೇರೆ ಬೇರೆಯಾಗುವುದು ಮಾಮೂಲು. ಹೀಗಿರುತ್ತಾ, ಸುಚನಾ ಮಗುವನ್ನೇ ಹತ್ಯೆ ಮಾಡುವಷ್ಟು ಆಘಾತಕಾರಿ ನಿರ್ಧಾರಕ್ಕೆ ಬಂದರೇಕೆ? ಗಂಡಿಗೆ ಹೋಲಿಸಿದರೆ ಹೆಣ್ಣು ಅಪರಾಧ ಕೃತ್ಯಗಳಲ್ಲಿ ಪಾಲುಗೊಳ್ಳುವುದು ಕಡಿಮೆ. ಹಾಗಿದ್ದೂ, ಇಂಥ ಹತ್ಯೆಯೊಂದು ಅತ್ಯಂತ ಉನ್ನತ ಸ್ಥಾನದಲ್ಲಿರುವ ಮಹಿಳೆಯಿಂದ ಘಟಿಸಿದುದು ಏಕೆ? ಬಹುಶಃ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತಾಳ್ಮೆಯ ಕೊರತೆಯೇ ಈ ಎಲ್ಲಕ್ಕೂ ಕಾರಣ ಅನಿಸುತ್ತದೆ. ಇತ್ತಿತ್ತಲಾಗಿ ಆತ್ಮಹತ್ಯೆಯಂಥ ಅಪರಾಧ ಕೃತ್ಯಗಳಲ್ಲಿ ಏರಿಕೆಯಾಗುತ್ತಿರುವುದರ ಹಿಂದೆ ತಾಳ್ಮೆಯಿಂದ ಅವಲೋಕನ ನಡೆಸುವ ಶಕ್ತಿ ಕಡಿಮೆಯಾಗುವುದನ್ನೇ ಸೂಚಿಸುತ್ತದೆ. ಯಾರಲ್ಲೂ ತಾಳ್ಮೆಯಿಲ್ಲ. ಮರು ಅವಲೋಕಿಸುವ ವ್ಯವಧಾನವಿಲ್ಲ. ಇನ್ನೊಬ್ಬರಲ್ಲಿ ವಿಚಾರಿಸಿ ನಿರ್ಧಾರ ಕೈಗೊಳ್ಳುವ ಸಹನೆ ಇಲ್ಲ. ಕ್ರಿಯೆಗೆ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತ ಪಡಿಸುವುದನ್ನೇ ಪರಿಹಾರವಾಗಿ ಆಧುನಿಕ ಸಮಾಜ ಕಾಣುತ್ತಿದೆ. ಇಂಥ ಪ್ರವೃತ್ತಿಯು ಮಗನನ್ನೇ ತಂದೆ ಹತ್ಯೆ ಮಾಡುವ ಅಥವಾ ತಾಯಿ, ತಂಗಿಯನ್ನೇ ಮಗ ಹತ್ಯೆ ಮಾಡುವ ಆಘಾತಕಾರಿ ಬೆಳವಣಿಗೆಗೂ ಕಾರಣವಾಗುತ್ತಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /></div></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-28974861416087401822024-01-17T04:23:00.000-08:002024-01-17T04:23:29.625-08:00 2023: ಒಂದು ತುದಿಯಲ್ಲಿ ಬಿದೂರಿ, ಇನ್ನೊಂದು ತುದಿಯಲ್ಲಿ ಗೌತಮ್ ಗಂಭೀರ್<p><br /><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEj-YZ_FyoCmXyxkOEJ0P2MFTy0tmlWdWLDomBrtWBTpuIhm9MQqX_MlQiJgEmrWBG1n2-RgsKnaOd_0QQNw-zdL1dNbSz5fNNneCIdahuQDzero1Bqq-N7wWl9IqfrX3jFL_KDy9VhTX_Wbqzm2gBAEm7q4GnU5EfF4Ax_OybQjvV2QGYxgOmG5Sx5_C3LX/w400-h198/page%203%20pic.jpg" width="400" /></p><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">1. ರಮೇಶ್ ಬಿದೂರಿ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಗೌತಮ್ ಗಂಭೀರ್ </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">2023ರಲ್ಲಿ ನಡೆದ ಮುಸ್ಲಿಮ್ ದ್ವೇಷದ ಘಟನಾವಳಿಗಳನ್ನು</span><span style="background-color: white; color: #222222; font-family: Arial, Helvetica, sans-serif; font-size: small;"> ಅವಲೋಕಿಸುವಾಗ ಥಟ್ಟನೆ ಎದುರು ಬಂದ ಎರಡು ಹೆಸರುಗಳಿವು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸೆಪ್ಟೆಂಬರ್ನಲ್ಲಿ ನಡೆದ ಪಾರ್ಲಿಮೆಂಟ್ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿದೂರಿ ಅತ್ಯಂತ ಅನಾಗರಿಕವಾಗಿ ವರ್ತಿಸಿದರು. ಬಿ.ಎಸ್.ಪಿ. ಸಂಸದ ದಾನಿಶ್ ಅಲಿಯನ್ನು ಮುಲ್ಲಾ ಆತಂಕ್ವಾದಿ, ಉಗ್ರವಾದಿ, ಮುಂಜಿ ಮಾಡಿಕೊಂಡವ, ವೇಶ್ಯಾವಾಟಿಕೆ ನಡೆಸುವವ ಎಂದೆಲ್ಲಾ ಅಷ್ಟೂ ಸದಸ್ಯರ ಮುಂದೆ ದೂಷಿಸಿದರು. ದಾನಿಶ್ ಅಲಿ ದಿಗ್ಭ್ರಾಂತರಾದರು. ಪಾರ್ಲಿಮೆಂಟ್ ಎತಿಕ್ಸ್ ಸಮಿತಿಯ ಸದಸ್ಯರಾಗಿರುವ ತನ್ನನ್ನೇ ಆತಂಕ್ವಾದಿ, ಕಟುವಾ ಎಂದು ಪಾರ್ಲಿಮೆಂಟ್ ಒಳಗೆಯೇ ಸದಸ್ಯನೋರ್ವ ದೂಷಿಸುವುದಾದರೆ, ಪಾರ್ಲಿಮೆಂಟ್ ಹೊರಗಿನ ವಿಶಾಲ ಭಾರತದಲ್ಲಿ ಸಾಮಾನ್ಯ ಮುಸ್ಲಿಮರು ಎಂತೆಂಥ ದೂಷಣೆಗಳನ್ನು ಎದುರಿಸುತ್ತಿರಬಹುದು ಎಂದು ಆತಂಕಪಟ್ಟರು. ಎಲ್ಲೆಡೆ ವಿರೋಧ ವ್ಯಕ್ತವಾದಾಗ ಬಿಜೆಪಿ ಎಂದಿನ ತಂತ್ರವನ್ನು ಹೆಣೆಯಿತು. ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ ನಡೆಸುವವರು ಹೇಗೆ ತಮ್ಮ ಮೇಲೆಯೂ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿ ಪ್ರಕರಣ ಇತ್ಯರ್ಥಪಡಿಸುವ ತಂತ್ರ ಹೆಣೆಯುತ್ತಾರೋ ಅದೇ ವಿಧಾನವನ್ನು ಇಲ್ಲೂ ಬಳಸ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಲಾಯಿತು. ‘ದಾನಿಶ್ ಅಲಿಯ ಪ್ರಚೋದನಕಾರಿ ಮಾತುಗಳಿಗೆ ಪ್ರತಿಯಾಗಿ ಬಿದೂರಿ ಈ ಪ್ರತಿಕ್ರಿಯೆ ನೀಡಿದ್ದು, ಅದೂ ವಿಚಾರಣೆಗೆ ಒಳಗಾಗಬೇಕು’ ಎಂದು ಸ್ಪೀಕರ್ ಓಂ ಬಿರ್ಲಾರಿಗೆ ದೂರು ನೀಡಿತು. ಅಂದರೆ, ಯಾರಾದರೂ ಪ್ರಚೋದಿಸಿದರೆ, ಧರ್ಮದ್ವೇಷಿ ಪದಗಳ ಮೂಲಕ ಪಾರ್ಲಿಮೆಂಟ್ ಒಳಗೆ ನಿಂದಿಸಬಹುದು ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಸಮರ್ಥಿಸಿತು. ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬಿದೂರಿಯ ಧರ್ಮದ್ವೇಷಿ ಬೈಗುಳವನ್ನು ಸೆರೆಹಿಡಿದ ಪಾರ್ಲಿಮೆಂಟ್ ಕ್ಯಾಮರಾವು ದಾನಿಶ್ ಅಲಿಯ ಪ್ರಚೋದನೆಯನ್ನು ಯಾಕೆ ಸೆರೆ ಹಿಡಿದಿಲ್ಲ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಇದು ಪ್ರಕರಣದ ಗಂಭೀರತೆಯನ್ನು ತಣಿಸುವ ಮತ್ತು ಗಮನ ಬೇರೆಡೆಗೆ ಸೆಳೆಯುವ ಬಿಜೆಪಿ ತಂತ್ರದ ಭಾಗವೇ ಹೊರತು ಇನ್ನೇನಲ್ಲ. ಈಗ ಈ ಪ್ರಕರಣ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಇದೇವೇಳೆ, ಇದೇ ಬಿದೂರಿಗೆ ರಾಜಸ್ತಾನದ ಅಸೆಂಬ್ಲಿ ಚುನಾವಣೆಯ ವೇಳೆ ಟೋಂಕ್ ಜಿಲ್ಲೆಯ ಪ್ರಚಾರ ಉಸ್ತುವಾರಿಯನ್ನು ಬಿಜೆಪಿ ವಹಿಸಿಕೊಟ್ಟಿತು. ಇದು ಮುಸ್ಲಿಮರು ಹೆಚ್ಚಿರುವ ಜಿಲ್ಲೆ. ಮುಸ್ಲಿಮ್ ದ್ವೇಷದ ಮಾತುಗಳನ್ನು ಉದುರಿಸಿ ಧ್ರುವೀಕರಣ ನಡೆಸುವುದರ ಹೊರತಾಗಿ ಇದಕ್ಕೆ ಬೇರೆ ಯಾವ ಉದ್ದೇಶ ಇರಬಹುದು? ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಾಜಿ ಕ್ರಿಕೆಟಿಗ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ರದ್ದು ಇನ್ನೊಂದು ಬಗೆ. ಪಾಕ್ ಜೊತೆ ಕ್ರಿಕೆಟ್ ಸಂಬಂಧವನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ಬಲವಾಗಿ ವಾದಿಸಿದ ವ್ಯಕ್ತಿ ಈ ಗಂಭೀರ್. ತನ್ನ ಈ ನಿಲುವನ್ನು ಅವರು ಅನೇಕ ಬಾರಿ ಬಹಿರಂಗವಾಗಿ ಸಾರಿದ್ದಾರೆ. ಆದರೆ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಇದೇ ಗಂಭೀರ್ ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಪಕ್ಕ ಕೂತು ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಒಂದುಕಡೆ ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎನ್ನುತ್ತಾ ಇ ನ್ನೊಂದು ಕಡೆ ವೀಕ್ಷಕ ವಿವರಣೆ ನೀಡುವುದು ಇಬ್ಬಂದಿತನವಲ್ಲವೇ ಎಂಬ ಸೋಶಿಯಲ್ ಮೀಡಿಯಾ ಪ್ರಶ್ನೆಗೆ ಸಿಟ್ಟಾದರು. ಹಣದ ಮುಂದೆ ಯಾವ ಸಿದ್ಧಾಂತವೂ ನಿಲ್ಲುವುದಿಲ್ಲ ಅನ್ನುವುದನ್ನು ಅವರು ಈ ಮೂಲಕ ತನ್ನ ಬೆಂಬಲಿಗರಿಗೆ ಸ್ಪಷ್ಟಪಡಿಸಿದರು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">202</span><span style="color: #222222; font-family: Arial, Helvetica, sans-serif; font-size: x-small;">3</span><span style="background-color: white; color: #222222; font-family: Arial, Helvetica, sans-serif; font-size: small;"> ಜನವರಿಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಜಾಹೀರಾತೊಂದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ ಎರಡು ಚಿತ್ರಗಳಿದ್ದುವು. 2017ಕ್ಕಿಂತ ಮೊದಲು ಮತ್ತು 2017ರ ನಂತರ ಎಂದು ಈ ಎರಡೂ ಚಿತ್ರಗಳಿಗೆ ಒಕ್ಕಣೆ ನೀಡಲಾಗಿತ್ತು. ಕುತ್ತಿಗೆಗೆ ಶಾಲು ಹಾಕಿಕೊಂಡ ಯುವಕ ಕೈಯಲ್ಲಿರುವ ಪೆಟ್ರೋಲ್ ಬಾಂಬ್ ಎಸೆಯುವ ಚಿತ್ರ 2017ಕ್ಕಿಂತ ಮೊದಲಿನದ್ದಾದರೆ ಅದೇ ಯುವಕ ಕೈ ಮುಗಿದು ಕ್ಷಮೆ ಯಾಚಿಸುವ ಚಿತ್ರ 2017ರ ನಂತರದ್ದು. ಉತ್ತರ ಪ್ರದೇಶದ ಮುಸ್ಲಿಮರು ಸಾಮಾನ್ಯವಾಗಿ ಕುತ್ತಿಗೆಗೆ ಶಾಲು ಸುತ್ತುವುದು ರೂಢಿ. ಅದನ್ನೇ ಅನ್ವರ್ಥವಾಗಿ ಈ ಚಿತ್ರದಲ್ಲಿ ಬಳಸಲಾಗಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ದಮನಿಸಿದ್ದಾರೆ ಎಂದು ಪರೋಕ್ಷ ಸಂದೇಶ ಸಾರುವ ಈ ಜಾಹೀರಾತನ್ನು ಬಿಜೆಪಿ ಸಮರ್ಥಿಸಿಕೊಂಡಿತು. ಅದರಲ್ಲಿ ಮುಸ್ಲಿಮ್ ಅಂತ ಎಲ್ಲಿದೆ ಎಂಬುದು ಬಿಜೆಪಿಯ ಪ್ರ ಶ್ನೆಯಾಗಿತ್ತು. ಆದರೆ ಈ ಜಾಹೀರಾತಿನ ಒಳಾರ್ಥ ಏನು ಮತ್ತು ಜಾಹೀರಾತು ಯಾರ ಕುರಿತಾಗಿದೆ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವಂತಿತ್ತು. ‘ಕ್ರಿಮಿನಲ್ಗಳನ್ನು ಅವರು ಧರಿಸಿರುವ ಬಟ್ಟೆಯಿಂದ ಗುರುತಿಸಬಹುದು’ ಎಂದು ಪ್ರಧಾನಿ ಮೋದಿಯವರು ಈ ಹಿಂದೆ ಎನ್.ಆರ್.ಸಿ. ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದ್ದರು. ಹಾಗಂತ, ಕ್ರಿಮಿನಲ್ಗಳಿಗೆ ಯಾವ ಧರ್ಮವನ್ನೂ ಜೋಡಿಸಿಲ್ಲವಾದರೂ ಪ್ರಧಾನಿಯ ಗುರಿ ಯಾರು ಅನ್ನುವುದಕ್ಕೆ ವಿಶೇಷ ವಿವರಣೆಯ ಅಗತ್ಯವಿರಲಿಲ್ಲ. ಮುಸ್ಲಿಮರು ಎಂದು ಹೇಳದೇ ಮುಸ್ಲಿಮರ ನ್ನು ಅಪರಾಧಿಗಳಂತೆ ನಡೆಸಿಕೊಳ್ಳುವ ವಿಧಾನ ಇದು. ಮುಸ್ಲಿಮರು ಕ್ರಿಮಿನಲ್, ದಂಗೆಕೋರರು ಎಂಬೆಲ್ಲಾ ಸಂದೇಶವನ್ನು ಪರೋಕ್ಷವಾಗಿ ಸಾರುತ್ತಾ ಮುಸ್ಲಿಮ್ ದ್ವೇಷವನ್ನು ಸಾರ್ವತ್ರಿಕವಾಗಿ ಬಿತ್ತುವ ಅಪಾಯಕಾರಿ ತಂತ್ರ ಇದು.</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">202</span><span style="color: #222222; font-family: Arial, Helvetica, sans-serif; font-size: x-small;">3</span><span style="background-color: white; color: #222222; font-family: Arial, Helvetica, sans-serif; font-size: small;"> ಜೂನ್ನಲ್ಲಿ ಒಡಿಸ್ಸಾದ ಬಾಲಸೋರ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತು. ತಕ್ಷಣ ಈ ರೈಲು ಅಪಘಾತಕ್ಕೆ ಮುಸ್ಲಿಮ್ ವ್ಯಕ್ತಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸೃಷ್ಟಿಸಿ ಹಂಚಲಾಯಿತು. ಅಪಘಾತ ನಡೆದ ಸ್ಥಳದ ರೈಲ್ವೇ ಸ್ಟೇಷನ್ ಅಧಿಕಾರಿ ಮುಸ್ಲಿಮ್ ಎಂದು ಈ ಸುದ್ದಿಯಲ್ಲಿ ಹೇಳಲಾಯಿತು. ಭಾರೀ ಸಂಖ್ಯೆಯಲ್ಲಿ ಈ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಯಿತಲ್ಲದೇ, ಕರ್ನಾಟಕದ ಹಳ್ಳಿ ಮೂಲೆಯ ವಾಟ್ಸಾಪ್ನಲ್ಲೂ ಪ್ರತ್ಯಕ್ಷವಾಯಿತು. ಆ ಬಳಿಕ ಇನ್ನೊಂದು ಸುಳ್ಳು ಸುದ್ದಿಯನ್ನು ತೇಲಿಬಿಡಲಾಯಿತು. ಅಪಘಾತ ನಡೆದ ಸ್ಥಳದಲ್ಲಿರುವ ಬಿಳಿ ಕಟ್ಟಡವೊಂದನ್ನು ತೋರಿಸಿ ಇದು ಮಸೀದಿಯಾಗಿದ್ದು, ಇಲ್ಲಿ ನಡೆಸಲಾದ ಸಂಚಿನಿಂದಲೇ ಈ ಅಪಘಾತ ನಡೆದಿದೆ ಎಂದು ಹೇಳಲಾಯಿತು. ಮಾತ್ರವಲ್ಲ, ಶುಕ್ರವಾರ ಅಪಘಾತ ನಡೆದಿರುವುದನ್ನೂ ವಿಶೇಷವಾಗಿ ಉಲ್ಲೇಖಿಸಲಾಯಿತು. ಮಸೀದಿಯಲ್ಲಿ ಶುಕ್ರವಾರ ಸೇರಿದ ಮುಸ್ಲಿಮರು ಈ ರೈಲು ಅಪಘಾತವಾಗುವಂತೆ ಕುತಂತ್ರ ಹೆಣೆದರು ಎಂದು ಸೂಚಿಸುವುದಕ್ಕಾಗಿಯೇ ಶುಕ್ರವಾರವನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ಕೂಡಾ ಭಾರೀ ಪ್ರಮಾಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ</span></div><div><span style="background-color: white; color: #222222; font-family: Arial, Helvetica, sans-serif; font-size: small;">ಹಂಚಿಕೆಯಾಯಿತು. ಆ ಬಳಿಕ, ಈ ಬಿಳಿ ಕಟ್ಟಡವು ಹರೇಕಷ್ಣ ಪಂಥದ ಮಂದಿರ ಎಂದು ಬಹಿರಂಗವಾಯಿತು. ಮುಸ್ಲಿಮ್ ದ್ವೇಷ ಈ ಮಣ್ಣಿನಲ್ಲಿ ಹೇಗೆ ಬೆಳೆಯುತ್ತಿದೆ ಮತ್ತು ಮುಸ್ಲಿಮ್ ಭೀತಿಯನ್ನು ಹೇಗೆಲ್ಲ ಹರಡಲಾಗುತ್ತಿದೆ ಅನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಝೀ ನ್ಯೂಸ್ ಚಾನೆಲ್ನಲ್ಲಿ ಸುಧೀರ್ ಚೌಧರಿ ನಡೆಸಿಕೊಡುವ ಬ್ಲ್ಯಾಕ್ ಆಂಡ್ ವೈಟ್ ಪ್ರೈಮ್ ಟೈಮ್ ಶೋನಲ್ಲಿ ಮುಸ್ಲಿಮ್ ತುಷ್ಠೀಕರಣದ ವಿಷಯವನ್ನು ಎತ್ತಿಕೊಂಡರು. ‘ಮುಸ್ಲಿಮರು ವಾಹನ ಖರೀದಿಸಲು ಕರ್ನಾಟಕ ಸರಕಾರವು 50% ಧನಸಹಾಯ ಮತ್ತು 3 ಲಕ್ಷ ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ’ ಎಂದು ಹೇಳಿದ ಚೌಧರಿ, ಹಿಂದೂಗಳಿಗೆ ಏನೇನೂ ಇಲ್ಲ ಎಂದರು. </span><span style="background-color: white; color: #222222; font-family: Arial, Helvetica, sans-serif; font-size: small;">ಹೇಗೆ ಸಿದ್ದರಾಮಯ್ಯ ಸರಕಾರವು ಮುಸ್ಲಿಮ್ ಓಲೈಕೆಯಲ್ಲಿ ತೊಡಗಿದೆ ಮತ್ತು ಹಿಂದೂ ವಿರೋಧಿಯಾಗಿ ನಡಕೊಳ್ಳುತ್ತಿದೆ ಎಂದು ಭಾಷಣವನ್ನು ಬಿಗಿದರು. ನಿಜವಾಗಿ, ಇದು ತಿರುಚಿದ ಸತ್ಯವಾಗಿತ್ತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆ.ಎಂ.ಡಿ.ಸಿ.)ವು ಮುಸ್ಲಿಮರೂ ಸೇರಿದಂತೆ ಕ್ರೈಸ್ತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಸೌಲಭ್ಯವನ್ನು ಘೋಷಿಸಿದ್ದು ನಿಜ. ಆದರೆ ಈ ಸೌಲಭ್ಯ ಅಲ್ಪಸಂಖ್ಯಾತರಿಗೆ ಮಾತ್ರ ಇರುವುದಲ್ಲ. ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಹಿಂದೂಗಳಿಗೂ ನೀಡಲಾಗುತ್ತಿದೆ. ಆದರೆ, ಸುಧೀರ್ ಚೌಧರಿ ಈ ಸತ್ಯ ಅಡಗಿಸಿಟ್ಟು ಮುಸ್ಲಿಮ್ ದ್ವೇಷವನ್ನು ಬಿತ್ತುವುದಕ್ಕೆ ಪ್ರಯತ್ನಿಸಿದರು. ಇವರ ವಿರುದ್ಧ ಇಲಾಖೆಯ ಶಿವ ಕುಮಾರ್ ಅವರು ದೂರು ದಾಖಲಿಸಿದರು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜಾಗತಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ ಆದ ಬಳಿಕ ಮಾಧ್ಯಮದವರು ಅವರ ತಾಯಿಯನ್ನು ಸಂದರ್ಶಿಸಿದ ಘಟನೆ ನಡೆಯಿತು. ನೀರಜ್ ಅವರ ಆತ್ಮೀಯ ಗೆಳೆಯ ಪಾಕಿಸ್ತಾನದ ಅರ್ಶದ್ ನದೀಮ್ ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ‘ನಿಮ್ಮ ಮಗ ಪಾಕಿಸ್ತಾನಿಯನ್ನು ಸೋಲಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪತ್ರಕರ್ತನೋರ್ವ ಆ ತಾಯಿಯಲ್ಲಿ ಪ್ರಶ್ನಿಸಿದರು. ನಿಜವಾಗಿ ಈ ಪ್ರಶ್ನೆಯು ಕುಚೋದ್ಯವಾಗಿತ್ತು. ಪಾಕಿಸ್ತಾನವನ್ನು ದೂಷಿಸುವ ಮೂಲಕ ಭಾರತೀಯ ಮುಸ್ಲಿಮರನ್ನು ಪರೋಕ್ಷವಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಇಲ್ಲಿನ ಮಾಧ್ಯಮ ನೀತಿ. ಬಿಜೆಪಿಯೂ ಇದನ್ನೇ ಮಾಡುತ್ತಿದೆ. ಪಾಕಿಸ್ತಾನವನ್ನು ದೂಷಿಸುವ ಉತ್ತರವೊಂದನ್ನು ನಿರೀಕ್ಷಿಸಿಯೇ ಈ ಪತ್ರಕರ್ತ ಈ ಪ್ರಶ್ನೆ ಕೇಳಿರಬೇಕು ಎಂದೇ ಅನಿಸುತ್ತದೆ. ಆದರೆ ಆ ತಾಯಿ ಕೊಟ್ಟ ಉತ್ತರವಂತೂ ಜೀವನದಲ್ಲಿ ಇನ್ನೆಂದೂ ಇಂಥ ಪ್ರಶ್ನೆಯನ್ನು ಆ ಪತ್ರಕರ್ತ ಕೇಳಬಾರದೆಂಬಷ್ಟು ಮಾರ್ಮಿಕವಾಗಿತ್ತು. ಆ ತಾಯಿ ಹೇಳಿದ್ದು ಹೀಗೆ;</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">“ಆಟಗಾರ ಕೇವಲ ಆಟಗಾರ ಮಾತ್ರ, ಆತ ಯಾವ ದೇಶದವ ಎಂಬುದು ಮುಖ್ಯ ಆಗುವುದಿಲ್ಲ. ಒಂದುವೇಳೆ, ಅರ್ಶದ್ ನದೀಮ್ ಈ ಚಾಂಪಿಯನ್ಶಿಪನ್ನು ಜಯಿಸುತ್ತಿದ್ದರೂ ನಾನು ಸಂತೋಷಪಡುತ್ತಿದ್ದೆ.”</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇವಲ್ಲದೇ ಇನ್ನೂ ಕೆಲವು ಮುಸ್ಲಿಮ್ ದ್ವೇಷಿ ಘಟನೆಗಳೂ 202</span><span style="color: #222222; font-family: Arial, Helvetica, sans-serif; font-size: x-small;">3</span><span style="background-color: white; color: #222222; font-family: Arial, Helvetica, sans-serif; font-size: small;">ರಲ್ಲಿ ನಡೆದಿವೆ. ಭಾರತ ಮತ್ತು ಪಾಕ್ಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನಿಯರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಬಾರದು ಎಂದು ಪೊಲೀಸ್ನೋರ್ವ ತಡೆದದ್ದು ಇದರಲ್ಲಿ ಒಂದು. ಚೇತನ್ ಸಿಂಗ್ ಎಂಬ ರೈಲ್ವೇ ಕಾನ್ಸ್ಟೇಬಲ್ ಮೂವರು ಮುಸ್ಲಿಮರನ್ನು ಹುಡುಕಿ ಕೊಂದದ್ದು ಮತ್ತು ಬಳಿಕ ಜೈ ಮೋದಿ, ಜೈ ಯೋಗಿ ಎಂದು ಘೋಷಿಸಿದ್ದೂ ಇದರಲ್ಲಿ ಒಂದು. ಉತ್ತರ ಪ್ರದೇಶದ ಮುಝಫ್ಫರ್ ನಗರ್ನಲ್ಲಿ ತೃಪ್ತ ತ್ಯಾಗಿ ಎಂಬ ಟೀಚರ್ 7 ವರ್ಷದ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಹಿಂದೂ ವಿದ್ಯಾರ್ಥಿಗಳಿಂದ ಬಾರಿಸಿದ್ದೂ ಇದರಲ್ಲಿ ಒಂದು. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯಿತ್ ಅಂತೂ ತೃಪ್ತ ತ್ಯಾಗಿ ವಿರುದ್ಧದ ಕೇಸ್ ಹಿಂಪಡೆದುಕೊಳ್ಳುವಂತೆ ಮುಸ್ಲಿಮ್ ವಿದ್ಯಾರ್ಥಿಯ ಹೆತ್ತವರ ಮೇಲೆ ಒತ್ತಡವನ್ನೂ ತಂದರು. ಗುಜರಾತ್ನ ಮೆಹ್ಸಾನಾದಲ್ಲಿ ಇನ್ನೂ ಒಂದು ಆಘಾತಕಾರಿ ಘಟನೆ ನಡೆಯಿತು. 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಸಾನ್ ಬಾನುಳನ್ನು ಸನ್ಮಾನಿಸದೇ ದ್ವಿತೀಯ ಸ್ಥಾನಿಯಾದ ಹಿಂದೂ ವಿದ್ಯಾರ್ಥಿ ನಿಯನ್ನು ಕರೆದು ಸನ್ಮಾನಿಸಿತು. ಚಂದ್ರಯಾನ ಯಶಸ್ವಿಯಾದ ಬೆನ್ನಿಗೇ ದೆಹಲಿಯ ಕೈಲಾಶ್ ನಗರದ ಹೇಮಾ ಗುಲಾಠಿ ಎಂಬ ಟೀಚರ್ ವಿವಾದಕ್ಕೆ ಗುರಿಯಾದರು. ‘ದೇಶಭಕ್ತಿ ಪಠ್ಯ’ವನ್ನು ಬೋಧಿಸುತ್ತಿದ್ದ ವೇಳೆ ಮುಸ್ಲಿಮ್ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ, ನಿಮಗೆ ಭಾರತದಲ್ಲಿರಲು ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಹೋಗಿ, ಪ್ರಾಣಿ ಕೊಯ್ದು ತಿನ್ನುವವರು ನೀವು.. ಎಂದೆಲ್ಲಾ ನಿಂದಿಸಿದ್ದು ನಡೆಯಿತು. ಆ ಬಳಿಕ ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು.</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಇವು 2023ರಲ್ಲಿ ಈ ದೇಶದಲ್ಲಿ ನಡೆದ ಮುಸ್ಲಿಮ್ ದ್ವೇಷದ ಕೆಲವು ಸ್ಯಾಂಪಲ್ಗಳಿವು. ಈ ದೇಶದಲ್ಲಿ ಅಧಿಕಾರದಲ್ಲಿರುವವರು ಮತ್ತು ಮಾಧ್ಯಮಗಳು ಮುಸ್ಲಿಮ್ ದ್ವೇಷವನ್ನು ಉತ್ಪಾದಿಸಿ ಹಂಚುತ್ತಿದೆ ಮತ್ತು ಇದಕ್ಕೆ ವ್ಯಾಪಕ ಮಾರುಕಟ್ಟೆ ಒದಗುವಂತೆಯೂ ನೋಡಿಕೊಳ್ಳುತ್ತಿದೆ. ನಿಜಕ್ಕೂ ಇದು ವಿಷಾದಕರ.</span></span><br style="background-color: white; color: #222222; font-family: Arial, Helvetica, sans-serif; font-size: small;" /></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-22567149136085562972024-01-17T04:01:00.000-08:002024-01-17T04:01:07.958-08:00 ಮುಸ್ಲಿಮ್ ಲೀಗ್, SDPI ಗೆ ಓಟು ಹಾಕದ ಮುಸ್ಲಿಮರು ಇಸ್ಲಾಮ್ ವಿರೋಧಿಗಳೇ?<p><br /></p><br /><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEibfNfvznI7Zq4YCjbni4A1b7t-FRUb215SMwRg239w-kKk-__sA-Dry36IugbhudMIfFWE5Bx90AMSWudAckvS8zP74mI9ZfbqaazUguusvqOUJCbOQEGiXeneqMkpGgQ3DSx5rnczWYfgw-WogGcI7hoyn-Bkt0APcLPrfJ_jWcpD-WHuUru8Dw0g0i7A/s1352/page%203%20pic%20(3).jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEibfNfvznI7Zq4YCjbni4A1b7t-FRUb215SMwRg239w-kKk-__sA-Dry36IugbhudMIfFWE5Bx90AMSWudAckvS8zP74mI9ZfbqaazUguusvqOUJCbOQEGiXeneqMkpGgQ3DSx5rnczWYfgw-WogGcI7hoyn-Bkt0APcLPrfJ_jWcpD-WHuUru8Dw0g0i7A/w400-h198/page%203%20pic%20(3).jpg" width="400" /></a></div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ (AIMIM)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ನ್ಯಾಶನಲ್ ಕಾನ್ಫರೆನ್ಸ್ (NC)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">5. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PDP)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">6. ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">7. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI)</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span><div><span style="background-color: white; color: #222222; font-family: Arial, Helvetica, sans-serif; font-size: small;">ಮುಸ್ಲಿಮ್ ನಾಯಕತ್ವದ ಮತ್ತು ಮುಸ್ಲಿಮ್ ವ್ಯಕ್ತಿಗಳೇ ಸ್ಥಾಪಿಸಿರುವ ಈ ಯಾವ ರಾಜಕೀಯ ಪಕ್ಷಗಳಿಗೂ ಮುಸ್ಲಿಮರು ಇಸ್ಲಾಮನ್ನು ಒತ್ತೆ ಇಟ್ಟಿಲ್ಲ. ಇವು ಎಂದಲ್ಲ, ಇವುಗಳ ಹೊರತಾಗಿ ಸಣ್ಣ-ಪುಟ್ಟ ಮುಸ್ಲಿಮ್ ನೇತೃತ್ವದ ಅನೇಕ ರಾಜಕೀಯ ಪಕ್ಷಗಳು ಈ ದೇಶದಲ್ಲಿವೆ. ಈ ರಾಜಕೀಯ ಪಕ್ಷಗಳನ್ನು ಅಥವಾ ಇವುಗಳಲ್ಲಿ ಯಾವುದಾದರೂ ಒಂದನ್ನು ಇಸ್ಲಾಮಿನ ನಿಜವಾದ ರಕ್ಷಕ ಎಂದು ಷರಾ ಬರೆದು ಮುಸ್ಲಿಮರು ಸಾಮೂಹಿಕವಾಗಿ ಅದನ್ನು ಬೆಂಬಲಿಸಿಲ್ಲ. ಮುಸ್ಲಿಮರು ಈ ಎಲ್ಲ ಪಕ್ಷಗಳನ್ನೂ ಬರೇ ರಾಜಕೀಯ ಪಕ್ಷಗಳಾಗಿಯಷ್ಟೇ ನೋಡಿದ್ದಾರೆಯೇ ಹೊರತು ಇಸ್ಲಾಮಿನ ಅಭ್ಯುದಯಕ್ಕಾಗಿ ಸ್ಥಾಪಿಸಲ್ಪಟ್ಟ ಪಕ್ಷ ಎಂದು ಘೋಷಿಸಿದ್ದೋ ಕರೆ ಕೊಟ್ಟದ್ದೋ ಇಲ್ಲವೇ ಇಲ್ಲ. ಈ ಎಲ್ಲ ರಾಜಕೀಯ ಪಕ್ಷಗಳಿದ್ದೂ ಮುಸ್ಲಿಮರು ಇವುಗಳಿಗೆ ಹೊರತಾದ ಮತ್ತು ಹಿಂದೂಗಳೇ ಸ್ಥಾಪಿಸಿರುವ ಹಾಗೂ ಹಿಂದೂಗಳ ನಾಯಕತ್ವದಲ್ಲೇ ಇರುವ ರಾಜಕೀಯ ಪಕ್ಷಗಳಿಗೆ ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳಾಗಿಯೇ ನೋಡುವ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕೆ ಖಾಝಿಗಳನ್ನು (ನಿರ್ದಿಷ್ಟ ಧರ್ಮಗುರುಗಳು) ಅವಲಂಬಿಸುವ ವಿವೇಕವನ್ನು ಮುಸ್ಲಿಮರು ಈವರೆಗೂ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಮಣ್ಣಿನಲ್ಲಿ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಿಗೆ ಭವ್ಯ ಇತಿಹಾಸವಿದೆ. ಭಾರತ ವಿಭಜನೆಯಾದ ಬಳಿಕ ಮುಹಮ್ಮದ್ ಇಸ್ಮಾಈಲ್ ಎಂಬವರ ನೇತೃತ್ವದಲ್ಲಿ 1948 ಮಾರ್ಚ್ 10ರಂದು ಆಲ್ ಇಂಡಿಯಾ ಮುಸ್ಲಿಮ್ ಲೀಗ್ನ ಮೊದಲ ಸಭೆ ಮದ್ರಾಸ್ನಲ್ಲಿ ನಡೆಯಿತು. 1951 ಸೆ. 1ರಂದು ಇದರ ಹೆಸರನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (</span><span style="background-color: white; color: #222222; font-family: Arial, Helvetica, sans-serif; font-size: small;">IUML</span><span style="background-color: white; color: #222222; font-family: Arial, Helvetica, sans-serif; font-size: small;">) ಎಂದು ಮರು ನಾಮಕರಣ ಮಾಡಲಾಯಿತು. 2004ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಮ್ ಲೀಗ್ ಸ್ಥಾನವನ್ನೂ ಪಡೆಯಿತು. ಈಗ ಮುಹಮ್ಮದ್ ಬಶೀರ್, ಅಬ್ದುಸ್ಸಮದ್ ಸಮದಾನಿ ಮತ್ತು ನವಾಜ್ ಎಂಬವರು ಲೋಕಸಭಾ ಸದಸ್ಯರಾಗಿ ಈ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ ರಾಜ್ಯಸಭೆಯನ್ನು ಅಬ್ದುಲ್ ವಾಹಿದ್ ಪ್ರತಿ ನಿಧಿಸುತ್ತಿದ್ದಾರೆ. ಅಲ್ಲದೇ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮುಹಮ್ಮದ್ ಇಸ್ಮಾಈಲ್ ಸಾಹಿಬ್ ಮತ್ತು ಮುಹಮ್ಮದ್ ಅಲಿ ಶಿಬಾಹ್ ತಂಙಳ್ ಅವರ ಹೆಸರಲ್ಲಿ ಅಂಚೆ ಚೀಟಿಯೂ ಬಿಡುಗಡೆಯಾಗಿದೆ. ಪ್ರವಾದಿ ಕುಟುಂಬ ಪರಂಪರೆಯ ಸೈಯದ್ ಬಾಫಾಖಿ ತಂಙಳ್, ಸಾದಿಕ್ ಅಲಿ ಶಿಹಾಬ್ ತಂಙಳ್, ಹೈದರಲಿ ಶಿಹಾಬ್ ತಂಙಳ್ ಸಹಿತ ಪಾಣಕ್ಕಾಡ್ ಕುಟುಂಬವೇ ಈ ಪಕ್ಷದ ಜೊತೆ ಇದ್ದರೂ ಮುಸ್ಲಿಮರು ಈ ಪಕ್ಷವನ್ನು ಇಸ್ಲಾಮ್ನ ರಕ್ಷಕನಂತೆ ಅಥವಾ ಇಸ್ಲಾಮಿನ ಪ್ರತಿನಿಧಿಯಂತೆ ಕಂಡಿಲ್ಲ. ಕೇರಳದಲ್ಲಿ ಮುಸ್ಲಿಮರು ಈ ಪಕ್ಷಕ್ಕೆ ಮತ ಚಲಾಯಿಸಿದ್ದಕ್ಕಿಂತ ಹೆಚ್ಚು ಮತಗಳನ್ನು ಹಿಂದೂ ನೇತೃತ್ವದ ಪಕ್ಷಗಳಿಗೆ ನೀಡಿದ್ದೂ ಇದೆ. ಇಸ್ಲಾಮಿನ ಹೆಸರಲ್ಲಿ ಈ ಪಕ್ಷ ಮತವನ್ನು ಕೇಳಿದ್ದೂ ಇಲ್ಲ. ಒಂದು ಕಡೆ ಪ್ರವಾದಿ ಕುಟುಂಬ ಪರಂಪರೆಯವರ ಬೆಂಬಲ ಮತ್ತು ಇನ್ನೊಂದು ಕಡೆ ಮುಸ್ಲಿಮ್ ಲೀಗ್ ಎಂಬ ಹೆಸರಿನ ಹೊರತಾಗಿಯೂ ಮುಸ್ಲಿಮರು ಈ ಪಕ್ಷವನ್ನು ಧರ್ಮದ ನೊಗ ಹೊತ್ತುಕೊಂಡ ಪಕ್ಷವಾಗಿ ಪರಿಗಣಿಸಿಲ್ಲ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಖಾಝಿಗಳ ಹೊರತಾಗಿ ಇತರರನ್ನು ಅವಲಂಬಿಸುತ್ತಲೂ ಇಲ್ಲ. ಆದ್ದರಿಂದಲೇ, ಮುಸ್ಲಿಮ್ ನೇತೃತ್ವದ ಯಾವುದೇ ಪಕ್ಷಕ್ಕೆ ಧಾರ್ಮಿಕ ಭಾವನೆಗಳನ್ನು ಕೆದಕಿ ಮತ ಪಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನವಾಬ್ ಮುಹಮ್ಮದ್ ನವಾಜ್ ಖಾನ್ ಖಿಲೇದಾರ್ ಎಂಬವರು 1927ರಲ್ಲಿ ಹೈದರಾಬಾದ್ನಲ್ಲಿ ಸ್ಥಾಪಿಸಿದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (</span><span style="background-color: white; color: #222222; font-family: Arial, Helvetica, sans-serif; font-size: small;">AIMIM</span><span style="background-color: white; color: #222222; font-family: Arial, Helvetica, sans-serif; font-size: small;">) ಎಂಬ ರಾಜಕೀಯ ಪಕ್ಷಕ್ಕೂ ಈ ಮಣ್ಣಿನಲ್ಲಿ ದೊಡ್ಡ ಹೆಸರಿದೆ. 1958ರಲ್ಲಿ ಅಬ್ದುಲ್ ವಾಹಿದ್ ಓವೈಸಿ ಅಧ್ಯಕ್ಷರಾಗುವ ಮೂಲಕ ಓವೈಸಿ ಕುಟುಂಬದ ಪಾರಮ್ಯಕ್ಕೆ ಒಳಗಾದ ಈ ಪಕ್ಷವು ಇಂದಿನ ತೆಲಂಗಾಣದ ಹೊರತಾಗಿ ಮಹಾರಾಷ್ಟ್ರ ಮತ್ತು ಬಿಹಾರ ಅಸೆಂಬ್ಲಿಯಲ್ಲೂ ಜನಪ್ರತಿನಿಧಿಯನ್ನು ಹೊಂದಿದೆ. ಅಸದುದ್ದೀನ್ ಓವೈಸಿ ಸತತ ನಾಲ್ಕನೇ ಬಾರಿ ಲೋಕಸಭಾ ಸದಸ್ಯರಾಗಿ ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈಗಿನ ತೆಲಂಗಾಣ ವಿಧಾನಸಭೆಯಲ್ಲಿ ಈ ಪಕ್ಷದ 7 ಮಂದಿ ಸದಸ್ಯರಿದ್ದಾರೆ. ಅಷ್ಟಕ್ಕೂ, ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಎಂದರೆ ‘ಮುಸ್ಲಿಮರ ಐಕ್ಯತೆಗಾಗಿರುವ ಅಖಿಲ ಭಾರತ ಕೌನ್ಸಿಲ್’ ಎಂದು ಅರ್ಥ. ಹೀಗೆ ಮುಸ್ಲಿಮರ ಐಕ್ಯತೆಯನ್ನು ಬಯಸುವ ಪಕ್ಷ ಎಂಬ ಹಣೆಪಟ್ಟಿ ಈ ಪಕ್ಷಕ್ಕಿದ್ದರೂ ಮುಸ್ಲಿಮರು ಈ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಕೆ ‘ಧರ್ಮರ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ’ ಎಂಬ ಬಿರುದನ್ನು ಕೊಟ್ಟಿಲ್ಲ. ಅದನ್ನೊಂದು ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ವಾಗಿ ಪರಿಗಣಿಸಿದ್ದಾರೆಯೇ ಹೊರತು ಓವೈಸಿ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಕೆ ಮತ ಚಲಾಯಿಸದವರು ಇಸ್ಲಾಮ್ ವಿರೋಧಿಗಳು ಎಂದು ಎಲ್ಲೂ ಹೇಳಿಲ್ಲ. ಓವೈಸಿ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ದ ಮುಸ್ಲಿಮ್ ಅಭ್ಯರ್ಥಿಯ ಬದಲು ಹಿಂದೂ ನೇತೃತ್ವ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ದ ಹಿಂದೂ ಅಭ್ಯರ್ಥಿಗೆ ಮುಸ್ಲಿಮರು ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಧರ್ಮವನ್ನು ದುರುಪಯೋಗಿಸುವುದಕ್ಕೆ ಯಾವ ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಕೂ ಮುಸ್ಲಿಮರು ಅನುಮತಿಯನ್ನು ನೀಡುತ್ತಿಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಸ್ಸಾಮ್ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು 2005ರಲ್ಲಿ ಸ್ಥಾಪಿಸಿದ ಉದ್ಯಮಿ ಮತ್ತು ಇಸ್ಲಾಮೀ ವಿದ್ವಾಂಸ ಬದ್ರುದ್ದೀನ್ ಅಜ್ಮಲ್ರು 2013ರಲ್ಲಿ ಇದಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (</span><span style="background-color: white; color: #222222; font-family: Arial, Helvetica, sans-serif; font-size: small;">AIUDF</span><span style="background-color: white; color: #222222; font-family: Arial, Helvetica, sans-serif; font-size: small;">) ಎಂದು ಮರುನಾಮಕರಣ ಮಾಡಿದರು. ಇವರು ಜಮೀಯತೆ ಉಲೆಮಾಯೆ ಹಿಂದ್ ಎಂಬ ಧಾರ್ಮಿಕ ಸಂಘಟನೆಯ ಅಸ್ಸಾಮ್ ಘಟಕದ ಅಧ್ಯಕ್ಷರೂ ಆಗಿದ್ದಾರೆ. 2005ರಲ್ಲಿ ಅಸ್ಸಾಮ್ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಇವರ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;"> 10 ಸ್ಥಾನಗಳನ್ನು ಗೆದ್ದಿತ್ತು. 2011ರ ಅಸೆಂಬ್ಲಿ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಮುಖ ವಿರೋಧ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ವಾಗಿಯೂ ಗುರುತಿಸಿಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದು ಕೊಂಡ </span><span style="background-color: white; color: #222222; font-family: Arial, Helvetica, sans-serif; font-size: small;">AIUDF</span><span style="background-color: white; color: #222222; font-family: Arial, Helvetica, sans-serif; font-size: small;">, 2016ರ ಅಸ್ಸಾಮ್ ಅಸೆಂಬ್ಲಿ ಚುನಾವಣೆಯಲ್ಲಿ 13 ಸ್ಥಾನಕ್ಕೆ ಕುಸಿಯಿತು. ಮಾತ್ರವಲ್ಲ, ಮತದಾರರು ಬದ್ರುದ್ದೀನ್ ಅಜ್ಮಲ್ರನ್ನೇ ಸೋಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಅವರೊಬ್ಬರೇ ಆರಿಸಿ ಬಂದಿದ್ದಾರೆ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">25 ಶಿ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಣ ಸಂಸ್ಥೆ ಮತ್ತು ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳನ್ನು ನಡೆಸುತ್ತಿರುವ ಇವರಿಗೆ ಧಾರ್ಮಿಕ ವಿದ್ವಾಂಸ ಎಂಬ ಹಣೆಪಟ್ಟಿ ಇದ್ದರೂ ಇವರ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಕೆ ಮತ ಚಲಾಯಿಸದವರನ್ನು ‘ಇಸ್ಲಾಮ್ ವಿರೋಧಿ’ಗಳು ಎಂದು ಎಲ್ಲೂ ಯಾರೂ ಘೋಷಿಸಿಯೇ ಇಲ್ಲ. ಸ್ವತಃ ಅಜ್ಮಲ್ ಅವರನ್ನೇ ಸಲ್ಮಾರ ಕ್ಷೇತ್ರದ ಮತದಾರರು 2016 ರಲ್ಲಿ ಸೋಲಿಸಿದ್ದಾರೆ. ಒಂದುವೇಳೆ, ಅಜ್ಮಲ್ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಕೆ ಓಟು ಹಾಕುವುದೆಂದರೆ ಇಸ್ಲಾಮಿನ ರ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಣೆಗೆ ಓಟು ಹಾಕಿದಂತೆ ಎಂಬ ಭಾವ ಮುಸ್ಲಿಮರಲ್ಲಿ ಇದ್ದಿದ್ದೇ ಆಗಿದ್ದರೆ 2014ರಲ್ಲಿ ಗೆದ್ದಿದ್ದ ಮೂರು ಲೋಕಸಭಾ ಸೀಟುಗಳು 2019ಕ್ಕಾಗುವಾಗ ಒಂದು ಸೀಟಾಗಿ ಕುಸಿಯುತ್ತಿರಲಿಲ್ಲ ಅಥವಾ 2011ರಲ್ಲಿ 18 ಅಸೆಂಬ್ಲಿ ಸೀಟುಗಳನ್ನು ಗೆದ್ದವರು 2016ರಲ್ಲಿ 13 ಸೀಟುಗಳಿಗೆ ತೃಪ್ತಿ ಪಡಬೇಕಾಗಿರಲಿಲ್ಲ. ಇದೇವೇಳೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇ ಅಬೂಬಕರ್ ನೇತೃತ್ವದಲ್ಲಿ 2009 ಜೂನ್ 21ರಂದು ಸ್ಥಾಪನೆಯಾದ </span><span style="background-color: white; color: #222222; font-family: Arial, Helvetica, sans-serif; font-size: small;">ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (</span><span style="background-color: white; color: #222222; font-family: Arial, Helvetica, sans-serif; font-size: small;">SDPI) ಮತ್ತು 2011 ಎಪ್ರಿಲ್ 18ರಂದು ಮುಜ್ತಬಾ ಫಾರೂಖಿ ಅಧ್ಯ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ತೆಯಲ್ಲಿ ಸ್ಥಾಪನೆಯಾದ </span><span style="background-color: white; color: #222222; font-family: Arial, Helvetica, sans-serif; font-size: small;">ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ</span><span style="background-color: white; color: #222222; font-family: Arial, Helvetica, sans-serif; font-size: small;"> (WPI) ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳು ಈವರೆಗೆ ಲೋಕಸಭೆ ಅಥವಾ ವಿಧಾನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದಕ್ಕೇ ಶಕ್ತವಾಗಿಲ್ಲ. ಈ ಎರಡೂ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳ ಕೇಂದ್ರ ನವದೆಹಲಿಯಲ್ಲಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆ SDPI 29 ಕಡೆ ಸ್ಪರ್ಧಿಸಿತ್ತು. 2019ರಲ್ಲಿ 15 ಕಡೆ ಸ್ಪರ್ಧಿಸಿತ್ತು. 2013ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ 24 ಕಡೆ ಸ್ಪರ್ಧಿಸಿದ್ದರೆ, 2016ರ ತಮಿಳುನಾಡು ಅಸೆಂಬ್ಲಿ ಚುನಾವಣೆಯ ವೇಳೆ 30 ಕಡೆ ಸ್ಪರ್ಧಿಸಿತ್ತು. ಇದೇ ಅವಧಿಯಲ್ಲಿ ನಡೆದ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೆಯೇ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇದೇವೇಳೆ, WPI ಪಕ್ಷವು ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಈ ಎರಡೂ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳ ಬದಲು ಹಿಂದೂ ನೇತೃತ್ವ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ದ ಹಿಂದೂ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮಾತ್ರ ವಲ್ಲ, ಹೀಗೆ ಮತ ಚಲಾಯಿಸಿದ ಮುಸ್ಲಿಮರನ್ನು ‘ಇಸ್ಲಾಮ್ ವಿರೋಧಿಗಳು’ ಎಂದು ಸ್ವತಃ ಈ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳಾಗಲಿ ಅಥವಾ ಅದರ ಬೆಂಬಲಿಗರಾಗಲಿ ಎಲ್ಲೂ ಹೇಳಲೇ ಇಲ್ಲ. ಇದರ ಹೊರತಾಗಿ,</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮಾಜಿ ಗೃಹಸಚಿವ ಮುಫ್ತಿ ಮುಹಮ್ಮದ್ ಸಈದ್ 1999ರಲ್ಲಿ ಸ್ಥಾಪಿಸಿದ PDP ಮತ್ತು 1932ರಲ್ಲಿ ಶೈಕ್ ಅಬ್ದುಲ್ಲಾರಿಂದ ಸ್ಥಾಪಿತವಾದ NC ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳನ್ನು ಜಮ್ಮು-ಕಾಶ್ಮೀರದ ಮಂದಿ ಗೆಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ವನ್ನೂ ಗೆಲ್ಲಿಸಿದ್ದಾರೆ. ಮುಸ್ಲಿಮರೇ ಹೆಚ್ಚಿರುವ ಕಾಶ್ಮೀರದಲ್ಲಿ ಈ ಮೂರು ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳ ಹೊರತಾಗಿ ಬೇರೆ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳಲ್ಲಿ ಅಷ್ಟು ಬಲ ಇದ್ದಿಲ್ಲವಾದ್ದರಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಅಲ್ಲಿನ ಮುಸ್ಲಿಮರಿಗಿದೆ. ಈ ಆಯ್ಕೆಯೂ ಧರ್ಮಾಧಾರಿತವಾಗಿಲ್ಲ ಅನ್ನುವುದೂ ಸ್ಪಷ್ಟ. ಫಾರೂಖ್ ಅಬ್ದುಲ್ಲಾರನ್ನು ಮುಖ್ಯಮಂತ್ರಿಯಾಗಿಸಿದ ಅದೇ ಜನತೆ ಮುಫ್ತಿ ಮುಹಮ್ಮದ್ ರನ್ನೂ ಮುಖ್ಯಮಂತ್ರಿಯಾಗಿಸಿದೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೆಹಬೂಬಾ ಮುಫ್ತಿ ಕೂಡಾ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಸ್ಲಾಮಿನ ನೊಗ ಖಾಝಿಗಳ ಕೈಯಲ್ಲಿದೆಯೇ ಹೊರತು ಯಾವುದೇ ಮುಸ್ಲಿಮ್ ನೇತೃತ್ವದ ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳಲ್ಲಿಲ್ಲ. ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ದ ನಾಯಕ ಎಷ್ಟೇ ಧರ್ಮಿಷ್ಠನಾಗಿರಲಿ ಮುಸ್ಲಿಮರು ತಮ್ಮ ಧರ್ಮದ ವ್ಯಾಖ್ಯಾನಕ್ಕಾಗಿ ಮತ್ತು ಸಾಂದರ್ಭಿಕ ಅಭಿಪ್ರಾಯಗಳಿಗಾಗಿ ಖಾಝಿಗಳನ್ನೇ ಸಂಪರ್ಕಿಸುತ್ತಾರೆ. ಖಾಝಿಗಳಿಗೆ ಮುಸ್ಲಿಮರಲ್ಲಿ ವಿಶೇಷ ಸ್ಥಾನಮಾನವಿದೆ. ಅವರು ಸಾಮಾನ್ಯ ಮಸೀದಿಯ ಧರ್ಮಗುರುಗಳಂಥಲ್ಲ. ಅವರು ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">-ಸಂಘಟನೆಯ ಮುಲಾಜಿಗೆ ಬೀಳದೇ ಧರ್ಮ ತತ್ವವನ್ನು ಹೇಳಬಲ್ಲವರು. ನಿಜವಾಗಿ, ಇಸ್ಲಾಮಿನ ವರ್ಚಸ್ಸು ಉಳಿದಿರುವುದೇ ಮುಸ್ಲಿಮರೊಳಗಿನ ಈ ಬಗೆಯ ವ್ಯವಸ್ಥೆಯಿಂದ. ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳನ್ನು ಬರೇ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳಾಗಿ ಮತ್ತು ಅವುಗಳ ಚಟುವಟಿಕೆಗಳನ್ನು ರಾಜಕೀಯಕ್ಕೆ ಸೀಮಿತವಾಗಿ ನೋಡುವುದಕ್ಕೆ ಮುಸ್ಲಿಮರಿಗೆ ಸಾಧ್ಯವಾಗಿರುವುದು ಖಾಝಿ ಸಿಸ್ಟಮ್ನಿಂದ. ಮುಸ್ಲಿಮರಿಗೆ ಮಾರ್ಗದರ್ಶನ ಮಾಡುವ ಮತ್ತು ಯಾವುದು ಇಸ್ಲಾಮ್ ಮತ್ತು ಯಾವುದಲ್ಲ ಎಂದು ಹೇಳುವ ಹೊಣೆಗಾರಿಕೆ ಬಹುತೇಕ ಇವರ ಹೆಗಲ ಮೇಲಿದೆ. ಮುಸ್ಲಿಮರಲ್ಲಿರುವ ವಿವಿಧ ಸಂಘಟನೆಗಳೂ ಖಾಝಿಗಳ ಮಾತುಗಳಿಗೆ ಕಿವಿಯಾಗುತ್ತವೆ. ಸಂಘಟನಾ ರಹಿತ ಮತ್ತು ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ರಹಿತವಾಗಿ ವರ್ತಿಸುವ ಜವಾಬ್ದಾರಿಯೂ ಖಾಝಿಗಳ ಮೇಲಿರುತ್ತದೆ. ಒಂದುವೇಳೆ, ಈ ಖಾಝಿ ಸಿಸ್ಟಮ್ ಇಲ್ಲದೇ ಇರುತ್ತಿದ್ದರೆ ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಗಳು ಆ ಶೂನ್ಯವನ್ನು ದುರುಪ ಯೋಗಿಸುತ್ತಿದ್ದುವೋ ಏನೋ? ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬಿಜೆಪಿ ಎಂಬ ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ವನ್ನು ಹಿಂದೂ ಧರ್ಮ ರ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ಕನಂತೆ ಮತ್ತು ಅದಕ್ಕೆ ಮತ ಚಲಾಯಿಸದವರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸಲಾಗುತ್ತಿರುವುದನ್ನು ಕಂಡು ಇವೆಲ್ಲ ನೆನಪಾಯಿತು. ಹಾಗಂತ, ಧರ್ಮವನ್ನು ರಾಜಕೀಯ ಪ</span><span style="background-color: white; color: #222222; font-family: Arial, Helvetica, sans-serif; font-size: small;">ಕ್ಷ</span><span style="background-color: white; color: #222222; font-family: Arial, Helvetica, sans-serif; font-size: small;">ದ ವಶಕ್ಕೆ ಒಪ್ಪಿಸುವುದು ಅತ್ಯಂತ ಅಪಾಯಕಾರಿ.</span></div></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-28124315405005377952024-01-16T02:26:00.000-08:002024-01-16T02:26:31.546-08:00 ಹಿಜಾಬ್ಗೆ ಕೇಸರಿ ಶಾಲು ಉತ್ತರವೇ?<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhs5hfU78ksu-5RcqU96G3igQCOIsoR_isZ6ZJOE5vEfFkM1YX90xTn0bcoeepqLdr5QI8AcimIY1kSmU_ok96k3SS2cmS0O6RyS142v5ajMCqyuI-TFURabfiFZ4Kxx44Rn0wMhBVdJtZ3qRx2IUwGpXzGYdfdp6XWZN2_BGbCNS6JmOcNIJKnoFEy2hOF/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEhs5hfU78ksu-5RcqU96G3igQCOIsoR_isZ6ZJOE5vEfFkM1YX90xTn0bcoeepqLdr5QI8AcimIY1kSmU_ok96k3SS2cmS0O6RyS142v5ajMCqyuI-TFURabfiFZ4Kxx44Rn0wMhBVdJtZ3qRx2IUwGpXzGYdfdp6XWZN2_BGbCNS6JmOcNIJKnoFEy2hOF/w400-h198/page%203%20pic.jpg" width="400" /></a></div><br /><p></p><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಹಿಜಾಬ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಕೇಸರಿ ಶಾಲು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಧರ್ಮ</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಿಜಕ್ಕೂ ಹಿಜಾಬ್ಗೆ ಕೇಸರಿ ಶಾಲು ಪರ್ಯಾಯವೇ, ಸಮಾನವೇ ಅಥವಾ ಉತ್ತರವೇ? 2022 ಫೆಬ್ರವರಿ 5ರಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 22, 2023ರಂದು ಘೋಷಿಸಿದ ಬಳಿಕ ಹಿಜಾಬ್ ಮತ್ತು ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಅನೇಕರು ಚರ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬಹುದೆಂದಾದರೆ, ಕೇಸರಿ ಶಾಲು ಧರಿಸಿಯೂ ಕಾಲೇಜಿಗೆ ಹೋಗಬಹುದು ಎಂಬುದು ಈ ವಾದದ ಮುಖ್ಯ ಅಂಶ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಜಾಬ್ಗೆ ಕೇಸರಿ ಶಾಲನ್ನು ಮುಖಾಮುಖಿ ಮಾಡಿ ಚರ್ಚಿಸುವುದು ಸೂಕ್ತವೇ? ಇಸ್ಲಾಮ್ನಲ್ಲಿ ಹಿಜಾಬ್ಗಿರುವ ಧಾರ್ಮಿಕ ಮಹತ್ವವು ಹಿಂದೂಗಳಲ್ಲಿ ಕೇಸರಿ ಶಾಲ್ಗೂ ಇದೆಯೆಂದಾದರೆ, ಮತ್ತೇಕೆ ಹಿಜಾಬ್ನಂತೆ ಸಾರ್ವಜನಿಕವಾಗಿ ಹಿಂದೂಗಳು ಕೇಸರಿ ಶಾಲನ್ನು ಸದಾ ಧರಿಸುತ್ತಿಲ್ಲ? ಕಾಲೇಜು ಉಪನ್ಯಾಸಕರಿಂದ ಹಿಡಿದು ಐಟಿಬಿಟಿ ಉದ್ಯೋಗಿಗಳ ವರೆಗೆ, ಶಾಸಕರಿಂದ ಹಿಡಿದು ಸಂಸದರ ವರೆಗೆ, ರಾಜ್ಯಪಾಲರಿಂದ ಹಿಡಿದು ರಾಷ್ಟ್ರಪತಿವರೆಗೆ, ಮುಖ್ಯಮಂತ್ರಿಗಳಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ, ವಕೀಲರಿಂದ ಹಿಡಿದು ಮುಖ್ಯ ನ್ಯಾಯಾಧೀಶರವರೆಗೆ... ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಪುರುಷರು ಮತ್ತು ಮಹಿಳೆಯರೇ ತುಂಬಿರಬೇಕಿತ್ತಲ್ಲ? ರಿಕ್ಷಾ ಡ್ರೈವರ್, ಕಾರು, ಬಸ್ಸು ಚಾಲಕರು, ಪೈಲಟ್ಗಳು, ವೈದ್ಯರು, ದಾದಿಯರು, ಕೂಲಿ ಕಾರ್ಮಿಕರು, ಉದ್ಯಮಿಗಳು, ಅದಾನಿ-ಅಂಬಾನಿಗಳು.. ಎಲ್ಲರೂ ಕೇಸರಿ ಶಾಲನ್ನು ಧರಿಸಿಯೇ ಇರಬೇಕಿತ್ತಲ್ಲ? ಯಾಕಿಲ್ಲ? ಈ ದೇಶದ 99.99% ಹಿಂದೂಗಳು ಕೂಡಾ ಸಾರ್ವಜನಿಕ ಜೀವನದಲ್ಲಿ ಕೇಸರಿ ಶಾಲನ್ನು ಒಂದು ಅಭ್ಯಾಸವಾಗಿ ಧರಿಸುತ್ತಲೇ ಇಲ್ಲ. ಖಾಸಗಿ ಬದುಕಿನಲ್ಲೂ ಕೇಸರಿ ಶಾಲು ಅವಿಭಾಜ್ಯ ಅಂಗವಾಗಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಲ್ಪಸ್ವಲ್ಪ ಕೇಸರಿ ಶಾಲು ಧರಿಸಿದವರನ್ನು ಕಾಣಬಹುದೇ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಕೇಸರಿ ಶಾಲು ರೂಢಿಯಾಗಿ ಬಳಕೆಯಾಗುತ್ತಿಲ್ಲ. ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಜಾಬ್ ಅಥವಾ ಶಿರವಸ್ತ್ರ ಹಾಗಲ್ಲ. ಮುಸ್ಲಿಮ್ ಮಹಿಳೆಯರು ಮನೆಯಲ್ಲೂ ಶಿರವಸ್ತ್ರ ಧರಿಸುತ್ತಾರೆ. ಬಸ್, ರೈಲು, ವಿಮಾನ ಪ್ರಯಾಣದಲ್ಲೂ ಶಿರವಸ್ತ್ರ ಧರಿಸುತ್ತಾರೆ. ಸರಕಾರಿ ಕಚೇರಿಯಲ್ಲೂ, ಶಿಕ್ಷಣ ಸಂಸ್ಥೆಯಲ್ಲೂ, ಖಾಸಗಿ ಉದ್ಯೋಗ ಸ್ಥಳದಲ್ಲೂ, ಶಾಸನ ಸಭೆಯಲ್ಲೂ, ನ್ಯಾಯಾಧೀಶರಾಗಿರುವಾಗಲೂ, ವೈದ್ಯರು, ದಾದಿಯಾಗಿರುವಾಗಲೂ, ಮಾರುಕಟ್ಟೆಯಲ್ಲೂ.. ಹೀಗೆ ಎಲ್ಲೆಡೆಯೂ ಹಿಜಾಬ್ ಧರಿಸಿಯೇ ಕಾಣಸಿಗುತ್ತಾರೆ. ಅಂದ ಹಾಗೆ, ಬುರ್ಖಾ ಧರಿಸದ ಮುಸ್ಲಿಮ್ ಮಹಿಳೆಯರು ಧಾರಾಳ ಇದ್ದಾರೆ. ಆದರೆ ಹಿಜಾಬ್ ಧರಿಸದ ಮುಸ್ಲಿಮ್ ಮಹಿಳೆಯರು ಕಾಣಸಿಗುವುದು ಅಪರೂಪ. ಒಂದುವೇಳೆ, ಹಿಜಾಬ್ನಷ್ಟು ಕೇಸರಿ ಶಾಲ್ಗೂ ಹಿಂದೂ ಧರ್ಮದಲ್ಲಿ ಮಹತ್ವ ಇರುತ್ತಿದ್ದರೆ, ಸಾರ್ವಜನಿಕ ಬದುಕಿನಲ್ಲಿ ಅದು ಇಷ್ಟು ಅಪರೂಪ ಆಗಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ಹಿಂದೂಗಳಲ್ಲಿ ರೂಢಿಯಾಗಿ ಬಳಕೆಯಲ್ಲಿರುತ್ತಿತ್ತು. ಹೇಗೆ ಬಿಂದಿ, ನಾಮ, ಕಾಲುಂಗುರ, ಕರಿಮಣಿ... ಇತ್ಯಾದಿಗಳು ಸಹಜವಾಗಿ ಬಳಕೆಯಲ್ಲಿವೆಯೋ ಹಾಗೆ. ಇವುಗಳಿಗೆ ಧಾರ್ಮಿಕ ಹಿನ್ನೆಲೆ ಇರುವುದರಿಂದ ಇವು ಮನೆಯಿಂದ ಹಿಡಿದು ಶಾಸನ ಸಭೆಯವರೆಗೆ ಮತ್ತು ಶಾಲಾ- ಕಾಲೇಜುಗಳಿಂದ ಹಿಡಿದು ಸರಕಾರಿ ಕಚೇರಿಗಳ ವರೆಗೆ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧಿಸಿ 2022 ಫೆಬ್ರವರಿ 5ರಂದು ಬೊಮ್ಮಾಯಿ ಸರಕಾರ ಆದೇಶ ಹೊರಡಿಸುವಾಗಲೂ ಹಿಂದೂ ವಿದ್ಯಾರ್ಥಿಗಳು ಬಿಂದಿ, ನಾಮ, ಕೆಂಪು ದಾರವನ್ನು ಕಟ್ಟಿಕೊಂಡು ಕಾಲೇಜಿಗೆ ಬರುತ್ತಿದ್ದರು. ಯಾಕೆಂದರೆ, ಅದು ಅವರ ಬದುಕಿನ ಭಾಗ. ಧಾರ್ಮಿಕವಾಗಿ ಅವುಗಳಿಗಿರುವ ಮಹತ್ವವೇ ಅದನ್ನು ನಿತ್ಯ ರೂಢಿಯಾಗಿಸಿದೆ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಜಾಬ್ಗೆ ಮುಖಾಮುಖಿಯಾಗಿಸಬೇಕಾದದ್ದು ಇವುಗಳನ್ನು. ಬಿಂದಿ, ಕಾಲುಂಗುರ, ನಾಮ, ಕರಿಮಣಿ... ಮುಂತಾದವುಗಳು ಸಂಪೂರ್ಣವಲ್ಲದಿದ್ದರೂ ಒಂದು ಹಂತದ ವರೆಗೆ ಹಿಜಾಬ್ಗೆ ತದ್ರೂಪವಾಗಿ ತೋರಿಸಬಹುದು. ಆದರೆ ಹಿಜಾಬ್ ವಿವಾದ ಆರಂಭವಾದ 2022 ಜನವರಿಯಿಂದ ಇವತ್ತಿನವರೆಗೆ ಅತಿ ಬುದ್ಧಿವಂತರು ಹಿಜಾಬ್ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಚರ್ಚಿಸುತ್ತಿದ್ದಾರೆ. ಅಲ್ಲದೇ, ಸಿಕ್ಖ್ ವಿದ್ಯಾರ್ಥಿಗಳು ಧರಿಸುವ ಪೇಟವನ್ನು ಎಲ್ಲೂ ಚರ್ಚೆಯ ವ್ಯಾಪ್ತಿಗೆ ತರುತ್ತಲೂ ಇಲ್ಲ. ಅಂದರೆ, ಇಲ್ಲಿರುವುದು ಮುಸ್ಲಿಮ್ ದ್ವೇಷವೇ ಹೊರತು ಇನ್ನೇನೂ ಅಲ್ಲ. 2022 ಜನವರಿಯಲ್ಲಿ ಹಿಜಾಬನ್ನು ಉಡುಪಿಯ ಸರಕಾರಿ ಹೆಣ್ಣು ಮಕ್ಕಳ ಕಾಲೇಜು ವಿವಾದವಾಗಿ ಮಾರ್ಪಡಿಸಿದ ಬಳಿಕ ಹಿಜಾಬ್ಧಾರಿ ವಿದ್ಯಾರ್ಥಿನಿಯರಿಗೆ ಕುಂದಾಪುರದ ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು ಪ್ರವೇಶ ನಿರಾಕರಿಸಿತು. ಆದರೆ, ಹಿಜಾಬ್ಗೆ ಅವಕಾಶ ಇದೆ ಎಂದು ಕಾಲೇಜು ರೂಲ್ ಬುಕ್ನಲ್ಲಿ ಇರುವುದನ್ನು ಈ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಕೂಡಾ ಫೆ. 5ರ ಸರಕಾರಿ ಆದೇಶದ ಬಳಿಕ ಹಿಜಾಬ್ಗೆ ನಿಷೇಧ ಹೇರಿತು. ಆದರೆ, ಈ ಮೊದಲು ಈ ಕಾಲೇಜಿನಲ್ಲಿ ಹಿಜಾಬ್ಗೆ ಯಾವ ನಿಷೇಧವೂ ಇರಲಿಲ್ಲ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಕುಂದುಪಾರ ಕಾಲೇಜು ಕೂಡಾ ಹಿಜಾಬ್ಧಾರಿ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಿತು. ಪ್ರಶ್ನೆ ಇರುವುದೂ ಇಲ್ಲೇ. ಒಂದುವೇಳೆ, ಹಿಜಾಬ್ ನಷ್ಟು ಮಹತ್ವ ಕೇಸರಿ ಶಾಲ್ಗೂ ಇದೆಯೆಂದಾದರೆ, 2022ರ ಫೆಬ್ರವರಿಗಿಂತ ಮೊದಲೇ ಹಿಜಾಬ್ನಂತೆಯೇ ಕೇಸರಿ ಶಾಲ್ ಧರಿಸಲು ತಮಗೂ ಅನುಮತಿ ಕೊಡಿ ಎಂದು ಯಾವ ವಿದ್ಯಾರ್ಥಿಗಳೂ ಯಾಕೆ ಶಾಲಾಡಳಿತವನ್ನು ಕೋರಿಕೊಂಡಿಲ್ಲ ಅಥವಾ ಹಿಜಾಬ್ ಧರಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು ಬರುವಂತೆಯೇ ಸಹಜವಾಗಿ ಕೇಸರಿ ಶಾಲು ಧರಿಸಿಕೊಂಡು ಯಾಕೆ ಬರಲಿಲ್ಲ? ಉಡುಪಿಯ ವಿದ್ಯಾರ್ಥಿನಿಯರಿಗೆ ಹಿಜಾಬನ್ನು ನಿರಾಕರಿಸಲಾದ ಬಳಿಕವೇ ಏಕೆ ಕೇಸರಿ ಶಾಲು ಮುನ್ನೆಲೆಗೆ ಬಂತು? ಹಿಜಾಬ್ನಂತೆ ಇದು ಜೀವನರೂಢಿ ಆಗಿಲ್ಲ ಎಂಬುದನ್ನೇ ಇದು ಸೂಚಿಸುತ್ತದಲ್ಲವೇ? ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ್ತ್ರದ್ದೇ ಭಾಗವಾದ ಶಾಲನ್ನು ತಲೆಗೆ ಹಾಕಿಕೊಳ್ಳಲು ಬಯಸಿದ್ದರೇ ಹೊರತು ಸಾರ್ವಜನಿಕವಾಗಿ ರೂಢಿಯಲ್ಲಿರುವ ಶಿರವಸ್ತ್ರದ ಮಾದರಿಯನ್ನಲ್ಲ. ಬಟ್ಟೆಯಿಂದ ಸದಾ ತಲೆ ಮುಚ್ಚಿರಬೇಕು ಅನ್ನುವುದು ಮುಸ್ಲಿಮರ ಧಾರ್ಮಿಕ ನಂಬಿಕೆ. ಸಮವಸ್ತ್ರವು ಯಾವ ಶಾಲನ್ನು ಕುತ್ತಿಗೆಗೆ ಹಾಕಿಕೊಳ್ಳಲು ಅನುಮತಿಸುತ್ತದೋ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುತ್ತೇವೆ ಎಂದಷ್ಟೇ ವಿದ್ಯಾರ್ಥಿನಿಯರು ಕೋರಿಕೊಂಡಿದ್ದರು. ಇದು ಸಂಪೂರ್ಣವಾಗಿ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯ. ಸಮವಸ್ತ್ರದ ಜೊತೆ ಶಾಲು ಅನುಮತಿಸಿರುವುದು ವಿದ್ಯಾರ್ಥಿನಿಯರಿಗೆ ಮಾತ್ರ. ವಿದ್ಯಾರ್ಥಿ ಗಳ ಸಮವಸ್ತ್ರದಲ್ಲಿ ಶಾಲ್ಗೆ ಅವಕಾಶವಿಲ್ಲ. ಆದರೆ, ಹಿಜಾಬನ್ನು ನೆಪ ಮಾಡಿಕೊಂಡು ಗಂಡು ಮಕ್ಕಳು ಕೇಸರಿ ಶಾಲನ್ನು ಶಾಲೆಯೊಳಗೆ ತಂದರು. ಇದು ಪೂರ್ಣವಾಗಿ ದ್ವೇಷ ರಾಜಕೀಯ ಪಿತೂರಿಯಿಂದಾಗಿತ್ತೇ ಹೊರತು ಧರ್ಮ ಪ್ರೇಮದಿಂದ ಅಲ್ಲವೇ ಅಲ್ಲ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಾಲೇಜು ಕುಸ್ತಿ ಅಖಾಡವೂ ಅಲ್ಲ, ಹಿಜಾಬ್ ಮತ್ತು ಕೇಸರಿ ಶಾಲು ಜಟ್ಟಿಗಳೂ ಅಲ್ಲ. ವಿದ್ಯಾರ್ಥಿಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಷಡ್ಯಂತ್ರವೊಂದರ ಭಾಗವಾಗಿಯೇ ಹಿಜಾಬ್ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಹಿಜಾಬ್ ಎಂಬುದು ಕೇಸರಿ ವಿರೋಧಿ ಅಲ್ಲ. ಹಿಜಾಬ್ಗೆ ನಿರ್ದಿಷ್ಟ ಬಣ್ಣವೂ ಇಲ್ಲ. ಒಂದುವೇಳೆ ಯಾವುದೇ ಕಾಲೇಜು ಕೇಸರಿ ಬಣ್ಣವನ್ನು ಸಮವಸ್ತ್ರದ ಬಣ್ಣವಾಗಿ ಆಯ್ಕೆ ಮಾಡಿಕೊಂಡರೆ ಮತ್ತು ಕೇಸರಿ ಬಣ್ಣದ ಶಾಲನ್ನೇ ಧರಿಸಬೇಕೆಂದು ಹೇಳಿದರೆ ಮುಸ್ಲಿಮ್ ಹೆಣ್ಣು ಮಕ್ಕಳೂ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುವ ಅವಕಾಶವನ್ನಷ್ಟೇ ಕೋರುತ್ತಾರೆಯೇ ಹೊರತು ಬೇರೆಯೇ ಬಣ್ಣದ ಹಿಜಾಬ್ ಧರಿಸುತ್ತೇವೆ ಎಂದು ಖಂಡಿತ ಹೇಳುವುದಿಲ್ಲ. ಯಾಕೆಂದರೆ, ಹಿಜಾಬ್ ಫ್ಯಾಶನ್ ಅಲ್ಲ, ಅದು ಬದುಕಿನ ಭಾಗ. ಅದಕ್ಕೆ ಬಣ್ಣ ಮುಖ್ಯ ಅಲ್ಲ, ತಲೆ ಮುಚ್ಚುವುದೇ ಅದರ ಗುರಿ. ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಇನ್ನಿಲ್ಲದ ಕಾಟವನ್ನು ಕೊಡಲಾಯಿತು. ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಲಾಯಿತು. ಹಿಜಾಬ್ ಧರಿಸುವುದನ್ನು ಮೂಲಭೂತ ವಾದವೆಂಬಂತೆ ಬಿಂಬಿಸಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ರು ಅತ್ಯಂತ ಏಕಮುಖವಾಗಿ ನಡಕೊಂಡರು. ಯೂನಿ ಫಾರ್ಮ್ ನ ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂದ ವಿದ್ಯಾರ್ಥಿನಿಯರ ಬೇಡಿಕೆಯನ್ನು ತಿರಸ್ಕರಿಸಿದರು. ಅವರದೇ ಪಕ್ಷದ ಶಾಸಕರು ಮತ್ತು ನಾಯಕರು ಹಿಜಾಬ್ಗೆ ಪ್ರತಿಯಾಗಿ ಕೇಸರಿ ಶಾಲನ್ನು ಪ್ರಚೋದಿಸಿದರು. ಉಡುಪಿ ಜಿಲ್ಲೆಯಲ್ಲಿ ಉಚಿತವಾಗಿ ಕೇಸರಿ ಶಾಲನ್ನು ವಿತರಿಸಲಾದ ಘಟನೆಯೂ ನಡೆಯಿತು. ಈ ಸನ್ನಿವೇಶದಲ್ಲಿ ಸರಕಾರವೂ ಸೇರಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಿಂದೂ-ಮುಸ್ಲಿಮ್ ಆದರೇ ಹೊರತು ಜವಾಬ್ದಾರಿಯುತವಾಗಿ ವರ್ತಿಸಲೇ ಇಲ್ಲ. ಸರಕಾರ ತಾನು 6 ಕೋಟಿ ಕನ್ನಡಿಗರಿಗೆ ಉತ್ತರದಾಯಿ ಎಂಬುದನ್ನೇ ಮರೆತು ಒಂದು ಗುಂಪಿನ ಪರ ಬಲವಾಗಿಯೇ ನಿಂತಿತು. ಒಂದು ಪುಟ್ಟ ಸುತ್ತೋಲೆಯಿಂದ ನಿಭಾಯಿಸಬಹುದಾಗಿದ್ದ ಪ್ರಕರಣವನ್ನು ಮೂರು ದಿನಗಳ ಕಾಲ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಸಾರುವಂಥ ಗಂಭೀರ ಸ್ಥಿತಿಗೆ ತಳ್ಳಿತು. ಹೈಕೋರ್ಟ್ನಲ್ಲೂ ಹಿಜಾಬ್ನ ವಿರುದ್ಧ ವಾದಿಸಿತು. ಮಾತ್ರವಲ್ಲ, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ತಿ, ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಝೈಬುನ್ನಿಸಾ ಎಂ. ಕಾಝಿ ಅವರಿದ್ದ ಪೀಠವು ಬೊಮ್ಮಾಯಿ ಸರಕಾರದ ಆದೇಶವನ್ನೇ ಎತ್ತಿ ಹಿಡಿಯಿತು. ಪ್ರಕರಣ ಈಗ ಸುಪ್ರೀಮ್ ಕೋರ್ಟ್ನಲ್ಲಿದೆ. ಈ ನಡುವೆಯೇ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸುಪ್ರೀಮ್ ಕೋರ್ಟ್ನಲ್ಲಿರುವ ಪ್ರಕರಣವೊಂದನ್ನು ಹಿಂಪಡೆಯಲು ಸಾಧ್ಯವೇ, ಅದಕ್ಕಿರುವ ದಾರಿಗಳೇನು, ಕಾನೂನು ಇತಿಮಿತಿಗಳು ಏನೆಲ್ಲ ಎಂಬ ಪ್ರಶ್ನೆಗಳಾಚೆಗೆ ಸಿದ್ದರಾಮಯ್ಯ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಲೋಕಸಭಾ ಚುನಾ ವಣೆ ಹತ್ತಿರವಿರುವಂತೆಯೇ ಇಂಥ ಹೇಳಿಕೆ ಕೊಡುವುದು ಸುಲಭ ಅಲ್ಲ. ಬಿಜೆಪಿ ಇದನ್ನು ಮುಸ್ಲಿಮ್ ಓಲೈಕೆ ಎಂದು ಹೇಳಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದೂ ಸಿದ್ದರಾಮಯ್ಯ ಇಂಥ ನಿಲುವು ಪ್ರದರ್ಶಿಸುತ್ತಾರೆಂದರೆ ಅದರ ಹಿಂದೆ ಅವರ ದಮನಿತ ಪರ ಕಾಳಜಿ ಸ್ಪಷ್ಟವಾಗುತ್ತದೆ. ಚುನಾವಣೆಯ ಲಾಭ-ನಷ್ಟಕ್ಕಿಂತ ನ್ಯಾಯದಾನವೇ ಮುಖ್ಯ ಎಂದು ಅವರು ಸಾರಿದ ಸಂದೇಶಕ್ಕೆ ಧನ್ಯವಾದ ಹೇಳಬೇಕಾಗುತ್ತದೆ.</span></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-82262082743373211632023-12-29T02:32:00.000-08:002023-12-29T02:32:47.879-08:00 ಗೆಲ್ಲಲು ಕಾಂಗ್ರೆಸ್ ಏನೇನು ಮಾಡಬಹುದು?<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjYTFR0rgX7UDgp_lm1XPMtgxuuQ5XH6dmajuuMv7cM6-zBswz0NpQuf-1goveOSonuAYRvNCsE-WFzKJWJNVPj1ngwrl0LNLukzJJGa-xMtFY8dpg0-l5XFYXTdw13epdJAha9UuGvHE3WQGZ-v-rhuU_LiMTVBOWrbCPBFuLyp8Zae_p40RJTwaGLWeph/s1352/page%203%20pic%20(2)%20congres.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEjYTFR0rgX7UDgp_lm1XPMtgxuuQ5XH6dmajuuMv7cM6-zBswz0NpQuf-1goveOSonuAYRvNCsE-WFzKJWJNVPj1ngwrl0LNLukzJJGa-xMtFY8dpg0-l5XFYXTdw13epdJAha9UuGvHE3WQGZ-v-rhuU_LiMTVBOWrbCPBFuLyp8Zae_p40RJTwaGLWeph/w400-h198/page%203%20pic%20(2)%20congres.jpg" width="400" /></a></div><br /><p><br /></p><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span><div><span face="Arial, Helvetica, sans-serif" style="background-color: white; color: #222222; font-size: small;">1. ಮೃದು ಹಿಂದುತ್ವ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">2. ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">3. ಮೈತ್ರಿ ಪಕ್ಷಗಳ ಕಡೆಗಣನೆ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">4. ಆಕ್ರಮಣಕಾರಿ ಮನೋಭಾವದ ಕೊರತೆ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">5. ಸೇವಾದಳದ ನಿರ್ಲಕ್ಷ್ಯ </span><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಮಧ್ಯಪ್ರದೇಶ, ರಾಜಸ್ತಾನ ಚತ್ತೀಸ್ಗಢಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವೇನು ಅನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ. ತೆಲಂಗಾಣವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಒಟ್ಟಾರೆ 4 ಕೋಟಿ 81 ಲಕ್ಷ ಮತಗಳನ್ನು ಪಡೆದರೆ ಕಾಂಗ್ರೆಸ್ 4 ಕೋಟಿ 90 ಲಕ್ಷ ಮತಗಳನ್ನು ಪಡೆದಿದೆ. ಒಂದುರೀತಿ ಯಲ್ಲಿ, 9 ಲಕ್ಷದಷ್ಟು ಹೆಚ್ಚುವರಿ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಆತಂಕ</span><span face="Arial, Helvetica, sans-serif" style="background-color: white; color: #222222; font-size: small;">ಗೊಳ್ಳುವ ಅಗತ್ಯವಿಲ್ಲ ಎಂದು ಸಮಾಧಾನ ಪಡಲಾಗುತ್ತಿದೆ. ಆದರೆ ಈ ಸಮಾಧಾನ ಪೂರ್ಣ ಪ್ರಾಮಾಣಿಕವಲ್ಲ. ಯಾಕೆಂದರೆ, ತೆಲಂಗಾಣದಲ್ಲಿ ಸ್ಪರ್ಧೆಯಿದ್ದುದೇ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಡುವೆ. ಆದ್ದರಿಂದ, ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚಲಾವಣೆಯಾದ ಮತಗಳನ್ನು ಉಳಿದ ಮೂರು ರಾಜ್ಯಗಳ ಜೊತೆಗೆ ಸೇರಿಸಿಕೊಂಡು ಲೆಕ್ಕ ಹಾಕುವುದು ತಪ್ಪಾಗುತ್ತದೆ. ಆದರೂ ತೆಲಂಗಾಣದಲ್ಲಿ ಬಿಜೆಪಿ ಮಹತ್ವದ ಮುನ್ನಡೆಯನ್ನು ಪಡೆದಿದೆ. ಈ ಹಿಂದೆ ಏಕೈಕ ಶಾಸಕರನ್ನು ಹೊಂದಿದ್ದ ಬಿಜೆಪಿಯು ಈ ಬಾರಿ 8 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಒಟ್ಟಾರೆ 14 ಲಕ್ಷ ಮತಗಳನ್ನು ಪಡೆದಿತ್ತು. ಈ ಬಾರಿ 32 ಲಕ್ಷ ಮತಗಳನ್ನು ಪಡೆದಿದೆ. ಮಾತ್ರವಲ್ಲ, ಸುಮಾರು 15ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯನ್ನು ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ಗಢಗಳಿಗೆ ಸೀಮಿತಗೊಳಿಸಿ </span><span face="Arial, Helvetica, sans-serif" style="background-color: white; color: #222222; font-size: small;">ನೋಡುವುದೇ ಸರಿಯಾದ ವಿಧಾನ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದರೆ, </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 98 ಲಕ್ಷ ಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. ಬಿಜೆಪಿ ಪಡೆದಿರುವ ಮತಗಳು 4 ಕೋಟಿ 48 ಲಕ್ಷಕ್ಕಿಂತಲೂ ಅಧಿಕ. ಅಂದರೆ, ಕಾಂಗ್ರೆಸ್ಗಿAತ ಬಿಜೆಪಿ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 57 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿತ್ತು ಮತ್ತು ಬಿಜೆಪಿ 3 ಕೋಟಿ 41 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿತ್ತು. ಅಂದರೆ ಬಿಜೆಪಿಗಿಂತ ಕಾಂಗ್ರೆಸ್ 16 ಲಕ್ಷಕ್ಕಿಂತಲೂ ಅಧಿಕ ಹೆಚ್ಚು ಮತಗಳನ್ನು ಪಡೆದಿತ್ತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಇನ್ನೂ ಒಂದು ಲೆಕ್ಕಾಚಾರ ಇದೆ</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಧ್ಯ ಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ತಾನಗಳಲ್ಲಿ ಅಧಿಕಾರ ಕಳ ಕೊಂಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ ಮಧ್ಯ ಪ್ರದೇಶದಲ್ಲಿ ಆಪರೇಶನ್ ಕಮಲ ನಡೆದು, ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಕುಸಿದು ಬಿದ್ದುದು ಬೇರೆ ವಿಷಯ. ಆದರೆ, 2019ರ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ಚಿತ್ರಣವೇ ಬದಲಾಯಿತು. ಮಧ್ಯಪ್ರದೇಶದ 28 ಲೋಕಸಭಾ ಸ್ಥಾನಗಳ ಪೈಕಿ 27 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತು. ರಾಜಸ್ತಾನದ 25 ಸ್ಥಾನಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತು. ಛತ್ತೀಸ್ಗಢದ ಪರಿಸ್ಥಿತಿಯೂ ಭಿನ್ನವಲ್ಲ. ಒಟ್ಟು 11 ಸ್ಥಾನಗಳ ಪೈಕಿ ಬಿಜೆಪಿ 9ನ್ನೂ ಗೆದ್ದುಕೊಂಡಿತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಇನ್ನೂ ಒಂದು ಅಂಕಿ ಅಂಶವನ್ನು ಇಲ್ಲಿ ಪರಿಗಣಿಸಬಹುದು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">2013ರಲ್ಲಿ ಈ ಮೂರೂ ರಾಜ್ಯಗಳಲ್ಲಿ ನಡೆದ ಚುನಾವಣೆಯನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಮಾತ್ರವಲ್ಲ, 2014ರ ಲೋಕಸಭಾ ಚು ನಾವಣೆಯಲ್ಲೂ ಬಿಜೆಪಿಗೆ ಗೆಲುವಾಯಿತು. ಹಾಗೆಯೇ 2003ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೇ ಅಭೂತಪೂರ್ವ ಗೆಲುವು ಲಭ್ಯವಾಗಿತ್ತು. ಇದೇ ಉತ್ಸಾಹದಲ್ಲಿ ಆಗಿನ ಪ್ರಧಾನಿ ವಾಜಪೇಯಿಯವರು ಇಂಡಿಯಾ ಶೈನಿಂಗ್ ಎಂಬ ಘೋಷಣೆ ಯನ್ನು ಹೊರಡಿಸಿದ್ದರು. ಅದರ ಮೇಲೆಯೇ 2004ರಲ್ಲಿ ಲೋಕಸಭಾ ಚುನಾವಣೆಯನ್ನೂ ಎದುರಿಸಿದರು ಮತ್ತು ಆಘಾತಕಾರಿ ಸೋಲನ್ನೂ ಅನುಭವಿಸಿದರು.</span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ನಿಜವಾಗಿ, ಬಿಜೆಪಿಯ ಮತ ಗಳಿಕೆಯ ಹೆಚ್ಚಳದಲ್ಲಿ ಇತರ ಸಣ್ಣ-ಪುಟ್ಟ ಪಕ್ಷಗಳ ಪಾಲು ಅಧಿಕವಿದೆ ಎಂದು ಹೇಳಲಾಗುತ್ತಿದೆ. ಮಾಯಾವತಿಯ ಬಿಎಸ್ಪಿಯು ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ 1.6% ಮತಗಳನ್ನು ಕಳಕೊಂಡಿದೆ. ಹಾಗೆಯೇ ರಾಜಸ್ತಾನದಲ್ಲಿ 2.3%, ಛತ್ತೀಸ್ಗಢದಲ್ಲಿ 1.8% ಮತ್ತು ತೆಲಂಗಾಣದಲ್ಲಿ 0.7% ಮತಗಳನ್ನು ಕಳಕೊಂಡಿದೆ. ಹಾಗೆಯೇ, 2018ರಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್ಗಢ ಎಂಬ ಪಕ್ಷವು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು 7.6% ಮತ ಪ್ರಮಾಣದೊಂದಿಗೆ 5 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಸೊನ್ನೆ ಸುತ್ತಿದೆ. ಇದೇ ರೀತಿ, ಈ ನಾಲ್ಕು ರಾಜ್ಯಗಳಲ್ಲಿ ಸ್ಪರ್ಧಿಸಿರುವ ಇತರ ಪಕ್ಷಗಳು ಮತ್ತು ಪಕ್ಷೇತರರ ಶೇಕಡಾವಾರು ಮತಗಳೂ ಕುಸಿದಿದ್ದು, ಇವೆಲ್ಲ ವನ್ನೂ ಬಿಜೆಪಿ ಸೆಳೆದುಕೊಂಡಿದೆ ಎಂದು ಲೆಕ್ಕಾಚಾರ ಹೇಳುತ್ತಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಕಾಂಗ್ರೆಸ್ನ ಈ ವೈಫಲ್ಯಕ್ಕೆ ಕಾರಣವೇನು? ಮೃದು ಹಿಂದುತ್ವವೇ? ಈ ಮೃದು ಹಿಂದುತ್ವ ಅಂದರೇನು? ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ದೇವಸ್ಥಾನಕ್ಕೆ ಹೋಗುವುದು ಅಥವಾ ದೇವಸ್ಥಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುವುದು ಮೃದು ಹಿಂದುತ್ವವೇ? ಹಣೆಗೆ ನಾಮ ಹಾಕಿಕೊಳ್ಳುವುದು ಅಥವಾ ತಾನು ಶಿವನ ಆರಾಧಕ ಎಂದು ಹೇಳುವುದು ಮೃದು ಹಿಂದುತ್ವವೇ? ಸನಾತನ ಧರ್ಮವನ್ನು ಟೀಕಿಸಿದ ಡಿಎಂಕೆ ಜೊತೆ ಅಸಹಮತವನ್ನು ತೋರುವುದು ಮೃದು ಹಿಂದುತ್ವವೇ? ಛತ್ತೀಸ್ ಗಢದ ಚಂಪಾರಣ್ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಬಘೇಲ್ ಅವರು ರಾಮನ ಬೃಹತ್ ಪ್ರತಿಮೆಯನ್ನು ಚುನಾವಣೆಗಿಂತ ಮೊದಲು ಅನಾವರಣಗೊಳಿಸಿದರು. ರಾಮ ವ ನವಾಸಕ್ಕೆಂದು ನಡೆದು ಹೋದ ಮಾರ್ಗವನ್ನು ‘ರಾಮ ವನ ಗಮನ ಪಥ’ ಎಂಬ ಹೆಸರಿನ ಯೋಜನೆಯೊಂದಿಗೆ ಜಾರಿಗೆ ತಂದರು. ಇದನ್ನು ಮೃದು ಹಿಂದುತ್ವವೆಂದು ಟೀಕಿಸಲಾಗುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳುವುದನ್ನು, ಕೇಸರಿ ರುಮಾಲು ಹಾಕುವುದನ್ನು ಮೃದು ಹಿಂದುತ್ವ ಎಂದು ಕರೆಯ ಲಾಗುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಿಜಕ್ಕೂ ಇದು ಎಷ್ಟು ತರ್ಕಬದ್ಧ? ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳು ವುದರಿಂದ ವಿಚಲಿತರಾಗಿ ಬಿಜೆಪಿಗೆ ಮತ ಹಾಕುತ್ತಿರುವ ಕಾಂಗ್ರೆಸ್ ಮತದಾರರು ಯಾರು? ಅವರು ಈ ವರೆಗೆ ಬಿಜೆಪಿಗೆ ಮತ ಹಾಕದೇ ಇರುವುದಕ್ಕೆ ಈ ಒಂದು ವ್ಯತ್ಯಾಸ ಮಾತ್ರ ಕಾರಣವೇ? ಹಿಂದೂ ಧರ್ಮವನ್ನು ಬಿಜೆಪಿ ಪ್ರತಿಪಾದಿಸುತ್ತಿರುವ ರೀತಿ ಮತ್ತು ಕಾಂಗ್ರೆಸ್ ಪ್ರತಿ ಪಾದಿಸುತ್ತಿರುವ ರೀತಿ ಹೇಗಿದೆ? ಸಮಾನವೇ? ಹಿಂದೂಯೇತರರನ್ನು ಮುಖ್ಯವಾಗಿ ಮುಸ್ಲಿಮರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ಹೇಗಿದೆ? ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತಿದೆ? ಚುನಾವಣಾ ಗೆಲುವಿಗಾಗಿ ಧಾರ್ಮಿಕ ಧ್ರುವೀಕರಣ ಮಾಡುವ ಬಿಜೆಪಿಗೂ ಧರ್ಮವನ್ನು ಆಧ್ಯಾತ್ಮಿಕ ಸುಖದ ಭಾಗವಾಗಿ ನೋಡುವ ಕಾಂಗ್ರೆಸ್ಗೂ ವ್ಯತ್ಯಾಸ ಇಲ್ಲವೇ? ಈ ವರೆಗೆ ಕಾಂಗ್ರೆಸ್ಗೆ ಓಟು ಹಾಕುತ್ತಿದ್ದವರು ಈಗ ಬಿಜೆಪಿಗೆ ಓಟು ಹಾಕುವುದಾದರೆ ಅದು ಕಾಂಗ್ರೆಸ್ನ ಮೃದು ಹಿಂದುತ್ವದಿಂದ ಬೇಸತ್ತೇ? ಕಾಂಗ್ರೆಸ್ ಅಲ್ಲದಿದ್ದರೆ ಇವರಿಗೆಲ್ಲ ಬಿಜೆಪಿ ಪರ್ಯಾಯವಾದುದು ಹೇಗೆ? ಒಂದುರೀತಿಯಲ್ಲಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಮೃದು ಹಿಂದುತ್ವದಿಂದಾಗಿ ಕಾಂಗ್ರೆಸ್ಗೆ ಸೋಲಾಗುತ್ತಿದೆ ಎಂಬುದು ಒಂದು ಊಹೆಯೇ ಹೊರತು ಇದು ಬಹುತೇಕ ನಿಜವಲ್ಲ. ಧರ್ಮವನ್ನು ಸಂಪೂರ್ಣ ನಿರಾಕರಿಸುವ ಧಾಟಿಯಲ್ಲಿ ಮಾತನಾಡಿದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಅಸ್ತಿತ್ವಕ್ಕಾಗಿ ಹೋರಾ ಡುತ್ತಿವೆ. ಒಂದು ಕಾಲದಲ್ಲಿ ಪಶ್ಚಿಮ ಬಂಗಾಲದಂಥ ದೊಡ್ಡ ರಾಜ್ಯವೂ ಸೇರಿ ತ್ರಿಪುರಾದಲ್ಲೂ ದೀರ್ಘಕಾಲ ಆಡಳಿತ ನಡೆಸಿದ್ದ ಮತ್ತು ಲೋಕಸಭೆಯಲ್ಲಿ 50ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಕೇರಳಕ್ಕೆ ಸೀಮಿತಗೊಳ್ಳಲು ಕಾರಣವೇನು? ಧರ್ಮದಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದೇ ಅದರ ಯಶಸ್ಸಿಗೆ ಕಾರಣವಾಗಿದ್ದರೆ, ಮತ್ತೇಕೆ ಇವತ್ತು ಅದು ಈ ಮಟ್ಟದಲ್ಲಿ ಪತನಮುಖಿಯಾಗಿದೆ? ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಕಾಂಗ್ರೆಸ್ನ ವೈಫಲ್ಯಕ್ಕೆ ಅದು ಧಾರ್ಮಿಕವಾಗಿ ಗುರುತಿಸಿಕೊಂಡಿರುವುದು ಕಾರಣ ಅಲ್ಲ. ಅದರಿಂದಾಗಿ ಕಾಂಗ್ರೆಸ್ ಮತದಾರರು ದೂರ ಸರಿದುದೂ ಅಲ್ಲ. ಬಿಜೆಪಿಯ ಯಶಸ್ಸಿನಲ್ಲಿ ಅದರ ಪ್ರಚಾರ ತಂತ್ರಕ್ಕೆ ಬಹಳ ದೊಡ್ಡ ಪಾತ್ರ ಇದೆ. ದ್ವೇಷ ರಾಜಕೀಯವನ್ನು ಅದು ತಳಮಟ್ಟದಲ್ಲಿ ಯಶಸ್ವಿಯಾಗಿ ಬಿತ್ತಿದೆ. ಈ ದ್ವೇಷವು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಅದರ ನಾಯಕರಿಂದ ಬಿತ್ತರವಾಗುತ್ತಿರುತ್ತದೆ. ಇದನ್ನು ಕಾಂಗ್ರೆಸ್ ಎದುರಿಸಬೇಕಾದರೆ ಬೇರುಮಟ್ಟದಲ್ಲಿ ಜನರನ್ನು ತಲುಪುವ ಪ್ರಬಲ ಸಂಘಟನಾ ಬಲ ಇರಬೇಕು. ‘ಸೇವಾದಳ’ವನ್ನು ಕಾಂಗ್ರೆಸ್ ಸ್ಥಾಪಿಸಿರುವುದು ಇದೇ ಕಾರಣಕ್ಕೆ. ಇದು ಬಲಿಷ್ಠವಾಗಿರುವ ಕಾಲದ ವರೆಗೆ ಕಾಂಗ್ರೆಸ್ಸೂ ಬಲಿಷ್ಠವಾಗಿತ್ತು. ಸೇವಾದಳದ ನಾಯಕರು ವೇದಿಕೆಯಲ್ಲಿರುವಾಗ ಕಾಂಗ್ರೆಸ್ ಜನಪ್ರತಿನಿಧಿಗಳು ಸಭಿಕರಾಗಿ ಎದುರಲ್ಲಿ ಕುಳಿತುಕೊಳ್ಳಬೇಕಿತ್ತು. ಸೇವಾದಳದ ನಿರ್ದೇಶಗಳನ್ನು ಜನಪ್ರತಿನಿಧಿಗಳು ಅನುಸರಿಸಬೇಕಿತ್ತು. ಸೇವಾದಳವು ಬೇರುಮಟ್ಟದಲ್ಲಿ ಜನರನ್ನು ಸಂಪರ್ಕಿಸಿ ಮತವನ್ನು ಒಗ್ಗೂಡಿಸುತ್ತಿತ್ತು. ಈ ಸೇವಾದಳದಿಂದಲೇ ಕಾಂಗ್ರೆಸ್ ನಾಯಕರೂ ಬೆಳೆಯುತ್ತಿದ್ದರು. ಕಾರ್ಯಕರ್ತರು ತಯಾರಾಗುತ್ತಿದ್ದುದೇ ಈ ಸೇವಾದಳದಿಂದ. ಆದರೆ ಇವತ್ತು ಸೇವಾದಳ ಪರಿಣಾಮಶೂನ್ಯ ಸ್ಥಿತಿಯಲ್ಲಿದೆ. ಸೇವಾದಳದ ಸಭೆಯಲ್ಲಿ ಸಭಿಕರಾಗಿ ಕಾಣಿಸಿಕೊಳ್ಳಬೇಕಿದ್ದ ಜನ ಪ್ರತಿನಿಧಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ/ಳೆ. ಆತನ ಅಣತಿ ಯಂತೆ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸಂಘಟ ನೆಯನ್ನು ಹೀಗೆ ಜನಪ್ರತಿನಿಧಿಗಳು ಹೈಜಾಕ್ ಮಾಡಿರುವ ಕಾರಣದಿಂದಾಗಿ ಸಂಘಟನೆಯ ಮಹತ್ವವೇ ಕಳೆದುಹೋಗಿದೆ. ಅದೇರೀತಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಗ್ಯಾರಂಟಿಗಳ ಮೇಲೆಯೇ ಅತಿಯಾದ ಭಾರ ಹಾಕಬಾರದು. ದಕ್ಷಿಣ ಭಾರತದಲ್ಲಿ ಒಂದೊಮ್ಮೆ ಈ ತತ್ವ ಫಲಿಸಬಹುದಾದರೂ ಹಿಂದಿ ನಾಡಿನಲ್ಲಿ ದ್ವೇಷ ರಾಜಕೀಯದ ಪ್ರಭಾವವೇ ಮುಂಚೂಣಿಯಲ್ಲಿದೆ. ಯಾವುದೇ ಗ್ಯಾರಂಟಿಯನ್ನು ಕಾಲ ಕಸವಾಗಿಸುವಷ್ಟು ದ್ವೇಷವನ್ನು ಪ್ರತಿದಿನವೆಂಬಂತೆ ತುಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಜೊತೆಗೇ ಈಗಾಗಲೇ ಇಂಡಿಯಾ ಕೂಟದಿಂದ ಹೊರಗಿರುವ ಪಕ್ಷಗಳನ್ನು ಕೂಟದೊಳಗೆ ಸೇರಿಸುವ ಮತ್ತು ಈಗಿಂದೀಗಲೇ ಲೋಕಸಭಾ ಸೀಟು ಹಂಚಿಕೆಯ ಸ್ಪಷ್ಟ ನಿರ್ಧಾರ ವನ್ನು ಕೈಗೊಳ್ಳಬೇಕು. ಬಿಎಸ್ಪಿಯಂಥ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಕಡಿಮೆಯಿದ್ದರೂ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯ ಹಿಂದಿ ನಾಡಿನಲ್ಲಿ ಸಾಕಷ್ಟಿದೆ ಎಂಬುದು ಇಂಡಿಯಾ ಒಕ್ಕೂಟಕ್ಕೆ ಗೊತ್ತಿರಬೇಕು. ಈಗಿಂದೀಗಲೇ ಇಂಡಿಯಾ ಒಕ್ಕೂಟ ಸೀಟು ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿ ಒಮ್ಮತಕ್ಕೆ ಬರದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಅಸಾಧ್ಯ. ಜೊತೆಗೇ, ಇಂಡಿಯಾ ಒಕ್ಕೂಟವು ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ತಕ್ಷಣ ರೂಪು ನೀಡಬೇಕು. ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕಾನೂನಿನ ಕಠಿಣ ಭಾಷೆಯಲ್ಲೇ ಉತ್ತರವನ್ನು ನೀಡಬೇಕು. ಇಂಥ ಸಂದರ್ಭಗಳಲ್ಲಿ ಆಕ್ರಮಣಕಾರಿಯಾಗಿ ವರ್ತಿಸುವುದೇ ಸರಿಯಾದ ವಿಧಾನ. ನ್ಯಾಯ ಮತ್ತು ಸಂವಿಧಾನಕ್ಕೆ ಬದ್ಧವಾಗುವ ವಿಷಯದಲ್ಲಿ ಆಕ್ರಮಣಕಾರಿಯಾಗುವುದು ಈಗಿನ ಅನಿವಾರ್ಯತೆ. ಬರೇ ಅಭಿವೃದ್ಧಿಯೊಂದೇ ಬಿಜೆಪಿಗಾಗಲಿ ಕಾಂಗ್ರೆಸ್ಗಾಗಿ ಓಟು ತರಲಾರದು. ಆದ್ದರಿಂದಲೇ, ಬಿಜೆಪಿ ಅಭಿವೃದ್ಧಿಗಿಂತ ಹೆಚ್ಚು ಗಮನವನ್ನು ಅಭಿವೃದ್ಧಿ ಹೊರತಾದ ಧರ್ಮ ಧ್ರುವೀಕರಣಕ್ಕೆ ನೀಡುತ್ತಿದೆ. ಅದರ ಜೊತೆಗೇ ಗ್ಯಾರಂಟಿಗಳ ಮೊರೆಯೂ ಹೋಗಿದೆ. ಬರೇ ಧರ್ಮ ಧ್ರುವೀಕರಣವೊಂದೇ ಓಟು ತಂದು ಕೊಡಲಾರದು ಎಂಬ ಭಯ ಬಿಜೆಪಿಗಿದೆ ಎಂಬುದನ್ನೇ ಇದು ಸೂಚಿಸುತ್ತದೆ. ಇದು ನಿಜಕ್ಕೂ ಕಾಂಗ್ರೆಸ್ನ ಪಾಲಿಗೆ ಬಹುದೊಡ್ಡ ಆಶಾವಾದ. ಧರ್ಮ ಧ್ರುವೀಕರಣದ ಮೇಲೆ ಸ್ವತಃ ಬಿಜೆಪಿಗೇ ಸಂಪೂರ್ಣ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜನರು ಸದಾಕಾಲ ದ್ವೇಷ ರಾಜಕಾರಣವನ್ನು ಬೆಂಬಲಿಸಲ್ಲ. ಇಂಥ ರಾಜಕಾರಣದ ವ್ಯಾಲಿಡಿಟಿ ಹೃಸ್ವವಾದುದು. ಅಂತಿಮ ಗೆಲುವು ಸರ್ವರನ್ನೂ ಒಳಗೊಳ್ಳುವ ಸರ್ವಹಿತ ಸಿದ್ಧಾಂತದ್ದೇ. ಒಕ್ಕೂಟ ಪಕ್ಷಗಳನ್ನು ವಿಶ್ವಾಸಕ್ಕೆ ಪಡಕೊಂಡು ಕಾಂಗ್ರೆಸ್ ಈಗಿಂದೀಗಲೇ ಸ್ಪಷ್ಟ ಗುರಿಯೊಂದಿಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದರೆ ಗೆಲುವು ಅಸಾಧ್ಯವಲ್ಲ.</span></div></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-792118065931931222023-12-14T02:45:00.000-08:002023-12-14T02:45:01.040-08:00ಅಲ್ಲಾಹನ ಹೆಸರಲ್ಲಿ ಇ ಮೇಲ್ ಮತ್ತು ಕಟಕಟೆಯಲ್ಲಿ ಮುಸ್ಲಿಮರು <div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjaqgQNU_gxiuN4yW4y7qHosfUNdnmsOhvOI_tAdn7skDR3Rmy5IwhE1g9BbbAZT4AeF1WncH8yfm4JQ43_oaw8XMj9xQgtzoIKegEtwhxSyhfuLZAM_5a04ZZ6D4EgWAbYpGLoOIgrlGRdHlS37rjK1KKsBqQhMi2fNA866SJy0eIyMvpi0qLM1ENWZze7/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEjaqgQNU_gxiuN4yW4y7qHosfUNdnmsOhvOI_tAdn7skDR3Rmy5IwhE1g9BbbAZT4AeF1WncH8yfm4JQ43_oaw8XMj9xQgtzoIKegEtwhxSyhfuLZAM_5a04ZZ6D4EgWAbYpGLoOIgrlGRdHlS37rjK1KKsBqQhMi2fNA866SJy0eIyMvpi0qLM1ENWZze7/w400-h198/page%203%20pic.jpg" width="400" /></a></div><br /><p><br /></p><p></p><p><br />1. ಹಿಂದೂವಿನಿಂದ ಹಿಂದೂವಿನ ಮೇಲೆ ಹಲ್ಲೆ <br />2. ಮೇಲ್ಜಾತಿ ವ್ಯಕ್ತಿಯಿಂದ ದಲಿತನ ಮೇಲೆ ಹಲ್ಲೆ <br />3. ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ <br />4. ಹಿಂದೂವಿನ ಮೇಲೆ ಮುಸ್ಲಿಮನಿಂದ ಹಲ್ಲೆ <br />5. ಹಿಂದೂವಿನಿAದ ಮುಸ್ಲಿಮನ ಮೇಲೆ ಹಲ್ಲೆ <br />6. ಮನುಷ್ಯನಿಂದ ಮನುಷ್ಯನ ಮೇಲೆ ಹಲ್ಲೆ </p><p><br />ಈ
6 ಸುದ್ದಿಗಳ ಪೈಕಿ ಜನರ ಗಮನವನ್ನೇ ಸೆಳೆಯದ, ಇತರರೊಂದಿಗೆ ಹಂಚಿಕೊಳ್ಳದ ಮತ್ತು
ನಿರ್ಲಕ್ಷಿಸಿ ಮುಂದೆ ಹೋಗಬಹುದಾದ ಸುದ್ದಿ ಯಾವುದಾಗಿರಬಹುದು? ಉತ್ತರ ಕಷ್ಟವೇನೂ
ಅಲ್ಲ- 1 ಮತ್ತು 6. ಇನ್ನು, ಅತ್ಯಂತ ಹೆಚ್ಚು ಗಮನ ಸೆಳೆಯುವ, ಟಿ.ವಿ. ಸಂವಾದಗಳಿಗೆ
ಕಾರಣವಾಗುವ, ಸಾರ್ವಜನಿಕ ಪ್ರತಿಭಟನೆ, ರ್ಯಾಲಿ, ಲಾಠಿ ಚಾರ್ಜು-ಕರ್ಫ್ಯೂ, ಹಿಂಸೆಗಳಿಗೂ
ಕಾರಣವಾಗಬಹುದಾದ ಸುದ್ದಿ ಯಾವುದು? ಉತ್ತರ ಸುಲಭ- 4. ಇನ್ನು, ಇದಕ್ಕಿಂತ ತುಸು
ಕಡಿಮೆ ಗಮನ ಸೆಳೆಯಬಹುದಾದ ಆದರೆ ಸಾರ್ವಜನಿಕ ಚರ್ಚೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ
ಟೀಕೆ-ಟಿಪ್ಪಣಿಗಳಿಗೆ ಒಳಗಾಗಬಹುದಾದ ಸುದ್ದಿ ಯಾವುದೆಂದರೆ ಸಂಖ್ಯೆ 5ರದ್ದು. ಉಳಿದಂತೆ
ಕೆಲವೊಮ್ಮೆ ಪ್ರತಿಭಟನೆಗೂ ಚುನಾವಣೆಯ ಸಂದರ್ಭದಲ್ಲಾದರೆ ರಾಜಕಾರಣಿಗಳ ಕ್ಷಮಾಯಾಚನೆಗೂ
ಕಠಿಣ ಕ್ರಮದ ಭರವಸೆಗೂ ಕಾರಣವಾಗುವ ಸುದ್ದಿಯು ಕ್ರಮ ಸಂಖ್ಯೆ 2ರದ್ದು. ಆದರೆ, ‘ದಲಿತ
ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ ’ ಎಂಬ ಕ್ರಮ ಸಂಖ್ಯೆ 3ರ ಸುದ್ದಿಯು
ದೇಶದಲ್ಲಿ ಬಹುತೇಕ ಅಸಂಭವ ಅಥವಾ ಅಪರೂಪದಲ್ಲಿ ಅಪರೂಪದ್ದಾಗಿರುವುದರಿಂದ ಆ ಬಗ್ಗೆ
ವಿಶ್ಲೇಷಣೆ ಅಗತ್ಯವಿಲ್ಲ.<br /> </p><p>ಇನ್ನೊಂದು ಉದಾಹರಣೆ<br />1. ಪ್ರೀತಿಸಿದ ಯುವಕ-ಯುವತಿಯರಿಬ್ಬರೂ ಪರಾರಿ<br />2. ಹಿಂದೂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ<br />3. ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಪರಾರಿ<br />4. ಹಿಂದೂ ಯುವಕನೊಂದಿಗೆ ಮುಸ್ಲಿಮ್ ಯುವತಿ ಪರಾರಿ<br />5. ಮೇಲ್ಜಾತಿ ಯುವಕನೊಂದಿಗೆ ದಲಿತ ಯುವತಿ ಪರಾರಿ<br />6. ದಲಿತ ಯುವಕನೊಂದಿಗೆ ಮೇಲ್ಜಾತಿ ಯುವತಿ ಪರಾರಿ<br />ಇವುಗಳ
ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆಯುವ, ಚರ್ಚೆಗೆ ಗ್ರಾಸವಾಗುವ, ಹಿಂಸಾಚಾರ ಮತ್ತು
ಪೊಲೀಸ್ ಬಿಗಿ ಬಂದೋಬಸ್ತ್ ಗೆ ಕಾರಣವಾಗುವ ಹಾಗೂ ಧರ್ಮ ಅಪಾಯದಲ್ಲಿದೆ ಎಂಬ ಕೂಗು ಕೇಳಿ
ಬರುವ ಸುದ್ದಿ ಯಾವುದೆಂಬುದನ್ನು ಪತ್ತೆ ಹಚ್ಚುವುದಕ್ಕೆ ಕಷ್ಟವೇನೂ ಇಲ್ಲ- ಅದು ಸುದ್ದಿ
ಸಂಖ್ಯೆ 3. ಇನ್ನು, ಇಷ್ಟು ತೀವ್ರವಾಗಿ ಅಲ್ಲದಿದ್ದರೂ ಚರ್ಚೆ, ಆತಂಕ ಮತ್ತು ಸೋಶಿಯಲ್
ಮೀಡಿಯಾ ಚರ್ಚೆಗಳಿಗೆ ಕಾರಣವಾಗುವ ಸುದ್ದಿಯೆಂದರೆ ಕ್ರಮ ಸಂಖ್ಯೆ 4ರದ್ದು. ಈ
ಸುದ್ದಿiಗಳ ಪೈಕಿ ಅತ್ಯಂತ ಕಡಿಮೆ ಗಮನ ಸೆಳೆಯಬಹುದಾದ ಮತ್ತು ನಕ್ಕು ಮುಂದೆ ಸಾಗಬಹುದಾದ
ಅನಾಕರ್ಷಣೀಯ ಸುದ್ದಿ ಕ್ರಮ ಸಂಖ್ಯೆ 1ರದ್ದು. ಹಾಗೆಯೇ ಕೆಲವೊಮ್ಮೆ ಅತ್ಯಂತ
ಅಪಾಯಕಾರಿ ತಿರುವನ್ನು ಪಡಕೊಳ್ಳಬಹುದಾದ ಮತ್ತು ಮರ್ಯಾದಾ ಹತ್ಯೆಯಂಥ ಕ್ರೌರ್ಯಕ್ಕೂ
ಕಾರಣವಾಗಬಹುದಾದ ಸುದ್ದಿ ಕ್ರಮಸಂಖ್ಯೆ 6ರದ್ದು. ಸುದ್ದಿ ಸಂಖ್ಯೆ 5 ಸಾಮಾನ್ಯ
ಸಂದರ್ಭಗಳಲ್ಲಿ ಅಸಂಭವ ಆಗಿರುವುದರಿಂದ ಅದಕ್ಕಿರುವ ಪ್ರತಿಕ್ರಿಯೆಯ ಬಗ್ಗೆ
ಕುತೂಹಲವನ್ನಷ್ಟೇ ಇಟ್ಟುಕೊಳ್ಳಬಹುದು.</p><p><br />ಇನ್ನೂ ಒಂದು ಉದಾಹರಣೆ ಕೊಡುತ್ತೇನೆ<br />1. ಅಪರಿಚಿತರಿಂದ ವಿಮಾನ ನಿಲ್ದಾಣಕ್ಕೆ ಬಾಂಬು ಬೆದರಿಕೆ<br />2. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಅಲ್ಲಾಹನ ಹೆಸರಲ್ಲಿ ಈ-ಮೇಲ್ ರವಾನೆ<br />3. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಆದಿತ್ಯರಾವ್ ಎಂಬಾತನ ಬಂಧನ<br />4. ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಜೀವಂತ ಬಾಂಬ್: ತಜ್ಞರಿಂದ ಬಾಂಬ್ ನಿಷ್ಕ್ರಿಯ</p><p><br />ನಿಜವಾಗಿ
ಇಲ್ಲಿರುವ ನಾಲ್ಕು ಸುದ್ದಿಗಳ ಪೈಕಿ ಅತ್ಯಂತ ಆಘಾತಕಾರಿ ಮತ್ತು ಬೆಚ್ಚಿ ಬೀಳಬೇಕಾದ
ಸುದ್ದಿ ಕ್ರಮಸಂಖ್ಯೆ 4ರದ್ದು. ಯಾಕೆಂದರೆ, ಯಾವ ಗೌಜು-ಗದ್ದಲ, ಬೆದರಿಕೆ, ಈ-ಮೇಲ್ಗಳ
ರಂಪಾಟವೂ ಇಲ್ಲದೇ ಯಾರೋ ಒಬ್ಬ ಜೀವಂತ ಬಾಂಬ್ ಇಟ್ಟು ಹೋಗಿದ್ದಾನೆ, ಅದು ಸಕಾಲದಲ್ಲಿ
ಪತ್ತೆಯಾಗದೇ ಹೋಗಿರುತ್ತಿದ್ದರೆ ಅನೇಕ ಜೀವಗಳು ಪ್ರಾಣ ಕಳಕೊಳ್ಳುತ್ತಿದ್ದುವು. ವಿಮಾನ
ನಿಲ್ದಾಣವೇ ಸ್ಫೋಟಗೊಳ್ಳುತ್ತಿತ್ತು. ಒಂದೊಮ್ಮೆ ನಿಲ್ದಾಣದಲ್ಲಿ ವಿಮಾನ
ಇರುತ್ತಿದ್ದರೆ, ಭಾರಿ ಸಾವು-ನೋವುಗಳಾಗುವ ಸಾಧ್ಯತೆಯೂ ಇತ್ತು. ಅಪಾರ ನಾಶ-ನಷ್ಟ ಮತ್ತು
ಭಾರತದ ವರ್ಚಸ್ಸಿಗೆ ಹಾನಿ ತಟ್ಟಬಹುದಾದ ಕೃತ್ಯ ಇದು. ಆದರೆ, ಟಿ.ವಿ. ಚಾನೆಲ್ಗಳು,
ಪತ್ರಿಕೆಗಳು, ಸೋಶಿಯಲ್ ಮೀಡಿಯಾದ ಚರ್ಚೆಯಿಂದ ಹಿಡಿದು ಸಾರ್ವಜನಿಕ ಚರ್ಚೆ, ಸಭೆ,
ಪ್ರತಿಭಟನೆ, ಆವೇಶದ ಭಾಷಣಗಳ ವರೆಗೆ- ಈ ಎಲ್ಲಕ್ಕೂ ಕಾರಣವಾಗಬಹುದಾದ ಬಿಗ್ ಬ್ರೇಕಿಂಗ್
ಸುದ್ದಿ ಇದಾಗುವುದಿಲ್ಲ, ಬದಲು ಕ್ರಮ ಸಂಖ್ಯೆ 2ರ ಸುದ್ದಿ ಈ ಎಲ್ಲವನ್ನೂ
ಸಾಧ್ಯವಾಗಿಸುತ್ತದೆ. ಅಷ್ಟಕ್ಕೂ,</p><p><br />ಕ್ರಮ ಸಂಖ್ಯೆ 2ರ ವ್ಯಕ್ತಿ ವಿಮಾನ ನಿಲ್ದಾಣಕ್ಕೆ
ಬಾಂಬನ್ನೇ ಹಾಕುವುದಿಲ್ಲ. ಅಲ್ಲಾಹನ ಹೆಸರಲ್ಲಿ ರವಾನಿಸಲಾದ ಈ-ಮೇಲ್ನ ಹೊರತಾಗಿ ಆತ
ಯಾರೆಂದೇ ಗೊತ್ತಿರುವುದಿಲ್ಲ. ಆತ ಈ-ಮೇಲ್ನಲ್ಲಿ ಬಳಸಿರುವ ಅಲ್ಲಾಹ್, ಬಿಸ್ಮಿಲ್ಲಾಹ್,
ಇನ್ಶಾ ಅಲ್ಲಾಹ್, ಜಿಹಾದ್, ಕಾಫಿರ್ ಇತ್ಯಾದಿಗಳೇ ಆತನ ಗುರುತು. ಹಾಗಂತ, ಈ
ಈ-ಮೇಲನ್ನು ಮುಸ್ಲಿಮ್ ವ್ಯಕ್ತಿಯೇ ರವಾನಿಸಬೇಕಿಲ್ಲ, ಇಂಥ ಪದಗಳನ್ನು ಬಲ್ಲ ಯಾರೂ ಇಂಥ
ಈ-ಮೇಲನ್ನು ರವಾನಿಸಬಹುದು. ಆದರೆ, ಅರೇಬಿಕ್ ಪದಗಳನ್ನು ಮುಸ್ಲಿಮರಿಗೆ ಸಂಬAಧಿಸಿದವು
ಮತ್ತು ಮುಸ್ಲಿಮರು ಮಾತ್ರ ಅಂಥ ಪದಗಳನ್ನು ಬಳಸಬಲ್ಲರು ಎಂದು ತಕ್ಷಣ ತೀರ್ಮಾನಕ್ಕೆ
ಬರಲಾಗುತ್ತದಲ್ಲದೇ, ಟಿ.ವಿ. ಆ್ಯಂಕರ್ಗಳು ಕೋಟು- ಬೂಟುಗಳನ್ನು ಹಾಕಿಕೊಂಡು ಡಿಬೇಟ್ಗೆ
ಸಿದ್ಧವಾಗುತ್ತಾರೆ. ಡಿಬೇಟ್ ಆರಂಭವಾಗುವುದಕ್ಕಿಂತ ಮೊದಲೇ ಗುಂಡಿನ ಧ್ವನಿಯೊಂದಿಗೆ
ಮುಖಕ್ಕೆ ಬಟ್ಟೆ ಕಟ್ಟಿದ ಮತ್ತು ಕೈಯಲ್ಲಿ ಬಂದೂಕು ಹಿಡಿದ ಚಿತ್ರಗಳು ಪರದೆಯಲ್ಲಿ
ಕಾಣಿಸಿಕೊಳ್ಳುತ್ತದೆ. ಇವರೆಲ್ಲ ಮುಸ್ಲಿಮರು ಎಂಬುದ ನ್ನು ಸಾರಿ ಹೇಳುವುದಕ್ಕಾಗಿ
ಕೆಲವೊಮ್ಮೆ ಹಿನ್ನೆಲೆಯಲ್ಲಿ ಅದಾನ್ ಕೂಡಾ ಕೇಳಿಸುವುದಿದೆ ಅಥವಾ ಮಸೀದಿಯ ಚಿತ್ರ ಹಾದು
ಹೋಗುವುದಿದೆ. ಆ ಬಳಿಕ ಡಿಬೇಟ್ನ ಹೆಸರಲ್ಲಿ ಏಕಮುಖ ವಾದಗಳು ಪ್ರಾರಂಭವಾಗುತ್ತವೆ. ಈ
ಹಿಂದೆ ಬಂದಿರುವ ಇಂಥದ್ದೇ ಶೈಲಿಯ ಈ-ಮೇಲ್ಗಳು, ಅದರಲ್ಲಿ ಇದ್ದ ಅರೇಬಿಕ್ ಪದಗಳು
ಮತ್ತು ಅದರ ಹಿಂದಿರುವ ಮನಸ್ಥಿತಿ, ಜಗತ್ತನ್ನೇ ಇಸ್ಲಾಮ್ ಮಾಡುವ ಸಂಚು,
ಹಿಂಸಾಪ್ರಿಯತೆ, ಹಿಂದೂಗಳಿಗಿರುವ ಅಪಾಯ.. ಇತ್ಯಾದಿಗಳನ್ನೆಲ್ಲ ಹರಡಿಟ್ಟು
ಚರ್ಚಿಸಲಾಗುತ್ತದೆ. ಹಾಗಂತ,</p><p><br />ಟಿ.ವಿ.ಗಳಿಂದ ಹೊರಬಂದು ಪತ್ರಿಕೆಗಳನ್ನು ನೋಡಿದರೂ
ಸುಖವೇನೂ ಇರುವುದಿಲ್ಲ. ಟಿ.ವಿ.ಯಷ್ಟು ಬೇಜವಾಬ್ದಾರಿತನದಿಂದ ಅಲ್ಲ ದಿದ್ದರೂ, ಶಂಕಿತರು
ಮುಸ್ಲಿಮರೇ ಎಂದು ಪರೋಕ್ಷವಾಗಿಯಾದರೂ ಬಿಂಬಿಸುವ ರೀತಿಯಲ್ಲೇ ಸುದ್ದಿ
ಹೆಣೆಯಲ್ಪಟ್ಟಿರುತ್ತದೆ. ಅದಕ್ಕೆ ಕಾರಣ, ಅಲ್ಲಾಹ್, ಬಿಸ್ಮಿಲ್ಲಾಹ್, ಜಿಹಾದ್,
ಕಾಫಿರ್.. ಇತ್ಯಾದಿ ಪದಗಳು. ಇದರ ಆಚೆಗೆ, ರಾಜಕಾರಣಿಗಳು, ಸಂಘಟನೆಗಳ ನಾಯಕರು ಅದಾಗಲೇ
ಅಪರಾಧಿಯನ್ನು ಪತ್ತೆ ಮಾಡಿದವರಂತೆ ಹೇಳಿಕೆ ನೀಡತೊಡಗುತ್ತಾರೆ. ಇಸ್ಲಾಮ್ನಿಂದ ಈ
ದೇಶಕ್ಕೆ ಇರುವ ಅಪಾಯ, ಮುಸ್ಲಿಮರನ್ನು ದೂರ ಇಡಬೇಕಾದ ಅಗತ್ಯ ಮತ್ತು ಹಿಂದೂಗಳು
ಸಂಘಟಿತರಾಗಬೇಕಾದ ಅನಿವಾರ್ಯತೆಗಳ ಕುರಿತು ಭಾಷಣಗಳನ್ನು ಮಾಡಲಾಗುತ್ತದೆ. ಮುಸ್ಲಿಮ್
ಧರ್ಮಗುರುಗಳೇಕೆ ಫತ್ವಾ ಹೊರಡಿಸುವುದಿಲ್ಲ, ಈ ಬೆದರಿಕೆಯನ್ನು ಖಂಡಿಸಿ ಮುಸ್ಲಿಮರೇಕೆ
ಪ್ರತಿಭಟನೆ ನಡೆಸುವುದಿಲ್ಲ ಎಂದು ಪ್ರಶ್ನಿಸಲಾಗುತ್ತದೆ. ಅಂದಹಾಗೆ, ಇಷ್ಟೆಲ್ಲಾ
ನಡೆಯುತ್ತಿದ್ದರೂ ಅಲ್ಲಾಹನ ಹೆಸರಲ್ಲಿ ಈ-ಮೇಲ್ ಕಳಿಸಿದವನ ಬಂಧನವೂ ಆಗಿರುವುದಿಲ್ಲ
ಮತ್ತು ಆತನ ಧರ್ಮ ಯಾವುದು ಎಂದೂ ಪತ್ತೆಯಾಗಿರುವುದಿಲ್ಲ. ಆ ಈ-ಮೇಲ್ನಲ್ಲಿ ಬಳಸಲಾಗಿರುವ
ಪದಗಳೇ ಒಂದಿಡೀ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಕಟಕಟೆಯಲ್ಲಿ
ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಇದೇವೇಳೆ,</p><p><br />ಕ್ರಮಸಂಖ್ಯೆ 3ರ ಸುದ್ದಿಯ
ಆರೋಪಿಯನ್ನು ಬಂಧಿಸಲಾಗಿದ್ದರೂ ಅದಕ್ಕೆ ಈ ಮಟ್ಟದ ಕವರೇಜ್ ಸಿಗುವುದಿಲ್ಲ. ಆ
ವ್ಯಕ್ತಿಯನ್ನು ಆತನ ಧರ್ಮದ ಆಧಾರದಲ್ಲಿ ಟಿ.ವಿ.ಗಳು ವಿಚಾರಣೆ ನಡೆಸುವುದಿಲ್ಲ. ಆತ ಓದಿದ ಗ್ರಂಥ ಯಾವುದು, ಅದರಲ್ಲಿ ಆತನಿಗೆ
ಇಷ್ಟವಾದ ಅಧ್ಯಾಯ ಯಾವುದು, ಆತ ವೀಕ್ಷಿಸುತ್ತಿದ್ದ ವೀಡಿಯೋ ಎಂಥದ್ದು, ಆತ
ಎಲ್ಲೆಲ್ಲಿಗೆಲ್ಲಾ ತೀರ್ಥಯಾತ್ರೆ ಹೋಗಿದ್ದಾನೆ, ಆತ ಕರ್ಮಠನಾಗಿದ್ದನೆ, ಆತ
ಮದುವೆಯಾಗಿದ್ದಾನಾ, ಮಕ್ಕಳಿದ್ದಾರಾ, ಎಷ್ಟನೇ ತರಗತಿಯಲ್ಲಿ ಶಾಲೆ ಖೈದು ಮಾಡಿದ್ದಾನೆ, ಈ
ಮೊದಲು ಇಂಥ ಬೆದರಿಕೆ ಹಾಕಿದ್ದನಾ, ಪಾಸ್ಪೋರ್ಟ್ ಇದೆಯಾ, ವಿದೇಶಕ್ಕೆ ಪ್ರಯಾಣಿಸಿದ್ದಾನಾ... ಇತ್ಯಾದಿ ಇತ್ಯಾದಿ ಮೀಡಿಯಾ ಟ್ರಯಲ್ಗಳು ನಡೆಯುವುದಿಲ್ಲ. ಪತ್ರಿಕೆಗಳು
ಕೂಡಾ ವಿಷಯದ ಆಳಕ್ಕೆ ಇಳಿಯದೇ ಆತನಿಗೆ ಮಾನಸಿಕ ಸಮಸ್ಯೆ ಇತ್ತಾ, ಖಿನ್ನತೆಗೆ ಔಷಧಿ
ಪಡೆಯುತ್ತಿದ್ದನಾ ಎಂಬಿತ್ಯಾದಿ ಪತ್ತೆ ಕಾರ್ಯಕ್ಕೆ ತೊಡಗುತ್ತವೆ. ರಾಜಕಾರಣಿ ಗಳೂ
ಮೌನವಾಗುತ್ತಾರೆ. ಸಂಘಟನೆಗಳಿಗೂ ಇದರಲ್ಲಿ ಆಸಕ್ತಿ ಇರುವುದಿಲ್ಲ. ಆವೇಶದ ಭಾಷಣಗಳೋ
ಘೋಷಣೆಗಳೋ ಕೇಳಿ ಬರುವುದೂ ಇಲ್ಲ. ಏನೂ ನಡೆದೇ ಇಲ್ಲವೋ ಎಂದು ಅನುಮಾನಿ ಸುವಂತೆ
ಬಂದಷ್ಟೇ ವೇಗದಲ್ಲಿ ಈ ಸುದ್ದಿ ಸತ್ತೂ ಹೋಗುತ್ತದೆ.</p><p><br />ಅಂದಹಾಗೆ, ಈ ಎಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ.</p><p><br />ಬೆಂಗಳೂರಿನ
15 ಶಾಲೆಗಳಿಗೆ ಡಿಸೆಂಬರ್ 1ರಂದು ಈ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾದ
ಸುದ್ದಿಯನ್ನು ಗೆಳೆಯರೊಬ್ಬರು ನನಗೆ ವಾಟ್ಸಾಪ್ ಮಾಡಿದ್ದರು. ಅದರೊಂದಿಗೆ ಮುಸ್ಲಿಮರ
ಬಗ್ಗೆ ಅತ್ಯಂತ ನಿರಾಶೆಯ ಭಾವನೆಗಳನ್ನೂ ಹಂಚಿ ಕೊಂಡಿದ್ದರು. ಇವರು ದೇಶಸೇವೆಗೈದು
ನಿವೃತ್ತರಾದ ಯೋಧರು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲೆ. ‘ಇಸ್ಲಾಮ್ಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಬೆದರಿಸುವುದು, ವಿಗ್ರಹಾರಾಧಕರ ತಲೆ
ಕಡಿಯುತ್ತೇವೆ ಅನ್ನುವುದು, 15 ಶಾಲೆಗಳಲ್ಲಿರುವ ಮಕ್ಕಳನ್ನು ಬಾಂಬ್ ಸ್ಫೋಟಿಸಿ ಹತ್ಯೆ
ನಡೆಸುತ್ತೇವೆ..’ ಅನ್ನುವುದೆಲ್ಲ ರಾಕ್ಷಸೀಯ ಮಾತುಗಳು. ಯಾರಲ್ಲೆ ಆಗಲಿ ಆ ಮಾತುಗಳು
ಆಘಾತ ಮತ್ತು ಆಕ್ರೋಶವನ್ನು ಉಂಟು ಮಾಡಬಲ್ಲುದು. ಈ ಮಾತುಗಳ ನಡುನಡುವೆ ಬಿಸ್ಮಿಲ್ಲಾಹ್
ಮತ್ತು ಅಲ್ಲಾಹು ಅಕ್ಬರ್ ಎಂಬ ಪದಗಳೂ ಇವೆ. ಈ ಈ-ಮೇಲ್ಗೆ ದಿಗಿಲುಗೊಂಡು ಶಾಲೆಗೆ
ಧಾವಿಸಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡೂ ಹೋಗಿದ್ದಾರೆ. ಇವೆಲ್ಲ
ಅಸಹಜವೂ ಅಲ್ಲ. ವಿಷಾದ ಏನೆಂದರೆ,</p><p>ಒಂದು ಈ-ಮೇಲ್ನಲ್ಲಿರುವ ಪದಗಳನ್ನು ಓದಿಕೊಂಡು
ಅದಕ್ಕೆ ಧರ್ಮವನ್ನು ಅಂಟಿಸುತ್ತೇವಲ್ಲ, ಇದು ಎಷ್ಟು ಸರಿ? ಒಂದುವೇಳೆ, ಈ ಈ-ಮೇಲ್ನ
ಹಿಂದೆ ಇರುವ ವ್ಯಕ್ತಿ ಮುಸ್ಲಿಮ್ ಎಂದೇ ಇಟ್ಟುಕೊಂಡರೂ ಅದು ಇಸ್ಲಾಮ್ನಿಂದ ಪ್ರೇರಿತ
ಎಂದು ಅಂದುಕೊಳ್ಳುವುದು ಏಕೆ? 20 ಕೋಟಿ ಮುಸ್ಲಿಮರು ಈ ದೇಶದಲ್ಲಿ ಹಿಂದೂಗಳೊಂದಿಗೆ
ಬೆರೆತು ಬದುಕುತ್ತಿದ್ದರೂ ಅವರ ಮೇಲೆ ವಿಶ್ವಾಸವಿಡುವುದಕ್ಕಿಂತ ಹೆಚ್ಚು ಓರ್ವ
ಭಯೋತ್ಪಾದಕನ ಈ-ಮೇಲ್ನ ಮೇಲೆ ನಂಬಿಕೆ ಇಡುವುದೇಕೆ? ಇಂಥದ್ದೊಂದು ಸಮೂಹಸನ್ನಿ
ಭೀತಿಯನ್ನು ಹುಟ್ಟು ಹಾಕಿದವರು ಯಾರು? ಆ ಈ-ಮೇಲ್ನಲ್ಲಿ ಏನೆಲ್ಲಾ ಹೇಳಿವೆಯೋ ಅದುವೇ
ಇಸ್ಲಾಮ್ ಮತ್ತು ಅದುವೇ ಮುಸ್ಲಿಮರು ಎಂದು ನಂಬುವುದಕ್ಕೆ ಈ ದೇಶದಲ್ಲಿ ಏನು
ಆಧಾರಗಳಿವೆ? ಮುಸ್ಲಿಮನ ಬುಟ್ಟಿಯಿಂದ ಮೀನು ಖರೀದಿಸುವ ಹಿಂದೂಗಳು, ಹಿಂದೂಗಳ
ಅಂಗಡಿಯಿಂದ ಹೂವು ಖರೀದಿಸುವ ಮುಸ್ಲಿಮರು ಮತ್ತು ಧರ್ಮ ನೋಡದೇ ಅಕ್ಕಿ-ಸಕ್ಕರೆ, ಬೆಲ್ಲ,
ಚಪ್ಪಲಿ, ಮೊಬೈಲು, ಟಿ.ವಿ., ಫ್ರಿಜ್ಜು, ಕೋಳಿ, ಮಾಂಸ, ತರಕಾರಿ, ಕಾರು, ಬೈಕು,
ಹಣ್ಣು-ಹಂಪಲುಗಳನ್ನು ಖರೀದಿಸುವ ಹಿಂದೂ ಮತ್ತು ಮುಸ್ಲಿಮರು ಹಾಗೂ ರಕ್ತದಾನ ಮಾಡುವ
ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವ ಈ ಎರಡೂ ಧರ್ಮೀಯರು ಒಂದು ಈ-ಮೇಲ್, ಒಂದು
ಹತ್ಯೆ, ಒಂದು ಪ್ರೇಮ ಪ್ರಕರಣಕ್ಕೆ ತಲ್ಲಣಿಸಿ ಹೋಗುವುದೇಕೆ? ನಿಜಕ್ಕೂ ಈ ಭಯ ಸಜಹವೇ
ಅಥವಾ ರಾಜಕೀಯ ಸೃಷ್ಟಿಯೇ? ಅಷ್ಟಕ್ಕೂ,</p><p><br />ಕೊಲ್ಲುವ ಉದ್ದೇಶ ಹೊಂದಿರುವ ವ್ಯಕ್ತಿ
ಈ-ಮೇಲ್ ಮಾಡುವುದಿಲ್ಲ. ಈ-ಮೇಲ್ ಮಾಡುವವ ಕೊಲ್ಲುವ ಉದ್ದೇಶವನ್ನು ಹೊಂದಿರುವುದೂ
ಇಲ್ಲ. ಈತ ಬರೇ ಭಯೋತ್ಪಾದಕನಷ್ಟೇ ಅಲ್ಲ, ಧರ್ಮದ್ರೋಹಿ, ಮನುಷ್ಯ ದ್ರೋಹಿ ಮತ್ತು
ಸೌಹಾರ್ದ ದ್ರೋಹಿ.<br /></p>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-79623653086860643792023-12-06T04:24:00.000-08:002023-12-06T04:24:25.452-08:00 ತಲೆಬಾಗಿದ ಇಸ್ರೇಲ್, ಜಗತ್ತನ್ನು ಚಕಿತಗೊಳಿಸಿದ ಹಮಾಸ್<p><br /></p><br /><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEirHgfgQqUkubSDyjhe2Y7isoUGIITFv0buNUan2ub4v7NpPxvTFbuVc1t_BZZc6fV2seBShHR3HYyeQLrqMgd9QCR2HFaXZ5mgu5A7AX0SoAaTVWeGX54om1qVeXfYBcjiIGdYiO4Lv20TutpRsY_fVarr_2RhRv-kus9ReqN0Z58Xblsk1G_9mCYldKGt/s1352/page%203%20pic.jpg" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEirHgfgQqUkubSDyjhe2Y7isoUGIITFv0buNUan2ub4v7NpPxvTFbuVc1t_BZZc6fV2seBShHR3HYyeQLrqMgd9QCR2HFaXZ5mgu5A7AX0SoAaTVWeGX54om1qVeXfYBcjiIGdYiO4Lv20TutpRsY_fVarr_2RhRv-kus9ReqN0Z58Xblsk1G_9mCYldKGt/w400-h198/page%203%20pic.jpg" width="400" /></a></div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">1. ಹಮಾಸ್ ಜೊತೆ ಮಾತುಕತೆ ನಡೆಸುವುದೆಂದರೆ ಐಸಿಸ್ ಜೊತೆ ಮಾತುಕತೆ ನಡೆಸಿದಂತೆ. ಇದು ಎಂದೂ ಸಾಧ್ಯವೇ ಇಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">2. ಹಮಾಸನ್ನು ಸಂಪೂರ್ಣವಾಗಿ ನಾಶಪಡಿಸದೇ ಈ ಯುದ್ಧದಿಂದ ವಿರಮಿಸಲಾರೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">3. ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಸೈನಿಕ ಕಾರ್ಯಾಚರಣೆಯ ಮೂಲಕವೇ ಬಿಡುಗಡೆಗೊಳಿಸುತ್ತೇವೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">4. ಗಾಝಾವನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸುತ್ತೇವೆ, ಹಮಾಸ್ನಿಂದ ಮುಕ್ತಗೊಳಿಸುತ್ತೇವೆ ಮತ್ತು ಗಾಝಾದ ಸುರಕ್ಷಿತತೆಯನ್ನು ನಮ್ಮ ಸೈನಿಕರೇ ನೋಡಿಕೊಳ್ಳುತ್ತಾರೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">5. ಎಷ್ಟೇ ಒತ್ತಡ ಎದುರಾದರೂ ಕದನ ವಿರಾಮ ಸಾಧ್ಯವೇ ಇಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">6. ಕದನ ವಿರಾಮ ಎಂದರೆ ಪರಾಜಯ ಎಂದು ಅರ್ಥ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಇವೆಲ್ಲವನ್ನೂ ಹೇಳಿದ್ದು ಒಬ್ಬನೇ ವ್ಯಕ್ತಿ- ಬೆಂಜಮಿನ್ ನೆತನ್ಯಾಹು. ಆದರೆ ಇದೇ ಬೆಂಜಮಿನ್ ನೆತನ್ಯಾಹು ಈ ಎಲ್ಲ ಘೋಷಣೆಗಳಿಗೂ ತದ್ವಿರುದ್ಧವಾಗಿ ನಡಕೊಂಡಿದ್ದಾರೆ. ಇದೇ ನೆತನ್ಯಾಹು ಸರ್ಕಾರ ಹಮಾಸ್ನ ಜೊತೆ ಮಾತುಕತೆ ನಡೆಸಿದೆ. ಮಾತ್ರವಲ್ಲ, ಇಸ್ರೇಲ್ಗೆ ಅನನುಕೂಲವಾಗುವ ರೀತಿಯ ಕದನ ವಿರಾಮಕ್ಕೂ ಒಪ್ಪಿಕೊಂಡಿದೆ. ಈ ಕದನ ವಿರಾಮದ ಷರತ್ತನ್ನು ಪರಿಶೀಲಿಸಿದರೆ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಹಮಾಸ್ ಮೇಲುಗೈ ಪಡೆದಿದೆ ಎಂದೇ ಅನಿಸುತ್ತದೆ. 4 ದಿನಗಳ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ 50 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ 150 ಮಂದಿ ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಅಂದಹಾಗೆ, </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಹಮಾಸ್ನ 50 ಮಂದಿಗೆ ಇಸ್ರೇಲ್ 150 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲು ಯಾಕೆ ಒಪ್ಪಿಕೊಂಡಿತು ಎಂಬುದು ಮೊದಲ ಪ್ರಶ್ನೆ. ಹಮಾಸ್ನ ಹಿಡಿತದಲ್ಲಿ 240ಕ್ಕಿಂತಲೂ ಅಧಿಕ ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಈ ಹಿಂದೆ ಘೋಷಿಸಿತ್ತು. ಒಂದುವೇಳೆ, ಈ ಘರ್ಷಣೆಯಲ್ಲಿ ಇಸ್ರೇಲ್ ಮೇಲುಗೈ ಪಡೆದಿದ್ದೇ ಆಗಿದ್ದರೆ ಮತ್ತು ಹಮಾಸ್ನ ಜಂಘಾಬಲವನ್ನೇ ಅದು ಉಡುಗಿಸಿದ್ದರೆ ಕದನ ವಿರಾಮ ಇಲ್ಲದೆಯೇ ಅದು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಬೇಕಿತ್ತು. ಅಥವಾ ಹಮಾಸ್ನ 50 ಮಂದಿಯ ಬದಲಿಗೆ ತನ್ನ ವಶದಲ್ಲಿರುವ 50 ಮಂದಿಯನ್ನು ಮಾತ್ರ ಬಿಡುಗಡೆಗೊಳಿಸಬೇಕಿತ್ತು. ಆದರೆ ಇವಾವುವೂ ಆಗಿಲ್ಲ. ಬದಲಾಗಿ ಹಮಾಸ್ ಬಿಡುಗಡೆಗೊಳಿಸುವ ಸಂಖ್ಯೆಯ ಮೂರು ಪಟ್ಟು ಕೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಳ್ಳುವ ಮೂಲಕ ತಾನು ಅಸಹಾಯಕ ಎಂದು ನೆತನ್ಯಾಹು ಘೋಷಿಸಿದ್ದಾರೆ. ಕತರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದದಲ್ಲಿ ಇನ್ನೂ ಒಂದು ಜಾಣ್ಮೆಯನ್ನು ಹಮಾಸ್ ಪ್ರದರ್ಶಿಸಿದೆ. ಇಸ್ರೇಲ್ ಬಿಡುಗಡೆಗೊಳಿಸಬೇಕಾದ 150 ಕೈದಿಗಳ ಪಟ್ಟಿಯನ್ನು ಅದು ಬಹಳ ಬುದ್ಧಿವಂತಿಕೆಯಿಂದ ತಯಾರಿಸಿದೆ. ಇಸ್ರೇಲ್ ಜೈಲಿನಲ್ಲಿ 19 ವರ್ಷಕ್ಕಿಂತ ಕೆಳಗಿನ ಎಷ್ಟು ಮಂದಿ ಫೆಲೆಸ್ತೀನಿ ಬಾಲಕರಿದ್ದಾರೆ ಎಂಬುದನ್ನು ಜಗತ್ತಿಗೆ ಗೊತ್ತು ಮಾಡುವ ಸಂದರ್ಭವಾಗಿ ಈ ಅವಕಾಶವನ್ನು ಅದು ಬಳಸಿಕೊಂಡಿದೆ. ಈ 150 ಮಂದಿ ಕೈದಿಗಳಲ್ಲಿ ಹೆಚ್ಚಿನವರು ತಾಯಿ ಮತ್ತು ಅವರ ಹದಿಹರೆಯದ ಮಕ್ಕಳೇ ಇದ್ದಾರೆ. ಫೆಲೆಸ್ತೀನ್ನಿಂದ ತಾಯಂದಿರು ಮತ್ತು ಅವರ ಹದಿಹರೆಯದ ಮಕ್ಕಳನ್ನು ಇಸ್ರೇಲ್ ಕೊಂಡೊಯ್ದು ಜೈಲಲ್ಲಿಡುತ್ತಿದೆ ಎಂಬುದನ್ನು ಜಗತ್ತಿಗೆ ಸಾರಲು ಈ ಸಂದರ್ಭವನ್ನು ಹಮಾಸ್ ಬಳಸಿಕೊಳ್ಳಲು ಯಶಸ್ವಿಯಾಗಿದೆ. ಒಂದುಕಡೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಅಕ್ಟೋಬರ್ 7ರ ಬಳಿಕ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ 6 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿ ಮಕ್ಕಳು ಹತ್ಯೆಗೀಡಾಗಿದ್ದಾರೆ. ಇ ನ್ನೊಂದು ಕಡೆ, ಬಾಲಕರನ್ನು ಮತ್ತು ಅವರ ತಾಯಂದಿರನ್ನು ಇದೇ ಇಸ್ರೇಲ್ ಬಂಧಿಸಿ ಜೈಲಲ್ಲಿಡುತ್ತಿದೆ.. ಎಂಬ ಸಂದೇಶವನ್ನು ಜಗತ್ತಿಗೆ ಹಮಾಸ್ ಅತ್ಯಂತ ಜಾಣ್ಮೆಯಿಂದ ರವಾನಿಸುವ ಪ್ರಯತ್ನ ನಡೆಸಿದೆ. ಅಂದಹಾಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ ಬಳಿಕ ನಡೆದ ಚರ್ಚೆಗಳಲ್ಲಿ ಎರಡು ಬಹುಮುಖ್ಯ ಅಂಶಗಳಿದ್ದುವು- </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;"> 1. ಪ್ರಬಲ ಆರ್ಥಿಕ ಬಲ, ಸೇನಾ ಬಲ ಮತ್ತು ಗುಪ್ತಚರ ಬಲವನ್ನು ಹೊಂದಿರುವ ಇಸ್ರೇಲ್ನ ಮುಂದೆ ಹಮಾಸ್ ನುಚ್ಚುನೂರಾಗಲಿದೆ. </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;"> 2. ಭಯೋತ್ಪಾದಕ ಗುಂಪು ಎಂಬ ಹಣೆ ಪಟ್ಟಿ ಹಚ್ಚಿ ಹಮಾಸನ್ನು ಜಗತ್ತು ಮೂಲೆಗೊತ್ತಲಿದೆ ಮತ್ತು ಇಸ್ರೇಲ್ಗೆ ಜಾಗತಿಕ ರಾಷ್ಟ್ರಗಳ ಮಾನ್ಯತೆ ಇನ್ನೂ ಹೆಚ್ಚಾಗಲಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">46 ದಿನಗಳ ಘರ್ಷಣೆಗಳ ಬಳಿಕದ ಪರಿಸ್ಥಿತಿ ಹೇಗಿದೆಯೆಂದರೆ, ಈ ಎರಡೂ ಲೆಕ್ಕಾಚಾರಗಳೂ ತಲೆಕೆಳಗಾಗಿವೆ ಮತ್ತು ಇಸ್ರೇಲ್ ಅಕ್ಟೋಬರ್ 7ಕ್ಕಿಂತ ಮೊದಲಿನ ಸ್ಥಿತಿಯಿಂದಲೂ ಕೆಳಜಾರಿ ಪ್ರಪಾತಕ್ಕೆ ಬಿದ್ದಿದೆ. ಫೆಲೆಸ್ತೀನ್ನ ಮೇಲೆ ಬಾಂಬ್ ಸುರಿದು 14 ಸಾವಿರ ಮಂದಿಯನ್ನು ಹತ್ಯೆಗೈಯಲು ಇಸ್ರೇಲ್ ಯಶಸ್ವಿಯಾಗಿದ್ದರೂ ಹಮಾಸ್ಗೆ ಆಘಾತ ನೀಡಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬರೇ 20 ನಿಮಿಷಗಳಲ್ಲಿ 5 ಸಾವಿರ ರಾಕೆಟ್ಗಳನ್ನು ಇಸ್ರೇಲ್ ನೊಳಗೆ ಹಾರಿಸಿದ ಹಮಾಸ್ನ ಆ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಬೇಧಿಸಲು ಅದು ಎಳ್ಳಷ್ಟೂ ಶಕ್ತವಾಗಿಲ್ಲ. ಹಮಾಸ್ನ ಜಾಲ ಹೇಗಿದೆ, ಎಲ್ಲೆಲ್ಲಿದೆ ಮತ್ತು ಅದರ ಕಾರ್ಯಾಚರಣೆಯ ಸ್ವರೂಪ ಏನು ಎಂಬುದನ್ನೆಲ್ಲ ಪತ್ತೆ ಹಚ್ಚುವಲ್ಲಿ ಇಸ್ರೇಲ್ ಘೋರ ವೈಫಲ್ಯವನ್ನು ಕಂಡಿದೆ. ಮೊಬೈಲ್ನೊಳಗೆ ನುಸುಳಿ ಮಾಹಿತಿಯನ್ನು ಕದಿಯಬಲ್ಲ ಅತ್ಯಾಧುನಿಕ ಸ್ಪೈವೇರ್ ತಂತ್ರಜ್ಞಾನದ ಹೊರತಾಗಿಯೂ ಹಮಾಸ್ನ ಸೈನಿಕ ತಂತ್ರಜ್ಞಾನ, ಕಾರ್ಯಾಚರಣೆಯ ವಿಧಾನ ಮತ್ತು ರಾಕೆಟ್ ಲಾಂಚರ್ಗಳ ಕಾರ್ಯವಿಧಾನವನ್ನು ಅರಿತುಕೊಳ್ಳು ವಲ್ಲಿ ಇಸ್ರೇಲ್ ವಿಫಲವಾಗಿರುವುದು ಅದರ ಸಾಮರ್ಥ್ಯದ ಮಿತಿಯನ್ನು ಹೇಳುತ್ತದೆ. ಒಂದೋ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಹೊರಗೆ ಬಿಂಬಿಸಿಕೊಂಡಷ್ಟು ಇಸ್ರೇಲ್ ಬಲಿಷ್ಠವಾಗಿಲ್ಲ ಅಥವಾ ಬುದ್ಧಿವಂತಿಕೆಯಲ್ಲಿ ಇಸ್ರೇಲನ್ನು ಮೀರಿಸುವ ಸಮರ್ಥರು ಹಮಾಸ್ನಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹಮಾಸ್ ಗುಂಪು ತನ್ನನ್ನು ಸುರಂಗದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ ಎಂದೇ ಈವರೆಗೆ ಇಸ್ರೇಲ್ ಹೇಳಿಕೊಳ್ಳುತ್ತಾ ಬಂದಿತ್ತು. ಜಗತ್ತು ಕೂಡ ಅದನ್ನೇ ನಂಬಿತ್ತು. ಇದು ಭಾಗಶಃ ಸತ್ಯ ಕೂಡ. ಆದರೆ, ಹಮಾಸ್ನ ಬಲ ಸುರಂಗವನ್ನೇ ಅವಲಂಬಿಸಿಕೊಂಡಿಲ್ಲ ಎಂಬುದನ್ನು ಈ ಘರ್ಷಣೆ ಜಗಜ್ಜಾಹೀರುಗೊಳಿಸಿದೆ. 46 ದಿನಗಳ ಬಳಿಕವೂ ಅದು ಹಮಾಸ್ಗೆ ಸೇರಿದ ಪ್ರಮುಖವಾದ ಏನನ್ನೂ ವಶಪಡಿಸಿಕೊಂಡಿಲ್ಲ. ನೆಲ, ಜಲ ಮತ್ತು ಆಕಾಶ ಮಾರ್ಗಗಳಿಂದ ಏಕಕಾಲದಲ್ಲಿ ಆಕ್ರಮಣ ಮಾಡಬಲ್ಲ ಸಾಮರ್ಥ್ಯ ಇದ್ದೂ ಮತ್ತು ಇವಾವುವೂ ಇಲ್ಲದ ಹಮಾಸ್ನ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಶರಣಾಗತ ಸ್ಥಿತಿಗೆ ತಲುಪಿದ್ದು ಏಕೆ? ಮೊಸಾದ್ ಎಂಬ ಪ್ರಬಲ ಗುಪ್ತಚರ ವ್ಯವಸ್ಥೆ ಇದ್ದೂ ಹಮಾಸ್ ಚಟುವಟಿಕೆಯ ಮೇಲೆ ಕಣ್ಣಿಡಲು ಅದು ವಿಫಲವಾದದ್ದು ಏಕೆ? ‘ಯುದ್ಧ ಆರಂಭಿಸಿದ್ದು ನೀವು, ಕೊನೆಗೊಳಿಸುವುದು ನಾವು...’ ಎಂದು ಅಕ್ಟೋಬರ್ 7ರಂದು ಘೋಷಿಸಿದ್ದ ನೆತನ್ಯಾಹು ನವೆಂಬರ್ 25ಕ್ಕೆ ತಲುಪುವಾಗ ಶರಣಾಗತ ಭಾವದಲ್ಲಿ ಕಾಣಿಸಿಕೊಂಡದ್ದು ಯಾಕೆ? ಬಲಿಷ್ಠ ಎಂದು ಗುರುತಿಸಿಕೊಂಡಿರುವ ರಾಷ್ಟ್ರವೊಂದರ ಪ್ರಧಾನಿಯು ಗಾಝಾ ಎಂಬ ರಾಷ್ಟ್ರವೇ ಅಲ್ಲದ ಮತ್ತು ಹಮಾಸ್ ಎಂಬ ಏನೂ ಅಲ್ಲದ ಗುಂಪಿನ ಪ್ರತಿನಿಧಿ ಇಸ್ಮಾಈಲ್ ಹನಿಯ್ಯ ಎಂಬವರ ಮುಂದೆ ತಲೆ ತಗ್ಗಿಸಿದ್ದು ಏಕೆ? ನೆತನ್ಯಾಹು ಸರಕಾರದ ಪಾಲುದಾರ ಪಕ್ಷವಾಗಿರುವ ಝಿಯೋನಿಸ್ಟ್ ಪಾರ್ಟಿ ಎಂಬ ತೀವ್ರ ಬಲಪಂಥೀಯ ಪಕ್ಷದ ವಿರೋಧದ ನಡುವೆಯೂ ಅವರು ಕದನ ವಿರಾಮಕ್ಕೆ ಒಪ್ಪಿಕೊಂಡದ್ದು ಏಕೆ? ಅವರಿಗೆ ಅಂಥದ್ದೊಂದು ಅನಿವಾರ್ಯತೆ ಏನಿತ್ತು? ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಅಕ್ಟೋಬರ್ 7ರ ದಾಳಿಯ ಬಳಿಕ ಹಮಾಸ್ ಕಟಕಟೆಯಲ್ಲಿ ನಿಂತದ್ದು ನಿಜ. ಜಾಗತಿಕವಾಗಿ ಹಮಾಸ್ ಮೇಲಿದ್ದ ಸಹಾನುಭೂತಿಗೆ ಈ ದಾಳಿ ಪೆಟ್ಟು ನೀಡಿದ್ದೂ ನಿಜ. ಈ ಉದ್ವೇಗದ ಸಂದರ್ಭವನ್ನೇ ನೆತನ್ಯಾಹು ಬಳಸಿಕೊಂಡರು. ಹಮಾಸನ್ನು ಟೆರರಿಸ್ಟ್ ಎಂದರು. ಟೆರರಿಸ್ಟ್ ಗಳ ಜೊತೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಅಬ್ಬರಿಸಿದರು. ಅಮೇರಿಕ, ಬ್ರಿಟನ್, ಜರ್ಮನಿ, ಕೆನಡ, ಭಾರತ ಇತ್ಯಾದಿ ರಾಷ್ಟçಗಳ ಬೆಂಬಲದಿಂದ ಅವರು ಪುಳಕಿತರಾದರು. ಆದರೆ ‘ಇಂಥ ಸನ್ನಿವೇಶದಲ್ಲೂ ಹಮಾಸನ್ನು ಟೆರರಿಸ್ಟ್ ಎನ್ನಲಾರೆ’ ಎಂದು ಘೋಷಿಸಿದ್ದು ಬಿಬಿಸಿ ಮಾಧ್ಯಮ. ಬ್ರಿಟನ್ನಿನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲಾವೆಲ್ಲಿ ಮತ್ತು ಸಂಸ್ಕೃತಿ ಕಾರ್ಯದರ್ಶಿ ಲೇಸಿ ಫ್ರೇಝರ್ ಅವರು ಬಿಬಿಸಿಯ ನಿಲುವನ್ನು ತೀವ್ರವಾಗಿ ಖಂಡಿಸಿದ ಹೊರತಾಗಿಯೂ ಮತ್ತು ಬಿಬಿಸಿ ಈ ಬಗ್ಗೆ ನಿಲುವು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದ ಬಳಿಕವೂ ಬಿಬಿಸಿ ತನ್ನ ನಿಲುವಿಗೇ ಅಂಟಿಕೊಂಡಿತು. ಕದನ ವಿರಾಮದ ಈ ಹಂತದಲ್ಲಿ ನಿಂತು ಪರಿಶೀಲಿಸಿದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಈ ಇಡೀ ಘರ್ಷಣೆಯಿಂದ ಇಸ್ರೇಲ್ ಕಳಕೊಂಡದ್ದೇ ಹೆಚ್ಚು ಎಂದೇ ಅನಿಸುತ್ತದೆ. ಹಮಾಸ್ನ ಜೊತೆ ಮಾತುಕತೆಗೆ ಮುಂದಾಗುವ ಮೂಲಕ ಅದು ಟೆರರಿಸ್ಟ್ ಗುಂಪು ಅಲ್ಲ ಮತ್ತು ಅದು ಗಾಝಾದ ಸಂಘಟನೆ ಎಂಬುದನ್ನು ಬಹಿರಂಗವಾಗಿ ಅದು ಒಪ್ಪಿಕೊಂಡಿದೆ. ಇನ್ನೊಂದು ಮಹತ್ವಪೂರ್ಣ ಬೆಳವಣಿಗೆ ಏನೆಂದರೆ, ದ್ವಿರಾಷ್ಟ್ರ ಸಿದ್ಧಾಂತವೇ ಪರಿಹಾರ ಎಂಬ ಕೂಗು ಜಾಗತಿಕವಾಗಿಯೇ ಕೇಳಿ ಬಂದಿದೆ. ಅಕ್ಟೋಬರ್ 7 ಮೊದಲು ಯಾವ ಕೂಗು ಅತೀ ಸಣ್ಣ ಪ್ರಮಾಣದಲ್ಲೂ ಕೇಳುತ್ತಿರಲಿಲ್ಲವೋ ಅದೇ ಕೂಗು ಇವತ್ತು ಅತೀ ತಾರಕ ಧ್ವನಿಯಲ್ಲಿ ಕೇಳಿಸಲಾರಂಭಿಸಿದೆ. ಚೀನಾದಿಂದ ಹಿಡಿದು ಭಾರತ, ಆಸ್ಟ್ರೆಲಿಯಾ, ದಕ್ಷಿಣ ಆಫ್ರಿಕಾ, ಅಮೇರಿಕಾ, ಸ್ವೀಡನ್, ಸಿಂಗಾಪುರ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ ಬಲವಾಗಿ ಧ್ವನಿಯೆತ್ತಿವೆ. ಭಾರತ, ಚೀನಾ, ರ ಶ್ಯಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಅರ್ಜಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನೊಳಗೊಂಡ ಬಿಕ್ಸ್ ಒಕ್ಕೂಟ ರಾಷ್ಟ್ರಗಳ ಸಭೆಯು ದ್ವಿರಾಷ್ಟ್ರ ಪರಿಹಾರವನ್ನು ಬಲವಾಗಿಯೇ ಮಂಡಿಸಿವೆ. ಬ್ರಿಕ್ಸ್ ನ ಈಗಿನ ಅಧ್ಯಕ್ಷ ದಕ್ಷಿಣ ಆಫ್ರಿಕಾದ ಸಿರಿಲ್ ರಾಂಪೋಸ್ ಅವರಂತೂ ಇಸ್ರೇಲ್ ಬಾಂಬ್ ಹಾಕುವುದನ್ನು ನಿಲ್ಲಿಸುವವರೆಗೆ ತನ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯನ್ನೇ ಮುಚ್ಚಿಸಿದರು ಮತ್ತು ರಾಜತಾಂತ್ರಿಕ ಸಂಬಂಧವನ್ನೇ ಸ್ಥಗಿತಗೊಳಿಸಿದರು. ಅಕ್ಟೋಬರ್ 7ರ ಮೊದಲು ಇಸ್ರೇಲ್ನ ಮೇಲೆ ಈ ಬಗೆಯ ಒತ್ತಡ ಇದ್ದಿರಲಿಲ್ಲ. ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದಿರುವ ಮತ್ತು ಈ ಕುರಿತಂತೆ ಯಾವುದೇ ರಾಷ್ಟ್ರ ನಾಯಕರು ಹೇಳಿಕೆ ನೀಡದಂತೆ ಮತ್ತು ಮಾಧ್ಯಮಗಳಲ್ಲಿ ಚರ್ಚೆ ನಡೆಯದಂತೆ ನೋಡಿಕೊಳ್ಳುತ್ತಾ ಬಂದಿದ್ದ ಇಸ್ರೇಲ್, ಇತ್ತೀಚಿನ ದ ಶಕಗಳಲ್ಲಿ ಇದೇ ಮೊದಲು ಬಾರಿ ಕಟಕಟೆಯಲ್ಲಿ ನಿಂತಿತು. ಅಕ್ಟೋಬರ್ 7ರಂದು ಫೆಲೆಸ್ತೀನ್ನ ಮೇಲೆ ವೈಮಾನಿಕ ದಾಳಿ ನಡೆಸಲು ಮುಂದಾಗುವಾಗ ನೆತನ್ಯಾಹು ಇಂಥದ್ದೊಂದು ಬೆಳವಣಿಗೆಯನ್ನು ಊಹಿಸಿರುವ ಸಾಧ್ಯತೆಯೇ ಇಲ್ಲ.</span></div><div><span face="Arial, Helvetica, sans-serif" style="background-color: white; color: #222222; font-size: small;"> </span></div><div><span face="Arial, Helvetica, sans-serif" style="background-color: white; color: #222222; font-size: small;">ಒಂದುರೀತಿಯಲ್ಲಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಈ ಘರ್ಷಣೆಯು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಎಂಬ ಫೆಲೆಸ್ತೀನಿಯರ ಬಹುಕಾಲದ ಕನಸು ನನಸಾಗುವ ದಿಶೆಯಲ್ಲಿ ಮಹತ್ವದ ಮೈಲುಗಲ್ಲಾಗುವ ಸಾಧ್ಯತೆ ಕಾಣಿಸುತ್ತದೆ. ಬಹುಶಃ ಈಗಿನ ಅಲ್ಪಕಾಲೀನ ಕದನ ವಿರಾಮವೇ ಶಾಶ್ವತ ಕದನ ವಿರಾಮವಾಗಿ ಮಾರ್ಪಡಲೂ ಬಹುದು ಅಥವಾ ಮತ್ತೆ ಘರ್ಷಣೆ ಮುಂದುವರಿಯಲೂ ಬಹುದು. ಆದರೆ, ಈಗಾಗಲೇ ಈ ಘರ್ಷಣೆಯಿಂದ ಇಸ್ರೇಲ್ ಸಾಕಷ್ಟು ಕಳಕೊಂಡಿದೆ. ಒಂದುವೇಳೆ, ಘರ್ಷಣೆ ಇನ್ನಷ್ಟು ಮುಂದುವರಿದರೆ ಇದರಿಂದ ಇಸ್ರೇಲ್ ಮತ್ತಷ್ಟು ತೊಂದರೆಗೆ ಸಿಲುಕಲಿದೆ. ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಗ್ಗಟ್ಟು ಪ್ರದ ರ್ಶಿಸಬೇಕಾದ ಮತ್ತು ಕಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇದನ್ನು ಅಮೇರಿಕ ಬಯಸಲಾರದು. ಇಸ್ರೇಲ್ಗೂ ಇದು ಬೇಕಾಗಿಲ್ಲ. ಇದರಾಚೆಗೆ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ ಜಾಗತಿಕ ರಾಷ್ಟ್ರಗಳ ಒಲವು ಮತ್ತು ಒತ್ತಡ ಹೆಚ್ಚಾಗಬಹುದು. ಇದಕ್ಕೆ ಅಮೇರಿಕ ಪದೇ ಪದೇ ತಡೆ ಒಡ್ಡುತ್ತಿರುವುದರಿಂದ ಚೀನಾ ನೇತೃತ್ವದಲ್ಲಿ ಅರಬ್ ರಾಷ್ಟ್ರಗಳು ಅಮೇರಿಕಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದು ನಿಲ್ಲಬಹುದು. ಹೀಗಾದರೆ, ಒಂದೋ ಅಮೇರಿಕ ಮತ್ತು ಅದರ ಬೆಂಬಲಿಗರು ಮೆತ್ತಗಾಗಬೇಕಾಗುತ್ತದೆ ಅಥವಾ ಇನ್ನೊಂದು ಮಹಾ ಘರ್ಷಣೆಗೆ ವೇದಿಕೆ ಸಿದ್ಧವಾಗ ಬೇಕಾಗುತ್ತದೆ. ಇವು ಏನೇ ಇದ್ದರೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯನ್ನು ಪರಿಶೀಲಿಸಿದರೆ, ಹಮಾಸ್ ಮೇಲುಗೈ ಪಡೆದಂತೆ ಮತ್ತು ಇಸ್ರೇಲ್ ಮಂಡಿಯೂರಿದಂತೆ ಕಾಣಿಸುತ್ತದೆ. ಇದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಇರುವೆಯೊಂದು ಆನೆಯನ್ನು ಮಣಿಸುತ್ತದಲ್ಲ , ಅಂಥ ಕತೆ. </span></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-66078202556523589082023-11-27T03:10:00.000-08:002023-11-27T03:10:53.077-08:00 ಉಡುಪಿಯಲ್ಲಿ ಹತ್ಯೆ: ನಿಜಕ್ಕೂ ಚರ್ಚೆಗೊಳ ಗಾಗಬೇಕಾದುದು ಯಾವುದು?