tag:blogger.com,1999:blog-3256459274432726236.post4000313712066754498..comments2024-02-06T09:54:02.238-08:00Comments on ಭೂತಗನ್ನಡಿ: ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿa k kukkilahttp://www.blogger.com/profile/17246497989463926613noreply@blogger.comBlogger1125tag:blogger.com,1999:blog-3256459274432726236.post-60258828929510699242014-11-04T20:28:44.700-08:002014-11-04T20:28:44.700-08:00ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಸುಮಾರು ೫೬೦ ದೇಶಿಯ ಸ...ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಸುಮಾರು ೫೬೦ ದೇಶಿಯ ಸಂಸ್ಥಾನಗಳನ್ನು ಒಗ್ಗೂಡಿಸಿದವರು ವಲ್ಲಭಾಯಿ ಪಟೇಲರು: ಅವರು ಉಕ್ಕಿನ ಮನುಷ್ಯ ಎಂಬುದನ್ನು ಭಾರತದಲ್ಲಿ ಕಾಂಗ್ರೆಸ್ಸ್ ಸರ್ಕಾರದ ಆಡಳಿತವಿದ್ದಾಗಲೇ ಅರವತ್ತು ವರ್ಷಗಳ ಹಿಂದೆ ನಾವು ಪ್ರೈಮರಿ,ಮಿಡ್ಲ್ ಸ್ಕೂಲ್ ನ ಪಠ್ಯಪುಸ್ತಕಗಳಲ್ಲಿ ಓದಿದ್ದೆವು. ಪಟೇಲರು ಆ ಸಮಯದಲ್ಲಿ ಗೃಹ ಮಂತ್ರಿ ಆಗದೇ ಇದ್ದಿದ್ದರೆ ಭಾರತ ಇಂದು ಅಖಂಡವಾಗಿ ಉಳಿಯುತ್ತಿರಲಿಲ್ಲ ಎಂಬುದನ್ನು ಕಾಂಗ್ರೆಸ್ಸಿಗರು,ಗಾಂಧಿವಾದಿಗಳು,ಇಂದಿನ ಪ್ರಗತಿಪರರು, ಬಿ ಜೆ ಪಿ ವಿರೋಧಿಗಳು ಇತ್ಯಾದಿ ಯಾರೂ ನಿರಾಕರಿಸಲು ಸಾಧ್ಯವಿಲ್ಲ. . ಅವರು ಹುಟ್ಟಿದ ಗುಜರಾತಿನಲ್ಲಿ ಅವರ ಪ್ರತಿಮೆ ಸ್ಥಾಪಿಸುವುದನ್ನು ತಾವು ಅನೇಕ ಪಟ್ಟುಗಳು,ವಾದಗಳನ್ನು ಮಂಡಿಸುವುದರ ಮೂಲಕ ವಿರೋಧಿಸಬಹುದು. ಪ್ರತಿಮೆ ಸ್ಥಾಪನೆ ಸರಿಯೋ ತಪ್ಪೋ ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಕೊಟ್ಟು ಅನುಮೋದಿಸಬಹುದು ಇಲ್ಲವೇ ವಿರೋಧಿಸಬಹುದು. ಆದರೆ ತಾವು ನೆಹರು, ಇಂದಿರಾಗಾಂಧಿ,ಸಂಜಯಗಾಂಧಿ ಮತ್ತು ರಾಜೀವಗಾಂಧಿ ಅವರ ಹೆಸರಿನಲ್ಲಿ ಭಾರತದಾದ್ಯಂತ ಇರುವ ಸರ್ಕಾರಿ ವಿ ವಿ ಗಳು, ಸಂಶೋಧನಾ ಕೇಂದ್ರಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಬಗ್ಗೆ ಏಕೆ ಮೌನವಹಿಸಿದ್ದೀರಿ?. ಬಿ ಜೆ ಪಿ ಮತ್ತು ಮೋದಿಯವರ ಸರ್ಕಾರ ಮಾಡಿದ್ದೆಲ್ಲಾ ತಪ್ಪು, ಭಾರತವನ್ನು ಶುಚಿಯಾಗಿಡಲು ಶ್ರಮಿಸೋಣ ಎಂದು ಹೇಳಿದ್ದೆಲ್ಲಾ ತಪ್ಪು ಎಂಬ ಮನೋಭಾವ ಸರಿಯೇ? ಎಲ್ಲದರಲ್ಲೂ ಕೊಂಕು ಹುಡುಕುವುದೇ ನಮ್ಮ ದಿನ ನಿತ್ಯದ ಕೆಲಸವಾಗಬಾರದಲ್ಲವೇ?-----ಎಂ ಎ ಶ್ರೀರಂಗ ಬೆಂಗಳೂರು. srirangahttps://www.blogger.com/profile/14134929258897892694noreply@blogger.com