tag:blogger.com,1999:blog-3256459274432726236.post7643067872809088986..comments2024-02-06T09:54:02.238-08:00Comments on ಭೂತಗನ್ನಡಿ: ನುಡಿಸಿರಿಯನ್ನು ಒಪ್ಪಿಕೊಳ್ಳುವ ಸಿದ್ದಲಿಂಗಯ್ಯ ಮತ್ತು ನೋಬೆಲ್ ಅನ್ನು ತಿರಸ್ಕರಿಸುವ ಸರ್ತೆ a k kukkilahttp://www.blogger.com/profile/17246497989463926613noreply@blogger.comBlogger1125tag:blogger.com,1999:blog-3256459274432726236.post-49740164700802098982014-10-28T09:41:24.209-07:002014-10-28T09:41:24.209-07:00ನುಡಿಸಿರಿಯ ಈ ಸಲದ ಅಧ್ಯಕ್ಷತೆಯನ್ನು ವಹಿಸಿದ ತಕ್ಷಣದಿಂದ ಸಿ... ನುಡಿಸಿರಿಯ ಈ ಸಲದ ಅಧ್ಯಕ್ಷತೆಯನ್ನು ವಹಿಸಿದ ತಕ್ಷಣದಿಂದ ಸಿದ್ದಲಿಂಗಯ್ಯನವರ ವ್ಯಕ್ತಿತ್ವದೊಳಗಿರುವ ಕವಿ ,ಪ್ರತಿಭಟನೆಯ ಶಕ್ತಿ, ಇತ್ಯಾದಿಗಳಿಗೆಲ್ಲಾ ಮಂಕು ಕವಿಯುತ್ತದೆ ಎಂಬ ವಾದ ತಪ್ಪು. ಈ ಹಿಂದೆಯೂ ಸಿದ್ದಲಿಂಗಯ್ಯನವರು ಕರ್ನಾಟಕ ಸರ್ಕಾರದ ನಾನಾ ಅಧಿಕಾರದ ಶಕ್ತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಗ ಅವರಂತಹವರು ಅಂತಹ ಕಡೆ ಇದ್ದರೆ ಆ ಜಾಗಗಳಿಗೆ ಒಂದು 'ಶೋಭೆ' ಎಂದು ಅವರ ಪರ ಸಾಕಷ್ಟು ಮಂದಿ ಇದ್ದರು. ಈಗ ಮೂರ್ನಾಲಕ್ಕು ದಿನಗಳ 'ನುಡಿಸಿರಿ' ಅಂತಹ ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಕ್ಷಣ ಅಲ್ಲೋಲಕಲ್ಲೋಲವಾದಂತೆ ಮಾತನಾಡುತ್ತಿರುವುದರ ಹಿಂದಿನ ಮರ್ಮ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ ಅದನ್ನು ಮುಚ್ಚಿಹಾಕಲು ನಾನಾ ಪಟ್ಟುಗಳನ್ನು ಹಾಕುತ್ತಿದ್ದಾರೆ. ಸಿದ್ದಲಿಂಗಯ್ಯನವರು ನುಡಿಸಿರಿಯಲ್ಲಿ ಏನು ಮಾತಾಡುತ್ತಾರೋ ಬಿಡುತ್ತಾರೋ ಅದು ಮುಖ್ಯವಲ್ಲ. ಅಲ್ಲಿ ಹೇಳಿದ್ದನ್ನೆಲ್ಲಾ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಸರ್ಕಾರಿ ಪ್ರಾಯೋಜಿತ ಕ. ಸಾ. ಪ ಸಮ್ಮೇಳನಗಳಲ್ಲಿ ಇದುವರೆಗೆ ನೂರಾರು ಗೊತ್ತುವಳಿಗಳನ್ನು. ನಿಳುವಳಿಗಳನ್ನು, ಬಿನ್ನವತ್ತಳೆಗಳನ್ನು ಮಂಡಿಸಿ ಸರ್ಕಾರಕ್ಕೆ ಅರ್ಪಿಸಿರಬಹುದು. ಅವು ವಿಧಾನಸೌಧದ ಸಾವಿರಾರು ಕಡತಗಳ ಮಧ್ಯೆ ನಿದ್ರಿಸುತ್ತಿವೆ. ಜೈಪುರ, ಧಾರವಾಡದ ಸಾಹಿತ್ಯ ಸಮ್ಮೇಳನಗಳಿಗೆ, ಅಲ್ಲಿ ಭಾಗವಹಿಸಿದರ ಬಗ್ಗೆ ಬಾರದ ವಿವಾದ ನುಡಿಸಿರಿಗೆ ಮಾತ್ರ ಏಕೆ? ನುಡಿಸಿರಿಯನ್ನು ಒಂದು ಉಗ್ರಗಾಮಿ ಕಾರ್ಯಕ್ರಮ ಎಂದು ಹುಯಿಲೆಬ್ಬಿಸುವುದರಲ್ಲಿ ಏನು ಅರ್ಥವಿದೆ? srirangahttps://www.blogger.com/profile/14134929258897892694noreply@blogger.com