<p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgewXGWO20uWvHRgvx2qw5iqxbayQOma2fU8C3-C8eVDCh_G8bJQC1_yZBKPjTyAJmQ8aqt3zEYzvh9nO02TgKOEye34W-mnJGFYsNxG5l3X1WSQjrq9Kgev0JMWAF3i6-SbwhQsCeXr7jrdxzQ2pT4DS0TQVE1VH9GbAZp-OcMdUgP_vsV-re48mSJwI0p/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEgewXGWO20uWvHRgvx2qw5iqxbayQOma2fU8C3-C8eVDCh_G8bJQC1_yZBKPjTyAJmQ8aqt3zEYzvh9nO02TgKOEye34W-mnJGFYsNxG5l3X1WSQjrq9Kgev0JMWAF3i6-SbwhQsCeXr7jrdxzQ2pT4DS0TQVE1VH9GbAZp-OcMdUgP_vsV-re48mSJwI0p/w400-h198/page%203%20pic.jpg" width="400" /></a></div><br /><div><br /></div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">1. ಅಯ್ನಾಝ</span></span><div><br style="background-color: white; color: #222222; font-family: Arial, Helvetica, sans-serif; font-size: small;" /><span style="color: #222222; font-family: Arial, Helvetica, sans-serif; font-size: x-small;"><span style="background-color: white;"><div>2. ಗೌರಿ</div></span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="color: #222222; font-family: Arial, Helvetica, sans-serif; font-size: x-small;"><span style="background-color: white;"><div><span style="background-color: transparent; color: #222222; font-family: Arial, Helvetica, sans-serif; font-size: x-small;">3</span>. ಶ್ರದ್ಧಾ ವಾಲ್ಕರ್</div></span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹತ್ಯೆಗೀಡಾಗಿರುವ ಈ ಮೂವರಲ್ಲೂ ಒಂದು ಸಮಾನಾಂಶವಿದೆ. ಅದೇನೆಂದರೆ, ಈ ಮೂವರೂ ಮಹಿಳೆಯರು. ಅಸಮಾನ ಅಂಶವೂ ಇದೆ, ಅದು ಒಂದಲ್ಲ ಹಲವು. </span><span style="background-color: white; color: #222222; font-family: Arial, Helvetica, sans-serif; font-size: small;">ಇಲ್ಲಿ ಬಹುಮುಖ್ಯ ಪ್ರಶ್ನೆಯೊಂದಿದೆ-</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗಂಡು ಇಷ್ಟು ವ್ಯಗ್ರಗೊಳ್ಳುವುದು ಏಕೆ? ಹತ್ಯೆಯನ್ನು ಪರಿಹಾರವಾಗಿ ಬಗೆಯುವುದು ಏಕೆ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">2023 ನವೆಂಬರ್ </span></span><span style="background-color: white;"><span style="color: #222222; font-family: Arial, Helvetica, sans-serif; font-size: x-small;">12ರಂದು ಉಡುಪಿ ನೇಜಾರಿನ ಗಗನ ಸಖಿ ಅಯ್ನಾಝ ಮತ್ತು ಆಕೆಯ ತಾಯಿ, ಸಹೋದರಿ ಮತ್ತು ಪುಟ್ಟ ತಮ್ಮನನ್ನು ಹತ್ಯೆ ಮಾಡಲಾಯಿತು. ಆರೋಪಿಯ ಹೆಸರು- ಪ್ರವೀಣ್ ಅರುಣ್ ಚೌಗಲೆ. 2022 ಮೇ 18ರಂದು ದೆಹಲಿಯ ನೌರೋಲಿಯಲ್ಲಿ ಶ್ರದ್ಧಾ ವಾಲ್ಕರ್ ಎಂಬವರ ಹತ್ಯೆ ನಡೆಯಿತು. ಆರೋಪಿಯ ಹೆಸರು- ಅಫ್ತಾಬ್ ಅಮೀನ್ ಪೂನಾವಾಲ. ಈ ಎರಡೂ ಹತ್ಯೆಗಳು ಅತ್ಯಂತ ಬರ್ಬರವಾಗಿತ್ತು. ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ತುಂಡರಿಸಿ ಫ್ರೀಜರ್ನಲ್ಲಿ ಇರಿಸಲಾಗಿತ್ತು. ಬಳಿಕ ದೇಹದ ತುಂಡುಗಳನ್ನು ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕಾಗಿ ಪೂನಾವಾಲ ಪ್ರಯತ್ನಿಸಿದ್ದ. ಮನೆಯೊಳಗೆ ಹರಿದಿದ್ದ ರಕ್ತವನ್ನು ನೀರಿನಿಂದ ಸ್ವಚ್ಛಗೊಳಿಸಿದ್ದ. ಆಕೆ ಜೀವಂತ ವಿದ್ದಾಳೆ ಎಂದು ಗೆಳತಿಯರು ಮತ್ತು ಮನೆಯವರು ಭಾವಿಸುವಂತೆ ಮಾಡುವುದಕ್ಕಾಗಿ ಬೇರೆ ಬೇರೆ ತಂತ್ರಗಳನ್ನೂ ಹೆಣೆದಿದ್ದ. ಅಂದಹಾಗೆ,</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಈ ಪೂನಾವಾಲಾಗೆ ಹೋಲಿಸಿದರೆ ಈ ಪ್ರವೀಣ್ ಚೌಗಲೆ ಇನ್ನಷ್ಟು ಭೀಕರವಾಗಿ ಕಾಣಿಸುತ್ತಾನೆ. ಅಫ್ತಾಬ್ ಪೂನಾವಾಲ ಸಾಮಾನ್ಯ ಫುಡ್ ಬ್ಲಾಗರ್. ಆತ ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಯಾವುದೇ ಶಿಸ್ತುಬದ್ಧ ವ್ಯವಸ್ಥೆಯಿಂದಾಗಲಿ ತರಬೇತಿ ಪಡೆದವನಲ್ಲ. ಆಹಾರ ತಯಾರಿಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಈತ ಫುಡ್ ಫೋಟೋಗ್ರಾಫರ್ ಆಗಿಯೂ ಗುರುತಿಸಿಕೊಂಡಿದ್ದ. ತನ್ನ ಇನ್ಸ್ಟಾಗ್ರಾಮ್ ಅಕೌಂಟನ್ನು ‘ಹಂಗ್ರಿ ಚೋಕೋ’ ಎಂದು ಹೆಸರಿಸಿ ತನ್ನ ಆಹಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದ. ಆತನಿಗೆ ಇನ್ಸ್ಟಾಗ್ರಾಮ್ನಲ್ಲಿ 28 ಸಾವಿರಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿದ್ದರು. ಪದವೀಧರನಾಗಿದ್ದ 28 ವರ್ಷದ ಪೂನಾವಾಲ ಬಾಡಿ ಬಿಲ್ಡರ್ ಕೂಡಾ ಆಗಿದ್ದ. ಆದರೆ,</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರವೀಣ್ ಚೌಗಲೆಯ ಹಿನ್ನೆಲೆ ಹೀಗಲ್ಲ. ನಾಗರಿಕ ಸಮಾಜ ಗೌರವಿಸುವ ಮತ್ತು ಆದರ ಭಾವದಿಂದ ನೋಡುವ ಹಿನ್ನೆಲೆ ಈತನ ಬೆ ನ್ನಿಗಿದೆ. ಈತ ಪೊಲೀಸ್ ಇಲಾಖೆಯಲ್ಲಿದ್ದ. ಆ ಬಳಿಕ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಕ್ಯಾಬಿನ್ ಕ್ರೂ ಉದ್ಯೋಗದಲ್ಲಿದ್ದ. ಇವು ಎರಡೂ ಶಿಸ್ತಿನ ಕಾರಣಕ್ಕಾಗಿ ಗುರುತಿಸಿಕೊಂಡಿವೆ. ಪೊಲೀಸ್ ಹುದ್ದೆಗೆ ಆಯ್ಕೆಯಾದ ಕೂಡಲೇ ಖಾಕಿ ಡ್ರೆಸ್ಸು, ಲಾಠಿ, ಹ್ಯಾಟು-ಬೂಟು ಕೊಡುವುದಿಲ್ಲ. ಅಲ್ಲಿ ಶಿಸ್ತಿನ ಪಾಠವನ್ನು ಹೇಳಿ ಕೊಡಲಾಗುತ್ತದೆ. ಜನರೊಂದಿಗೆ ಹೇಗೆ ವರ್ತಿಸಬೇಕು, ಅತ್ಯಂತ ಕಠಿಣ ಸನ್ನಿವೇಶದಲ್ಲೂ ಹೇಗೆ ಸಂಯಮದಿಂದಿರಬೇಕು ಎಂದು ಕಲಿಸಲಾಗುತ್ತದೆ. ವಿಮಾನ ಸಂಸ್ಥೆಯಲ್ಲೂ ಅಷ್ಟೇ. ಶಿಸ್ತಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರೊಂದಿಗೆ ಸಂಯಮ ಮತ್ತು ಆದರ ಭಾವದೊಂದಿಗೆ ವರ್ತಿಸಲು ಹೇಳಿ ಕೊಡಲಾಗುತ್ತದೆ. ಅದಕ್ಕಾಗಿ ತರಬೇತಿಯನ್ನೂ ನೀಡಲಾಗುತ್ತದೆ. ಇಷ್ಟಿದ್ದೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಅಫ್ತಾಬ್ ಪೂನಾವಾಲನೂ ನಾಚುವಷ್ಟು ಭೀಕರವಾಗಿ ಪ್ರವೀಣ್ ಚೌಗಲೆ ಹತ್ಯೆ ಮಾಡಿದ್ದಾನೆ. 12 ವರ್ಷದ ಬಾಲಕನನ್ನೂ ಕತ್ತರಿಸಿ ಹಾಕಿದ್ದಾನೆ. ಆದರೆ, ಈ ಎರಡನ್ನೂ ಮೀಡಿಯಾ ನೋಡಿದ್ದು ಹೇಗೆ? ಫೇಸ್ಬುಕ್, ಟ್ವೀಟರ್ (ಈಗಿನ ಎಕ್ಸ್) ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ?</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಶ್ರದ್ಧಾ ವಾಲ್ಕರ್ಳನ್ನು ಕೊಂದವ ಅಫ್ತಾಬ್ ಪೂನಾವಾಲಾ ಎಂದು ಗೊತ್ತಾದ ಕೂಡಲೇ ಮೀಡಿಯಾಗಳು ಆತನ ಟ್ರಯಲ್ಗೆ ಇಳಿದಿದ್ದುವು. ಆತ ಎಲ್ಲಿಯವ, ಆತನ ತಂದೆ-ತಾಯಿ ಯಾರು? ಅವರ ಹಿನ್ನೆಲೆ ಏನು, ಯಾವ ವೃತ್ತಿಯಲ್ಲಿದ್ದಾರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರಾ, ದೇಶವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದಾರಾ, ವಿದೇಶಕ್ಕೆ ಪ್ರಯಾಣಿಸಿದ್ದಾರಾ, ಅವರಿಗೆಷ್ಟು ಮಕ್ಕಳು, ಅವರು ಏನೇನು ಆಗಿದ್ದಾರೆ, ಅಫ್ತಾಬ್ ಅವರಲ್ಲಿ ಎಷ್ಟನೆಯವ, ಈತ ಎಲ್ಲೆಲ್ಲಿ ಕಲಿತಿದ್ದಾನೆ, ಕಲಿಕೆಯ ವೇಳೆ ಈತನ ಸ್ವಭಾವ ಏನಿತ್ತು, ಶ್ರದ್ಧಾಳ ಮೊದಲು ಮತ್ತು ಬಳಿಕ ಯಾರೊಂದಿಗೆಲ್ಲ ರಿಲೇಷನ್ಶಿಪ್ ಇತ್ತು, ಈ ಹಿಂದೆಯೂ ಹತ್ಯೆ ಮಾಡಿದ್ದಾನಾ, ಈತನ ಕೆಲಸ ಏನು, ಈ ಹಿಂದೆ ಯಾವ ಕೆಲಸ ಮಾಡುತ್ತಿದ್ದ, ಇದು ಲವ್ ಜಿಹಾದಾ, ಆನ್ಲೈನ್ನಲ್ಲಿ ಏನೇನೆಲ್ಲಾ ಹುಡುಕಿದ್ದಾನೆ, ಯಾರೊಂದಿಗೆಲ್ಲ ಸಂಪರ್ಕ ಇಟ್ಟುಕೊಂಡಿದ್ದಾನೆ.. ಇತ್ಯಾದಿ ಇತ್ಯಾದಿ ಹತ್ತು ಹಲವು ಪ್ರಶ್ನೆಗಳೊಂದಿಗೆ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ತನಿಖೆಗಿಳಿದಿದ್ದುವು. ರಾಷ್ಟ್ರೀಯ ಟಿ.ವಿ. ಚಾ ನೆಲ್ಗಳಲ್ಲಂತೂ ದಿನಕ್ಕೆರಡು ಎಪಿಸೋಡ್ಗಳನ್ನು ಪ್ರಸಾರ ಮಾಡಿದವು. ಈ ನಡುವೆ ಸೋಶಿಯಲ್ ಮೀಡಿಯಾವಂತೂ ಇವರಿಬ್ಬರ ಸಂಬಂಧವನ್ನು ಲವ್ ಜಿಹಾದ್ ಎಂದಿತು. ‘ಮುಸ್ಲಿಮರೊಂದಿಗೆ ಸಂಬಂಧ ಬೆಳೆಸಿದರೆ ಫ್ರಿಡ್ಜ್ ಸೇರುತ್ತೀರಿ’ ಎಂದು ಉಪದೇಶ ಮಾಡಿತು. ‘ನನ್ನ ಅಬ್ದುಲ್ಲ ಅಂಥವನಲ್ಲ..’ ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಯಿತು. ಶ್ರದ್ಧಾಳನ್ನು ಹಿಂದೂ ಎಂದೂ ಅಫ್ತಾಬ್ನನ್ನು ಮುಸ್ಲಿಮ್ ಎಂದೂ ವರ್ಗೀಕರಿಸಿ ಆ ಹತ್ಯೆಯನ್ನು ಹಿಂದೂ-ಮುಸ್ಲಿಮ್ ಪ್ರಕರಣವಾಗಿ ಬಿಂಬಿಸಲಾಯಿತು. ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆರೋಪಿ ಪ್ರವೀಣ್ ಚೌಗಲೆಗೆ ಸಂಬಂಧಿಸಿ ಮೀಡಿಯಾಗಳು ಈ ಬಗೆಯ ತನಿಖೆಯನ್ನೇ ನಡೆಸಿಲ್ಲ. ಆತನ ಹಿನ್ನೆಲೆ, ಆತ ದ್ವೇಷ ಭಾಷಣ ಪ್ರೇಮಿಯಾಗಿದ್ದನೇ, ಆತನ ಮೊಬೈಲ್ನಲ್ಲಿ ಯಾರೆಲ್ಲರ ಭಾಷಣಗಳ ತುಣುಕಿತ್ತು, ಎಷ್ಟು ಭಾಷಣ ಸಭೆಗಳಿಗೆ ಹೋಗಿದ್ದಾನೆ, ಮುಸ್ಲಿಮ್ ವಿರೋಧಿ ಎಷ್ಟು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾನೆ, ಆತನ ಸೋಶಿಯಲ್ ಮೀಡಿಯಾ ಅಕೌಂಟ್ ಹೇಗಿದೆ, ಅದರಲ್ಲಿ ಮುಸ್ಲಿಮ್ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾನಾ, ಆತನ ಕೌಟುಂಬಿಕ ಬದುಕು ಹೇಗಿದೆ, ಎಷ್ಟು ಮದುವೆಯಾಗಿದ್ದಾನೆ, ಅಪರಾಧ ಹಿನ್ನೆಲೆ ಇದೆಯಾ, ಆತ ಕಲಿತ ಶಾಲೆ ಯಾವುದು, ಅಲ್ಲಿನ ನಡವಳಿಕೆ ಹೇಗಿತ್ತು, ಮುಸ್ಲಿಮರನ್ನು ಚಿಕ್ಕಂದಿನಿಂದಲೇ ದ್ವೇಷಿಸುತ್ತಿದ್ದನಾ, ಮುಸ್ಲಿಮ್ ದ್ವೇಷಿ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದನಾ, ಆತ ಪೊಲೀಸ್ ಇಲಾಖೆಯಲ್ಲಿದ್ದಾಗ ಮುಸ್ಲಿಮ್ ಕೈದಿಗಳ ಜೊತೆ ಹೇಗೆ ನಡಕೊಂಡಿದ್ದ, ಕಸ್ಟಡಿ ಥಳಿತದ ಆರೋಪ ಇದೆಯೇ, ಮುಸ್ಲಿಮ್ ವಿಮಾನ ಪ್ರಯಾಣಿಕರೊಂದಿಗೆ ಹೇಗೆ ನಡಕೊಳ್ಳುತ್ತಿದ್ದ, ಪ್ರಯಾ ಣಿಕರಿಂದ ಆರೋಪ ಇತ್ತಾ, ಆತನ ಅಪ್ಪ-ಅಮ್ಮ ಯಾರು, ಅವರ ಹಿನ್ನೆಲೆ ಏನು, ಅವರು ಯಾರೊಂದಿಗೆಲ್ಲ ಸಂಪರ್ಕ ಇಟ್ಟು ಕೊಂಡಿದ್ದಾರೆ.. ಎಂದು ಮುಂತಾಗಿ ತನಿಖೆಗಿಳಿಯಬೇಕಾದ ಮೀಡಿಯಾಗಳು ಅದರ ಬದಲು ಹತ್ಯೆಗೆ ಅನೈತಿಕ ಸಂಬಂಧ ಕಾರಣ ಎಂಬೊಂದು ದಾಳವನ್ನು ಆರಂಭದಲ್ಲೇ ಉರುಳಿಸಿ ಕೈ ತೊಳೆದುಕೊಂಡವು. </span><span style="background-color: white; color: #222222; font-family: Arial, Helvetica, sans-serif; font-size: small;">ಹಾಗಿದ್ದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಫ್ತಾಬ್ ಪೂನಾವಾಲನ ಮೇಲೆ ಅಷ್ಟೊಂದು ಅನುಮಾನ ಮತ್ತು ಕುತೂಹಲವನ್ನು ಇವೇ ಮೀಡಿಯಾಗಳು ವ್ಯಕ್ತಪಡಿಸಿದ್ದೇಕೆ? ಅದನ್ನೂ ಇಬ್ಬರು ಸಂಗಾತಿಗಳ ನಡುವಿನ ಮನಸ್ತಾಪ ಎಂದು ಷರಾ ಬರೆದು ಬಿಡಬಹುದಿತ್ತಲ್ಲವೇ? ಯಾಕೆ ಹಾಗಾಗಲಿಲ್ಲ? ಶ್ರದ್ಧಾಳ ಹತ್ಯೆಯಲ್ಲಿ ಅಫ್ತಾಬ್ನ ಧರ್ಮ ಮುಖ್ಯವಾಗುವುದಾದರೆ, ಅಯ್ನಾಝïಳ ಹತ್ಯೆಯಲ್ಲಿ ಯಾಕೆ ಪ್ರವೀಣನ ಧರ್ಮ ಮುಖ್ಯ ವಾಗುವುದಿಲ್ಲ? ಒಂದನ್ನು ಲವ್ ಜಿಹಾದ್ನ ಹಿನ್ನೆಲೆಯಲ್ಲೂ ಇನ್ನೊಂದನ್ನು ನೈತಿಕತೆಯ ಹಿನ್ನೆಲೆಯಲ್ಲೂ ನೋಡುವುದರ ಮರ್ಮವೇನು? ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದೊಂದು ಮನಸ್ಥಿತಿ. ಈ ಅಪಾಯಕಾರಿ ಮನಸ್ಥಿತಿಯು ಕೆಲವೊಮ್ಮೆ ದ್ವೇಷಭಾಷಣಕಾರರಿಗಿಂತಲೂ ಅತಿಯಾಗಿ ಮಾಧ್ಯಮ ಮಿತ್ರರಲ್ಲಿ ಕಾಣಿಸಿಕೊಳ್ಳುತ್ತದೆ. ಆರೋಪಿ ಮುಸ್ಲಿಮ್ ಅಂದ ತಕ್ಷಣ ಅವರೊಳಗಿನ ‘ಧರ್ಮಪ್ರಜ್ಞೆ’ ಎಚ್ಚರಗೊಳ್ಳುತ್ತದೆ. ಆರೋಪಿ ಮುಸ್ಲಿಮ್ ಹೆಸರಿನವ ಎಂದಾದರೆ ಆ ಕೃತ್ಯಕ್ಕೆ ಬಾಹ್ಯ ಕಾರಣ ಕ್ಕಿಂತ ಹೊರತಾದ ಧರ್ಮ ಕಾರಣ ಇದ್ದೇ ಇರುತ್ತದೆ ಎಂದವರು ತೀರ್ಮಾನಿಸಿ ಬಿಡುತ್ತಾರೆ. ಅವರ ತನಿಖಾ ರೀತಿ, ನಾಗರಿಕರಲ್ಲಿ ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಕೇಳುವ ಪ್ರಶ್ನೆ ಎಲ್ಲವೂ ತಮ್ಮ ಈ ಪೂರ್ವಾಗ್ರಹವನ್ನು ಪುಷ್ಠೀಕರಿಸುವ ರೀತಿಯಲ್ಲೇ ಇರುತ್ತದೆ. ವರದಿಗಳನ್ನೂ ಈ ಅನುಮಾನದ ಸುಳಿಯೊಳಗೇ ತಯಾರಿಸಲಾಗುತ್ತದೆ. ಅಂದಹಾಗೆ, ಅ ಫ್ತಾಬ್ಗಿಂತಲೂ ಬರ್ಬರವಾಗಿ ನಡಕೊಂಡ ಪ್ರವೀಣನ ಬಗ್ಗೆ ಮಾಧ್ಯಮಗಳು ತೋರಿದ ನಯ-ವಿನಯ, ನಾಜೂಕುತನವು ಖಂಡಿತ ಪಿಎಚ್ಡಿ ಸಂಶೋಧನೆಗೆ ಅರ್ಹವಾಗಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಚರ್ಚೆಗೊಳಗಾಗಬೇಕಾದದ್ದು- ಪುರುಷ ಯಾಕೆ ಚೂರಿಯಲ್ಲಿ ಪರಿಹಾರವನ್ನು ಕಾಣುತ್ತಾನೆ ಎಂಬುದು. 2023 ಆಗಸ್ಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 18 ವರ್ಷದ ಗೌರಿ ಎಂಬ ಯುವತಿಯನ್ನು ಪದ್ಮರಾಜ ಎಂಬವ ಹತ್ಯೆ ಮಾಡಿದ. ಇಂಥವು ಆಗಾಗ ಸುದ್ದಿಗೆ ಒಳಗಾಗುತ್ತಲೇ ಇರುತ್ತದೆ. ಪುರುಷ ಹೆಣ್ಣಿನ ಜೊತೆ ಇಷ್ಟು ನಿಷ್ಠುರವಾಗಿ ನಡಕೊಳ್ಳುವುದಕ್ಕೆ ಏನು ಕಾರಣ? ಅಹಂಮೇ? ತಾನು ಹೇಳಿದ್ದನ್ನು ಹೆಣ್ಣು ಕೇಳಲೇಬೇಕು ಎಂಬ ಪುರುಷ ಪ್ರಧಾನ ಮನಸ್ಥಿತಿಯೇ? ತಾನು ಏನು ಮಾಡಿಯೂ ದಕ್ಕಿಸಿಕೊಳ್ಳುವೆ ಎಂಬ ಹುಂಬ ಧೈರ್ಯವೇ? ಅಥವಾ ಇದರಾಚೆ ಗಿನ ಬೇರಾವುದಾದರೂ ಕಾರಣಗಳು ಇವೆಯೇ? ಹತ್ಯೆಯನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದಕ್ಕಿಂತ ಇಂಥ ಅನುಮಾನಗಳ ನ್ನಿಟ್ಟುಕೊಂಡು ಹುಡುಕ ಹೊರಟರೆ ಅದರಿಂದ ನಾಗರಿಕ ಸಮಾಜವನ್ನು ಎಚ್ಚರಿಸುವುದಕ್ಕೆ ಪೂರಕ ಮಾಹಿತಿಗಳು ಲಭ್ಯವಾದೀತು. ಮುಖ್ಯವಾಗಿ, ನಾವೆಷ್ಟೇ ಆಧುನಿಕಗೊಂಡಿದ್ದೇವೆ ಎಂದು ಹೇಳಿದರೂ ಮತ್ತು ಚಂದ್ರನಲ್ಲಿಗೆ ನಮ್ಮ ನೌಕೆ ತಲುಪಿದ್ದನ್ನು ಸಂಭ್ರಮಿಸಿದರೂ ಆಳದಲ್ಲಿ ಪುರುಷ ಅಹಂನ ಮನಸ್ಥಿತಿಯೊಂದು ಸಮಾಜದಲ್ಲಿ ಸುಪ್ತವಾಗಿ ಹರಿಯುತ್ತಿದೆ. ಹೆಚ್ಚಿನ ಮನೆಗಳೂ ಇಂಥ ಮನಸ್ಥಿತಿ ಯಿಂದಲೇ ತುಂಬಿಕೊಂಡಂತಿದೆ. ಹೆಣ್ಣೆಂದರೆ ಗಂಡಿಗೆ ತಗ್ಗಿ-ಬಗ್ಗಿ ಶರಣು ಭಾವದಲ್ಲಿ ಬದುಕಬೇಕಾದವಳು, ಎದುರು ಮಾತಾಡುವಂತಿಲ್ಲ, ತರ್ಕ-ವಾದಗಳ ಮೂಲಕ ಗಂಡಿಗೆ ಇರಿಸು-ಮುರಿಸು ತರುವಂತಿಲ್ಲ, ಗಂಡಿಗಿಂತ ಉತ್ತಮ ಐಡಿಯಾ ಅವಳಲ್ಲಿದ್ದರೂ ಅದನ್ನು ಸ್ವೀಕರಿಸುವುದು ಗಂಡಿನ ಸ್ವಾಭಿಮಾನಕ್ಕೆ ಕುತ್ತು, ಗಂಡಿಗಿಂತ ಉನ್ನತ ಹುದ್ದೆಯಲ್ಲಿರುವವಳು ಪತ್ನಿಯಾಗುವುದು ಆತನ ಇಮೇಜಿಗೆ ಕುಂದು.. ಇತ್ಯಾದಿ ಇತ್ಯಾದಿ ಹಲವು ಅಲಿಖಿತ ಕಟ್ಟು ಪಾಡುಗಳನ್ನು ಹೆಚ್ಚಿನ ಪುರುಷರು ಎದೆಯೊಳಗಿಟ್ಟು ಬದುಕುತ್ತಿರುತ್ತಾರೆ. ಕೆಲವೊಮ್ಮೆ ಅದನ್ನು ವ್ಯಕ್ತಪಡಿಸುತ್ತಲೂ ಇರುತ್ತಾರೆ. ಇಂಥ ಮನಸ್ಥಿತಿಯು ಹೆಣ್ಣಿನ ಸಣ್ಣ ಎದುರುತ್ತರವನ್ನೂ ತನಗಾದ ಅವಮಾನವೆಂದೇ ಬಗೆಯುವ ಸಾಧ್ಯತೆ ಇದೆ. ತನಗಿಲ್ಲದ ಪ್ರತಿಭೆ, ಮಾತುಗಾರಿಕೆ, ಚುರುಕುತನಗಳು ಆಕೆಯಲ್ಲಿರುವುದನ್ನು ಪುರುಷ ನೋರ್ವ ತನ್ನ ಪಾಲಿನ ಹಿನ್ನಡೆಯಾಗಿ ಪರಿಗಣಿಸುವುದಕ್ಕೂ ಅವಕಾಶ ಇದೆ. ಇಂಥ ಭಾವನೆ ಪದೇ ಪದೇ ಎದೆಯನ್ನು ಚುಚ್ಚತೊಡಗಿದಾಗ ಕ್ಷುಲ್ಲಕವೆಂದು ತೋರುವ ಕಾರಣಕ್ಕೂ ಚೂರಿ ಎತ್ತಿಕೊಳ್ಳುವುದನ್ನೂ ನಿರಾಕರಿಸಲಾಗದು. ಸದ್ಯದ ಅಗತ್ಯ ಏನೆಂದರೆ,</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಂಥ ಕ್ರೌರ್ಯಗಳಲ್ಲಿ ಆರೋಪಿಯ ಧರ್ಮವನ್ನು ಹುಡುಕದೇ ಆತ ಬೆಳೆದ ಮನೆ, ಅಲ್ಲಿನ ರೀತಿ-ರಿವಾಜು, ಕಟ್ಟುಪಾಡುಗಳು, ಆತನ ಪರಿಸರ ಇತ್ಯಾದಿಗಳ ಮೇಲೆ ಗಮನ ಹರಿಸಿ ಕಾರಣಗಳನ್ನು ಪತ್ತೆ ಹಚ್ಚಬೇಕು. ಇದು ನಿರಂತರವಾಗಿ ನಡೆಯಬೇಕು. ಹೆಣ್ಣಿನ ಮೇಲೆ ಚೂರಿ ಅಥವಾ ಶಸ್ತ್ರ ಪ್ರಯೋಗ ಮಾಡುವ ಗಂಡುಗಳ ನಡುವೆ ಸಾಮ್ಯತೆ ಇದೆಯೇ ಎಂಬ ಅಧ್ಯಯನ ನಡೆಸಬೇಕು. ಈ ಕುರಿತಂತೆ ಮನಃಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಪಡೆದು ಪ್ರಕಟಿಸಬೇಕು. ಇಂಥ ಪ್ರಯತ್ನಗಳು ಒಂದು ಅಭಿಯಾನದಂತೆ ನಡೆದರೆ ಕ್ರಮೇಣ ಅದು ಮನೆ ಮನೆಯಲ್ಲೂ ಚರ್ಚೆಗೆ ಒಳಗಾದೀತು. ಹೆಣ್ಣನ್ನು ದ್ವಿತೀಯ ದರ್ಜೆಯಂತೆ ಕಾಣುವ ಮನೆ-ಮನಗಳ ಪರಿವರ್ತನೆಗೂ ಇಂಥವು ಕಾರಣವಾದೀತು. ಸದ್ಯದ ಅಗತ್ಯ ಇದು. ಅದರಾಚೆಗೆ ಅಫ್ತಾಬ್, ಪ್ರವೀಣ್ ಅಥವಾ ಪದ್ಮರಾಜ್ರನ್ನು ಹಿಂದೂ-ಮುಸ್ಲಿಮ್ ಆಗಿ ನೋಡುವುದು ನಿಜಕ್ಕೂ ಅಧರ್ಮ.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-82221213297152796962023-11-25T05:59:00.000-08:002023-11-25T05:59:48.713-08:00 ‘40 ಶಿಶುಗಳ ಶಿರಚ್ಛೇದ’ ಸುದ್ದಿಯನ್ನು ಉತ್ಪಾದಿಸಿದವರು ಯಾರು?<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh9gYTb9OcRRY0F9pVn6BPcb38_fIEpMq6AlNezT19F2H4ysjcYTiyXsjwnaKUhLOg-oP9-8EELL9rlNOQxIstG_NR6nbhXmdLcXSFmgDS7IKaH8Ffa62NyOdrscqYd_Xm1LWcgljEDI4enhyphenhyphenZP-w1WJycOXmiTubb-4ku9yRqD9XGpxGXXHrHsScj7guIs/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEh9gYTb9OcRRY0F9pVn6BPcb38_fIEpMq6AlNezT19F2H4ysjcYTiyXsjwnaKUhLOg-oP9-8EELL9rlNOQxIstG_NR6nbhXmdLcXSFmgDS7IKaH8Ffa62NyOdrscqYd_Xm1LWcgljEDI4enhyphenhyphenZP-w1WJycOXmiTubb-4ku9yRqD9XGpxGXXHrHsScj7guIs/w400-h198/page%203%20pic.jpg" width="400" /></a></div><br /><p></p><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಇಸ್ರೇಲ್ ಮೊದಲ ಗುರಿ ಮಾತ್ರ: ಜಗತ್ತಿಗೆ ಹಮಾಸ್ ಕಮಾಂಡರ್ ಎಚ್ಚರಿಕೆ</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜೆರುಸಲೇಂ: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಹಮಾಸ್ ಕಮಾಂಡರ್ ಮಹಮೂದ್ ಅಲ್ ಜಹರ್ ಅವರು ಜಗತ್ತಿಗೆ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಜಾಗತಿಕ ನಿಯಂತ್ರಣಕ್ಕಾಗಿ ಫೆಲೆಸ್ತೀನ್ ಭಯೋತ್ಪಾದಕ ಗುಂಪಿನ ಮಹತ್ವಾಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇಸ್ರೇಲ್ ಮೊದಲ ಗುರಿ ಮಾತ್ರ. ಇಡೀ ಗ್ರಹ ನಮ್ಮ ಆಳ್ವಿಕೆಗೆ ಒಳಪಡುತ್ತದೆ ಎಂದು ಜಹರ್ ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಉದಯವಾಣಿ, ಅಕ್ಟೋಬರ್ 12, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಇಸ್ರೇಲ್ ಮೊದಲ ಗುರಿ, ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್ ಕಮಾಂಡರ್ ಎಚ್ಚರಿಕೆ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಏಶಿಯಾ ನೆಟ್ ಸುವರ್ಣ ನ್ಯೂಸ್: ಅಕ್ಟೋಬರ್ 12, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ: ಎಚ್ಚರಿಕೆ ನೀಡಿದ ಹಮಾಸ್ ಕಮಾಂಡರ್ ಅಲ್ ಜಹರ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಟಿ.ವಿ. 9, ಅಕ್ಟೋಬರ್ 12, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ- ಹಮಾಸ್ ಉದ್ಧಟತನ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಪಬ್ಲಿಕ್ ಟಿ.ವಿ., ಅಕ್ಟೋಬರ್ 12, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಮೇಲಿನ ಮಾಧ್ಯಮ ಸಂಸ್ಥೆಗಳಲ್ಲದೇ, ಎನ್ಡಿಟಿವಿ, ಹಿಂದೂಸ್ತಾನ್ ಟೈಮ್ಸ್ ನಂಥ ಪತ್ರಿಕೆಗಳು ಕೂಡಾ ಇದೇ ರೀತಿಯ ಸುದ್ದಿಯನ್ನು ಅಕ್ಟೋಬರ್ 12ರಂದು ಪ್ರಕಟಿಸಿವೆ. ಮಾತ್ರವಲ್ಲ, ಎಲ್ಲ ಮಾಧ್ಯಮ ಸಂಸ್ಥೆಗಳೂ ತಮ್ಮ ವೆಬ್ ಪೋರ್ಟಲ್ಗಳಲ್ಲಿ ಈ ಸುದ್ದಿಯ ಜೊತೆಗೇ ಮುಹಮ್ಮದ್ ಅಲ್ ಜಹರ್ ಅವರ ವೀಡಿಯೋವನ್ನೂ ಹಂಚಿಕೊಂಡಿವೆ. ಅಲ್ ಮೇಕ್ ಎಂಬ ಪತ್ರಕರ್ತೆ ತನ್ನ ಟ್ವಿಟರ್(ಎಕ್ಸ್)ನಲ್ಲಿ ಹಂಚಿಕೊಂಡಿರುವ MEMRI ಟಿ.ವಿ.ಯ ತುಣುಕನ್ನೇ ಬಹುತೇಕ ಎಲ್ಲವೂ ಹಂಚಿಕೊಂಡಿವೆ. ಇದೇ ಸುದ್ದಿಯನ್ನು ಇಸ್ರೇಲ್ನ ‘ದ ಜೆರುಸಲೇಂ ಪೋಸ್ಟ್’ ಪತ್ರಿಕೆಯು </span><span style="color: #222222; font-family: Arial, Helvetica, sans-serif; font-size: x-small;"><span style="background-color: white;">Israel </span></span><span style="background-color: white; color: #222222; font-family: Arial, Helvetica, sans-serif; font-size: small;">is only the first target: Warns Hamas com</span><span style="color: #222222; font-family: Arial, Helvetica, sans-serif; font-size: x-small;"><span style="background-color: white;">mander</span></span><span style="background-color: white; color: #222222; font-family: Arial, Helvetica, sans-serif; font-size: small;"> ಎಂಬ ಶೀರ್ಷಿಕೆಯಲ್ಲಿ ಅಕ್ಟೋಬರ್ 9ರಂದು ಪ್ರಕಟಿಸಿದೆ. ಇದೇವೇಳೆ, ಇದೇ ಸುದ್ದಿಯ ಸುತ್ತ ಇಂಗ್ಲೆಂಡಿನ ಡೈಲಿ ಮೇಲ್ ಪತ್ರಿಕೆಯು ಅಕ್ಟೋಬರ್ 10ರಂದು ವರದಿ ಪ್ರಕಟಿಸಿದ್ದು, ಹಮಾಸ್ ನಾಯಕ ಮುಹಮ್ಮದ್ ಅಲ್ ಜಹರ್ 2021 ಡಿಸೆಂಬರ್ನಲ್ಲಿ ಬಿಡುಗಡೆಗೊಳಿಸಿದ್ದ ವೀಡಿಯೋದಲ್ಲಿ ಈ ಮಾತುಗಳನ್ನು ಆಡಿರುವುದಾಗಿ ವಿವರಿಸಿದೆ. </span><span style="color: #222222; font-family: Arial, Helvetica, sans-serif; font-size: x-small;"><span style="background-color: white;">(Israel is only the first </span></span><span style="background-color: white; color: #222222; font-family: Arial, Helvetica, sans-serif; font-size: small;">target: Warns Hamas commander is newly resur</span><span style="color: #222222; font-family: Arial, Helvetica, sans-serif; font-size: x-small;"><span style="background-color: white;">faced video).</span></span><span style="background-color: white; color: #222222; font-family: Arial, Helvetica, sans-serif; font-size: small;"> ಅಂದಹಾಗೆ, ಅರಬಿ ಭಾಷೆಯಲ್ಲಿರುವ ಆ ವೀಡಿಯೋದಲ್ಲಿರುವುದು ಇಷ್ಟು-</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">510 ದಶಲಕ್ಷ ಚದರ ಕಿ.ಮೀ. ವಿಸ್ತಾರವುಳ್ಳ ಭೂಮಿಯಲ್ಲಿ ಅನ್ಯಾಯ, ದಬ್ಬಾಳಿಕೆ, ನರಮೇಧ ಸಹಿತ ಯಾವ ಅನ್ಯಾಯಗಳೂ ಇಲ್ಲದ ಒಂದು ದೇಶ ನಿರ್ಮಾಣವಾಗಲಿದೆ. ಫೆಲೆಸ್ತೀನ್, ಲೆಬನಾನ್, ಸಿರಿಯಾ, ಇರಾಕ್ ಮುಂತಾದ ರಾಷ್ಟ್ರಗಳ ವಿರುದ್ಧ ಈಗ ನಡೆಯುತ್ತಿರುವ ಅಕ್ರಮಗಳು ಕೊನೆಗೊಳ್ಳಲಿವೆ...</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಅಲ್ಲದೇ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ವೀಡಿಯೋವನ್ನು ಮೆಮರಿ ಟಿ.ವಿ. ಪ್ರಸಾರ ಮಾಡಿದ ಕೆಲವೇ ಗಂಟೆಗಳೊಳಗೆ ಇಸ್ರೇಲ್ ಪ್ರಧಾನಿ ಪ್ರತಿಕ್ರಿಯೆ ನೀಡುತ್ತಾರೆ. ಅದು ಹೀಗಿದೆ-</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಹಮಾಸ್ ಅಂದರೆ ಐಸಿಸ್ (ದಾಯಿಶ್) ಆಗಿದೆ ಮತ್ತು ಪ್ರಪಂಚವು ಐಸಿಸ್ ಅನ್ನು ನಾಶ ಮಾಡಿದಂತೆ ನಾವೂ ಅವರನ್ನು ನಾಶ ಮಾಡುತ್ತೇವೆ.’</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಮುಹಮ್ಮದ್ ಅಲ್ ಜಹರ್ ಹಮಾಸ್ನ ಕಮಾಂಡರ್ ಅಲ್ಲ. ಹಮಾಸ್ನ ರಾಜಕೀಯ ವ್ಯವಹಾರ ಸಮಿತಿ ಸದಸ್ಯ. ಅಲ್ಲದೇ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿ ಮತ್ತು ಆ ಬಳಿಕ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಮಾಡಲಾದ ವೀಡಿಯೋ ಇದಲ್ಲ. ಲಂಡನ್ನಿನ ಡೈಲಿ ಮೇಲ್ ವಿವರಿಸಿದಂತೆ, ಒಂದು ವರ್ಷದ ಹಿಂದಿನ ವೀಡಿಯೋ. ಆದರೆ ಈ ಸು ದ್ದಿಯನ್ನು ಬಿತ್ತರಿಸಿದ ಭಾರತದ ಯಾವ ಮಾಧ್ಯಮಗಳು ಕೂಡಾ ಈ ಸತ್ಯವನ್ನು ಹೇಳಿಯೇ ಇಲ್ಲ. ಮತ್ತು ಜೆರುಸಲೇಂ ಪೋಸ್ಟ್ ಸಹಿತ ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳೂ ಈ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಟ್ಟಿವೆ ಮತ್ತು ಅಕ್ಟೋಬರ್ 7ರ ನಂತರದ ವೀಡಿಯೋ ಎಂಬಂತೆಯೇ ಬಿಂಬಿಸಿವೆ. ಈ ವೀಡಿಯೋ ಪ್ರಸಾರವಾದ ಮರುಕ್ಷಣವೇ ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಹಮಾಸನ್ನು ಅವರು ಐಸಿಸ್ಗೆ ಹೋಲಿಸುತ್ತಾರೆ. ಅದರಂತೆ ಭಯೋತ್ಪಾದನೆ ನಡೆಸುವ ಮತ್ತು ಜಗತ್ತನ್ನು ಇಸ್ಲಾಮಯಗೊಳಿಸುವ ಉದ್ದೇಶವನ್ನು ಈ ಹಮಾಸ್ ಹೊಂದಿದೆ ಎಂಬಂತೆ ಹೇಳಿಕೆ ಕೊಡುತ್ತಾರೆ. ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಈ ವೀಡಿಯೋದ ಹಿನ್ನೆಲೆ, ಅದರಲ್ಲಿರುವ ವ್ಯಕ್ತಿಯ ಸ್ಥಾನಮಾನ ಇತ್ಯಾದಿಗಳನ್ನು ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಹೇಳದೇ ಇರುವುದಕ್ಕೆ ಅವುಗಳನ್ನು ಸಂಪೂರ್ಣ ಕಟಕಟೆಯಲ್ಲಿ ನಿಲ್ಲಿಸುವಂತೆಯೂ ಇಲ್ಲ. ಇಂಥ ಸುದ್ದಿಗಳನ್ನು ಉತ್ಪಾದನೆ ಮಾಡಿ ಹಂಚುವುದರಲ್ಲಿ MEMRI ಅಥವಾ ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಶನ್ ಕುಖ್ಯಾತಿ ಯನ್ನು ಪಡೆದಿದೆ. 1997 ಡಿಸೆಂಬರ್ 1ರಂದು ಅಮೇರಿಕದ ವಾಷಿಂಗ್ಟನ್ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಇಗಲ್ ಕಾರ್ಮೆನ್ (Yigal Carmen) ಮತ್ತು ಇಸ್ರೇಲ್-ಅಮೇರಿಕನ್ ಚಿಂತಕ ಮೆರಾವ್ ವರ್ಮ್ಸೆರ್ (</span></span><span style="color: #222222; font-family: Arial, Helvetica, sans-serif; font-size: x-small;"><span style="background-color: white;">(Meyrav </span></span><span style="color: #222222; font-family: Arial, Helvetica, sans-serif; font-size: x-small;">Wurmser).</span><span style="background-color: white; color: #222222; font-family: Arial, Helvetica, sans-serif; font-size: x-small;">. ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಸುದ್ದಿಯನ್ನು ಒದಗಿಸುವ ಹೊಣೆಯನ್ನು ಇದು ವಹಿಸಿಕೊಂಡಿದೆ. ಮುಖ್ಯವಾಗಿ, ಅರಬ್ ರಾಷ್ಟ್ರಗಳ ಸುದ್ದಿಗಳನ್ನು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿ ಹಂಚುವುದು ಇದರ ಗುರಿ. ಆದರೆ ಇಸ್ರೇಲ್ನ ಪಕ್ಷಪಾತಿ ನೀತಿಗಾಗಿ ಇದು ಸಾಕಷ್ಟು ಟೀಕೆಗೂ ಗುರಿಯಾಗಿದೆ. ಇಸ್ರೇಲ್ನ ಹಿತವನ್ನು ಕಾಪಾಡುವ ರೀತಿಯಲ್ಲಿ ಸುದ್ದಿಯನ್ನು ಹೆಣೆಯುವುದು ಇದರ ಗುರಿ ಎಂದು ಹೇಳಲಾಗುತ್ತಿದೆ. ಅಲ್ ಜಹರ್ ಅವರ ವರ್ಷದ ಹಿಂದಿನ ವೀಡಿಯೋವನ್ನು ಇಸ್ರೇಲ್-ಫೆಲೆಸ್ತೀನ್ ಘರ್ಷಣೆಯ ಬೆನ್ನಿಗೆ ಜಾಗತಿಕ ಮಾಧ್ಯಮಗಳಿಗೆ ದೊರಕುವಂತೆ ಪ್ರಸಾರ ಮಾಡಿರುವುದರಲ್ಲೂ ಮತ್ತು ಆ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಡುವುದರಲ್ಲೂ ಇದೇ ಜಾಣತನವಿದೆ. ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಈ ಸುದ್ದಿಯನ್ನು ಸ್ವಯಂ ಉತ್ಪಾದಿಸಿದ್ದಲ್ಲ. ಅಲ್ಲಿಂದ ಕಡ ತಂದು ಪ್ರಕಟಿಸಿವೆ. ಆದರೆ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೆ ವಿಫಲವಾಗಿವೆ. ಮುಖ್ಯವಾಗಿ, ಘರ್ಷಣೆಯಂಥ ಸನ್ನಿವೇಶದಲ್ಲಿ ಸುಳ್ಳು ಸುದ್ದಿಗಳನ್ನು ಉತ್ಪಾದಿಸಿ ಹಂಚುವುದೂ ಒಂದು ಯುದ್ಧತಂತ್ರ. ಆದ್ದರಿಂದ, ಘರ್ಷಣೆ ನಿರತ ರಾಷ್ಟ್ರಗಳ ಸುತ್ತ ವರದಿಯಾಗುವ ಸುದ್ದಿಗಳನ್ನು ಪ್ರಕಟಿಸುವ ಮೊದಲು ಎಲ್ಲ ಮಾಧ್ಯಮ ಸಂಸ್ಥೆಗಳೂ ಮೈಯೆಲ್ಲಾ ಕಣ್ಣಾಗಿರಬೇಕು. ಶಶಸ್ತ್ರಾಸ್ತ್ರದಿಂದ ಮಾಡಬಹುದಾದ ಹಾನಿಗಿಂತ ಹೆಚ್ಚಿನದ್ದನ್ನು ಕೆಲವೊಮ್ಮೆ ಒಂದು ಸುಳ್ಳು ಸುದ್ದಿ ಮಾಡಲು ಸಾಧ್ಯವಿದೆ. ಅಷ್ಟಕ್ಕೂ,</span></div><div><span style="color: #222222; font-family: Arial, Helvetica, sans-serif; font-size: x-small;"><span style="background-color: white;"><br /></span></span><span style="background-color: white; color: #222222; font-family: Arial, Helvetica, sans-serif; font-size: small;">ಅಲ್ ಜಹರ್ ವೀಡಿಯೋದಲ್ಲಿ ಆಘಾತಕಾರಿಯಾದದ್ದೇನೂ ಇಲ್ಲ. ಅಖಂಡ ಭಾರತ್ ಎಂಬ ಪರಿಕಲ್ಪನೆಯನ್ನು ಹೇಗೆ ಈ ದೇಶದಲ್ಲಿ ಹೇಳಲಾಗುತ್ತೋ ಅದೇ ರೀತಿಯ ಹೇಳಿಕೆ ಅದು. ಅಲ್ ಜಹರ್ ಉಲ್ಲೇಖಿಸಿದ ಲೆಬನಾನ್, ಸಿರಿಯ, ಇರಾಕ್, ಫೆಲೆಸ್ತೀನ್ಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಂಘರ್ಷ ಪೀಡಿತವಾಗಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಈ ರಾಷ್ಟ್ರಗಳ ಸಾರ್ವ ಭೌಮತೆಯ ಮೇಲೆ ಹಿಡಿತ ಸಾಧಿಸಿವೆ. ಅವುಗಳಿಂದ ಈ ದೇಶಗಳನ್ನು ವಿಮೋಚನೆಗೊಳಿಸುವುದು ಅವರ ಇಂಗಿತವಾಗಿದೆ. ಇದು ಭಯೋತ್ಪಾದನೆ ಹೇಗಾಗುತ್ತದೆ? ಅರಬ್ ರಾಷ್ಟçಗಳನ್ನು ಅನ್ಯಾಯ ದಬ್ಬಾಳಿಕೆಯಿಂದ ವಿಮೋಚನೆಗೊಳಿಸುತ್ತೇವೆ ಅನ್ನುವುದು ಹೇಗೆ ಐಸಿಸ್ ಆಗುತ್ತದೆ? ಅಖಂಡ ಭಾರತ ಎಂಬ ಪರಿಕಲ್ಪನೆಯಲ್ಲಿ ಕಾಣದ ಭಯೋತ್ಪಾದನೆಯು ಫೆಲೆಸ್ತೀನ್, ಲೆಬನಾನ್, ಸಿರಿಯಾವನ್ನು ಅನ್ಯರ ಹಿಡಿತದಿಂದ ಮುಕ್ತಗೊಳಿಸುವುದರಲ್ಲಿ ಹೇಗೆ ಕಾಣಲು ಸಾಧ್ಯ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಇನ್ನೂ ಒಂದು ಸುದ್ದಿಯಿದೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಹಸುಳೆಗಳನ್ನೂ ಬಿಡದ ಹೇಡಿಗಳು, ಮಕ್ಕಳ ಮಾರಣಹೋಮ: ರಾಕ್ಷಸ ಹಮಾಸ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಹೊಸದಿಗಂತ ಅಕ್ಟೋಬರ್ 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಇಸ್ರೇಲ್ನಲ್ಲಿ ಹಮಾಸ್ ಉಗ್ರರಿಂದ 40 ಶಿಶುಗಳ ಹತ್ಯೆ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಕನ್ನಡ ಪ್ರಭ, ಅಕ್ಟೋಬರ್ 10, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. 40 ಪುಟ್ಟ ಮಕ್ಕಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು: ಶವ ಕಂಡು ಕಣ್ಣೀರಿಟ್ಟ ಇಸ್ರೇಲ್ ಯೋಧರು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">(ಏಶಿಯಾ ನೆಟ್ ಸುವರ್ಣ ನ್ಯೂಸ್ ಅಕ್ಟೋಬರ್ 11, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><div><span style="color: #222222; font-family: Arial, Helvetica, sans-serif; font-size: x-small;">4. Israel releases photos of babies mur</span><span style="color: #222222; font-family: Arial, Helvetica, sans-serif; font-size: small;">dered, burned by Hamas Monsters</span></div><span style="background-color: white; color: #222222; font-family: Arial, Helvetica, sans-serif; font-size: small;">(ಇಂಡಿಯಾ ಟುಡೇ, ಅಕ್ಟೋಬರ್ 12, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><div><span style="color: #222222; font-family: Arial, Helvetica, sans-serif; font-size: x-small;">5. Hamas militants killed, beheaded 40 </span><span style="color: #222222; font-family: Arial, Helvetica, sans-serif; font-size: small;">babies and children at Israeli kibbutz</span></div><span style="background-color: white; color: #222222; font-family: Arial, Helvetica, sans-serif; font-size: small;">(ಟೈಮ್ಸ್ ಆಫ್ ಇಂಡಿಯಾ, ಅಕ್ಟೋಬರ್ 11, 2023)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇವಲ್ಲದೇ, ಲಾಸ್ ಏಂಜಲೀಸ್ ಟೈಮ್ಸ್, ಲಂಡನ್ ಟೈಮ್ಸ್, ಡೈಲಿ ಮೇಲ್ ಮುಂತಾದ ಪ್ರಮುಖ ಪತ್ರಿಕೆಗಳು ಕೂಡಾ ಈ ಸುದ್ದಿಯನ್ನು ಒತ್ತು ಕೊಟ್ಟು ಪ್ರಕಟಿಸಿದುವು. ವಿಶೇಷ ಏನೆಂದರೆ, ಎಲ್ಲಾ ಸುದ್ದಿಗಳಲ್ಲೂ ಶಿರಚ್ಛೇದ ಎಂಬ ಪದ ಸಾಮಾನ್ಯವಾಗಿತ್ತು. ಅಷ್ಟಕ್ಕೂ, ಶಿಶುಗಳನ್ನು ತಲೆ ಕೊಯ್ದು ಕೊಲ್ಲುವುದು ಎಂಬುದು ಭಯಾನಕ, ಭೀಭತ್ಸ. ಐಸಿಸ್ನ ಮೇಲೆ ಮತ್ತು ಅಲ್ ಕಾಯ್ದಾದ ಮೇಲೆ ಇಂಥದ್ದೇ ಆರೋಪವನ್ನು ಹೊರಿಸಲಾಗುತ್ತದೆ. ಮಕ್ಕಳು ಈ ಜಗತ್ತಿನಲ್ಲಿ ಕರುಣೆಯ ಪ್ರತೀಕ. ಅದರಲ್ಲೂ ಶಿಶುಗಳಂತೂ ಅಸಹಾಯಕರು. ಅವು ಸ್ವಯಂ ರಕ್ಷಿಸಿಕೊಳ್ಳಲೂ ಅಶಕ್ತ ಮತ್ತು ಪ್ರತೀಕಾರ ತೀರಿಸಲೂ ಅಸಮರ್ಥ. ಇಂಥ ಶಿಶುಗಳ ಶಿರಚ್ಛೇದ ಮಾಡುವುದೆಂದರೆ, ಅದು ರಾಕ್ಷಸೀಯ ವರ್ತನೆ. ನಮ್ಮ ದೇಶದಲ್ಲೇ ಮಕ್ಕಳ ಅಪಹರಣಕಾರರು ಎಂಬ ಆರೋಪದಲ್ಲಿ ಹಲವು ಲಿಂಚಿಂಗ್ ಪ್ರಕರಣಗಳು ನಡೆದಿವೆ. ಹತ್ಯೆಯೂ ನಡೆದಿದೆ. ಅಂದರೆ, ಮಕ್ಕಳ ಬಗ್ಗೆ ಜಗತ್ತಿನಲ್ಲಿ ಅತೀವ ಕಾಳಜಿಯಿದೆ. ಆದ್ದರಿಂದ ಈ ಶಿರಚ್ಛೇದ ಸುದ್ದಿ ಹಮಾಸ್ನ ವಿರುದ್ಧ ಜಗತ್ತನ್ನೇ ಒಂದಾಗಿಸಿತು. ಅಕ್ಟೋಬರ್ 8ರಂದು ಸಿಎನ್ಎನ್ ಚಾನೆಲ್ ಈ ಸುದ್ದಿಯನ್ನು ಸ್ಫೋಟಿಸಿತು. ಆ ಬಳಿಕ ಬೆಚ್ಚಿಬಿದ್ದ ಜಾಗತಿಕ ಮಾಧ್ಯಮಗಳು ಅದನ್ನು ಮುಖ್ಯ ಸುದ್ದಿಯಾಗಿ ಪ್ರಕಟಿಸಿದುವು. ಇದೇ ಸುದ್ದಿಯನ್ನು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಕೂಡಾ ಪುನರಾವರ್ತಿಸಿದರು. ಈ ಸುದ್ದಿ ಜಗತ್ತಿನಲ್ಲಿಡೀ ಸುತ್ತಿದ ನಾಲ್ಕು ದಿನಗಳ ಬಳಿಕ ಅಕ್ಟೋಬರ್ 12ರಂದು ಸಿಎನ್ಎನ್ ಪತ್ರಕರ್ತೆ ಸಾರಾ ಸಿಡ್ನರ್ ಕ್ಷಮೆ ಯಾಚಿಸಿದರು. ಇಸ್ರೇಲ್ ಒದಗಿಸಿದ ಸುದ್ದಿಯನ್ನು ಪರಿಶೀಲಿಸದೇ ಹಂಚಿಕೊAಡಿದ್ದೆ, ಆದರೆ ಆ ಸುದ್ದಿಯನ್ನು ದೃಢ ಪಡಿಸಲು ಇಸ್ರೇಲ್ ವಿಫಲವಾಗಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ... ಎಂದಾಕೆ ಟ್ವೀಟ್ ಮಾಡಿದರು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಾಗಿದ್ದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಸುದ್ದಿಯನ್ನು ಉತ್ಪಾದಿಸಿದ್ದು ಯಾರು? ಯಾಕೆ? ಶಿಶುಗಳ ಶಿರಚ್ಛೇದ ಎಂಬ ಸುದ್ದಿಯನ್ನೇ ಯಾಕೆ ಅವರು ಉತ್ಪಾದಿಸಿದರು? ಇದ ನ್ನು ಮರುಪರಿಶೀಲಿಸದೆಯೇ ಎಲ್ಲೆಡೆ ಹಂಚಿಕೊಳ್ಳುವAಥ ವಾತಾವರಣ ಸೃಷ್ಟಿ ಮಾಡಿದವರು ಯಾರು? ಸುಳ್ಳು ಸುದ್ದಿ ತಲುಪಿದ ಎಷ್ಟು ಮಂದಿಗೆ ಆ ಬಳಿಕದ ಸತ್ಯಸುದ್ದಿ ತಲುಪಿರಬಹುದು? ಹಮಾಸ್ ಅಂದರೆ ಶಿಶುಗಳನ್ನು ಬಿಡದೆ ಶಿರಚ್ಛೇದನ ಮಾಡುವ ಪಾಪಿಗಳು ಎಂದು ಈಗಲೂ ನಂಬಿರುವವರ ಸಂಖ್ಯೆ ಎಷ್ಟಿರಬಹುದು? ಹೀಗೆ ಆಗಬೇಕೆಂದೇ ಈ ಸುದ್ದಿಯನ್ನು ಸೃಷ್ಟಿಸಲಾಗಿತ್ತೇ? ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ರಣಾಂಗಣದಲ್ಲಿ ನಡೆಯುವ ಯುದ್ಧಕ್ಕಿಂತ ಭೀಕರ ಯುದ್ಧವನ್ನು ಇವತ್ತು ಸುದ್ದಿ ಮನೆಗಳಲ್ಲಿ ಉತ್ಪಾದಿಸಲಾಗುತ್ತದೆ. ಆದ್ದರಿಂದ ಓದುಗರು ಸದಾ ಜಾಗೃತರಾಗಿರಬೇಕು.</span></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-4062873289356124692023-11-18T05:10:00.000-08:002023-11-18T05:10:01.173-08:00 ಆ ಹಿರಿಯರು ಎತ್ತಿ ಹಿಡಿದಿರುವ ಭಿತ್ತಿಪತ್ರವೇ ಎಲ್ಲವನ್ನೂ ಹೇಳುತ್ತಿದೆ...<p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjedW0zlmY_uQZZy8SCHDJpR2OaZcxRSDkx-A9zONDhOTS330Y3XJIdbtysU6gDCBUd9kNVxEHDCU29EHk4DUcx0yCiytqY9SJ-K4CzqoDIvAgonXZ5ru0nLuEWn7ejroBltfwlPcXZCxOe1BOHeOSN82IwGaVrc6Tr4igJ4oTf8oUuzm8Ri696-oh-7kDF/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEjedW0zlmY_uQZZy8SCHDJpR2OaZcxRSDkx-A9zONDhOTS330Y3XJIdbtysU6gDCBUd9kNVxEHDCU29EHk4DUcx0yCiytqY9SJ-K4CzqoDIvAgonXZ5ru0nLuEWn7ejroBltfwlPcXZCxOe1BOHeOSN82IwGaVrc6Tr4igJ4oTf8oUuzm8Ri696-oh-7kDF/w400-h198/page%203%20pic.jpg" width="400" /></a></div><br /><div><br /></div><br /><div><br style="background-color: white; color: #222222; font-family: Arial, Helvetica, sans-serif; font-size: small;" /><div><span style="color: #222222; font-family: Arial, Helvetica, sans-serif; font-size: x-small;">You take my water</span></div><div><span style="color: #222222; font-family: Arial, Helvetica, sans-serif; font-size: x-small;">Burn my olive trees</span></div><div><span style="color: #222222; font-family: Arial, Helvetica, sans-serif; font-size: x-small;">Destroy my house</span></div><div><span style="color: #222222; font-family: Arial, Helvetica, sans-serif; font-size: x-small;">Take my job</span></div><div><span style="color: #222222; font-family: Arial, Helvetica, sans-serif; font-size: x-small;">Steal my land</span></div><div><span style="color: #222222; font-family: Arial, Helvetica, sans-serif; font-size: x-small;">Imprison my Father</span></div><div><span style="color: #222222; font-family: Arial, Helvetica, sans-serif; font-size: x-small;">Kill my Mother</span></div><div><span style="color: #222222; font-family: Arial, Helvetica, sans-serif; font-size: x-small;">Bomb my country</span></div><div><span style="color: #222222; font-family: Arial, Helvetica, sans-serif; font-size: x-small;">Starve us all</span></div><div><span style="color: #222222; font-family: Arial, Helvetica, sans-serif; font-size: x-small;">Humiliate us all</span></div><div><span style="color: #222222; font-family: Arial, Helvetica, sans-serif; font-size: x-small;">But... I am to blame</span></div><div><span style="color: #222222; font-family: Arial, Helvetica, sans-serif; font-size: x-small;">I shot a rocket back</span></div><div><span style="color: #222222; font-family: Arial, Helvetica, sans-serif; font-size: x-small;"><br /></span></div><span style="background-color: white; color: #222222; font-family: Arial, Helvetica, sans-serif; font-size: small;">‘ಆಪರೇಶನ್ ಪಿಲ್ಲರ್ ಆಫ್ ಡಿಫೆನ್ಸ್’ ಎಂಬ ಹೆಸರಲ್ಲಿ 2012ರಲ್ಲಿ ಗಾಝಾದ ಮೇಲೆ ಇಸ್ರೇಲ್ ವಾಯುದಾಳಿ ಆರಂಭಿಸಿದಾಗ ಮತ್ತು ನೂರಾರು ಮಂದಿಯನ್ನು ಸಾಯಿಸಿದಾಗ ಗಾಝಾದ ಓರ್ವ ಹಿರಿಯ ವ್ಯಕ್ತಿ ಇಂಥದ್ದೊಂದು ಭಿತ್ತಿಪತ್ರವನ್ನು ಎತ್ತಿ ಹಿಡಿದು ಪ್ರತಿಭಟಿಸಿದ್ದರು. ಕೆಲವೊಂದಿಷ್ಟು ಪತ್ರಿಕೆಗಳು ಈ ಭಿತ್ತಿಪತ್ರಕ್ಕೆ ಮಹತ್ವ ಕೊಟ್ಟು ಪ್ರಕಟಿಸಿದ್ದುವು. ಅದರಲ್ಲಿ, ಭಾರತದ ಫ್ರಂಟ್ಲೈನ್ ಪತ್ರಿಕೆ ಕೂಡಾ ಒಂದು. ಈ ಭಿತ್ತಿಪತ್ರವನ್ನು ಸಂಕ್ಷಿಪ್ತವಾಗಿ ಹೀಗೆ ಅನುವಾದಿಸಬಹುದು:</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ನೀವು ನನ್ನ ನೀರನ್ನು ಕಸಿದಿರಿ, ನನ್ನ ಆಲಿವ್ ಮರಗಳನ್ನು ಸುಟ್ಟಿರಿ, ನನ್ನ ಮನೆಯನ್ನು ಧ್ವಂಸ ಮಾಡಿದಿರಿ, ನನ್ನ ಕೆಲಸವನ್ನು ಕಿತ್ತುಕೊಂಡಿರಿ. ನನ್ನ ಭೂಮಿಯನ್ನು ಲಪಟಾಯಿಸಿದಿರಿ, ನನ್ನ ತಂದೆಯನ್ನು ಜೈಲಲ್ಲಿಟ್ಟಿರಿ, ನನ್ನ ತಾಯಿಯನ್ನು ಕೊಂದಿರಿ, ನನ್ನ ದೇಶಕ್ಕೆ ಬಾಂಬ್ ಹಾಕಿದಿರಿ, ನಮ್ಮನ್ನೆಲ್ಲ ಹಸಿವಿಗೆ ದೂಡಿದಿರಿ, ನಮ್ಮನ್ನು ಅವಮಾನಿಸಿದಿರಿ... ಹೀಗಿದ್ದೂ ಈಗ ನಾನೇ ಅಪರಾಧಿ. ಏಕೆಂದರೆ, ನಿಮ್ಮೆಡೆಗೆ ನಾನೊಂದು ರಾಕೆಟ್ ಹಾರಿಸಿದೆ..’</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬಹುಶಃ, 1948 ಮೇ 15ರಿಂದ 2023ರ ಈ ನವೆಂಬರ್ ವರೆಗೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಏನೆಲ್ಲ ಘಟಿಸಿವೆಯೋ ಅವೆಲ್ಲವನ್ನೂ ಈ ಒಂದು ಭಿತ್ತಿಪತ್ರಕ್ಕಿಂತ ಸಮರ್ಥವಾಗಿ ಇನ್ನಾವುದೂ ಕಟ್ಟಿಕೊಡಲಾರದು ಅನ್ನಿಸುತ್ತದೆ. ಅಮೇರಿಕದ ಬೆಂಬಲ ಮತ್ತು ವಿಶ್ವಸಂಸ್ಥೆಯ ಒತ್ತಾಸೆಯೊಂದಿಗೆ 1948 ಮೇ 15ರಂದು ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾದಾಗ ಅಲ್ಲಿ ಕೇವಲ 8 ಲಕ್ಷದ 6 ಸಾವಿರ ಮಂದಿ ಯಹೂದಿಯರಷ್ಟೇ ಇದ್ದರು. ಫೆಲೆಸ್ತೀನ್ ಮಣ್ಣಿನ 5</span><span style="background-color: white; color: #222222; font-family: Arial, Helvetica, sans-serif; font-size: small;">5</span><span style="background-color: white; color: #222222; font-family: Arial, Helvetica, sans-serif; font-size: small;">% ಭೂಭಾಗವಷ್ಟೇ ಇಸ್ರೇಲ್ನದ್ದಾಗಿತ್ತು. ಇವತ್ತು ಇಸ್ರೇಲ್ನಲ್ಲಿ ಸುಮಾರು 90 ಲಕ್ಷ ಮಂದಿ ಯಹೂದಿಯರಿದ್ದಾರೆ ಮತ್ತು ಫೆಲೆಸ್ತೀನ್ನ 95% ಭೂಮಿ ಕೂಡಾ ಇಸ್ರೇಲ್ನ ವಶದಲ್ಲಿದೆ. ಇವತ್ತು, ಜಾಗತಿಕವಾಗಿ ಚದುರಿ ಹೋಗಿರುವ ಯಹೂದಿಯರನ್ನು ಇಸ್ರೇಲ್ ಮುಕ್ತವಾಗಿ ತನ್ನಲ್ಲಿಗೆ ಸ್ವಾಗತಿಸುತ್ತಿದೆಯಲ್ಲದೇ, ಅವರ ವಸತಿಗಾಗಿ ಫೆಲೆಸ್ತೀನಿ ಭೂಮಿಯನ್ನು ಇಂಚಿಂಚೇ ಕಸಿದುಕೊಳ್ಳುತ್ತಿದೆ ಮತ್ತು ಅಲ್ಲಿರುವ ಫೆಲೆಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿದೆ. ಹಾಗಂತ,</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಇವೇನೂ ರಹಸ್ಯವಾಗಿ ನಡೆಯುತ್ತಿಲ್ಲ. ಇಂಥ ಅಕ್ರಮ ವಸತಿ ನಿರ್ಮಾಣದ ವಿರುದ್ಧ ವಿಶ್ವಸಂಸ್ಥೆಯದ್ದೇ ಒಂದಕ್ಕಿಂತ ಹೆಚ್ಚು ನಿರ್ಣಯಗಳು ಅಂಗೀಕಾರಗೊಂಡಿವೆ. ಅದರಲ್ಲಿ ಗೋಡೆ ನಿರ್ಮಾಣವನ್ನು ಖಂಡಿಸಿ ಕೈಗೊಳ್ಳಲಾದ ನಿರ್ಣಯವೂ ಒಂದು. ಫೆಲೆಸ್ತೀನಿಯರನ್ನು ಫೆಲೆಸ್ತೀನಿಯರಿಂದಲೇ ವಿಭಜಿಸುವ ಬೃಹತ್ ಗೋಡೆ ನಿರ್ಮಾಣಕ್ಕೆ ಇಸ್ರೇಲ್ 2002ರಲ್ಲಿ ಕೈಹಾಕಿತು. 704 ಕಿ. ಮೀಟರ್ ಉದ್ದದ ಈ ಗೋಡೆಯು 2006ರಲ್ಲಿ ಪೂರ್ಣಗೊಂಡಾಗ ಪಶ್ಚಿಮ ದಂಡೆಯ 25 ಸಾವಿರ ಫೆಲೆಸ್ತೀನಿಯರು ಉಳಿದ ಭಾಗದ ಫೆಲೆಸ್ತೀನಿಯರ ಸಂಪರ್ಕವನ್ನು ಕಳೆದುಕೊಂಡರು. ಈ ಗೋಡೆಯ 15% ಭಾಗ ಇಸ್ರೇಲ್ನಲ್ಲಿದ್ದರೆ ಉಳಿದ 85% ಭಾಗವೂ ಫೆಲೆಸ್ತೀನ್ನ ಪಶ್ಚಿಮ ದಂಡೆಯನ್ನು ಹಾದು ಹೋಗಿದೆ. ಇಷ್ಟಿದ್ದೂ, ಈ ಗೋಡೆಯನ್ನು ಅಲುಗಾಡಿಸುವುದಕ್ಕೆ ವಿಶ್ವಸಂಸ್ಥೆಯ ಯಾವ ನಿರ್ಣಯಕ್ಕೂ ಸಾಧ್ಯವಾಗಿಲ್ಲ. ಇದು ವರ್ಣಭೇದದ ಗೋಡೆ ಎಂಬ ವಿಶ್ವಸಂಸ್ಥೆಯ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತೂ ದಕ್ಕಿಲ್ಲ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1948 ಮೇ 15ರಂದು ಇಸ್ರೇಲ್ ರಾಷ್ಟ್ರ ಅಧಿಕೃತವಾಗಿ ಘೋಷಣೆಯಾದದ್ದೇ ರಕ್ತದೋಕುಳಿಯ ಮೇಲೆ. ಈ ಘೋಷಣೆಯ ಮೂರು ವಾರಗಳ ಮೊದಲು, 1948 ಎಪ್ರಿಲ್ 9ರಂದು ಇರ್ಗುನ್ ಮತ್ತು ಸ್ಟೆರ್ನ್ ಎಂಬ ಝಿಯೋನಿಸ್ಟ್ ಬಂದೂಕುಧಾರಿ ಗುಂಪು ಪಶ್ಚಿಮ ಜೆರುಸಲೇಮ್ನಲ್ಲಿರುವ ಡೆರ್ ಯಾಸೀನ್ಗೆ ನುಗ್ಗುತ್ತದೆ. ಇಲ್ಲಿ ವಾಸಿಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಗುಂಡು ಹಾರಿಸಿ ನರಮೇಧ ನಡೆಸುತ್ತದೆ. ಕಲ್ಲು ಕ್ವಾರೆಯಲ್ಲಿ ದುಡಿಯುತ್ತಿದ್ದ ಮತ್ತು ಕಲ್ಲು ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದ ಬಡಪಾಯಿ ಫೆಲೆಸ್ತೀನಿಯರು ಇಂಥದ್ದೊಂದು ದಾಳಿಯನ್ನು ನಿರೀಕ್ಷಿಸಿಯೇ ಇರಲಿಲ್ಲ. ಈ ದಾಳಿಯಲ್ಲಿ 20ಕ್ಕಿಂತ ಅಧಿಕ ಫೆಲೆಸ್ತೀನಿಯರು ಹತ್ಯೆಗೀಡಾಗುತ್ತಾರೆ ಮತ್ತು ಸಾವಿರಾರು ಮಂದಿ ಪಲಾಯನ ಮಾಡುತ್ತಾರೆ-</span><span style="color: #222222; font-family: Arial, Helvetica, sans-serif; font-size: x-small;"><span style="background-color: white;">(The Deir Yassin massacare: Why still </span><span style="background-color: white;">matters 75 years later: 9, April 2023).</span></span><span style="background-color: white; color: #222222; font-family: Arial, Helvetica, sans-serif; font-size: small;"> ಫೆಲೆಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಆ ಭೂಮಿಯನ್ನು ಇಸ್ರೇಲ್ ಭೂಪಟಕ್ಕೆ ಸೇರಿಸುವುದೇ ಈ ದಾಳಿಯ ಉದ್ದೇಶವಾಗಿತ್ತು. ಈ ನರಮೇಧಕ್ಕೆ ನೇತೃತ್ವ ನೀಡಿದವರೇ ಮೆನಾಚಿನ್ ಬೆಗಿನ್. ಇವರು ಆ ಬಳಿಕ ಇಸ್ರೇಲಿನ ಪ್ರಧಾನಿಯಾಗುತ್ತಾರೆ. ಮಾತ್ರವಲ್ಲ, ಶಾಂತಿ ಒಪ್ಪಂದದ ಹೆಸರಲ್ಲಿ ಈಜಿಪ್ಟ್ ಅಧ್ಯಕ್ಷ ಸಾದಾತ್ರ ಜೊತೆ ನೋಬೆಲ್ ಪ್ರಶಸ್ತಿ ಹಂಚಿಕೊಳ್ಳುತ್ತಾರೆ. ಆ ಬಳಿಕ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1982ರಲ್ಲಿ ಇತಿಹಾಸ ಕಂಡ ಅತಿದೊಡ್ಡ ನರಮೇಧಕ್ಕೆ ಜಗತ್ತು ಸಾಕ್ಷಿಯಾಗುತ್ತದೆ. ಲೆಬನಾನ್ನ ಶಬ್ರ ಮತ್ತು ಶತೀಲದ ನಿರಾಶ್ರಿತ ಕೇಂದ್ರಗಳ ಮೇಲೆ ಇಸ್ರೇಲ್ ಸೇನೆ ಬೆಂಬಲಿತ ಶಸ್ತ್ರ ಸಜ್ಜಿತ ಗುಂಪು ಗಳು ಭೀಕರ ದಾಳಿ ಮಾಡುತ್ತವೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಮೂರು ಯುದ್ಧಗಳಿಂದಾಗಿ ಮತ್ತು ಇಸ್ರೇಲ್ ಭೂ ಒತ್ತುವರಿಯಿಂದಾಗಿ ನಿರಾಶ್ರಿತರಾದ ಫೆಲೆಸ್ತೀನಿಯರು ಲೆಬನಾನ್ನ ಈ ನಿರಾಶ್ರಿತ ಕೇಂದ್ರಗಳಲ್ಲಿದ್ದರು. ಇಸ್ರೇಲ್ ಅಧ್ಯಕ್ಷ ಇಝಾಕ್ ರಬಿನ್ರ ಹತ್ಯೆಯ ನೆಪದಲ್ಲಿ ನಡೆದ ಈ ಕ್ರೌರ್ಯಕ್ಕೆ 3,500 ಮಂದಿ ನಿರಾಶ್ರಿತರು ಹತ್ಯೆಗೀಡಾದರು. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆಯೇ ಅಧಿಕ. ಆ ಬಳಿಕದಿಂದ ಈ 2023ರ ನವೆಂಬರ್ ವರೆಗೆ ಫೆಲೆಸ್ತೀನಿನ ಮೇಲೆ ಇಸ್ರೇಲ್ ಹತ್ತು-ಹಲವು ಬಾರಿ ವೈಮಾನಿಕ ಮತ್ತು ಭೂದಾಳಿಯನ್ನು ನಡೆಸಿದೆ. ಸಾವಿರಕ್ಕೂ ಮಿಕ್ಕಿ ಫೆಲೆಸ್ತೀನಿಯರು ಈ ದಾಳಿಗೆ ಬಲಿಯಾಗಿದ್ದಾರೆ. ಅಸಂಖ್ಯ ಮಂದಿ ಗಾಯಗೊಂಡಿದ್ದಾರೆ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಫೆಲೆಸ್ತೀನ್ನಿಂದ ಹಾರಿ ಬರುವ ರಾಕೆಟ್ಗಳನ್ನೇ ಈ ಎಲ್ಲ ಸಂದರ್ಭಗಳಲ್ಲೂ ತನ್ನ ದಾಳಿಗೆ ಇಸ್ರೇಲ್ ನೆಪವಾಗಿ ಬಳಸಿ ಕೊಳ್ಳುತ್ತಿದೆ. ಆದರೆ, ಅಕ್ರಮವಾಗಿ ರಾಷ್ಟ್ರ ಸ್ಥಾಪನೆ ಮಾಡಿದ್ದಲ್ಲದೇ ತನ್ನ ಸುತ್ತಲಿನ ಜನತೆಯನ್ನು ಕುಡಿಯುವ ನೀರಿಗೂ ಅಂಗಲಾಚುವಂತೆ ಮಾಡಿ, ತುತ್ತು ಅನ್ನಕ್ಕೂ ಕೈಯೊಡ್ಡುವಂತೆ ನಿರ್ಬಂಧಿಸಿ, ಅವರಿಂದ ಸರ್ವ ಸ್ವಾತಂತ್ರ್ಯವನ್ನೂ ಕಸಿದುಕೊಂಡು ಮತ್ತು ಅವರ ಭೂಮಿಯನ್ನು ನಿತ್ಯ ಕಸಿದುಕೊಳ್ಳುತ್ತಾ ಹಿಂಸೆಗೆ ಪ್ರಚೋದಿಸುವ ಮತ್ತು ಪ್ರತೀಕಾರ ತೀರಿಸುವಂತೆ ರೊಚ್ಚಿಗೆಬ್ಬಿಸುವ ಇಸ್ರೇಲ್ನ ನೀತಿ ಎಲ್ಲೂ ಚರ್ಚೆಗೆ ಒಳಗಾಗುತ್ತಿಲ್ಲ. ಅವರ ಬದಲು ದುರ್ಬಲ ರಾಕೆಟ್ಟೇ ಸಮೂಹ ನಾಶಕವೆಂಬಂತೆ ಬಿಂಬಿತವಾಗುತ್ತಿದೆ. ಇದೇವೇಳೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಕ್ಟೋಬರ್ 7ರಂದು ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ಕಗ್ಗೊಲೆಯ ವಿರುದ್ಧ ಪ್ರಮುಖ ಮಾಧ್ಯಮಗಳು ಮತ್ತು ಜಾಗತಿಕ ನಾಯಕರು ವ್ಯಕ್ತಪಡಿಸಿದ ಆಕ್ರೋಶ, ಆಘಾತ ಮತ್ತು ಪ್ರತೀಕಾರ ಭಾವದ ಸಣ್ಣದೊಂದು ಅಂಶವನ್ನಾದರೂ ಇಸ್ರೇಲ್ ಈ 75 ವರ್ಷಗಳಲ್ಲಿ ಎಸಗಿರುವ ಕಗ್ಗೊಲೆ ಮತ್ತು ಕ್ರೌರ್ಯಗಳ ವಿರುದ್ಧ ಯಾಕೆ ವ್ಯಕ್ತಪಡಿಸುತ್ತಿಲ್ಲ ಎಂಬ ಪ್ರಶ್ನೆಗೂ ಮಹತ್ವವಿದೆ. ಅಥವಾ ಇಸ್ರೇಲ್ ಕಡೆಯಿಂದ ಯಾವ ಅನ್ಯಾಯವೂ ನಡೆಯುತ್ತಿಲ್ಲವೇ, ಫೆಲೆಸ್ತೀನಿ ಹೋರಾಟಗಾರರು ಸುಳ್ಳು ಸುಳ್ಳೇ ಇಸ್ರೇಲನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆಯೇ ಎಂಬ ಅನುಮಾನಕ್ಕೂ ಅವಕಾಶ ಇದೆ. ನಿಜವಾಗಿ, ಇಸ್ರೇಲ್ ಸಂತ್ರಸ್ತ ರಾಷ್ಟ್ರವಾಗಿಯೂ ಫೆಲೆಸ್ತೀನಿಯರು ಭಯೋತ್ಪಾದಕರಾಗಿಯೂ ಬಿಂಬಿತವಾಗಿರುವುದರ ಹಿಂದೆ ಬಲವಾದ ಒಂದು ಕಾರಣ ಇದೆ. ಅದುವೇ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="color: #222222; font-family: Arial, Helvetica, sans-serif; font-size: x-small;"><span style="background-color: white;">MEMRI</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2001 ಸೆಪ್ಟೆಂಬರ್ 11ರಂದು (9/11) ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದ ಬೆನ್ನಿಗೇ ವೀಡಿಯೋ ಒಂದು ವೈರಲ್ ಆಗಿತ್ತು. ಅಮೇರಿಕ, ಬ್ರಿಟನ್, ಫ್ರಾನ್ಸ್ ಸಹಿತ ಯುರೋಪಿಯನ್ ರಾಷ್ಟ್ರಗಳು ಮತ್ತು ಅರಬ್ ರಾಷ್ಟ್ರಗಳ ಟಿ.ವಿ. ಚಾನೆಲ್ ಗಳು ಕೂಡಾ ಆ ವೀಡಿಯೋವನ್ನು ಪ್ರಸಾರ ಮಾಡಿದ್ದುವು. ಭಾರತೀಯ ಮಾಧ್ಯಮಗಳಲ್ಲೂ ಆ ವೀಡಿಯೋ ಸುದ್ದಿಯಾಗಿತ್ತು. ‘ಅವಳಿ ಕಟ್ಟಡದ ಮೇಲಿನ ದಾಳಿಯನ್ನು ಸಂಭ್ರಮಿಸುತ್ತಿರುವ ಫೆಲೆಸ್ತೀನಿಯರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ವೀಡಿಯೋದಿಂದ ಕೋಟ್ಯಂತರ ವಿರೋಧಿಗಳನ್ನು ಫೆಲೆಸ್ತೀನಿಯರು ಗಿಟ್ಟಿಸಿಕೊಂಡರು. ಅರಬ್ ರಾಷ್ಟ್ರಗಳ ವಿರೋಧಕ್ಕೂ ಫೆಲೆಸ್ತೀನಿಯರು ತುತ್ತಾದರು. ಈಗಿನಂತೆ ಸೋಶಿಯಲ್ ಮೀಡಿಯಾ ಬಲಶಾಲಿಯಾಗಿ ಲ್ಲದ ಆ ಕಾಲದಲ್ಲಿ ಸತ್ಯಸುದ್ದಿ ಬಹಿರಂಗವಾದಾಗ ಬಹುತೇಕರೂ ಆ ವೀಡಿಯೋವನ್ನೇ ಮರೆತಿದ್ದರು. ನಿಜವಾಗಿ, 1990ರ ಗಲ್ಫ್ ಯುದ್ಧದ ವೇಳೆ ಸದ್ದಾಮ್ ಹುಸೇನ್ರನ್ನು ಬೆಂಬಲಿಸಿ ಫೆಲೆಸ್ತೀನಿಯರು ನಡೆಸಿದ ಸಂಭ್ರಮದ ವೀಡಿಯೋ ಅದಾಗಿತ್ತು. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅವಳಿ ಗೋಪುರ ಧ್ವಂಸಕ್ಕೆ ಸಂಬಂಧವೇ ಇಲ್ಲದ ಈ ವೀಡಿಯೋವನ್ನು ಮಾಧ್ಯಮಗಳಿಗೆ ಹಂಚಿದ್ದು ಯಾರು, ಜಗತ್ತಿನ ಪ್ರಮುಖ ಮಾಧ್ಯಮಗಳು ಆ ವೀಡಿಯೋವನ್ನು ಪರಾಂಬರಿಸದೇ ಪ್ರಸಾರ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಬಹುಶಃ ಅದರ ಹಿಂದಿರುವುದೇ ಈ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಶನ್ ಅಥವಾ </span><span style="background-color: white; color: #222222; font-family: Arial, Helvetica, sans-serif; font-size: small;">MEMRI </span><span style="background-color: white; color: #222222; font-family: Arial, Helvetica, sans-serif; font-size: small;">ಎಂಬ ಮಾಧ್ಯಮ ಸಂಸ್ಥೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">1997 ಡಿಸೆಂಬರ್ 1ರಂದು ಅಮೇರಿಕದ ವಾಷಿಂಗ್ಟನ್ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಇಗಲ್ ಕಾರ್ಮೋನ್ (Yigal Carmen) ಮತ್ತು ಇಸ್ರೇಲಿ-ಅಮೇರಿಕನ್ ಚಿಂತಕ ಮೆರಾವ್ ವರ್ಮ್ಸೆರ್ (Meyrav Wurmser). ತುರ್ಕಿ, ಯಮನ್, ಲೆಬನಾನ್, ಸಿರಿಯಾ ಸಹಿತ ಅರಬ್ ರಾಷ್ಟ್ರಗಳ ಸುದ್ದಿಗಳನ್ನು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಭಾಷಾಂತರಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ </span></span><span style="background-color: white; color: #222222; font-family: Arial, Helvetica, sans-serif; font-size: small;"> </span><span style="background-color: white; color: #222222; font-family: Arial, Helvetica, sans-serif; font-size: small;">MEMRI</span><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಯು, ಮುಂಚೂಣಿ ಮಾಧ್ಯಮಗಳ ಮೇಲೆ ಗಾಢ ಪ್ರಭಾವವನ್ನು ಹೊಂದಿದೆ. ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಯಾವುದೇ ಹಣವನ್ನು ಪಡೆಯದೇ ಸುದ್ದಿಯನ್ನು ಒದಗಿಸುವ ಈ ಸಂಸ್ಥೆಯು ಅರಬ್ ಮತ್ತು ಇಸ್ರೇಲ್ ವಿರೋಧಿ ಸುದ್ದಿಗಳನ್ನು ಉತ್ಪಾದಿಸುತ್ತಿದೆ ಎಂಬ ಆರೋಪ ಪ್ರಬಲವಾಗಿಯೇ ಇದೆ. ಇಸ್ರೇಲ್ನ ಹಿನ್ನೆಲೆ, ಭೂ ವಿಸ್ತರಣೆ, ಕ್ರೌರ್ಯಗಳು ಸಹಿತ ಯಾವುದೂ ಚರ್ಚೆಯಾಗದಂತೆ ನೋಡಿಕೊಳ್ಳುವುದು ಮತ್ತು ಫೆಲೆಸ್ತೀನಿಯರ ವಿಮೋಚ ನಾ ಹೋರಾಟವನ್ನು ಭಯೋತ್ಪಾದನೆಯಂತೆ ಬಿಂಬಿಸುವಲ್ಲಿ ಇದರ ಪಾತ್ರ ಮಹತ್ವದ್ದು ಎಂದು ಹೇಳಲಾಗುತ್ತಿದೆ. ಹಮಾಸ್ ಹೋರಾಟಗಾರರು 40 ಇಸ್ರೇಲಿ ಮಕ್ಕಳ ಶಿರಚ್ಛೇದನ ನಡೆಸಿದ್ದಾರೆ ಎಂಬ ಸುದ್ದಿ ಮೊದಲು ಉತ್ಪಾದನೆಯಾದದ್ದು ಎಲ್ಲಿ ಎಂಬ ಪತ್ತೆ ಕಾರ್ಯಕ್ಕೆ ಯಾರಾದರೂ ಇಳಿದರೆ, ಅವರು ಈ </span></span><span style="background-color: white; color: #222222; font-family: Arial, Helvetica, sans-serif; font-size: small;"> </span><span style="background-color: white; color: #222222; font-family: Arial, Helvetica, sans-serif; font-size: small;">MEMRI</span><span style="background-color: white;"><span style="color: #222222; font-family: Arial, Helvetica, sans-serif; font-size: x-small;"> ಕಚೇರಿಗೆ ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಮೊದಲು ಈ ಸುದ್ದಿಯನ್ನು ಹಂಚಿಕೊಂಡದ್ದು ಇಸ್ರೇಲ್. ಅದೇ ಸುದ್ದಿಯನ್ನು ಆ ಬಳಿಕ ಸಿಎನ್ಎನ್ ನ್ಯೂಸ್ ಚಾನೆಲ್ ಪ್ರಸಾರ ಮಾಡಿತು. ಆ ಬಳಿಕ ಅಮೇರಿಕದ ಅಧ್ಯಕ್ಷ ಜೊ ಬೈಡೆನ್ ಆ ಸುದ್ದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಇದಾಗಿ ಐದು ದಿನಗಳ ಬಳಿಕ ಈ ಸುದ್ದಿ ಸುಳ್ಳು ಎಂದು ಸಿಎನ್ಎನ್ ಪತ್ರಕರ್ತೆ ಒಪ್ಪಿಕೊಂಡರಲ್ಲದೇ, ಕ್ಷಮೆ ಯಾಚಿಸಿದರು.</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಸ್ರೇಲ್ ರಾಷ್ಟ್ರ ಪರಿಕಲ್ಪನೆಗೂ 1893ರಲ್ಲಿ ಫ್ರಾನ್ಸ್ ನಲ್ಲಿ ನಡೆದ ಘಟನೆಗೂ ಸಂಬಂಧ ಇದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white;"><span style="color: #222222; font-family: Arial, Helvetica, sans-serif; font-size: x-small;">ಆಲ್ಫ್ರೆಡ್ ಡ್ರೆಫಸ್ (Alfred Dreyfus) ಎಂಬ ಸೇನಾಧಿಕಾರಿಯನ್ನು 1893ರಲ್ಲಿ ಫ್ರಾನ್ಸ್ ವಿಚಾರಣೆಗೆ ಒಳಪಡಿಸಿತು. ಫ್ರಾನ್ಸ್ ನ ರಹಸ್ಯ ಮಾಹಿತಿಯನ್ನು ಫ್ರಾನ್ಸ್ನಲ್ಲಿರುವ ಜರ್ಮನಿ ರಾಯಭಾರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಈ 35 ವರ್ಷದ ಯಹೂದಿ ಸೇನಾಧಿಕಾರಿಯ ಮೇಲಿತ್ತು. 1894ರಲ್ಲಿ ಫ್ರೆಂಚ್ ಅಕಾಡೆಮಿಯ ಹತ್ತಿರ ಇವರನ್ನು ಕೋರ್ಟ್ ಮಾರ್ಶಲ್ಗೆ ಒಳಪಡಿಸಲಾಯಿತಲ್ಲದೇ, ಯೋಧರ ಜೊತೆಗೇ ಸಾವಿರಾರು ಜನರನ್ನೂ ಸೇರಿಸಿ ಅತ್ಯಂತ ನಾಟಕೀಯವಾಗಿ ಶಿಕ್ಷಿಸಲಾಯಿತು. ಅವರ ಯೂನಿಫಾರ್ಮ್ ಹರಿದೆಸೆದು ಪದಕಗಳನ್ನು ಕಿತ್ತೆಸೆದು ಕೂದಲು ಕತ್ತರಿಸಿ ಚಾಟಿಯಿಂದ ಥಳಿಸಲಾಯಿತು. ಈ ಎಲ್ಲ ಕ್ರೌರ್ಯಗಳ ನಡುವೆ ಫ್ರಾನ್ಸ್ ಗೆ ಜಯವಾಗಲಿ ಎಂಬ ಘೋಷಣೆಯನ್ನೂ ಕೂಗಲಾಯಿತು. ಅಲ್ಪ ಸಂಖ್ಯಾತ ಯಹೂದಿಯರು ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬ ಪ್ರಚಾರದೊಂದಿಗೆ ಈ ಎಲ್ಲವೂ ನಡೆಯಿತು. ಆ ಬಳಿಕ 5 ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಲಾಯಿತು. ನಿಜವಾಗಿ,</span></span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಆಲ್ಫ್ರೆಡ್ ಅಪರಾಧಿಯೇ ಆಗಿರಲಿಲ್ಲ. ಸೇನೆಯ ಹೊಸ ಕಮಾಂಡರ್ ಜಾರ್ಜ್ ಪಿಕಾರ್ಟ್ ಎಂಬವರು ಈ ಬಗ್ಗೆ ತನಿಖೆ ನಡೆಸಿದರಲ್ಲದೇ, ಆಲ್ಫ್ರೆಡ್ರನ್ನು ಅನ್ಯಾಯವಾಗಿ ದಂಡಿಸಲಾಗಿದೆ ಎಂದು ಹೇಳಿದರು ಮತ್ತು ಮೇಜರ್ ಜನರಲ್ ಫರ್ಡಿನೆಂಡ್ ವಾಲ್ಸಿ ನ್ ನಿಜವಾದ ಅಪರಾಧಿ ಎಂದು 1896ರಲ್ಲಿ ವರದಿ ನೀಡಿದರು. ಆದರೆ ಫ್ರಾನ್ಸ್ ಈ ವರದಿಯನ್ನು ಒಪ್ಪಲು ತಯಾರಿರಲಿಲ್ಲ. ಈ ಇಡೀ ವಿಚಾರಣಾ ಪ್ರಕ್ರಿಯೆಯನ್ನು ವರದಿ ಮಾಡಲು ಆಸ್ಟ್ರೀಯಾದಿಂದ ಆಗಮಿಸಿದ್ದ ಪತ್ರಕರ್ತ ಥಿಯೋಡರ್ ಹೆಲ್ಸಲ್ ಎಂಬವರು ಯಹೂದಿಯರಿಗೆ ಪ್ರತ್ಯೇಕ ರಾಷ್ಟ್ರದ ಆಶಯ ಮೊತ್ತಮೊದಲ ಬಾರಿ ಮುಂದಿಟ್ಟರು. ಯುರೋಪ್ನಲ್ಲಿ ಯಹೂದಿಯ ಮೇಲೆ ನಡೆಯುತ್ತಿರುವ ಹಿಂಸೆ, ಅನ್ಯಾಯ, ಕ್ರೌರ್ಯಗಳಿಗೆ ಪ್ರತ್ಯೇಕ ರಾಷ್ಟ್ರವೇ ಪರಿಹಾರ ಎಂಬ ವಾದವನ್ನು ಮುಂದಿಟ್ಟು 1896ರಲ್ಲಿ ‘ಯಹೂದಿ ರಾಷ್ಟ್ರ ’ ಎಂಬ ಪುಸ್ತಕವನ್ನೇ ಬರೆದರು. ಈ ಹಿನ್ನೆಲೆಯಲ್ಲಿ 1897ರಲ್ಲಿ ಸ್ವಿಟ್ಝರ್ಲ್ಯಾಂಡಿನ ಬಾಸೆಲ್ನಲ್ಲಿ ಜಾಗತಿಕ ಝಿಯೋನಿಸ್ಟ್ ಕಾನ್ಫರೆನ್ಸ್ ನಡೆಯಿತು ಮತ್ತು ಯಹೂದಿಯರಿಗೆ ಸ್ವತಂತ್ರ ರಾಷ್ಟ್ರ ಎಂಬ ಆಶಯವನ್ನು ಮುಂದಿಟ್ಟಿತು. ಈ ಸ್ವತಂತ್ರ ಯಹೂದಿ ರಾಷ್ಟ್ರ ವನ್ನು ಉಗಾಂಡದಲ್ಲಿ ಸ್ಥಾಪಿಸಿ ಎಂದು 1907ರಲ್ಲಿ ಬ್ರಿಟನ್ ಯಹೂದಿಯರಿಗೆ ಹೇಳಿತು. ಹಾಗಂತ, ಉಂಗಾಡವೇನೂ ಖಾಲಿ ಬಿದ್ದಿರಲಿಲ್ಲ. ಆದರೆ ಯಹೂದಿಯರು ಈ ಆಫರನ್ನು ತಿರಸ್ಕರಿಸಿದರು. ಬಳಿಕ ಯಹೂದಿಯರು 1917ರ ಬಾಲ್ಫರ್ ಘೋಷಣೆಯೊಂದಿಗೆ ಫೆಲೆಸ್ತೀನ್ನಲ್ಲಿ ಯಹೂದಿ ರಾಷ್ಟ್ರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಯಿತು. ಫೆಲೆಸ್ತೀನನ್ನು ಎರಡಾಗಿ ವಿಭಜಿಸಿ ಒಂದು ಭಾಗದಲ್ಲಿ ಇಸ್ರೇಲನ್ನು ಸ್ಥಾಪಿಸುವ ಯೋಜನೆಯನ್ನು 1947 ನವೆಂಬರ್ನಲ್ಲಿ ವಿಶ್ವಸಂಸ್ಥೆ ಪ್ರಸ್ತಾಪಿಸಿತು. ಹಾಗಂತ, ಆಗ ಫೆಲೆಸ್ತೀನ್ನಲ್ಲಿ ಜನವಾಸವಿಲ್ಲದ ಖಾಲಿ ಪ್ರದೇಶವೇನೂ ಇರಲಿಲ್ಲ. ಅಂದರೆ ಫೆಲೆಸ್ತೀನಿಯರನ್ನು ಹೊರಹಾಕಿ ಯಹೂದಿಯರನ್ನು ಕೂರಿಸುವುದು ಎಂಬುದು ಅದರ ಇಂಗಿತವಾಗಿತ್ತು. 1948 ಮೇ 15ರಂದು ಫೆಲೆಸ್ತೀನ್ನಲ್ಲಿ ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಯಿತು. ಇದು ಇತಿಹಾಸ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಫೆಲೆಸ್ತೀನ್ನಿಂದ ಹಾರುವ ಜುಜುಬಿ ರಾಕೆಟನ್ನು ತೋರಿಸಿ ಫೆಲೆಸ್ತೀನಿಯರನ್ನು ಭಯೋತ್ಪಾದಕರಂತೆ ಮತ್ತು ಇಸ್ರೇಲನ್ನು ಸಂತ್ರಸ್ತ ರಾಷ್ಟ್ರ ದಂತೆ ಚಿತ್ರಿಸುವವರು ಗಾಝಾದ ಆ ಹಿರಿಯ ವ್ಯಕ್ತಿಯ ಭಿತ್ತಿಪತ್ರವನ್ನು ಒಮ್ಮೆ ಹೃದಯಕ್ಕೆ ಒತ್ತಿ ಹಿಡಿದು ಅವಲೋಕಿಸುವುದು ಒಳ್ಳೆಯದು.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-3965167890065101512023-11-14T03:47:00.000-08:002023-11-14T03:47:57.764-08:00 15ರ ಬಾಲೆ ನೀಡಿದ ಸುಳ್ಳು ಸಾಕ್ಷ್ಯ ಇರಾಕ್ ಯುದ್ಧಕ್ಕೆ ಕಾರಣವಾಗಿತ್ತು...<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgKaVS0DdXgDCp5xOt4RpfhXpjp8N6U-ATCb553Ka0fksJTDQOWAqmv3arM_P1Bk5OrLRDryAbCBGYb38Q4X8G7ovyWg_UpBsAV1aogx-Ox8jpdwvP5CocOLG5QZI2Qeaa9ILI_w-UkrX_VFLbbr8u7eMCm6PcnP3TY5DtQAu-vRTtZH80FCmU34aonUY5D/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEgKaVS0DdXgDCp5xOt4RpfhXpjp8N6U-ATCb553Ka0fksJTDQOWAqmv3arM_P1Bk5OrLRDryAbCBGYb38Q4X8G7ovyWg_UpBsAV1aogx-Ox8jpdwvP5CocOLG5QZI2Qeaa9ILI_w-UkrX_VFLbbr8u7eMCm6PcnP3TY5DtQAu-vRTtZH80FCmU34aonUY5D/w400-h198/page%203%20pic.jpg" width="400" /></a></div><br /><p></p><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಾಯಿರಾ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಾಲಿನ್ ಪವೆಲ್</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯಾವುದೇ ಯುದ್ಧದ ಸಂದರ್ಭದಲ್ಲಿ ನೆನಪಿಗೆ ಬರುವ ಮತ್ತು ಸದಾಕಾಲ ನೆನಪಿಗೆ ಬರಬೇಕಾದ ಹೆಸರುಗಳಿವು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">“ಮಿಸ್ಟರ್ ಚೆಯರ್ಮ್ಯಾನ್ ಮತ್ತು ಕಮಿಟಿ ಸದಸ್ಯರೇ, ನಾನು ನಾಯಿರಾ. ನಾನು ಈಗಷ್ಟೇ ಕುವೈಟ್ನಿಂದ ಬಂದಿರುವೆ. ಆಗಸ್ಟ್ 2ರಂದು ನಾನು ಮತ್ತು ನನ್ನ ತಾಯಿ ಕುವೈಟ್ನಲ್ಲಿದ್ದೆವು. ನನ್ನ ದೊಡ್ಡಕ್ಕ ಜುಲೈ 29ರಂದು ಮಗುವಿಗೆ ಜನ್ಮ ನೀಡಿದಳು. ಆದ್ದರಿಂದ ಆಕೆಯ ಜೊತೆ ಸಮಯ ಕಳೆಯುವುದಕ್ಕಾಗಿ ನಾವು ಅಲ್ಲಿದ್ದೆವು. ಆಗಸ್ಟ್ 2ರಂದು ನಮ್ಮ ದೇಶದ ಮೇಲೆ ಇರಾಕ್ ಆಕ್ರಮಣ ನಡೆಸಿತು. ನನ್ನ ಅಕ್ಕ ತನ್ನ ಮಗುವನ್ನು ಉಳಿಸುವುದಕ್ಕಾಗಿ ಮರಳುಗಾಡಿನಲ್ಲಿ ಸಂಚರಿಸಿ ಹಾಲು-ನೀರು ಇಲ್ಲದೇ ಸಂಕಟ ಪಟ್ಟು ಹೇಗೋ ಸೌದಿ ಅರೇಬಿಯ ಸೇರಿಕೊಂಡಳು. ನಾನು ನನ್ನ ದೇಶಕ್ಕಾಗಿ ಏನಾದರೂ ಮಾಡಲೇಬೇಕೆಂದು ಬಯಸಿ ಅಲ್ಲೇ ಉಳಿದೆ. ಇರಾಕ್ ಆಕ್ರಮಣದ ಎರಡನೇ ವಾರ ನಾನು ಕುವೈಟ್ನ ಅಲ್ದಾರ್ ಆಸ್ಪತ್ರೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಜೊತೆ ಇತರ 12 ಮಹಿಳೆಯರೂ ಇದ್ದರು. ಇವರಲ್ಲಿ ಅತೀ ಕಿರಿಯವಳೆಂದರೆ ನಾನೇ. ನನ್ನ ಕಣ್ಣ ಮುಂದೆಯೇ ಇರಾಕಿ ಯೋಧರು ಬಂದೂಕಿನೊಂದಿಗೆ ಆಸ್ಪತ್ರೆಗೆ ಬಂದರು. ಶಿಶುಗಳನ್ನು ಇನ್ಕ್ಯುಬೇಟರ್ (ಉಷ್ಣಪೋಷಕ ಯಂತ್ರ ಅಥವಾ ಜನಿಸಿದ ಮಕ್ಕಳಿಗೆ ಕಾವು ಕೊಡುವ ಯಂತ್ರ)ನಿಂದ ಎತ್ತಿ ನೆಲದಲ್ಲಿಟ್ಟು ಸಾಯಲು ಬಿಟ್ಟರು ಮತ್ತು ಇನ್ಕ್ಯುಬೇಟರ್ಗಳನ್ನು ಹೊತ್ತೊಯ್ದರು. ಇದು ಭಯಾನಕ ಅನುಭವ. ನಾನು ಆಸ್ಪತ್ರೆಯಿಂದ ಹೊರಬಂದೆ. ನನ್ನ ಗೆಳೆಯನನ್ನು ಭೇಟಿಯಾದೆ. 22 ವರ್ಷದ ಆತನನ್ನು ಇರಾಕಿ ಯೋಧರು ಚಿತ್ರಹಿಂಸೆ ಕೊಟ್ಟು ಬಿಡುಗಡೆಗೊಳಿಸಿದ್ದರು. ಯೋಧರು ಆತನ ತಲೆಯನ್ನು ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿಸಿದ್ದರು. ಸಾಯುವ ಹಂತದಲ್ಲಿ ಮೇಲೆತ್ತಿದ್ದರು. ಆತನ ಬೆರಳುಗಳಿಂದ ಉಗುರುಗಳನ್ನು ಕಿತ್ತೆಸೆದಿದ್ದರೆ ಮತ್ತು ಆತನ ಖಾಸಗಿ ಭಾಗಗಳಿಗೆ ವಿದ್ಯುತ್ ಶಾಕ್ ಕೊಟ್ಟಿದ್ದರು</span><span style="background-color: white; color: #222222; font-family: Arial, Helvetica, sans-serif; font-size: small;">. 15 ವರ್ಷದವಳಾದ ನನಗೆ ಸದ್ದಾಮ್ ಹುಸೇನ್ ಆಕ್ರಮಣದ ಮುಂಚಿನ ಕುವೈಟನ್ನು ಮತ್ತು ಆಕ್ರಮಣ ನಂತರದ ಕುವೈಟನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಈ ವಯಸ್ಸು ಧಾರಾಳ ಸಾಕು, ಥ್ಯಾಂಕ್ಯು...”</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">1990 ಅಕ್ಟೋಬರ್ 10ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ ಕುವೈಟ್ನ ನಾಯಿರಾ ಎಂಬ 15ರ ಹರೆಯದ ಯುವತಿ ನೀಡಿದ ಈ ಸಾಕ್ಷ್ಯವನ್ನು Hill and Knowlton ಎಂಬ ಸಂಸ್ಥೆ ಪೂರ್ಣವಾಗಿ ಚಿತ್ರೀಕರಿಸಿಕೊಂಡಿತು. ಒಟ್ಟು 4 ನಿಮಿಷಗಳಷ್ಟು ಅವಧಿಯ ಸಾಕ್ಷ್ಯನುಡಿ. ಅಮೇರಿಕದಲ್ಲಿ ಕುವೈಟ್ ಪರವಾಗಿ ಜನಾಭಿಪ್ರಾಯ ರೂಪಿಸುವುದಕ್ಕಾಗಿ ಕುವೈಟ್ ಸರಕಾರವೇ ಈ </span><span style="background-color: white; color: #222222; font-family: Arial, Helvetica, sans-serif; font-size: small;">Hill and Knowlton </span><span style="background-color: white; color: #222222; font-family: Arial, Helvetica, sans-serif; font-size: small;"> ಸಂಸ್ಥೆಯನ್ನು ಸ್ಥಾಪಿಸಿತ್ತು ಮತ್ತು Citizen for a Free Kuwait Public Relations ಎಂಬ ಅಭಿಯಾನವನ್ನೂ ಇದು ಅಮೇರಿಕಾದಲ್ಲಿ ನಡೆಸುತ್ತಿತ್ತು. ನಾಯಿರಾ ನೀಡಿದ ಈ ಭಾವನಾತ್ಮಕ ಮತ್ತು ದಂಗುಬಡಿಸುವ ಸಾಕ್ಷ್ಯ ನುಡಿಯನ್ನು ಈ </span><span style="background-color: white; color: #222222; font-family: Arial, Helvetica, sans-serif; font-size: small;">Hill and Knowlton </span><span style="background-color: white; color: #222222; font-family: Arial, Helvetica, sans-serif; font-size: small;"> ಸಂಸ್ಥೆಯು ಅಮೇರಿಕದ ವಿವಿಧ ಚಾನೆಲ್ಗಳಿಗೆ ನೀಡಿತು. ಅಮೇರಿಕದ ಒಟ್ಟು 700 ಚಾನೆಲ್ಗಳಲ್ಲಿ ಈ ವೀಡಿಯೋ ಪ್ರಸಾರವಾಯಿತು. ಮುಖ್ಯವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ABC Nightline ಮತ್ತು NBC Nightly News ಎಂಬೆರಡು ಪ್ರಮುಖ ಚಾನೆಲ್ಗಳ ಮೂಲಕ ಆ ಕಾಲದಲ್ಲೇ 30ರಿಂದ 53 ಮಿಲಿಯನ್ ಜನರಿಗೆ ಈ ವೀಡಿಯೋ ತಲುಪಿತು. ಅಮೇರಿಕ ದಾದ್ಯಂತ ಈ 15ರ ಹರೆಯದ ನಾಯಿರಾ ಸುದ್ದಿಯಾದಳು. ಆಕೆಯ ಭಾವುಕ ಮಾತುಗಳು ಅನೇಕರ ಕಣ್ಣನ್ನು ತೋಯಿಸಿದುವು. 1990 ಆಗಸ್ಟ್ 2ರಂದು ಕುವೈಟ್ನ ಮೇಲೆ ಆಕ್ರಮಣ ಮಾಡಿದ ಇರಾಕ್ನ ಸದ್ದಾಮ್ ಹುಸೈನ್ ಮತ್ತು ಅವರ ಸೇನಾಪಡೆ ಎಂಥ ಕ್ರೂರಿಗಳು ಎಂದು ಜನರಾಡಿಕೊಳ್ಳತೊಡಗಿದರು. ಅಮೇರಿಕದ ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ಕನಿಷ್ಠ 10 ಬಾರಿಯಾದರೂ ಈ ನಾಯಿರಾ ಸಾಕ್ಷ್ಯ ನುಡಿಯನ್ನು ಪುನರಾ ವರ್ತಿಸಿದರು. ಅಮೇರಿಕದ 7 ಮಂದಿ ಸೆನೆಟರ್ಗಳು ನಾಯಿರಾ ಸ್ಟೋರಿಯನ್ನು ಪುನರುಚ್ಛರಿಸಿದರು. ಬ್ರಿಟನ್ ಮೂಲದ ಸರಕಾರೇತರ (NGO) ದೈತ್ಯ ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್ನ್ಯಾಶನಲ್ ಈ ಸುದ್ದಿಗೆ ಭಾರೀ ಪ್ರಚಾರವನ್ನು ನೀಡಿತು. ಈ ಸುದ್ದಿ ಜಾಗತಿಕವಾಗಿ ಪ್ರಸಾರವಾಗುವಂತೆಯೂ ಶಕ್ತಿಮೀರಿ ಯತ್ನಿಸಿತು. ಇದಕ್ಕೆ ಪೂರಕವಾಗಿ ವಿವಿಧ ರಾಷ್ಟ್ರಗಳ ಪತ್ರಿಕೆಗಳು ಮತ್ತು ಟಿ.ವಿ.ಗಳು ತಮ್ಮದೇ ಮಸಾಲೆಯನ್ನು ಬೆರೆಸಿ ಸುದ್ದಿ ಪ್ರಸಾರ ಮಾಡಿದುವು. ಸದ್ದಾಮ್ ಹುಸೈನ್ರನ್ನು ಅತ್ಯಂತ ಕ್ರೂರಿ ಮತ್ತು ಮನುಷ್ಯ ದ್ರೋಹಿಯಾಗಿ ಬಿಂಬಿಸುವುದಕ್ಕೆ ಮತ್ತು ಕುವೈಟ್ ಮೇಲಿನ ಅವರ ಆಕ್ರಮಣಕ್ಕೆ ಪ್ರತಿಯಾಗಿ ಇರಾಕ್ ಮೇಲೆ ದಾಳಿ ನಡೆಸುವುದಕ್ಕೆ ಅಮೇರಿಕ ಸಹಿತ ಜಾಗತಿಕ ರಾಷ್ಟ್ರಗಳಿಗೆ ಈ ಸಾಕ್ಷ್ಯ ನುಡಿ ತೀವ್ರ ಪ್ರಚೋದನೆಯನ್ನೂ ನೀಡಿತು. ಅಮೇರಿಕದ ನಾಗರಿಕರ ಮೇಲಂತೂ ಈ ನಾಯಿರಾಳ ಮಾಹಿತಿಗಳು ತೀವ್ರ ಪ್ರಭಾವವನ್ನು ಬೀರಿದುವು. ಇರಾಕ್ ವಿರುದ್ಧ ದಾಳಿ ಮಾಡುವಂತೆ ಅಧ್ಯಕ್ಷ ಬುಶ್ರ ಮೇಲೆ ಅವರು ಒತ್ತಡವನ್ನೂ ಹೇರಿದರು. ಹೀಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1991 ಜನವರಿ 17ರಂದು ಅಮೇರಿಕ ನೇತೃತ್ವದ ಮಿತ್ರಪಡೆಗಳು ಇರಾಕ್ ಮೇಲೆ ದಾಳಿ ಮಾಡಿತು. ಸೈನಿಕರು ಮತ್ತು ನಾಗರಿಕರೂ ಸೇರಿದಂತೆ ಸುಮಾರು 30ರಿಂದ 40 ಸಾವಿರದಷ್ಟು ಇರಾಕಿಯನ್ನರು ಈ ದಾಳಿಗೆ ಬಲಿಯಾದರು. ಈ ಯುದ್ಧದಲ್ಲಿ ಇರಾಕ್ ದಯ ನೀಯವಾಗಿ ಸೋತಿತು ಮತ್ತು ಕುವೈಟ್ನಿಂದ ಹಿಂಜರಿಯಿತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯುದ್ಧ ಮುಗಿದು ನಾಶ-ನಷ್ಟಗಳು ಸಂಭವಿಸಿದ ಒಂದು ವರ್ಷದ ಬಳಿಕ, 1992ರಲ್ಲಿ ಒಂದೊAದೇ ಸತ್ಯ ಬಹಿರಂಗವಾಗ ತೊಡಗಿತು. ಈ ನಾಯಿರಾ ಎಂಬ 15 ವರ್ಷದ ಬಾಲಕಿ ಬೇರಾರೂ ಅಲ್ಲ, ಅಮೇರಿಕದಲ್ಲಿರುವ ಕುವೈಟ್ ರಾಯಭಾರಿ ಸೌದ್ ಅಲ್ ಸಬಾರ ಪುತ್ರಿ. ಈಕೆಯ ಪೂರ್ತಿ ಹೆಸರು ನಾಯಿರಾ ಅಲ್ ಸಬಾ. ಆದರೆ ಸಾಕ್ಷ್ಯನುಡಿಯ ಸಂದರ್ಭದಲ್ಲಾಗಲಿ ಮುಂದಿನ ಒಂದು ವರ್ಷದವರೆಗಾಗಲಿ ಆಕೆಯ ಪೂರ್ಣ ಹೆಸರನ್ನು ಬಹಿರಂಗಪಡಿಸಿಯೇ ಇರಲಿಲ್ಲ. ಅಲ್ಲದೇ, ಈ ಇಡೀ ಸಾಕ್ಷ್ಯನುಡಿಯು ಪೂರ್ವ ನಿರ್ಧರಿತ ಚಿತ್ರಕತೆಯಾಗಿತ್ತು. ಈ ಚಿತ್ರಕತೆ ರಚಿಸಿದ್ದು ಆರಂಭದಲ್ಲಿ ಹೇಳಲಾದ </span><span style="background-color: white; color: #222222; font-family: Arial, Helvetica, sans-serif; font-size: small;">Hill and Knowlton</span><span style="background-color: white; color: #222222; font-family: Arial, Helvetica, sans-serif; font-size: small;">. ಕುವೈಟ್ನ ಪರವಾಗಿ ಅಮೇರಿಕದಲ್ಲಿ ಅಭಿಯಾನ ನಡೆಸುತ್ತಿದ್ದ ಈ ಸಂಸ್ಥೆಯು ಉದ್ದೇಶಪೂರ್ವಕವಾಗಿ ಹೆಣೆದ ತಂತ್ರದ ಭಾಗವಾಗಿಯೇ ಈ ನಾಯಿರಾ ಅಲ್ ಸಬಾ ವಿಶ್ವಸಂಸ್ಥೆಯ ಮಾ ನವ ಹಕ್ಕುಗಳ ಸಭೆಯಲ್ಲಿ ಸಾಕ್ಷ್ಯ ನುಡಿದಿದ್ದಳು. (Legislator ಟು probe allegations of Iraqi atrocities: Accused identified as daughter of Kuwait Ambassador to US -The Washington Post - January 7, 1992)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ವಿವರ ಬಹಿರಂಗಕ್ಕೆ ಬಂದ ಬಳಿಕ ಇನ್ನಷ್ಟು ಸತ್ಯಗಳೂ ಹೊರಬಿದ್ದುವು. ಈ ಸಾಕ್ಷ್ಯನುಡಿಗೆ ವ್ಯಾಪಕ ಪ್ರಚಾರ ಸಿಗುವಲ್ಲಿ ಶ್ರಮಿಸಿದ್ದ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸ್ವತಃ ಮುಜುಗರಕ್ಕೆ ಒಳಗಾಯಿತು. ಸುಳ್ಳು ಹೇಳಿ ದಾರಿ ತಪ್ಪಿಸಿದುದಕ್ಕಾಗಿ ಆಮ್ನೆಸ್ಟಿ ಇಂಟರ್ ನ್ಯಾಶನಲ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಜಾನ್ ಹೀಲಿಯವರು ಬುಶ್ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. (Amnesty responds Healey John- February ೨೮, 1991)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ನಡುವೆ ಮಧ್ಯೇಶ್ಯಾ ಕೇಂದ್ರೀಕರಿಸಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಆಯೋಗವು ತನಿಖೆಗಿಳಿಯಿತು. ಕುವೈಟ್ ಆಕ್ರಮಣದ ವೇಳೆ ಇರಾಕ್ ಸೇನೆ ನಡೆಸಿರಬಹುದಾದ ಮಾನವ ಹಕ್ಕು ಉಲ್ಲಂಘನೆಯ ಕುರಿತು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸ ತೊಡಗಿತು. ಮಾತ್ರವಲ್ಲ, ನಾಯಿರಾಳ ಸಾಕ್ಷ್ಯನುಡಿಯಲ್ಲಿ ಹೇಳಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಹೇಳಿತು. ಆಯೋಗದ ನಿರ್ದೇಶಕ ಆ್ಯಂಡ್ರೂ ವೆಟ್ಲಿ ಈ ಕುರಿತಂತೆ ವಿಸ್ತೃತ ವರದಿಯನ್ನೇ ಬಿಡುಗಡೆಗೊಳಿಸಿದರು. ನಾಯಿರಾ ಹೇಳಿರುವ ಕತೆಯು ಕುವೈಟ್ ನಿಂದ ಹೊರಗಿರುವ ಮತ್ತು ಕುವೈಟನ್ನು ಚೆನ್ನಾಗಿ ಬಲ್ಲವರು ಕೃತ್ರಿಮವಾಗಿ ತಯಾರಿಸಿದ್ದಾಗಿದೆ ಎಂದು ಮುಲಾಜಿಲ್ಲದೇ ಹೇಳಿದರು. ಅಲ್ಲದೇ, ನಾಯಿರಾ ಉಲ್ಲೇಖಿಸಿರುವ ಅಲ್ದಾರ್ ಆಸ್ಪತ್ರೆಯ ವೈದ್ಯ ರಾದ ಅಝೀಝï ಅಬು ಹಮದ್ರನ್ನು The Independent ಪತ್ರಿಕೆ ಭೇಟಿಯಾಗಿ ಮಾತುಕತೆ ನಡೆಸಿತು. ಅವರು ನಾಯಿರಾ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು. ಅಲ್ದಾರ್ ಆಸ್ಪತ್ರೆಗೆ ಇರಾಕಿ ಯೋಧರು ಬಂದಿರುವುದು ನಿಜ. ಆಗ ಈ ಆಸ್ಪತ್ರೆಯ ಮೆಟರ್ನಿಟಿ ವಿಭಾಗದಲ್ಲಿ 25ರಿಂದ 30ರಷ್ಟು ಶಿಶುಗಳು ಇದ್ದುವು. ಇರಾಕಿ ಯೋಧರು ಇಲ್ಲಿನ ಇನ್ಕ್ಯುಬೇಟರ್ ಕೊಂಡೂ ಹೋಗಿಲ್ಲ, ಶಿಶುಗಳನ್ನು ಸಾಯಲೂ ಬಿಟ್ಟಿಲ್ಲ ಎಂದವರು ಹೇಳಿದರು. (Iraqi Baby Atrocity is revealed as myth- January 1992).</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆದರೆ ಸತ್ಯಗಳು ಹೀಗೆ ಬಿಡಿಬಿಡಿಯಾಗಿ ಬಹಿರಂಗವಾಗುವ ಮೊದಲೇ ನಾಯಿರಾಳ ಮೂಲಕ ಹರಡಲಾದ ಸುಳ್ಳು ಯಾವ ಪರಿಣಾಮವನ್ನು ಬೀರಬೇಕಿತ್ತೋ ಅವೆಲ್ಲವನ್ನೂ ಬೀರಿಯಾಗಿತ್ತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಕಾಲಿನ್ ಪವೆಲ್</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2002ರಿಂದ 2005ರ ವರೆಗೆ ಅಮೇರಿಕದ ರಾಜ್ಯ ಕಾರ್ಯದರ್ಶಿ ಯಾಗಿದ್ದ ಕಾಲಿನ್ ಪವೆಲ್ ಅವರು 2003 ಫೆಬ್ರವರಿ 5ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣವು ಜಗತ್ತಿನ ಕುಖ್ಯಾತ ಭಾಷಣಗಳಲ್ಲಿ ಒಂದು. ಆ ಭಾಷಣದ ಆರಂಭದಿAದ ಕೊನೆಯವರೆಗೆ ಅವರು ಕೈಯಲ್ಲಿ ಶೀಶೆಯೊಂದನ್ನು ಹಿಡಿದುಕೊಂಡಿದ್ದರು. ಈ ಶೀಶೆಯಲ್ಲಿರುವುದು ಭಯಾನಕ ಅಂತ್ರಾಕ್ಸ್ ರಾಸಾಯನಿಕ ಎಂದೂ ಹೇಳಿದ್ದರು. ಭದ್ರತಾ ಮಂಡಳಿಯ ಅಷ್ಟೂ ರಾಷ್ಟ್ರಗಳ ಸದಸ್ಯರ ಮುಂದೆ ಅವರು ಆವೇಶಪೂರ್ಣ ಭಾಷಣ ಮಾಡಿದ್ದರು. ಇರಾಕ್ನ ಅಧ್ಯಕ್ಷ ಸದ್ದಾಮ್ ಹುಸೇನ್ ಜಗತ್ತಿಗೆ ಬೆದರಿಕೆಯಾಗಿದ್ದಾರೆ, ಸಮೂಹ ನಾಶಕ ಅಸ್ತ್ರಗಳನ್ನು ಅವರು ಅಭಿವೃದ್ಧಿಪಡಿಸುತ್ತಿದ್ದಾರೆ, ಮಾನವ ರಹಿತ ವಾಹನ ಮತ್ತು ಆಕಾಶ ಮಾರ್ಗದ ಮೂಲಕ ಅವರು ಈ ಅಸ್ತ್ರವನ್ನು ಅಮೇರಿಕ ಸಹಿತ ನೆರೆಕರೆಯ ರಾಷ್ಟ್ರಗಳ ವಿರುದ್ಧ ಬಳಸಲಿದ್ದಾರೆ... ಎಂದೆಲ್ಲಾ ಆ ಭಾಷಣದಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಸದ್ದಾಮ್ರನ್ನು ತಡೆಯದಿದ್ದರೆ ಜಗತ್ತಿನ ವಿನಾಶ ಖಂಡಿತ... ಎಂಬ ರೀತಿಯಲ್ಲಿ ಅವರು ಬೆದರಿಸಿದ್ದರು. ಮಾತ್ರವಲ್ಲ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಸಮೂಹ ನಾಶಕ ಅಸ್ತ್ರಗಳು ಅಲ್ ಕೈದಾಕ್ಕೆ ರವಾನೆ ಯಾಗುವ ಭೀತಿಯಿದ್ದು, ಸದ್ದಾಮ್ ಮತ್ತು ಅಲ್ ಕೈದಾ ನಡುವೆ ಆಪ್ತ ಸಂಬಂಧ ಇದೆ ಎಂದೂ ಸಭೆಗೆ ವಿವರಿಸಿದ್ದರು. ಕೈಯಲ್ಲಿ ಶೀಶೆ ಹಿಡಿದು ಪವೆಲ್ ಮಾಡಿದ ಭಾಷಣ ಆ ಕಾಲದಲ್ಲಿ ಭಾರೀ ವೈರಲ್ ಆಗಿತ್ತು. ಅಮೇರಿಕದ ನಾಗರಿಕರಷ್ಟೇ ಅಲ್ಲ, ಇರಾಕ್ ಅಕ್ಕ-ಪಕ್ಕದ ರಾಷ್ಟ್ರಗಳೂ ಭಯಭೀತವಾದುವು. ಯುರೋಪಿಯನ್ ರಾಷ್ಟ್ರಗಳೂ ಪವೆಲ್ ಮಾತುಗಳಿಂದ ತೀವ್ರ ಪ್ರಭಾವಿತವಾದುವು. ಅಮೇರಿಕದ ಗುಪ್ತಚರ ಸಂಸ್ಥೆ CIA ನೀಡಿದ ವರದಿ ಎಂಬ ನೆಲೆಯಲ್ಲಿ ಅದು ವ್ಯಾಪಕ ಚರ್ಚೆಗೆ ಮತ್ತು ವಿಶ್ವಾಸಕ್ಕೂ ಒಳಗಾಯಿತು. ಈ ಭಾಷಣದ ಬಳಿಕ ಜಾಗತಿಕವಾಗಿ ಉಂಟಾದ ಇರಾಕ್ ವಿರೋಧಿ ಅಲೆಯನ್ನೇ ಬಳಸಿಕೊಂಡು ಮಾರ್ಚ್ 19, 2003ರಂದು ಇರಾಕ್ ಮೇಲೆ ಅಮೇರಿಕ ಆಕ್ರಮಣ ನಡೆಸಿತು. ವಿಶೇಷ ಏನೆಂದರೆ, ಈ ಆಕ್ರಮಣಕ್ಕಿಂತ ಮೊದಲೇ ವಿಶ್ವಸಂಸ್ಥೆಯ 70ರಷ್ಟು ಸೈಟ್ ಇನ್ಸ್ಪೆಕ್ಟರ್ಗಳು ಇರಾಕ್ಗೆ ತೆರಳಿ ಸಮೂಹ ನಾಶಕ ಅಸ್ತ್ರಕ್ಕಾಗಿ ಹುಡುಕಾಡಿದ್ದರು. ಆದರೆ ಅದು ಪತ್ತೆಯಾಗಿರಲಿಲ್ಲ. ಆದರೂ ಪವೆಲ್ ಅವರ ಭಾಷಣ ಮತ್ತು ಕೈಯಲ್ಲಿದ್ದ ಶೀಶೆಯು ವಿಶ್ವಸಂಸ್ಥೆಯ 70ರಷ್ಟು ತಪಾಸಕರನ್ನೇ ನಾಲಾಯಕ್ಗೊಳಿಸಲಾಯಿತು. ವಿಶ್ವಸಂಸ್ಥೆಗಿಂತ ಅಮೇರಿಕದ ಹೇಳಿಕೆಯಲ್ಲೇ ಜಗತ್ತು ನಂಬಿಕೆಯನ್ನಿಟ್ಟಿತು. ಈ ನಡುವೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಮೇರಿಕದ ಉಪಾಧ್ಯಕ್ಷರಾಗಿದ್ದ ಡಿಕ್ ಚೆನಿಯ ಕಾರ್ಯದರ್ಶಿ ಲಿಬ್ಬಿ ಮತ್ತು ರಕ್ಷಣಾ ಸಚಿವರಾಗಿದ್ದ ಡೊನಾಲ್ಡ್ ರಮ್ಸ್ಫೆಲ್ಡ್ ಅವರ ಕಾರ್ಯದರ್ಶಿ ಡಗ್ಲಾಸ್ ವೈಟ್ ಅವರು ಸರಣಿ ಸುಳ್ಳುಗಳನ್ನು ಹಂಚತೊಡಗಿದರು. ಅಣ್ವಸ್ತ್ರ ತಯಾರಿಸಲು ಬೇಕಾದ ಯುರೇನಿಯಂ ಅನ್ನು ನೈಜರ್ ದೇಶದಿಂದ ಸದ್ದಾಮ್ ಹುಸೇನ್ ಪಡೆದಿದ್ದಾರೆ ಎಂಬುದೂ ಈ ಸುಳ್ಳುಗಳಲ್ಲಿ ಒಂದು. ನಿಜವಾಗಿ, ನೈಜರ್ನಲ್ಲಿದ್ದ ಅಮೇರಿಕದ ರಾಯಭಾರಿ ವಿಲ್ಸನ್ ಅವರಲ್ಲಿ ಈ ಬಗ್ಗೆ ಪತ್ತೆಕಾರ್ಯ ನಡೆಸುವಂತೆ ಅಮೇರಿಕದ ಗುಪ್ತಚರ ಸಂಸ್ಥೆ (CIA) ಕೇಳಿಕೊಂಡಿತ್ತು. ಆ ಬಗ್ಗೆ ಅವರು ಗುಪ್ತವಾಗಿ ಶೋಧನೆಯನ್ನೂ ನಡೆಸಿದ್ದರು ಮತ್ತು ಅಂಥ ಯಾವುದೂ ನಡೆದಿಲ್ಲ ಎಂದು 2002ರಲ್ಲೇ ಅವರು ವರದಿಯನ್ನೂ ಕೊಟ್ಟಿದ್ದರು. (Former C</span><span style="background-color: white; color: #222222; font-family: Arial, Helvetica, sans-serif; font-size: small;">heney aid to and guilty - 7 March, 2007) ಆದರೆ ಈ ಸತ್ಯವನ್ನೇ ಮುಚ್ಚಿಟ್ಟು ಈ ಇಬ್ಬರು ಕಾರ್ಯದರ್ಶಿಗಳು ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹರಡತೊಡಗಿದರು.</span></div><div><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇರಾಕ್ ನಾಶವಾದರೂ ಸಮೂಹ ವಿನಾಶಕ ಅಸ್ತ್ರ ಅಮೇರಿಕನ್ ಸೇನೆಗಾಗಲಿ, ಮಿತ್ರ ಪಡೆಗಾಗಲಿ ಸಿಗಲೇ ಇಲ್ಲ. ಈ ಬಗ್ಗೆ ಕಾಲಿನ್ ಪವೆಲ್ ಅವರನ್ನು ಅಮೇರಿಕನ್ ಪಾರ್ಲಿಮೆಂಟ್ನಲ್ಲಿ ಡೆಮಾಕ್ರಾಟಿಕ್ ಪಕ್ಷದ ಗ್ಯಾರಿ ಅಕರ್ಮ್ಯಾನ್ ತರಾಟೆಗೆ ತೆಗೆದುಕೊಂಡಿದ್ದರು. ನೀವು ಸುಳ್ಳು ಹೇಳಿದ್ದೀರಿ ಎಂದೂ ಛೇಡಿಸಿದ್ದರು. ಆಗಲೂ ಪವೆಲ್ ಅದನ್ನು ಒಪ್ಪಿರಲಿಲ್ಲ. (Iraq Truth : Powell defends Bush- February 11, 2004) ಆದರೆ 2011ರಲ್ಲಿ ಅಲ್ ಜಝೀರಾ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ತಪ್ಪನ್ನು ಒಪ್ಪಿಕೊಂಡಿದ್ದರು. CIA ನೀಡಿದ ಮಾಹಿತಿಗಳು ತಪ್ಪಾಗಿದ್ದುವು ಎಂದಿದ್ದರು. (Colin Powell regrets Iraqi war intelligence: 11 Sep. 2011) ಮಾತ್ರವಲ್ಲ, ತಪ್ಪು ಮಾಹಿತಿ ನೀಡಿದ್ದಕ್ಕಾಗಿ 2017ರಲ್ಲಿ ಬ್ಲೂಂಬರ್ಗ್ ಗೆ ನೀಡಿದ ಸಂದರ್ಶ ನದಲ್ಲಿ CIA ಯನ್ನು ಕಟುವಾಗಿ ಟೀಕಿಸಿದ್ದರು. ಅವರು 2021 ಅಕ್ಟೋಬರ್ 18ರಂದು ಕೊರೋನಾ ದಿಂದಾಗಿ ತಮ್ಮ 84ನೇ ಪ್ರಾಯದಲ್ಲಿ ನಿಧನರಾದರು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಮಾಸ್ನಿಂದ 40 ಇಸ್ರೇಲಿ ಮಕ್ಕಳ ಶಿರಚ್ಛೇದ, ಡಜನ್ನುಗಟ್ಟಲೆ ಇಸ್ರೇಲಿ ಬಾಲಕಿಯನ್ನು ಲೈಂಗಿಕ ಕಾರ್ಯಕರ್ತೆಯರಾಗಿ ಇಟ್ಟು ಕೊಂಡಿರುವ ಹಮಾಸ್, ಪುಟ್ಟ ಮಗುವನ್ನು ಅಪಹರಿಸಿದ ಹಮಾಸ್, ಗಾಝಾದ ಆಸ್ಪತ್ರೆಗೆ ರಾಕೆಟ್ ಹಾರಿಸಿ ತನ್ನದೇ 500ಕ್ಕಿಂತಲೂ ಅ ಧಿಕ ಮಂದಿಯನ್ನು ಕೊಂದ ಹಮಾಸ್, ಅಲ್ಕೈದಾ ಧ್ವಜವನ್ನು ಎತ್ತಿ ಹಿಡಿದ ಹಮಾಸ್ ಕಾರ್ಯಕರ್ತರು... ಇತ್ಯಾದಿ ಇತ್ಯಾದಿ ಸುದ್ದಿಗಳನ್ನು ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ, ಸೋಷಿಯಲ್ ಮೀಡಿಯಾದ ಈ ಕಾಲದಲ್ಲಿ ಸುಳ್ಳು ಗಳಿಗೆ ಹೆಚ್ಚು ಸಮಯ ಬಾಳಿಕೆಯಿಲ್ಲ ಮತ್ತು ಹಮಾಸ್ಗೆ ಸಂಬಂಧಿಸಿದ ಈ ಎಲ್ಲ ಸುದ್ದಿಗಳೂ ಸುಳ್ಳು ಎಂಬುದು ಪುರಾವೆ ಸಮೇತ ಸಾಬೀತಾಗಿವೆ ಎಂಬುದೇ ಸಮಾಧಾನಕರ.</span></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-50824824640785148112023-10-28T06:22:00.000-07:002023-10-28T06:22:42.541-07:00 ಆ ಮಯ್ಯತ್ ಸಂಸ್ಕಾರದಲ್ಲಿ 8 ಮಂದಿಯಷ್ಟೇ ಇದ್ದರು...<p><br /></p><span style="background-color: white; color: #222222; font-family: Arial, Helvetica, sans-serif; font-size: small;"><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgqCcw5X1pGI_ldkqfqVxgnJ1uCL0wOkB1aMIfoep8b7veD5-DZACA8Tnvpzs7nusD7p8li8Fa9Hc3PkBQGDGWwLpSlXZPP_hUBBLYzrqvwbn1lJmACsZy1sMsqHzSqPK0TEZD-ly8c0j788RnSxMkSzPOwSsBg69De3dkGHwgkVNrgR_hYLvAp6OZDKXLI/s1352/page%203%20pic%20(2).jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEgqCcw5X1pGI_ldkqfqVxgnJ1uCL0wOkB1aMIfoep8b7veD5-DZACA8Tnvpzs7nusD7p8li8Fa9Hc3PkBQGDGWwLpSlXZPP_hUBBLYzrqvwbn1lJmACsZy1sMsqHzSqPK0TEZD-ly8c0j788RnSxMkSzPOwSsBg69De3dkGHwgkVNrgR_hYLvAp6OZDKXLI/w400-h198/page%203%20pic%20(2).jpg" width="400" /></a></div><br /><span style="background-color: white; color: #222222; font-family: Arial, Helvetica, sans-serif; font-size: small;"><br /></span></div></span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಆ ಮಹಿಳೆಯ ಮೃತದೇಹವನ್ನು ಸಂಸ್ಕಾರಕ್ಕಾಗಿ ಮಸೀದಿಗೆ ಕೊಂಡೊಯ್ಯು ತ್ತಿದ್ರು. ಎಣಿಕೆಯ ಏಳು ಅಥವಾ ಎಂಟು ಮಂದಿಯಷ್ಟೇ ಗುಂಪಿನಲ್ಲಿದ್ದರು. ಇವರಲ್ಲಿ ನಾಲ್ಕು ಮಂದಿ ಮೃತದೇಹವನ್ನಿರಿಸಲಾದ ಮಂಚಕ್ಕೆ ಹೆಗಲು ಕೊಟ್ಟಿದ್ದರು. ಉಳಿದ ಮೂರೋ-ನಾಲ್ಕೋ ಮಂದಿ ಮಂಚದ ಹಿಂದೆ-ಮುಂದೆ ಇದ್ದರು. ನಂಗೆ ಆ ಮೃತ ಮಹಿಳೆಯ ಪರಿಚಯವಿಲ್ಲ. ಆದರೆ ಮನಸ್ಸು ತಡೆಯಲಿಲ್ಲ. ಪುರುಷನ ಮೃತದೇಹವಾಗಿರುತ್ತಿದ್ದರೆ ಹೀಗಿರುತ್ತಿತ್ತೇ... ಎಂದು ಆಲೋಚಿಸಿದೆ. ಈ ಮೃತ ಮಹಿಳೆಗೆ ಪತಿ-ಮಕ್ಕಳಿಲ್ಲವೇ, ಕುಟುಂಬ ಇಲ್ಲವೇ, ಗೆಳೆಯರಿಲ್ಲವೇ... ಎಂದೆಲ್ಲಾ ಚಿಂತಿಸಿದೆ. ಬಳಿಕ ಆ ಗುಂಪಿನೊಂದಿಗೆ ಸೇರಿಕೊಂಡೆ. ಮಯ್ಯತ್ ಸಂಸ್ಕಾರದಲ್ಲಿ ಭಾಗಿಯಾದೆ. ಆ ಗುಂಪಿನಲ್ಲಿದ್ದ ಓರ್ವರು ನನಗೆ ಅಷ್ಟಿಷ್ಟು ಪರಿಚಿತರಿದ್ದರು. ತಳಮಳ ತಡೆಯಲಾಗದೇ ನನ್ನ ಅನುಮಾನವನ್ನು ಮುಂದಿಟ್ಟೆ. ನಿಜವಾಗಿ, ಆ ಮಹಿಳೆ ಭಿಕ್ಷುಕಿಯೋ ಇನ್ನಾವುದೋ ಊರಿನಿಂದ ಬಂದು ಮೃತಪಟ್ಟ ಅಪರಿಚಿತೆಯೋ ಆಗಿರಲಿಲ್ಲ. ಪತಿ ಮೃತಪಟ್ಟಿದ್ದರು. ಮಕ್ಕಳಿರಲಿಲ್ಲ. ಇವೆರಡರ ಹೊರತಾಗಿ ಅದೇ ಊರಿನಲ್ಲಿ ಬದುಕಿದ್ದ ಹಿರಿ ಜೀವಿಯಾಗಿದ್ದರು. ನೆರೆಕರೆಯವರು ಮನೆಗೆ ಭೇಟಿಕೊಟ್ಟು ಹೋಗಿದ್ದಾರೆ. ತೀರಾ ಹತ್ತಿರದ ಕುಟುಂಬಿಕರು ಮೃತದೇಹವನ್ನು ನೋಡುವ ಸುನ್ನತನ್ನು ಪಾಲಿಸಿ ಮರಳಿದ್ದಾರೆ. ಹೀಗೆ ಮರಳದೇ ಉಳಿದ ತೀರಾ ಹತ್ತಿರದ ಕುಟುಂಬಿಕರು ಮತ್ತು ಒಂದಿಬ್ಬರು ನೆರೆಕರೆಯವರಷ್ಟೇ ಮಯ್ಯತ್ ಸಂಸ್ಕಾರದವರೆಗೆ ಉಳಿದಿದ್ದಾರೆ...’</span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗೆಳೆಯರೊಬ್ಬರು ಮೊನ್ನೆ ತೀರಾ ನೋವಿನಿಂದ ಈ ವಿಷಯ ಹಂಚಿಕೊಂಡರು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಾಗಂತ, ಈ ಒಂಟಿ ಘಟನೆಯನ್ನು ಎತ್ತಿಕೊಂಡು, ಎಲ್ಲ ಮೃತ ಮಹಿಳೆಯ ಪರಿಸ್ಥಿತಿಯೂ ಹೀಗೆಯೇ ಎಂದು ಷರಾ ಬರೆದು ಬಿಡುವಂತಿಲ್ಲ. ಬಿಡಿ ಘಟನೆಯನ್ನು ಬಿಡಿಯಾಗಿಯೇ ನೋಡಬೇಕು ಮತ್ತು ಸಾರ್ವತ್ರಿಕವಾಗಿ ಅನ್ವಯಿಸಬಾರದು ಎಂಬುದೂ ಸರಿ. ಆದರೂ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ನಿಜಕ್ಕೂ ಈ ಮೇಲಿನ ಘಟನೆ ಒಂಟಿಯೆಂದು ತಿರಸ್ಕರಿಸಿ ಬಿಡ ಬಹುದಾದಷ್ಟು ಕ್ಷುಲ್ಲಕವೇ? ಮನಸಿಗೆ ಕಸಿವಿಸಿಯಾಗುವ ಇಂಥ ಸನ್ನಿವೇಶ ಬೇರೆ ಕಡೆ ನಡೆದಿಲ್ಲವೇ, ನಡೆಯುತ್ತಿಲ್ಲವೇ? ಅಥವಾ ಇದು ಗಂಭೀರವಾಗಿ ಪರಿಗಣಿಸತಕ್ಕ ವಿಷಯವೇ ಅಲ್ಲವೇ? ಉಸಿರು ನಿಲ್ಲುವುದರೊಂದಿಗೆ ವ್ಯಕ್ತಿಗೂ ಈ ಜಗತ್ತಿನ ಜಂಜಾಟಕ್ಕೂ ಪರದೆ ಬೀಳುತ್ತದೆ. ಆ ಬಳಿಕ ಯಾರು ಸೇರಿದರೂ, ಎಷ್ಟು ಮಂದಿ ಸೇರಿದರೂ ಅಥವಾ ಸೇರದೇ ಇದ್ದರೂ ಆ ಮೃತ ವ್ಯಕ್ತಿಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬ ನಿಲುವೇ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಗೊತ್ತಿಲ್ಲ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹತ್ತಕ್ಕಿಂತಲೂ ಕಡಿಮೆ ಮಂದಿ ಸೇರಿಕೊಂಡು ಮೃತದೇಹವನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದು ಕ್ಷಣ ಕಸಿವಿಸಿಗೋ, ತಳಮಳಕ್ಕೋ ಆಘಾತಕ್ಕೋ ಕಾರಣವಾಗುವುದರಲ್ಲಿ ಅಚ್ಚರಿ ಏನಿಲ್ಲ. ಇದು ಸಹಜ ಅಲ್ಲ. ಒಂದು ಕಡೆ ಮೃತದೇಹವನ್ನು ನೋಡುವುದಕ್ಕೆ ಸಾವಿರಾರು ಮಂದಿ ಸೇರುವ ಸನ್ನಿವೇಶಗಳು ನಡೆಯುತ್ತವೆ. ಮೃತದೇಹವನ್ನು ಮಸೀದಿಗೆ ಕೊಂಡೊಯ್ಯುವ ವೇಳೆಯೂ ಈ ಜನಸಾಗರ ಹಿಂಬಾಲಿಸುತ್ತದೆ. ಎಲ್ಲೆಲ್ಲಿಂದಲೋ, ಯಾವ್ಯಾವ ಊರಿನಿಂದಲೋ ಜನರು ದಂಡು ದಂಡಾಗಿ ಆಗಮಿಸುತ್ತಾರೆ. ಮೃತ ವ್ಯಕ್ತಿಯನ್ನು ಕೊನೆಯ ಬಾರಿ ಕಾಣ್ತುಂಬಿಕೊಳ್ಳುವುದಕ್ಕಾಗಿ ನೂಕು-ನುಗ್ಗಲು ನಡೆಯುತ್ತದೆ. ಆ ಬಳಿಕ ಸಂತಾಪ ಸಭೆಗಳೂ ನಡೆಯುತ್ತವೆ. ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇವೆಲ್ಲ ನಡೆಯಬಾರದು ಎಂದಲ್ಲ. ಓರ್ವ ಅಸಾಮಾನ್ಯ ವ್ಯಕ್ತಿ ಮೃತಪಟ್ಟಾಗ ಇವೆಲ್ಲ ಸಹಜ. ಮತ್ತು ಇಲ್ಲೂ ಒಂದು ವಿಶೇಷತೆ ಇದೆ. ಅದೇನೆಂದರೆ, ಹೀಗೆ ಮೃತಪಟ್ಟವರು ಪುರುಷರೇ ಆಗಿರುತ್ತಾರೆ. ಮಹಿಳೆಯರಿಗೆ ಸಂಬಂಧಿಸಿ ಇಂಥ ಸನ್ನಿವೇಶಗಳು ಶೂನ್ಯ ಅನ್ನುವಷ್ಟು ಕಡಿಮೆ. ಅಸಾಮಾನ್ಯರು ಬಿಡಿ, ಸಾಮಾನ್ಯ ಪುರುಷ ಮತ್ತು ಮಹಿಳೆಯರು ಮೃತಪಟ್ಟಾಗಲೂ ಈ ವ್ಯತ್ಯಾಸ ಕಂಡೇ ಕಾಣುತ್ತದೆ. ಸಾಮಾನ್ಯ ಪುರುಷ ವ್ಯಕ್ತಿ ಮೃತಪಟ್ಟ ಸುದ್ದಿಗೆ ಸ್ಪಂದಿಸುವಷ್ಟು ತೀವ್ರ ವಾಗಿ ಸಾಮಾನ್ಯ ಮಹಿಳೆ ಮೃತಪಟ್ಟ ಸುದ್ದಿಗೆ ಸಮಾಜ ಅಥವಾ ಸಂಬಂಧಿಕರೇ ಸ್ಪಂದಿಸುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮಹಿಳೆ ಎಷ್ಟು ಹೊಣೆ? ಪುರುಷ ಎಷ್ಟು ಹೊಣೆ? ಸಮುದಾಯ ಎಷ್ಟು ಹೊಣೆ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯಾವುದೇ ಓರ್ವ ಪುರುಷ ಅಸಾಮಾನ್ಯ ವ್ಯಕ್ತಿಯಾಗಿರುವುದರ ಹಿಂದೆ ಆತನ ತಾಯಿ ಮತ್ತು ಪತ್ನಿಯ ಪ್ರಮುಖ ಪಾತ್ರ ಇರುತ್ತದೆ. ತಾಯಿ ಮತ್ತು ಪತ್ನಿಯ ಸೇವಾ ಮನೋಭಾವ ಮತ್ತು ನಿಸ್ವಾರ್ಥ ಶ್ರಮದ ಹೊರತು ಪುರುಷನೋರ್ವ ಅಪ್ರತಿಮ ಸಮಾಜ ಸೇವಕ, ಕೊಡುಗೈ ದಾನಿ ಆಗುವ ಸಾಧ್ಯತೆ ಕಡಿಮೆ. ವ್ಯಕ್ತಿಯೋರ್ವ ಸಮಾಜ ಸೇವಕನೋ ಇನ್ನೇನೋ ಆಗಿ ಗುರುತಿಸಿ ಕೊಳ್ಳುವಾಗ ಮನೆಯನ್ನು ತಾಯಿ ಮತ್ತು ಪತ್ನಿ ನಿಭಾಯಿಸುತ್ತಿರುತ್ತಾರೆ. ಯಾವುದೋ ಕರೆಗೆ ಸ್ಪಂದಿಸಿ ಪುರುಷ ಹೊತ್ತಲ್ಲದ ಹೊತ್ತಿನಲ್ಲೂ ಮನೆಯಿಂದ ಹೊರಟು ಹೋಗುವಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಮನೆಯ ಮಹಿಳೆಯರ ಮೇಲೆ ಬೀಳುತ್ತದೆ. ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸಬೇಕು, ಅದಕ್ಕಿಂತ ಮೊದಲು ಮಕ್ಕಳಿಗೆ ಆಹಾರ ತಯಾರಿಸಬೇಕು. ಬಟ್ಟೆ-ಬರೆಗಳನ್ನು ಒಪ್ಪ-ಓರಣಗೊಳಿಸಬೇಕು, ಹೋಮ್ ವರ್ಕ್ ನಿಂದ ಹಿಡಿದು ಶಾಲೆಗೆ ತೆರಳಿ ಶಿಕ್ಷಕರನ್ನು ಭೇಟಿಯಾಗುವರೆಗೆ ಎಲ್ಲವನ್ನೂ ನಿಭಾಯಿಸಬೇಕು. ಶಾಲೆಗೆ ತೆರಳಿದ ಮಕ್ಕಳು ಸಂಜೆ ಮನೆಗೆ ಬರುವ ವೇಳೆ ಅವರನ್ನು ಸ್ವಾಗತಿಸುವುದಕ್ಕೆ ಮತ್ತು ಅವರ ಹಸಿವನ್ನು ತಣಿಸುವುದಕ್ಕೆ ಮುಂದಾಗಬೇಕು. ಬೆಳೆದ ಮಕ್ಕಳಾದರೆ ಮೊಬೈಲ್ನಲ್ಲಿ ಏನೇನು ವೀಕ್ಷಿಸುತ್ತಾರೆ ಅನ್ನುವ ಆತಂಕ, ಎರಡು ಕಣ್ಣುಗಳಲ್ಲಿ ಒಂದನ್ನು ಅತ್ತವೇ ಇಡಬೇಕಾದ ಒತ್ತಡ. ಹೊರಗೆ ಹೋಗುವ ಗಂಡು ಮಕ್ಕಳು ಮನೆಗೆ ಮರಳಲು ತುಸು ತಡವಾದರೂ ಮನದಲ್ಲಿ ನೂರು ಭಾವ. ಮಕ್ಕಳನ್ನು ಯಾವ ಶಾಲೆಗೆ, ಯಾವ ಕೋರ್ಸ್ ಗೆ ಸೇರಿಸಬೇಕು ಎಂಬ ಬೇಗುದಿ... ಇತ್ಯಾದಿಗಳು ಬ್ಯುಝಿ ಪುರುಷನ ಮನೆಯಲ್ಲಿರುವ ಮಹಿಳೆಯರ ಮೇಲಿರುತ್ತದೆ. ಪುರುಷ ಮನೆಯ ಹೊರಗಿನ ಕೆಲಸಗಳಲ್ಲಿ ನಿರತವಾಗಿರುವಾಗ ಮನೆಯ ಇಡೀ ಜವಾಬ್ದಾರಿಯನ್ನು ಮಹಿಳೆ ಹೊತ್ತುಕೊಳ್ಳುತ್ತಾಳೆ. ಇದು ಕೇವಲ ಸಮಾಜ ಸೇವೆಯಲ್ಲಿ ತೊಡಗಿರುವ ಪುರುಷರಿಗೆ ಸಂಬಂಧಿಸಿ ಮಾತ್ರ ಹೇಳುವುದಲ್ಲ. ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವವರು, ವೈದ್ಯರು, ನ್ಯಾಯವಾದಿಗಳು, ಶಿಕ್ಷಕರು, ಸಾಹಿತಿಗಳು, ಉದ್ಯಮಿಗಳು ಇತ್ಯಾದಿ ಎಲ್ಲರಿಗೆ ಸಂಬಂಧಿಸಿಯೂ ಬಹುತೇಕ ಈ ಮಾತುಗಳು ಅನ್ವಯಿಸುತ್ತವೆ. ಒಂದುವೇಳೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮನೆಯ ಮಹಿಳೆಯು ಸಹಕರಿಸದೇ ಇದ್ದರೆ ಯಾವ ಪುರುಷನೂ ಯಶಸ್ವಿ ಉದ್ಯಮಿ, ಸದಾ ಕೈಗೆ ಸಿಗುವ ಸಮಾಜ ಸೇವಕ, ಯಶಸ್ವಿ ರಾಜಕಾರಣಿ, ವೈದ್ಯ, ಶಿಕ್ಷಕ ಆಗುವ ಸಾಧ್ಯತೆಗಳು ತೀರಾ ತೀರಾ ಕಡಿಮೆ. ಪುರುಷನೋರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದರ ಹಿಂದೆ ಮನೆ ಮಹಿಳೆಯರ ಬೆವರಿರುತ್ತದೆ. ಆದರೆ ಸಮಾಜಕ್ಕೆ ಈ ಬೆವರು ಕಾಣಿಸುವುದಿಲ್ಲ. ಬದಲು ಅದರ ಫ ಲಿತಾಂಶವಾಗಿರುವ ಪುರುಷನಷ್ಟೇ ಕಾಣಿಸುತ್ತಾನೆ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯಾವುದೇ ಯಶಸ್ವಿ ಉದ್ಯಮಿಯ ಪತ್ನಿ ಉದ್ಯಮಿಯಾಗುವುದು ಕಡಿಮೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಪತ್ನಿ ಅಷ್ಟೇ ತೀವ್ರವಾಗಿ ಸಮಾಜ ಸೇವೆಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿರುವುದು ಕಡಿಮೆ. ವೈದ್ಯನೋರ್ವ ವೈದ್ಯೆಯನ್ನೇ ಮದುವೆಯಾದರೂ ತ್ಯಾಗದ ಸಂದರ್ಭ ಬಂದಾಗ ವೈದ್ಯೆ ಅದಕ್ಕೆ ಸಿದ್ಧವಾಗುತ್ತಾಳೆ. ಅನೇಕ ಬಾರಿ ಮನೆವಾರ್ತೆ ನೋಡಿಕೊಳ್ಳುವುದಕ್ಕಾಗಿ ವೈದ್ಯಕೀಯ ಸೇವೆಯಿಂದಲೇ ದೂರ ನಿಲ್ಲುತ್ತಾರೆ. ಶಿಕ್ಷಕ ಮತ್ತು ಶಿಕ್ಷಕಿಗೆ ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಮಕ್ಕಳ ಲಾಲನೆ-ಪಾಲನೆ, ಕುಟುಂಬ ನಿರ್ವಹಣೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ತನ್ನ ಶಿಕ್ಷಕ ವೃತ್ತಿಯನ್ನೋ ಲಾಯರ್ ವೃತ್ತಿಯನ್ನೋ ಕೈಬಿಡುವ ಮಹಿಳೆಯರಿದ್ದಾರೆಯೇ ಹೊರತು ಪುರುಷರಿಲ್ಲ. ರಾಜಕಾರಣಿಯ ಪತ್ನಿ ರಾಜಕಾರಣಿಯಾಗುವುದು ತೀರಾ ತೀರಾ ಅಪರೂಪ. ಹಾಗಂತ, ಈ ರಾಜಕಾರಣಿಗಳ ಪತ್ನಿಯರು ರಾಜಕೀಯ ಮಹತ್ವಾಕಾಂಕ್ಷೆ ಇಲ್ಲದವರೆಂದೋ ಅಸಮರ್ಥರೆಂದೋ ಇದರರ್ಥವಲ್ಲ. ರಾಜಕಾರಣಿಯ ಪತ್ನಿಗೆ ಮನೆ ನಿರ್ವಹಣೆಯೇ ಬಹುದೊಡ್ಡ ಸವಾಲು. ರಾಜಕಾರಣಿ ಪತಿ ಮನೆಯಲ್ಲಿರುವುದು ಕಡಿಮೆ. ಇದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುವುದು ಇನ್ನೂ ಕಡಿಮೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಆಪ್ತರು.. ಎಂಬೆಲ್ಲಾ ದಂಡು ಅವರ ಸುತ್ತ-ಮುತ್ತ ತಿರುಗಾಡುತ್ತಿರುತ್ತದೆ. ಇದರ ನಡುವೆಯೇ ಮಹಿಳೆಯರು ಮನೆ ನಿರ್ವಹಣೆ ಮಾಡಬೇಕು. ಮಕ್ಕಳನ್ನು ನೋಡಿಕೊಳ್ಳಬೇಕು. ಅನೇಕ ವೇಳೆ, ರಾಜಕಾರಣಿ ಪತಿ ಮೃತಪಟ್ಟ ಬಳಿಕ ಪತ್ನಿ ರಾಜಕೀಯ ಪ್ರವೇಶಿಸುವುದೂ ಇದೆ. ಒಂದುರೀತಿಯಲ್ಲಿ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಪುರುಷ ಪ್ರಸಿದ್ಧನಾಗುವುದು ಅಥವಾ ತನ್ನ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಮಹಿಳೆಯಿಂದ. ಆಕೆಯ ತ್ಯಾಗ, ಪರಿಶ್ರಮ, ಬೆವರು ಮತ್ತು ಪ್ರಾರ್ಥನೆಯು ಪುರುಷನ ಪಾಲಿಗೆ ಯಾವಾಗಲೂ ಆಮ್ಲಜನಕವಾಗಿ ಕೆಲಸ ಮಾಡುತ್ತದೆ. ಆದರೆ ಸಮಾಜ ಪುರುಷ ನನ್ನು ಗುರುತಿಸುತ್ತದೆಯೇ ಹೊರತು ಅದರ ಹಿಂದಿರುವ ಶಕ್ತಿಯನ್ನು ಗಮನಿಸುವುದಿಲ್ಲ. ಈ ಯಶಸ್ವಿ ವ್ಯಕ್ತಿ ಮೃತಪಟ್ಟಾಗ ಸಾವಿರಾರು ಮಂದಿ ಸೇರುತ್ತಾರೆ. ಗುಣಗಾನ ಮಾಡುತ್ತಾರೆ. ಆ ವ್ಯಕ್ತಿಯನ್ನು ಕೊನೆಯ ಬಾರಿ ನೋಡುವುದಕ್ಕೆ ತುದಿಗಾಲಲ್ಲಿ ನಿಲ್ಲುತ್ತಾರೆ. ಅವರ ಹೆಸರಲ್ಲಿ ರಕ್ತದಾನ ಶಿಬಿರವನ್ನೋ ಸೇವಾ ಚಟುವಟಿಕೆ ಯನ್ನೋ ನಡೆಸುತ್ತಾರೆ. ಸಾಹಿತ್ಯ ಮತ್ತು ಭಾಷಣ ವೇದಿಕೆಗಳಿಗೆ ಅವರ ಹೆಸರನ್ನಿಡುತ್ತಾರೆ. ಅವರ ಹೆಸರಲ್ಲಿ ಪ್ರಶಸ್ತಿ ಪುರಸ್ಕಾರವನ್ನು ನೀಡುವ ಪರಂಪರೆ ಪ್ರಾರಂಭಿಸುತ್ತಾರೆ. ಅವರ ಸಾಧನೆಯನ್ನು ಸ್ಮರಿಸುವ ಪುಸ್ತಕಗಳೂ ಬರುತ್ತವೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅವರನ್ನು ಈ ಹಂತಕ್ಕೇರಿಸುವಲ್ಲಿ ಬಹುದೊಡ್ಡ ತ್ಯಾಗ ಮಾಡಿರುವ ಮತ್ತು ಬೆವರು ಹರಿಸಿರುವ ಆಕೆಯನ್ನು ಮಾತ್ರ ಸಮಾಜ ಬಹುತೇಕ ಬಾರಿ ಮರೆತು ಬಿಡುತ್ತದೆ. ಆದ್ದರಿಂದಲೇ ಪತಿ ಮೃತಪಟ್ಟಾಗ ಸೇರಿದ ಸಾವಿರಾರು ಮಂದಿಯಲ್ಲಿ ನೂರು ಮಂದಿಯೂ ಅವರ ಪತ್ನಿ ಮೃತಪಟ್ಟಾಗ ಸೇರುವುದಿಲ್ಲ. ಈ ನೂರು ಮಂದಿಯಲ್ಲಿ ಮೃತದೇಹದೊಂದಿಗೆ ಮಸೀದಿಗೆ ಹೋಗು ವವರು ಇನ್ನೂ ಕಡಿಮೆಯಿರುತ್ತಾರೆ. ಇದು ಒಂದಿಷ್ಟು ಪ್ರತಿಷ್ಠಿತ ವ್ಯಕ್ತಿಗಳಿಗೆ ಸಂಬಂಧಿಸಿದ ಸಂಗತಿಯಾದರೆ, ಸಾಮಾನ್ಯ ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿ ಈ ಪರಿಸ್ಥಿತಿ ಇನ್ನೂ ಆಘಾತಕಾರಿಯಾಗಿರುತ್ತದೆ. ಮೃತ ಪುರುಷನನ್ನು ನೋಡಲು ಬರುವವರು ಮತ್ತು ಮಯ್ಯತ್ನೊಂದಿಗೆ ಮಸೀದಿವರೆಗೆ ಹೋಗುವವರ ಸಂಖ್ಯೆಯ ಅರ್ಧದಷ್ಟೂ ಜನ ಇವರ ಪತ್ನಿಗೆ ಸಂಬಂಧಿಸಿ ಸೇರುವುದಿಲ್ಲ. ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟಿಲ್ಲವಾದರೂ ನಗರಗಳಲ್ಲಿ ಇದು ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದೆ. ಹಾಗಂತ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳದ ಮತ್ತು ಮನೆವಾರ್ತೆ ನೋಡಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿದ ಕಾರಣ ಮಹಿಳೆಯರಿಗೆ ಸಂಬಂಧಿಸಿ ಇಂಥವು ಘಟಿಸುತ್ತವೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದನ್ನು ಪೂರ್ಣವಾಗಿ ಒಪ್ಪುವ ಹಾಗಿಲ್ಲ. ಒಂದುವೇಳೆ, ಅವರು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿದ್ದರೆ, ಒಂದೋ ಕುಟುಂಬ ನಿಭಾವಣೆಯಲ್ಲಿ ಸಮಸ್ಯೆಗಳುಂಟಾಗುತ್ತಿತ್ತು ಅಥವಾ ಪುರುಷನ ಸಕ್ರಿಯತೆಯ ಮೇಲೆ ಅದು ತೀವ್ರ ಅಡ್ಡ ಪರಿಣಾಮ ಬೀರುತ್ತಿತ್ತು. ಅಷ್ಟಕ್ಕೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇವೆರಡನ್ನೂ ನಿಭಾಯಿಸಿಕೊಂಡು ಪತಿ ಮತ್ತು ಪತ್ನಿ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಯಾಗಿರುವ ದೃಷ್ಟಾಂತಗಳು ಇಲ್ಲ ಎಂದಲ್ಲ. ಇದೆ. ಆದರೆ ಎಣಿಕೆಗೆ ಸಿಗುವಷ್ಟೇ ಇದೆ. ಅದರಾಚೆಗೆ ಯಶಸ್ವಿ ಉದ್ಯಮಿ, ಯಶಸ್ವಿ ವೈದ್ಯ, ಸಮಾಜ ಸೇವಕ, ಶಿಕ್ಷಕ, ಪ್ರಮುಖ ಸಾಹಿತಿಯ ಬೆನ್ನ ಹಿಂದೆ ಅವರ ತಾಯಿ, ಪತ್ನಿ ಇರುತ್ತಾರೆ. ಈ ವಾಸ್ತವಕ್ಕೆ ಮುಸ್ಲಿಮ್ ಸಮುದಾಯ ಮುಖಾಮುಖಿಯಾಗಬೇಕು. ಪುರುಷರನ್ನು ಗುರುತಿಸುವ ಮತ್ತು ಗೌರವಿಸುವ ರೀತಿಯಲ್ಲೇ ಅವರ ಮಹಿಳೆಯರನ್ನೂ ಗುರುತಿಸುವ ಮತ್ತು ಗೌರವಿಸುವ ಪ್ರಕ್ರಿಯೆಗಳಾಗಬೇಕು. ಮುಖ್ಯವಾಗಿ, ಗೆಳೆಯ ಹೇಳಿದಂಥ ಸನ್ನಿವೇಶ ನಿರ್ಮಾಣವಾಗದಂತೆ ಸಮುದಾಯದೊಳಗೆ ಜಾಗೃತಿ ಮೂಡಬೇಕು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹೆಣ್ಣಿನ ತ್ಯಾಗ, ಪರಿಶ್ರಮವೂ ಗುರುತಿಗೀಡಾಗಲಿ.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-59212331988808029652023-10-05T04:59:00.000-07:002023-10-05T04:59:41.077-07:00 ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?<p><br /></p><div><br /></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiqec2mYpGqI06qvFshZ6k1cNDQQ77Z8-DLHkpIt-b3PwHVM6uaRpBW77glRKf2gK3IcpBskwM4oFJoi-gxCzwaNpAuNziVxul_Z3BERrCHBC4kBgwlsshxJcdpDUWmxa8NwlRZYURQzrxSWudrIxqdKjJwKRteArkPxgyEz-bAcfZGrpu4u_kxHrx8DuIJ/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEiqec2mYpGqI06qvFshZ6k1cNDQQ77Z8-DLHkpIt-b3PwHVM6uaRpBW77glRKf2gK3IcpBskwM4oFJoi-gxCzwaNpAuNziVxul_Z3BERrCHBC4kBgwlsshxJcdpDUWmxa8NwlRZYURQzrxSWudrIxqdKjJwKRteArkPxgyEz-bAcfZGrpu4u_kxHrx8DuIJ/w400-h198/page%203%20pic.jpg" width="400" /></a></div><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್ನಲ್ಲಿ ಅದಕ್ಕೆ ನಿಷೇಧ ಇದೆಯೇ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ ಪರಮೇಶ್ವರಿಯ ವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ, ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, ಅಕ್ಬರ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಇಂದಿರಾಗಾಂಧಿ, ನರೇಂದ್ರ ಮೋದಿಯವರೆಗೆ.. ದೇವರುಗಳು, ಧರ್ಮ ಸುಧಾರಕರು, ರಾಜರು ಮತ್ತು ಪ್ರಧಾನ ಮಂತ್ರಿಗಳ ಚಿತ್ರಗಳು, ಪುತ್ಥಳಿಗಳು, ಕಟೌಟ್ಗಳು ಮತ್ತು ವಿವಿಧ ಭಂಗಿಯ ದೃಶ್ಯ ರೂಪಗಳು ಯಥೇಚ್ಛ ಲಭ್ಯವಿರುವ ಕಾಲದಲ್ಲಿ 6ನೇ ಶತಮಾನದಲ್ಲಿ ಬಾಳಿ ಬದುಕಿದ ಮುಹಮ್ಮದ್ರ(ಸ) ಬಗ್ಗೆ ಮತ್ತು ಅವರು ಪರಿಚಯಿಸಿದ ದೇವರ ಬಗ್ಗೆ ಇಂಥ ಯಾವ ರಚನೆಗಳೂ ಯಾಕೆ ಲಭ್ಯವಿಲ್ಲ ಎಂಬ ಕುತೂಹಲ ಯಾರಲ್ಲಾದರೂ ಮೂಡಿದರೆ ಅಚ್ಚರಿ ಏನಿಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರವಾದಿ ಹುಟ್ಟಿ ಬೆಳೆದ 6ನೇ ಶತಮಾನದ ಬದುಕು-ಭಾವ ಮತ್ತು ಜೀವನ ಕ್ರಮಗಳನ್ನು ಅಧ್ಯಯನ ನಡೆಸಿದರೆ ಹಾಗೂ ಪ್ರವಾದಿ ಬೋಧನೆಗಳ ಆಶಯಗಳನ್ನು ಅರಿತುಕೊಂಡರೆ, ಚಿತ್ರ-ಪುತ್ಥಳಿಗಳ ಪ್ರಶ್ನೆಗೆ ಉತ್ತರ ಸಿಗುತ್ತದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಬ್ದುಲ್ಲಾ ಮತ್ತು ಆಮಿನಾರ ಪುತ್ರರಾದ ಮುಹಮ್ಮದರು ಹುಟ್ಟುವಾಗ ಮಕ್ಕಾ ಏನೂ ಮುಸ್ಲಿಮರ ಆಡುಂಬೊಲ ಆಗಿರಲಿಲ್ಲ. ಅಲ್ಲಿ ಕ್ರೈಸ್ತರು, ಯಹೂದಿಯರು ಮತ್ತು ವಿಗ್ರಹಾರಾಧಕರೇ ಇದ್ದರು. ಆದಿ ಮಾನವ ಮತ್ತು ಇಸ್ಲಾಮಿನ ಪ್ರಥಮ ಪ್ರವಾದಿ ಆದಮ್(ಅ)ರಿಂದ ನಿರ್ಮಿತವಾಗಿ ಕಾಲಕ್ರಮೇಣ ಜೀರ್ಣಾವಸ್ಥೆಗೆ ತಲುಪಿ ಬಳಿಕ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಈಲ್(ಅ)ರಿಂದ ಪುನರ್ ನಿರ್ಮಾಣಗೊಂಡ ಮಕ್ಕಾದ ಕಾಬಾದೊಳಗೆ ಆಗ 360ಕ್ಕಿಂತ ಅಧಿಕ ವಿಗ್ರಹಗಳಿದ್ದುವು. ವಿಪರ್ಯಾಸ ಏನೆಂದರೆ, ದೇವನೊಬ್ಬನೇ ಮತ್ತು ಆತನನ್ನು ಮಾತ್ರ ಆರಾಧಿಸಬೇಕು ಎಂದು ಜನರಿಗೆ ಕರೆಕೊಟ್ಟಿದ್ದ ಪ್ರವಾದಿ ಇಬ್ರಾಹೀಮ್ ಮತ್ತು ಇಸ್ಮಾಈಲ್ರ ವಿಗ್ರಹವೂ ಕಾಬಾದ ಒಳಗಿತ್ತು. ಅಷ್ಟೇ ಅಲ್ಲ, ಮಕ್ಕಾದಲ್ಲಿ ಈ ಹಿಂದೆ ಬದುಕಿ ಮರೆಯಾಗಿದ್ದ ಸಜ್ಜನರಾದ ಲಾತ್, ಉಝ್ಝ, ಮನಾತ ಮತ್ತಿತರ ಹಲವು ವ್ಯಕ್ತಿಗಳೂ ಆ ಕಾಬಾದೊಳಗೆ ವಿಗ್ರಹಗಳಾಗಿ ಪೂಜಾರ್ಹಗೊಂಡಿದ್ದರು. ಬಾಲಕ ಮುಹಮ್ಮದ್ ಇವನ್ನೆಲ್ಲಾ ನೋಡಿ ಬೆಳೆದರು. ಮಾತ್ರವಲ್ಲ, ಮನುಷ್ಯರು ಆರಾಧನೆಗೆ ಒಳಗಾಗುವುದನ್ನು ಅವರ ಅಂತರಾತ್ಮ ಒಪ್ಪುತ್ತಿರಲಿಲ್ಲ. ಆದ್ದರಿಂದಲೇ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಂಥ ಪೂಜಾ ವಿಧಾನ ಮತ್ತು ಆರಾಧನಾ ಕ್ರಮಗಳಿಂದೆಲ್ಲ ಅವರು ಅಂತರ ಕಾಯ್ದುಕೊಂಡರು. 40ನೇ ಪ್ರಾಯದಲ್ಲಿ ಪ್ರವಾದಿಯಾಗಿ ನಿಯುಕ್ತಗೊಳ್ಳುವುದಕ್ಕಿಂತ ಮೊದಲೇ ಅವರೊಳಗೆ ಮನುಷ್ಯ ಮತ್ತು ದೇವನ ನಡುವಿನ ವ್ಯತ್ಯಾಸಗಳ ಬಗ್ಗೆ ಆಗಿನ ಮಕ್ಕಾ ಜನತೆಯ ನಿಲುವಿಗಿಂತ ಭಿನ್ನ ಆಲೋಚನೆಯಿತ್ತು. 40ನೇ ಪ್ರಾಯದಲ್ಲಿ ಅವರಿಗೆ ದೇವನಿಂದ ವಾಣಿಗಳು ಅವತೀರ್ಣ ವಾಗತೊಡಗಿತು. ಒಂದುರೀತಿಯಲ್ಲಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">40 ವರ್ಷದ ವರೆಗಿನ ಮುಹಮ್ಮದ್ ಮತ್ತು 40 ವರ್ಷದ ಬಳಿಕದ ಮುಹಮ್ಮದ್- ಈ ಎರಡೂ ಒಂದೇ ಆಗಿರಲಿಲ್ಲ. 40 ವರ್ಷದ ವರೆಗೆ ಅವರೋರ್ವ ವ್ಯಕ್ತಿ. ಮಕ್ಕಾದ ಅಷ್ಟೂ ಜನರ ನಡುವೆ ಓರ್ವ ಸಜ್ಜನ, ಸತ್ಯವಂತ ಮತ್ತು ಪ್ರಾಮಾಣಿಕ ಎಂದು ಗುರುತಿಸಿಕೊಂಡ ವ್ಯಕ್ತಿ. ಜೊತೆಗೇ ಪ್ರಮುಖ ವ್ಯಾಪಾರಿ. ಆದರೆ, 40 ವರ್ಷದ ಬಳಿಕ ಅವರು ಈ ಐಡೆಂಟಿಟಿಯನ್ನು ಮೀರಿ ಪ್ರವಾದಿಯಾಗಿ ಗುರುತಿಸಿಕೊಂಡರು. ಹಾಗೆಯೇ, ಆವರೆಗೆ ಮಕ್ಕಾ ಜನತೆಯಿಂದ ಎದುರಿಸದ ವಿರೋಧಗಳನ್ನು ಆ ಬಳಿಕ ಎದುರಿಸಿದರು. ಅವರು ಪ್ರವಾದಿ ಹೌದೋ ಅಲ್ಲವೋ ಎಂಬುದಾಗಿ ಮಕ್ಕಾದ ಜನತೆ ಅವರನ್ನು ವಿಧವಿಧವಾಗಿ ಪರೀಕ್ಷಿಸಿದರು. ಆದರೆ ಪ್ರತಿ ಪರೀಕ್ಷೆಯಲ್ಲೂ ಮುಹಮ್ಮದ್ರ ಪ್ರವಾದಿತ್ವ ಸಾಬೀತುಗೊಳ್ಳುತ್ತಲೇ ಹೋಯಿತು ಮತ್ತು ಅನುಯಾಯಿಗಳು ಮತ್ತು ಪರೋಕ್ಷ ಬೆಂಬಲಿಗರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಬಂತು. ಅಷ್ಟಕ್ಕೂ, ತನಗಿರುವ ಜನಪ್ರಿಯತೆ ಮತ್ತು ದಿನೇದಿನೇ ಹೆಚ್ಚುತ್ತಿರುವ ಬೆಂಬ ಲಿಗರ ಸಂಖ್ಯೆಯನ್ನು ಪರಿಗಣಿಸಿ, ಅವರಿಗೆ ತಾನು ಮನುಷ್ಯಾತೀತ ಎಂದು ಹೇಳಿಕೊಳ್ಳಬಹುದಿತ್ತು. ತನ್ನನ್ನು ಪವಾಡ ಪುರುಷನಾಗಿಯೋ ಪೂಜೆಗೆ ಅರ್ಹನಾದ ವ್ಯಕ್ತಿಯಾಗಿಯೋ ದೇವನ ಅವತಾರವಾಗಿಯೋ ಬಿಂಬಿಸಿಕೊಳ್ಳಬಹುದಿತ್ತು. ಹೀಗೆ ಬಿಂಬಿಸಿಕೊಳ್ಳದ ಪ್ರವಾದಿ ಇಬ್ರಾಹೀಮ್ ಮತ್ತು ಇಸ್ಮಾಈಲ್ರೇ ವಿಗ್ರಹವಾಗಿ ಕಾಬಾದೊಳಗೆ ಪೂಜೆಗೊಳ್ಳುತ್ತಿರುವಾಗ, ಒಂದುವೇಳೆ ಜೀವಂತವಿರುವಾಗಲೇ ಪ್ರವಾದಿ ಮುಹಮ್ಮದ್ ಹಾಗೆ ಬಿಂಬಿಸಿಕೊಂಡಿರುತ್ತಿದ್ದರೆ ಅವರ ಜನಪ್ರಿಯತೆಗೇನೂ ಕುಂದುಂಟಾಗುತ್ತಿರಲಿಲ್ಲ ಮತ್ತು ಅವರನ್ನು ವಿರೋಧಿಸುತ್ತಿದ್ದವರೇ ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಹೆಚ್ಚಿತ್ತು. ‘ನೀನು ಏಕದೇವ ಪ್ರತಿಪಾದನೆಯನ್ನು ಕೈಬಿಟ್ಟರೆ ನಿನಗೆ ಬೇಕಾದುದನ್ನು ನಾವು ಕೊಡುತ್ತೇವೆ...’ ಎಂದು ಮಕ್ಕಾದ ವಿರೋಧಿಗಳು ಅವರಿಗೆ ಆಫರನ್ನೂ ನೀಡಿದ್ದರು. ಆದರೆ, ಪ್ರವಾದಿ ಮುಹಮ್ಮದ್ ಎಲ್ಲೂ ಮಾನವ ದೇವನಾಗುವ ಸಂದರ್ಭಕ್ಕೆ ಅವಕಾ ಶವನ್ನೇ ಕೊಡಲಿಲ್ಲ. ಮಾತ್ರವಲ್ಲ, ಜನರೊಂದಿಗೆ ಹೀಗೆ ಹೇಳುವಂತೆ ಅಲ್ಲಾಹನೇ </span><span style="background-color: white; color: #222222; font-family: Arial, Helvetica, sans-serif; font-size: small;">ಪವಿತ್ರ ಕುರ್ಆನ್ನಲ್ಲಿ</span><span style="background-color: white; color: #222222; font-family: Arial, Helvetica, sans-serif; font-size: small;">ಅವರಿಗೆ ಆಜ್ಞಾಪಿಸುತ್ತಾನೆ;</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">‘ಓ ಪೈಗಂಬರರೇ, ಇವರೊಡನೆ ಹೇಳಿರಿ, ನನ್ನಲ್ಲಿ ಅಲ್ಲಾಹನ ಖಜಾನೆಗಳಿವೆಯೆಂದು ನಾನು ನಿಮ್ಮೊಡನೆ ಹೇಳುವುದಿಲ್ಲ. ನಾನು ಪರೋಕ್ಷ ಜ್ಞಾನಿಯೂ ಅಲ್ಲ. ನಾನು ದೇವಚರನೆಂದೂ ಹೇಳುವುದಿಲ್ಲ. ನಾನು ನನ್ನ ಮೇಲೆ ಅವತೀರ್ಣಗೊಳ್ಳುತ್ತಿರುವ ದಿವ್ಯ ವಾಣಿಯ ಅನುಸರಣೆಯನ್ನು ಮಾತ್ರ ಮಾಡುತ್ತಿದ್ದೇನೆ.’ (6:50)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇನ್ನೊಂದು ವಚನ ಹೀಗಿದೆ;</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಇವರೊಡನೆ ಹೇಳಿರಿ, ನಾನೋರ್ವ ಅಪೂರ್ವ ಸಂದೇಶವಾಹಕ ನಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗರಿಯದು. ನಾನಂತೂ ನನ್ನ ಬಳಿಗೆ ಕಳುಹಿಸಲಾಗುತ್ತಿರುವ ದಿವ್ಯವಾಣಿಯನ್ನು ಅನುಸರಿಸುತ್ತಿದ್ದೇನೆ. ನಾನೋರ್ವ ಸುಸ್ಪಷ್ಟ ಎಚ್ಚರಿಕೆ ನೀಡುವವನೇ ಹೊರತು ಇನ್ನೇನಲ್ಲ.’ (46:9)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದನ್ನೂ ಓದಿ;</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಓ ಪೈಗಂಬರರೇ ಹೇಳಿರಿ, ನಾನು ನಿಮ್ಮಂತೆಯೇ ಇರುವ ಓರ್ವ ಮನುಷ್ಯ. ನಿಮ್ಮ ದೇವನು ಏಕಮಾತ್ರ ದೇವನೆಂದು ನನ್ನ ಕಡೆಗೆ ದಿವ್ಯವಾಣಿ ಮಾಡಲಾಗುತ್ತಿದೆ.’ (18:110)</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಷ್ಟೇ ಅಲ್ಲ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ನನ್ನ ಸಮಾಧಿಯನ್ನು ಆರಾಧನೆಯ ವಿಗ್ರಹವಾಗಿ ಮಾಡ ಬೇಡ’ ಎಂದು ಅಲ್ಲಾಹನಲ್ಲೂ ಅವರು ಪ್ರಾರ್ಥಿಸಿದ್ದರು ಮತ್ತು ದೇವನು ಅದನ್ನು ಸ್ವೀಕರಿಸಿದ್ದಾಗಿ ವರದಿಯಿದೆ. ಕ್ರೈಸ್ತರು ಈಸಾರನ್ನು ಅತಿರೇಕ ಮಟ್ಟಕ್ಕೆ ಕೊಂಡೊಯ್ದಂತೆ ನನ್ನನ್ನು ಕೊಂಡೊಯ್ಯಬೇಡಿ ಎಂದೂ ತನ್ನ ಅನುಯಾಯಿಗಳಲ್ಲಿ ಪ್ರವಾದಿ(ಸ) ಹೇಳಿದ್ದರು. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪವಿತ್ರ ಕುರ್ಆನ್ನಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಇಷ್ಟೆಲ್ಲಾ ಜಾಗರೂಕತೆಯ ವಾಣಿಗಳು ಅವತೀರ್ಣಗೊಳ್ಳುವುದಕ್ಕೆ ಕಾರಣಗಳೇನು? ತನ್ನನ್ನು ಆರಾಧ್ಯರ ಮಟ್ಟಕ್ಕೆ ಏರಿಸಬೇಡಿ, ಪ್ರವಾದಿ ಈಸಾರ ವಿಷಯದಲ್ಲಿ ಅವರ ಅನುಯಾಯಿಗಳು ಇಂಥ ತಪ್ಪು ಮಾಡಿದ್ದಾರೆ, ತನ್ನ ಸಮಾಧಿ ವಿಗ್ರಹವಾಗದಿರಲಿ ಎಂದೆಲ್ಲಾ ಸ್ವತಃ ಪ್ರವಾದಿಯೇ(ಸ) ಹೇಳಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರವೇ ‘ಪ್ರವಾದಿಯವರ ಚಿತ್ರವೇಕಿಲ್ಲ’ ಎಂಬ ಪ್ರಶ್ನೆಗೂ ಉತ್ತರ ಅನ್ನಿಸುತ್ತದೆ. ತನ್ನ ಹಿಂದಿನ ಕಾಲದ ಪ್ರವಾದಿಗಳು ಮತ್ತು ಸಜ್ಜನರು ವಿಗ್ರಹಗಳಾಗಿ ಮತ್ತು ಪವಾಡ ಪುರುಷರಾಗಿ ಆರಾಧನೆಗೊಳಗಾಗುತ್ತಿರುವುದನ್ನು ಪ್ರವಾದಿ ಕಣ್ಣಾರೆ ಕಂಡಿದ್ದಾರೆ. ಒಂದುವೇಳೆ ತಾನು ಈ ವಿಷಯದಲ್ಲಿ ಎಚ್ಚರಿಕೆ ವಹಿಸದೇ ಹೋದರೆ ತನ್ನ ಕಾಲಾನಂತರ ತಾನೂ ಹೀಗೆಯೇ ಆರಾಧನೆಗೆ ಒಳಗಾಗಬಹುದು ಎಂಬ ಭಾವ ಅವರಲ್ಲಿ ಉಂಟಾಗಿರಬಹುದು. ಆದುದರಿಂದಲೇ, ತನ್ನ ಅನುಯಾಯಿಗಳಿಗೆ ತಾನೇನು ಮತ್ತು ಪೂಜೆಗೆ ಅರ್ಹನು ಯಾರು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದರು ಎಂದನ್ನಿಸುತ್ತದೆ. ಒಂದುವೇಳೆ, ತನ್ನ ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟರೆ ತಾನಿಲ್ಲದ ಕಾಲದಲ್ಲಿ ಅದು ಅಸಾಮಾನ್ಯ ಗೌರವಕ್ಕೆ ಪಾತ್ರವಾದೀತು ಎಂಬ ಭಯವೂ ಅವರಲ್ಲಿ ಇದ್ದಿರಬಹುದು. ಹಾಗಂತ, ಪವಿತ್ರ ಕುರ್ಆನ್ನಲ್ಲಿ ಚಿತ್ರ ಬಿಡಿಸಬಾರದು ಎಂಬ ನೇರ ವಾಕ್ಯ ಇಲ್ಲ. ಇದೇವೇಳೆ, ಆರಾಧನೆಗಾಗಿ ಚಿತ್ರವನ್ನಾಗಲಿ ಸ್ಮಾರಕವನ್ನಾಗಲಿ ರಚಿಸಬಾರದು, ಆದರೆ ಕಲೆಯಾಗಿ ತಪ್ಪಿಲ್ಲ’ ಎಂಬ ಅಭಿಪ್ರಾಯವನ್ನು ಆಧುನಿಕ ವಿದ್ವಾಂಸರು ವ್ಯಕ್ತಪಡಿಸಿರುವುದನ್ನು ನೋಡಿದರೆ ಚಿತ್ರ ರಚನೆಗೆ ಇಸ್ಲಾಮ್ ವಿರೋಧಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇನ್ನೂ ಒಂದು ಸಂಗತಿಯಿದೆ-</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಒಂದು ಚಿತ್ರವಾಗಿ ತಾನಿರುವುದನ್ನು ಪ್ರವಾದಿ ಬಯಸಿರಲಿಲ್ಲವಾದರೂ ಮೌಖಿಕವಾಗಿ ಮತ್ತು ಬರಹದ ರೂಪದಲ್ಲಿ ಅವರಿರುವುದನ್ನು ವಿರೋಧಿಸಿಲ್ಲ ಎಂಬುದೂ ಮುಖ್ಯವಾಗುತ್ತದೆ. ಪ್ರವಾದಿಯ ಶರೀರ ಹೇಗಿತ್ತು, ಅವರ ಬಣ್ಣ, ಅವರ ಕೂದಲು ಮತ್ತು ಗಡ್ಡದ ಉದ್ದಳತೆ, ಅವರು ಕುಳಿತುಕೊಳ್ಳುವ ಭಂಗಿ, ನಮಾಝïಗೆ ನಿಲ್ಲುವ ರೀತಿ, ತಿನ್ನುವ ವಿಧಾನ, ಮಾತಿನ ಶೈಲಿ, ನಗು, ನಡೆಯುವ ರೀತಿ, ಧರಿಸುವ ವಸ್ತ್ರ, ಪೇಟ, ಕಣ್ಣುಗಳು.. ಇತ್ಯಾದಿಗಳ ವಿವರ ಗ್ರಂಥಗಳಲ್ಲಿ ಸಿಗುತ್ತದೆ. ಹೀಗೆ ಬರೆದಿಡುವುದನ್ನು ಮತ್ತು ಮೌಖಿಕವಾಗಿ ಹೇಳುವುದನ್ನು ಪ್ರವಾದಿ ವಿರೋಧಿಸಿಲ್ಲ ಎಂದೇ ಇದರರ್ಥ. ಅಂದರೆ, ಒಂದು ಚಿತ್ರವಾಗಿ ಉಳಿಯುವುದರ ಬಗ್ಗೆ ಪ್ರವಾದಿಯವರಿಗೆ ನಿರ್ದಿಷ್ಟ ನಿಲುವು ಇತ್ತು. ಈ ಹಿಂದಿನ ಸಜ್ಜನರಂತೆ ತಾನೂ ಆರಾಧನೆಗೋ ಇನ್ನೇನಕ್ಕೋ ಒಳಗಾದೇನು ಎಂಬ ಸ್ಪಷ್ಟತೆ ಅದರಲ್ಲಿತ್ತು. ಸಾಮಾನ್ಯ ಜನರು ತಕ್ಷಣ ಭಾವುಕರಾಗುತ್ತಾರೆ. ತಮ್ಮಲ್ಲಿಲ್ಲದ ವಿಶೇಷತೆ ಇನ್ನೊಬ್ಬರಲ್ಲಿ ಕಂಡಾಗ ಮೋಹಗೊಳ್ಳುತ್ತಾರೆ. ಕ್ರಮೇಣ ಈ ಮೋಹವು ಆರಾಧನಾ ರೂಪವಾಗಿ ಬದಲಾಗಿ ಬಿಡುತ್ತದೆ. ಇವತ್ತಿನ ದಿನಗಳಲ್ಲಿ ಇಂಥವು ಮಾಮೂಲು. ದೇವಮಾನವರೇ ತುಂಬಿ ಹೋಗಿರುವ ಮತ್ತು ಮನುಷ್ಯರೇ ದೇವರಂತೆ ಪೂಜೆಗೊಳ್ಳುತ್ತಿರುವ ಸನ್ನಿವೇಶದಲ್ಲಿ ಪ್ರವಾದಿಯ ಚಿತ್ರ ಇಲ್ಲದೇ ಇರುವುದರ ಮಹತ್ವ ಸುಲಭದಲ್ಲೇ ಅರ್ಥವಾಗಬಹುದು. ಹುಟ್ಟಿಯೇ ಇಲ್ಲದ ಉರಿಗೌಡ-ನಂಜೇಗೌಡರನ್ನು ಹುಟ್ಟಿಸಿ ಅವರದ್ದೊಂದು ಚೆಲುವಾದ ಆಕೃತಿಯನ್ನು ರಚಿಸಿ ಜನಸಾಮಾನ್ಯರನ್ನು ನಂಬಿಸಬಹುದಾದ ಈ ಕಾಲದಲ್ಲಿ ಪ್ರವಾದಿಯ(ಸ) ಚಿತ್ರ ಬಿಡಿಸುವುದಕ್ಕೆ ಅನುಮತಿ ಸಿಗುತ್ತಿದ್ದರೆ ಏನಾಗುತ್ತಿತ್ತು? ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪವಿತ್ರ ಕುರ್ಆನ್ ಪರಿಚಯಿಸುವ ಅಲ್ಲಾಹನನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ತರುವುದಕ್ಕೆ ಸಾಧ್ಯವೇ ಇಲ್ಲ. ‘ವಿಶ್ವದ ಯಾವ ವಸ್ತುವೂ ಅಲ್ಲಾಹನನ್ನು ಹೋಲುವುದಿಲ್ಲ’ (42:11) ಎಂದು ಹೇಳುವ ಕುರ್ಆನ್, ಇನ್ನೊಂದೆಡೆ ‘ಅಲ್ಲಾಹನು ಭೂಮಿ-ಆಕಾಶಗಳ ಪ್ರಕಾಶವಾಗಿರುವನು’ (24:35) ಎಂದೂ ಹೇಳಿದೆ. ‘ಅಲ್ಲಾಹನಿಗೆ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ’ (112:3) ಎಂದೂ ಹೇಳಿದೆ. ಅಲ್ಲಾಹನೆಂಬುದು ಆಕಾರಗಳಲ್ಲಿ ನಿರ್ದಿಷ್ಟವಾಗಿ ಕಟ್ಟಿಕೊಡಲಾಗದ ಒಂದು ಅಪರಿಮಿತ ಶಕ್ತಿ. ಅಲ್ಲಾಹನಿಗೆ ಸಂಬಂಧಿಸಿ ನೋಡಿದರೆ ಪ್ರವಾದಿಯವರಿಗೆ ಖಚಿತ ಐಡೆಂಟಿಟಿಯಿದೆ. ಅವರು 63 ವರ್ಷಗಳ ಕಾಲ ಜನರ ನಡುವೆ ಬದುಕಿದ್ದಾರೆ. ಅವರ ದೇಹಾಕೃತಿ, ಮಾತು-ಕೃತಿ, ಬದುಕು-ಭಾವಗಳನ್ನು ಜನರು ಕಂಡಿದ್ದಾರೆ. ಅವರು ಮದುವೆಯಾಗಿದ್ದರು, ಮಕ್ಕಳಿದ್ದರು, ಕಾಯಿಲೆ ಬಂದಿತ್ತು, ಹಸಿವು- ನೀರಡಿಕೆ, ದುಃಖ, ಸಂತೋಷ ಇತ್ಯಾದಿ ಮಾನವ ಸಹಜವಾದುದು ಅವರಲ್ಲೂ ಇತ್ತು. ಇವೆಲ್ಲವುಗಳ ಆಚೆಗೂ ಚಿತ್ರವಾಗಿ ಈ ಜಗತ್ತಿನಲ್ಲಿ ಅವರಿಲ್ಲ ಎಂಬುದು ಕೌತುಕದಷ್ಟೇ ಅಧ್ಯಯನಕ್ಕೂ ಯೋಗ್ಯ. ಚಿತ್ರವಿಲ್ಲದ ಪ್ರವಾದಿಗೆ ಜಾಗತಿಕವಾಗಿ ಇಷ್ಟೊಂದು ಅನುಯಾಯಿಗಳು ಯಾಕಿದ್ದಾರೆ ಮತ್ತು ಅವರು ಪರಿಚಯಿಸಿದ ಅಲ್ಲಾಹನನ್ನು ಅನುಸರಿಸುವವರು ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹೇಗೆ ನಿರ್ಮಾಣವಾದರು ಎಂಬುದೂ ವಿಶ್ಲೇಷಣೆಗೆ ಅರ್ಹ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಲೆ ನಿಷಿದ್ಧವಲ್ಲದ ಧರ್ಮದಲ್ಲಿ ಅಲ್ಲಾಹನ ಮತ್ತು ಪ್ರವಾದಿ ಮುಹಮ್ಮದ್(ಸ)ರ ಚಿತ್ರ ಇಲ್ಲದೇ ಇರುವುದು ಹಾಗೂ ಇದರಿಂದಾಗಿ ಇಸ್ಲಾಮ್ ಧರ್ಮಕ್ಕೆ ಆಗಿರುವ ಲಾಭ-ನಷ್ಟಗಳೇನು ಎಂಬುದು ಸಂಶೋಧನೆಗೆ ಒಳಗಾಗುವುದಾದರೆ ನಿಜಕ್ಕೂ ಸ್ವಾಗತಾರ್ಹ.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-41562172435900116702023-09-27T06:56:00.000-07:002023-09-27T06:56:30.840-07:00 ಮಕ್ಕಳನ್ನು ಹೊರಗೆ ನಿಲ್ಲಿಸುವ ಮಸೀದಿ ಬೋರ್ಡುಗಳು<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgUhDP4nAir8StewzZi6V1y4uPTAPSeqe7LejVsYdbxJ6zYyOvitpp_v2rNCSanFV-B6HooqUs9jRpIbu3ctBiVHiIkPayd6jYUcb2gg_QU40zy4RGw7dVNuU3pePc1WrP3h2zHnKvHnOfVylHFaYwgiUAAmspwnymhyWhrDAVncC-BUuq6svNOr4vo8_L9/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEgUhDP4nAir8StewzZi6V1y4uPTAPSeqe7LejVsYdbxJ6zYyOvitpp_v2rNCSanFV-B6HooqUs9jRpIbu3ctBiVHiIkPayd6jYUcb2gg_QU40zy4RGw7dVNuU3pePc1WrP3h2zHnKvHnOfVylHFaYwgiUAAmspwnymhyWhrDAVncC-BUuq6svNOr4vo8_L9/w400-h198/page%203%20pic.jpg" width="400" /></a></div><br /><p><br /></p><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜನರೇಶನ್ ಗ್ಯಾಪ್</span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮೊನ್ನೆ ಸಂಜೆ ಕಚೇಯಿಂದ ಹೊರಡುವಾಗ ಆ ವಿದ್ಯಾರ್ಥಿ ಯುವಕ ಹತ್ತಿರ ಬಂದ. ಗೆಳೆಯನ ಮಗ. ಬೈಕ್ನಲ್ಲಿ ನಾನೂ ಬರಬಹುದಾ ಎಂದು ವಿನಯದಿಂದ ಪ್ರಶ್ನಿಸಿದ. ಹತ್ತಿಸಿಕೊಂಡೆ. ಏನು ಸ್ಟಡೀ ಮಾಡ್ತಾ ಇರುವಿ ಎಂದು ಪ್ರಶ್ನಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದ. ನನ್ನಲ್ಲಿ ಕುತೂಹಲ. ಆತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಾಗಿ ಹಲವು ಸಂಗತಿಗಳನ್ನು ಹಂಚಿಕೊಂಡ. ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಿರುವ ಅವಕಾಶ, ಭವಿಷ್ಯ ಮತ್ತು ಭಾರತಕ್ಕಿಂತ ವಿದೇಶದಲ್ಲಿ ಇದಕ್ಕಿರಬಹುದಾದ ಅಪಾರ ಸಾಧ್ಯತೆಗಳ ಕುರಿತಾಗಿ ಅಭಿಪ್ರಾಯಗಳನ್ನು ಹಂಚುತ್ತಾ ಹೋದ. ಆತನ ಮಾತುಗಳನ್ನು ಆಲಿಸುತ್ತಾ ಹೋದಾಗಲೆಲ್ಲ ನಾನು ಈ ವಿಷಯದಲ್ಲಿ ಒಂದನೇ ತರಗತಿ ಎಂಬುದೂ ಗೊತ್ತಾಯಿತು. ಈ ನಡುವೆ ಆತ ಹೇಳಿದ ಮಾತೊಂದು ನನ್ನನ್ನು ಬಹಳವೇ ಕಾಡಿತು- ‘ತನಗೆ ಡಿಸೈನಿಂಗ್ ಫೀಲ್ಡ್ ಇಷ್ಟ ಮತ್ತು ಆ ಕಾರಣದಿಂದ ಇನ್ಸ್ಟಾಗ್ರಾಂನಲ್ಲಿ ಇಂಥವುಗಳನ್ನೇ ವೀಕ್ಷಿಸಿ ಡೌನ್ಲೋಡ್ ಮಾಡಿಕೊಳ್ಳುವೆ, ಸಮಯ ಸಿಕ್ಕಾಗ ಅವನ್ನು ವೀಕ್ಷಿಸುವೆ’ ಎಂದೂ ಹೇಳಿದ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇನ್ಸ್ಟಾಗ್ರಾಂ ವೀಕ್ಷಿಸುವುದೆಂದರೆ ಚಿತ್ರವಿಚಿತ್ರ ಹಾಡು, ಹಾವಭಾವ, ಡ್ಯಾನ್ಸ್ ಗಳನ್ನು ವೀಕ್ಷಿಸುವುದೆಂದೇ ಹೆಚ್ಚಿನ ಹೆತ್ತವರು ಭಾವಿಸಿದ್ದಾರೆ. ಆದ್ದರಿಂದ ಇನ್ಸ್ಟಾಗ್ರಾಂ ವೀಕ್ಷಿಸದಂತೆ ಮಕ್ಕಳ ಮೇಲೆ ನಿಯಂತ್ರಣ ಹೇರುವುದೂ ಇದೆ. ಇದು ಸಂಪೂರ್ಣ ತಪ್ಪು ಎಂದಲ್ಲ. ಆದರೆ, ಇ ನ್ಸ್ಟಾಗ್ರಾಂ ಅನ್ನು ಒಂದು ಮಗು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬಹುದು ಮತ್ತು ಕಲಿಕೆ, ಪ್ರತಿಭಾ ಪೋಷಣೆಗೆ ಪೂರಕವಾದ ಏನೆಲ್ಲಾ ಅದರಲ್ಲಿದೆ ಎಂಬ ಬಗ್ಗೆ ಹೆತ್ತವರಲ್ಲಿ ಮಾಹಿತಿಗಳ ಕೊರತೆ ಇರುತ್ತದೆ. ಇದಕ್ಕೆ ಕಾರಣ ಜನರೇಶನ್ ಗ್ಯಾಪ್. ಟೆಕ್ನಾಲಜಿಯ ಈ ಕಾಲದಲ್ಲಿ ನಾಲ್ಕೈದು ವರ್ಷ ಪ್ರಾಯ ಅಂತರವಿರುವವರಲ್ಲೇ ತಾಂತ್ರಿಕವಾಗಿ ಅಗಾಧ ಅಂತರ ಎದ್ದು ಕಾಣುತ್ತದೆ. ಕ್ಷಣಕ್ಷಣಕ್ಕೂ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿರುವಾಗ ತಲೆಮಾರುಗಳ ನಡುವೆ ಬಹಳ ಬೇಗನೇ ಅಂತರ ಉಂಟಾಗುತ್ತಿರುತ್ತದೆ. ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್ ನ ಬಗ್ಗೆ ಇವತ್ತು ಯುವಸಮೂಹಕ್ಕೆ ಗೊತ್ತಿರುವ ಒಂದು ಶೇಕಡಾ ಮಾಹಿತಿ ಕೂಡ ಅವರ ಹೆತ್ತವರಿಗಿರುವುದಿಲ್ಲ. ಇಂಥ ಉದಾಹರಣೆಗಳು ಸಾಕಷ್ಟು ಇವೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸಮಸ್ಯೆ ಏನೆಂದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತಮಗೆ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಂಡು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವುದು ಬೇರೆ, ತಮಗೆ ಗೊತ್ತಿಲ್ಲ ಅನ್ನುವುದನ್ನೇ ಅವಮಾನ ಎಂದು ಭಾವಿಸಿ ಮಕ್ಕಳನ್ನೇ ಗದರಿಸುತ್ತಾ ಅವರ ಪ್ರತಿ ನಡೆಯನ್ನೂ ವಿರೋಧಿಸುತ್ತಾ ಅವರ ಮಾತನ್ನು ತುಂಡರಿಸುತ್ತಾ ವರ್ತಿಸುವುದು ಬೇರೆ. ಅನೇಕ ಹೆತ್ತವರು ಮಕ್ಕಳ ಮೇಲೆ ಹೀಗೆ ನಿಷ್ಠುರವಾಗಿ ವರ್ತಿಸುವುದಿದೆ. ಹೆತ್ತವರಿಗೆ ಗೊತ್ತು ಮಾಡುವ ಮಕ್ಕಳ ಪ್ರಯತ್ನವನ್ನು ಉದ್ಧಟತನವೆಂಬಂತೆ ಕಂಡು ಬಾಯಿ ಮುಚ್ಚಿಸುವ ಹೆತ್ತವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜನರೇಶನ್ ಗ್ಯಾಪ್ನ ಪರಿಣಾಮವಿದು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದಕ್ಕೆ ಪರಿಹಾರ ಏನು? ಮಕ್ಕಳ ಜೊತೆ ಹೆಚ್ಚೆಚ್ಚು ಒಡನಾಡುವುದು ಮತ್ತು ಅವರೊಂದಿಗೆ ತಮಾಷೆ, ಖುಷಿಯ ಕ್ಷಣ ಗಳನ್ನು ಹಂಚಿಕೊಂಡು ಮಾಹಿತಿ ವಿನಿಮಯವಾಗುವಂತೆ ನೋಡಿಕೊಳ್ಳುವುದು ಇದಕ್ಕಿರುವ ಹಲವು ಪರಿಹಾರಗಳಲ್ಲಿ ಒಂದು. ಮಕ್ಕಳೊಂದಿಗೆ ಅಂತರ ಹೆಚ್ಚಾದಂತೆಲ್ಲಾ ಮಾಹಿತಿಗಳ ವಿನಿಮಯವೂ ಕಡಿಮೆಯಾಗುತ್ತದೆ. ಜೊತೆಗೇ ಮಕ್ಕಳ ಮೇಲೆ ಅನಗತ್ಯ ಸಂದೇಹಗಳಿಗೂ ಆಸ್ಪದ ಕೊಡುತ್ತದೆ. ಮಗನೋ ಮಗಳೋ ಇನ್ಸ್ಟಾಗ್ರಾಂ ವೀಕ್ಷಿಸುತ್ತಿದ್ದರೆ ಹೆತ್ತವರಿಗೆ ಸಣ್ಣ ಸಂದೇಹ ಮತ್ತು ಕಳವಳ. ಅದರಲ್ಲಿ ಬರೇ ಬೇಡದ್ದೇ ಇದೆ ಎಂಬ ಪೂರ್ವಾಗ್ರಹವೇ ಈ ಸಂದೇಹ ಮತ್ತು ಅಸಹನೆಗೆ ಕಾರಣ. ಒಂದುವೇಳೆ, ಆ ಬಗ್ಗೆ ಮಕ್ಕಳ ಜೊತೆಗೇ ಕುಳಿತು ತಿಳಿದುಕೊಳ್ಳುವ ಪ್ರಯತ್ನ ಸಾಗಿದರೆ ಸಾಕಷ್ಟು ಸಂದೇಹಗಳು ನಿವಾರಣೆಯಾಗಬಹುದು. ಸದ್ಯದ ದಿನಗಳಲ್ಲಿ ಮಕ್ಕಳನ್ನು ಹೆಚ್ಚೆಚ್ಚು ಆಪ್ತವಾಗಿಸಿಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ. ಈ ವಿಷಯಗಳಲ್ಲಿ ಪ್ರವಾದಿ(ಸ) ಅತ್ಯಂತ ಪರಮೋಚ್ಛ ಮಾದರಿ. ಅವರು ಪುಟ್ಟ ಮಕ್ಕಳಿಂದ ಹಿಡಿದು ಹದಿಹರೆಯದವರ ಜೊತೆಗೂ ಒಡನಾಡಿದ ಅನೇಕ ವರದಿಗಳು ಸಾಕಷ್ಟು ಹದೀಸ್ ಗ್ರಂಥಗಳಲ್ಲಿವೆ. ಹದಿಹರೆಯದವರನ್ನಾಗಲಿ ಮಕ್ಕಳನ್ನಾಗಲಿ ಅವರು ಕರ್ಕಶವಾಗಿ ನಡೆಸಿಕೊಂಡದ್ದು ಇಲ್ಲವೇ ಇಲ್ಲ. ಎಲ್ಲಿಯವರೆಗೆಂದರೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಫಜ್ಲ್ ಬಿನ್ ಅಬ್ಬಾಸ್ ಎಂಬ ಹದಿಹರೆಯದ ಯುವಕ ಪ್ರವಾದಿಯವರ ಜೊತೆ ಪ್ರಯಾಣದಲ್ಲಿದ್ದರು. ಹೀಗೆ ಸಾಗುವಾಗ ಯುವತಿಯೋರ್ವಳು ಎದುರಾದಳು. ಫಜ್ಲ್ ಗೆ ದೃಷ್ಟಿ ಕಳಚಲಾಗಲಿಲ್ಲ. ಪ್ರವಾದಿ(ಸ) ಯುವಕ ಫಜ್ಲ್ ರ ಗಲ್ಲವನ್ನು ಹಿಡಿದು ಮುಖವನ್ನು ಇನ್ನೊಂದು ಕಡೆಗೆ ತಿರುಗಿಸಿದರು. ಆದರೆ, ಪ್ರವಾದಿ(ಸ) ಫಜ್ಲ್ ರನ್ನು ಹೀಯಾಳಿಸಿದ್ದಾಗಲಿ, ಬೈದದ್ದಾಗಲಿ, ಮನಸ್ಸಿಗೆ ನೋವಾಗುವಂಥ ಒಂದೇ ಒಂದು ಮಾತನ್ನು ಆಡಿದ್ದಾಗಲಿ ಇಲ್ಲವೇ ಇಲ್ಲ. ಯಾಕೆಂದರೆ, ಹದಿಹರೆಯದವರ ಭಾವನೆಗಳ ಬಗ್ಗೆ ಪ್ರವಾದಿಯವ ರಿಗೆ (ಸ) ಅರಿವಿತ್ತು. ಆ ಪ್ರಾಯದವರೊಂದಿಗೆ ಹೇಗೆ ನಡಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆಯಿತ್ತು. ಫಜ್ಲ್ ರ ಪ್ರಾಯದಲ್ಲಿ ನಿಂತು ಯೋಚಿಸುವ ಸಾಮರ್ಥ್ಯ ಪ್ರವಾದಿಯವರಿಗೆ ಇದ್ದಿದ್ದರಿಂದಲೇ ಗಲ್ಲವನ್ನು ಹಿಡಿದು ಪ್ರೀತಿಯಿಂದ ಮುಖ ತಿರುಗಿಸುವ ಮೂಲಕ ತಿದ್ದಿದರು. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮುಕ್ತ ಸ್ವಾತಂತ್ರ್ಯದ ಈ ಆಧುನಿಕ ಕಾಲದಲ್ಲಿ ಹದಿಹರೆಯದವರನ್ನು ತಿದ್ದಲು ಹೊರಡುವವರಲ್ಲಿ ಇರಬೇಕಾದ ಎಚ್ಚರಿಕೆಗಳಿವು. ಬೆರಳ ತುದಿಯಲ್ಲಿ ಜಗತ್ತನ್ನೇ ನೋಡಲು ಸಾಧ್ಯವಿರುವ ಈ ಕಾಲದಲ್ಲಿ ಹೆತ್ತವರು ತಮ್ಮ ಹದಿಹರೆಯದ ಮಕ್ಕಳ ವಿಷಯದಲ್ಲೂ ಪ್ರವಾದಿಯ ಪ್ರೀತಿ ಮತ್ತು ಜಾಣ್ಮೆಯನ್ನು ಪ್ರದರ್ಶಿಸಬೇಕಿದೆ. ಕಾಲದ ಬದಲಾವಣೆಯನ್ನು ಲೆಕ್ಕಿಸದೇ ಮಕ್ಕಳ ಜೊತೆ ವರ್ತಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಮಾಮ್ ಬುಖಾರಿ ಉಲ್ಲೇಖಿಸಿರುವ ವಚನ ಹೀಗಿದೆ:</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಉಮರ್ ಬಿನ್ ಅಬೀಸಲಮ ಅವರು ಮಗುವಾಗಿದ್ದಾಗಿನ ಘಟನೆ. ಚಿಕ್ಕ ಪ್ರಾಯದ ಉಮರ್ ಪ್ರವಾದಿ(ಸ)ರ ಜೊತೆ ಊಟಕ್ಕೆ ಕುಳಿತ. ಬಟ್ಟಲಿನ ಉದ್ದಕ್ಕೂ ಬೆರಳಾಡಿಸಿ ಮತ್ತು ಕೈ ತಾಗಿಸಿ ತಿನ್ನತೊಡಗಿದ. ಪ್ರವಾದಿ(ಸ) ಬಾಲಕ ಉಮರ್ನನ್ನು ತಿದ್ದಿದರು. ತಿನ್ನುವ ಮೊದಲು ಬಿಸ್ಮಿ ಹೇಳಬೇಕು ಎಂದು ಹೇಳಿಕೊಟ್ಟರು. ಆ ಬಳಿಕ ಬಲಗೈಯಿಂದ ತಿನ್ನಬೇಕು ಎಂದು ಮೈದಡವಿ ಹೇಳಿ ದರು. ಮಾತ್ರವಲ್ಲ, ಬಟ್ಟಲಿನ ಉದ್ದಕ್ಕೂ ಕೈಹಾಕಿ ತಿನ್ನಬಾರದು, ನಿನ್ನ ಹತ್ತಿರದಿಂದ ತಿನ್ನಬೇಕು ಎಂದೂ ಹೇಳಿಕೊಟ್ಟರು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರವಾದಿ(ಸ) ಹೇಳಿದ ರೀತಿ ತನ್ನ ಮೇಲೆ ಎಂಥ ಪರಿಣಾಮ ಬೀರಿತೆಂದರೆ, ಆ ಬಳಿಕ ಜೀವಮಾನದಲ್ಲಿ ಒಮ್ಮೆಯೂ ಈ ಉಪ ದೇಶವನ್ನು ನಾನು ಉಲ್ಲಂಘಿಸಿಲ್ಲ ಎಂದು ಉಮರ್ ಬಿನ್ ಅಬೀ ಸಲಮ ಹೇಳಿರುವುದಾಗಿ ಬುಖಾರಿ ಗ್ರಂಥದಲ್ಲಿ ನಮೂದಿಸಲಾಗಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದೊಂದೇ ಅಲ್ಲ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರವಾದಿ(ಸ) ಮಕ್ಕಳನ್ನು ಅತಿಯಾಗಿ ಹಚ್ಚಿಕೊಳ್ಳುತ್ತಿದ್ದರು. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಮಾತ್ರವೇ ಅಲ್ಲ, ಎಲ್ಲ ಮಕ್ಕಳನ್ನೂ ಪ್ರೀತಿಯಿಂದ ಮಾತನಾಡಿಸುವುದು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಅವರ ರೀತಿಯಾಗಿತ್ತು. ಒಂದು ಬಾರಿ ಹೀಗಾಯಿತು,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅವರು ಸಾಮೂಹಿಕ ನಮಾಝïನ ನೇತೃತ್ವ ವಹಿಸಿದ್ದರು. ಸುಜೂದ್ ತುಂಬಾ ದೀರ್ಘವಾಯಿತು. ಎಷ್ಟೆಂದರೆ, ನಮಾಜ್ ನಲ್ಲಿದ್ದ ಎಲ್ಲರ ಅನುಭವಕ್ಕೂ ಬರುವಷ್ಟು. ಆದ್ದರಿಂದಲೇ ನಮಾಜ್ ಮುಗಿದ ಬಳಿಕ ಪ್ರವಾದಿಯವರನ್ನು ಆ ಬಗ್ಗೆ ಅವರೆಲ್ಲ ಪ್ರಶ್ನಿಸಿದರು. ಆಗ ಪ್ರವಾದಿ(ಸ) ಹೇಳಿದರು,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ನಾನು ಸುಜೂದ್ನಲ್ಲಿದ್ದಾಗ ನನ್ನ ಬೆನ್ನ ಮೇಲೆ ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ ಹತ್ತಿದರು. ಆದ್ದರಿಂದ ಅವರು ಇಳಿಯು ವವರೆಗೆ ನಾನು ಕಾದೆ. ಆದ್ದರಿಂದ ಸುಜೂದ್ ದೀರ್ಘವಾಯಿತು.’ ಇದೊಂದೇ ಅಲ್ಲ, ನಮಾಜ್ನ ವೇಳೆ ಮತ್ತು ಮಿಂಬರ್ನಲ್ಲಿದ್ದ ಸಮಯದಲ್ಲೂ ಪ್ರವಾದಿ ಮಕ್ಕಳನ್ನು ಪ್ರೀತಿಸಿದ್ದರು ಎಂಬುದಾಗಿ ಇಮಾಮ್ ಅಹ್ಮದ್ ಮತ್ತು ನಸಾಈ ಉಲ್ಲೇಖಿಸಿರುವ ಹದೀಸ್ ಗಳ ಲ್ಲಿದೆ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಪ್ರವಾದಿಯ ಈ ಉದಾಹರಣೆಯನ್ನು ಇಂದಿನ ಕಾಲದ ಮಸೀದಿಗಳಿಗೆ ಅನ್ವಯಿಸಿ ನೋಡಿ. 7 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮಸೀ ದಿಗೆ ಕರೆತರಬೇಡಿ ಎಂಬ ಬೋರ್ಡು ತೂಗು ಹಾಕಲಾದ ಮಸೀದಿಗಳು ಅಸಂಖ್ಯ ಇವೆ. ಹಾಗಂತ, ಇಂಥ ಬೋರ್ಡ್ ಗೆ ಅದರದ್ದೇ ಆದ ಕಾರಣಗಳು ಇರಬಹುದು. ಆದರೆ ಹೆತ್ತವರನ್ನು ಅನುಸರಿಸಿಕೊಂಡು ಬೆಳೆಯಬೇಕಾದ ಮತ್ತು ನಮಾಜ್ ನ ಚೈತನ್ಯವನ್ನು ತನ್ನೊಳಗೆ ಇಳಿಸಿಕೊಳ್ಳಬೇಕಾದ ಮಕ್ಕಳನ್ನು ಹೀಗೆ ಮಸೀದಿಯಿಂದ ಹೊರಗಿರಿಸುವ ಬದಲು ಮಸೀದಿಗೆ ತಾಗಿಕೊಂಡೇ ಕಿಡ್ಸ್ ರೂಮನ್ನು ನಿರ್ಮಿಸಿದರೆ ಎಷ್ಟು ಚೆನ್ನಾದೀತು? ಹಾಗೆ ಮಾಡಿದರೆ ಆಡುತ್ತಲೇ ನಮಾಝನ್ನು ಜೀರ್ಣಿಸಿಕೊಳ್ಳುವ ಅವಕಾಶವೊಂದು ಮಕ್ಕಳಿಗೆ ಸಿಕ್ಕಂತಾಗದೇ? ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಮಸೀದಿಯಲ್ಲಿ ನಮಾಝಿಗರನ್ನು ನೋಡುತ್ತಾ ಬೆಳೆಯುವ ಮಗು ಮಸೀದಿಗೆ ಹತ್ತಿರವಾಗುತ್ತದೆ. ಆರಂಭದಲ್ಲಿ ಸಣ್ಣ-ಪುಟ್ಟ ಕೀಟಲೆ, ಆಟ, ಶಬ್ದ ಇದ್ದದ್ದೇ . ನಿಧಾನಕ್ಕೆ ಅದು ಸರಿ ಹೋಗುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ನಮಾಝಿಗರು ಮಕ್ಕಳ ಈ ತುಂಟಾಟವನ್ನು ಮಹಾನ್ ಅಪರಾಧವೆಂಬಂತೆ ಕಾಣುವುದಿದೆ. ನಮಾಜ್ ಮುಗಿದ ಕೂಡಲೇ ಆ ಮಕ್ಕಳನ್ನು ನೂರು ಕಣ್ಣುಗಳು ಸುಡುವಂತೆ ತಿರುಗಿ ನೋಡುವುದಿದೆ. ಮಕ್ಕಳನ್ನು ಹತ್ತಿರ ಕರೆದು ಮೈದಡವಿ ಪ್ರೀತಿಯಿಂದ ಮತ್ತೆ ಮತ್ತೆ ಹೇಳುವ ಸಹನೆ ಇವತ್ತಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ, ಹಿರಿಯರು ಮಕ್ಕಳ ಬಗ್ಗೆ ಮಗುವಾಗಿ ಆಲೋಚಿಸದೇ ಇರುವುದು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಒಮ್ಮೆ ಪ್ರವಾದಿಯವರು(ಸ) ಹಸನ್ ಮತ್ತು ಹುಸೈನ್ ಜೊತೆ ಆಡುತ್ತಿದ್ದ ವೇಳೆ ಅಲ್ಲಿಗೆ ಮುಆವಿಯಾ ಬಂದರು. ಅವರು ಆಟವನ್ನು ನೋಡತೊಡಗಿದರು. ಆಗ ಪ್ರವಾದಿ(ಸ) ಹೇಳಿದರು,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯಾರಿಗಾದರೂ ಮಕ್ಕಳಿದ್ದರೆ ಅವರು ಮಕ್ಕಳ ಜೊತೆ ಮಗುವಾಗಲಿ. </span><span style="background-color: white; color: #222222; font-family: Arial, Helvetica, sans-serif; font-size: small;">ಇನ್ನೊಂದು ಘಟನೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ರನ್ನು ಬೆನ್ನ ಮೇಲೆ ಕೂರಿಸಿ ಪ್ರವಾದಿ(ಸ) ಆಟವಾಡುತ್ತಿದ್ದಾಗ ಉಮರ್ ಬಿನ್ ಖತ್ತಾಬ್(ರ) ಅಲ್ಲಿಗೆ ಬಂದರು. ‘ಎಷ್ಟು ಒಳ್ಳೆಯ ಕುದುರೆ ನಿಮ್ದು’ ಎಂದು ಮಕ್ಕಳನ್ನು ನೋಡಿ ನಗುತ್ತಾ ಹೇಳಿದರು. ಆಗ ಪ್ರವಾದಿ(ಸ), ‘ಇವರಿಬ್ಬರೂ ಒಳ್ಳೆಯ ಕುದುರೆ ಸವಾರರು’ ಎಂದರು ಎಂಬುದಾಗಿ ಇಬ್ನು ಕಸೀರ್ನಲ್ಲಿ ಉಲ್ಲೇಖಿಸಲಾಗಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಗಳು ಫಾತಿಮಾ(ರ)ರನ್ನು ಪ್ರವಾದಿ ತನ್ನ ಕರುಳಿನ ತುಂಡು ಎಂದು ಹೇಳಿದ್ದರು. ಫಾತಿಮಾ ಹತ್ತಿರ ಬಂದಾಗ ಎದ್ದು ನಿಂತು ಅವರನ್ನು ಆಲಿಂಗಿಸಿ ಚುಂಬಿಸಿ ತನ್ನ ಬಳಿ ಕುಳ್ಳಿರಿಸುತ್ತಿದ್ದರು. ಒಮ್ಮೆ ಫಾತಿಮಾ ಪುಟ್ಟ ದೂರಿನೊಂದಿಗೆ ಪ್ರವಾದಿ(ಸ)ರ ಬಳಿಗೆ ಬಂದರು. ಪತಿ ಅಲಿಯವರ(ರ) ಮನೆಯಲ್ಲಿ ಕೆಲಸದಾಳು ಇಲ್ಲದೇ ಇರುವುದರಿಂದ ತನಗಾಗುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡರು. ಪ್ರವಾದಿ(ಸ) ಫಾತಿಮಾರನ್ನು ಹತ್ತಿರ ಕುಳ್ಳಿರಿಸಿದರು. ಸಹನೆಯ ಉಪದೇಶ ಮಾಡಿದರು. ಆಯಾಸದ ವೇಳೆ ಹೇಳುವುದಕ್ಕೆಂದು ಕೆಲವು ಸ್ವಸ್ತಿ ವಚ ನಗಳನ್ನು ಹೇಳಿಕೊಟ್ಟರು. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹದಿಹರೆಯದ ಮತ್ತು ಚಿಕ್ಕ ಪ್ರಾಯದ ಮಕ್ಕಳ ಮಾತುಗಳನ್ನು ಅವರ ಮಟ್ಟಕ್ಕೆ ಇಳಿದು ಕೇಳುವ ಮತ್ತು ಆಲೋಚಿಸುವ ಸಹನೆ ಪ್ರದರ್ಶಿಸುವುದು ಇಂದಿನ ಹೆತ್ತವರ ಪಾಲಿಗೆ ಬಹಳ ಅಗತ್ಯ. ಮಕ್ಕಳು, ಹದಿಹರೆಯದವರು ಮತ್ತು ದೊಡ್ಡವರ ಜೊತೆ ಪ್ರವಾದಿ(ಸ) ಏಕಪ್ರಕಾರವಾಗಿ ನಡಕೊಂಡದ್ದೇ ಇಲ್ಲ. ಹದಿಹರೆಯದ ಸಹಜ ಆಕರ್ಷಣೆಗೆ ಅವರು ಪ್ರತಿಕ್ರಿಯಿಸಿದ ರೀತಿ ಮತ್ತು ಮಕ್ಕಳ ಜೊತೆ ಮಗುವಾಗುತ್ತಿದ್ದ ರೀತಿಯೇ ಅವರು ಕಾಲ ಮತ್ತು ಪ್ರಾಯವನ್ನು ಹೇಗೆ ಓದುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜನರೇಶನ್ ಗ್ಯಾ ಪ್ಗೆ ಅವರಲ್ಲಿ ಅವಕಾಶವೇ ಇರಲಿಲ್ಲ. ಆ ಕಾಲದ ಜನರೇಶನ್ನ ಭಾವನೆಯನ್ನು ಅವರು ಓದಬಲ್ಲವರಾಗಿದ್ದರು. ಅಳಿಯನಾದ ಅಲಿಯವರನ್ನು(ರ) ತರಾಟೆಗೆತ್ತಿಕೊಳ್ಳುವ ಬದಲು ತಾನು ಅತಿಯಾಗಿ ಪ್ರೀತಿಸುವ ಮಗಳಿಗೆ ಅವರು ಉಪದೇಶ ನೀಡಿದ್ದೇ ಸಂದರ್ಭ ಮತ್ತು ಸನ್ನಿವೇಶವನ್ನು ಅವರು ಹೇಗೆ ತಿಳಿದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಈಗಿನ ಅಗತ್ಯ ಇದು. ಟೆಕ್ನಾಲಜಿಯ ಈ ಕಾಲದಲ್ಲಿ ಜನರೇಶನ್ ಗ್ಯಾಪ್ ಆಗದಂತೆ ಹೆತ್ತವರು ಜಾಗರೂಕತೆಯನ್ನು ಪಾಲಿಸಬೇಕು.</span></div></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-90694252249259216752023-09-14T22:52:00.000-07:002023-09-14T22:52:49.648-07:00 ಇಸ್ಲಾಮೋಫೋಬಿಯಾದ ಫಲಿತಾಂಶವೇ ಈ ಹೇಮಾ, ರೇವತಿ, ತ್ಯಾಗಿ?<p><br /></p><span style="background-color: white; color: #222222; font-family: Arial, Helvetica, sans-serif; font-size: small;"><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgq1qbC-I09F5X0kGu7040SlGo9zOey4H-4FuRKriV64EH-WTfSbgTH3Yytgq-HrkaDkGHzhFMhdsZIh2gvpCcpQBV5COTejLoRlACg_jdXNZrH0bvnEU2WzcrO_jO-yWhKUtWV-FvPNVIUXtb0PzWwVqs0c0pasv6USvPTwGF19hw1VEVEuocBi7YjBOlZ/s1352/page%203%20pic%20(2).jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEgq1qbC-I09F5X0kGu7040SlGo9zOey4H-4FuRKriV64EH-WTfSbgTH3Yytgq-HrkaDkGHzhFMhdsZIh2gvpCcpQBV5COTejLoRlACg_jdXNZrH0bvnEU2WzcrO_jO-yWhKUtWV-FvPNVIUXtb0PzWwVqs0c0pasv6USvPTwGF19hw1VEVEuocBi7YjBOlZ/w400-h198/page%203%20pic%20(2).jpg" width="400" /></a></div><br /></div></span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಾಲ್ಕು ಘಟನೆಗಳು</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ತಮಿಳುನಾಡಿನ ತಿರುವಣ್ಣಮಲೈ ನಗರದ ಸೋಮಸಿಪಾಡಿ ಗ್ರಾಮದ ಅಣ್ಣಾಮಲೈ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿಂದಿ ಪರೀಕ್ಷೆ ನಡೆಯುತ್ತಿತ್ತು. 27 ವರ್ಷದ ಶಬಾನಾ ಪರೀಕ್ಷೆಗೆ ಹಾಜರಾದರು. ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ ಏರ್ಪಡಿಸಿದ್ದ ಈ ಪರೀಕ್ಷೆಗೆ 540 ಮಂದಿ ಹಾಜರಾಗಿದ್ದರು. ಇವರಲ್ಲಿ ಶಬಾನಾ ಏಕೈಕ ಹಿಜಾಬ್ಧಾರಿ ಮಹಿಳೆ. ಇವರು ಕ್ವಾಲಿಫೈಡ್ ಅರೆಬಿಕ್ ಟೀಚರ್. ಖಾಸಗಿ ಶಾಲೆಯೊಂದರಲ್ಲಿ ಈ ಶಬಾನಾ ಅರೆಬಿಕ್ ಟೀಚರ್ ಆಗಿಯೂ ಕೆಲಸ ಮಾಡುತ್ತಿದ್ದರು. ಪರೀಕ್ಷೆ ಬರೆಯುತ್ತಾ 15 ನಿಮಿಷಗಳು ಕಳೆದಿರಬಹುದು. ಪರೀಕ್ಷಾ ಹಾಲ್ನ ಮೇಲ್ನೋಟ ವಹಿಸಿಕೊಂಡಿದ್ದ ರೇವತಿ ಟೀಚರ್ ಅವರ ಬಳಿಗೆ ಬಂದು ಹಿಜಾಬ್ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರಿ ಎಂದು ಆದೇಶಿಸಿದರು. ಶಬಾನಾ ಒಪ್ಪಲಿಲ್ಲ. ತಮಿಳುನಾಡಿನ ಯಾವುದೇ ಶಾಲೆಯಲ್ಲಾಗಲಿ ಪರೀಕ್ಷಾ ಹಾಲ್ನಲ್ಲಾಗಲಿ ಹಿಜಾಬ್ಗೆ ನಿಷೇಧ ಇರಲಿಲ್ಲ. ಶಬಾನಾ ವಾದಿಸಿದರು. ಬಳಿಕ ಶಾಲಾ ಪ್ರಾಂಶುಪಾಲ ಸಂತೋಷ್ ಕುಮಾರ್ ಅವರ ಪ್ರವೇಶವಾಯಿತು. ಒಂದೋ ಹಿಜಾಬ್ ಇಲ್ಲವೇ ಪರೀಕ್ಷೆ ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಅವಕಾಶ ಇದೆ ಎಂದು ಅವರು ಷರಾ ಬರೆದರು. ಶಬಾನಾ ಒಪ್ಪಲಿಲ್ಲ. ತಾನು ಅರೆಬಿಕ್ ಟೀಚರ್ ಆಗಿದ್ದು, ಹಿಜಾಬ್ ಕಳಚುವುದರಿಂದ ತನ್ನ ಮಕ್ಕಳಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದರೂ ಅವರು ಕೇಳಲಿಲ್ಲ. ಶಾಲಾ ಕರೆಸ್ಟಾಂಡೆಂಟ್ ಆಗಮಿಸಿ ಆಕೆಯ ಪ್ಯಾಡ್ ಅನ್ನು ಕಿತ್ತುಕೊಂಡರು. ಮಾತ್ರವಲ್ಲ, ಸ್ವಇಚ್ಛೆಯಿಂದ ಪರೀಕ್ಷಾ ಹಾಲ್ನಿಂದ ತೆರಳುತ್ತಿರುವುದಾಗಿ ಬರಹದ ಮೂಲಕ ಬರೆದುಕೊಡು ಎಂದೂ ಆಗ್ರಹಿಸಿದರು. ಶಬಾನಾ ಈ ಎಲ್ಲ ಸಂಗತಿಯನ್ನು ಜಿಲ್ಲಾಧಿಕಾರಿ ಮುರುಗೇಶ್ ಅವರ ಗಮನಕ್ಕೆ ತಂದರು. ಶಿಕ್ಷಣ ಸಚಿವ ಅಸ್ಬಿಲ್ ಮಹೇಶ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಶಬಾನಾರಿಗೆ ಮರಳಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಯಿತು. ಆದರೆ, ಘಟ ನೆಯಿಂದ ತಾನು ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ ಎಂದ ಶಬಾನಾ ಆ ಹೊತ್ತಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ನೊಂದು ನುಡಿದರು. ಇದು 2023, ಆಗಸ್ಟ್ 22ರಂದು ನಡೆದ ಘಟನೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ದೆಹಲಿಯ ಕೈಲಾಶ್ ನಗರದ ಸರಕಾರಿ ಪ್ರೌಢಶಾಲೆಯ ಟೀಚರ್ ಹೇಮಾ ಗುಲಾಟಿ 9ನೇ ತರಗತಿಗೆ ಪಾಠ ಮಾಡುತ್ತಿದ್ದರು. ಚಂದ್ರಯಾನವು ಚಂದ್ರನಿಗೆ ಮುತ್ತಿಕ್ಕುವುದಕ್ಕೆ ಗಂಟೆಗಳಷ್ಟೇ ಬಾಕಿಯಿತ್ತು. ದೆಹಲಿ ಸರಕಾರ ಹೊಸದಾಗಿ ಅಳವಡಿಸಿರುವ ದೇಶಭಕ್ತಿ ಪಾಠ ಪುಸ್ತಕವನ್ನು ಬೋಧಿಸುತ್ತಿರುವ ವೇಳೆ ಮುಸ್ಲಿಮರು ಮತ್ತು ಇಸ್ಲಾಮ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದರು. ‘ಮುಸ್ಲಿಮರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ಪಾತ್ರವನ್ನೂ ನಿಭಾಯಿಸಿಲ್ಲ, ನೀವು ಪ್ರಾಣಿಗಳನ್ನು ಹತ್ಯೆ ಮಾಡು ತ್ತೀರಿ’ ಮತ್ತು ಅದರ ಮಾಂಸವನ್ನು ತಿನ್ನುತ್ತೀರಿ. ನೀವು ಕರುಣೆ ಇಲ್ಲದವರು, ನೀವು ಪಾಕಿಸ್ತಾನಕ್ಕೆ ಹೋಗಿ... ಎಂದು 52 ವಿದ್ಯಾರ್ಥಿಗಳ ಮುಂದೆ ಆಕೆ ಹೇಳಿದರು. ಹಾಗಂತ, ಆಕೆ ಹೀಗೆ ಮಾತನಾಡುತ್ತಿರುವುದು ಅದು ಮೊದಲ ಬಾರಿ ಆಗಿರಲಿಲ್ಲ. ತರಗತಿಯಲ್ಲಿರುವ 9 ಮುಸ್ಲಿಮ್ ವಿದ್ಯಾರ್ಥಿಗಳು ಈ ಬಾರಿ ಆಕ್ಷೇಪಿಸಿದರು. ಇದೇವೇಳೆ, ಕೆಲವು ವಿದ್ಯಾರ್ಥಿಗಳು ಆಕೆಯ ಮಾತಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದಾದ ಬಳಿಕ ಮಕ್ಕಳ ಹೆತ್ತವರು ಈ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾದರು ಮತ್ತು ಹೇಮಾ ಗುಲಾಟಿ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದರು. ಇದು ನಡೆದಿರುವುದು ಆಗಸ್ಟ್ 23ರಂದು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಉತ್ತರ ಪ್ರದೇಶದ ಮುಝಫ್ಫರ್ ನಗರ್ನ ಖುಬ್ಬೂಪುರ್ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್ ಕೂಡ ಇಂಥದ್ದೇ ಮುಸ್ಲಿಮ್ ದ್ವೇಷದ ಕಾರಣಕ್ಕಾಗಿ ಸುದ್ದಿಗೀಡಾಯಿತು. ಒಂದರಿಂದ 5ನೇ ತರಗತಿಯವರೆಗೆ ಕಲಿಸಲಾಗುವ ಈ ಖಾಸಗಿ ಶಾಲೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಉಳಿದ ವಿದ್ಯಾರ್ಥಿಗಳಿಂದ ಟೀಚರ್ ತೃಪ್ತ ತ್ಯಾಗಿ ಬಾರಿಸುತ್ತಾರೆ. ಮಾತ್ರವಲ್ಲ, ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಎರಡನೇ ತರಗತಿಯ ಆ ವಿದ್ಯಾರ್ಥಿ ಅಳುತ್ತಾ ಕರಿ ಹಲಗೆಯ ಬಳಿ ನಿಂತಿರುವುದು ಮತ್ತು ಸಹಪಾಠಿಗಳು ಒಬ್ಬೊಬ್ಬರಾಗಿ ಬಂದು ಆತನ ಕೆನ್ನೆಗೆ ಬಾರಿಸುವುದು ವೀಡಿಯೋದಲ್ಲಿದೆ. ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಗಿಸುವುದಕ್ಕೆ ಹೆತ್ತವರ ಮೇಲೆ ಒತ್ತಡಗಳೂ ಬಂದಿವೆ. ಇದು ಆಗಸ್ಟ್ 22ರ ಘಟನೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ಜನವರಿ 22, 2022ರಂದು ನಮ್ಮದೇ ರಾಜ್ಯದಲ್ಲಿ ಹಿಜಾಬ್ ವಿವಾದ ಶುರುವಾಯಿತು. ಎರಡ್ಮೂರು ತಿಂಗಳ ಕಾಲ ವಿದ್ಯಾರ್ಥಿ ನಿಯರನ್ನು ಇನ್ನಿಲ್ಲದಂತೆ ಕಾಡಿದ ಈ ವಿವಾದದಿಂದಾಗಿ 1010 ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ವಿಧಾನಸಭೆಗೆ ಸರಕಾರವೇ ತಿಳಿಸಿರುವ ಮಾಹಿತಿ ಹೇಳುತ್ತದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಾಗಂತ, ಇವೆಲ್ಲ ಒಂದು ಬೆಳಗಾತ ದಿಢೀರನೇ ಉಂಟಾದ ಬೆಳವಣಿಗೆ ಎಂದು ಅನಿಸುತ್ತಿಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಜನರ ಮನಸ್ಸಿನಲ್ಲಿ ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್ನ ಬಗೆಗಿನ ಭೀತಿಯ ಭಾವವನ್ನು ಸೃಷ್ಟಿಸುವ ಪ್ರಯತ್ನ ಬಹಳ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಸಿನಿಮಾ, ನಾಟಕ, ಯಕ್ಷಗಾನ, ಕತೆ, ಕಾದಂಬರಿಗಳ ಮೂಲಕ ಈ ದ್ವೇಷದ ಇಂಜಕ್ಷನ್ ಅನ್ನು ಜನರಿಗೆ ಚುಚ್ಚುತ್ತಲೇ ಬರಲಾಗಿದೆ. ಇತ್ತೀಚಿನ ದಶಕದಲ್ಲಿ ಈ ದ್ವೇಷ ಪ್ರಚಾರದ ನೊಗವನ್ನು ಟಿ.ವಿ. ಚಾನೆಲ್ಗಳು ವಹಿಸಿ ಕೊಂಡ ಬಳಿಕ ಹೆಚ್ಚು ತೀವ್ರ ರೂಪದ ಫಲಿತಾಂಶ ವ್ಯಕ್ತವಾಗುತ್ತಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮುಸ್ಲಿಮರನ್ನು ಲುಚ್ಚರಂತೆ, ಹೆಣ್ಣುಬಾಕರು, ಸರ್ವಾಧಿಕಾರಿಗಳು, ಮಹಿಳಾ ದೌರ್ಜನ್ಯಕೋರರು, ದರೋಡೆಕೋರರು, ಬಹುಪತ್ನಿ ವಲ್ಲಭರು ಮತ್ತು ಇನ್ನಿತರ ಅತಿಕೆಟ್ಟ ವ್ಯಕ್ತಿತ್ವಗಳಂತೆ ಬಿಂಬಿಸಲು ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳ ನಡುವೆ ಈಗಲೂ ಪೈಪೋಟಿಯೇ ಇದೆ. 2012ರಲ್ಲಿ ಡಿಕ್ಟೇಟರ್ ಎಂಬ ಹಾಲಿವುಡ್ ಸಿನಿಮಾ ಬಿಡುಗಡೆಯಾಯಿತು. ಸಹಜವಾಗಿ ಇದರಲ್ಲಿ ಡಿಕ್ಟೇಟರ್ (ಸರ್ವಾಧಿಕಾರಿ) ಮುಸ್ಲಿಮ್. ಯಾವುದೇ ಕಾರಣಕ್ಕೂ ಪ್ರಜಾತಂತ್ರ ತಳವೂರದಂತೆ ಮಾಡುವುದೇ ಆತನ ಕೆಲಸ. ಅದಕ್ಕಾಗಿ ಅತಿ ಕ್ರೂರಿಯಾಗಿ ಆತ ಬದಲಾಗುತ್ತಾನೆ. ಹಾಗಂತ, 2012ರಲ್ಲಿ ಸಿನಿಮಾ ತಯಾರು ಮಾಡುವಾಗ ಮತ್ತು ಅದಕ್ಕಿಂತ ಮೊದಲೂ ಈ ಜಗತ್ತಿನಲ್ಲಿ ಮುಸ್ಲಿಮರಲ್ಲದ ಸರ್ವಾಧಿಕಾರಿಗಳು ಸಾಕಷ್ಟು ಇದ್ದರು. ಜನರೊಂದಿಗೆ ಅತ್ಯಂತ ನಿರ್ದಯಿಯಾಗಿ ನಡಕೊಂಡವರೂ ಇದ್ದರು. ಈಗಲೂ ಇದ್ದಾರೆ. 2022 ಆಗಸ್ಟ್ 5ರಂದು ಅನ್ನು ಕಪೂರ್ ನಾಯಕತ್ವದ ‘ಹಮ್ ದೋ ಹಮಾರೆ ಬಾರಾ’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಅದರಲ್ಲಿ ಅನ್ನು ಕಪೂರ್ ಮುಸ್ಲಿಮ್ ಕುಟುಂಬದ ಯಜಮಾನನ ಪಾತ್ರ ಧಾರಿಯಾಗಿ ಕಾಣಿಸಿದ್ದರೆ ಸುತ್ತ-ಮುತ್ತ 11 ಮಕ್ಕಳಿದ್ದರು. ಅಲ್ಲದೇ 12ನೇ ಪ್ರಸವಕ್ಕೆ ಸಿದ್ಧವಾದ ಪತ್ನಿಯೂ ಜೊತೆಗಿದ್ದರು. 2023ರಲ್ಲಿ ಈ ಸಿನಿಮಾ ಬಿಡುಗಡೆಯೂ ಆಯಿತು. ಅಂದಹಾಗೆ, </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದಿತೋ ಸೋತಿತೋ ಎಂಬುದಕ್ಕಿಂತ ಹೆಚ್ಚಾಗಿ ಈ ಸಿನಿಮಾ ವೀಕ್ಷಿಸಿದವರ ಮೇಲೆ ಈ ಚಿತ್ರಕತೆ ಎಂಥ ಪರಿಣಾಮ ಬೀರಿರಬಹುದು ಎಂಬುದೇ ಮುಖ್ಯ. ಮುಸ್ಲಿಮ್ ಸಮುದಾಯ ಮಕ್ಕಳನ್ನು ತಯಾರಿಸುವ ಕಾರ್ಖಾನೆಗಳಿದ್ದಂತೆ ಎಂಬ ಸಂದೇಶವನ್ನು ಈ ಸಿನಿಮಾ ಬಿತ್ತುವುದಂತೂ ಖಂಡಿತ. ಹಾಗಂತ, ಈ ದೇಶದ ಜನಗಣತಿ ವಿವರಗಳು ಈ ಸಂದೇಶವನ್ನು ಪುರಸ್ಕರಿಸುತ್ತದೆಯೇ? ಇಲ್ಲ. ಸ್ವಾತಂತ್ರ್ಯಾ ನಂತರ ನಡೆದ ಮೊದಲ ಜನಗಣತಿಯ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತ ಹೆಚ್ಚಿತ್ತು. ಆದರೆ 2011ರ ಜನಗಣತಿಯ ಪ್ರಕಾರ, ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತಲೂ ವೇಗವಾಗಿ ಕುಸಿಯುತ್ತಿದೆ. ಹಿಂದುಳಿದ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಮರ ಫಲವತ್ತತೆಯ ಪ್ರಮಾಣ ಸಮಾನವಾಗಿ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ಮುಸ್ಲಿಮರ ಫಲವತ್ತತೆಯ ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಆದ್ದರಿಂದಲೇ, ಹಮ್ ದೋ ಹಮಾರೆ ಬಾರಾ ಸಿನಿಮಾ ಪೋಸ್ಟರ್ಗೆ ಪತ್ರಕರ್ತೆ ರಾಣಾ ಅಯ್ಯೂಬ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಇಮ್ಯಾಜಿನಿಂಗ್ ಇಂಡಿಯನ್ ಮುಸ್ಲಿಮ್ಸ್: ಲುಕಿಂಗ್ ಥ್ರೂ ದಿ ಲೆನ್ಸ್ ಆಫ್ ಬಾಲಿವುಡ್’- ಎಂಬ ಸಂಶೋಧನಾ ಪ್ರಬಂಧದಲ್ಲಿ ಮುಸ್ಲಿಮ್ ದ್ವೇಷಕ್ಕೆ ಬಾಲಿವುಡ್ ಸಿನಿಮಾಗಳ ಕೊಡುಗೆಯನ್ನು ಮೊಯಿದುಲ್ ಇಸ್ಲಾಮ್ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಹೆಚ್ಚಿನೆಲ್ಲ ಸಿನಿಮಾಗಳಲ್ಲಿ ಮುಸ್ಲಿಮರು ಒಂದೋ ಖಳರು ಅಥವಾ ಖೂಳರು ಅಥವಾ ಹೆಣ್ಣು ಬಾಕರು. ಮುಸ್ಲಿಮ್ ಪಾತ್ರವನ್ನು ನೆಗೆಟಿವ್ ಆಗಿ ಬಿಂಬಿಸುವುದು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾ ನಿರ್ದೇಶಕರ ಮಾಮೂಲು ನೀತಿ. ಇನ್ನೊಂದು, ಐತಿಹಾಸಿಕ ಘಟನೆಗಳನ್ನು ಹಿಂದೂ-ಮುಸ್ಲಿಮ್ ಆಗಿ ಚಿತ್ರೀಕರಿಸುವುದು. ಉದಾಹರಣೆಗೆ, ತಾನಾಜಿ ಸಿನಿಮಾ. 1670ರಲ್ಲಿ ಕೊಂಡಾಣದಲ್ಲಿ ಔರಂಗಝೇಬ್ ಮತ್ತು ತಾನಾಜಿ ನಡುವೆ ನಡೆದ ಯುದ್ಧವನ್ನು ಯುದ್ಧವಾಗಿ ಬಿಂಬಿಸದೇ ಹಿಂದೂ-ಮುಸ್ಲಿಮ್ ನೆರಳಿನೊಂದಿಗೆ ಇದು ಕಟ್ಟಿಕೊಡುತ್ತದೆ. ಅಲ್ಲಾವುದ್ದೀನ್ ಖಿಲ್ಜಿಯು ಚಿತ್ತೂರು ಮೇಲೆ ದಾಳಿ ಮಾಡಿ ಪದ್ಮಾವತಿಯ ಗಂಡ ರತನ್ಸಿಂಗ್ರನ್ನು ಕೊಂದ ಘಟನೆಯನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಂದೂ-ಮುಸ್ಲಿಮ್ ರೀತಿಯಲ್ಲೇ ಬಿಂಬಿಸಿದ್ದಾರೆ. ‘ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ’ದ ನಾಲ್ಕು ಮಂದಿ ಮಹಿಳೆಯರಲ್ಲಿ ಇಬ್ಬರು ಮುಸ್ಲಿಮ್ ಪಾತ್ರಧಾರಿಗಳು. ಸ್ವಾತಂತ್ರ್ಯ ಹುಡುಕಾಟದ ಈ ಪಾತ್ರಗಳು ಪರೋಕ್ಷವಾಗಿ ಮುಸ್ಲಿಮ್ ಮಹಿಳೆಯರಿಗೆ ಸೀಮಿತ ಸ್ವಾತಂತ್ರ್ಯದ ಸಂದೇಶವನ್ನು ರವಾನಿಸುತ್ತದೆ. ಇದರಾಚೆಗೆ ಸಂಜಯ್ ಪೂರಣ್ ಸಿಂಗ್ ನಿರ್ದೇಶನದ ‘72 ಹೂರೈನ್’ ಎಂಬ ಸಿನಿಮಾ ಏನು ಹೇಳಲಿದೆ ಎಂಬುದಕ್ಕೆ ವಿಶೇಷ ಸಂಶೋಧನೆಯೇನೂ ಬೇಕಾಗಿಲ್ಲ. ಇದರ ಜೊತೆಗೆ, ‘ದಿ ಕಾಶ್ಮೀರಿ ಫೈಲ್ಸ್’ ಮಾಡಿರುವ ಅನಾಹುತವನ್ನೂ ಪರಿಗಣಿಸಬೇಕು. ಸಿನಿಮಾ ವೀಕ್ಷಿಸಿ ಹೊರ ಬಂದವರು ಮುಸ್ಲಿಮ್ ದ್ವೇಷದ ಮಾತುಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಆಡಿರುವುದನ್ನು ಈ ದೇಶ ಕಂಡಿದೆ. ಹಿಂದೂಗಳ ವಿರುದ್ಧ ಮುಸ್ಲಿಮರು ಕ್ರೌರ್ಯ ಎಸಗಿದ್ದಾರೆ ಅನ್ನುವ ಬಲವಾದ ಸಂದೇಶವನ್ನು ಈ ಸಿನಿಮಾ ದೇಶದುದ್ದಕ್ಕೂ ರವಾನಿಸಿದೆ ಮತ್ತು ಕಾಶ್ಮೀರಿ ಮುಸ್ಲಿಮರು ಪಂಡಿತರಿಗೆ ಆಶ್ರಯ ಕೊಟ್ಟ ಮತ್ತು ಅವರನ್ನು ರಕ್ಷಿಸಿದುದಕ್ಕಾಗಿ ತಮ್ಮ ಜೀವಕ್ಕೇ ಅಪಾಯ ತಂದು ಕೊಂಡ ಸತ್ಯಗಳನ್ನು ಈ ಸಿನಿಮಾದಲ್ಲಿ ಮರೆಮಾಚಲಾಗಿದೆ. ಅಲ್ಲದೇ, ಹಿಂದೂಗಳಿಗಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಮುಸ್ಲಿಮರು ಉಗ್ರವಾದಕ್ಕೆ ಬಲಿಯಾಗಿರುವುದನ್ನೂ ಅಡಗಿಸಿಡಲಾಗಿದೆ. ಹಾಗೆಯೇ ಕೇರಳ ಸ್ಟೋರಿ ಸಿನಿಮಾ ಮಾಡಿರುವುದೂ ಇಂಥದ್ದೇ ಅನಾಹುತವನ್ನು. ಒಂದುರೀತಿಯಲ್ಲಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸಿನಿಮಾಗಳು ಒಂದುಕಡೆ ಇಸ್ಲಾಮೋಫೋಬಿಯಾವನ್ನು ಹರಡಲು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಾಗಲೇ, ಹಿಂದಿ ಮತ್ತು ಇಂಗ್ಲಿಷ್ ಟಿ.ವಿ. ಚಾನೆಲ್ಗಳು ಇದಕ್ಕಿಂತ ನೇರವಾಗಿ ಮತ್ತು ಯಾವ ಮುಜುಗರವೂ ಇಲ್ಲದೇ ಇಸ್ಲಾಮೋಫೋಬಿಯಾವನ್ನು ಹರಡತೊಡಗಿದುವು. ಒಂದು ಸಿನಿಮಾ ತಯಾರಾಗಿ ಬಿಡುಗಡೆಗೊಳ್ಳುವುದಕ್ಕೆ ವರ್ಷಗಳು ಬೇಕಾಗುತ್ತವೆ. ಆದರೆ, ಈ ಟಿ.ವಿ. ಚಾ ನೆಲ್ಗಳು ಪ್ರತಿದಿನವೂ ಏನಾದರೊಂದು ನೆಪದಲ್ಲಿ ಮುಸ್ಲಿಮರನ್ನು ಖಳರಂತೆ ಬಿಂಬಿಸಲು ಪ್ರಾರಂಭಿಸಿದುವು. ಪಾಕಿಸ್ತಾನದಲ್ಲಿ ನಡೆದ ಯಕಶ್ಚಿತ್ ದರೋಡೆಯನ್ನೂ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿ, ಆ ಮುಖಾಂತರ ಭಾರತೀಯ ಮುಸ್ಲಿಮರನ್ನು ಕಟಕಟೆ ಯಲ್ಲಿ ನಿಲ್ಲಿಸುವಷ್ಟರ ಮಟ್ಟಿಗೆ ಈ ಚಾನೆಲ್ಗಳು ಬುದ್ಧಿಭ್ರಮಣೆಗೆ ಒಳಗಾದುವು. ಇಂಥವು ನಿರಂತರ ನಡೆಯತೊಡಗಿದಾಗ ಅದರ ಫಲಿತಾಂಶ ನಾಗರಿಕ ಸಮಾಜದಲ್ಲಿ ವ್ಯಕ್ತವಾಗಲೇಬೇಕು. ವಾಟ್ಸಪ್, ಫೇಸ್ಬುಕ್, ಇನ್ಸ್ಟಾ, ಟ್ವಿಟರ್ಗಳಲ್ಲಂತೂ ದ್ವೇಷಪ್ರಚಾರಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಹೀಗಿರುತ್ತಾ, ತೃಪ್ತ ತ್ಯಾಗಿ, ಹೇಮಾ ಗುಲಾಟಿ ಅಥವಾ ರೇವತಿ ಮೇಡಂ ಇವುಗಳಿಂದ ಪ್ರಭಾವಿತರಾಗಿರಲಾರರು ಎಂದು ಹೇಳುವುದು ಹೇಗೆ? ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತೃಪ್ತ ತ್ಯಾಗಿ, ಹೇಮಾ ಗುಲಾಟಿ ಮತ್ತು ರೇವತಿ- ಮೂವರೂ ಮಹಿಳೆಯರೇ. ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರವು ಮಹಿಳೆ ಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಅನ್ನುವುದರ ಸೂಚನೆಯೇ ಇದು? ತಾಯಿ ಹೃದಯದಲ್ಲಿ ದ್ವೇಷ ತುಂಬಿಕೊಳ್ಳುವುದು ಆಘಾತಕಾರಿ.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-79233689770675044902023-09-05T23:29:00.000-07:002023-09-05T23:29:40.393-07:00 ಸೌಮ್ಯ, ಗೌರಿ, ಸಲ್ಮಾ ಮತ್ತು ಲವ್<p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh7h1OH0NtZKOk5DJZ2j_l4DhSxZe4PCz_niAfXniOWPj0Qvdq1pDeOnHsvxN17Z3OMTlMB4jiR2Cs4sOGQRxtaYa-X1hfcrmEe0lFJUuKhe6XKp7sU4GRQqt7VgwiY4paklkbNqYWC8OBJoHjO3_Pk3ehCVbxPyygyaNOUBqbK2JHHTjlJ5ydUQWlx8UR5/s1352/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="667" data-original-width="1352" height="198" src="https://blogger.googleusercontent.com/img/b/R29vZ2xl/AVvXsEh7h1OH0NtZKOk5DJZ2j_l4DhSxZe4PCz_niAfXniOWPj0Qvdq1pDeOnHsvxN17Z3OMTlMB4jiR2Cs4sOGQRxtaYa-X1hfcrmEe0lFJUuKhe6XKp7sU4GRQqt7VgwiY4paklkbNqYWC8OBJoHjO3_Pk3ehCVbxPyygyaNOUBqbK2JHHTjlJ5ydUQWlx8UR5/w400-h198/page%203%20pic.jpg" width="400" /></a></div><br /><p><br /></p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಸೌಮ್ಯ ಭಟ್- ಮಿಲಿಟರಿ ಅಶ್ರಫ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಶ್ರದ್ಧಾ ವಾಲ್ಕರ್- ಅಫ್ತಾಬ್ ಪೂನಾವಾಲ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಸಲ್ಮಾ ಸುಲ್ತಾನಾ- ಮಧು ಸಾಹು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ಗೌರಿ - ಪದ್ಮರಾಜ್</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span><div><span style="background-color: white; color: #222222; font-family: Arial, Helvetica, sans-serif; font-size: small;">ಪ್ರೀತಿ-ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳ ಸುಳಿಗೆ ಸಿಲುಕಿ ಜೀವ ಕಳಕೊಳ್ಳುತ್ತಿರುವ ಭಾರತೀಯ ಹೆಣ್ಣು ಮಕ್ಕಳ ಪೈಕಿ ನಾಲ್ವರು ಇಲ್ಲಿದ್ದಾರೆ. ಇಲ್ಲಿರುವ ನಾಲ್ಕು ಮಂದಿ ಹೆಣ್ಣು ಮಕ್ಕಳಿ ಗಾಗಲಿ ಅಥವಾ ಇವರನ್ನು ಸಾಯಿಸಿದ ನಾಲ್ಕು ಮಂದಿ ಗಂಡು ಮಕ್ಕಳಿಗಾಗಲಿ ಹೇಳಿಕೊಳ್ಳುವಂಥ ಕ್ರಿಮಿನಲ್ ಹಿನ್ನೆಲೆ ಇಲ್ಲ. ಕಾಲೇಜು ವಿದ್ಯಾರ್ಥಿನಿ ಸೌಮ್ಯಳನ್ನು 1997ರಲ್ಲಿ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಹತ್ಯೆ ಮಾಡಿದ ಅಶ್ರಫ್ ಯೋಧನಾಗಿದ್ದ. ಆವರೆಗೂ ಆತನ ಮೇಲೆ ಯಾವೊಂದು ಪ್ರಕರಣವೂ ಪೊಲೀಸು ಠಾಣೆಯಲ್ಲಿ ದಾಖಲಾಗಿರಲಿಲ್ಲ. ಆದರೆ ಏಕಾಏಕಿ ಒಂದು ಸಂಜೆ ಆತ ಹತ್ಯೆಕೋರನಾಗಿಬಿಟ್ಟ. ಕ್ರಿಮಿನಲ್ ವ್ಯಕ್ತಿಯಾಗಿ ಗುರುತಿಸಿಕೊಂಡ. ನ್ಯಾಯಾಲಯ ಈತನನ್ನು ಈ ಹತ್ಯೆಯಿಂದ ಖುಲಾಸೆಗೊಳಿಸಿದ್ದರೂ ಸಾರ್ವಜನಿಕವಾಗಿ ಇವತ್ತೂ ಆತನೇ ಅಪರಾಧಿ. ದೆಹಲಿಯ ಅಫ್ತಾಬ್ ಪೂನಾವಾಲನಿಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2022ರಲ್ಲಿ ತನ್ನ ಗೆಳತಿ ಶ್ರದ್ಧಾಳನ್ನು ಹತ್ಯೆ ಮಾಡಿದ. ತುಂಡು ತುಂಡು ಮಾಡಿ ಎಸೆದ. ಚತ್ತೀಸ್ಗಢದ ಸಲ್ಮಾ ಸುಲ್ತಾನ ಮತ್ತು ಮಧು ಸಾಹು ಪ್ರಕರಣ ಕೂಡ ಇದಕ್ಕಿಂತ ಭಿನ್ನ ಅಲ್ಲ. ಸಲ್ಮಾ ಟಿ.ವಿ. ಆ್ಯಂಕರ್. ಮಧು ಜಿಮ್ ಟ್ರೈನರ್. ಲಿವ್ ಇನ್ ಟುಗೆದರ್ ಸಂಬಂಧದಂತೆ ಜೊತೆಯಾಗಿ ಬದುಕುತ್ತಿದ್ದ ಈಕೆಯನ್ನು 2018ರಲ್ಲಿ ಈತ ಹತ್ಯೆ ಮಾಡಿದ. ಮೊನ್ನೆ 2023ರಲ್ಲಿ ಪ್ರಕರಣ ಬೆಳಕಿಗೆ ಬಂತು. ಹಾಗಂತ, ಈ ಮಧು ಸಾಹುಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಆದರೆ ಸಲ್ಮಾಳ ಬಗ್ಗೆ ಅನುಮಾನ ಇತ್ತು. ಎಲ್ಲಿ ಕೈತಪ್ಪಿ ಹೋಗುತ್ತಾಳೋ ಅನ್ನುವ ಭಯ ಇತ್ತು. ಗೌರಿಯಂತೂ ಅದೇ ಸೌಮ್ಯಳ ಪುತ್ತೂರಿನಲ್ಲಿ ನಿನ್ನೆ ಮೊನ್ನೆಯಂತೆ ಹತ್ಯೆಯಾದವಳು. ಪ್ರೇಮ ನಿರಾಕರಣೆಗೆ ಕುದ್ದು ಹೋದ ಜೆಸಿಬಿ ಚಾಲಕ ಪದ್ಮರಾಜ್ ಇರಿದು ಕೊಂದಿದ್ದಾನೆ. ಈತನಿಗೂ ಕ್ರಿಮಿನಲ್ ಹಿನ್ನೆಲೆ ಇರುವ ಯಾವ ಮಾಹಿತಿಯೂ ಇಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮತ್ತೇಕೆ ಹೀಗೆ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇವರನ್ನು ಹಠಾತ್ ಕ್ರಿಮಿನಲ್ಗಳಾಗಿಸಿದ್ದು ಯಾವುದು? ಪ್ರೇಮವೇ? ವೀಕ್ಷಿಸಿದ ಸಿನಿಮಾಗಳೇ? ಓದಿದ ಕಾದಂಬರಿಗಳೇ, ಕತೆಗಳೇ? ನಾಟಕಗಳೇ? ಧರ್ಮಗ್ರಂಥಗಳೇ? ಅಪ್ರಬುದ್ಧತೆಯೇ? ಅಥವಾ ನಾಗರಿಕ ಜೀವನ ವಿಧಾನವೇ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಲ್ಲಿ ಹತ್ಯೆಕೋರರಾಗಿ ಗುರುತಿಸಿಕೊಂಡಿರುವ ನಾಲ್ವರು ಯುವಕರು ಮತ್ತು ಸಂತ್ರಸ್ತರಾಗಿರುವ ನಾಲ್ವರು ಯುವತಿಯರು 20ರಿಂದ 30 ವರ್ಷ ಪ್ರಾಯದ ಒಳಗಿನವರು. ಇವರಷ್ಟೇ ಅಲ್ಲ, ಇವತ್ತು ಪ್ರೀತಿ-ಪ್ರೇಮದ ಹೆಸರಲ್ಲಿ ಜೀವ ಕಳಕೊಳ್ಳುತ್ತಿರುವ ಮತ್ತು ಕ್ರಿಮಿ ನಲ್ಗಳಾಗುತ್ತಿರುವವರಲ್ಲಿ 99% ಮಂದಿ ಕೂಡಾ ಇದೇ ಪ್ರಾಯದವರು. ಪ್ರೇಮ ವೈಫಲ್ಯದ ಹೆಸರಲ್ಲಿ ಮತ್ತು ಮನೆಯವರ ವಿರೋಧದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರೂ ಇದೇ ಪ್ರಾಯದವರೇ. ದುಡಿದು ಹೆತ್ತವರನ್ನು ಸಾಕಬೇಕಾದ ಪ್ರಾಯದ ಮಕ್ಕಳು ಕ್ರಿಮಿನಲ್ಗಳಾಗಿ ಜೈಲು ಪಾಲಾಗುವುದು ಮತ್ತು ಬೆಳೆದ ಹೆಣ್ಣು ಮಕ್ಕಳು ಹೆತ್ತವರ ಕಣ್ಣೆದುರೇ ಶವವಾಗಿ ಮಲಗುವುದು ಅತ್ಯಂತ ಆಘಾತಕಾರಿ ಸನ್ನಿವೇಶ. ಸಾಮಾನ್ಯವಾಗಿ, ಇಂಥ ಘಟನೆ ನಡೆದ ಕೂಡಲೇ ನಾಗರಿಕ ಸಮಾಜ ಅದನ್ನು ಪ್ರೀತಿ-ಪ್ರೇಮ ಎಂದು ಕೇವಲವಾಗಿ ನೋಡುವುದಿದೆ. ಹತ್ಯೆಕೋರರನ್ನು ಬೈದು, ಯುವತಿಯ ಬಗ್ಗೆ ಅನುಕಂಪದ ನಾಲ್ಕು ಮಾತು ಗಳನ್ನಾಡಿ ಸುಮ್ಮನಾಗುವುದೂ ಇದೆ. ಲವ್ ಮಾಡುವ ಉಸಾ ಬರಿ ಆಕೆಗೇಕೆ ಬೇಕಿತ್ತು, ಲವ್ ಮಾಡದೇ ಇಷ್ಟು ಹೆಣ್ಣು ಮಕ್ಕಳು ಬದುಕುತ್ತಿಲ್ಲವಾ, ಯುವಕನನ್ನು ದೂರಿ ಪ್ರಯೋಜನವಿಲ್ಲ ಎಂದು ಯುವತಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೈತೊಳೆದು ಕೊಳ್ಳುವುದೂ ಇದೆ. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದರಾಚೆಗೆ ನಾಗರಿಕ ಸಮಾಜ ಕೆಲವು ಪ್ರಶ್ನೆಗಳನ್ನು ಸ್ವಯಂ ಕೇಳಿಕೊಳ್ಳಬೇಕಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಕ್ಕಳು ಎಂಥ ಸಮಾಜದಲ್ಲಿ ಬೆಳೆಯುತ್ತಿದ್ದಾರೆ? ಅವರು ವೀಕ್ಷಿಸುತ್ತಿರುವ ಸಿನಿಮಾಗಳು ಹೇಗಿವೆ? ಟಿ.ವಿ.ಯಲ್ಲಿ ವೀಕ್ಷಿಸುತ್ತಿರುವ ಧಾರಾವಾಹಿಗಳೋ ಕಾರ್ಟೂನ್ಗಳೋ ಯಾವ ಸಂದೇಶವನ್ನು ಕೊಡುವಂತಿವೆ? ಅವರು ಮೊಬೈಲ್ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ? ಕಂಪ್ಯೂಟರ್ನಲ್ಲಿ ಏನನ್ನು ಹುಡುಕುತ್ತಿದ್ದಾರೆ? ಪ್ರೀತಿ-ಪ್ರೇಮ ಆಧಾರಿತ ಸಿನಿಮಾಗಳು ಸಾರುವ ಸಂದೇಶವನ್ನು ವಿಶ್ಲೇಷಣೆ ಮಾಡಿ ಸ್ವೀಕರಿಸುವಷ್ಟು ಅವರು ಪ್ರಬುದ್ಧರಾಗಿದ್ದಾರಾ ಅಥವಾ ಸಿನಿಮಾ ಸೃಷ್ಟಿಸುವ ಕಲ್ಪನಾಲೋಕವನ್ನೇ ನಂಬುವಂಥ ಸ್ಥಿತಿಯಲ್ಲಿದ್ದಾರಾ? ಮೂರು ಗಂಟೆಯೊಳಗೆ ಮುಗಿಯಬೇಕಾದ ಸಿನಿಮಾದ ಕತೆಯನ್ನು ಮತ್ತು ಅದರ ಪಾತ್ರವನ್ನು ಸಿನಿಮಾವಾಗಿ ಜೀರ್ಣಿಸಿಕೊಳ್ಳಲು ಹ ದಿಹರೆಯದ ಎಷ್ಟು ಮಂದಿಗೆ ಸಾಧ್ಯವಾಗುತ್ತಿದೆ? ಮೊಬೈಲ್ ವೀಕ್ಷಣೆಯಿಂದ ಅವರು ಏನನ್ನು ಪಡೆಯುತ್ತಿದ್ದಾರೆ? ಹೆಣ್ಣು ಗಂಡು ನಡುವಿನ ಪ್ರಕೃತಿದತ್ತ ಆಕರ್ಷಣೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಬಗ್ಗೆ ಹದಿಹರೆಯದಲ್ಲಿ ಎಷ್ಟು ಮಕ್ಕಳಿಗೆ ಮನೆ ಮತ್ತು ಶಾಲೆಯಲ್ಲಿ ತರಬೇತಿ ಸಿಕ್ಕಿರುತ್ತದೆ? ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರೀತಿ-ಪ್ರೇಮದ ಬಗ್ಗೆ ಮತ್ತು ಆಕರ್ಷಣೆಯ ಬಗ್ಗೆ ತಿಳುವಳಿಕೆಯ ಪಾಠ ಮಾಡುತ್ತಾರಾ? ಮನೆಯಲ್ಲಿ ಹೆತ್ತವರು ಮಕ್ಕಳ ಜೊತೆ ಹೇಗೆ ನಡಕೊಳ್ಳುತ್ತಾರೆ? ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದು ಮಗನಲ್ಲೋ ಮಗಳಲ್ಲೋ ಹೆತ್ತವರು ಪ್ರಶ್ನಿಸುವುದಿದೆಯೇ? ಅಥವಾ ಪ್ರೀತಿ-ಪ್ರೇಮದ ಬಗ್ಗೆ ಮಾತಾಡುವುದೇ ಅಪರಾಧ ಎಂಬ ರೀತಿಯಲ್ಲಿ ಬದುಕುತ್ತಿದ್ದಾರೆಯೇ? ಮಕ್ಕಳ ಚಟುವಟಿಕೆಯ ಮೇಲೆ ನಿಗಾ ಇಟ್ಟು ಅವರ ವರ್ತನೆ ಯಲ್ಲಾಗುವ ಬದಲಾವಣೆಯನ್ನು ಗ್ರಹಿಸಿಕೊಂಡು ಸಂದರ್ಭಾನುಸಾರ ಮಾರ್ಗದರ್ಶನ ಮಾಡುವ ಕ್ರಮ ಹೆತ್ತವರಲ್ಲಿದೆಯೇ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹೆಣ್ಣು ಮತ್ತು ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಪೂರಕವಾದ ವಾತಾವರಣವಿರುವ ದೇಶವೊಂದರಲ್ಲಿ ಅವರು ಪರಸ್ಪರ ಮಾತಾಡಬಾರದು, ಆಕರ್ಷಣೆಗೆ ಒಳಗಾಗಬಾರದು ಎಂದೆಲ್ಲಾ ಬಯಸುವುದು ಶುದ್ಧ ಮುಗ್ಧತನ ಮತ್ತು ಅತಾರ್ಕಿಕ. ಎಲ್ಕೆಜಿಯಿಂದ ಹಿಡಿದು ಡಿಗ್ರಿಯವರೆಗೆ, ಸರಕಾರಿ ಕಚೇರಿಯಿಂದ ಹಿಡಿದು ರೈಲು, ಬಸ್ಸು, ವಿಮಾನದ ವರೆಗೆ ಮತ್ತು ಸಂತೆಯಿಂದ ಹಿಡಿದು ಹೊಟೇಲಿನ ವರೆಗೆ ಎಲ್ಲೆಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಬದುಕುತ್ತಾರೆ, ಕಲಿಯುತ್ತಾರೆ, ಪ್ರಯಾಣಿಸುತ್ತಾರೆ ಮತ್ತು ಉದ್ಯೋಗ ಮಾಡುತ್ತಾರೆ. ವೈದ್ಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣದಿಂದ ಹಿಡಿದು ಸೇನಾ ನೇಮಕಾತಿವರೆಗೆ ಹೆಣ್ಣು-ಗಂಡಿನ ನಡುವೆ ಎಲ್ಲೂ ಪರದೆಯಿಲ್ಲ. ಆದ್ದರಿಂದ ಹರೆಯದ ಮಕ್ಕಳು ಪರಸ್ಪರ ಆಕರ್ಷಿತರಾಗುವುದನ್ನು ಮತ್ತು ಆ ಆಕರ್ಷಣೆ ಪ್ರೀತಿ-ಪ್ರೇಮದತ್ತ ತಿರುಗುವುದನ್ನು ಎಂಟನೇ ಅದ್ಭುತವಾಗಿ ನೋಡಬೇಕಿಲ್ಲ. ಆದರೆ, ಇಂಥ ವಾತಾವರಣ ಇದ್ದೂ ಗೊತ್ತೇ ಇಲ್ಲದಂತೆ ಹೆತ್ತವರು ಮತ್ತು ಸಮಾಜ ವರ್ತಿಸುವುದು ಮಾತ್ರ ನಿಜಕ್ಕೂ ಎಂಟನೇ ಅದ್ಭುತ. ಮೊದಲನೆಯದಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹೆಣ್ಣು-ಗಂಡು ಬೆರೆಯುವುದಕ್ಕೆ ಪೂರಕವಾದ ವಾತಾವರಣ ತನ್ನ ಸುತ್ತ-ಮುತ್ತಲೂ ಇದೆ ಎಂಬುದನ್ನು ಪ್ರತಿ ಹೆತ್ತವರೂ ಒಪ್ಪಿಕೊಳ್ಳಬೇಕು. ಎರಡನೆಯದಾಗಿ, ಜಗತ್ತಿನ ಇತರೆಲ್ಲ ಮಕ್ಕಳು ಪರಸ್ಪರ ಆಕರ್ಷಿತರಾದರೂ ತನ್ನ ಮನೆ ಮಕ್ಕಳು ಮಾತ್ರ ಅದರಿಂದ ಹೊರತಾಗಿರುತ್ತಾರೆ ಎಂಬ ನಂಬಿಕೆಯಲ್ಲೂ ಇರಬಾರದು. ಯಾವುದು ಸಾಮಾಜಿಕವಾಗಿ ಸಹಜವೋ ಮತ್ತು ಪ್ರಾಕೃತಿಕವಾಗಿಯೂ ಸತ್ಯವೋ ಅದರಿಂದ ಪೂರ್ಣ ವಿಮುಖಗೊಂಡು ಯಾರೂ ಬದುಕ ಲಾರರು. ಆದರೆ, ಇಂಥ ಸನ್ನಿವೇಶದಲ್ಲಿ ಸ್ವಯಂ ನಿಯಂತ್ರಣ ಹೇರಿಕೊಂಡು ಬದುಕುವ ಕೋಟ್ಯಂತರ ಹದಿಹರೆಯದವರಿದ್ದಾರೆ. ಅವರಿಗೆ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಿರುತ್ತದೆ. ಆಕರ್ಷಣೆಯೂ ಇರುತ್ತದೆ. ಆದರೆ ಈ ಪ್ರೀತಿ- ಪ್ರೇಮ, ಆಕರ್ಷಣೆ ಇತ್ಯಾದಿಗಳ ಮಿತಿಯೂ ಗೊತ್ತಿರುತ್ತದೆ. ಹಾಗಂತ, ಇಂಥ ತಿಳುವಳಿಕೆ ಈ ಮಕ್ಕಳಲ್ಲಿ ಬೆಳೆದಿರುವುದಕ್ಕೆ ಅವರೊಬ್ಬರೇ ಕಾರಣ ಆಗಿರುವುದಿಲ್ಲ. ಹೆತ್ತವರೂ ಕಾರಣ ಆಗಿರುತ್ತಾರೆ. ಕೆಲವೊಮ್ಮೆ ಶಿಕ್ಷಕರು, ಕೆಲವೊಮ್ಮೆ ಗೆಳೆಯರು, ಕೆಲವೊಮ್ಮೆ ಯಾವುದೋ ಪುಸ್ತಕ, ಯಾರದೋ ಮಾತು ಕೂಡಾ ಕಾರಣ ಆಗಿರುತ್ತದೆ. ಯಾವ ಸಿನಿಮಾದ ಪ್ರೇರಣೆಯಿಂದ ಗೌರಿಯನ್ನು ಪದ್ಮರಾಜ್ ಕೊಂದಿರುತ್ತಾನೋ ಅಥವಾ ಯಾವ ಘಟನೆ, ಯಾವ ರೀಲ್ಸ್ ಅಥವಾ ಯಾವ ಪುಸ್ತಕರಿಂದ ಪ್ರೇರಿತನಾಗಿ ಆತ ಈ ಹತ್ಯೆ ನಡೆಸಿರುತ್ತಾನೋ ಅದೇ ಸಿನಿಮಾ, ಪುಸ್ತಕ, ರೀಲ್ಸ್ ಗಳನ್ನ ಇವರೂ ನೋಡಿರುತ್ತಾರೆ. ಅವನಂಥದ್ದೇ ಪರಿಸ್ಥಿತಿಯನ್ನು ಇವರೂ ಎದುರಿಸಿರುತ್ತಾರೆ. ಆದರೆ, ಅವರು ಯಾಕೆ ಪದ್ಮರಾಜ್ ಆಗುವುದಿಲ್ಲ ಎಂದರೆ, ಅದರಾಚೆಗೆ ಆಲೋಚಿಸಬಲ್ಲ ಮತ್ತು ತನ್ನನ್ನು ನಿಯಂತ್ರಿಸಿಕೊಳ್ಳಬಲ್ಲ ಮಾರ್ಗದರ್ಶನ ಅವರಿಗೆ ಸಿಕ್ಕಿರುತ್ತದೆ. ಸದ್ಯದ ಅಗತ್ಯ ಇದು. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">15ರಿಂದ 25ರ ವರೆಗಿನ ಪ್ರಾಯ ಅತ್ಯಂತ ಅಪಾಯಕಾರಿಯೂ ಹೌದು, ಪ್ರಯೋಜನಕಾರಿಯೂ ಹೌದು. ಇದು ಹೆಣ್ಣು-ಗಂಡು ನಡುವಿನ ಆಕರ್ಷಣೆಯ ಪ್ರಾಯ. ತನಗೆಲ್ಲ ಗೊತ್ತಿದೆ ಎಂಬ ಹುಂಬ ವರ್ತನೆಯ ಪ್ರಾಯ. ಹೆತ್ತವರಿಂದ ಒಂದೊಂದನ್ನೇ ಮುಚ್ಚಿಕೊಳ್ಳಬಯಸುವ ಪ್ರಾಯ. ಈ ಪ್ರಾಯದ ತುಮುಲವನ್ನು ಹೆತ್ತವರು ಗಮನದಲ್ಲಿಟ್ಟುಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಯುವ ಹತ್ಯೆ ಮತ್ತು ಆತ್ಮಹತ್ಯೆ ಸುದ್ದಿಗಳನ್ನು ಈ ಪ್ರಾಯದ ಮಕ್ಕಳಿಂದ ಅಡಗಿಸಿಡಬೇಕಾದ ಅಗತ್ಯ ಇಲ್ಲ. ಸಂದರ್ಭ ನೋಡಿಕೊಂಡು ಮಕ್ಕಳ ಮುಂದೆ ಇಂಥವುಗಳನ್ನು ಪ್ರಸ್ತಾಪ ಮಾಡುವ ಮತ್ತು ಸರಿಯಾದುದನ್ನು ಹೇಳುವ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಅನೇಕ ಬಾರಿ ಇಂಥ ಸುದ್ದಿಗಳು ಹೆತ್ತವರಿಗಿಂತ ಮೊದಲು ಮಕ್ಕಳಿಗೆ ಗೊತ್ತಿರುತ್ತದೆ. ಆದರೆ ಅವರು ಪ್ರಸ್ತಾಪಿಸುವುದಿಲ್ಲ. ಹೆತ್ತವರು ಪ್ರಸ್ತಾಪಿಸಿದರೆ ಅವರೂ ಆಸಕ್ತಿಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ತನ್ನ ಮಕ್ಕಳ ಆಲೋಚನಾ ಕ್ರಮ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆತ್ತವರಿಗೆ ಅವಕಾಶ ಒದಗುತ್ತದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತಂತ್ರಜ್ಞಾನದ ಈ ಯುಗದಲ್ಲಿ ತಾಳ್ಮೆ ಎಂಬ ಪದ ಅರ್ಥವನ್ನೇ ಕಳಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದ ದೆಸೆಯಿಂದಾಗಿ ಎರಡ್ಮೂರು ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಗಮನವಿಡಲು ಸಾಧ್ಯವಾಗದಂಥ ಸ್ಥಿತಿಯಿದೆ. ಸಿಟ್ಟು, ಆಕ್ರೋಶ, ಆವೇಶಗಳು ಕ್ಷಣ ಮಾತ್ರದಲ್ಲಿ ಸ್ಫೋಟಿಸಿ ಏನೇನೋ ಅನಾಹುತಗಳಾಗುವ ಸನ್ನಿವೇಶ ಇವತ್ತಿನದು. ಆದ್ದರಿಂದ ಯುವ ಪ್ರಾಯದವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಸಮತೂಕದ್ದೋ ದೀರ್ಘ ಆಲೋಚನೆ ಯಿಂದ ಕೂಡಿದ್ದೋ ಆಗಿರುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಪ್ರೀತಿ-ಪ್ರೇಮದ ವಿಷಯದಲ್ಲಂತೂ ಕ್ಷಣದ ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದೇ ಹೆಚ್ಚು. ಗೆಳೆಯರು, ಹಿತೈಷಿಗಳು ಅಥವಾ ಹೆತ್ತವರಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿರುವುದೂ ಕಡಿಮೆ. ನಿಜಕ್ಕೂ, ಈ ಪ್ರೀತಿ-ಪ್ರೇಮ, ಹತ್ಯೆ, ಆತ್ಮಹತ್ಯೆಗಳೆಲ್ಲ ಸಾಮಾಜಿಕ ಸವಾಲು. ಇದಕ್ಕೆ ಸಮಾಜ ಮುಖಾಮುಖಿಯಾಗದ ಹೊರತು ಪರಿಹಾರ ಸಾಧ್ಯವಿಲ್ಲ. ಪ್ರತಿ ಮನೆಯೂ ಈ ಬಗ್ಗೆ ಜಾಗೃತವಾಗಬೇಕು. ತಮ್ಮ ಮಕ್ಕಳನ್ನು ಪ್ರಬುದ್ಧವಾಗಿ ಮತ್ತು ಪ್ರೀತಿ-ಪ್ರೇಮದ ಪ್ರಾಯ ಸಹಜ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪೂರಕವಾಗಿ ಬೆಳೆಸ ಬೇಕು. ಮೊಬೈಲು ಜಗತ್ತು ಕಟ್ಟಿಕೊಡುವ ಭ್ರಮೆಗಳನ್ನು ಅರ್ಥ ಮಾಡುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಬೇಕು. ಇದಕ್ಕಾಗಿ ಮಕ್ಕಳೊಂದಿಗೆ ಆಪ್ತ ಸಂಬಂಧವನ್ನು ಹೆತ್ತವರು ಬೆಳೆಸಿಕೊಳ್ಳುವುದು ಬಹಳ ಅಗತ್ಯ. ರಾತ್ರಿ ಊಟವನ್ನು ಹೆತ್ತವರು ಮಕ್ಕಳ ಜೊತೆ ಮಾಡುವುದು ಮತ್ತು ಸಂದರ್ಭಾನುಸಾರ ವಿಷಯಗಳನ್ನು ಪ್ರಸ್ತಾಪಿಸಿ ಮಕ್ಕಳನ್ನು ಪ್ರಬುದ್ಧಗೊಳಿಸುವ ಸಂಸ್ಕೃತಿ ಬೆಳೆದು ಬರಬೇಕು. ತಮ್ಮ ಕುಟುಂಬದ ಯ ಶಸ್ವಿ ವ್ಯಕ್ತಿಗಳ ಹಿನ್ನೆಲೆಯನ್ನು ಮಾತಿನ ಭಾಗವಾಗಿಸಬೇಕು. ಅವರ ಕಲಿಕೆ, ಉದ್ಯೋಗ, ಮದುವೆ, ಸಮಾಜ ಸೇವೆ... ಇತ್ಯಾದಿಗಳನ್ನು ವಿವರಿಸುತ್ತಾ ಮಕ್ಕಳಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ಉಂಟು ಮಾಡಬೇಕು. ಏನಿದ್ದರೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯುವಕ ಮತ್ತು ಯುವತಿಯರು ಪ್ರೀತಿ-ಪ್ರೇಮದ ಹೆಸರಲ್ಲಿ ಒಂದೋ ಕ್ರಿಮಿನಲ್ಗಳಾಗುವುದು ಅಥವಾ ಪ್ರಾಣ ಕಳಕೊಳ್ಳುವುದು- ಎರಡೂ ಆಘಾತಕಾರಿ. ಇದನ್ನು ತಪ್ಪಿಸಲೇಬೇಕಿದೆ. ಬೇರು ಮಟ್ಟದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-14805319559814339322023-09-01T02:25:00.000-07:002023-09-01T02:25:16.336-07:00ಸೌಜನ್ಯ: ಸಿಬಿಐ ಉತ್ತರಿಸಬೇಕಾದ ಪ್ರಶ್ನೆಗಳು<p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhPtIm5O0j4hQyoWUntzaRwlrTUU9gPCLLOa9PwzwHf19GiTC2TqYrowi82o-Xov3a5YsSI0mhFa3CySZi-7zS7GjyDebot202-KB_hBSnhZ96B4S-Klj3AiGZhTC9h_7fDv-O-dsxJBjkS_bDbVy6rgzgUlJVq9BEbReLqIKhvmLwInmEIjAhQgkq9xuLa/s1308/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="634" data-original-width="1308" height="194" src="https://blogger.googleusercontent.com/img/b/R29vZ2xl/AVvXsEhPtIm5O0j4hQyoWUntzaRwlrTUU9gPCLLOa9PwzwHf19GiTC2TqYrowi82o-Xov3a5YsSI0mhFa3CySZi-7zS7GjyDebot202-KB_hBSnhZ96B4S-Klj3AiGZhTC9h_7fDv-O-dsxJBjkS_bDbVy6rgzgUlJVq9BEbReLqIKhvmLwInmEIjAhQgkq9xuLa/w400-h194/page%203%20pic.jpg" width="400" /></a></div><br /><p><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">11 ವರ್ಷಗಳ ಬಳಿಕವೂ ಸೌಜನ್ಯ ಪ್ರಕರಣ ಸಾರ್ವಜನಿಕ ಚಳವಳಿಯಾಗಿ ಮತ್ತು ಮನೆ ಮನೆ ಮಾತಾಗಿ ಉಳಿದುಕೊಂಡಿರುವುದೇಕೆ? ಪ್ರತಿದಿನ ಅತ್ಯಾಚಾರ-ಹತ್ಯೆ ನಡೆಯುತ್ತಿರುವ ದೇಶದಲ್ಲಿ ಈ ಪ್ರಕರಣ 11 ವರ್ಷಗಳ ಬಳಿಕವೂ ಹೋರಾಟದ ಕಾವು ಉಳಿಸಿಕೊಂಡಿರುವುದಕ್ಕೆ ಕಾರಣಗಳೇನು? ಸೌಜನ್ಯ ತಾಯಿ ಈ 11 ವರ್ಷಗಳಲ್ಲೂ ಹೋರಾಟ ಕಣದಲ್ಲಿ ಸಕ್ರಿಯರಾಗಿದ್ದಾರೆ. ನ್ಯಾಯ ಕೊಡಿ ಎಂದು ಊರೂರು ಸುತ್ತುತ್ತಿದ್ದಾರೆ. ಅವರು ಸರಕಾರದಿಂದ ಪರಿಹಾರ ಕೇಳುತ್ತಿಲ್ಲ. ಮನೆ ಕಟ್ಟಿ ಕೊಡಿ ಅನ್ನುತ್ತಿಲ್ಲ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಜೀವನ ನಿರ್ವಹಣೆಗೆ ಸಹಾಯ ಮಾಡಿ ಎಂದು ಸರಕಾರವನ್ನಾಗಲಿ ಸಾರ್ವಜನಿಕ ರನ್ನಾಗಲಿ ವಿನಂತಿಸುತ್ತಿಲ್ಲ. ಅವರ ಆಗ್ರಹ- ಮಗಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಿ ಅನ್ನೋದು. ಇಲ್ಲೂ ಒಂದು ವಿಶೇಷತೆ ಇದೆ. ಸಾಮಾನ್ಯವಾಗಿ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಯಾವುದೇ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿಗಳನ್ನೇ ಸಂತ್ರಸ್ತರು ಮತ್ತು ಸಾರ್ವ ಜನಿಕರು ಅಪರಾಧಿಗಳೆಂದು ಭಾವಿಸುತ್ತಾರೆ. ಅವರಿಗೆ ಶಿಕ್ಷೆಯಾದರೆ ಸಂತ್ರಸ್ತ ಕುಟುಂಬ ನ್ಯಾಯ ಸಿಕ್ಕಿತು ಎಂದು ಹೇಳಿಕೊಳ್ಳುತ್ತದೆ. ದೆಹಲಿಯ ನಿರ್ಭಯ ಪ್ರಕರಣ ಇದಕ್ಕೊಂದು ಉದಾಹರಣೆ. ಒಂದುವೇಳೆ, ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಗೊಂಡರೆ ಸಂತ್ರಸ್ತ ಕುಟುಂಬ ನ್ಯಾಯ ನಿರಾಕರಣೆಯ ವಿಷಾದಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಸೌಜನ್ಯ ಪ್ರಕರಣದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಪೊಲೀಸರು ಆರೋಪಿಯೆಂದು ಬಂಧಿಸಿರುವ ಸಂತೋಷ್ ರಾವ್ನನ್ನು ಈ ಕುಟುಂಬ ಅಪರಾಧಿ ಭಾವದಲ್ಲಿ ಕಂಡೇ ಇಲ್ಲ. ಬದಲು, ಆತನನ್ನೇ ಸಂತ್ರಸ್ತನಾಗಿ ಪರಿಗಣಿಸಿದೆ. ಆತನನ್ನು ಸಿಬಿಐ ನ್ಯಾಯಾಲಯ ನಿರ್ದೋಷಿಯೆಂದು ಹೇಳಿ ಬಿಡುಗಡೆಗೊಳಿಸಿರುವುದಕ್ಕೆ ಈ ಕುಟುಂಬ ಎಂದೂ ಅಸಮಾಧಾನ ವ್ಯಕ್ತಪಡಿಸಿಲ್ಲ. ತಮ್ಮ ಭಾವನೆಯನ್ನೇ ಸಿಬಿಐ ನ್ಯಾಯಾಲಯ ಪುರಸ್ಕರಿಸಿದೆ ಎಂಬ ಸಮಾಧಾನ ಬಿಟ್ಟರೆ ಸಂತೋಷ್ ರಾವ್ನನ್ನು ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಆತನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುವ ಯಾವ ಆಗ್ರಹವನ್ನೂ ಸೌಜನ್ಯ ಕುಟುಂಬ ಮಾಡಿಲ್ಲ. ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಓರ್ವ ತಾಯಿ ಇಷ್ಟು ನಿಷ್ಠುರವಾಗಿ ಮತ್ತು ಹಠಮಾರಿಯಾಗಿ ನಡಕೊಳ್ಳಲು ಕಾರಣವೇನು? ಅಪರಾಧಿಗಳು ಇಂಥವರೇ ಅನ್ನುವ ಖಚಿತತೆ ಅವರಲ್ಲಿ ಇದೆಯೇ? ಅಂಥದ್ದೊಂದು ಭಾವ ಅವರಲ್ಲಿ ಹುಟ್ಟಿಕೊಳ್ಳಲು ಮತ್ತು ಅದು ಖಚಿತತೆಯನ್ನು ಪಡೆಯಲು ಕಾರಣವೇನು? ಸೌಜನ್ಯಳಿಗಿಂತ ಮೊದಲು ಆ ಪರಿಸರದಲ್ಲಿ ನಡೆದ ಹಲವು ಅನುಮಾನಾಸ್ಪದ ಸಾವುಗಳು ಇದಕ್ಕೆ ಕಾರಣವೇ? ಅಂದಹಾಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಕೆಲವು ಪ್ರಶ್ನೆಗಳಿವೆ</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಆರೋಪಿ ಸಂತೋಷ್ ರಾವ್ನನ್ನು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದವರಲ್ಲಿ ರವಿ ಪೂಜಾರಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇದನ್ನು ಹತ್ಯೆ ಎಂದು ಸ್ಥಳೀಯರು ಅನುಮಾನಿಸುತ್ತಾರೆ. ಹಾಗೆಯೇ, ಇನ್ನೋರ್ವ ಗೋಪಾಲಕೃಷ್ಣ ಗೌಡ ಎಂಬವ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಆದರೆ, ಸಿಬಿಐ ಈ ಬಗ್ಗೆ ಯಾವ ಅನುಮಾನವನ್ನಾಗಲಿ, ಗಮನವನ್ನಾಗಲಿ ನೀಡದಿರಲು ಕಾರಣವೇನು?</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಡಿಎನ್ಎ ತಜ್ಞ ವಿನೋದ್ ಕೆ. ಲಕ್ಕಪ್ಪ ಅವರು ನೀಡಿರುವ ಹೇಳಿಕೆಯ ಪ್ರಕಾರ, ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಂದ ಅತ್ಯಾಚಾರ ನಡೆದಿರಬಹುದು ಎಂದಿದೆ. ಸೌಜನ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ ತಾಲೂಕು ಜನರಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೂಡಾ ಇದನ್ನು ಪುಷ್ಠೀಕರಿಸಿದ್ದಾರೆ. ಆದರೂ ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸುವ ಉಮೇದು ತೋರಿಸದಿರುವುದಕ್ಕೆ ಕಾರಣವೇನು?</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತದೇಹ ನೇತ್ರಾವತಿ ಸ್ನಾನಭಟ್ಟರ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕಾದರೆ ನೀರಿನ ತೊರೆಯನ್ನು ಹಾಯಬೇಕಿದೆ. ಒಬ್ಬನೇ ಆರೋಪಿ ಆಕೆಯನ್ನು ಎತ್ತಿಕೊಂಡು ನೀರಿನ ತೊರೆಯನ್ನು ದಾಟುವುದು ಕಷ್ಟ ಸಾಧ್ಯ ಎಂದು ಸನ್ನಿವೇಶಗಳು ಹೇಳುತ್ತವೆ. ಸಂತೋಷ್ ರಾವ್ನನ್ನು ನಿರ್ದೋಷಿ ಎಂದ ನ್ಯಾಯಾಧೀಶರೂ ಇದನ್ನು ಗಮನಿಸಿದ್ದಾರೆ. ಆದರೆ ಸಿಬಿಐ ಈ ಸಾಮಾನ್ಯ ಸಂಗತಿಯ ಬಗ್ಗೆ ತನಿಖೆಯ ವೇಳೆ ಗಮನ ಕೊಡದಿರುವುದಕ್ಕೆ ಕಾರಣವೇನು?</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ಸೌಜನ್ಯ ಕಾಣೆಯಾದ ದಿನ ಆಸುಪಾಸಿನಲ್ಲಿ ತೀವ್ರ ಮಳೆ ಇತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿದೆ. ಆದರೆ, ಹತ್ಯೆಗೀಡಾದ ಸೌಜನ್ಯಳ ಬಟ್ಟೆಯಾಗಲಿ ಕಾಲೇಜಿನ ಬ್ಯಾಗ್ ಆಗಲಿ ಒದ್ದೆಯಾಗಿಲ್ಲ. ಅಂದರೆ, ಮೃತದೇಹ ಎಲ್ಲಿ ಪತ್ತೆಯಾಗಿತ್ತೋ ಅಲ್ಲಿ ಅತ್ಯಾಚಾರ ಮತ್ತು ಹತ್ಯೆಯಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತವೆ. ಆದರೆ, ಈ ಬಗ್ಗೆ ಸಿಬಿಐ ಕುತೂಹಲ ತೋರದಿರಲು ಕಾರಣವೇನು?</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">5. ಸೌಜನ್ಯಳ ಜೊತೆ ಕಾಲೇಜಿನಿಂದ ಬಸ್ನಲ್ಲಿ ಬಂದವರ ಹೇಳಿಕೆಗಳು ಸಿಬಿಐ ದಾಖಲೆಗಳಲ್ಲಿ ಸಿಗುವುದಿಲ್ಲ ಎಂದು ಹೇಳ ಲಾಗುತ್ತಿದೆ. ಸೌಜನ್ಯ ಜೊತೆ ಕೊನೆವರೆಗೂ ಇದ್ದ ಗೆಳತಿಯರ ಮಾತುಗಳು ತನಿಖೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು. ಅಲ್ಲದೇ, ಬೆಳ್ತಂಗಡಿ ಪೊಲೀಸರು ಮತ್ತು ಸಿಐಡಿ ದಾಖಲಿಸಿದ ಹೇಳಿಕೆಗಳನ್ನು ಸಿಬಿಐ ಮರುಪರಿಶೀಲನೆಗೆ ಒಳಪಡಿಸಿಲ್ಲ ಎಂದೂ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹೇಳಲಾಗುತ್ತಿದೆ. ಯಾಕೆ ಹೀಗಾಯಿತು?</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">6. ಸೌಜನ್ಯ ಮೃತದೇಹ ಸಿಕ್ಕ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳ ಟ್ರೇಸ್ ನಡೆದಿದೆಯೇ? ಇಲ್ಲ ಅನ್ನುತ್ತಿವೆ ಮಾಹಿತಿಗಳು. ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಇದು ಸುಲಭ ವಿಧಾನ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">7. ಯೋನಿ ದ್ರವ ಅಥವಾ ವೆಜೈನಲ್ ಸ್ವಾಬ್ ಅನ್ನು ಅತ್ಯಾಚಾರದ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ವೈದ್ಯರು ಇದನ್ನು ಶೇಖರಣೆ ಮಾಡಿ, ಒಣಗಿಸಿ ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಆದರೆ, ಇಲ್ಲಿ ಪರೀಕ್ಷೆಗೆ ಕಳುಹಿಸಲಾದ ವೆಜೈನಲ್ ಸ್ವಾಬ್ನಲ್ಲಿ ಫಂಗಸ್ ಬಂದಿತ್ತು ಮತ್ತು ಆ ಕಾರಣದಿಂದ ಪರೀಕ್ಷೆಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ ಎಂದು ವರದಿ ಇದೆ. ಪ್ರಮುಖ ಸಾಕ್ಷ್ಯವಾಗಿದ್ದ ವೆಜೈನಲ್ ಸ್ವಾಬ್ನ ಬಗ್ಗೆ ವೈದ್ಯಾಧಿಕಾರಿ ಇಲ್ಲಿ ನಿರ್ಲಕ್ಷ್ಯ ವಹಿಸಿದ್ದು ಯಾಕೆ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಹಾಗಂತ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸಿಬಿಐ ತನಿಖೆಯ ಬಗ್ಗೆ ಹೈಕೋರ್ಟು ಅಸಮಾಧಾನ ವ್ಯಕ್ತ ಪಡಿಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣ ಮರು ತನಿಖೆ ನಡೆಸಬೇಕೆಂದು ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಮೂರ್ತಿ ಅರವಿಂದ್ ಕುಮಾರ್ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ ಹರೀಶ್ ಮತ್ತು ಗೋಪಾಲ್ ಎಂಬವರು ಸಾಕ್ಷ್ಯ ನುಡಿದಿದ್ದರು. ಆ ಬಳಿಕ ತನಿಖೆ ಕೈಗೆತ್ತಿಕೊಂಡ ಸಿಬಿಐಯು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಹರೀಶ್ ಮತ್ತು ಗೋಪಾಲ್ ಹೇಳಿಕೆಗಳೂ ಸೇರಿದಂತೆ ಪ್ರಾಥಮಿಕ ಹಂತದಲ್ಲಿ ಪೊಲೀಸರು ಸಂಗ್ರಹಿಸಿದ್ದ ಹಲವು ಅಂಶಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಚಂದಪ್ಪ ಗೌಡ ಕೋರಿದ್ದರು. ಇದನ್ನು ಆಲಿಸಿದ ಅರವಿಂದ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠ, ಸಿಬಿಐ ತನಿಖಾ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ‘ಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ ನಿಮ್ಮಿಂದ ಇಂಥ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ತನಿಖೆಯನ್ನು ಮೊದಲು ಸಿಐಡಿಗೆ ಮತ್ತು ನಂತರ ಸಿಬಿಐಗೆ ವಹಿಸಲಾಗಿದೆ. ಆದರೆ ಇದೀಗ ಸಿಬಿಐ ತನಿಖೆಯನ್ನೂ ಅನುಮಾನದಿಂದ ನೋಡುವಂತಾಗಿದೆ. ನಿಮ್ಮಿಂದ ಸಮರ್ಪಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಲಿದೆ...’ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಷ್ಟಕ್ಕೂ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸೌಜನ್ಯ ಪ್ರಕರಣ ಒಂದು ಚಳವಳಿಯಾಗಿ ಬೆಳೆದು ನಿಂತಿರುವುದಕ್ಕೆ ಆಕೆ ಬದುಕಿ ಬಾಳಿದ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅ ನುಮಾನಾಸ್ಪದ ಸಾವುಗಳೇ ಪ್ರೇರಣೆ ಎಂದು ಅನಿಸುತ್ತೆ. ಹಾಗಂತ, ಆ ಅನುಮಾನಾಸ್ಪದ ಸಾವುಗಳು ಸಹಜ ಸಾವುಗಳೇ ಆಗಿದ್ದಿರಬಹುದು ಮತ್ತು ಅವು ಹತ್ಯೆ ಆಗಿಲ್ಲದೇ ಇರಬಹುದು. ಆದರೆ, ಇವುಗಳನ್ನು ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಅದರಲ್ಲಿ ಎಡವಿದಾಗ ಸಾರ್ವಜನಿಕ ಅನುಮಾನಗಳು ಬಲ ಪಡೆಯುತ್ತಾ ಹೋಗುತ್ತವೆ. ಪದೇ ಪದೇ ಇಂಥವು ನಡೆಯುವಾಗ ಮತ್ತು ಅದಕ್ಕೆ ಯಾವುದೇ ಸ್ಪಷ್ಟೀಕರಣ ಇಲ್ಲದೇ ಹೋದಾಗ ಜನ ಆಡಿಕೊಳ್ಳತೊಡಗುತ್ತಾರೆ. ಬಳಿಕ ಅವು ಅಸಮಾಧಾನವಾಗಿ ಮಾರ್ಪಡುತ್ತದೆ. ನಂತರ ಅದು ಆಕ್ರೋಶವಾಗುತ್ತದೆ. ಸೌಜನ್ಯ ಪ್ರಕರಣ 11 ವರ್ಷಗಳ ಬಳಿಕವೂ ಯಾಕೆ ಕಾವು ಉಳಿಸಿಕೊಂಡಿದೆ ಅನ್ನುವು ದಕ್ಕೆ ಇಲ್ಲೆಲ್ಲೋ ಉತ್ತರ ಇದೆ. ಎಲ್ಲಿಯ ವರೆಗೆಂದರೆ, ಈ ನ್ಯಾಯ ಬೇಡಿಕೆಯ ಚಳವಳಿಯಿಂದ ಎಡ, ಬಲ, ಮಧ್ಯಮ ಯಾವ ಪಂಥವೂ ಅಂತರ ಕಾಯ್ದುಕೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯ ತೀರ್ಪಿನ ವಿರುದ್ಧ ಅಸಮಾಧಾನ ಸೂಚಿಸಿ ಬಿಜೆಪಿ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸುತ್ತಾರೆಂದರೆ ಮತ್ತು ಪ್ರಕರಣದ ಮರು ತನಿಖೆ ಆಗ್ರಹಿಸುತ್ತಾರೆಂದರೆ, ಸೌಜನ್ಯ ಪರ ಹೋರಾಟ ಸಾರ್ವಜನಿಕವಾಗಿ ಬೀರಿರುವ ಪ್ರಭಾವವನ್ನು ಊಹಿಸಬಹುದು.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸದ್ಯದ ಸಮಸ್ಯೆ ಏನೆಂದರೆ, ವಿಶ್ವಾಸಾರ್ಹತೆ ಎಂಬ ಬಹು ಅಮೂಲ್ಯ ಗುಣಕ್ಕೆ ತೀವ್ರ ಹಾನಿ ತಟ್ಟಿರುವುದು. ರಾಜಕಾರಣಿಯಾಗಲಿ, ಸಾಮಾಜಿಕ ಮುಂದಾಳುವಾಗಲಿ, ಅರ್ಚಕನಾಗಲಿ, ಧರ್ಮ ಪಂಡಿತನಾಗಲಿ, ಮೌಲಾನಾ ಆಗಲಿ... ಯಾರೂ ಇವತ್ತು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಯೋಗ್ಯರಾಗಿ ಉಳಿದಿಲ್ಲ. ಜನರು ಒಂದು ಅನುಮಾನದ ಕಣ್ಣಿಟ್ಟುಕೊಂಡೇ ಎಲ್ಲರನ್ನೂ ತೂಗತೊಡಗಿದ್ದಾರೆ. ವಿಶ್ವಾಸಾರ್ಹತೆ ಎಂಬ ಮೌಲ್ಯ ಕುಸಿದು ಹೋದಾಗ ಎದುರಾಗುವ ಹಲವು ಸವಾಲುಗಳಲ್ಲಿ ಇದೂ ಒಂದು. ಆದರೆ,</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಎಲ್ಲರ ನಡುವೆ ಸೌಜನ್ಯ ತಾಯಿ ನಕ್ಷತ್ರದಂತೆ ಮಿನುಗು ತ್ತಿದ್ದಾರೆ. ಅವರೆಡೆಗೆ ಕೈಯೆತ್ತಿ ತೋರಿಸಲು ಒಂದು ನರಪಿಳ್ಳೆಗೂ ಸಾಧ್ಯವಾಗದಂಥ ಪ್ರಾಮಾಣಿಕತೆ ಮತ್ತು ಸಜ್ಜನಿಕೆಯನ್ನು ಪ್ರದರ್ಶಿಸಿದ್ದಾರೆ. ಈ 11 ವರ್ಷಗಳ ಉದ್ದಕ್ಕೂ ಆ ತಾಯಿ ನಡೆದುಕೊಂಡು ಬಂದ ರೀತಿ, ತೋಡಿಕೊಂಡ ನೋವು ಮತ್ತು ಕಾಲಿಗೆ ಚಕ್ರ ಕಟ್ಟಿಕೊಂಡು ತನ್ನ ಮಗಳಿಗಾಗಿ ಓಡಾಡಿದ ರೀತಿ ಅನನ್ಯ ಮತ್ತು ಓರ್ವ ತಾಯಿಯಿಂದ ಮಾತ್ರ ನಿರೀಕ್ಷಿಸಬಹುದಾದ ಕೆಚ್ಚೆದೆ ಅದು. ಈ ಹಿಂದೆ ದೆಹಲಿ ನಿರ್ಭಯ ಪ್ರಕರಣದಲ್ಲೂ ಇಂಥದ್ದೇ ಬೆಳವಣಿಗೆ ನಡೆದಿತ್ತು. ನಿರ್ಭಯ ತಾಯಿ ಗುರಿ ಮುಟ್ಟುವವರೆಗೆ ಹೋರಾಡಿದ್ದರು. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ವಿರಮಿಸಲಾರೆ ಎಂಬಂತೆ ಸಕ್ರಿಯರಾಗಿದ್ದರು. ಸೌಜನ್ಯ ತಾಯಿಯಲ್ಲೂ ಅದೇ ಖಚಿತತೆ ಮತ್ತು ಹಠ ಎದ್ದು ಕಾಣುತ್ತಿದೆ. ಓರ್ವ ಹೆಣ್ಣು ಪರಿಸ್ಥಿತಿಗೆ ಹೊಂದಿಕೊಂಡು ಹೇಗೆ ಗೃಹಿಣಿಯೂ ಆಗಬಲ್ಲಳು ಮತ್ತು ಹೋರಾಟಗಾರ್ತಿಯೂ ಆಗಬಲ್ಲಳು ಎಂಬುದಕ್ಕೆ ಸೌಜನ್ಯ ತಾಯಿ ಅತ್ಯುತ್ತಮ ನಿದರ್ಶನ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅತ್ಯಾಚಾರ ಎಂಬುದು ದರೋಡೆ, ಕಳ್ಳತನ, ವಂಚನೆ ಇತ್ಯಾದಿಗಳಂಥಲ್ಲ. ಹೆಚ್ಚಿನ ವೇಳೆ ಅತ್ಯಾಚಾರಿಗಳು ಹೆಣ್ಣನ್ನು ಸಾಯಿಸುತ್ತಾರೆ. ಒಂದುವೇಳೆ, ಸಾಯಿಸದೇ ಬಿಟ್ಟರೂ ಅತ್ಯಾಚಾರವನ್ನು ಜೀವನಪೂರ್ತಿ ಹೊತ್ತುಕೊಂಡು ಓರ್ವ ಯುವತಿ ಬದುಕುವುದು ಸುಲಭ ಅಲ್ಲ. ಅತ್ಯಾಚಾರದ ಬಗ್ಗೆ ದೂರು ಕೊಟ್ಟರೆ ಸಾರ್ವಜನಿಕರಿಗೆ ಅತ್ಯಾಚಾರದ ಬಗ್ಗೆ ಗೊತ್ತಾಗುತ್ತದೆ. ಅದರಿಂದಾಗಿ ನೆರೆಕರೆಯವರು ಮತ್ತು ಕುಟುಂಬಸ್ಥರು ಅತ್ಯಾಚಾರ ಸಂತ್ರಸ್ತೆ ಎಂಬ ಹಣೆಪಟ್ಟಿಯೊಂದನ್ನು ಅಂಟಿಸಿ ಅನುಕಂಪವನ್ನೋ ಅನುಮಾನವನ್ನೋ ನಿತ್ಯ ಸುರಿಸುತ್ತಿರುತ್ತಾರೆ. ವಿವಾಹದ ಸಂದರ್ಭದಲ್ಲಿ ಸವಾಲು ಎದುರಾಗುತ್ತದೆ. ಅಲ್ಲದೇ, ದೂರು ಕೊಟ್ಟ ಬಳಿಕ ಅಪರಾಧಿಗಳಿಂದ ಜೀವ ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ. ಎಲ್ಲಿ, ಯಾವಾಗ, ಏನಾಗುತ್ತೋ ಎಂಬ ಭಯವೊಂದನ್ನು ಎದೆಯೊಳಗಿಟ್ಟುಕೊಂಡೇ ನಡೆದಾಡಬೇಕಾಗುತ್ತದೆ. ಇಷ್ಟೆಲ್ಲಾ ಆಗಿಯೂ ಕೇಸು ಬಿದ್ದು ಹೋದರೆ ಸಂಕಟದ ಮೇಲೆ ಸಂಕಟ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಳೆದು ಹೋದ ಮಗಳಿಗಾಗಿ ದಣಿವರಿಯದೇ ಹೋರಾಡುತ್ತಿರುವ ಆ ತಾಯಿಗೆ ಯಶಸ್ಸು ಸಿಗಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ.</span><br style="background-color: white; color: #222222; font-family: Arial, Helvetica, sans-serif; font-size: small;" /></p>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-36405823669592301852023-08-18T04:39:00.000-07:002023-08-18T04:39:38.247-07:00 ಗ್ಯಾನ್ವಾಪಿ ಸರ್ವೇ ಯಾರ ಅಗತ್ಯ?<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh_aMmSfILG0FLfyqmbJlSJWl4BaIp7I-YHdLOvunmuy1aqSMNHMruuuWkqWjFuqUcBVY0erBSRApP25gWimEiBAGUvQfg7F9W1Af7-OAevGnqP-hRoBdz5b2v50DEEK-jIeEYJ-5073lumAvaGgmcbkWeqacUpXhK4848gi6Sk6AQHMjv_OPy92bocM_Rv/s1334/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEh_aMmSfILG0FLfyqmbJlSJWl4BaIp7I-YHdLOvunmuy1aqSMNHMruuuWkqWjFuqUcBVY0erBSRApP25gWimEiBAGUvQfg7F9W1Af7-OAevGnqP-hRoBdz5b2v50DEEK-jIeEYJ-5073lumAvaGgmcbkWeqacUpXhK4848gi6Sk6AQHMjv_OPy92bocM_Rv/w400-h199/page%203%20pic.jpg" width="400" /></a></div><br /><p></p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಶಿವಮಂದಿರವನ್ನು ಒಡೆದು 1669ರಲ್ಲಿ ಔರಂಗಝೇಬ್ ಕಟ್ಟಿರುವನೆಂದು ಹೇಳಲಾಗುವ ವಾರಣಾಸಿಯ ಗ್ಯಾನ್ವಾಪಿ ಮಸೀದಿಯ ಸರ್ವೇ ನಡೆದಿದೆ. ಪೂರ್ವದಲ್ಲಿ ಅದು ಏನಾಗಿತ್ತು, ಮಂದಿರದ ಕುರುಹುಗಳು ಅಲ್ಲಿ ಇದೆಯೇ ಎಂಬುದು ಸರ್ವೇಯ ಪ್ರಧಾನ ಗುರಿ. ನಿಜಕ್ಕೂ, ಇಂಥ ಹುಡುಕಾಟ ಯಾರ ಅಗತ್ಯ? ಈ ಸರ್ವೇಯ ಫಲಿತಾಂಶದಿಂದ ಸಂತಸಪಡುವವರು ಯಾರು- ರಾಜಕಾರಣಿಗಳೋ ನಾಗರಿಕರೋ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span><div><span style="background-color: white; color: #222222; font-family: Arial, Helvetica, sans-serif; font-size: small;">1669ಕ್ಕಿಂತಲೂ ಪೂರ್ವದಲ್ಲಿ ಅದು ಶಿವ ಮಂದಿರವಾಗಿತ್ತೋ ಇಲ್ಲವೋ; ಆದರೆ, ಅದಕ್ಕೂ ಈಗ ಆ ಮಸೀದಿಯಲ್ಲಿ ನಮಾಝï ಮಾಡುತ್ತಿರುವವರಿಗೂ ಯಾವ ಸಂಬಂಧವೂ ಇಲ್ಲ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಒಂದುವೇಳೆ, 1669ರಲ್ಲಿ ಮಂದಿರವನ್ನು ಒಡೆದೇ ಈ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಿದರೂ ಈಗ ಆ ಘಟನೆಗೆ 400 ವರ್ಷಗಳೇ ಕಳೆದಿವೆ. ರಾಜರುಗಳ ಕಾಲ ಕಳೆದು ಪ್ರಜೆಗಳ ಕಾಲ ಬಂದಿದೆ. ರಾಜರುಗಳ ಕಾಲದಲ್ಲಿ ಏನೇನು ಅನಾಹುತಗಳು ನಡೆದಿವೆ ಎಂಬುದನ್ನು ಈ ಪ್ರಜೆಗಳ ಕಾಲದಲ್ಲಿ ಸಂಶೋಧನೆ ಮಾಡಿ ಸರಿಪಡಿಸುವುದು ಅಗತ್ಯವೇ? ಹಾಗೆ ಸರಿಪಡಿಸಲು ಹೊರಟರೆ ಈ ಮಣ್ಣಿನಲ್ಲಿ ಸರ್ವೇ ನಡೆಸಬೇಕಾದ ಪುರಾತನ ಕಟ್ಟಡಗಳು, ಮಂದಿರಗಳು, ಗುರುದ್ವಾರಗಳು ಎಷ್ಟಿದ್ದೀತು? ದೇಶ ವಿಭಜನೆಯ ವೇಳೆ ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ 50 ಸಾವಿರ ಮಸೀದಿಗಳನ್ನು ಒಂದೋ ಧ್ವಂಸ ಮಾಡಲಾಗಿದೆ ಅಥವಾ ಮಂದಿರವೋ ಅಥವಾ ಗುರುದ್ವಾರವೋ ಆಗಿ ಬದಲಾಯಿಸಲಾಗಿದೆ. ಇವುಗಳನ್ನು ಮತ್ತೆ ಮುಸ್ಲಿಮರಿಗೆ ಮರಳಿಸಬೇಕು ಎಂದು ಆಗ್ರಹಿಸಿದರೆ ಅದು ಸಾರ್ವಜನಿಕವಾಗಿ ಬೀರುವ ಪರಿಣಾಮಗಳು ಏನೇನು?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಒಂದುಕಾಲದಲ್ಲಿ ಇಂದಿನ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿಸ್ತಾರ ಭೂಭಾಗದಲ್ಲಿ ಜೈನ ಧರ್ಮವು ಸೊಂಪಾಗಿ ಬೆಳೆದಿತ್ತು. ಕ್ರಿಸ್ತ ಪೂರ್ವದಲ್ಲಿ ಹುಟ್ಟಿ ಈ ಮಣ್ಣಿನಲ್ಲಿ ಅಪಾರ ಜನಾಕರ್ಷಣೆಯನ್ನು ಪಡೆದು ಕ್ರಿಸ್ತಶಕ 13ನೇ ಶತಮಾನದವರೆಗೆ ದೊಡ್ಡಮಟ್ಟದ ಸಂಚಲನೆಯನ್ನು ಸೃಷ್ಟಿಸಿದ ಧರ್ಮ ಇದು. ತೆಲಂಗಾಣದ ಕಾಕತಿಯಾಗಳು ಮತ್ತು ಆಂಧ್ರದ ವೆಂಕಿ ಚಾಲುಕ್ಯರು ಜೈನ ಧರ್ಮದ ಅನುಯಾಯಿಗಳಾಗಿದ್ದರು. ಜೈನರ ಮೊದಲ ತೀರ್ಥಂಕರ ಮತ್ತು ಜೈನಧರ್ಮದ ಸ್ಥಾಪಕ ರಿಶಭನ ಮಗ ಬಾಹುಬಲಿಯ ರಾಜಧಾನಿ ಪೊಡಾಣ್ ಆಗಿತ್ತು. ಇವತ್ತು ಅದು ನಿಝಾಮಾಬಾದ್ನ ಹತ್ತಿರದ ಪ್ರದೇಶವಾಗಿ ಗುರುತಿಸಿ ಕೊಂಡಿದೆ. ಆದರೆ ಕ್ರಿ.ಶ. 13ನೇ ಶತಮಾ ನದವರೆಗೆ ಈ ಭಾಗದಲ್ಲಿ ಅತ್ಯಂತ ಉಜ್ವಲವಾಗಿದ್ದ ಜೈನ ಧರ್ಮವು ಇವತ್ತು ಈ ಭಾಗದಲ್ಲಿ ಹುಡುಕಿದರೂ ಸಿಗದಷ್ಟು ಅಪರೂಪವಾಗಿದೆ. ಈ ಎರಡೂ ರಾಜ್ಯಗಳಲ್ಲಿ ಇವತ್ತು ಕೇವಲ 42 ಜೈನ ಸ್ಮಾರಕಗಳಷ್ಟೇ ಉಳಿದುಕೊಂಡಿವೆ. ಪ್ರಸಿದ್ಧ ಹಿಂದೂ ಮಂದಿರಗಳಾದ ವೇಮುಲವಾಡ, ಲಸರ್ನ ಪ್ರಸಿದ್ಧ ಸರಸ್ವತಿ ಮಂದಿರ ಮತ್ತು ಪದ್ಮಾಕ್ಷಿ ಮಂದಿರಗಳು ಒಂದು ಕಾಲದಲ್ಲಿ ಜೈನಬಸದಿಗಳಾಗಿದ್ದುವು ಎಂದು ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ವೀರಶೈವ ಚಿಂತನೆಯು ಅತ್ಯಂತ ಆಕ್ರಮಣಕಾರಿಯಾಗಿ ಈ ಭಾಗದಲ್ಲಿ ಪ್ರಚಾರ ಪಡೆಯುವುದರೊಂದಿಗೆ ಜೈನ ಧರ್ಮದ ಅವನತಿಯ ಆರಂಭವಾಯಿತು. ಅದರ ಜೊತೆಗೆ ಬಸದಿಗಳು, ಸ್ಮಾರಕಗಳು ಕೂಡ ಬದಲಾದುವು. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಒಂದು ಕಾಲದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಈ ಮಣ್ಣಿನಲ್ಲಿ ಎಷ್ಟು ಸಮೃದ್ಧವಾಗಿ ಬೆಳೆದಿದ್ದುವು ಎಂದರೆ, ಅದು ರಾಜ ಧರ್ಮವೇ ಆಗಿತ್ತು. ಈ ಎರಡು ಧರ್ಮಗಳಲ್ಲಿ ಹಲವು ರಾಜವಂಶಗಳೇ ಆಗಿಹೋಗಿವೆ. ಸಾಮ್ರಾಟ ಅಶೋಕ ಅವರಲ್ಲಿ ಒಬ್ಬ. ಇಷ್ಟೊಂದು ಭವ್ಯ ಇತಿಹಾಸವನ್ನು ಹೊಂದಿರುವ ಈ ಎರಡೂ ಧರ್ಮಗಳ ಕುರುಹುಗಳೂ ಅಷ್ಟೇ ಸಮೃದ್ಧವಾಗಿರ ಬೇಕಾದುದು ಅಗತ್ಯ. ಆದರೆ, ಜೈನ ಬಸದಿ ಮತ್ತು ಬೌದ್ಧ ಸ್ತೂಪಗಳು ಬಹುತೇಕ ಈ ದೇಶದಿಂದ ಕಾಣೆಯಾಗಿವೆ. ಹಾಗಿದ್ದರೆ ಅವು ಎಲ್ಲಿವೆ? ಏನಾಗಿವೆ? ಅವು ಸಹಜವಾಗಿ ಧ್ವಂಸಗೊಂಡಿವೆಯೋ ಅಥವಾ ಮಂದಿರವಾಗಿ ಪರಿವರ್ತನೆಯಾಗಿವೆಯೋ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಾಗಂತ, ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಭೂಮಿಯನ್ನು ಅಗೆಯಲು ಹೊರಟರೆ ಅದರಿಂದ ಈ ಸಮಾಜಕ್ಕಾಗುವ ಲಾಭವೇನು?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಅಷ್ಟಕ್ಕೂ, ಇತಿಹಾಸ ಏಕಮುಖವಾಗಿಲ್ಲ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇಲ್ಲಿ, ಮಂದಿರವನ್ನು ಒಡೆದ ಮುಸ್ಲಿಮ್ ರಾಜನಷ್ಟೇ ಇರುವುದಲ್ಲ, ಹಿಂದೂ ರಾಜನೂ ಇದ್ದಾನೆ. ಮಂದಿರಕ್ಕೆ ಭೂದಾನ ಮಾಡಿದ ಮುಸ್ಲಿಮ್ ದೊರೆ ಇರುವಂತೆಯೇ ಮಂದಿರವನ್ನೇ ಒಡೆದು ವಿಗ್ರಹ ದೋಚಿದ ಹಿಂದೂ ರಾಜನೂ ಇದ್ದಾನೆ. ಮುಸ್ಲಿಮ್ ರಾಜನನ್ನು ಸೋಲಿಸುವುದಕ್ಕಾಗಿ ಹಿಂದೂ ರಾಜನೊಂದಿಗೆ ಕೈಜೋಡಿಸಿದ ಮುಸ್ಲಿಮ್ ದೊರೆಗಳೂ ಇದ್ದಾರೆ. ಟಿಪ್ಪು ಸುಲ್ತಾನ್ನನ್ನು ಬ್ರಿಟಿಷರು ಮಣಿಸಿದ್ದೇ ನಿಜಾಮರ ಸಹಕಾರದಿಂದ. ಕ್ರೂರಿ, ವಿಗ್ರಹಭಂಜಕ, ಮತಾಂತರಿ ಎಂದೆಲ್ಲಾ ದೂಷಣೆಗೆ ಒಳಗಾಗಿರುವ ಔರಂಗಝೇಬನು ಮಂದಿರಗಳಿಗೆ ಕಾವಲಾಗಿದ್ದ ಮತ್ತು ಹಿಂದೂ ಸಂತರನ್ನು ಗೌರವಿಸಿದ್ದ ಎಂಬ ದಾಖಲೆಯೂ ಇದೆ. 1669ರಲ್ಲಿ ಬನಾರಸ್ನ ಆತನ ಅ ಧಿಕಾರಿಗಳು ಹೊರಡಿಸಿದ ರಾಜಾದೇಶ ಹೀಗಿವೆ:</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಬನಾರಸ್ನ ಆಸುಪಾಸಿನಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯವಾಗಿದೆ, ಅದರಲ್ಲೂ ಮಂದಿರದಲ್ಲಿ ಪೂಜಾ ಕೈಂಕರ್ಯದಲ್ಲಿ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತೊಡಗಿರುವ ಬ್ರಾಹ್ಮಣರ ಮೇಲೆ ಅನ್ಯಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಂದಿರ ಕಾಯುವ ಹೊಣೆಗಾರಿಕೆಯಿಂದ ಈ ಬ್ರಾಹ್ಮಣರನ್ನು ಹೊರಹಾಕುವುದು ಈ ದೌರ್ಜನ್ಯಕೋರರ ಉದ್ದೇಶವಾಗಿದೆ. ಇದು ಅಸಾಧುವಾದುದು. ಆದ್ದರಿಂದ ಈ ಪತ್ರ ತಲುಪಿದ ತಕ್ಷಣ ಯಾರೂ ನ್ಯಾಯಬಾಹಿರವಾಗಿ ನಡಕೊಳ್ಳದಂತೆ ಮತ್ತು ಬ್ರಾಹ್ಮಣ ಪೂಜಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು..’ ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಂದಿರಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಕಾಶ್ಮೀರದ ರಾಜ ಸುಲ್ತಾನ್ ಸಿಕಂದರ್ (1489-1517) ಕೈಗೊಂಡಾಗ ಅದನ್ನು ಕಾಶ್ಮೀರದ ಮುಂಚೂಣಿ ಸೂಫಿಗಳಾದ ಹಝ್ರತ್ ನೂರುದ್ದೀನ್ ನೂರಾನಿಯವರು ತೀವ್ರವಾಗಿ ಪ್ರತಿಭಟಿಸಿದ್ದೂ ಇತಿಹಾಸದಲ್ಲಿದೆ. ‘ಇಸ್ಲಾಮ್ನಲ್ಲಿ ಈ ದಾಳಿಗೆ ಅವಕಾಶ ಇಲ್ಲ’ ಎಂದು ಅವರು ಘಂಟಾಘೋಷವಾಗಿ ಹೇಳಿದ್ದನ್ನು ಇತರ ಉಲೆಮಾಗಳೂ ಬೆಂಬಲಿಸಿದರು. ನಿಜವಾಗಿ, </span><span style="background-color: white; color: #222222; font-family: Arial, Helvetica, sans-serif; font-size: small;">ಈ ಮಣ್ಣಿನ ಯಾವುದೇ ಮಂದಿರವನ್ನು ಮುಸ್ಲಿಮ್ ನಾಗರಿಕರು ಧ್ವಂಸಗೊಳಿಸಿದ ಇತಿಹಾಸ ಇಲ್ಲವೇ ಇಲ್ಲ. ಮಂದಿರವನ್ನೋ ಬಸದಿ, ಸ್ತೂಪವನ್ನೋ ಧ್ವಂಸಗೊಳಿಸುವ ಕೃತ್ಯವು ರಾಜರುಗಳಿಂದ ರಾಜರುಗಳಿಗಾಗಿ ನಡೆಯುತ್ತಿತ್ತೇ ಹೊರತು ಅದಕ್ಕೂ ನಾಗರಿಕರಿಗೂ ಸಂಬಂಧವೇ ಇರಲಿಲ್ಲ. ಆದ್ದರಿಂದಲೇ, ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಯಾಕೆ ಹೀಗೆ? ರಾಜರುಗಳು ಮಾತ್ರ ಧರ್ಮಶ್ರದ್ಧೆಯುಳ್ಳವರಾಗಿದ್ದರೆ ಅಥವಾ ಧರ್ಮಶ್ರದ್ಧೆಗೂ ಈ ಧ್ವಂಸ ಕೃತ್ಯಕ್ಕೂ ಸಂಬಂಧ ಇರಲಿಲ್ಲವೇ? ಒಂದು ಮಂದಿರವನ್ನು ಧ್ವಂಸಗೊಳಿಸಿದ ಅದೇ ರಾಜ ಇನ್ನೊಂದು ಕಡೆ ಮಂದಿರವನ್ನು ಕಟ್ಟಿಸಿದ ಮತ್ತು ಮಂದಿರಕ್ಕೆ ಭೂದಾನ ಮಾಡಿದ ದಾಖಲೆಗಳೂ ಇತಿಹಾಸದಲ್ಲಿ ವಿಫುಲವಾಗಿ ಇವೆ. ಔರಂಗಝೇಬನೂ ಇವರಲ್ಲಿ ಒಬ್ಬ. ಟಿಪ್ಪು ಸುಲ್ತಾನನ ಮೇಲೆ ದೇಗುಲ ಭಂಜನೆಯ ಆರೋಪವಷ್ಟೇ ಇರುವುದಲ್ಲ, ದೇಗುಲಕ್ಕೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟ, ಮಂದಿರಕ್ಕೆ ಕಾವಲು ನಿಂತ ಮತ್ತು ಮಂದಿರ ನಿರ್ಮಿಸಿದ ಶ್ಲಾಘನೆಯೂ ಇದೆ. ಆದ್ದರಿಂದ, ರಾಜರುಗಳ ಕ್ರಮವನ್ನು ಧರ್ಮದ ಕನ್ನಡಕದಿಂದ ನೋಡುವುದಕ್ಕಿಂತ ರಾಜಕೀಯ ಕನ್ನಡಕದಿಂದ ನೋಡುವುದೇ ಹೆಚ್ಚು ಸೂಕ್ತ ಎಂದು ಅನಿಸುತ್ತದೆ. ಧ್ವಂಸಗೊಂಡ ಅಥವಾ ದರೋಡೆಗೊಂಡ ಹೆಚ್ಚಿನ ಮಂದಿರಗಳನ್ನು ಪರಿಶೀಲಿಸಿದರೆ, ಅಚ್ಚರಿಯ ಫಲಿತಾಂಶವೊಂದು ಸಿಗುತ್ತದೆ. ಅರಮನೆಯ ಮಂದಿರವಾಗಿ ಗುರುತಿಸಿಕೊಂಡವುಗಳೇ ಇವುಗಳಲ್ಲಿ ಹೆಚ್ಚಿವೆ. ಇದಕ್ಕೆ ಈ ಮಂದಿರಗಳಲ್ಲಿ ಅಪಾರವಾದ ವಜ್ರ-ವೈಢೂರ್ಯಗಳಿರುವುದು ಒಂದು ಕಾರಣವಾದರೆ, ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಅವು ಗುರುತಿಸಿಕೊಂಡಿರುವುದು ಕೂಡ ಇನ್ನೊಂದು ಕಾರಣವಾಗಿದೆ. ಗೆದ್ದ ರಾಜ ಸೋತ ರಾಜನ ರಾಜಧಾನಿಯಲ್ಲಿರುವ ಧಾರ್ಮಿಕ ಕ್ಷೇತ್ರವನ್ನು ಲೂಟಿಗೈದು ತಮ್ಮ ಪರಾಕ್ರಮದ ಸಂದೇಶವನ್ನು ಜನರಿಗೆ ತಲುಪಿಸುವ ಗುರಿಯೂ ಇದರ ಹಿಂದಿರುತ್ತದೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಎಂಬ ಭೇದ ಇಲ್ಲದೇ ರಾಜರುಗಳು ಇಂಥ ಲೂಟಿಯಲ್ಲಿ ಭಾಗಿಯಾಗಿದ್ದಾರೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕೆಲವು ಉದಾಹರಣೆಗಳು ಹೀಗಿವೆ;</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. 7ನೇ ಶತಮಾನದಲ್ಲಿ ಪಲ್ಲವ ರಾಜ ಒಂದನೇ ನರಸಿಂಹ ವರ್ಮನ್ ಎಂಬವ ಚಾಲುಕ್ಯರ ಮೇಲೆ ವಿಜಯ ಸಾಧಿಸಿದ ಬಳಿಕ ರಾಜಧಾನಿ ವಾತಾಪಿಯ ಮಂದಿರದ ಮೇಲೆ ದಾಳಿ ಮಾಡಿದ. ಅಲ್ಲಿದ್ದ ಗಣೇಶ ವಿಗ್ರಹವನ್ನು ಎತ್ತಿಕೊಂಡು ಹೋದ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ತನ್ನ ಶತ್ರು ರಾಜ ಕಾಶ್ಮೀರದ ಲಲಿತಾದಿತ್ಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಭಾಗವಾಗಿ ಬಂಗಾಳದ ಹಿಂದೂ ಸೇನೆಯು ವಿಷ್ಣುವಿನ ವಿಗ್ರಹವನ್ನು ಧ್ವಂಸಗೊಳಿಸಿತು. ಇದು ನಡೆದುದು 8ನೇ ಶತಮಾನದಲ್ಲಿ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. 10ನೇ ಶತಮಾನದಲ್ಲಿ ಹಿಂದೂ ರಾಜ ಹರಂಬಪಾಲ ಮತ್ತು ಕೋಗ್ರಾದ ಹಿಂದೂ ರಾಜನ ನಡುವೆ ಯುದ್ಧ ನಡೆಯಿತು. ಇದರಲ್ಲಿ ಕೋಗ್ರಾದ ರಾಜ ಸೋಲೊಪ್ಪಿಕೊಂಡ. ಆ ಬಳಿಕ ಅರಮನೆಯ ವಿಷ್ಣು ಮಂದಿರವನ್ನು ಲೂಟಿ ಮಾಡಲಾಯಿತು. ಬಂಗಾರದ ವಿಗ್ರಹಗಳನ್ನು ದರೋಡೆ ಮಾಡಿ ಕೊಂಡೊಯ್ಯಲಾಯಿತು.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ತನ್ನ ಶತ್ರುಗಳಾದ ಚಾಲಕ್ಯ ಪಾಲ ಮತ್ತು ಕಳಿಂಗರ ವಿರುದ್ಧ ಚೋಳ ದೊರೆ ಒಂದನೇ ರಾಜೇಂದ್ರ ಯುದ್ಧ ಹೂಡಿದ. ಗೆದ್ದ. ಬಳಿಕ ಶತ್ರು ರಾಜರ ಮಂದಿರಗಳಿಂದ ತಂದ ವಿಗ್ರಹಗಳಿಗೆ ತನ್ನ ನಾಡಿನಲ್ಲಿ ಪ್ರತಿಷ್ಠಾಪನಾ ಕಾರ್ಯ ಮಾಡಿದ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">5. 16ನೇ ಶತಮಾನದಲ್ಲಿ ವಿಜಯನಗರದ ದೊರೆ ಕೃಷ್ಟದೇವರಾಯ ಉದಯಗಿರಿಯ ಮೇಲೆ ದಾಳಿ ಮಾಡಿ ಕೃಷ್ಣ ವಿಗ್ರಹವನ್ನು ಎತ್ತಿಕೊಂಡು ಬಂದ. ಪಂದಾರ್ಪುರ್ ಮಂದಿರದಿಂದ ವಿಠ್ಠಲ ವಿಗ್ರಹವನ್ನೂ ಲೂಟಿ ಮಾಡಿ ತಂದ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">6. 10ನೇ ಶತಮಾನದಲ್ಲಿ ರಾಷ್ಟ್ರ ಕೂಟರ ದೊರೆ ಮೂರನೇ ಇಂದ್ರನು ತನ್ನ ಶತ್ರುವಾದ ಹಿಂದೂ ರಾಜನನ್ನು ಮಣಿಸಿದ ಬಳಿಕ ಕಲ್ಪದಲ್ಲಿರುವ ಕಲಪ್ರಿಯ ಮಂದಿರವನ್ನು ಧ್ವಂಸ ಮಾಡಿದ. ತಮಿಳು ಭಾಗದಲ್ಲಿ ಅನೇಕ ಮಂದಿರಗಳನ್ನು ಒಡಿಸ್ಸಾ ಸೂರ್ಯವಂಶ ಗಜಪತಿ ಸಾಮ್ರಾಜ್ಯದ ಸ್ಥಾಪಕ ಕಪಿಲೇಂದ್ರ ಧ್ವಂಸ ಮಾಡಿದ. ಹಾಗೆಯೇ ಗೋಲ್ಕೊಂಡಾ ಸುಲ್ತಾನರ ಸೇನಾಧಿ ಪತಿಯಾಗಿದ್ದ ಮರಾಠಿ ಬ್ರಾಹ್ಮಣ ಮುರಹರಿ ರಾವ್ ಎಂಬವ ಕೃಷ್ಣಾ ನದಿ ಪ್ರದೇಶವನ್ನು ಸುಲ್ತಾನರ ಅಧೀನಕ್ಕೆ ತಂದ ಬಳಿಕ ಅಹೋಬಿಮ್ ಮಂದಿರದ ಮೇಲೆ ದಾಳಿ ಮಾಡಿ ಅಲ್ಲಿನ ವಿಗ್ರಹ ವನ್ನು ಸುಲ್ತಾನರಿಗೆ ಪಾರಿತೋಷಕವಾಗಿ ಸಮರ್ಪಿಸಿದ ಎಂಬ ಇತಿಹಾಸವೂ ಇದೆ. ಈ ಬಗ್ಗೆ, sanctified vandalism as a political tool ಎಂಬ ಶೀರ್ಷಿಕೆಯಲ್ಲಿ ಔಟ್ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ಇನ್ನಷ್ಟು ವಿವರಗಳೂ ಇವೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ, ಯಾವುದೋ ಒಂದು ಕಾಲದಲ್ಲಿ ಮಂದಿರವೊಂದು ಮಸೀದಿಯಾಗಿ ಮಾರ್ಪಟ್ಟಿದ್ದರೆ ಅಥವಾ ಬಸದಿಯೋ ಸ್ತೂಪವೋ ಮಂದಿರವಾಗಿ ಬದಲಾಗಿದ್ದರೆ ಅದಕ್ಕೆ ಧಾರ್ಮಿಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶಗಳೇ ಮುಖ್ಯವಾಗಿದ್ದುವು. ರಾಜ ಧರ್ಮಭೀರುವಾಗಿರುವುದು ಕಡಿಮೆ. ಧರ್ಮಭೀರುವಾಗಿರುವ ರಾಜ ಇನ್ನೊಂದು ಧರ್ಮ ಸಂಕೇತಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಕಡಿಮೆ. ಅದರಲ್ಲೂ ಮುಸ್ಲಿಮ್ ದೊರೆಗಳಂತೂ ಧರ್ಮದ ಕಾರಣಕ್ಕಾಗಿ ಮಂದಿರಗಳ ಮೇಲೆ ದಾಳಿ ಮಾಡುವುದು ಮತ್ತೂ ಕಡಿಮೆ. ಯಾಕೆಂದರೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರದಲ್ಲಿರಬೇಕಾದುದು ತನ್ನ ಅಸ್ತಿತ್ವ ಉಳಿವಿನ ದೃಷ್ಟಿಯಿಂದ ಅವರಿಗೆ ಬಹಳ ಮುಖ್ಯ. ಆದರೆ ಗೆದ್ದ ರಾಜ ಸೋತ ರಾಜನ ರಾಜಧಾನಿಯ ಮಂದಿರವನ್ನು ಲೂಟಿ ಮಾಡುವುದು ಆ ಕಾಲದ ಸಂಪ್ರದಾಯವೇ ಆಗಿರಬೇಕು. ಸಂಪತ್ತನ್ನು ದೋಚುವುದೇ ಅದರ ಮುಖ್ಯ ಗುರಿಯಾಗಿರಬೇಕು. ಇದು ನಾಗರಿಕರಿಗೂ ಚೆನ್ನಾಗಿ ಗೊತ್ತಿರಬೇಕು. ಆದ್ದರಿಂದಲೇ, ಯಾವುದೇ ರಾಜನ ಮಂದಿರ ದರೋಡೆಗೆ ನಾಗರಿಕರಿಂದ ಪ್ರತಿರೋಧ ವ್ಯಕ್ತವಾದ ಉದಾಹರಣೆ ಇಲ್ಲವೇ ಇಲ್ಲ. ಆದರೆ, ಮಸೀದಿಗಳಲ್ಲಿ ಸಂಪತ್ತನ್ನು ಕಾಪಿಡುವ ಪದ್ಧತಿ ಇಲ್ಲದೇ ಇರುವುದರಿಂದ ಅವು ದಾಳಿಗಳಿಂದ ಸುರಕ್ಷಿತವಾಗಿರುವ ಸಾಧ್ಯತೆಯೂ ಇದೆ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗ್ಯಾನ್ವಾಪಿ ವಿವಾದದ ಹಿಂದಿರುವುದೂ ರಾಜಕೀಯ ಹಿತಾಸಕ್ತಿಯೇ ಹೊರತು ಇನ್ನೇನಲ್ಲ.</span></div><br />a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-85129503261231207222023-08-10T23:31:00.000-07:002023-08-10T23:31:38.560-07:00 ಮಣಿಪುರಿ ಮುಸ್ಲಿಮರು: ಇತಿಹಾಸ, ವರ್ತಮಾನ ಮತ್ತು ಪ್ರವಾದಿಯ(ಸ) ಆ ಸಂಗಾತಿ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhA2MZoZU3a9xK_EM3bW7JYCL-ypFWPEtQPxmpl7FHTdi6vMgcL8zAPHGix0Z6swIse6LvWytX2qFMquYsYBTscis2qKbZyE18NTzLB2es6_eUE-MqqTYkI_95Qd4HDSiasnWCAvmU9852zOPKLf6RQCw_tISZcYrtEAEg9sjLa8X4OnjWJ9z_zBuYxnxmQ/s1334/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEhA2MZoZU3a9xK_EM3bW7JYCL-ypFWPEtQPxmpl7FHTdi6vMgcL8zAPHGix0Z6swIse6LvWytX2qFMquYsYBTscis2qKbZyE18NTzLB2es6_eUE-MqqTYkI_95Qd4HDSiasnWCAvmU9852zOPKLf6RQCw_tISZcYrtEAEg9sjLa8X4OnjWJ9z_zBuYxnxmQ/w400-h199/page%203%20pic.jpg" width="400" /></a></div><br /><p></p><span style="background-color: white; color: #222222; font-family: Arial, Helvetica, sans-serif; font-size: small;">ಏ.ಕೆ. ಕುಕ್ಕಿಲ</span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಮಣಿಪುರದಲ್ಲಿ ಮುಸ್ಲಿಮರಿದ್ದಾರಾ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಅವರಿಗೂ ಮಣಿಪುರಿಗಳಿಗೂ ನಡುವೆ ಸಂಬಂಧ ಹೇಗಿದೆ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಣಿಪುರ ಹಿಂಸಾಚಾರ ಚರ್ಚೆಯ ನಡುವೆ ಅತೀ ಹೆಚ್ಚು ಕೇಳಿ ಬಂದ ಪ್ರಶ್ನೆಗಳಲ್ಲಿ ಇವುಗಳೂ ಸೇರಿವೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1993 ಮೇ 3. ಮಣಿಪುರದ ಮುಸ್ಲಿಮರ ಪಾಲಿಗೆ ಕರಾಳ ದಿನ. ಇವತ್ತಿಗೂ ಮಣಿಪುರದ ಮುಸ್ಲಿಮರು ಮೇ 3ನ್ನು ಕಪ್ಪು ದಿನವಾಗಿ ಪರಿಗಣಿಸುತ್ತಾರೆ. ಪಂಗಾಲ್ ಹತ್ಯಾಕಾಂಡ ನಡೆದ ದಿನ ಇದು. ಪಂಗಾಲ್ ಎಂಬುದು ಮುಸ್ಲಿಮರನ್ನು ಮೇತಿ ಭಾಷೆಯಲ್ಲಿ ಸಂಬೋಧಿಸುವ ಹೆಸರು. ಮೇತಿ ಪಂಗಾಲ್ ಎಂದು ಇರುವಂತೆಯೇ ಮೇತಿ ಹಿಂದೂ, ಮೇತಿ ಕ್ರೈಸ್ತ ಎಂದೂ ಇದೆ. ಮೇತಿ ಹಿಂದೂ ಮತ್ತು ಮೇತಿ ಪಂಗಾಲ್ ಅಥವಾ ಮುಸ್ಲಿಮರ ನಡುವಿನ ಈ ಘರ್ಷಣೆಯಲ್ಲಿ 100 ಮಂದಿಯ ಹತ್ಯೆಯಾಗಿದೆ ಎಂಬುದು ಸರಕಾರದ ಲೆಕ್ಕಾಚಾರ. ಸರಕಾರೇತರ ಸಂಸ್ಥೆಗಳ ಪ್ರಕಾರ 140ರಷ್ಟು ಮಂದಿಯ ಹತ್ಯೆಯಾಗಿದೆ. ಮುಸ್ಲಿಮರೇ ಪ್ರಯಾಣಿಸುತ್ತಿದ್ದ ಬಸ್ಸಿಗೆ ಬೆಂಕಿ ಕೊಡಲಾಗಿದೆ. ಭೂವಿವಾದ ಈ ಮುಸ್ಲಿಮ್ ಹತ್ಯಾಕಾಂಡಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ಇನ್ನೂ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದೆ. ಮುಖ್ಯವಾಗಿ, ಮೇತಿ ಹಿಂದೂ ಪ್ರತ್ಯೇಕತಾವಾದಿಗಳು ಮುಸ್ಲಿಮರಿಂದ ಬಲವಂತದಿಂದ ಹಣ ಸಂಗ್ರಹಕ್ಕೆ ಇಳಿದುದು ಮತ್ತು ಅವರಲ್ಲಿ ಓರ್ವನನ್ನು ಮುಸ್ಲಿಮರು ಹತ್ಯೆಗೈದುದು ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸಾಮಾನ್ಯವಾಗಿ, ಮಣಿಪುರದ ಮುಸ್ಲಿಮರ ಇತಿಹಾಸವನ್ನು 1604ರಿಂದ ಲೆಕ್ಕ ಹಾಕಲಾಗುತ್ತದೆ. ಮಣಿಪುರವನ್ನು ಆಳುತ್ತಿದ್ದ ಖಾಗೆಂಬ ಎಂಬ ರಾಜನ ಜೊತೆ ಆತನ ಸಹೋದರ ಸೆನೆಂಗ್ ಬಾನಿಗೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಆದ್ದರಿಂದ ತನ್ನ ಸಹೋದರನನ್ನು ಮಣಿಸುವುದಕ್ಕಾಗಿ ಸೈನಿಕ ನೆರವು ನೀಡುವಂತೆ ಕಚಾರಿ ರಾಜ ದಿಮ್ಶಾ ಪ್ರಸಾಪಿಲ್ಗೆ ಈ ಸೆನೆಂಗ್ಬಾ ಮನವಿ ಮಾಡುತ್ತಾನೆ. ಆದರೆ ಖಾಗೆಂಬಾನ ಸಾಮರ್ಥ್ಯ ಗೊತ್ತಿದ್ದ ದಿಮ್ಶಾ, ತಾನೋರ್ವನೇ ದಂಡೆತ್ತಿ ಹೋದರೆ ಗೆಲುವು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ ಮತ್ತು ತರಫ್ ಪ್ರದೇಶದ ರಾಜ ಮುಹಮ್ಮದ್ ನಝೀರ್ನನ್ನು ನೆರವಾಗುವಂತೆ ಕೋರುತ್ತಾನೆ. ಹೀಗೆ ನಝೀರ್ ತನ್ನ ಸಹೋದರ ಮುಹಮ್ಮದ್ ಸಾನಿಯ ನೇತೃತ್ವದಲ್ಲಿ ಸೇನಾಪಡೆಯನ್ನು ಕಳುಹಿಸಿಕೊಡುತ್ತಾನೆ. ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಸೇನೆಗೆ ರಾಜ ಖಾಗೆಂಬಾ ಪಡೆಯನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಹಮ್ಮದ್ ಸಾನಿ ಮತ್ತು 1000 ಸೈನಿಕರನ್ನು ಬಂಧಿಸಲಾಗುತ್ತದೆ. ಬಳಿಕ ಮಣಿಪುರದಲ್ಲೇ ಉಳಕೊಳ್ಳಲು ಈ ಸೈನಿಕರಿಗೆ ರಾಜ ಖಾಗೆಂಬಾ ಅನುಮತಿಯನ್ನು ನೀಡುತ್ತಾನೆ. ಈ ನಡುವೆ ಬರ್ಮಾದ ರಾಜ ಮಣಿಪುರದ ಮೇಲೆ ದಾಳಿ ಮಾಡುತ್ತಾನೆ. ಆಗ ರಾಜ ಖಾಗೆಂಬಾ ಈ 1000 ಸೈನಿಕರಲ್ಲಿ ನೆರವಾಗುವಂತೆ ವಿನಂತಿಸುತ್ತಾನೆ. ಹೀಗೆ ಮೇತಿ ಸೇನೆಯ ಜೊತೆ ಸೇರಿ ಬರ್ಮಾ ಸೇನೆಯ ವಿರುದ್ಧ ಈ 1000 ಸೈನಿಕರು ಹೋರಾಡಿ ಜಯ ತಂದು ಕೊಡುತ್ತಾರೆ. ಈ ಗೆಲುವು ರಾಜನಲ್ಲಿ ಅಪಾರ ಸಂತಸವನ್ನು ತರುತ್ತದೆ ಮತ್ತು ಈ 1000 ಸೈನಿಕರನ್ನು ಪಂಗಾಲ್ ಎಂದು ಕರೆಯುತ್ತಾನೆ. ಪಂಗಾಲ್ ಎಂದರೆ ಮೇತಿ ಭಾಷೆಯಲ್ಲಿ ಶಕ್ತಿ ಎಂದೂ ಅರ್ಥವಿದೆ. ಮಾತ್ರವಲ್ಲ, ಆವರೆಗೆ ಬರೇ ಉಳಕೊಳ್ಳುವುದಕ್ಕಷ್ಟೇ ಸ್ವಾತಂತ್ರ್ಯವನ್ನು ಪಡೆದಿದ್ದ ಈ ಪಂಗಾಲ್ಗಳಿಗೆ ಮೇತಿ ಹಿಂದೂಗಳನ್ನು ಮದುವೆಯಾಗುವ ಮತ್ತು ಭೂಮಿ ಹೊಂದುವ ಸ್ವಾತಂತ್ರ್ಯವನ್ನೂ ನೀಡುತ್ತಾನೆ. ಹೀಗೆ ಪಂಗಾಲ್ಗಳು ಅಥವಾ ಮುಸ್ಲಿಮರು ಮಣಿಪುರದ ಭಾಗವಾಗುತ್ತಾರೆ ಎಂಬ ವರದಿಯೂ ಇದೆ. ಹಾಗೆಯೇ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮೊಘಲ್ ದೊರೆ ಔರಂಗಝೇಬ್ ನಿಂದ ತಪ್ಪಿಸಿಕೊಂಡು ಬಂದಿದ್ದ ಶಾ ಶುಜಾ ಎಂಬವನು ಇದೇ ಮಣಿಪುರದಲ್ಲಿ ಆಶ್ರಯ ಪಡೆದಿದ್ದ ಎಂಬ ವಿವರವೂ ಇದೆ. ಔರಂಗಝೇಬನ ಸಹೋದರ ಈ ಶಾ ಶುಜಾ. ಈತ ಮೊದಲು ಬರ್ಮಾದ ಅರ್ಕಾನ್ಗೆ ಬಂದ. ಆದರೆ ಬರ್ಮಾದ ರಾಜ ಈತನಿಗೆ ಆಶ್ರಯ ಕೊಡಲು ವಿಫಲವಾದಾಗ ತ್ರಿಪುರ ಪ್ರವೇಶಿಸಿದ. ಆದರೆ ಆತನನ್ನು ಒಪ್ಪಿಸುವಂತೆ ತ್ರಿಪುರ ರಾಜನ ಮೇಲೆ ಔರಂಗಝೇಬ್ ಒತ್ತಡ ಹಾಕಿದುದನ್ನು ಅರಿತುಕೊಂಡ ಶಾ ಶುಜ ಅಂತಿಮವಾಗಿ ಮಣಿಪುರದಲ್ಲಿ ಆಶ್ರಯ ಪಡೆದ ಎಂದೂ ಹೇಳಲಾಗುತ್ತಿದೆ. ಹಾಗಂತ, ಶಾ ಶುಜಾ ಒಬ್ಬನೇ ಇಲ್ಲಿಗೆ ಬಂದಿರಲಿಲ್ಲ. ಆತನ ಜೊತೆ ಕುಟುಂಬ-ಪರಿವಾರವೂ ಇತ್ತು. ಇವರನ್ನೆಲ್ಲ ಮಂಗಲ್ಸ್ ಅಥವಾ ಮಂಗ್ಕೋನ್ ಎಂದು ಕರೆಯಲಾಗುತ್ತಿತ್ತು ಮತ್ತು ಇವರ ಪೀಳಿಗೆ ಮಕಕ್ ಮಯೂಮ್ ವಂಶವಾಗಿ ಬೆಳೆಯಿತು. ಮಣಿಪುರ ರಾಜನ ಆಸ್ಥಾನದಲ್ಲಿ ಇವರಿಗೆ ಮಂಗಲ್ ಸಂಗ್ಲೇನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಕಚೇರಿಯೂ ಇತ್ತು ಎಂದೂ ಹೇಳಲಾಗುತ್ತಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">2011 ಮೇ 17ರಂದು ಮಣಿಪುರ ರಾಜಧಾನಿ ಇಂಫಾಲ್ನ ಕ್ಲಾಸಿಕ್ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಯಾದ ‘ಮಣಿಪುರಿ ಮುಸ್ಲಿಮ್ಸ್: ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ಸ್ 615-2000’ ಎಂಬ ಕೃತಿಯು ಈ ಮೇಲಿನ ವಿವರಗಳಿಗಿಂತ ಪೂರ್ವದಲ್ಲಿ ನಡೆದ ಬೆಳವಣಿಗೆಯನ್ನು ಅತ್ಯಂತ ಅಧಿಕಾರಯುತವಾಗಿ ಮತ್ತು ದಾಖಲೆಗಳ ಸಹಿತ ವಿವರಿಸುತ್ತದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ, ಇಸ್ಲಾಮ್ ಮಣಿಪುರಕ್ಕೆ ಬಂದಿರುವುದು 1600ರಲ್ಲಲ್ಲ. ಅದಕ್ಕಿಂತ ಸಾವಿರ ವರ್ಷಗಳ ಹಿಂದೆ 615ರಲ್ಲಿ ಎಂಬುದನ್ನು ಈ ಕೃತಿ ವಿವರವಾಗಿ ಮುಂದಿಡುತ್ತದೆ. ಮಣಿಪುರದಲ್ಲಿ ಅರಿಬಮ್ ಎಂಬ ಮುಸ್ಲಿಮ್ ಮನೆತನ ಇದೆ. ಇದನ್ನು ಸೆಗಾಯ್ ಎಂದೂ ಕರೆಯುತ್ತಾರೆ. ಈ ಮನೆತನದ ಜೈವಿಕ ವಂಶಾವಳಿಯು ಪ್ರವಾದಿ(ಸ) ಚಿಕ್ಕಪ್ಪ ಹಂಝ(ರ) ಮತ್ತು ಸಅದ್ ಬಿನ್ ಅಬೀ ವಕ್ಕಾಸ್ರಲ್ಲಿಗೆ (ರ) ಹೋಗಿ ತಲುಪುತ್ತದೆ. ಅರಿಬಮ್ ಎಂಬುದು ಅರಿಬಾಅï ಎಂಬ ಮೂಲ ಅರೇಬಿಕ್ ಪದದ ಅಪಭ್ರಂಶ ಪದ. ಶುದ್ಧ ಅರಬಿಗಳು ಎಂದು ಇದರರ್ಥ ಎಂದು ಈ ಕೃತಿಯಲ್ಲಿ ಫಾರೂಖ್ ಅಹ್ಮದ್ ವಿವರಿಸುತ್ತಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಪ್ರವಾದಿ ಚಿಕ್ಕಪ್ಪ ಹಂಝ ಅವರು ಇಸವಿ 610ರಲ್ಲಿ ಮಣಿಪುರ ಪ್ರವೇಶಿಸುತ್ತಾರೆ. ಆದರೆ ಸಅದ್ ಬಿನ್ ಅಬೀ ವಕ್ಕಾಸ್ರು ಹಂಝರ ಜೊತೆ ಬಂದಿರುವುದಿಲ್ಲ. ಇಸವಿ 615ರಲ್ಲಿ ಮೂವರು ಸಂಗಾತಿಗಳೊಂದಿಗೆ ಸಅದ್ ಬಿನ್ ಅಬೀ ವಕ್ಕಾಸ್ರು ಚೀನಾದತ್ತ ಮುಖ ಮಾಡಿ ಅಬಿಸೀನಿಯಾದಿಂದ ಹೊರಡುತ್ತಾರೆ ಮತ್ತು ಈಗಿನ ಬಾಂಗ್ಲಾದ ಚಿತ್ತಗಾಂಗ್ ಮೂಲಕ ಮಣಿಪುರ ಪ್ರವೇಶಿಸುತ್ತಾರೆ. ಹಾಗೆಯೇ ಇನ್ನೊಂದು ಭೇಟಿಯೂ ಮಣಿಪುರಕ್ಕೆ ನಡೆಯುತ್ತದೆ. ಅದು ಇಸ್ಲಾಮಿನ ನಾಲ್ಕನೇ ಖಲೀಫಾ ಅಲಿಯವರ ಎರಡನೇ ಪತ್ನಿ ಕೌಲ ಬಿಂತಿ ಜಾಫರ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವರಾದ ಮುಹಮ್ಮದ್ ಹನೀಫಾ ಅವರ ಭೇಟಿ. ಇಸವಿ 680ರಲ್ಲಿ ಇವರು ಮಣಿಪುರಕ್ಕೆ ಬರುತ್ತಾರೆ. ಖಿಲಾಫತ್ನ ವಿಷಯದಲ್ಲಿ ನಡೆದ ವಿವಾದದ ಬಳಿಕ ಅವರು ಒಂದು ಗುಂಪಿನೊಂದಿಗೆ ಮ್ಯಾನ್ಮಾರ್ನ ರಾಕೈನ್ ಬಂದು ನೆಲೆಸುತ್ತಾರೆ ಮತ್ತು ಆ ಬಳಿಕ ಮಣಿಪುರಕ್ಕೆ ಭೇಟಿ ಕೊಡುತ್ತಾರೆ ಎಂದೂ ಹೇಳಲಾಗುತ್ತಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಅದೇವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">7ನೇ ಶತಮಾನದಲ್ಲಿ ಮಣಿಪುರವನ್ನು ಆಳುತ್ತಿದ್ದ ಸಫಾಂಗ್ಬಾ ರಾಜನ ಕಾಲದಲ್ಲಿ ಮುಸ್ಲಿಮ್ ಸಂತನೋರ್ವ ಭಾಷಣ ಮಾಡಿರು ವುದಾಗಿ ಸ್ಥಳೀಯ ಭಾಷೆಯಲ್ಲಿ ಬರೆಯಲ್ಪಟ್ಟಿರುವ ದಾಖಲೆಯೂ ಇದೆ. ಈ ರಾಜ ಇಸವಿ 624ರ ವರೆಗೆ ರಾಜ್ಯಭಾರ ಮಾಡಿರು ವುದರಿಂದ ಆ ಸಂತ ಒಂದೋ ಹಂಝ(ರ) ಅಥವಾ ಸಅದ್ ಬಿನ್ ಅಬೀ ವಕ್ಕಾಸ್ ಎಂಬ ಅಭಿಪ್ರಾಯವೂ ಇದೆ. ಆದರೆ ಹಂಝ ಅವರು ಮಣಿ ಪುರದಲ್ಲೇ ನೆಲೆಸುವುದಿಲ್ಲ. ಅವರು ಮರಳಿ ಮದೀನಾಕ್ಕೆ ಹೋಗುತ್ತಾರಲ್ಲದೇ, ಇಸವಿ 625ರಲ್ಲಿ ಉಹುದ್ ಕಾಳಗದಲ್ಲಿ ಹುತಾತ್ಮರಾಗುತ್ತಾರೆ. ಒಂದುವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಆ ಭಾಷಣ ಮಾಡಿದ ಸಂತ ಹಂಝ ಅಲ್ಲದೇ ಇದ್ದರೆ ಸಅದ್ ಬಿನ್ ಅಬೀ ವಕ್ಕಾಸ್ ಆಗಿರುವ ಸಾಧ್ಯತೆಯೂ ಇದೆ. ಯಾಕೆಂದರೆ, ಸಅದ್ ಬಿನ್ ಅಬೀ ವಕ್ಕಾಸ್ರು ಬೇ ಆಫ್ ಬೆಂಗಾಲ್ ಅಥವಾ ಸಮುದ್ರ ಮಾರ್ಗ ಮೂಲಕ ಇಸವಿ 615ರಲ್ಲಿ ಮಣಿಪುರಕ್ಕೆ ಬಂದಿದ್ದಾರೆ. ಹೀಗೆ ಬಂದ ಅವರು ಕೂಡಾ ಅಲ್ಲೇ ನೆಲೆ ನಿಲ್ಲಲಿಲ್ಲ. ಮರಳಿ ಅರಬ್ ದೇಶಕ್ಕೆ ಹೊರಟು ಹೋದವರು ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೆ ಚೀನಾ ಕರಾವಳಿ ಪ್ರದೇಶಕ್ಕೆ ಮರಳಿ ಬರುತ್ತಾರೆ ಮತ್ತು ಹೀಗೆ ಬರುವಾಗ ಅವರು ಕುರ್ಆನ್ ಪ್ರತಿಯನ್ನೂ ತರುತ್ತಾರೆ. ಚೀನಿ ಮುಸ್ಲಿಮರು ಅಥವಾ ಹುಯಿ ಮುಸ್ಲಿಮರ ಪ್ರಕಾರ ಸಅದ್ ಬಿನ್ ಅಬೀ ವಕ್ಕಾಸ್ ಅಲ್ಲೇ ನಿಧನರಾಗಿದ್ದು ಅವರ ಸಮಾಧಿಯೂ ಅಲ್ಲೇ ಇದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ ಎಂದೂ ಹೇಳಲಾಗುತ್ತದೆ. ಅದು ಸಅದ್ ಬಿನ್ ಅಬೀ ವಕ್ಕಾಸ್ ಅವರ ಪುತ್ರನ ಸಮಾಧಿಯಾಗಿದ್ದು, ಅವರು ಅಲ್ಲೇ ಮದುವೆಯಾಗಿ ಅಲ್ಲೇ ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನೂ ಪುಸ್ತಕ ನೀಡುತ್ತದೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಣಿಪುರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹಲೀಮ್ ಚೌಧರಿ ಮುಖ್ಯ ಅತಿಥಿಯಾಗಿದ್ದರು ಮತ್ತು ಮಿಲ್ಲಿ ಗಝೆಟ್ನ ಸಂಪಾದಕ ಡಾ| ಝಫರುಲ್ ಇಸ್ಲಾಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2011ರ ಜನಗಣತಿ ಪ್ರಕಾರ, ಮಣಿಪುರದಲ್ಲಿ 2,39,886 ಮುಸ್ಲಿಮರಿದ್ದಾರೆ. 2011ರ ಬಳಿಕ ಜನಗಣತಿ ನಡೆಯದೇ ಇರುವು ದರಿಂದ, ಪ್ರಸಕ್ತ ವಿವರಗಳು ಲಭ್ಯವಿಲ್ಲ. ಇದು ಮಣಿಪುರದ ಒಟ್ಟು ಜನಸಂಖ್ಯೆಯ ಕೇವಲ 8.4% ಮಾತ್ರ. ಹೆಚ್ಚಿನ ಮುಸ್ಲಿಮರು ಇಂಫಾಲ್ ಮತ್ತು ತೌಬಾಲ್ನಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ಮಣಿಪುರಿ ಮುಸ್ಲಿಮರು ಅಸ್ಸಾಮ್ನ ಕಚಾರ್ ಮತ್ತು ಹೊಬಾಯ್, ತ್ರಿಪುರಾದ ಕೊಮಾಲ್ ಪುರ್ನಲ್ಲೂ ವಾಸವಿದ್ದಾರೆ. 1815ರಲ್ಲಿ ಬರ್ಮಾದ ರಾಜನು ಮಣಿಪುರದ ಮೇಲೆ ದಾಳಿ ಮಾಡಿದ್ದು, ಆಗ ತಪ್ಪಿಸಿಕೊಂಡು ಹೋದ ಮುಸ್ಲಿಮರು ಈ ಎರಡು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ ಎಂಬ ಮಾಹಿತಿಗಳೂ ಸಿಗುತ್ತವೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮಣಿಪುರಿ ಮುಸ್ಲಿಮ್ ಪುರುಷರು ಸಾಂಪ್ರದಾಯಿಕವಾಗಿ ಲುಂಗಿ ಮತ್ತು ಪೈಜಾಮ ಧರಿಸುತ್ತಾರೆ. ಮಹಿಳೆಯರು ಸಲ್ವಾರ್ ಕಮೀಝï ಮತ್ತು ಫಾನೆಕ್ ಧರಿಸುತ್ತಾರೆ. ಹಾಗಂತ, ಮೇತಿ ಪಂಗಲ್ ಎಂಬ ಹೆಸರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿ ಗುರುತಿಸಿಕೊಳ್ಳುತ್ತಿದ್ದರೂ ಇವರೆಲ್ಲ ಆಂತರಿಕವಾಗಿ ಬೇರೆ ಬೇರೆ ಮನೆತನದೊಂದಿಗೆ ಜೋಡಿಕೊಂಡಿದ್ದಾರೆ. ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ದೇಶದ ಸದ್ಯದ ದ್ವೇಷ ರಾಜಕಾರಣದ ಪ್ರಭಾವದಿಂದ ಮಣಿಪುರ ಮುಸ್ಲಿಮರೂ ಹೊರತಾಗಿಲ್ಲ. ಇಸ್ಲಾಮೋಫೋಬಿಯಾದ ಪ್ರಭಾವ ಇಲ್ಲೂ ಇದೆ. ಮುಸ್ಲಿಮರನ್ನು ಕಳ್ಳರು, ಮಾದಕ ವಸ್ತು ಸಾಗಾಟಗಾರರು, ಸಮಾಜ ವಿರೋಧಿಗಳು ಎಂದು ಮುಂತಾಗಿ ಬಿಂಬಿಸುವ ಶ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮುಹಮ್ಮದ್ ಫಾರೂಕ್ ಖಾನ್ ಎಂಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಥಳಿಸಿರುವ ವೀಡಿಯೋ 2018ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ಸ್ಕೂಟರ್ ಕದ್ದಿದ್ದಾನೆ ಎಂಬ ಆರೋಪದಲ್ಲಿ ಈ ಕೃತ್ಯ ಎಸಗಲಾಗಿತ್ತು. ಆದರೆ, ಬಳಿಕ ಆತ ಕಳ್ಳನಲ್ಲ, ತಪ್ಪಾಗಿ ಆತನನ್ನು ಲಿಂಚಿಂಗ್ ಮಾಡಲಾಗಿದೆ ಎಂಬುದು ಬಹಿರಂಗವಾಯಿತು. 2017ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಮತ್ತು ವ್ಯವಸ್ಥಿತವಾಗಿ ಅಂಚಿಗೆ ತಳ್ಳುವ ಪ್ರಯತ್ನಗಳು ನಡೆಯುತ್ತಲೇ ಇದ್ದುವು. ಸರಕಾರಿ ಸಂಸ್ಥೆಗಳಲ್ಲಿ ಮತ್ತು ಶಾಸನ ಸಭೆಗಳಲ್ಲಿ ಮುಸ್ಲಿಮರಿಗೆ ಅತ್ಯಂತ ಕಡಿಮೆ ಪ್ರಾತಿ ನಿಧ್ಯವಷ್ಟೇ ಇದೆ. ಸರ್ವ ಶಿಕ್ಷಣ್ ಅಭಿಯಾನ್ ಯೋಜನೆಯಡಿ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಹೆಚ್ಚಿನವುಗಳನ್ನು ಮೇತಿ ಹಿಂದೂ ಸಮುದಾಯಗಳು ಇರುವ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವೂ ಇದೆ. 2018ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತೂ ಮುಸ್ಲಿಮ್ ವಿರೋಧಿ ಪ್ರಚಾರಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. 2018ರಲ್ಲಿ ರಚಿಸಲಾದ ‘ಪ್ರೊಟೆಕ್ಷನ್ ಆಫ್ ಮಣಿಪುರ್ ಪೀಪಲ್’ ಮಸೂದೆಯ ಕರಡು ರಚನಾ ಸಮಿತಿಯಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯವನ್ನೇ ನಿರಾಕರಿಸಲಾಗಿತ್ತು. ಮೇತಿ ಮುಸ್ಲಿಮರು ರೋಹಿಂಗ್ಯನ್ನರಿಗೆ ಆಶ್ರಯ ಕೊಡುತ್ತಿದ್ದಾರೆ ಎಂಬ ಸುಳ್ಳು ಸು ದ್ದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಅಷ್ಟಕ್ಕೂ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಮಣಿಪುರ ಹಿಂಸೆಯ ಗುರಿ ಕ್ರೈರಾಗಿರಲಿಲ್ಲ, ಮುಸ್ಲಿಮರಾಗಿದ್ದರು. ಆದರೆ, ಕೊನೆಹಂತದಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು ಮತ್ತು ಕ್ರೈಸ್ತರನ್ನು ಗುರಿ ಮಾಡಲಾಯಿತು. ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇ ಈ ಹಿಂಸಾಚಾರದ ಹಿಂದಿತ್ತು. ಮಣಿಪುರ ಇತಿಹಾಸದಲ್ಲಿ ಎಂದೂ ಮೇತಿ ಹಿಂದೂಗಳು ಮತ್ತು ಕುಕಿಗಳ ನಡುವೆ ಘರ್ಷಣೆ ನಡೆದೇ ಇಲ್ಲ..’ ಎಂದು ಕಳೆದವಾರ ಮಣಿಪುರಕ್ಕೆ ಭೇಟಿ ನೀಡಿ ಮರಳಿದ ಫಾದರ್ ಜಾನ್ಸನ್ ಹೇಳಿರುವುದೇ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅಚ್ಚರಿ ಏನೆಂದರೆ,</span></div><br /><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1993 ಮೇ 3ರಂದು ಪಂಗಾಲ್ ಹತ್ಯಾಕಾಂಡ ನಡೆದಿತ್ತು. ಇದೀಗ 2023 ಮೇ 3ರಂದು ಮಣಿಪುರ ಮತ್ತೆ ಉರಿದಿದೆ. ಇದು ಕಾಕತಾಳೀಯವೋ ಅಥವಾ ಯೋಜನಾಬದ್ಧವೋ?</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-78829536661749953972023-08-02T06:05:00.000-07:002023-08-02T06:05:38.970-07:00ಹಿಂಸಾಚಾರದಲ್ಲಿ ಹೆಣ್ಣೇಕೆ ಬೆತ್ತಲಾಗಬೇಕು?<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg7q6pteEThNLSKLv7yjCn-aMn-C-i48hXPTI2ZoMdNzeW5h452yweBdv66vkHcSCS8Wf2FOZeGDHtIKukx0cdkBF2CVVBy0c5bn9j6IYe9IzUvEruoxs7iNuGDMrb2HhtpnSKwQrt67qUppF7uLLF2d6tgk09OzZ0nct4R7VMLQ6ITkVn01qwWn6UUuGKx/s1334/page%203%20pic%201.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEg7q6pteEThNLSKLv7yjCn-aMn-C-i48hXPTI2ZoMdNzeW5h452yweBdv66vkHcSCS8Wf2FOZeGDHtIKukx0cdkBF2CVVBy0c5bn9j6IYe9IzUvEruoxs7iNuGDMrb2HhtpnSKwQrt67qUppF7uLLF2d6tgk09OzZ0nct4R7VMLQ6ITkVn01qwWn6UUuGKx/w400-h199/page%203%20pic%201.jpg" width="400" /></a></div><br /><p><br style="background-color: white; color: #222222; font-family: Arial, Helvetica, sans-serif; font-size: small;" /><br /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘My children would ask me, why go to court - Recalls Muzaffar Nagar Riots Gang Rape victim of her decade long ordeal- ನೀನೇಕೆ ಕೋರ್ಟಿಗೆ ಹೋಗುತ್ತಿ ಅಮ್ಮ ಎಂದು ನ ನ್ನ ಮಕ್ಕಳು ಕೇಳುತ್ತಾರೆ...: ಹತ್ತು ವರ್ಷಗಳ ದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡ ಮುಝಫ್ಫರ್ ನಗರ್ ಗ್ಯಾಂಗ್ ರೇಪ್ನ ಸಂತ್ರಸ್ತೆ... ಎಂಬ ತಲೆಬರಹದೊಂದಿಗೆ 2023 ಮೇ 18ರ ಔಟ್ಲುಕ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಅದಕ್ಕೆ ಕಾರಣವೂ ಇತ್ತು</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಂದೂ ಮತ್ತು ಮುಸ್ಲಿಮ್ ಯುವಕರಿಬ್ಬರ ನಡುವೆ ನಡೆದ ಬೈಕ್ ಅಪಘಾತವೊಂದು 42 ಮುಸ್ಲಿಮ್ ಮತ್ತು 20 ಹಿಂದೂಗಳ ಹತ್ಯೆಗೆ, 93 ಮಂದಿಯ ಗಾಯಕ್ಕೆ ಮತ್ತು 50 ಸಾವಿರಕ್ಕಿಂತಲೂ ಅಧಿಕ ಮಂದಿ ಊರು ತೊರೆದು ಪಲಾಯನ (ಬಹುತೇಕ ಎಲ್ಲರೂ ಮುಸ್ಲಿಮರೇ) ಮಾಡುವುದಕ್ಕೆ ಕಾರಣವಾದ ಬೃಹತ್ ಹಿಂಸಾಚಾರಕ್ಕೆ ಕಾರಣವಾಯಿತು. 2013 ಆಗಸ್ಟ್ ಕೊನೆಯಲ್ಲಿ ಆರಂಭವಾದ ಹಿಂಸಾಚಾರವು ಸೆಪ್ಟೆಂಬರ್ ನಲ್ಲಿ ಕೊನೆಗೊಂಡಿತು. ಹಸ್ತಲಾಘವ ಮಾಡಿ ನಕ್ಕು ಮುಗಿಸಿ ಬಿಡಬಹುದಾಗಿದ್ದ ಅಪಘಾತ ಪ್ರಕರಣವು ಪ್ರತಿಷ್ಠೆಯಾಗಿ ಮಾರ್ಪಟ್ಟು, ಯುವತಿಗೆ ಕಿರುಕುಳ ಎಂಬ ವದಂತಿಯೊಂದಿಗೆ ಊರೆಲ್ಲಾ ಸುತ್ತಾಡಿತು. ಆ ಬಳಿಕ ಅಪಘಾತದಲ್ಲಿ ಭಾಗಿಯಾದ ಮುಸ್ಲಿಂ ಯುವಕ ಮತ್ತು ಕಿರುಕುಳವನ್ನು ಪ್ರಶ್ನಿಸಲು ಹೋದವರೆಂದು ಹೇಳಲಾದ ಹಿಂದೂ ಯುವಕರ ಹತ್ಯೆಯೂ ನಡೆಯಿತು. ಆದರೆ ಈ ಹತ್ಯೆಗೆ ಸಂಬಂಧಿಸಿದಂತೆ ದಾಖಲಾದ ಎಫ್ಐಆರ್ನಲ್ಲಿ ಕಿರುಕುಳದ ಉಲ್ಲೇಖವೇ ಇಲ್ಲ ಎಂದೂ ವರದಿಯಿದೆ. ಅಂತೂ ಪುಟ್ಟ ಜಗಳ ಮತ್ತು ವದಂತಿಯೊಂದರ ಮೇಲೆ ಹುಟ್ಟಿಕೊಂಡ ಕೋಮು ಬೆಂಕಿ ಉತ್ತರ ಪ್ರದೇಶದ ಮುಝಫ್ಫರ್ ನಗರ್ ಉದ್ದಕ್ಕೂ ಕಾಡ್ಗಿಚ್ಚಿನಂತೆ ಹರಡಿತು. ಈ ಬೆಂಕಿಯಲ್ಲಿ ನೊಂದು ಬೆಂದ ಓರ್ವ ಮುಸ್ಲಿಮ್ ಮಹಿಳೆಯ ಒಡಲ ಧ್ವನಿಯೇ ಈ ಮೇಲಿನ ಔಟ್ ಲುಕ್ ಪತ್ರಿಕೆಯ ಶೀರ್ಷಿಕೆ. </span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">‘ಹಿಂದೂ ಯುವಕರ ಹತ್ಯೆ ನಡೆಸಿದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಿ’.. ಎಂದು ಲೌಡ್ ಸ್ಪೀಕರ್ನಲ್ಲಿ ಕರೆ ಕೇಳಿಸಿತು. 2013 ಸೆ ಪ್ಟೆಂಬರ್ 7ರ ಘಟನೆ ಇದು. ನನ್ನ ಪತಿ ಟೈಲರ್. ನಮಗೆ ಆಗ 5 ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಮರುದಿನ ಸೆಪ್ಟೆಂಬರ್ 8ರಂದು ನನ್ನ ದೊಡ್ಡ ಮಗನಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಮಗನನ್ನು ಪತಿ ವೈದ್ಯರಲ್ಲಿಗೆ ಕೊಂಡು ಹೋದರು. ಇದಾಗಿ ಒಂದು ಗಂಟೆಯೊಳಗೆ ಎಲ್ಲೆಲ್ಲೂ ಭಯವೇ ತುಂಬಿಕೊಳ್ಳತೊಡಗಿತು. ಹತ್ತಿರದ ಮಸೀದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾಗಿದೆ ಎಂಬ ಸುದ್ದಿ ಕೇಳಿ ಬಂತು. ಹಿಂಸೆ ಭುಗಿಲೆದ್ದಿರುವುದರಿಂದ ಶಮ್ಲಿ ಗ್ರಾಮಕ್ಕೆ ಪಲಾಯನ ಮಾಡು ವಂತೆ ಅಕ್ಕಪಕ್ಕದವರು ಸಲಹೆ ನೀಡಿದರು. ಅವರ ಜೊತೆ ನಾನೂ ಹೊರಟೆ. ಶಮ್ಲಿಯಲ್ಲಿ ನನ್ನ ಸಂಬಂಧಿಕರೂ ಇದ್ದರು. ಕಬ್ಬಿನ ತೋಟದ ನಡುವೆ ನಾವೆಲ್ಲ ಭಯದಿಂದ ಹೊರಟೆವು. ನನ್ನ ಜೊತೆ ಮಗನಿದ್ದ. ಕಬ್ಬಿನ ಗಿಡದ ಕತ್ತಿಯಲಗಿನಂಥ ಎಲೆಗಳು ಮಗನ ಮೈಗೆ ತಾಕುತ್ತಿದ್ದುದರಿಂದ ಆತ ಕಿರುಚುತ್ತಿದ್ದ. ನನಗೆ ಆ ದಾರಿ ಹೊಸತು. ಆ ಕಬ್ಬಿನ ತೋಟದಲ್ಲಿ ನಾನೆಂದೂ ಈ ಮೊದಲು ನಡೆದಿರಲಿಲ್ಲ. ನಾನು ಗುಂಪಿನಿಂದ ಹಿಂದೆ ಬಿದ್ದೆ. ಹೀಗೆ 2 ಕಿ.ಮೀಟರ್ ನಡೆದು ಮುಖ್ಯ ರಸ್ತೆಗೆ ಬಂದೆ. ಶಮ್ಲಿಗೆ ಹೋಗಲು ವಾಹನ ಸಿಗುತ್ತದೋ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ,</span></p><p><span style="background-color: white; color: #222222; font-family: Arial, Helvetica, sans-serif; font-size: small;"> ನನ್ನನ್ನು ಮಹೇಶ್ ವೀರ್, ಸಿಕಂದರ್ ಮತ್ತು ಕುಲ್ದೀಪ್ </span><span style="background-color: white; color: #222222; font-family: Arial, Helvetica, sans-serif; font-size: small;">ಎಂಬ ಪರಿಚಿತರೇ ಆದ ಯುವಕರು ಹಿಡಿದರು. ಇವರೆಷ್ಟು ಪರಿ ಚಿತರೆಂದರೆ, ನನ್ನ ಗಂಡನ ಟೈಲರ್ ಶಾಪ್ಗೆ ಹೋಗುತ್ತಿದ್ದವರು ಇವರು. ನನ್ನ ಮನೆಗೆ ಅನುಮತಿಯನ್ನೇ ಕೇಳದೇ ಪ್ರವೇಶಿಸುವಷ್ಟು ಸಲುಗೆಯಿಂದ ಇದ್ದವರು. ಅವರ ಕೈಯಲ್ಲಿ ಆಯುಧವಿತ್ತು. ಪಕ್ಕದ ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋದ ಅವರು ನನ್ನ ಮಗುವಿನ ಕತ್ತಿಗೆ ತಲವಾರು ಇಟ್ಟು ಬೆದರಿಸಿದರು. ನನ್ನ ಮೇಲೆ ಅತ್ಯಾಚಾರ ನಡೆಸಿದರು. ಇವೆಲ್ಲ ಫಗುನಾ ಎಂಬ ಪ್ರದೇಶದಲ್ಲಿ ನಡೆದಿತ್ತು..’</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">2023 ಮೇಯಲ್ಲಿ ಮುಝಫ್ಫರ್ ನಗರ್ ಜಿಲ್ಲಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ವೀರ್ ಮತ್ತು ಸಿಕಂದರ್ ಎಂಬಿಬ್ಬರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಈ ಮಹಿಳೆಯನ್ನು ಭೇಟಿಯಾಗಿ ಔಟ್ಲುಕ್, ದಿ ಕ್ವಿಂಟ್ ಸಹಿತ ವಿವಿಧ ಪತ್ರಿಕೆಗಳು ಮಾಡಿದ ವರದಿಯ ಸಂಕ್ಷಿಪ್ತ ರೂಪ ಈ ಮೇಲಿನ ಹೇಳಿಕೆ. ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದ. ಔಟ್ಲುಕ್ ಈಕೆಗೆ ಶಮಾ ಎಂದು ಹೆಸರಿಟ್ಟಿದೆ. ಆದರೆ, ಇದು ನಿಜನಾಮವಲ್ಲ. ಹಾಗಂತ, </span><span style="background-color: white; color: #222222; font-family: Arial, Helvetica, sans-serif; font-size: small;">ಈ ನ್ಯಾಯ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಖ್ಯಾತ ನ್ಯಾಯವಾದಿ ವೃಂದಾ ಗ್ರೋವರ್ ಅವರ ಬಲ ಇಲ್ಲದೇ ಇರುತ್ತಿದ್ದರೆ ಅಪರಾಧಿಗಳಿಗೆ ಈ ಶಿಕ್ಷೆ ಸಿಗುತ್ತಿತ್ತೋ, ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ತಣ್ಣಗೆ ಮಲಗಿದ್ದ ಈ ಪ್ರಕರಣಕ್ಕೆ ಜೀವ ತುಂಬಿದ್ದು ವೃಂದಾ ಗ್ರೋವರ್. ಅವರು ಸುಪ್ರೀಮ್ ಕೋರ್ಟಿಗೆ ಹೋಗಿ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟಕ್ಕೂ,</span></p><p><span style="background-color: white; color: #222222; font-family: Arial, Helvetica, sans-serif; font-size: small;">ಮುಝಫ್ಫರ್ ನಗರ್ ಹಿಂಸಾಚಾರದಲ್ಲಿ ನಡೆದ ಏಕೈಕ ಅತ್ಯಾಚಾರ ಪ್ರಕರಣವೇನೂ ಇದಾಗಿರಲಿಲ್ಲ. ಈ ಶಮಾಳೂ ಸೇರಿ ಒಟ್ಟು 7 ಮಂದಿಯ ಮೇಲಿನ ಅತ್ಯಾಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ 6 ಮಂದಿ ಪೊಲೀಸರಿಗೆ ದೂರು ನೀಡಿದರು. ಓರ್ವಳಂತೂ ದೂರು ನೀಡುವುದಕ್ಕೂ ಹೋಗಿರಲಿಲ್ಲ. ಬೆದರಿಕೆ ಮತ್ತು ಹಣದ ಆಮಿಷದೊಂದಿಗೆ ಆಕೆಯನ್ನು ತಡೆಯಲಾಯಿತು ಎಂಬ ಆರೋಪವೂ ಇದೆ. ಈ 6 ಮಂದಿಯ ದೂರಿನ ಮೇಲೆ ಎಫ್ಐಆರ್ ದಾಖಲಾಯಿತಾದರೂ ಕೋರ್ಟು ವಿಚಾರಣೆಯ ವೇಳೆ ಇವರಲ್ಲಿ ಶಮಾಳನ್ನು ಬಿಟ್ಟು ಉಳಿದ 5 ಮಂದಿ ಸಂತ್ರಸ್ತರೂ ಹೇಳಿಕೆ ಬದಲಿಸಿದರು. ‘ನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ’ ಎಂದು ನ್ಯಾಯಾಧೀಶರ ಮುಂದೆ ಹೇಳಿಕೊಂಡರು. ಇದರಿಂದಾಗಿ 22 ಮಂದಿ ಅತ್ಯಾಚಾರಿ ಆರೋಪಿಗಳು ಬಚಾವಾದರು. </span><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></p><p><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಹೇಳಿಕೆ ಬದಲಿಸಿದ ಆ ಸಂತ್ರಸ್ತ ಮಹಿಳೆಯರ ಮೇಲೆ ತಕ್ಷಣಕ್ಕೆ ನಮ್ಮಲ್ಲಿ ಅಸಮಾಧಾನ ಮೂಡಬಹುದು. ತಮ್ಮ ಮೇಲೆ ಕ್ರೌರ್ಯವೆಸಗಿದ ಅಪರಾಧಿಗಳನ್ನು ದಂಡಿಸುವ ಅವಕಾಶವನ್ನು ಅವರೇಕೆ ಕಳೆದುಕೊಂಡರು ಎಂಬ ಪ್ರಶ್ನೆಯೂ ಇರಬಹುದು. ಆದರೆ ಕೋಮು ಹಿಂಸಾಚಾರದಲ್ಲಿ ನಡೆಯುವ ಅತ್ಯಾಚಾರಕ್ಕೂ ಸಹಜ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸ ಇರುತ್ತದೆ. ಹಿಂಸಾಚಾರದ ಅತ್ಯಾಚಾರ ಅತ್ಯಂತ ಸುರಕ್ಷಿತ. ಹಿಂಸಾಚಾರದಲ್ಲಿ ತೊಡಗಿದ ಸಮಾಜವೇ ಇಂಥ ಅತ್ಯಾಚಾರಿಗಳ ಪರ ನಿಲ್ಲುತ್ತದೆ. ಅವರ ರಕ್ಷಣೆಗಾಗಿ ವಿವಿಧ ರೀತಿಯ ತಂತ್ರಗಳನ್ನು ಹೆಣೆಯುತ್ತದೆ. ಅದರಲ್ಲಿ ಜೀವ ಬೆದರಿಕೆ, ಬಹಿಷ್ಕಾರದ ಕರೆ, ಹಣದ ಆಮಿಷ ಇತ್ಯಾದಿಗಳೂ ಸೇರಿರುತ್ತವೆ. ಪಲಾಯನ ಮಾಡಿರುವ ಸಂತ್ರಸ್ತೆ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಊರಿಗೆ ಮರಳಬೇಕಾದರೆ ‘ಕೇಸು’ ಹಿಂತೆಗೆದುಕೊಳ್ಳಬೇಕು ಎಂಬ ಷರತ್ತನ್ನು ಸಮಾಜ ವಿಧಿಸುತ್ತದೆ. ಈ ಐವರು ಮಹಿಳೆಯರ ಪ್ರಕರಣದಲ್ಲೂ ಇಂಥದ್ದೇ ಬೆಳವಣಿಗೆ ನಡೆದಿದೆ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಿಂಸಾಚಾರದ ವೇಳೆ ಫಗುನಾ ಗ್ರಾಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಐವರು ಮಹಿಳೆಯರು 22 ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಎಫ್ಐಆರ್ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ನಡುವೆ, 2014 ಜೂನ್ನಲ್ಲಿ ಧೋಲೆರಾ ಎಂಬ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪ್ರಕರಣ ದಾಖಲಾಯಿತು. 10 ಮಂದಿ ಮುಸ್ಲಿಮರನ್ನು ಆರೋಪಿಗಳೆಂದು ಹೆಸರಿಸಲಾಯಿತು. ಈ ಫಗುನಾ ಮತ್ತು ಧೋಲೆರಾ ಗ್ರಾಮಗಳು 20 ಕಿ.ಮೀಟರ್ ಅಂತರದಲ್ಲಿವೆ. ಈ ಘಟನೆ ನಡೆದದ್ದೇ ತಡ, ಅತ್ಯಾಚಾರ ಪ್ರಕರಣಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಪ್ರಕರಣಗಳನ್ನು ಹಿಂಪಡೆದು ರಾಜಿಯಲ್ಲಿ ಮುಗಿಸುವ ಪ್ರಸ್ತಾಪಗಳಾದುವು. ಸಂತ್ರಸ್ತರಿಗೆ ಹಣವನ್ನು ನೀಡಲಾಗಿದೆ ಎಂಬ ವರದಿಯೂ ಇದೆ. ಈ ರಾಜಿ ಪಂಚಾತಿಕೆಯ ಹಿನ್ನೆಲೆಯಲ್ಲಿ ಹಿಂದೂ ಮಹಿಳೆ ಮತ್ತು ಈ 5 ಮಂದಿ ಮುಸ್ಲಿಮ್ ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದರು. ಆ ಮೂಲಕ ಒಟ್ಟು 32 ಮಂದಿ ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡರು. ಆದರೆ ಶಮಾ ಮಾತ್ರ ಯಾವ ಆಮಿಷಕ್ಕೂ, ರಾಜಿಗೂ ತಯಾರಾಗಲಿಲ್ಲ. ಈ ಎಲ್ಲ ವಿವರವನ್ನು ‘Muzaffar Nagar riots: The deal that saved 32 alleged rapists’- ಮುಝಫ್ಫರ್ ನಗರ್ ಹಿಂಸಾಚಾರ: 32 ಮಂದಿ ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಿದ ಒಪ್ಪಂದ- ಎಂಬ ಶೀರ್ಷಿಕೆಯಲ್ಲಿ ಐಶ್ವರ್ಯ ಅಯ್ಯರ್ ಎಂಬ ಪತ್ರಕರ್ತೆ 2019 ಆಗಸ್ಟ್ 27ರಂದು ದಿ ಕ್ವಿಂಟ್ ವೆಬ್ ಪತ್ರಿಕೆಯಲ್ಲಿ ಬರೆದ ವರದಿಯಲ್ಲಿ ನೀಡಲಾಗಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಆದರೆ, ಶಮಾಳ ಪರಿಸ್ಥಿತಿ ಇಷ್ಟು ಸಹಜವಲ್ಲ.</span></p><p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ರಾಜಿಗೆ ಒಪ್ಪಿಕೊಳ್ಳದ ಆಕೆ ನಿರಂತರ ಬೆದರಿಕೆಯನ್ನೂ ಎದುರಿಸಿದಳು. ಊರನ್ನೂ ತೊರೆದಳು. ಇನ್ನೊಂದು ಕಡೆ, ಶಮ್ಲಿ ಗ್ರಾಮದಲ್ಲಿ NGO ಕಟ್ಟಿಕೊಟ್ಟ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸವಿರುವ ಆಕೆಯನ್ನು ಅಕ್ಕಪಕ್ಕದವರೇ ಅಸ್ಪೃಶ್ಯಳಂತೆ ನೋಡತೊಡಗಿದರು. ಆಕೆಯಿಂದ ಅಂತರ ಕಾಯ್ದುಕೊಂಡರು. ತಮ್ಮ ಮನೆಯ ಮಕ್ಕಳು ಆಕೆಯ ಮನೆಗೆ ಹೋಗದಂತೆ ತಡೆದರು. ತಾನು ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಾದ ಬಳಿಕ ಆದ ಬದಲಾವಣೆ ಇದು ಎಂದಾಕೆ ಹೇಳಿರುವುದನ್ನು ಔಟ್ಲುಕ್ ಪತ್ರಿಕೆಯ ವರದಿಯಲ್ಲಿ ಕಾಣಬಹುದು. ಆಕೆ ಹೇಳಿರುವ ಇದಕ್ಕಿಂತಲೂ ದಾರುಣ ಸಂಗತಿಯೆಂದರೆ, ಆಕೆಯ ಮಕ್ಕಳ ಪ್ರಶ್ನೆ. ಪದೇ ಪದೇ ಯಾಕಮ್ಮ ಕೋರ್ಟಿಗೆ ಹೋಗುತ್ತಿ ಎಂದು ಮಕ್ಕಳು ಪ್ರಶ್ನಿಸುತ್ತಾರೆ. ‘ಹಿಂಸಾಚಾರ ನಡೆದಿತ್ತಲ್ಲ, ಆಗ ನಮ್ಮ ಮನೆಗೆ ಬೆಂಕಿ ಕೊಡಲಾಗಿತ್ತು, ದರೋಡೆ ಮಾಡಲಾಗಿತ್ತು. ಆದ್ದರಿಂದ ನಮ್ಮ ಭೂಮಿ ಇತರರ ಪಾಲಾಗಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಕೋರ್ಟಿಗೆ ಹೋಗುತ್ತಿದ್ದೇನೆ..’ ಎಂದು ಹೇಳುತ್ತಿದ್ದುದಾಗಿ ಶಮಾ ಹೇಳಿರುವುದೂ ವರದಿಯಲ್ಲಿದೆ. </span><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ,</span></p><p><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಅತ್ಯಾಚಾರ ಎಂಬುದು ಹೆಣ್ಣಿನ ಪಾಲಿಗೆ ಎರಡು ಅಲುಗಿನ ಕತ್ತಿ. ಒಂದು- ಅತ್ಯಾಚಾರವೆಂಬ ಇರಿತವಾದರೆ, ಇನ್ನೊಂದು- ಅತ್ಯಾಚಾರಕ್ಕೀಡಾದವಳು ಎಂಬ ವಕ್ರ ದೃಷ್ಟಿಯ ಇರಿತ. ಇವೆರಡನ್ನೂ ಓರ್ವ ಸಂತ್ರಸ್ತ ಮಹಿಳೆ ಜೀವನದುದ್ದಕ್ಕೂ ಹೊತ್ತುಕೊಂಡೇ ಬದುಕಬೇಕು. ಹಿಂಸಾಚಾರಕ್ಕೆ ಕಾರಣಗಳೇನೇ ಇರಲಿ, ಅಂತಿಮವಾಗಿ ಅದರ ನೋವುಣ್ಣುವುದು ಹೆಣ್ಣೇ. ಬೈಕ್ ಅಪಘಾತದಿಂದ ಹುಟ್ಟಿಕೊಂಡ ಮುಝಫ್ಫರ್ ನಗರ್ ಹಿಂಸೆ, ಮೀಸಲಾತಿ ನೆಪದಲ್ಲಿ ಸ್ಫೋಟಗೊಂಡ ಮಣಿಪುರ ಹಿಂಸೆ ಅಥವಾ ರೈಲಿಗೆ ಬೆಂಕಿ ಕೊಟ್ಟ ನೆಪದಲ್ಲಿ ಭುಗಿಲೆದ್ದ ಗುಜರಾತ್ ಹಿಂಸಾಚಾರ- ಈ ಮೂರಕ್ಕೂ ಕಾರಣಕರ್ತರು ಪುರುಷರೇ. ಆದರೆ, ಅತ್ಯಂತ ಹೀನಾಯ ಕ್ರೌರ್ಯಕ್ಕೆ ತುತ್ತಾದದ್ದು ಮಾತ್ರ ಮಹಿಳೆಯರು. 2016ರಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ಹಿಂಸಾಚಾರದ ವರದಿಗಳನ್ನು ಅಧ್ಯಯನ ನಡೆಸಿದರೂ ಲಭ್ಯವಾಗುವುದು ಇದೇ ಫಲಿತಾಂಶ. ಈ ಕುರಿತಂತೆ ಆಸ್ಟ್ರೆಲಿಯಾ, ಕೆನಡ, ನಾರ್ವೆ, ಫಿಲಿಪ್ಪೀನ್ಸ್, ಬಾಂಗ್ಲಾದೇಶವನ್ನೊಳಗೊAಡ ತಜ್ಞರು ಮತ್ತು ಸಂಶೋಧಕರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ‘Forced migration of Rohingya: The untold experiencde’- ಎಂಬ ಹೆಸರಲ್ಲಿ 2018 ಆಗಸ್ಟ್ ನಲ್ಲಿ ಈ ಸಮಿತಿ ವರದಿಯನ್ನೂ ನೀಡಿತ್ತು. ಆ ವರದಿ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಯಾವುದೇ ಮಹಿಳೆ ತಾನೇಕೆ ಮಹಿಳೆಯಾಗಿ ಹುಟ್ಟಿದೆ ಎಂದು ಪ್ರಶ್ನಿಸುವಷ್ಟು ಭೀಕರವಾಗಿತ್ತು. 18 ಸಾವಿರ ರೋಹಿಂಗ್ಯ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ನಡೆದಿದೆ ಎಂಬುದಾಗಿ ಆ ವರದಿಯಲ್ಲಿ ಹೇಳಲಾಗಿತ್ತು. ಇದಲ್ಲದೇ, ದಿ ಇಂಡಿಪೆಂಡೆಂಟ್ ಪತ್ರಿಕೆಯು, 'Burmese military guilty of widespread rape of Rohingyan Muslims’- ಎಂಬ ಶೀರ್ಷಿಕೆಯಲ್ಲಿ 2017 ನವೆಂಬರ್ 16ರಂದು ಹೃದಯ ಕಲಕುವ ವರದಿಯನ್ನೂ ಪ್ರಕಟಿಸಿತ್ತು. 15 ವರ್ಷದ ಬಾಲಕಿಯನ್ನು 10 ಮಂದಿ ಮ್ಯಾನ್ಮಾರ್ ಸೈನಿಕರು ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಕ್ರೌರ್ಯ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಬಹುಶಃ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಹೆಣ್ಣಿನ ದೇಹವನ್ನು ಬಲವಂತದಿಂದ ಅನುಭವಿಸಬಯಸುವ ಪುರುಷರೇ ಈ ‘ಹಿಂಸಾಚಾರ’ ಎಂಬ ಕಾನ್ಸೆಪ್ಟನ್ನು ಸೃಷ್ಟಿ ಮಾಡಿರಬೇಕು. ಸಹಜ ಸಂದರ್ಭದಲ್ಲಿ ಅತ್ಯಾಚಾರ ಮಾಡಲು ಹಿಂಜರಿಯುವ ಪುರುಷ ಹಿಂಸಾಚಾರದ ವೇಳೆ ಅತ್ಯಾಚಾರವನ್ನು ಸಹಜಗೊಳಿಸುತ್ತಾನೆ. ಹೆಣ್ಣನ್ನು ಹುಡುಕಿ ಹುಡುಕಿ ಕ್ರೌರ್ಯವೆಸಗುತ್ತಾನೆ. ಆಕೆಯ ದೇಹವನ್ನು ಬೆತ್ತಲೆಗೊಳಿಸುತ್ತಾನೆ. ಇಂಚಿಂಚೂ ಇರಿಯುತ್ತಾನೆ. ಸಾಯಿಸುತ್ತಾನೆ ಮತ್ತು ಯಾವ ಪಾಪಭಾರವೂ ಇಲ್ಲದೇ ಸಮಾಜದ ಭಾಗವಾಗಿ ಬದುಕುತ್ತಾನೆ. ಅಷ್ಟಕ್ಕೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></p><p><span style="background-color: white; color: #222222; font-family: Arial, Helvetica, sans-serif; font-size: small;">ಕೋಮು ಹಿಂಸಾಚಾರವೆಂಬುದು ಎರಡೂ ಧರ್ಮಾನುಯಾಯಿಗಳ ನಡುವಿನ ದ್ವೇಷ ಸಾಧನೆಯೇ ಆಗಿರುತ್ತಿದ್ದರೆ, ಹೆಣ್ಣೇಕೆ ಅತ್ಯಾಚಾರಕ್ಕೆ ಒಳಗಾಗಬೇಕು? ಘರ್ಷಣೆಯ ಭಾಗವಾಗದೇ ತಮ್ಮ ಪಾಡಿಗಿರುವ ಹೆಣ್ಣೇಕೆ ಬೆತ್ತಲೆಯಾಗಬೇಕು? ಅವಳು ಮಾಡಿರುವ ಅಪರಾಧವೇನು?</span></p>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-11559177532000096312023-07-27T05:07:00.000-07:002023-07-27T05:07:37.919-07:00 ಮುಸ್ಲಿಮ್ ದ್ವೇಷವನ್ನೇ ಹೊದ್ದು ತಿರುಗುತ್ತಿರುವ ಸುಳ್ಳು ಸುದ್ದಿಗಳು<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgdPkZe_-cyLcZ_f7WRZys1_23n9VWheg0dPAcHPrenJQUM7m9kTgjT95eG34qDtzQv0dVmCKYHaM0x3OiQr47Me7xteEWQbmou7OsCTESUbQrydP_eu7spQav6akIrr0rsy8ugZm77a2kJM_ayrB2LL9pYJhyPjvZBaFnamcPuVz1w9S7W6j3zYDD4FDEW/s1334/page%203%20pic%20fake.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEgdPkZe_-cyLcZ_f7WRZys1_23n9VWheg0dPAcHPrenJQUM7m9kTgjT95eG34qDtzQv0dVmCKYHaM0x3OiQr47Me7xteEWQbmou7OsCTESUbQrydP_eu7spQav6akIrr0rsy8ugZm77a2kJM_ayrB2LL9pYJhyPjvZBaFnamcPuVz1w9S7W6j3zYDD4FDEW/w400-h199/page%203%20pic%20fake.jpg" width="400" /></a></div><br /><p></p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1. ಕರ್ನಾಟಕದಲ್ಲಿ ನಡೆಯಬೇಕಿದ್ದ ಭಾರೀ ರೈಲು ಅವಘಡ ವೊಂದು ಸ್ವಲ್ಪದರಲ್ಲೇ ತಪ್ಪಿದೆ. ರೈಲು ಸಂಚರಿಸುವಾಗ ಮುಸ್ಲಿಮನೊಬ್ಬ ಹಳಿಯ ಮೇಲೆ ಎಲ್ಪಿಜಿ ಸಿಲಿಂಡರ್ ಎಸೆದಿದ್ದಾನೆ. ಅದೃಷ್ಟವಶಾತ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಒಂದುವೇಳೆ, ಸ್ಫೋಟಗೊಳ್ಳುತ್ತಿದ್ದರೆ ಸಾವಿರಾರು ಮಂದಿ ಹೆಣವಾಗುತ್ತಿದ್ದರು. ಅಂತಹ ದೊಡ್ಡ ಅನಾಹುತವನ್ನು ಜನರು ಮತ್ತು ರೈಲ್ವೆ ಸಿಬ್ಬಂದಿ ತಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಲೆಂದೇ ಹೀಗೆ ಮಾಡುತ್ತಿದ್ದಾರೆ.. ಎಂಬ ಒಕ್ಕಣೆಯುಳ್ಳ ಚಿತ್ರಸಹಿತ ಬರಹವನ್ನು ಅಥವಾ ವೀಡಿಯೋವನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಈ ವೀಡಿಯೋ ಮತ್ತು ಚಿತ್ರಬರಹವು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಮುಂದೆಯೂ ಇದು ಹಂಚಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಂತ, ಈ ಸುದ್ದಿ ನಿಜವೇ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span><div><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ ಕರ್ನಾಟಕಕ್ಕೂ ಈ ಸುದ್ದಿಗೂ ಸಂಬಂಧವೇ ಇಲ್ಲ. ಇದು ಉತ್ತರ ಪ್ರದೇಶದ ಗುರುಗ್ರಾಮ ಜಿಲ್ಲೆಯ ಕಥಾಗೋದಾಮ್ ರೈಲು ನಿಲ್ದಾಣಕ್ಕೆ ಸಂಬಂಧಿಸಿದ ವೀಡಿಯೋ. 2022 ಜುಲೈ 5ರಂದು ಈ ಘಟನೆ ನಡೆದಿತ್ತು. ಗಂಗಾರಾಮ್ ಎಂಬ ವ್ಯಕ್ತಿ ಖಾಲಿ ಸಿಲಿಂಡರ್ ಹೊತ್ತು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಬಂದಿತ್ತು. ಆತ ಜೀವಭಯದಿಂದ ಸಿಲಿಂಡರ್ ಅಲ್ಲೇ ಎಸೆದು ಓಡಿ ಹೋಗಿದ್ದ. ಇದನ್ನು ಗಮನಿಸಿದ ರೈಲ್ವೆ ಪೊಲೀಸರು ರೈಲನ್ನು ತಡೆದು ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಿಲಿಂಡರ್ ರೈಲು ಚಕ್ರಕ್ಕೆ ಸಿಲುಕಿ ಚೂರುಚೂರಾಗಿತ್ತು. ನಂತರ ಗಂಗಾರಾಮ್ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರೇ ಮಾಹಿತಿಯನ್ನು ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. ಪಶ್ಚಿಮ ಬಂಗಾಳದ ಹಿಂದೂಗಳ ದುರಂತಮಯ ಪರಿಸ್ಥಿತಿಯನ್ನು ನೋಡಿ. ಹಿಂದೂಗಳಾದ ನಾವು ಒಗ್ಗಟ್ಟಾಗಿ ಹಿಂದೂಗಳನ್ನು ಬೆಂಬಲಿಸುವ ಪಕ್ಷಕ್ಕೆ ಮತ ಹಾಕದೇ ಇದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಇದೇ ಆಗಲಿದೆ. ಎಚ್ಚರ ಇರಲಿ. ಇದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರದ ಮುಸ್ಲಿಮ್ ಓಲೈಕೆಯ ದೃಶ್ಯ. ನಮ್ಮ ಹಿಂದೂಗಳ ಪರಿಸ್ಥಿತಿಯನ್ನೊಮ್ಮೆ ನೋಡಿಕೊಳ್ಳಿ.. ಎಂಬ ಬರಹವುಳ್ಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ವ್ಯಾ ಪಕವಾಗಿ ಹರಿದಾಡಿದ ವೀಡಿಯೋ ಇದು. ಇಬ್ಬರು ಯುವಕರಿಗೆ ಹಲವು ಮಂದಿ ಸೇರಿ ಥಳಿಸುವ ದೃಶ್ಯ ಈ ವೀಡಿಯೋದಲ್ಲಿದೆ. ಹಾಗಂತ, ಇದು ನಿಜವೇ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ, ಈ ವೀಡಿಯೋ ಭಾರತದ್ದೇ ಅಲ್ಲ. ಬಾಂಗ್ಲಾದೇಶದ ನ್ಯೂಸ್ ಮೀಡಿಯಾ ಬಾಂಗ್ಲಾ ಎಂಬ ಹೆಸರಿನ ವೆಬ್ ಪತ್ರಿಕೆಯು ಈ ವೀಡಿಯೋವನ್ನು 2019 ಮಾರ್ಚ್ 24ರಂದು ತನ್ನ ವೆಬ್ ಪುಟದಲ್ಲಿ ಹಂಚಿಕೊಂಡಿತ್ತು. ಬಾಂಗ್ಲಾದೇಶದ ಇನ್ನಿತರ ಹಲವು ವೆಬ್ ಪತ್ರಿಕೆಗಳೂ ಈ ವೀಡಿಯೋವನ್ನು ಹಂಚಿಕೊಂಡಿವೆ. ‘ತುಂಬಾ ಕಷ್ಟಪಟ್ಟು ಈ ಆಟೋರಿಕ್ಷಾವನ್ನು ಖರೀದಿಸಿದ್ದೆ..’ ಎಂದು ಈ ಗುಂಪಿನ ಲ್ಲಿರುವ ವ್ಯಕ್ತಿಯೋರ್ವರು ಹೇಳುವುದು ಕೂಡಾ ವೀಡಿಯೋದಲ್ಲಿ ಕೇಳಿಸುತ್ತದೆ. ವಾಸ್ತವ ಏನೆಂದರೆ, ಆಟೋ ರಿಕ್ಷಾ ಕದ್ದು ಸಿಕ್ಕಿ ಬಿದ್ದ ಇಬ್ಬರು ಯುವಕರನ್ನು ಥಳಿಸುವ ವೀಡಿಯೋ ಇದು. ಆದರೆ, ದುಷ್ಟ ಮನಸ್ಸುಗಳು ಈ ವೀಡಿಯೋಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿರುಚಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಥಳಿಸುತ್ತಿರುವ ಮುಸ್ಲಿಮರು ಎಂದು ಬಿಂಬಿಸಿವೆ. ಈ ಪ್ರಶಂಸಾರ್ಹ ಸತ್ಯ ಶೋಧನಾ ಕೆಲಸವನ್ನು ದಿ ಕ್ವಿಂಟ್ ಪತ್ರಿಕೆ ನಡೆಸಿ ಪ್ರಕಟಿಸಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">3. ದೇಶ ಬದಲಾಗುತ್ತಿದೆ. ಮುಸ್ಲಿಮ್ ಯುವಕನೊಬ್ಬ ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯನ್ನು ಪ್ರೀತಿಸಿ ಅವಳನ್ನು ಅ ಪಹರಣ ಮಾಡುವ ಯತ್ನ ನಡೆಸಿದ್ದಾನೆ. ಆದರೆ, ಈ ಪ್ರಯತ್ನದಲ್ಲಿ ವಿಫಲಗೊಂಡು ಹಿಂದೂ ಸಮಾಜದ ಮಹಿಳೆಯರಿಗೆ ಸಿಕ್ಕಿ ಬಿ ದ್ದಿದ್ದಾನೆ. ಈಗ ಅವನಿಗಾದ ಪರಿಸ್ಥಿತಿಯನ್ನು ನೋಡಿ. ಹಿಂದೂ ಸಮಾಜ ಜಾಗೃತವಾಗುತ್ತಿದೆ.. ಎಂಬ ಅಡಿ ಬರಹವಿರುವ ವೀಡಿಯೋ ನಿಮಗೂ ತಲುಪಿರ ಬಹುದು. ಬಹುತೇಕ ಉತ್ತರ ಭಾರತದಲ್ಲಿ ಸಾಕಷ್ಟು ಹಂಚಿಕೆಯಾಗಿ ರುವ ವೀಡಿಯೋ ಇದು. ಹಾಗಂತ, ಇದು ನಿಜವೇ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 2020 ಜನವರಿ 20ರಂದು ವರದಿಯನ್ನು ಪ್ರಕಟಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಈತ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಕುಪಿತಗೊಂಡು ಮಹಿಳೆಯರು ಆತನನ್ನು ನಗ್ನವಾಗಿಸಿ ಥಳಿಸಿದ್ದಾರೆ. ಇದು ನಡೆ ದಿರುವುದು ಹರ್ಯಾಣದ ಅಂಬಾಲದಲ್ಲಿ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ. ಪವನ್ ಎಂಬುದು ಈತನ ಹೆಸರಾಗಿದ್ದು, ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಆ ಮಕ್ಕಳ ಹೆತ್ತವರೂ ಈತನಿಗೆ ಥಳಿಸಿದವರಲ್ಲಿ ಸೇರಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ ಈತನ ವಿರುದ್ಧ ಇಂಡಿಯನ್ ಪೀನಲ್ ಕೋಡ್ನ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ, ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಸುನೀತಾ ಎಂಬವರು ಮಾಹಿತಿ ನೀಡಿರುವ ವೀಡಿಯೋ ಕೂಡ ಲಭ್ಯವಿದೆ. ಆದರೆ ಈ ಎಲ್ಲ ಮಾಹಿತಿಯನ್ನು ತಿರುಚಿ ಹಿಂದೂ ಯುವತಿಯನ್ನು ಪ್ರೀತಿಸಿ ಅಪಹರಣ ಮಾಡಲು ಯತ್ನಿಸಿದ ಮುಸ್ಲಿಮ್ ಯುವಕ ಎಂದು ಸುಳ್ಳು ಬರೆಯಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">4. ಗುಂಪೊಂದು ಮಹಿಳೆಯನ್ನು ಹಿಂಸಿಸಿ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡುವ ವೀಡಿಯೋವನ್ನು ನೀವು ವೀಕ್ಷಿಸಿರುವಿರೋ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿರುವ ವೀಡಿಯೋ ಇದು. ಕರ್ನಾಟಕವೂ ಸೇರಿದಂತೆ ಉತ್ತರ ಭಾರತದ ದೊಡ್ಡದೊಂಡು ಸಮೂಹಕ್ಕೆ ಈ ವೀಡಿಯೋ ತಲುಪಿದೆ. ಇದು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಯಾನಕ ದೃಶ್ಯ ಎಂಬ ವಿವರವನ್ನು ಈ ವೀಡಿಯೋದ ಜೊತೆ ಹಂಚಿಕೊಳ್ಳಲಾಗಿದೆ. ಈ ಹೆಣ್ಮಗಳು ಮಣಿಪುರದ ಹಿಂದೂ ಮೈತಿ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಇದೇ ಪರಿಸ್ಥಿತಿ ಎದುರಾಗಲಿದೆ. ಕರ್ನಾಟಕದಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲಾಗುತ್ತಿದೆ. ಕರ್ನಾಟಕದಲ್ಲೂ ಹಿಂದೂಗಳಿಗೆ ಇದೇ ಪರಿಸ್ಥಿತಿ ಬಂದೊದಗಲಿದೆ.. ಎಂಬ ವಿವರವನ್ನು ಈ ವೀಡಿಯೋದ ಜೊತೆ ನೀಡಲಾಗಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಹಾಗಂತ, ಈ ವಿವರ ನಿಜವೇ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಘಟನೆ ನಡೆದಿರುವುದು ನಿಜ. 2022 ಡಿಸೆಂಬರ್ 8ರಂದು ಮ್ಯಾನ್ಮಾರ್ನಲ್ಲಿ ನಡೆದಿದೆ. ಈ ಕುರಿತಂತೆ ಮ್ಯಾನ್ಮಾರ್ನ ಮಿಜ್ಜಿಮಾ ಎಂಬ ಸುದ್ದಿ ಸಂಸ್ಥೆ ವರದಿಯನ್ನೂ ಮಾಡಿದೆ. ಮ್ಯಾನ್ಮಾರ್ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ ಮತ್ತು ವಿರೋಧಿ ಪಿಡಿಎಫ್ ಪಕ್ಷಗಳ ನಡುವಿನ ಘರ್ಷ ಣೆಯ ಫಲಿತಾಂಶ ಈ ಹತ್ಯೆ. ಈಕೆ ಆಂಗ್ ಸಾನ್ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷಕ್ಕೆ ತಮ್ಮ ಕುರಿತು ಮಾಹಿತಿಯನ್ನು ನೀಡಿದ್ದಾಳೆ ಎಂದು ಕುದಿಗೊಂಡು ಪಿಡಿಎಫ್ ಪಕ್ಷದವರು ಈ ಹತ್ಯೆ ನಡೆಸಿದ್ದಾರೆ ಎಂದು ಮಿಜ್ಜಿಮಾ ಸುದ್ದಿ ಸಂಸ್ಥೆಯ ವರದಿ ಯಲ್ಲಿ ಹೇಳಲಾಗಿದೆ. ಭಾರತದ ಮಣಿಪುರಕ್ಕೂ ಈ ವೀಡಿಯೋಕ್ಕೂ ಸಂಬಂಧ ಇಲ್ಲ ಎಂದು ಆಲ್ಟ್ ನ್ಯೂಸ್ ಸಂಸ್ಥೆಯ ಫ್ಯಾಕ್ಟ್ ಚೆಕ್ ವರದಿಯಲ್ಲಿ ತಿಳಿಸಲಾಗಿದೆ. ಅಂದಹಾಗೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು ಸುದ್ದಿಗಳ ಭರಾಟೆ ಮತ್ತು ಹಂಚಿಕೆಯಾಗುತ್ತಿರುವ ವೇಗವನ್ನು ನೋಡಿದರೆ, ಸತ್ಯವನ್ನು ತಿಳಿಸುವ ಫ್ಯಾಕ್ಟ್ ಚೆಕ್ ವರದಿಗಳು ಕಡಿಮೆ ಪ್ರಮಾಣದಲ್ಲಿವೆ ಮತ್ತು ಹಂಚಿಕೆಯೂ ನಿಧಾನಗತಿಯಲ್ಲಿವೆ. ಸುಳ್ಳನ್ನು ಸೃಷ್ಟಿಸುವುದು ಸುಲಭ. ಹಂಚಿಕೆ ಅದಕ್ಕಿಂತಲೂ ಸುಲಭ. ಆದರೆ ಫ್ಯಾಕ್ಟ್ ಚೆಕ್ ಹಾಗಲ್ಲ. ಸುಳ್ಳು ಸುದ್ದಿಯ ಮೂಲವನ್ನು ಹುಡುಕುವುದಕ್ಕೆ ತಾಳ್ಮೆ, ಶ್ರಮ ಮತ್ತು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬದ್ಧತೆಯ ಅಗತ್ಯವಿರುತ್ತದೆ. ಎಂದೋ ಯಾವಾಗಲೋ ಪ್ರಕಟವಾದ ಒಂದು ಚಿತ್ರ ಅಥವಾ ಹಂಚಿಕೆಯಾದ ಒಂದು ವೀಡಿಯೋವನ್ನು ತನಗೆ ಬೇಕಾದಂತೆ ತಿರುಚಿ ಸುಳ್ಳುಗಾರ ಹಂಚಿಕೊಂಡಿರುತ್ತಾನೆ. ಆದರೆ ಸತ್ಯದ ಹುಡುಕಾಟದಲ್ಲಿರುವವ ಅದನ್ನು ಹುಡುಕುತ್ತಾ ಹುಡುಕುತ್ತಾ ಗಂಟೆ, ದಿನಗಳು, ತಿಂಗಳುಗಳನ್ನು ಕಳೆಯಬೇಕಾಗುತ್ತದೆ. ಅಷ್ಟರಲ್ಲಿ ಆ ಸುಳ್ಳು ಸುದ್ದಿ ತಲುಪಬೇಕಾದಲ್ಲಿಗೆಲ್ಲ ತಲುಪಿ ಮಾಡ ಬೇಕಾದ ಅ ನಾಹುತಗಳನ್ನೆಲ್ಲ ಮಾಡಿಯಾಗಿರುತ್ತದೆ. ಆ ಬಳಿಕ ಬರುವ ಫ್ಯಾಕ್ಟ್ ಚೆಕ್ನಲ್ಲಿ ಅಷ್ಟು ವೇಗ ಇರುವುದಿಲ್ಲ. ಸುಳ್ಳು ಸುದ್ದಿಗಳ ಶಕ್ತಿಯೇ ಇದು. ನಿಜವಾಗಿ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳು ಸುದ್ದಿ ಎಂಬ ಪದವು 1890ರಲ್ಲಿ ಮೊದಲ ಬಾರಿ ಬಳಕೆಯಾಗಿದೆ ಎಂದು The long and brutal of fake news <br />ತಲೆಬರಹದಲ್ಲಿ ಜಾಕೊಬ್ ಸಾಲ್ ಎಂಬವರು 2016ರಲ್ಲಿ ಬರೆದ ಲೇಖನದಲ್ಲಿ ಆಧಾರ ಸಹಿತ ವಿವರಿಸಿದ್ದಾರೆ. ಹಾಗಂತ, ಪದ 1890ರಲ್ಲಿ ಹುಟ್ಟಿಕೊಂಡಿದ್ದರೂ ಸುಳ್ಳು ಸುದ್ದಿಗಳ ಪ್ರಚಾರ 1475ರಲ್ಲೇ ನಡೆದಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಇಟಲಿಯ ಸಿಮೋನಿಯೋ ಎಂಬ ಎರಡೂವರೆ ವರ್ಷದ ಬಾಲಕ 1475ರ ಈಸ್ಟರ್ ಹಬ್ಬದ ದಿನದಂದು ಕಾಣೆಯಾಗುತ್ತಾನೆ. ಅದು ಯಹೂದಿಯರ ಬಗ್ಗೆ ಕ್ರೈಸ್ತರಲ್ಲಿ ಅಸಹನೆಯಿದ್ದ ಕಾಲ. ಈ ಬಾಲಕನನ್ನು ಯಹೂದಿಯರು ಅಪಹರಣ ಮಾಡಿ ಹತ್ಯೆ ಮಾಡಿದ್ದು, ಆತನ ರಕ್ತವನ್ನು ಕುಡಿದು ಹಬ್ಬ ಆಚರಿಸಿದ್ದಾರೆ ಎಂದು ಕ್ರೈಸ್ತ ಪಾದ್ರಿ ಬರ್ನಾಡಿನೋ ಡಫೆಲ್ಟೊ ಎಂಬವ ಸರಣಿ ಉಪ ನ್ಯಾಸ ನೀಡತೊಡಗುತ್ತಾನೆ. ಸುದ್ದಿ ಬಾಯಿಂದ ಬಾಯಿಗೆ ರವಾನೆಯಾಗಿ ಆಕ್ರೋಶ ಮಡುಗಟ್ಟುತ್ತದೆ. ಘಟನೆ ನಡೆದಿರುವ ಟ್ರೆಂಟ್ ನಗರದ ಮುಖ್ಯ ಬಿಷಪ್ ಜೊಹಾನ್ಸನ್ ಹಿಂಡರ್ಬ್ಯಾಚ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ನಗರದ ಎಲ್ಲಾ ಯಹೂದಿಯನ್ನು ಬಂಧಿಸಿ ದೌರ್ಜನ್ಯ ನಡೆಸಲು ಆದೇಶಿಸುತ್ತಾರೆ. ಇವರಲ್ಲಿ 15 ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಂತ ಸುಟ್ಟು ಹಾಕಲಾಗುತ್ತದೆ. ಅಲ್ಲದೇ, ಈ ಸುದ್ದಿಯಿಂದಾಗಿ ಟ್ರೆಂಟ್ನ ಅಕ್ಕ ಪಕ್ಕದ ಊರುಗಳಲ್ಲಿದ್ದ ಯಹೂದಿಗಳನ್ನೆಲ್ಲ ತೀವ್ರವಾಗಿ ಹಿಂಸಿಸಿ ದೌರ್ಜನ್ಯ ಎಸಗಲಾಗುತ್ತದೆ. ಅಷ್ಟಕ್ಕೂ, ಸಿಮೋನಿಯೋ ಎಂಬ ಬಾಲಕ ಸಾವಿಗೀಡಾಗಿದ್ದುದು ನಿಜ. ಆದರೆ, ಆತನಿಗೆ ಸಂಬAಧಿ ಸಿದ ಉಳಿದೆಲ್ಲ ಸುದ್ದಿಗಳು ಸುಳ್ಳಾಗಿತ್ತು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇನ್ನೊಂದು ಘಟನೆ ಹೀಗಿದೆ,</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1761ರಲ್ಲಿ ಮಾರ್ಕ್ ಅಂಟಾನಿಯೋ ಕಲಾಸ್ ಎಂಬ 22 ವರ್ಷದ ಯುವಕ ಫ್ರಾನ್ಸ್ನ ಟೇಲೋಸ್ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈತ ಪ್ರೊಟೆಸ್ಟೆಂಟ್ ಜೀನ್ ಕಲಾಸ್ ಪ್ರಸಿದ್ಧ ವ್ಯಾಪಾರಿಯ ಮಗ. ಆದರೆ, ಈ ಆತ್ಮಹತ್ಯೆಗೆ ಕ್ಯಾಥೋಲಿಕ್ ಪಂಥದವರು ‘ಹತ್ಯೆ’ ಎಂಬ ತಿರುವನ್ನು ಕೊಟ್ಟು ಪ್ರಚಾರ ಮಾಡಿ ದರು. ಮಗ ಕ್ಯಾಥೋಲಿಕ್ ಪಂಥಕ್ಕೆ ಪರಿವರ್ತನೆ ಆಗುವವನಿದ್ದ. ಇದನ್ನು ಸಹಿಸದೇ ಅಪ್ಪನೇ ಹತ್ಯೆ ನಡೆಸಿದ್ದಾನೆ ಎಂದು ವದಂತಿ ಹಬ್ಬಿಸಿದರು. ಈ ವದಂತಿ ಎಷ್ಟು ಪ್ರಬಲವಾಗಿತ್ತೆಂದರೆ, ಈ ಅಪ್ಪನನ್ನು ಹಿಂಸಿಸಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸುಳ್ಳಿನ ಶಕ್ತಿ ಅಗಾಧವಾದುದು.</span></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-78813790190657707512023-07-20T05:11:00.000-07:002023-07-20T05:11:57.861-07:00 50 ಲಕ್ಷ ಅಭಿಪ್ರಾಯಗಳು ಮತ್ತು ಸಮಾನ ನಾಗರಿಕ ಸಂಹಿತೆ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgBOGga-c31sIXbUjFnawn_eug9INCixMZOw0huyKnnS1N_-phmYzk0ulY8SBBu9beL8zM8BKaDaL9EHBP4PI7BMgFepu0uLQJI2xgPX1KdIF970p7UeNr6UgJQAarvmSDD5JH_IIWFk2_43MvzeJjVQRqsM76cUNR3iYBd8jtRrXpABj8lABB06FHafwQE/s1334/page%203%20pic%20ucc.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEgBOGga-c31sIXbUjFnawn_eug9INCixMZOw0huyKnnS1N_-phmYzk0ulY8SBBu9beL8zM8BKaDaL9EHBP4PI7BMgFepu0uLQJI2xgPX1KdIF970p7UeNr6UgJQAarvmSDD5JH_IIWFk2_43MvzeJjVQRqsM76cUNR3iYBd8jtRrXpABj8lABB06FHafwQE/w400-h199/page%203%20pic%20ucc.jpg" width="400" /></a></div><p></p><div>ಏ ಕೆ ಕುಕ್ಕಿಲ <br style="background-color: white;" /><span style="background-color: white; color: #222222; font-family: Arial, Helvetica, sans-serif; font-size: small;">1. 1985 - ಶಾಬಾನೋ ಪ್ರಕರಣ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">2. 1998 - ಸರಳಾ ಮುದ್ಗಲ್ ಪ್ರಕರಣ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">3. 2003 - ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಪೀಠದ ಹೇಳಿಕೆ</span><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸುಪ್ರೀಮ್ ಕೋರ್ಟು ಈ ಮೂರೂ ಸಂದರ್ಭಗಳಲ್ಲಿ ಹೇಳಿರು ವುದನ್ನು ನಾಗರಿಕ ಸಂಹಿತೆಯ ಸಮರ್ಥಕರು ತಮ್ಮ ವಾದಕ್ಕೆ ಆಧಾರವಾಗಿ ನೀಡುತ್ತಿದ್ದಾರೆ. ಅಲ್ಲದೇ, ಸಂವಿಧಾನದ ಮಾರ್ಗ ದರ್ಶಿ ಸೂತ್ರಗಳಲ್ಲಿ ಈ ಬಗ್ಗೆ ಒತ್ತಿ ಹೇಳಲಾಗಿದೆ ಎಂಬ ಕಡೆಗೂ ಬೊಟ್ಟು ಮಾಡುತ್ತಾರೆ. ಇದೂ ನಿಜವೇ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಸಂವಿಧಾನದ 4ನೇ ಭಾಗದಲ್ಲಿ 36ನೇ ಅನುಚ್ಛೇದದಿಂದ 51ನೇ ಅನುಚ್ಛೇದದ ವರೆಗೆ ‘ಕಾನೂನಿನ ಮೂಲಕ ಅನುಷ್ಠಾನ ಗೊಳಿಸಬೇಕಾದ ಮೌಲ್ಯಗಳ ಬಗ್ಗೆ’ ಹೇಳಲಾಗಿದೆ. ಅದರಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದು. ಹಾಗಂತ, ಅದುವೇ ಏಕೈಕ ಅಲ್ಲ. ಈ 36ರಿಂದ 51ರ ವರೆಗಿನ ಅನುಚ್ಛೇದದಲ್ಲಿ ಪಾನ ನಿಷೇಧದ ಬಗ್ಗೆಯೂ ಸೂಚಿಸಲಾಗಿದೆ. ಅಸಮಾನತೆಯ ನಿರ್ಮೂಲನೆ, ಸಮಾನ ಮತ್ತು ಉಚಿತ ನ್ಯಾಯ, ಸಮಾನ ವೇತನ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಮಾಲಕರೊಂದಿಗೆ ಸಹಭಾಗಿತ್ವ.. ಇತ್ಯಾದಿಗಳ ಬಗ್ಗೆಯೂ ಸೂಚಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆಯ ಹೊರತಾಗಿ ಸಂವಿಧಾನ ಮಾರ್ಗದರ್ಶಿ ಸೂತ್ರಗಳಲ್ಲಿ ಬೇರೇನೂ ಹೇಳಿಯೇ ಇಲ್ಲ ಎಂಬಂತೆ ನಟಿಸುತ್ತಿರುವವರ ದ್ವಂದ್ವವನ್ನು ಪಕ್ಕಕ್ಕಿಟ್ಟು ನೋಡಿದರೆ, ಪ್ರಸ್ತಾವಿತ ಈಗಿನ ಏಕರೂಪ ನಾಗರಿಕ ಸಂಹಿತೆಯು 2024ರ ಲೋಕಸಭಾ ಚುನಾವಣೆಯ ಸರಕಲ್ಲದೇ ಮತ್ತೇನಲ್ಲ ಎಂದು ಅನಿಸುತ್ತದೆ.</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;"> ಅಷ್ಟಕ್ಕೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಆದರೆ, ಅದರ ಸ್ವರೂಪ ಏನು? ದೇಶದಲ್ಲಿ ಈಗ ಭಾರತೀಯ ವಾರಸುದಾರಿಕೆ ಕಾಯ್ದೆ, ಹಿಂದೂ ವಾರಸುದಾರಿಕೆ ಕಾಯ್ದೆ, ಕ್ರೈಸ್ತ ವಾರಸುದಾರಿಕೆ ಕಾಯ್ದೆ, ಜೈನ ವಾರಸುದಾರಿಕೆ ಕಾಯ್ದೆ ಅಸ್ತಿತ್ವದಲ್ಲಿದೆ. ಬೌದ್ಧರು, ಸಿಕ್ಖರು ಹಿಂದೂ ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುವಾಗ ಬುಡಕಟ್ಟುಗಳು, ಪರಿಶಿಷ್ಟ ಜಾತಿ-ಪಂಗಡಗಳು ಭಾರತೀಯ ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುತ್ತಾರೆ ಎಂದು ಹೇಳಲಾಗುತ್ತಿದೆ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿಯೂ ಇವೆರಡೂ ಕಾಯ್ದೆಗಳಲ್ಲಿ ಕೇಂದ್ರ ಸರಕಾರ ತರಬಯಸುವ ಏಕರೂಪ ಯಾವುದು ಎಂಬ ಪ್ರಶ್ನೆಯಿದೆ. ಇದು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ. ಆದ್ದರಿಂದಲೇ, ನಾಗಾಲ್ಯಾಂಡ್, ಮೇಘಾಲಯ, ಛತ್ತೀಸ್ಗಢ್ ಸಹಿತ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳು ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಕ್ರೈಸ್ತರೂ ವಿರೋ ಧಿಸುತ್ತಿದ್ದಾರೆ. </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಹಲವು ಧರ್ಮ, ಸಂಸ್ಕೃತಿ, ಆಚರಣೆಗಳುಳ್ಳ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿದೆಯೇ, ಅದು ಪರಿ ಣಾಮಕಾರಿಯೇ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಆ ಮೂಲಕ ಬೆಳೆಸಬಹುದೇ ಎಂಬ ಪ್ರಶ್ನೆ ಮತ್ತು ಚರ್ಚೆ ಈ 2023ರಲ್ಲಿ ದುತ್ತನೆ ಆರಂಭವಾದದ್ದಲ್ಲ. ಅಂಬೇಡ್ಕರ್ ಅವರೇ ಈ ಏಕರೂಪ ನಾಗರಿಕ ಸಂಹಿತೆಯ ಪರ ಮಾತಾಡಿದ್ದರು. ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ಅದಕ್ಕೆ ಜಾಗವನ್ನೂ ಕೊಟ್ಟಿದ್ದರು. ಮಾತ್ರವಲ್ಲ, 1940ರಿಂದ 1973ರ ವರೆಗೆ ದೀರ್ಘ 33 ವರ್ಷಗಳ ಕಾಲ ಆರೆಸ್ಸೆಸ್ ಸರಸಂಘ ಚಾಲಕರಾಗಿದ್ದ ಮಾಧವ್ ಸದಾಶಿವ್ ಗೋಲ್ವಾಲ್ಕರ್ ಅವರನ್ನೂ ಈ ಚರ್ಚೆಯ ಕಾವು ತಟ್ಟಿತ್ತು. 1972 ಆಗಸ್ಟ್ 23ರ ಸಂಚಿಕೆಯಲ್ಲಿ ಆರೆಸ್ಸೆಸ್ ಮುಖವಾಣಿ ಆರ್ಗನೈಝರ್ ಪತ್ರಿಕೆ ಅವರ ಸಂದರ್ಶನವನ್ನೂ ಪ್ರಕಟಿಸಿತ್ತು. ಸಂದರ್ಶನ ನಡೆಸಿದವರು ಸಂಪಾದಕ ಕೆ.ಆರ್. ಮಲ್ಕಾನಿ. ಆ ಸಂದರ್ಶನದ ಒಂದು ಪ್ರಶ್ನೆ ಮತ್ತು ಉತ್ತರ ಹೀಗಿತ್ತು:</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮಲ್ಕಾನಿ: Dont you agree that uniformity is needed to promote national unity?- ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವುದಕ್ಕಾಗಿ ಏಕರೂಪತೆ ಅಗತ್ಯ ಎಂಬುದನ್ನು ನೀವು ಒಪ್ಪುವುದಿಲ್ಲವೇ?</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗೋಲ್ವಾಲ್ಕರ್: Harmony and uniformity are two different things. For harmony, uniformity is not necessary. There ಹಾವೇ alwayas been limitless diversities in India. Inspite of this our nation has remined strong and well organised since ancient time. For unity, we need harmony, not uniformity - ಮತ್ತು ಏಕರೂಪ- ಇವೆರಡೂ ಬೇರೆ ಬೇರೆ ವಿಷಯಗಳು. ಸಾಮರಸ್ಯಕ್ಕೆ ಏಕರೂಪದ ಅಗತ್ಯವಿಲ್ಲ. ಭಾರತವು ಅಗಣಿತದ ವೈವಿಧ್ಯತೆಯನ್ನು ಹೊಂದಿರುವ ದೇಶ. ಇದರ ಹೊರತಾಗಿಯೂ ದೇಶವು ಪುರಾತನ ಕಾಲದಿಂದಲೇ ಬಲಿಷ್ಠವಾಗಿಯೇ ಉಳಿದಿದೆ. ಏಕತೆಗಾಗಿ ಸಾಮರಸ್ಯದ ಅಗತ್ಯವಿದೆಯೇ ಹೊರತು ಏಕರೂಪ ಅಲ್ಲ. (Guruji Golwalkar- Collected works volume 9, Page 165) ಈ ಕುರಿತಾದ ಪೂರ್ಣ ಸಂದರ್ಶನದ ವಿವರವನ್ನು ದಿ ಕ್ವಿಂಟ್ ಅಂತರ್ಜಾಲ ಪತ್ರಿಕೆಯು 2020 ಫೆಬ್ರವರಿಯಲ್ಲಿ ಪ್ರಕಟಿಸಿತ್ತು ಮತ್ತು 2023 ಜುಲೈ 2ರಂದು ಮರು ಪ್ರಕಟಿಸಿದೆ. </span><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಕಾಯ್ದೆಯನ್ನು ಬೆಂಬಲಿಸುವವರಲ್ಲಿ ಎರಡು ವರ್ಗವಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">1. ಇದು ಮುಸ್ಲಿಮ್ ವಿರೋಧಿ ಕಾಯ್ದೆ ಎಂದು ಭಾವಿಸಿರುವ ಮತ್ತು ಮುಸ್ಲಿಮರಿಗೆ ತಕ್ಕ ಶಾಸ್ತಿ ಆಗಲೇಬೇಕು ಎಂದು ಅಂದುಕೊಂಡಿರುವ ವರ್ಗ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">2. ತಾವು ಬೆಂಬಲಿಸುವ ಪಕ್ಷ ಜಾರಿಗೆ ತರುವ ಯಾವುದೇ ಕಾಯ್ದೆಯು ದೇಶದ ಹಿತದಿಂದಲೇ ಕೂಡಿರುತ್ತದೆ ಮತ್ತು ಅದನ್ನು ಬೆಂಬಲಿಸಲೇಬೇಕು ಎಂದು ನಂಬಿರುವ ವರ್ಗ.</span></div><div><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ, ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರತಿ ಇನ್ನೂ ರಚನೆಯಾಗಿಲ್ಲದಿದ್ದರೂ ಅದು ಮುಖ್ಯವಾಗಿ ವಿವಾಹ, ವಿಚ್ಛೇದನ, ವಾರಸುದಾರಿಕೆ, ದತ್ತು ಸ್ವೀಕಾರ.. ಇತ್ಯಾದಿಗಳನ್ನು ಒಳಗೊಂಡಿರಲಿದೆ ಎಂಬ ಅಂಶವನ್ನು ತೇಲಿ ಬಿಡಲಾಗಿದೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರು, ಧಾರ್ಮಿಕ ಸಂಸ್ಥೆಗಳು ಮತ್ತಿ ತರರಿಂದ ಅಭಿಪ್ರಾಯ ಸಂಗ್ರಹಕ್ಕೂ ಇಳಿದಿದೆ. ಈಗಾಗಲೇ 50 ಲಕ್ಷಕ್ಕಿಂತಲೂ ಅಧಿಕ ಅಭಿಪ್ರಾಯಗಳು ಸಲ್ಲಿಕೆಯಾಗಿವೆ. ಹಾಗಂತ, ಈ ಅಭಿಪ್ರಾಯಗಳನ್ನು ಆಧರಿಸಿ ಏಕರೂಪ ನಾಗರಿಕ ಸಂಹಿ ತೆಯ ಕರಡನ್ನು ರಚಿಸಲಾಗುತ್ತದೋ ಅಥವಾ ಮುಚ್ಚಿದ ಕೋಣೆಯಲ್ಲಿ ಈಗಾಗಲೇ ರಚಿಸಲಾಗಿರುವ ಕರಡು ಪ್ರತಿಗೆ ಅಧಿಕೃತ ಮೊಹರು ಒತ್ತಲು ಈ ಅಭಿಪ್ರಾಯವನ್ನು ಅಪೇಕ್ಷಿಸ</span><span style="background-color: white; color: #222222; font-family: Arial, Helvetica, sans-serif; font-size: small;">ಲಾಗಿದೆಯೋ, ಗೊತ್ತಿಲ್ಲ. </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಒಂದುವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿಯೇ ಈ ಏಕರೂಪ ನಾಗರಿಕ ಸಂಹಿತೆಯ ಕರಡನ್ನು ರಚಿಸಲಾಗುವುದಾದರೆ ಅದು ದೇಶವನ್ನು ಆಂತರಿಕ ಸಂಘರ್ಷಕ್ಕೆ ದೂಡುವುದು ನಿಶ್ಚಿತ. ಯಾಕೆಂದರೆ, ಸಮಾಜದ ಸೌಖ್ಯಕ್ಕೆ ಇವತ್ತು ಸವಾಲಾಗಿರುವುದು ಮುಸ್ಲಿಮರ ಮದುವೆ, ವಿಚ್ಛೇದನ, ವಾರೀಸು ಸೊತ್ತು ವಿತರಣೆಗಳಲ್ಲ. ಅದು ಸಾರ್ವಜನಿಕವಾಗಿ ಇವತ್ತು ಸುದ್ದಿಯಲ್ಲೇ ಇಲ್ಲ. ಕೋರ್ಟು-ಕಚೇರಿಗಳಲ್ಲೂ ಇವುಗಳಿಗೆ ಸಂಬಂಧಿಸಿದಂತೆ ಅತ್ಯಂತ ವಿರಳ ದಾವೆಗಳಷ್ಟೇ ಇವೆ. ಆದರೆ, ದೇಶದಲ್ಲಿ ಪ್ರತಿ ನಿತ್ಯವೆಂವೆಂಬ ಒಂದಲ್ಲ ಒಂದು ಕಡೆ ಅಸಮಾನತೆ, ಅಸ್ಪೃಶ್ಯತೆ ಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರಕರಣಗಳು ದಾಖಲಾಗುತ್ತಿವೆ. ಮಂದಿರ ಪ್ರವೇಶಕ್ಕೆ ನಿರಾಕರಣೆ, ದ ಲಿತರ ಶವ ಸಂಸ್ಕಾರಕ್ಕೆ ಅಡ್ಡಿ, ದಲಿತ ಮದುಮಗ ಕುದುರೆ ಮೇಲೆ ಸಾಗುವುದಕ್ಕೆ ವಿರೋಧ, ಅಂತರ್ಜಾತಿ ವಿವಾಹಕ್ಕೆ ತಡೆ-ಹತ್ಯೆ, ದಲಿತರಿಗೆ ಆರ್ಥಿಕ-ಸಾಮಾಜಿಕ ಬಹಿಷ್ಕಾರ.. ಇತ್ಯಾದಿ ಘಟನೆ ಗಳು ದಿನನಿತ್ಯ ವರದಿಯಾಗುತ್ತಿವೆ. ಮೀಸಲಾತಿಯನ್ನೇ ಕಿತ್ತು ಹಾಕಬೇಕು ಎಂದು ವಾದಿಸುವ ಗುಂಪೂ ದೇಶದಲ್ಲಿದೆ. ತಮ್ಮದೇ ಆದ ವಿವಾಹ, ವಿಚ್ಛೇದನ, ವಾರೀಸುದಾರಿಕೆಯನ್ನು ಹೊಂದಿರುವ ಬುಡಕಟ್ಟುಗಳು, ಪರಿಶಿಷ್ಟ ಜಾತಿ-ಪಂಗಡಗಳು ಈ ದೇಶದ ಉದ್ದಕ್ಕೂ ಇವೆ. ಮಲೆಕುಡಿಯ ಎಂಬ ಅತಿ ಹಿಂದುಳಿತ ಕರಾವಳಿ ಭಾಗದ ಸಮುದಾಯದ ಒಟ್ಟು ಜೀವಿತಾವಧಿ 45-50 ವರ್ಷಗಳ ಒಳಗಿದ್ದು, ಇವರಿಗೆ ಮದುವೆಯ ವಯಸ್ಸಿನಲ್ಲಿ ರಿಯಾಯಿತಿ ಕೊಡದಿದ್ದರೆ ಆ ಸಮುದಾಯವೇ ಅಳಿದು ಹೋಗಬಹುದು ಎಂಬ ಬೇಡಿಕೆ ಬಲವಾಗಿಯೇ ಇದೆ. ಹೆಣ್ಣಿಗೆ 18 ಮತ್ತು ಗಂಡಿಗೆ 21 ಎಂಬ ಈಗಿನ ಮದುವೆ ವಯಸ್ಸಿನ ಮಿತಿಯನ್ನು ಮಲೆ ಕುಡಿಯರಿಗೆ ಕಡ್ಡಾಯವಾಗಿಸದೇ ಬೇಗನೇ ಮದುವೆಯಾಗುವ ಮತ್ತು ಆ ಮೂಲಕ ಸಂತಾನ ವೃದ್ಧಿ ಮಾಡುವ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ತಜ್ಞರ ಬೆಂಬಲವೂ ಇದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಇದೇವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮೀಸಲಾತಿಗೆ ಸಮಾಜದ ಒಂದು ವರ್ಗದಿಂದ ಇರುವ ವಿರೋಧವೂ ಗುಟ್ಟೇನಲ್ಲ. ಮಣಿಪುರವನ್ನು ಹೊತ್ತಿ ಉರಿಸಿರುವುದರ ಹಿಂದೆ ಈ ಮೀಸಲಾತಿಗೂ ಪಾತ್ರವಿದೆ. ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ಈ ಮೀಸಲಾತಿಯನ್ನು ಉಳಿಸಿಕೊಳ್ಳುವುದಕ್ಕೆ ಅರ್ಥವಿಲ್ಲ ಎಂದು ಟೀಕಿಸುವವರ ಸಂಖ್ಯೆ ಸಣ್ಣದೇನಲ್ಲ. ಶೈಕ್ಷಣಿಕ ವ್ಯವಸ್ಥೆಯ ಕುರಿತೂ ಸಾರ್ವಜನಿಕವಾಗಿ ಅಸಮಾಧಾನವಿದೆ. ಬಡವರು-ಹಿಂದುಳಿದವರು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರು ದುಬಾರಿ ಫೀಸು ತೆತ್ತು ಸಕಲ ಸೌಲಭ್ಯಗಳುಳ್ಳ ಉನ್ನತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಹಾಗೆಯೇ, ಹಿಂದೂ-ಮುಸ್ಲಿಮ್, ಕ್ರೈಸ್ತ, ಜೈನ, ಸಿಕ್ಖ್ ಮಾಲಿಕತ್ವದ ಶಾಲೆಗಳನ್ನು ಆಯಾ ಧರ್ಮದ ಮಂದಿ ಆಯ್ಕೆ ಮಾಡಿಕೊಳ್ಳುತ್ತಿರುವುದೂ ನಡೆಯುತ್ತಿದೆ. ಇದು ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ವಿಭಜಿಸುತ್ತಿದೆ ಎಂಬ ಭಾವವೂ ಜನರಲ್ಲಿದೆ. ಆರೋಗ್ಯಕ್ಕೆ ಸಂಬಂಧಿಸಿಯೂ ಈ ಅಸಮಾಧಾನವನ್ನು ವಿಸ್ತರಿಸಿ ನೋಡಬಹುದು. ಬಡವರು, ಹಿಂದುಳಿದವರು, ದುರ್ಬಲರು ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸುವಾಗ ಶ್ರೀಮಂತರು ದುಬಾರಿ, ಐಶಾರಾಮಿ ಶಾಸಗಿ ಆಸ್ಪತ್ರೆ ಗಳನ್ನು ಅವಲಂಬಿಸುತ್ತಾರೆ. ಸರಕಾರಿ ಆಸ್ಪತ್ರೆಗಳ ಸೇವೆ ಮತ್ತು ಸೌಲಭ್ಯಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳು ಎಷ್ಟೋ ಮಿಗಿಲು. ಆದ್ದರಿಂದಲೇ, ಬಡವರು ಮತ್ತು ಹಿಂದುಳಿದವರು ಸರಿಯಾದ ಚಿಕಿತ್ಸೆ ದೊರೆಯದೇ ಸರಕಾರಿ ಅಸ್ಪತ್ರೆಗಳಲ್ಲಿ ಸಾವನ್ನಪ್ಪುವಾಗ ಶ್ರೀಮಂತರು ಸುಖವಾಗಿರುತ್ತಾರೆ. ದೇಶದಲ್ಲಿ ನಡೆಯುವ ಹೆರಿಗೆ ಸಾವುಗಳಲ್ಲಿ ಅತ್ಯಧಿಕವೂ ಸರಕಾರಿ ಆಸ್ಪತ್ರೆಗಳಲ್ಲೇ ನಡೆಯುತ್ತಿದೆ ಎಂಬ ವಾದವೂ ಇದೆ. </span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಒಂದುವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ತನಗೆ ಸಲ್ಲಿಕೆಯಾದ ಸಾರ್ವಜನಿಕ ಅಭಿಪ್ರಾಯಗಳ ಆಧಾರದಲ್ಲೇ ರಾಷ್ಟ್ರೀಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕರಡನ್ನು ರೂಪಿಸಲು ಹೊರಡುವುದಾದರೆ ಇಂಥ ಅಸಮಾನತೆಯನ್ನು ಪ್ರಶ್ನಿಸುವ ಮತ್ತು ಇವುಗಳಲ್ಲಿ ಸಮಾನತೆ ಯನ್ನು ತರುವಂತೆ ಆಗ್ರಹಿಸುವ ಅತೀ ಹೆಚ್ಚು ಅಭಿಪ್ರಾಯಗಳಿಗೆ ಮುಖಾಮುಖಿಯಾಗಬೇಕಾದುದು ಖಂಡಿತ. ಈಗ ಆಯೋ ಗಕ್ಕೆ ಸಲ್ಲಿಕೆಯಾಗಿರುವ 50 ಲಕ್ಷ ಅಭಿಪ್ರಾಯಗಳಲ್ಲಿ ವಿವಾಹ, ವಿಚ್ಛೇದನ, ವಾರಿಸುದಾರಿಕೆಗಳಿಗೆ ಸಂಬಂಧಿಸಿದಂತೆ ಸಮಾನತೆ ಯನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದ ಅಭಿಪ್ರಾಯಗಳು ಒಂದು ಶೇಕಡಾ ಕೂಡಾ ಇರಲಾರದು. </span><span style="background-color: white; color: #222222; font-family: Arial, Helvetica, sans-serif; font-size: small;">ಯಾಕೆಂದರೆ, ನಿತ್ಯದ ಬದುಕಿನಲ್ಲಿ ಇವು ಇವತ್ತು ಸವಾಲುಗಳೇ ಅಲ್ಲ. ಮುಸ್ಲಿಮರ ವೈಯಕ್ತಿಕ ಕಾನೂನುಗಳಿಂದ ತಮಗೆ ತೊಂದರೆಯಾಗಿದೆ ಎಂದು ಹೇಳಿ ಹಿಂದೂ ಗಳೋ ಕ್ರೈಸ್ತರೋ ಜೈನರೋ ಪ್ರತಿಭಟಿಸಿದ್ದು ಈ ವರೆಗೂ ನಡೆದಿಲ್ಲ. ಹಿಂದೂ ವಾರಸುದಾರಿಕೆ ಕಾಯ್ದೆ ಅಥವಾ ಕ್ರೈಸ್ತ ವಾರಸುದಾರಿಕೆ ಕಾಯ್ದೆಯಿಂದ ತಮಗೆ ಅನನುಕೂಲವಾಗಿದೆ ಎಂದು ಹೇಳಿ ಮುಸ್ಲಿಮರೂ ಪ್ರತಿಭಟಿಸಿದ್ದಿಲ್ಲ. ಆದರೆ, ಈ ದೇಶದಲ್ಲಿರುವ ಅಸ್ಪೃಶ್ಯತೆ, ಉಳ್ಳವರಿಗೆ ಸುಲಭವಾಗಿ ಎಟಕುವ ದುಬಾರಿ ನ್ಯಾಯ ಪ್ರಕ್ರಿಯೆ, ಅಸಮಾನ ಶಿಕ್ಷಣ ಮತ್ತು ಆರೋಗ್ಯ ನೀತಿ ಇತ್ಯಾದಿಗಳ ಬಗ್ಗೆ ಈ ದೇಶದಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಿರುವುದಕ್ಕೆ ಲೆಕ್ಕಮಿತಿಯಿಲ್ಲ. ಆದ್ದರಿಂದ ಸಾರ್ವಜನಿಕ ಅಭಿಪ್ರಾಯಗಳನ್ನೇ ಆಧರಿಸಿ ರಾಷ್ಟ್ರೀಯ ಕಾನೂನು ಆಯೋಗವು ಕರಡು ರೂಪಿಸುವುದಾದರೆ, ಅದು ಯಾರ ವೈಯಕ್ತಿಕ ಕಾನೂನುಗಳನ್ನು ಸ್ಪರ್ಶಿ ಸದೇ, ಒಟ್ಟು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಸಂಬಂಧಿಸಿ ಏಕರೂಪವನ್ನು ತರಲೇಬೇಕಾದ ಒತ್ತಡಕ್ಕೆ ಖಂಡಿತ ಸಿಲುಕುತ್ತದೆ. ಈ ಹಿನ್ನೆಲೆಯಲ್ಲೇ ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರಿಂದ ಅಪೇಕ್ಷಿಸಿರುವ ಅಭಿಪ್ರಾಯಕ್ಕೂ ಅದು ತಯಾರಿಸಲಿರುವ ಏಕರೂಪ ನಾಗರಿಕ ಸಂಹಿತೆಗೂ ಸಂಬಂಧ ಇರಬಹುದು ಎಂದು ಅನಿಸುತ್ತಿಲ್ಲ. ಅದು ಈಗಾಗಲೇ ಒಂದು ಕರಡನ್ನು ಸಿದ್ಧಪಡಿಸಿರಬಹುದು ಅಥವಾ 2024ರ ಚುನಾವಣೆಗಾಗಿ ಬರೇ ಗದ್ದಲವನ್ನಷ್ಟೇ ಎಬ್ಬಿಸಿ ಸುಮ್ಮನಾಗಬಹುದು. ಅಷ್ಟೇ.</span><br style="background-color: white; color: #222222; font-family: Arial, Helvetica, sans-serif; font-size: small;" /></div></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-50781373005796315102023-07-10T00:54:00.000-07:002023-07-10T00:54:00.119-07:00 ದೇಶ, ಧರ್ಮದ ಬಗ್ಗೆ ಪ್ರವಾದಿ(ಸ) ಪರಿಕಲ್ಪನೆ: ದೇಶ ಮೊದಲೋ ಧರ್ಮ ಮೊದಲೋ?<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjySuP_FW3pKKW1m04G2IOujTGBqjxO8A_T71du8Py_OGQ3N-9QcMIYwq4Y_4JHCIYGRC8Ab86zYlchgekldMBbttf_iJA9HlJSzbCckQO2shkk7cYcIN9rCm2x1VYgSt87ZgPUjROzBLln2wQh0-7I2m9pUe7SwUKPnoOt71U6Bonj9gOCq6pHuoWf5g/s1467/page%203%20pic.jpg" style="margin-left: 1em; margin-right: 1em;"><img border="0" data-original-height="662" data-original-width="1467" height="180" src="https://blogger.googleusercontent.com/img/b/R29vZ2xl/AVvXsEjySuP_FW3pKKW1m04G2IOujTGBqjxO8A_T71du8Py_OGQ3N-9QcMIYwq4Y_4JHCIYGRC8Ab86zYlchgekldMBbttf_iJA9HlJSzbCckQO2shkk7cYcIN9rCm2x1VYgSt87ZgPUjROzBLln2wQh0-7I2m9pUe7SwUKPnoOt71U6Bonj9gOCq6pHuoWf5g/w400-h180/page%203%20pic.jpg" width="400" /></a></div><p><br /></p><span face="Arial, Helvetica, sans-serif" style="background-color: white; color: #222222; font-size: small;">ದೇಶ</span><br style="background-color: white; color: #222222; font-family: Arial, Helvetica, sans-serif; font-size: small;" /><div><span face="Arial, Helvetica, sans-serif" style="background-color: white; color: #222222; font-size: small;">ಧರ್ಮ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span><div><span face="Arial, Helvetica, sans-serif" style="background-color: white; color: #222222; font-size: small;">ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ. ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸು ವುದೂ ಇದೆ. ದೇಶ ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು ಬಳಸಿಕೊಳ್ಳುವುದೂ ಇದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಒಂದು ಅಂಕಿ-ಅಂಶ ಕೊಡುತ್ತೇನೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">2021ರಲ್ಲಿ ಒಂದು ಲಕ್ಷದ 63 ಸಾವಿರ ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 78 ಸಾವಿರ ಮಂದಿ ಅಮೇರಿಕದ ಪೌರತ್ವವನ್ನು ಸ್ವೀಕರಿಸಿದ್ದಾರೆ. 2020ರಲ್ಲಿ ಒಟ್ಟು 85,256 ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಹಾಗೆಯೇ, 2019ರಲ್ಲಿ 1 ಲಕ್ಷದ 44 ಸಾವಿರ ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಮತ್ತು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. 2019ರಿಂದ 21ರ ನಡುವೆ ಒಟ್ಟು 3 ಲಕ್ಷದ 90 ಸಾವಿರ ಮಂದಿ ಈ ದೇಶದ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 7046 ಮಂದಿ ಸಿಂಗಾಪುರ, 3,754 ಮಂದಿ ಸ್ವೀಡನ್, 170 ಮಂದಿ ಬಹ್ರೈನ್, 21 ಮಂದಿ ಇರಾನ್, 1400 ಮಂದಿ ಚೀನಾ, 48 ಮಂದಿ ಪಾಕಿಸ್ತಾನದ ಪೌರತ್ವವನ್ನು 2021ರಲ್ಲಿ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈಯವರು 2022ರಲ್ಲಿ ಪಾರ್ಲಿಮೆಂಟ್ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದವರು ಬಿಎಸ್ಪಿ ಸಂಸದ ಹಾಜಿ ಫಝ್ಲರ್ರಹ್ಮಾನ್.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ನೆನಪಿರಲಿ</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಇವರು ಭಾರತೀಯ ನಾಗರಿಕತ್ವವನ್ನು ತೊರೆದಿದ್ದಾರೆಯೇ ಹೊರತು ಧರ್ಮವನ್ನಲ್ಲ. ಒಂದುವೇಳೆ, ದೇಶವೇ ಮೊದಲು ಮತ್ತು ಧರ್ಮ ಅನಂತರ ಎಂದು ವಾದಿಸುವುದಾದರೆ ಮತ್ತು ದೇಶ ಪ್ರೇಮವನ್ನು ನಿರ್ಧರಿಸುವ ಮಾನದಂಡ ಇದುವೇ ಆಗಿದ್ದರೆ 2019ರಿಂದ 21ರ ನಡುವೆ ದೇಶದ ಪೌರತ್ವವನ್ನು ತೊರೆದ ಮತ್ತು ಧರ್ಮವನ್ನು ತೊರೆಯದ 3 ಲಕ್ಷದ 90 ಸಾವಿರ ಮಂದಿಯನ್ನು ದೇಶದ್ರೋಹಿಗಳು ಎಂದು ಕರೆಯ</span><span face="Arial, Helvetica, sans-serif" style="background-color: white; color: #222222; font-size: small;">ಬೇಕಾಗುತ್ತದೆ. ಮಾತ್ರವಲ್ಲ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಹೀಗೆ ದೇಶದ ಪೌರತ್ವವನ್ನು ತೊರೆದವರಲ್ಲಿ 99 ಶೇಕಡಾ ಮಂದಿ ಕೂಡಾ ಅರಬ್ ರಾಷ್ಟ್ರಗಳ ಪೌರತ್ವವನ್ನು ಸ್ವೀಕರಿಸಿಲ್ಲ ಎಂಬುದೂ ಗಮನಾರ್ಹ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಈ ದೇಶದ ಪೌರತ್ವವನ್ನು ತೊರೆದವರು ಅಮೇರಿಕ, ಕೆನಡ, ಬ್ರಿಟನ್, ಸಿಂಗಾಪುರ, ಚೀನಾ, ಸ್ವೀಡನ್, ಜಪಾನ್ ಇತ್ಯಾದಿ ದೇಶಗಳ ಪೌರತ್ವವನ್ನು ಸ್ವೀಕರಿಸಿದ್ದಾರೆ. ಆದರೆ, ಅವರಾರೂ ತಮ್ಮ ಧರ್ಮವನ್ನು ತೊರೆದಿಲ್ಲ ಮತ್ತು ಭಾರತದಲ್ಲಿರುವ ತಮ್ಮ ಕುಟುಂಬಿಕರೊಂದಿಗಿನ ಸಂಬಂಧವನ್ನು ಕಡಿದುಕೊಂಡೂ ಇಲ್ಲ. ಹಬ್ಬ-ಹರಿದಿನಗಳಲ್ಲಿ ಅವರು ಕುಟುಂಬ ಸಮೇತ ಭಾರತಕ್ಕೆ ಬಂದು ಇಷ್ಟ ದೇವರ ಪೂಜೆ-ಪುನಸ್ಕಾರ ಮಾಡಿ ಸಂಭ್ರಮಿಸುತ್ತಿರಬಹುದು. ತಮ್ಮ ಇಷ್ಟದ ಮಂದಿರ-ಬಸದಿ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಮನ ತಣಿಸಿಕೊಳ್ಳುತ್ತಿರಬಹುದು. ಭಾರತದಲ್ಲಿರುವ ಕುಟುಂಬಿಕರಿಗೆ ಕಾಲಕಾಲಕ್ಕೆ ಹಣ ಕಳುಹಿಸುತ್ತಿರಬಹುದು. ತಂದೆ-ತಾಯಿ ಭಾರತದಲ್ಲಿದ್ದು ಭಾರತೀಯ ನಾಗರಿಕರಾಗಿ ಜೀವಿಸುತ್ತಿರುವಾಗ ಮಗ ಅಥವಾ ಮಗಳು ಅಮೇರಿಕ ದಲ್ಲಿದ್ದು, ಅಮೇರಿಕನ್ ಪೌರರಾಗಿ ಬದುಕುತ್ತಿರಬಹುದು.</span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;"> ಹಾಗಂತ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಅಮೇರಿಕದಲ್ಲಿರುವ ಮಗ ಅಥವಾ ಮಗಳು ಭಾರತೀಯ ಪೌರತ್ವವನ್ನು ತೊರೆದು ಅಮೇರಿಕನ್ ಪೌರತ್ವವನ್ನು ಸ್ವೀಕರಿಸುವಾಗ ಹಿಂದೂ ಧರ್ಮವನ್ನು ತೊರೆದು ಅಮೇರಿಕದ ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದಿಲ್ಲ. ಬಹರೇನ್, ಯುಎಇ, ಸೌದಿ, ಮಂಗೋಲಿಯಾಕ್ಕೆ ಸಂಬಂಧಿಸಿಯೂ ಇದೇ ಮಾತು ಅನ್ವಯಿಸುತ್ತದೆ. ಇವರೆಲ್ಲ ದೇಶವನ್ನು ಬದಲಾಯಿಸುತ್ತಾರೆಯೇ ಹೊರತು ಧರ್ಮವನ್ನಲ್ಲ. ಯಾಕೆಂದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ದೇಶ ಮತ್ತು ಧರ್ಮ ಬೇರೆ ಬೇರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ದೇಶಕ್ಕೆ ಗಡಿಯೆಂಬ ಬೇಲಿಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭೂಭೂಗವೇ ಭಾರತ. ಈ ಗಡಿಯ ಹೊರಗಿನ ಮಂದಿ ಭಾರತೀಯರಲ್ಲ. ಪಾಕಿಸ್ತಾನಕ್ಕೂ, ಚೀನಾಕ್ಕೂ, ಅಮೇರಿಕಕ್ಕೂ ಮತ್ತು ಸೌದಿ ಅರೇಬಿಯಾಕ್ಕೂ ಇಂಥದ್ದೇ ಗಡಿಗಳಿವೆ ಮತ್ತು ಇಂಥದ್ದೇ ಅಸ್ಮಿತೆಗಳಿವೆ. ಇನ್ನು,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಭಾರತದ ಒಳಗೂ ಹಲವು ಅಸ್ಮಿತೆಗಳಿವೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಕನ್ನಡಿಗ, ತಮಿಳಿಗ, ಗುಜರಾತಿ, ಮಲಯಾಳಿ, ಬಂಗಾಳಿ, ಅಸ್ಸಾಮಿ... ಹೀಗೆ ಭಾರತೀಯರಿಗೂ ವಿವಿಧ ಗುರುತುಗಳಿವೆ. ಅಲ್ಲದೇ, ಈ ರಾಜ್ಯವಾರು ಗುರುತುಗಳಲ್ಲದೇ, ಜಿಲ್ಲಾವಾರು ಗುರುತುಗಳು ಮತ್ತು ತಾಲೂಕುವಾರು ಗುರುತುಗಳಿಂದಲೂ ವ್ಯಕ್ತಿ ಗುರುತಿಸಲ್ಪಡುತ್ತಾನೆ/ಳೆ. ಕೋಲಾರದವ, ಬೆಳಗಾವಿ, ಹುಬ್ಬಳ್ಳಿಯವ ಅಥವಾ ಬಂಟ್ವಾಳದವ, ತೀರ್ಥಹಳ್ಳಿ, ಕೊಳ್ಳೆಗಾಲದವ ಎಂದೆಲ್ಲಾ ಗುರುತು ಮಾಡಲಾಗುತ್ತದೆ. ಆದರೆ ಧರ್ಮಕ್ಕೆ ಸಂಬಂಧಿಸಿ ಈ ಒಳಗುರುತುಗಳಿರುವುದಿಲ್ಲ. ಹಿಂದೂ-ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಕ್ಖ್ ಎಂಬ ಗುರುತಿನಿಂದ ಗುರುತಿಸಲಾಗುತ್ತದೆಯೇ ಹೊರತು ದಕ್ಷಿಣ ಕನ್ನಡದ ಮುಸ್ಲಿಮ್, ಬೆಂಗಳೂರಿನ ಮುಸ್ಲಿಮ್, ದೆಹಲಿಯ ಮುಸ್ಲಿಮ್ ಎಂದೆಲ್ಲಾ ವಿಭಜಿಸಿ ಹೇಳುವ ಕ್ರಮವಿಲ್ಲ. ಯಾಕೆಂದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಧರ್ಮವು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಇತ್ಯಾದಿಗಳನ್ನು ಮೀರಿದ ಯುನಿವರ್ಸಲ್ ಗುರುತು. ಅದು ಸಾರ್ವತ್ರಿಕ. ಸರ್ವವ್ಯಾಪಿ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಹಿಂದೂ ಧರ್ಮದನುಸಾರ ಓರ್ವ ಹಿಂದೂ ಭಾರತದಲ್ಲೂ ಬದುಕಬಲ್ಲ, ಅಮೇರಿಕ, ಸ್ವೀಡನ್, ಆಫ್ರಿಕಾದಲ್ಲೂ ಬದುಕಬಲ್ಲ. ಓರ್ವ ಮುಸ್ಲಿಮ್ ಅಥವಾ ಸಿಕ್ಖ್ ಗೆ ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಯಾಕೆಂದರೆ, ಧರ್ಮ ಸ್ಥಾವರ ಅಲ್ಲ, ಜಂಗಮ. ಅದಕ್ಕೆ ಗಡಿ, ಬೇಲಿಗಳಿಲ್ಲ. ಭಾಷೆಯ ಹಂಗಿಲ್ಲ. ಅದು ಜಪಾನ್ಗೂ ಹೊಂದಿಕೊಳ್ಳುತ್ತದೆ. ಅಮೇರಿಕಕ್ಕೂ ಹೊಂದಿಕೊಳ್ಳುತ್ತದೆ. ಆದರೆ ಭಾರತೀಯನೋರ್ವ ಕಿನ್ಯಾದ ಭಾಷೆಗೆ ತಕ್ಷಣ ಹೊಂದಿಕೊಳ್ಳಲಾರ. ಗಲ್ಫ್ ರಾಷ್ಟ್ರಕ್ಕೆ ತೆರಳಿದ ಭಾರತೀಯನೋರ್ವ ಅಲ್ಲಿನ ಅರಬಿ ಭಾಷೆಗೆ ತಳಮಳಗೊಳ್ಳಬಲ್ಲ. ಹಾಗಂತ, ಇದನ್ನು ಭಾರತೀಯರಿಗೆ ಸಂಬಂಧಿಸಿ ಮಾತ್ರ ಹೇಳಬೇಕಿಲ್ಲ. ಚೀನಿಯನೋರ್ವ ಅಥವಾ ಜಿಂಬಾಬ್ವೆಯ ವ್ಯಕ್ತಿಯೋರ್ವ ಭಾರತಕ್ಕೆ ಬಂದರೂ ಇದೇ ಗಲಿಬಿಲಿ ಮತ್ತು ತಳಮಳವನ್ನು ಹೊಂದಬಲ್ಲ. </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಧರ್ಮವನ್ನು ಆಚರಿಸುವ ವಿಷಯಕ್ಕೆ ಸಂಬಂಧಿಸಿ ಈ ಯಾವ ಗೊಂದಲ ಮತ್ತು ತಳಮಳ ಇವರಾರಿಗೂ ಆಗುವುದಕ್ಕೆ ಸಾಧ್ಯವೇ ಇಲ್ಲ. ಮುಸ್ಲಿಮನೋರ್ವ ಅಮೇರಿಕದ ಮಣ್ಣಿಗೆ ಇಳಿದ ಬಳಿಕ ಯಾವ ಗೊಂದಲವೂ ಇಲ್ಲದೆ ತನ್ನ ಕೋಣೆ ಸೇರಿ ನಮಾಝï ಮಾಡಬಲ್ಲ ಅಥವಾ ಮಸೀದಿ ಇದ್ದರೆ ಅಲ್ಲೂ ನಮಾಝï ನೆರವೇರಿಸಬಲ್ಲ. ಅಲ್ಲಿ ಭಾಷೆಯ ಸಮಸ್ಯೆ ಉದ್ಭವಿಸುವುದೇ ಇಲ್ಲ. ಉಪವಾಸ ಆಚರಿಸುವುದಕ್ಕೂ ಯಾವ ತಡೆಯೂ ಎದುರಾಗುವುದಿಲ್ಲ. ಹಿಂದೂಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಕೋಣೆಯೊಳಗೆ ವಿಗ್ರಹವನ್ನಿಟ್ಟು ಪೂಜೆ ಮಾಡುವುದಕ್ಕೋ ಜಪ-ತಪ ನಿರ್ವಹಿಸುವುದಕ್ಕೋ ಯಾವ ಅಡ್ಡಿಯೂ ಎದುರಾಗುವುದಿಲ್ಲ. ನಿಜವಾಗಿ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಧರ್ಮದ ಈ ಯುನಿವರ್ಸಲ್ ಗುಣವನ್ನು ದೇಶ ಎಂಬ ಸೀಮಿತ ಗಡಿಗುರುತಿನೊಂದಿಗೆ ಹೋಲಿಕೆ ಮಾಡುವುದೇ ತಪ್ಪು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ದೇಶ ಮತ್ತು ಧರ್ಮದ ಬಗ್ಗೆ ಚರ್ಚಿಸುವಾಗ ಈ ಸ್ಪಷ್ಟತೆ ಇಲ್ಲದೇ ಹೋದರೆ ಆ ಚರ್ಚೆ ದೇಶಪ್ರೇಮಿ ಮತ್ತು ದೇಶ ದ್ರೋಹಿಗಳನ್ನು ತೀರ್ಮಾನಿಸುವ ನ್ಯಾಯಾಲಯವಾಗಿ ಪರಿವರ್ತನೆಯಾಗುತ್ತದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಇಂಥದ್ದೊಂದು ಸ್ಥಿತಿಯಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೇ ಇಲ್ಲಿ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಮಕ್ಕಾದ ಜನರ ದೌರ್ಜನ್ಯ, ಹಿಂಸೆ, ಕಿರುಕುಳಗಳನ್ನು ತಾಳಲಾರದೇ ಹುಟ್ಟಿ ಬೆಳೆದು 53 ವರ್ಷಗಳ ವರೆಗೆ ಬದುಕಿದ ಮಣ್ಣನ್ನು ಬಿಟ್ಟು ಅವರು ಮದೀನಾಕ್ಕೆ ವಲಸೆ ಹೋಗಲು ನಿರ್ಬಂಧಿತರಾಗುತ್ತಾರೆ. ಇಂಥ ಅನಿವಾರ್ಯ ಸ್ಥಿತಿಯಲ್ಲೂ ಅವರು ಮಕ್ಕಾವನ್ನು ಉದ್ದೇಶಿಸಿ ಹೇಳಿದ ಮಾತನ್ನು ತಿರ್ಮಿದಿ ಎಂಬ ಗ್ರಂಥದ ಕ್ರಮ ಸಂಖ್ಯೆ 3926ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ-</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">‘ನೀನು ನನಗೆಷ್ಟು ಆಪ್ತ ಮತ್ತು ಪ್ರೀತಿಯ ನೆಲ ಎಂದರೆ, ನನ್ನವರು ನನ್ನನ್ನು ಇಲ್ಲಿಂದ ಹೊರಹಾಕದಿರುತ್ತಿದ್ದರೆ ನಾನು</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುತ್ತಿರಲಿಲ್ಲ..’ </span><span style="background-color: white; color: #222222;">ಇದೇವೇಳೆ,</span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಇರಾನ್ನ ಸಲ್ಮಾನ್, ರೋಮ್ನ ಬಿಳಿಯ ವ್ಯಕ್ತಿ ಶುಹೈಬ್ ಮತ್ತು ಇತಿಯೋಪಿಯಾದ ಕಪ್ಪು ಮೈಬಣ್ಣದ ಬಿಲಾಲ್ರ ಜೊತೆ ಪ್ರವಾದಿ ಸಭೆ ನಡೆಸುತ್ತಿರುವಾಗ ಅಲ್ಲಿಗೆ ಗಿಯಾಸ್ ಎಂಬ ಅರಬ್ ವ್ಯಕ್ತಿ ಬಂದರು. ಇವರನ್ನು ನೋಡಿ, ‘ಓ ವಿದೇಶಿಗರೇ’ ಎಂದು ಕರೆದರು. ಆದರೆ ಪ್ರವಾದಿ ಆ ಗಡಿಪ್ರೇರಿತ ಮತ್ತು ಜನಾಂಗೀಯ ಪ್ರೇರಿತ ಸಂಬೋಧನೆಯನ್ನು ವಿರೋಧಿಸಿದರು. ಮನುಷ್ಯರನ್ನು ದೇಶ ಮತ್ತು ಜನಾಂಗದ ಆಧಾರದಲ್ಲಿ ವಿಭಜಿಸುವುದನ್ನು ನಿರುತ್ತೇಜಿಸಿದರು. ‘ನಾವೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು...’ ಎಂದು ತಿದ್ದಿದರು. ಅರೇಬಿಯನ್, ಇತಿಯೋಪಿಯನ್ ಅಥವಾ ಪರ್ಷಿಯನ್ ಎಂದು ಮಾನವರನ್ನು ವಿಭಜಿಸಿ ನೋಡುವುದು ಮಾನವ ಸಹಜ ಸಹೋದರ ಸಂಬಂಧಕ್ಕೆ ಧಕ್ಕೆ ತರಬಲ್ಲುದು ಎಂಬ ದೂರದೃಷ್ಟಿಯ ನಿಲುವು ಅವರದಾಗಿತ್ತು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಪವಿತ್ರ ಕುರ್ಆನ್ ಕೂಡ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಿದೆ-</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಸೃಷ್ಟಿಕರ್ತನು ನಿಮ್ಮನ್ನು ಒಬ್ಬ ಪುರುಷ ಮತ್ತು ಸ್ತ್ರೀಯಿಂದ ಉಂಟು ಮಾಡಿದ್ದಾನೆ. ಬಳಿಕ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮಲ್ಲಿ ಜನಾಂಗಗಳನ್ನೂ ಬುಡಕಟ್ಟುಗಳನ್ನೂ ಮಾಡಿದ್ದಾನೆ. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಸೃಷ್ಟಿಕರ್ತನ ಬಳಿ ಅತೀ ಹೆಚ್ಚು ಗೌರವಕ್ಕೆ ಪಾತ್ರನು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;">(ಪವಿತ್ರ ಕುರ್ಆನ್, ಅಧ್ಯಾಯ 49, ವಚನ 13)</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಹಾಗೆಯೇ, </span></div><div><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಪ್ರವಾದಿ ಹಜ್ಜ್ ಕರ್ಮವನ್ನು ನಿರ್ವಹಿಸಿ ಮಾಡಿದ ಐತಿ ಹಾಸಿಕ ಭಾಷಣ ಕೂಡ ಗಮನಾರ್ಹ-</span></div><div><span face="Arial, Helvetica, sans-serif" style="background-color: white; color: #222222; font-size: small;">‘ಅರಬನಿಗೆ ಅರಬೇತರನಿಗಿಂತ, ಬಿಳಿಯನಿಗೆ ಕರಿಯನಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಯಾವ ಮೇಲ್ಮೆಯಾಗಲಿ ಹೆಚ್ಚು ಗಾರಿಕೆಯಾಗಲಿ ಇಲ್ಲ. ನಿಮ್ಮಲ್ಲಿ ಯಾರು ಒಳಿತಿನಲ್ಲಿ ಮುಂದಿರುತ್ತಾರೋ ಅವರೇ ಉತ್ತಮರು.’</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಅಂದಹಾಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಪವಿತ್ರ ಕುರ್ಆನ್ ಮತ್ತು ಪ್ರವಾದಿ ಮುಹಮ್ಮದರು ದೇಶ ಮತ್ತು ಧರ್ಮದ ಪರಿಕಲ್ಪನೆಯನ್ನು ಇಲ್ಲಿ ನಿಕಷಕ್ಕೆ ಒಡ್ಡಿದ್ದಾರೆ. ದೇಶ ಎಂಬುದು ಭಾವನಾತ್ಮಕ ಸಂಗತಿ. ತಾನಿರುವ ದೇಶವನ್ನು ಪ್ರೀತಿಸುವುದು ಮತ್ತು ಅದರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವುದು ಪ್ರತಿಯೊಬ್ಬನ ಕರ್ತವ್ಯ. ಪ್ರವಾದಿ ಮಕ್ಕಾವನ್ನು ತೊರೆದುದು ಅತ್ಯಂತ ಅನಿವಾರ್ಯ ಸ್ಥಿತಿ ಎದುರಾದಾಗ. ಇನ್ನು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾದಾಗ ಭಾವುಕ ಹೃದಯದೊಂದಿಗೆ ಅವರು ಮಕ್ಕಾಕ್ಕೆ ವಿದಾಯ ಕೋರಿದರು. ಹಾಗೇ ವಿದಾಯ ಕೋರುವಾಗಲೂ, ಮಕ್ಕಾದ ಮಣ್ಣಿನೊಂದಿಗೆ ತನಗಿರುವ ಭಾವನಾತ್ಮಕ ನಂಟನ್ನು ನೆನಪಿಸಿ ಕೊಂಡರು. ಯಾಕೆಂದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಹುಟ್ಟಿದಂದಿನಿಂದ ಮಕ್ಕಾವನ್ನು ತೊರೆಯಬೇಕಾಗಿ ಬಂದ 53ನೇ ವರ್ಷದ ವರೆಗೆ ಮಕ್ಕಾದ ಸರ್ವತೋಮುಖ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರವಾದಿ ಶ್ರಮಿಸಿದ್ದರು. ಹಜರುಲ್ ಅಸ್ವದ್ ಎಂಬ ಕಪ್ಪು ಶಿಲೆಯ ಹೆಸರಲ್ಲಿ ಸಂಘರ್ಷವೊಂದು ಹುಟ್ಟಿ ಕೊಳ್ಳುವ ಸಾಧ್ಯತೆ ಎದುರಾದಾಗ, ಅದನ್ನು ಚಾಣಾಕ್ಷತನ ದಿಂದ ತಪ್ಪಿಸಿದ್ದು ಇದೇ ಪ್ರವಾದಿ. ಅವರನ್ನು ಕಲ್ಲೆಸೆದು ರಕ್ತ ಹರಿಯುವಂತೆ ಗಾಯಗೊಳಿಸಿದಾಗಲೂ ತನ್ನ ಜನರ ಮೇಲೆ ಶಾಪ ಪ್ರಾರ್ಥನೆ ಮಾಡದೆ ಇದ್ದುದು ಕೂಡಾ ಇದೇ ಪ್ರವಾದಿ. ಪ್ರವಾದಿತ್ವದ 40ರಿಂದ 53 ವರ್ಷಗಳ ಅವಧಿಯಲ್ಲಿ ತೀವ್ರ ಹಿಂಸೆಯನ್ನು ಎದುರಿಸಿದ ಹೊರತಾಗಿಯೂ ಮಕ್ಕಾದ ಜನರ ವಿರುದ್ಧ ಯುದ್ಧ ಘೋಷಣೆ ಮಾಡದೇ ಇದ್ದುದೂ ಇದೇ ಪ್ರವಾದಿ. ಮಾತ್ರವಲ್ಲ, ತೀರ್ಥಯಾತ್ರೆಯ ಉದ್ದೇಶವನ್ನಿಟ್ಟು ಮದೀನಾದಿಂದ ಮಕ್ಕಾಕ್ಕೆ ಹೊರಟವರನ್ನು ಅರ್ಧದಾರಿಯಲ್ಲೇ ತಡೆದ ಮಕ್ಕಾದ ಜನರೊಂದಿಗೆ ಯುದ್ಧ ಘೋಷಿಸದೇ ಮರಳಿ ಮದೀನಾ ಸೇರಿಕೊಂಡದ್ದೂ ಇದೇ ಪ್ರವಾದಿ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಒಂದು ರೀತಿಯಲ್ಲಿ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ತನ್ನ ತಾಯ್ನಾಡು ಸಂಘರ್ಷಭರಿತವಾಗುವುದನ್ನು ಮತ್ತು ತನ್ನ ತಾಯ್ನಾಡಿನ ಜನರು ಸಂಕಷ್ಟಕ್ಕೆ ಒಳಗಾಗುವುದನ್ನು ಪ್ರವಾದಿ ಎಂದೂ ಬಯಸಿರಲಿಲ್ಲ. ಇದಕ್ಕೆ ತಾನು ಹುಟ್ಟಿದೂರು ಎಂಬ ಪ್ರೀತಿಯೇ ಕಾರಣವಿರಬೇಕು. ತನ್ನ ಜನರು, ತನ್ನ ದೇಶ, ತಾನು ಹುಟ್ಟಿ, ಬೆಳೆದ, ಆಡಿದ ಮಣ್ಣು ಎಂಬ ಭಾವನಾತ್ಮಕ ನಂಟೇ ಅವರನ್ನು ಈ ಎಲ್ಲ ಅವಮಾನಗಳನ್ನು ಸಹಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡಿರಬೇಕು. ತನ್ನ ತಾಯ್ನಾಡು ಶಾಂತಿಯುತವಾಗಿರಬೇಕು ಎಂಬ ಮಹದಾಸೆ ಅವರ ಈ ಎಲ್ಲ ನಿಲುವುಗಳಲ್ಲಿ ಎದ್ದು ಕಾಣುತ್ತದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಇದೇವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ದೇಶಪ್ರೇಮವೆಂಬುದು ಜನಾಂಗೀಯವಾದವಾಗಿ ಮತ್ತು ಇತರರನ್ನು ದ್ವೇಷಿಸುವ ಚಿಂತನೆಯಾಗಿ ಬದಲಾಗಬಾರದೆಂದೂ ಅವರು ಬಯಸಿದ್ದರು. ಸಲ್ಮಾನ್, ಶುಹೈಬ್ ಮತ್ತು ಬಿಲಾಲ್ರನ್ನು ಹೊರಗಿನವರು ಎಂದು ತನ್ನದೇ ಅನುಯಾಯಿ ಗಿಯಾಸ್ ವಿಭಜಿಸಿದಾಗ ಪ್ರವಾದಿ ಅದನ್ನು ವಿರೋಧಿಸಿದ್ದು ಇದೇ ಕಾರಣದಿಂದ. ಅಂಥ ವಿಭಜನೆ ಅಂತಿಮವಾಗಿ ಜನಾಂಗೀಯ ವಿಭಜನೆಯೆಡೆಗೆ ಕೊಂಡೊಯ್ಯುತ್ತದೆ. ಹಿಟ್ಲರ್ ಇದನ್ನೇ ಮಾಡಿದ. ಆರ್ಯರು ಮತ್ತು ಆರ್ಯೇತರರು ಎಂದು ತನ್ನದೇ ಜನರನ್ನು ವಿಭಜಿಸಿದ. ಆರ್ಯರು ಶ್ರೇಷ್ಠರು ಎಂದ. ಚೆಕೊಸ್ಲಾವಿಯಾ, ರುವಾಂಡ ಮತ್ತು ಮ್ಯಾನ್ಮಾರ್ನಲ್ಲೂ ಇಂಥದ್ದೇ ವಿಭಜನೆ ನಡೆದಿದೆ. ಅಂತಿಮವಾಗಿ ಬಹುದೊಡ್ಡ ಜನಾಂಗೀಯ ಹತ್ಯಾಕಾಂಡಕ್ಕೆ ಇದು ಮುನ್ನುಡಿ ಬರೆದದ್ದನ್ನೂ ಜಗತ್ತು ಕಂಡಿದೆ. ಭಾರತದಲ್ಲೂ ಇಂಥದ್ದೊಂದು ವಿಭಜನೆಗೆ ಪ್ರಯತ್ನ ನಡೆಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಸ್ವದೇಶೀಯರು ಮತ್ತು ವಿದೇಶಿಯರು ಎಂಬ ಗೆರೆಯೊಂದನ್ನು ಎಳೆಯುವುದು ಮತ್ತು ಸ್ವದೇಶಿ ಧರ್ಮ, ಆಹಾರ, ಸಂಸ್ಕೃತಿ, ಆರಾಧನೆ, ಕಲೆ, ಸಾಹಿತ್ಯ ಇತ್ಯಾದಿಗಳನ್ನು ಶ್ರೇಷ್ಠವೆಂದು ಸಾರಿ ವಿದೇಶಿಯರು ಎಂದು ಹಣೆಪಟ್ಟಿ ಹಚ್ಚಲಾದವರ ಧರ್ಮ, ಕಲೆ, ಸಂಸ್ಕೃತಿ, ಆಹಾರ ಕ್ರಮ ಇತ್ಯಾದಿಗಳನ್ನು ಪದೇಪದೇ ಪ್ರಶ್ನಿಸುತ್ತಾ ನಿಂದಿಸುತ್ತಾ ಬರುವುದು ಇದಕ್ಕೆ ಪುರಾವೆ. ಇದು ಅಂತಿಮವಾಗಿ ಜನಾಂಗೀಯ ಸಂಘರ್ಷ ಮತ್ತು ಜನಾಂಗೀಯ ಹತ್ಯಾಕಾಂಡದೆಡೆಗೆ ತಲುಪಿಸುತ್ತದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಅಷ್ಟಕ್ಕೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಮಕ್ಕಾದ ಕಿರುಕುಳ ತಾಳಲಾರದೇ ಮದೀನಾಕ್ಕೆ ತೆರಳಿದ ಪ್ರವಾದಿಯವರು ಅಲ್ಲಿನ ಬಹುಸಂಖ್ಯಾತ ಯಹೂದಿ ಮತ್ತು ಬಹುದೇವಾರಾಧಕ ಸಮುದಾಯದೊಂದಿಗೆ ಬೆರೆತು ಬದುಕಿದ್ದರು. ಅಲ್ಲಿನ ಕೈನುಕಾ, ನಝೀರ್ ಮತ್ತು ಕುರೈಝಾ ಎಂಬ ಪ್ರಬಲ ಯಹೂದಿ ಬುಡಕಟ್ಟುಗಳು ಮತ್ತು ಬಹುದೇವಾರಾಧಕ ಗುಂಪುಗಳೊಂದಿಗೆ ಅವರು ಐತಿಹಾಸಿಕ ಒಡಂಬಡಿಕೆಯೊಂದನ್ನು ಮಾಡಿಕೊಂಡರು. ಇದನ್ನು ಮದೀನಾದ ಮೊದಲು ಸಂವಿಧಾನ ಎಂದು ಕರೆಯಲಾಗುತ್ತದೆ. ಸುಮಾರು 40ರಷ್ಟು ಸೆಕ್ಷನ್ಗಳನ್ನು ಹೊಂದಿರುವ ಆ ಸಂವಿಧಾನದ ಪ್ರಮುಖ ಅಂ ಶಗಳು ಹೀಗಿವೆ:</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">1. ಮದೀನಾದ ಮೇಲೆ ಯಾರಾದರೂ ದಾಳಿ ಮಾಡಿದರೆ, ನಾವೆಲ್ಲ ಒಟ್ಟಾಗಿ ಆ ದಾಳಿಯನ್ನು ಎದುರಿಸುವೆವು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">2. ಎಲ್ಲರೂ ತಂತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">3. ಯಾವುದೇ ಅಕ್ರಮಿ ಅಥವಾ ಅಪರಾಧಿಯನ್ನು ಅವರ ಧರ್ಮ ನೋಡಿ ರಕ್ಷಿಸುವ ಪ್ರಮೇಯವೇ ಇಲ್ಲ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">4. ಇಲ್ಲಿನ ಎಲ್ಲರೂ ತಮ್ಮ ದೇಶದ ಗಡಿಯನ್ನು ರಕ್ಷಿಸಲು ಬಾಧ್ಯಸ್ಥರು.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">5. ಈ ಒಡಂಬಡಿಕೆಯಲ್ಲಿ ಸೇರಿದವರ ಮಟ್ಟಿಗೆ ಮದೀನಾ ನಗರವು ಪವಿತ್ರವೂ ಗೌರವಾರ್ಹವೂ ಆಗಿರುತ್ತದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">6. ಈ ಒಡಂಬಡಿಕೆಯಲ್ಲಿ ಪಾಲುಗೊಂಡ ಯಹೂದಿಯರ ಸಹಿತ ಯಾರ ವಿರುದ್ಧ ಯಾರು ಯುದ್ಧ ಸಾರಿದರೂ ಇವರು ಪರಸ್ಪರ ನೆರವಾಗುವರು. ನಿಜವಾಗಿ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಮುಸ್ಲಿಮರಿಗೆ ಇತರ ಧರ್ಮದೊಂದಿಗೆ ಬೆರೆತು ಬದುಕುವುದಕ್ಕೆ ಗೊತ್ತಿಲ್ಲ ಎಂಬ ವಾದದ ಬಣ್ಣವನ್ನು ಈ ಒಡಂಬಡಿಕೆ ಬಯ ಲಿಗೆಳೆಯುತ್ತದೆ. ಯಹೂದಿ ಮತ್ತು ಬಹುದೇವಾರಾಧಕರ ಧರ್ಮೀಯರೊಂದಿಗೆ ಪ್ರವಾದಿ ಮಾಡಿಕೊಂಡ ಒಡಂಬಡಿಕೆ ಇದು. ಈ ಒಡಂಬಡಿಕೆಗೆ ಬದ್ಧವಾಗಿಯೇ ಪ್ರವಾದಿ ಮತ್ತು ಅವರ ಅನುಯಾಯಿಗಳು ಬದುಕಿದ್ದಾರೆ. ಮಾತ್ರವಲ್ಲ, ಅವರು ವಾಸಿಸುವ ಮದೀನಾದ ಗಡಿಯನ್ನು ರಕ್ಷಿಸುವುದಕ್ಕೆ ಬದ್ಧ ಮತ್ತು ಮದೀನಾ ನಗರವು ಗೌರವಾರ್ಹ ಮತ್ತು ಪವಿತ್ರ ಎಂದೂ ಅವರು ಸಾರಿದ್ದಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಇದರಾಚೆಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ಇಸ್ಲಾಮಿನ ದೇಶ ಮತ್ತು ಧರ್ಮದ ಪರಿಕಲ್ಪನೆಯ ಬಗ್ಗೆ ವಿವರಣೆಯ ಅಗತ್ಯವಿಲ್ಲ ಅನಿಸುತ್ತದೆ. ಮುಸ್ಲಿಮರಲ್ಲಿ ದೇಶ ಪ್ರೇಮ ಇರಬೇಕಾದುದಷ್ಟೇ ಅಲ್ಲ, ಆ ದೇಶವನ್ನು ರಕ್ಷಿಸಲೂ ಅವರು ಬದ್ಧರಾಗಿರಬೇಕು ಮತ್ತು ಆ ದೇಶ ಅವರಿಗೆ ಗೌರವಾರ್ಹವೂ ಆಗಿರಬೇಕು. ಅದೇವೇಳೆ, ಈ ದೇಶಪ್ರೇಮವು ಜನಾಂಗೀಯ ವಿಭಜನೆಗೋ ಸ್ವದೇಶಿ-ವಿದೇಶಿ ಎಂಬ ತಾರತಮ್ಯಕ್ಕೋ ಪ್ರೇರಕ ವಾಗಬಾರದು. ಎಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳಾಗಿದ್ದು, ಅವರವರ ಧರ್ಮವನ್ನು ಅವರವರು ಪಾಲಿಸಲು ಸ್ವತಂತ್ರರಾಗಿರಬೇಕು. ಪ್ರವಾದಿ(ಸ) ಮಕ್ಕಾದಲ್ಲಿದ್ದಾಗಲೂ ಮದೀನಾದಲ್ಲಿದ್ದಾಗಲೂ ಧರ್ಮ ಬದಲಾಗಿಲ್ಲ. ಆದರೆ ದೇಶನಿಷ್ಠೆ ಬದಲಾಗಿದೆ. ಜನ್ಮಭೂಮಿಯಾದ ಮಕ್ಕಾವನ್ನು ಅಪಾರವಾಗಿ ಪ್ರೀತಿಸಿದ ಪ್ರವಾದಿಯವರು(ಸ) ಮದೀನಾಕ್ಕೆ ವಾಸ ಬದಲಿಸಲೇಬೇಕಾದ ಅನಿವಾರ್ಯತೆ ಎದುರಾದಾಗ ಮದೀನಾಕ್ಕೆ ನಿಷ್ಠೆಯನ್ನು ತೋರಿದರು. ಅದರ ಗಡಿಯನ್ನು ರಕ್ಷಿಸುವ ಪಣತೊಟ್ಟರು. ಅದನ್ನು ಪವಿತ್ರ ಭೂಮಿ ಎಂದೂ ಪರಿಗಣಿಸಿದರು. ಅದೇವೇಳೆ, ತನ್ನ ಹುಟ್ಟೂರು ಮಕ್ಕಾವನ್ನು ಎಂದೂ ದ್ವೇಷಿಸಲಿಲ್ಲ.</span><br style="background-color: white; color: #222222; font-family: Arial, Helvetica, sans-serif; font-size: small;" /><span face="Arial, Helvetica, sans-serif" style="background-color: white; color: #222222; font-size: small;"><br /></span></div><div><span face="Arial, Helvetica, sans-serif" style="background-color: white; color: #222222; font-size: small;">ದೇಶಪ್ರೇಮ ಮತ್ತು ಧರ್ಮಪ್ರೇಮ ಅಂದರೆ ಇಷ್ಟೇ. </span></div></div>a k kukkilahttp://www.blogger.com/profile/17246497989463926613noreply@blogger.com0tag:blogger.com,1999:blog-3256459274432726236.post-7376686484085625532023-07-10T00:53:00.000-07:002023-07-10T00:53:34.514-07:00ಗೋಡ್ಸೆ: ಇತಿಹಾಸದ ತಪ್ಪಿಗೆ ವರ್ತಮಾನ ಹೊಣೆಯೇ?<p> </p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiYBTEPKf5YmVoKdlIINR_8e78Ro7HPSHu4OEsVAhmHL9OuykzYCCfRn10H6XKrb0d_r6I3UIYVXpjpbd34G8n1U5PjpZOwf0db7V2_9jHmqjjBsYlFmodXwGIQZSpit3tcAMwQhhq6V10tw9DeQC0kDMl94DJJyvBW6ZhJl6HW8qnpQgQPXh6w5Fe6VQ/s1334/page%203%20pic.jpg" imageanchor="1" style="margin-left: 1em; margin-right: 1em;"><img border="0" data-original-height="662" data-original-width="1334" height="199" src="https://blogger.googleusercontent.com/img/b/R29vZ2xl/AVvXsEiYBTEPKf5YmVoKdlIINR_8e78Ro7HPSHu4OEsVAhmHL9OuykzYCCfRn10H6XKrb0d_r6I3UIYVXpjpbd34G8n1U5PjpZOwf0db7V2_9jHmqjjBsYlFmodXwGIQZSpit3tcAMwQhhq6V10tw9DeQC0kDMl94DJJyvBW6ZhJl6HW8qnpQgQPXh6w5Fe6VQ/w400-h199/page%203%20pic.jpg" width="400" /></a></div><div><br /></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div>1. ಹಲಾಲ್ ಆಹಾರ ಕ್ರಮವನ್ನು ಬ್ಯಾನ್ ಮಾಡಬೇಕು, ಇದು ಎಕನಾಮಿಕ್ ಜಿಹಾದ್: ಬಿಜೆಪಿ ನಾಯಕ ಸಿಟಿ ರವಿ - ಮಾರ್ಚ್ 30, 2022</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span><div><span style="background-color: white; color: #222222; font-family: Arial, Helvetica, sans-serif; font-size: small;">2. ನೀವು ಲವ್ ಜಿಹಾದ್ನ ಬಗ್ಗೆ ಮಾತಾಡಿ. ಚರಂಡಿ, ಕುಡಿಯುವ ನೀರು, ಮೂಲ ಸೌಲಭ್ಯಗಳ ಬಗ್ಗೆ ಮಾತಾಡಬೇಡಿ:</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">3. ಕಾಂಗ್ರೆಸ್ನಲ್ಲಿರುವ ಮುಸ್ಲಿಮರು ಕೊಲೆಗಾರರು, ಆದರೆ ಬಿಜೆಪಿಯಲ್ಲಿರುವ ಮುಸ್ಲಿಮರು ಒಳ್ಳೆಯವರು: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ - ಫೆಬ್ರವರಿ 1, 2018</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">4. ನಿಮಗೆ ಹಿಜಾಬ್ ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗಿ; ಇಲ್ಲಿರುವ ಉರ್ದು ಶಾಲೆ ಮತ್ತು ಮದ್ರಸಾಗಳನ್ನು ಮುಚ್ಚಬೇಕು: ಬಿಜೆಪಿ ನಾಯಕ ಬಸವರಾಜ ಪಾಟೀಲ್ ಯತ್ನಾಳ್ - ಫೆಬ್ರವರಿ 5, 2022</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">5. ಮುಸ್ಲಿಮರ ಎದೆ ಬಗೆದರೆ ಎರಡಕ್ಷರ ಸಿಗಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">6. ಮುಸ್ಲಿಮರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಿಲ್ಲ: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ - ಎಪ್ರಿಲ್ 2, 2019</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ಹೇಳಿಕೆಗಳಲ್ಲದೇ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಈ ರಾಜ್ಯದಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರಲಾಯಿತು, ಪ್ರೇಮ ವಿವಾಹವನ್ನು ಲವ್ ಜಿಹಾದ್ ಎಂದು ಅಣಕಿಸಲಾಯಿತು, ಭಯೋತ್ಪಾದ ಕರು ಎಂದು ಹಂಗಿಸಲಾಯಿತು. ಅದಾನನ್ನು ಬ್ಯಾನ್ ಮಾಡುವಂತೆ ಚಳವಳಿ ನಡೆಸಲಾಯಿತು, ಮುಸ್ಲಿಮ್ ವಿದ್ಯಾರ್ಥಿನಿಯರ ಹಿಜಾಬನ್ನು ವಿರೋ ಧಿಸಲಾಯಿತು, ಮುಸ್ಲಿಮರ ಹತ್ಯೆಯನ್ನು ಸಮ ರ್ಥಿಸಲಾಯಿತು, ಅನೈತಿಕ ಪೊಲೀಸ್ಗಿರಿಯನ್ನು ಕ್ರಿಯೆ- ಪ್ರತಿಕ್ರಿಯೆಗಳೆಂದು ಹೇಳಿ ಒಪ್ಪಿಸಲಾಯಿತು, ತಬ್ಲೀಗಿ ವೈರಸ್ ಎಂದು ಜರೆಯಲಾಯಿತು... ಒಟ್ಟಿನಲ್ಲಿ ಮುಸ್ಲಿಮರ ಆಹಾರ, ಆಚಾರ, ಸಂಸ್ಕೃತಿ, ವೇಷಭೂಷಣ, ಆರಾಧನೆ.. </span><span style="background-color: white; color: #222222; font-family: Arial, Helvetica, sans-serif; font-size: small;">ಇತ್ಯಾದಿಗಳನ್ನೆಲ್ಲಾ ತಮಾಷೆ-ವ್ಯಂಗ್ಯ-ಚುಚ್ಚುವಿಕೆಗಳಿಗೆ ಬಳಸಲಾಯಿತು. ಈ ಎಲ್ಲ ಸಂದರ್ಭಗಳನ್ನೂ ಬಿಜೆಪಿ ನೇರವಾಗಿಯೋ ಪರೋಕ್ಷವಾಗಿಯೋ ಬೆಂಬಲಿಸಿತು ಮತ್ತು ಆನಂದಿಸಿತು. ಅದರ ಮುಂಚೂಣಿ ನಾಯಕರೇ ಇಂಥ ಬೆಳವಣಿಗೆಯನ್ನು ಬೆಂಬಲಿಸಿ ಮಾತಾಡಿದರು. ತನ್ನ ಬೆಂಬಲಿಗ ಸಂಘಟನೆಗಳು ಮುಸ್ಲಿಮರಿಗೆ ನೋವಾಗುವಂತೆ ಆಡುತ್ತಿರುವ ಮಾತುಗಳನ್ನೆಲ್ಲ ಕೆಲವೊಮ್ಮೆ ಮೌನವಾಗಿ ಮತ್ತು ಇನ್ನು ಕೆಲವೊಮ್ಮೆ ಬಹಿರಂಗ ವಾಗಿಯೇ ಸಮರ್ಥಿಸಿದರು. ಮುಸ್ಲಿಮರನ್ನು ಬಾಬರನ ಸಂತಾನ ಗಳು ಎಂದರು. ಜಿಹಾದಿಗಳು ಎಂದರು. ದೇಶದ್ರೋಹಿಗಳು ಎಂದರು. ವಿದೇಶಕ್ಕೆ ನಿಷ್ಠೆಯುಳ್ಳವರು ಎಂದರು. ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಮಾಡುವ ಯಾತ್ರೆಗೆ ಸಬ್ಸಿಡಿಯನ್ನು ಘೋಷಿಸುತ್ತಲೇ ಹಜ್ಜ್ ಯಾತ್ರೆಯ ಸಬ್ಸಿಡಿಯನ್ನು ಲೇವಡಿ ಮಾಡಿದರು. ರದ್ದುಪಡಿಸುವಂತೆ ಒತ್ತಾಯಿಸಿದರು. ಗೋ ಸಾಗಾಟದ ನೆಪದಲ್ಲಿ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಿದರು. ಕುರ್ಆನನ್ನೇ ಪ್ರಶ್ನಿಸಿದರು. ಅದು ದ್ವೇಷವನ್ನು ಹರಡುತ್ತದೆ ಎಂದೂ ಸಾರ್ವಜನಿಕವಾಗಿಯೇ ಘೋಷಿಸಿದರು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಇದೀಗ ಇದೇ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಬ್ರಾಹ್ಮಣ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದಾರೆ. ಬಿಜೆಪಿಯ ಪಂಚಾಯತ್ ಮಟ್ಟದ ನಾಯಕನಿಂದ ಹಿಡಿದು ರಾಜ್ಯಾಧ್ಯಕ್ಷರ ವರೆಗೆ, ಮುಖ್ಯಮಂತ್ರಿಯಿಂದ ಹಿಡಿದು ಸಚಿವರ ವರೆಗೆ ಪ್ರತಿಯೊಬ್ಬರೂ ಪ್ರತ್ಯಪ್ರತ್ಯೇಕವಾಗಿ ತಮ್ಮ ಕಡುಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅಷ್ಟಕ್ಕೂ, ಕುಮಾರಸ್ವಾಮಿ ಹೇಳಿದ್ದೇನು?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಮಹಾರಾಷ್ಟ್ರ ಭಾಗಕ್ಕೆ ಸೇರಿದ ಪೇಶ್ವೆ ವರ್ಗದ ಚಿತ್ಪಾವನ ಬ್ರಾಹ್ಮಣರು ಶೃಂಗೇರಿ ಮಠವನ್ನು ಒಡೆದವರಾಗಿದ್ದಾರೆ. ಮಠದ ವಿಗ್ರಹಗಳನ್ನು ಅವರು ಧ್ವಂಸ ಮಾಡಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯೂ ಇದೇ ವರ್ಗಕ್ಕೆ ಸೇರಿದವ. ಆದರೆ ಹಳೇ ಕರ್ನಾಟಕದ ಬ್ರಾಹ್ಮಣರು ಹಾಗಲ್ಲ. ಒಳ್ಳೆಯವರು. ಸರ್ವೇ ಜನ ಸುಖಿನೋ ಭವಂತು ಅನ್ನುವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ, ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಪೇಶ್ವೆ ವರ್ಗಕ್ಕೆ ಸೇರಿದ ಮತ್ತು ಶೃಂಗೇರಿ ಮಠಕ್ಕೆ ದಾಳಿ ಮಾಡಿದ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಅಂದಹಾಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಒಳ್ಳೆಯವರು ಮತ್ತು ಕೆಟ್ಟವರನ್ನು ಸಮುದಾಯದ ಆಧಾರದಲ್ಲಿ ಹೀಗೆ ವರ್ಗೀಕರಿಸುವುದೇ ತಪ್ಪು. ಬ್ರಾಹ್ಮಣರಲ್ಲಿ ನೂರಾರು ಪಂಗಡಗಳಿವೆ ಮತ್ತು ಇವರೆಲ್ಲರ ಆಹಾರ ಕ್ರಮಗಳೂ ಭಿನ್ನಭಿನ್ನವಾಗಿವೆ. ಮುಖ್ಯವಾಗಿ ಶಿವನನ್ನು ಆರಾಧಿಸುವ ಶೈವರು, ವಿಷ್ಣುವನ್ನು ಆರಾಧಿಸುವ ವೈಷ್ಣವರು ಮತ್ತು ಶಿವ ಮತ್ತು ವಿಷ್ಣು ಇಬ್ಬರನ್ನೂ ಆರಾಧಿಸುವ ಸ್ಮಾರ್ತರು ಎಂದು ಇವರನ್ನು ಗುರುತಿಸಬಹುದಾಗಿದೆ. ಶೃಂಗೇರಿ ಮಠಕ್ಕೆ ನಡಕೊಳ್ಳುವವರನ್ನು ಸ್ಮಾರ್ತರು ಅಥವಾ ಹವ್ಯಕರು ಎಂದು ಗುರುತಿಸಲಾಗುತ್ತದೆ. ಕವಿ ದ.ರಾ. ಬೇಂದ್ರೆ ಚಿತ್ಪಾವನ ಪಂಗಡಕ್ಕೆ ಸೇರಿದವರು. ಚಿತ್ಪಾವನರು ಅಥವಾ ದೇಶಸ್ತರು ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಪರಂಪರೆ ಕರ್ನಾಟಕದಲ್ಲೂ ಇದೆ. ಬಂಗಾಳ, ಬಿಹಾರ, ಒಡಿಸ್ಸಾ, ಕಾಶ್ಮೀರ, ಗೋವಾ, ಹಿಮಾಚಲ ಪ್ರದೇಶಗಳಲ್ಲಿರುವ ಬ್ರಾಹ್ಮಣರಲ್ಲಿ ಮಾಂಸಾಹಾರಿಗಳೂ ಧಾರಾಳ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿ ಹೇಳುವುದಾದರೆ, ಬ್ರಾಹ್ಮಣರಲ್ಲಿ ಮಾಂಸಾಹಾರಿಗಳು ಬಹಳ ಕಡಿಮೆ. ಕರ್ನಾಟಕದಲ್ಲಿ ಮುಖ್ಯವಾಗಿ ಚಿತ್ಪಾವನರು, ಹವ್ಯಕರು, ಶಿವಳ್ಳಿ ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ, ಕೋಟಾ ಬ್ರಾಹ್ಮಣ ಪಂಗಡಕ್ಕೆ ಸೇರಿದವರಿದ್ದಾರೆ. ಮುಸ್ಲಿಮರಲ್ಲೂ ಈ ಬಗೆಯ ಪಂಗಡಗಳಿವೆ.</span></div><div><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;"> ಸುನ್ನಿಗಳು, ಬರೇಲ್ವಿಗಳು, ದೇವ್ಬಂಧಿಗಳು, ಸಲಫಿಗಳು, ತಬ್ಲೀಗಿಗಳು ಇತ್ಯಾದಿಯಾಗಿ ಇವು ಗುರುತಿಸಿಕೊಳ್ಳುತ್ತವೆ. ವೈಚಾರಿಕ ಭಿನ್ನಮತದಿಂದಾಗಿ ಹುಟ್ಟಿಕೊಂಡ ಪಂಗಡಗಳಿವು. ಹಾಗೆಯೇ, ವೃತ್ತಿಯಾಧಾರಿತವಾಗಿ ಗುರುತಿಸಿಕೊಂಡ ಪಂಗಡಗಳೂ ಇವೆ. ತೋಟಗಾರಿಕೆಯಲ್ಲಿ ತೊಡಗಿರುವ ಮುಸ್ಲಿಮರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಭಾಗವಾನ ಎಂದು ಗುರುತಿಸಿಕೊಳ್ಳುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈ ಗುಂಪು ಸಂತೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿವೆ. ಇನ್ನೊಂದು ಬಹುದೊಡ್ಡ ಪಂಗಡ ಪಿಂಜಾರ ಎಂಬುದು. ಹತ್ತಿಯನ್ನು ಹಿಂಜುವವರು ಎಂದರ್ಥದಲ್ಲಿ ಹುಟ್ಟಿಕೊಂಡ ಹಿಂಜಾರ ಎಂಬ ಪದ ಮುಂದಕ್ಕೆ ಪಿಂಜಾರ ಆಗಿ ಬದಲಾಗಿದೆ. ಹಾಸಿಗೆಯ ಮೇಲಿನ ಮೆತ್ತನೆ ರಚನೆಯನ್ನು ಮಾಡುವ ವೃತ್ತಿ ಇವರದು. ಅದಕ್ಕಾಗಿ ಹತ್ತಿಯನ್ನು ಹಿಂಜಬೇಕಾಗಿದ್ದು, ಈ ಕಲೆಯಲ್ಲಿ ಈ ಪಂಗಡ ನಿಷ್ಣಾತವಾಗಿದೆ. ಇದೇ ಪಂಗಡಕ್ಕೆ ನದಾಫ, ಮನ್ಸೂರಿ ಎಂಬ ಹೆಸರೂ ಇದೆ. ಮನ್ಸೂರಿಗಳು ಮುಖ್ಯವಾಗಿ ಕಾಶ್ಮೀರದಲ್ಲಿ ಹೆಚ್ಚು ಕಂಡುಬರುತ್ತಾರೆ. ಇನ್ನೊಂದು ಗುಂಪು ಮಕಾನ್ದಾರ್ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಮೃತದೇಹವನ್ನು ಹೂಳುವುದಕ್ಕಾಗಿ ಗೋರಿ ಅಗೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡವರು ಎಂದರ್ಥ. ಗೋರಿ ತೋಡುವ ವೃತ್ತಿಯಾ ದುದರಿಂದ ಮಕಾನ್ ಅಥವಾ ಮನೆ ಕಟ್ಟುವವರು ಎಂಬ ಹೆಸರು ಇವರಿಗೆ ದಕ್ಕಿದೆ. ಆದರೆ ಮುಸ್ಲಿಮರ ಈ ಯಾವ ಪಂಗಡಗಳಲ್ಲೂ ಆರಾಧನೆಯಲ್ಲಿ ವ್ಯತ್ಯಾಸ ಇಲ್ಲ. ನಮಾಜ್, ಉಪವಾಸ, ಧರ್ಮಗ್ರಂಥ, ಹಜ್ಜ್ ಯಾತ್ರೆ ಇತ್ಯಾದಿಗಳನ್ನೆಲ್ಲ ಎಲ್ಲ ಪಂಗಡಗಳೂ ಏಕಪ್ರಕಾರವಾಗಿ ಅನುಸರಿಸುತ್ತವೆ. ಅಷ್ಟಕ್ಕೂ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಸುನ್ನಿ ಅಥವಾ ಶಿಯಾ ವಿಭಾಗಕ್ಕೆ ಸೇರಿದ ಯಾವನೋ ಅರಸ ಅಥವಾ ವ್ಯಕ್ತಿ ದೇವಸ್ಥಾನವನ್ನು ಒಡೆದರೆ ಅಥವಾ ಹಿಂದೂ ಸಮುದಾಯದ ನಂಬಿಕೆಗಳನ್ನು ಅವಹೇಳನಗೊಳಿಸಿದರೆ ಅದನ್ನು ಇಡೀ ಸುನ್ನಿ ಸಮುದಾಯದ ಅಪರಾಧವಾಗಿ ಕಾಣುವುದು ಎಷ್ಟು ಸರಿ? ರಾಜ ಮಾಡಿದ ಅಪರಾಧವನ್ನು ಆತನ ಸಮುದಾಯದ ಮೇಲೆ ಹೊರಿಸುವುದು ಯಾವ ನ್ಯಾಯ? ನದಾಫ, ಪಿಂಜಾರ, ಭಾಗವಾನ ಅಥವಾ ಇನ್ನಿತರ ಮುಸ್ಲಿಮ್ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ತಪ್ಪುಗಳನ್ನು ಆಯಾ ಸಮುದಾಯದ ಮೇಲೆ ಹೊರಿಸುವುದು ಎಷ್ಟು ನ್ಯಾಯಬದ್ಧ? ಗೋಡ್ಸೆಗೆ ಸಂಬಂಧಿಸಿಯೂ ನಾವು ಇದೇ ಮಾತನ್ನು ಹೇಳಬೇಕು. ಪೇಶ್ವೆಗಳಿಗೆ ಸಂಬಂಧಿಸಿಯೂ ಹೇಳ ಬೇಕಾದುದು ಇದನ್ನೇ. ಒಂದುವೇಳೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಗೋಡ್ಸೆ ಮಾಡಿದ ಅಪರಾಧವನ್ನು ಆತನ ಚಿತ್ಪಾವನ ಬ್ರಾಹ್ಮಣ ಸಮುದಾಯ ಒಕ್ಕೊರಳಿನಿಂದ ಬೆಂಬಲಿಸಿದ್ದರೆ ಮತ್ತು ಸಮರ್ಥಿಸಿದ್ದರೆ, ಹಾಗೆ ಸಮರ್ಥಿಸಿದ ಕಾಲದ ಸಮರ್ಥಕರನ್ನು ತಪ್ಪಿತಸ್ಥರು ಎಂದು ಹೇಳಬೇಕೇ ಹೊರತು ಆ ಕಾಲಕ್ಕೆ ಸಂಬಂಧಿಸಿಯೇ ಇಲ್ಲದ ಮತ್ತು ಬೆಂಬಲಿಸಿಯೇ ಇಲ್ಲದವರನ್ನಲ್ಲ. ಗೋಡ್ಸೆ ಕಾಲವಾಗಿ ಆರು ದಶಕಗಳೇ ಕಳೆದಿವೆ. ಪೇಶ್ವೆಯ ಕಾಲಕ್ಕೂ ಈ ಕಾಲಕ್ಕೂ ಸಂಬಂಧವೇ ಇಲ್ಲದಷ್ಟು ಈ ಮಣ್ಣು ಬದಲಾಗಿದೆ. ಹೀಗಿರುವಾಗ ಪೇಶ್ವೆಗಳ ತಪ್ಪನ್ನು ಈಗಿನ ಚಿತ್ಪಾವನ ಬ್ರಾಹ್ಮಣರ ತಲೆಗೆ ಕಟ್ಟಿ ಅವರು ಕೆಟ್ಟವರು, ಉಳಿದವರು ಒಳ್ಳೆಯವರು ಎಂದು ವರ್ಗೀಕರಿಸುವುದು ಅತ್ಯಂತ ತಪ್ಪಾದ ವಿಶ್ಲೇಷಣೆ. ಚಿತ್ಪಾವನ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳು ಈ ಹಿಂದೆ ಈ ದೇಶದ ಮೂಲ ನಿವಾಸಿಗಳನ್ನೋ ಅಥವಾ ದುರ್ಬಲ ವರ್ಗದವರನ್ನೋ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳುವ ಉದ್ದೇಶ ಕುಮಾರಸ್ವಾಮಿಯದ್ದಾದರೆ ಅದನ್ನು ನೇರವಾಗಿ ಹೇಳಬೇಕೇ ಹೊರತು ಇಂದಿನ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಲ್ಲ. ವ್ಯಕ್ತಿಗಳ ತಪ್ಪು ವ್ಯಕ್ತಿಗಳಿಗೆ ಸೀಮಿತವೇ ಹೊರತು ಸಮುದಾಯಕ್ಕಲ್ಲ. ಸಮುದಾಯದಲ್ಲಿ ಆ ವ್ಯಕ್ತಿಯ ತಪ್ಪನ್ನು ಖಂಡಿಸುವವರೂ ಇದ್ದಾರೆ, ಬೆಂಬಲಿಸುವವರೂ ಇದ್ದಾರೆ. ಮಾತಾಡುವಾಗ ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟಿರಬೇಕು.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಆದರೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಕುಮಾರಸ್ವಾಮಿಯವರು ಈ ಎಚ್ಚರಿಕೆಯನ್ನು ಪ್ರದರ್ಶಿಸಲಿಲ್ಲ ಎಂಬುದು ಸ್ಪಷ್ಟ. ಅನಗತ್ಯ ಮಾತನ್ನಾಡಿದರು. ಆದರೆ, ಈ ಮಾತನ್ನು ಎತ್ತಿಕೊಂಡು ಬಿಜೆಪಿ ಮಾಡಿದ ಗದ್ದಲ ಸಣ್ಣದಲ್ಲ. ಕುಮಾರಸ್ವಾಮಿ ಕ್ಷಮೆ ಕೋರಬೇಕು ಎಂದು ಅದು ಒತ್ತಾಯಿಸಿತು. ಅಪಾರ ಆಕ್ರೋ ಶವನ್ನು ವ್ಯಕ್ತಪಡಿಸಿತು. ದುರಂತ ಏನೆಂದರೆ, ಇದೇ ಬಿಜೆಪಿ ನಾಯಕರು ದಿನ ಬೆಳಗಾದರೆ ಮುಸ್ಲಿಮರನ್ನು ಟೀಕಿಸಿ, ನಿಂದಿಸಿ, ಅಪಹಾಸ್ಯ ಮಾಡಿ ನೀಡಿದ ಹೇಳಿಕೆಗಳು ಎಷ್ಟಿಲ್ಲ? ಟಿಪ್ಪು ಸುಲ್ತಾನನ್ನು ಎತ್ತಿಕೊಂಡು ಮುಸ್ಲಿಮರನ್ನು ಪರೋಕ್ಷವಾಗಿ ತಿವಿದ ಮಾತುಗಳು ಎಷ್ಟಿಲ್ಲ? ಇತಿಹಾಸದ ಸಕಲ ಅಪದ್ಧಗಳಿಗೂ ವರ್ತಮಾನದ ಮುಸ್ಲಿಮರೇ ಹೊಣೆಗಾರರು ಎಂಬಂಥ ಮಾತನ್ನು ಎಷ್ಟು ಟನ್ನು ಆಡಿಲ್ಲ? ಮುಸ್ಲಿಮರನ್ನೆಲ್ಲಾ ಗೋಕಳ್ಳರು ಎಂಬಂತೆ ಎಷ್ಟು ಬಾರಿ ಬಿಂಬಿಸಿಲ್ಲ? ಮಸೀದಿಗಳನ್ನು ಭಯೋತ್ಪಾದಕ ಅಡಗು ತಾಣಗಳಾಗಿ ಚಿತ್ರಿಸಿ ಎಷ್ಟು ಹೇಳಿಕೆಗಳನ್ನು ನೀಡಿಲ್ಲ? ತಾಲಿಬಾನ್ಗಳ ಅನಾಗರಿಕತೆಗೆ ಭಾರತೀಯ ಮುಸ್ಲಿಮರಲ್ಲಿ ಎಷ್ಟು ಬಾರಿ ಉತ್ತರ ಕೇಳಿಲ್ಲ? ತಾಲಿಬಾನ್ಗಳ ಬುರ್ಖಾ, ಅವರ ಮುಂಡಾಸು, ಗಡ್ಡ-ಪೈಜಾಮ ಮತ್ತು ತಿಕ್ಕಲು ಕಾನೂನುಗಳನ್ನು ಎತ್ತಿಕೊಂಡು ಭಾರತೀಯ ಮುಸ್ಲಿಮರಿಗೆ ಎಷ್ಟು ಬಾರಿ ಅವಮಾನ ಮಾಡಿಲ್ಲ?</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಪ್ರಶ್ನಿಸುವುದಕ್ಕೆ ಬೇಕಾದಷ್ಟಿದೆ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ನಿಜವಾಗಿ, ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯದ ನಾಯಕರೋರ್ವರು ಪ್ರಶ್ನಿಸುವುದಕ್ಕೂ ಬಿಜೆಪಿ ರಾಜ ಕಾರಣಿ ಪ್ರಶ್ನಿಸುವುದಕ್ಕೂ ವ್ಯತ್ಯಾಸವಿದೆ. ಬ್ರಾಹ್ಮಣ ಸಮುದಾಯದ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಲೇಬೇಕಾದ ಹೇಳಿಕೆ ಕುಮಾರಸ್ವಾಮಿಯದ್ದು. ಒಂದು ಸಮುದಾಯವಾಗಿ ಬ್ರಾಹ್ಮಣರಿಗಾದ ನೋವನ್ನು ಮುಸ್ಲಿಮರಷ್ಟು ಚೆನ್ನಾಗಿ ಇನ್ನಾರೂ ಅರ್ಥೈಸಲಾರರು ಅನ್ನಿಸುತ್ತದೆ. ಚಿತ್ಪಾವನರೇ ಹೀಗೆ ಎಂದು ಹೇಳುವುದಕ್ಕೂ ಗೋಡ್ಸೆ ಹೀಗೆ ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಹಾಗೆಯೇ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಹೇಳುವುದಕ್ಕೂ ಶುದ್ಧಿ ಚಳುವಳಿಯ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆಗೈದ ರಶೀದ್ ಹೀಗೆ ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಅಬ್ದುಲ್ ರಶೀದ್ನನ್ನು ಮುಸ್ಲಿಮ್ ಸಮುದಾಯದ ಐಕಾನ್ ಎಂದು ಮುಸ್ಲಿಮರಾರೂ ಹೇಳುವುದಿಲ್ಲ. ಆತ ಮುಸ್ಲಿಮ್ ಸಮುದಾಯದಲ್ಲಿ ಸಂತನಾಗಿಯೂ ಗುರುತಿಸಿಕೊಂಡಿಲ್ಲ. ಆತನ ಹೆಸರಲ್ಲಿ ಮಸೀದಿಯನ್ನೂ ಕಟ್ಟಲಾಗಿಲ್ಲ. ಆತ ಯಾರು, ಎಲ್ಲಿಯವ, ಎಲ್ಲಿದ್ದ ಮತ್ತು ಹೇಗೆ ತೀರಿಕೊಂಡ ಎಂಬ ಬಗ್ಗೆ ವರ್ತಮಾನ ಕಾಲದ ಮುಸ್ಲಿಮರು ಬಿಡಿ, 1926ರ ಕಾಲದ ಮುಸ್ಲಿಮ್ ಸಮುದಾಯಕ್ಕೇ ಗೊತ್ತಿರುವ ಸಾಧ್ಯತೆ ಇಲ್ಲ. ಅಷ್ಟರ ಮಟ್ಟಿಗೆ ಓರ್ವ ಹಿಂದೂ ಸಾಧುವಿನ ಹತ್ಯೆಕೋರನ ವಿರುದ್ಧ ಮುಸ್ಲಿಮ್ ಸಮುದಾಯ ತಿರುಗಿ ಬಿದ್ದಿದೆ. ಗೋಡ್ಸೆಯನ್ನು ಕೂಡಾ ಚಿತ್ಪಾವನ ಬ್ರಾಹ್ಮಣ ಸಮುದಾಯವಾಗಲಿ, ಒಟ್ಟು ಬ್ರಾಹ್ಮಣ ಸಮುದಾಯವಾಗಲಿ ನಮ್ಮವರು ಎಂದು ಹೆಮ್ಮೆ ಪಟ್ಟುಕೊಂಡಿಲ್ಲ. ಆತನನ್ನು ಬೆಂಬಲಿಸುವ ಒಂಟಿ ಹೇಳಿಕೆಗಳು ಇರಬಹುದು. ವ್ಯಕ್ತಿಗಳೂ ಇರಬಹುದು. ಆದರೆ ಒಂದು ಸಮುದಾಯವಾಗಿ ಗೋಡ್ಸೆ ಈಗಲೂ ಹೊಸ್ತಿಲ ಹೊರಗಡೆಯೇ ಇದ್ದಾನೆ. ವ್ಯಕ್ತಿಗಳ ತಪ್ಪುಗಳನ್ನು ಸಮುದಾಯದ ಮೇಲೆ ಹೊರಿಸಬಾರದು ಎಂಬ ಆಗ್ರಹಕ್ಕೆ ಬಲ ಬರುವುದೂ ಇಂಥ ವಿವೇಕಪೂರ್ಣ ನಡವಳಿಕೆಗಳಿಂದಲೇ.</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಆದರೆ, ಪ್ರತಿದಿನ ಮುಸ್ಲಿಮರನ್ನು, ಅವರ ಗುರುತುಗಳನ್ನು ಜರೆಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಮತ್ತು ಮುಸ್ಲಿಮ್ ದ್ವೇಷದ ಮಾತುಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುವಂತೆ ಆಡುತ್ತಿರುವ ಬಿಜೆಪಿ ಪಕ್ಷದ ನಾಯಕರು ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಕುದಿಗೊಳ್ಳುವುದೆಂದರೆ, ಅದು ಅಪ್ರಾಮಾಣಿಕತೆ ಮತ್ತು ಅನೈತಿಕ ನಡವಳಿಕೆ. ಇದು ಪ್ರಶ್ನಾರ್ಹ. ಒಂದು ಸಮುದಾಯಕ್ಕೆ ನಿರಂತರ ಗಾಯವನ್ನು ಮಾಡುತ್ತಲೇ ಇನ್ನೊಂದು ಸಮುದಾಯದ ಗಾಯದ ಬಗ್ಗೆ ಕರುಬುವುದು ದ್ವಂದ್ವತನ. ಆಷಾಢಭೂತಿ ನಡವಳಿಕೆ. ಅದರಾಚೆಗೆ,</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;"><br /></span></div><div><span style="background-color: white; color: #222222; font-family: Arial, Helvetica, sans-serif; font-size: small;">ಬ್ರಾಹ್ಮಣದ ಸಮುದಾಯದ ಪ್ರತಿಭಟನೆಗೆ ಖಂಡಿತ ಮುಸ್ಲಿಮ್ ಸಮುದಾಯದ ಬೆಂಬಲವಿದೆ. ಅವಮಾನದಿಂದಾಗುವ ಗಾಯದ ತೀವ್ರತೆ ಮುಸ್ಲಿಮ್ ಸಮುದಾಯಕ್ಕೆ ಚೆನ್ನಾಗಿ ಗೊತ್ತು.</span></div><br />a k kukkilahttp://www.blogger.com/profile/17246497989463926613noreply@blogger.com0